Homeಕರ್ನಾಟಕ7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

7 ಕೋಟಿ ಮತ್ತು ಪ್ರತೀಕಾರ: ಆರೋಪಗಳ ಹಿಂದಿನ ಹುನ್ನಾರವೇನು?

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿರುವ ಪತ್ರಿಕೆಯೊಂದು ಕಳೆದ ಶನಿವಾರ ಗೌರಿ ಲಂಕೇಶರ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲು ಟ್ರಸ್ಟ್ ಹೆಸರಿನಲ್ಲಿ ಕೋಟ್ಯಾಂತರ ರೂ ಸಂಗ್ರಹ ಮಾಡಲಾಗಿದೆ ಎಂಬ ವರದಿಯೊಂದನ್ನು ಪ್ರಕಟಿಸಿತು. ಇಂತಹ ಪತ್ರಿಕೆಗಳಲ್ಲಿ ಗೌರಿ ಲಂಕೇಶರ ಕುರಿತಂತೆ ಅಥವಾ ಅವರ ಬಳಗದ ಕುರಿತಂತೆ ನಕಾರಾತ್ಮಕ ಸುದ್ದಿ ಬರುವುದೇ ಆಶ್ಚರ್ಯವಲ್ಲ. ಆದರೆ, ಗೌರಿ ಹತ್ಯೆಗೆ ಪ್ರತೀಕಾರ ಎಂಬ ತಲೆಬರಹ ಬಳಸಿ ಅದರಲ್ಲಿ ಹೊಸದೊಂದು ಕಥೆ ತೇಲಿಬಿಡಲಾಗಿತ್ತು.

ಅಚ್ಚರಿ ಮಾತ್ರವಲ್ಲದೇ ಅಪಾಯಕಾರಿಯಾದ ಅಂಶ ಅದರಲ್ಲಿತ್ತು. ‘ಪತ್ರಿಕೆ’ಯು ಇದರ ಮೂಲವನ್ನು ಕೆದಕಲು ಹಲವರನ್ನು ಮಾತಾಡಿಸಿಲು ಆರಂಭಿಸಿತು. ಗೌರಿಯವರ ಹತ್ಯೆ ಆದ ಮರುದಿನದಿಂದಲೇ ಅದೊಂದು ಸೈದ್ಧಾಂತಿಕ ಹತ್ಯೆಯಾಗಿರುವ ಸಾಧ್ಯತೆಯನ್ನು ಇಡೀ ದೇಶ ಗುರುತಿಸಿತು. ದೇಶ ವಿದೇಶಗಳಲ್ಲಿ ಪ್ರತಿಭಟನೆ ನಡೆಯಿತು. ಎಸ್‍ಐಟಿ ನಡೆಸಿದ ವಿಚಾರಣೆಯಲ್ಲೂ ಅದು ಸಾಬೀತಾಗಿದೆ. ಆದರೆ, ಹತ್ಯೆಯಾದ ಕೆಲವೇ ಗಂಟೆಗಳಿಂದ ಒಂದು ಗುಂಪು ಇದನ್ನ ‘ನಕ್ಸಲೀಯರು’ ಮಾಡಿರಬಹುದು ಎಂಬ ಸುದ್ದಿ ತೇಲಿಬಿಟ್ಟಿತು. ವಿಪರ್ಯಾಸವೆಂದರೆ ಅದಕ್ಕೆ ದನಿಗೂಡಿಸಿದ್ದ ವ್ಯಕ್ತಿಯು ಇಂದು ಗೌರಿಯವರ ಫೋಟೋವನ್ನು ಜೊತೆಯಲ್ಲಿಟ್ಟುಕೊಂಡು ತನ್ನ ಅಕ್ಕನ ಹೆಸರು ದುರ್ಬಳಕೆಯಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಇವೆಲ್ಲವೂ ಬೇರಾವುದೋ ಹುನ್ನಾರದ ಸುಳಿವನ್ನು ನೀಡುತ್ತಿದೆ.

 

ಗೌರಿಯವರ ಹಂತಕರು ಯಾರು ಎಂಬ ಕುರಿತ ಸಂದೇಹ ಯಾರಿಗೂ ಉಳಿದಿಲ್ಲ. ಇನ್ನು ಉಳಿದಿರುವುದು ಕಾನೂನು ಪ್ರಕ್ರಿಯೆ ಮಾತ್ರ. ಕಾನೂನಿನ ಕೆಲವು ಅನಿವಾರ್ಯ ಸಮಸ್ಯೆಗಳಿಂದ ಮುಂದಿನ ದಿನಗಳಲ್ಲಿ ಈಗ ಜೈಲಿನಲ್ಲಿರುವ ಆರೋಪಿಗಳು ಬಿಡುಗಡೆಯಾದರೂ ಸತ್ಯವನ್ನಂತೂ ಮರೆಮಾಚಲಾಗದು. ಆದರೆ, ಹತ್ಯೆ ನಡೆದ ಕೆಲವೇ ಗಂಟೆಗಳಿಂದ ಕಾರ್ಯಪ್ರವೃತ್ತವಾದ ಒಂದು ಗುಂಪು ಹಂತಕರಿಂದ ಇದನ್ನು ಮರೆಮಾಚುವ ಪ್ರಯತ್ನಕ್ಕೆ ಕೈ ಹಾಕಿತ್ತು. ಎಸ್‍ಐಟಿ ಎಲ್ಲಾ ಕೋನಗಳಿಂದಲೂ ತನಿಖೆ ನಡೆಸುತ್ತಾ, ಅಸಲೀ ಹಂತಕರನ್ನು ಪತ್ತೆ ಹಚ್ಚಿದ ಮೇಲೆ ಈ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು.

ಆದರೆ, ಹಂತಕರ ಸಿದ್ಧಾಂತಕ್ಕೆ ಪೂರಕವಾದ ಸರ್ಕಾರವು ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಮತ್ತೆ ಅಂತಹ ಗುಂಪುಗಳು ಕಾರ್ಯಪ್ರವೃತ್ತವಾಗಿರುವ ಎಲ್ಲಾ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಸದರಿ ವರದಿ ಹಾಗೂ ನಂತರದ ಬೆಳವಣಿಗೆಗಗಳೂ ಆ ಅನುಮಾನವನ್ನು ಪುಷ್ಟೀಕರಿಸುತ್ತವೆ.

ಹಾಗಾಗಿಯೇ ಗೌರಿ ಹತ್ಯೆಗೆ ಪ್ರತೀಕಾರಕ್ಕೆ ಸಂಚು ಎಂತಲೂ, ಎರಡು ತಂಡಗಳು ಕಾರ್ಯಪ್ರವೃತ್ತವಾಗಿವೆ ಎಂದೂ ಬಿಂಬಿಸುವ ಪ್ರಯತ್ನ ನಡೆದಿರುವ ಸಾಧ್ಯತೆಗಳಿವೆ. ಗೌರಿ ಹತ್ಯೆಯಲ್ಲಿ ನೇರವಾಗಿ ಪಾಲ್ಗೊಂಡ ಬಲಪಂಥೀಯ ಗುಂಪೂ ಸಹಾ ಏಕರೂಪಿಯಾಗಿಲ್ಲ. ಒಂದು ಕಡೆ ಸಂಪೂರ್ಣ ವಿಷವೇರಿಸಿಕೊಂಡ ತಣ್ಣನೆಯ ಕ್ರೌರ್ಯಕ್ಕೆ ಹೇಸದ ಮನಸ್ಥಿತಿಯ ಹಾರ್ಡ್‍ಕೋರ್ ಗುಂಪಿದ್ದರೆ, ಇನ್ನೊಂದು ಕಡೆ ಇದನ್ನೇ ದೇಶಪ್ರೇಮ ಎಂದುಕೊಂಡು ಅವರ ಜಾಲಕ್ಕೆ ಬಿದ್ದ ‘ಹೊಸಬರೂ’ ಇದ್ದಾರೆ. ಅಂತಹವರು ಈಗ ಪಶ್ಚಾತ್ತಾಪವನ್ನು ಪಡುತ್ತಿರುವ ಸಾಧ್ಯತೆಗಳನ್ನು ತಳ್ಳಿ ಹಾಕಲಾಗುವುದಿಲ್ಲ. ‘ಪತ್ರಿಕೆ’ಗೆ ಸಿಕ್ಕ ವಿಶ್ವಾಸನೀಯ ಮಾಹಿತಿಯು ಅದನ್ನು ಸ್ಪಷ್ಟಪಡಿಸುತ್ತದೆ. ಇದು ಇನ್ನೂ ವಿಚಾರಣೆಯ ಹಂತದಲ್ಲಿರುವುದರಿಂದ ಮತ್ತು ಕೇವಲ ಪತ್ರಿಕಾ ಸುದ್ದಿಯನ್ನಾಗಿ ಮಾತ್ರ ನೋಡದೇ, ಕರ್ನಾಟಕದ ಧೀಮಂತ ಪತ್ರಕರ್ತೆಯೊಬ್ಬರ ಹತ್ಯೆಯ ವಿಚಾರ ಆಗಿರುವುದರಿಂದ ಅದನ್ನು ಸುದ್ದಿ ಮಾಡದೇ ಪೊಲೀಸರಿಗೆ ಮುಟ್ಟಿಸುವ ಕೆಲಸವನ್ನು ಮಾಡಲಾಗಿದೆ.

ಹಂತಕ ಪಡೆಯ ದುರ್ಬಲ ಸದಸ್ಯರ ಮೇಲೆ ತಾವೇ ದಾಳಿ ಮಾಡಿ ಅದನ್ನು ಗೌರಿಯವರ ಬಳಗದ ಮೇಲೆ ಹೊತ್ತುಹಾಕುವ ಆಲೋಚನೆ ದುಷ್ಟಗುಂಪಿನಲ್ಲಿ ಮೂಡಿದ್ದರೆ ಆಶ್ಚರ್ಯವಿಲ್ಲ. ಹಾಗಾಗಿ ಅಂತಹ ನಿರ್ದಿಷ್ಟ ಸಂಗತಿಯ ಮೇಲೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಇಡುವ ಸಾಧ್ಯತೆಯಿದೆ.

ಅದಕ್ಕೆ ಬೇಕಾದ ಸಿದ್ಧತೆಯನ್ನು ಮಾಧ್ಯಮಗಳ ಮೂಲಕ ಮಾಡುವುದಾದರೆ ಬಲಪಂಥೀಯ ಸಿದ್ಧಾಂತವನ್ನೇ ಹಾಸುಹೊದ್ದುಕೊಂಡಿರುವ ಪತ್ರಿಕೆಗಿಂತ ಉತ್ತಮವಾದ ಸಾಧನ ಇನ್ನಾವುದಿದೆ? ಅದನ್ನೇ ಈಗ ಮಾಡಲಾಗಿದೆ ಎಂಬುದು ವಿವಿಧ ಮೂಲಗಳು (ಇದರಲ್ಲಿ ಪೊಲೀಸ್ ಮೂಲಗಳೂ ಇವೆ) ಅನುಮಾನ ಪಡುತ್ತಿವೆ. ಅಂದರೆ ಗೌರಿ ಹಂತಕರನ್ನು ರಕ್ಷಿಸುವ ಯೋಜನೆಯೊಂದು ಸಿದ್ಧವಾದಂತೆ ಕಾಣುತ್ತಿದೆ. ಏಕೆಂದರೆ, ಸ್ವಂತ ಕೈಯ್ಯಿಂದ ಹಣ ಹಾಕಿ ಹಿತೈಷಿಗಳಿಂದ ಹಣ ಸಂಗ್ರಹಿಸಿ ಕಷ್ಟದ ಮಧ್ಯೆಯೇ ಬದ್ಧತೆಯಿಂದ ಕೆಲಸ ಮಾಡುವ ಜನರೇ ಇರುವ ಟ್ರಸ್ಟ್ ಮೇಲೆ ಆರೋಪ ಮಾಡಿದ್ದಕ್ಕೆ ಬೇರೆ ಕಾರಣಗಳು ಕಾಣುತ್ತಿಲ್ಲ.

‘ಬ್ಲ್ಯಾಕ್‍ಮೇಲ್ ಪತ್ರಕರ್ತರು ಮತ್ತು ಸುಳ್ಳು ಸುದ್ದಿ ಪತ್ರಿಕೆಗಳು’
ನಮ್ಮ ಅಕ್ಕ ಮತ್ತು ತಂದೆಯ ಹೆಸರಿನಲ್ಲಿ ಚಂದಾ ಎತ್ತುವುದಕ್ಕೆ ನನ್ನ ವಿರೋಧ ಎಂದು ಒಬ್ಬ ‘ಪತ್ರಕರ್ತ’ರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಅವರ ಹೇಳಿಕೆಯ ಕುರಿತು ಪ್ರತಿಕ್ರಿಯೆ ಪಡೆಯಲು ಅವರನ್ನು ಚೆನ್ನಾಗಿ ಬಲ್ಲವರೊಬ್ಬರಿಗೆ ಟಿವಿ ವಾಹಿನಿಯವರು ಸಂಪರ್ಕಿಸಿದ್ದಾರೆ. ಅವರು ಸ್ಪಷ್ಟವಾಗಿ ಗೌರಿಯವರ ಪತ್ರಿಕೆಯ ಕುರಿತು ತನಿಖೆ ನಡೆಯುವುದಾದರೆ ಸ್ವಾಗತ ಮತ್ತು ಅವರ ತಂದೆಯ ಹೆಸರಿನ ಪತ್ರಿಕೆಯ ಹೆಸರಿನಲ್ಲಿ ಹಣ ಸಂಗ್ರಹಿಸಿರುವ ಕುರಿತೂ ತನಿಖೆ ನಡೆದರೆ ನಿಜವಾದ ಸಂಗತಿಗಳು ಹೊರಬೀಳುತ್ತವೆ ಎಂದಿದ್ದಾರೆ.

ಪತ್ರಿಕೆಯು ಚಂದಾದಾರರಿಂದ ನಡೆಯದೇ ಬ್ಲ್ಯಾಕ್‍ಮೇಲ್‍ನಿಂದ ನಡೆಯುವುದೇ ‘ನಾರ್ಮಲ್’ ಎಂದು ಭಾವಿಸಿರುವವರ ಗೋಳು ಇದು. ಅಂತಹುದೇ ಬ್ಲ್ಯಾಕ್‍ಮೇಲ್ ಪ್ರಕರಣದಲ್ಲಿ ಸದರಿ ಬಲಪಂಥೀಯ ಪತ್ರಿಕೆಯ ವರದಿಗಾರನ ಮೇಲೂ ಎರಡು ದೂರುಗಳು ದಾಖಲಾಗಿವೆ. ಒಂದು ವರ್ಷದ ಹಿಂದೆ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆ ಮತ್ತು ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರುಗಳಾಗಿವೆ. ಅದರ ಪ್ರತಿಗಳು ‘ಪತ್ರಿಕೆ’ಗೆ ಲಭ್ಯವಾಗಿವೆ. ಆದರೆ, ಅದರ ಕುರಿತು ಸಂಬಂಧಪಟ್ಟವರನ್ನು ಮಾತನಾಡಿಸಿದಾಗ ಗೊತ್ತಾದದ್ದೆಂದರೆ ಸದರಿ ಧ್ಯಾನಸ್ಥ ಆ ಪ್ರಕರಣದಲ್ಲಿ ಭಾಗಿಯಾಗಿರುವ ಸಾಧ್ಯತೆ ಬಹಳ ಕಡಿಮೆ. ಅವರ ಸ್ನೇಹಿತನ ಜೊತೆ ಪ್ರಕರಣದಲ್ಲಿ ಸಿಲುಕಿಸಿರಬಹುದೆಂದು ಕಾಣುತ್ತದೆ. ಹೀಗಿದ್ದಾಗಲೂ ತಾನೇ ಬ್ಲ್ಯಾಕ್‍ಮೇಲ್‍ನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಎಂದು ಬರೆಯುವುದು ಪತ್ರಿಕೋದ್ಯಮದ ನೀತಿ ಸಂಹಿತೆಗೆ ವಿರುದ್ಧವಾದುದು.

ಇದೇ ಮಾತನ್ನು ಆ ದಿನಪತ್ರಿಕೆಯ ಕುರಿತು ಹೇಳಲಾಗದು. ಏಕೆಂದರೆ ಆ ಪತ್ರಿಕೆಯು ಸುಳ್ಳು ಸೃಷ್ಟಿಸುವುದರಲ್ಲಿ ಸಿದ್ಧಹಸ್ತ. ಅದಕ್ಕಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಗಣಪತಿಯಪ್ಪನವರಿಂದ ಒಮ್ಮೆ ಛೀಮಾರಿ ಹಾಕಿಸಿಕೊಂಡಿತ್ತು. ಅಷ್ಟೇ ಅಲ್ಲದೇ ಸುಳ್ಳು ಬರೆದದ್ದಕ್ಕೆ ದಂಡ ಕಟ್ಟುವ ಶಿಕ್ಷೆಯನ್ನು ಶೃಂಗೇರಿ ನ್ಯಾಯಾಲಯ ಆದೇಶಿಸಿದ ವರದಿಗಳಿವೆ.

ಲಂಕೇಶರ ಪರಂಪರೆ ಮತ್ತು ಗೌರಿಯವರ ಹೋರಾಟದ ಕುರಿತು ಮಾತನಾಡಲು ಅಳುಕು ಬೇಡವೇ?

ಜಾತಿ ವ್ಯವಸ್ಥೆ ಮತ್ತು ಕೋಮುವಾದಕ್ಕೆ ವಿರೋಧ ಇವು ಪಿ.ಲಂಕೇಶರು ಎಂದೂ ರಾಜಿ ಮಾಡಿಕೊಳ್ಳದ ಎರಡು ಸಂಗತಿಗಳು. ಹಾಗೆಯೇ ಸ್ವಂತ ಅನುಕೂಲಕ್ಕಾಗಿ ಅಧಿಕಾರಸ್ಥರನ್ನು ಓಲೈಸುವುದು ಅವರ ಮೈಮೇಲೆ ಮುಳ್ಳು ತರಿಸುತ್ತಿತ್ತು. ಆ ಮುಳ್ಳುಗಳು ಅಧಿಕಾರಸ್ಥರಿಗೆ ಚುಚ್ಚುತ್ತಿತ್ತು. ಅದನ್ನು ಅಷ್ಟೇ ಕಠೋರವಾಗಿ ಮುಂದುವರೆಸಿಕೊಂಡು ಬಂದಿದ್ದು ಗೌರಿ ಲಂಕೇಶ್. ಆದರೆ ಲಂಕೇಶರ ಪತ್ರಿಕೆಯ ಮಾಲೀಕತ್ವ ಹೊಂದಿದ್ದ ಇಂದ್ರಜಿತ್ ತುಳಿದ ದಾರಿಯೇ ಬೇರೆ. ಅಧಿಕಾರಸ್ಥರನ್ನು ಓಲೈಸುವುದಕ್ಕೆ ಹಲವು ದಾರಿಗಳನ್ನು ಆಗಿಂದಾಗ್ಗೆ ಹಿಡಿಯುತ್ತಲೇ ಇದ್ದರು.

ಒಮ್ಮೆ ಯಡಿಯೂರಪ್ಪನವರನ್ನು ಸನ್ಮಾನಿಸಿ ಬಾಯಿಗೆ ಬಂದದ್ದು ಮಾತನಾಡಲು ಹೊರಟಾಗ ಯಡಿಯೂರಪ್ಪನವರೇ ‘ಇಂಥದ್ದೆಲ್ಲಾ ನಿಮ್ಮ ತಂದೆಯವರಿಗೆ ಇಷ್ಟವಾಗುತ್ತಿರಲಿಲ್ಲ, ಸುಮ್ಮನಿರಿ’ ಎಂದು ಹೇಳಿದರೆಂದರೆ, ಇಂದ್ರಜಿತ್ ಎಂಬ ವ್ಯಕ್ತಿಯ ಮಟ್ಟವನ್ನು ಊಹಿಸಬಹುದು.

ಪಿ.ಲಂಕೇಶರ ಆತ್ಮಕಥೆಯ ಹೆಸರು ಹುಳಿಮಾವಿನ ಮರ. ಅದೊಂದು ರೂಪಕಾತ್ಮಕವಾದ ಹೆಸರಾಗಿದ್ದರೂ, ಅವರ ಪ್ರೀತಿಯ ತೋಟದಲ್ಲೂ ಒಂದು ಹುಳಿಮಾವಿನ ಮರವಿತ್ತು. ಆ ತೋಟವು ಪ್ರತೀವರ್ಷ ಅವರ ಗೆಳೆಯರೆಲ್ಲರೂ ಸೇರುತ್ತಿದ್ದ ತಾಣವೂ ಆಗಿತ್ತು. ಇಂದು ಆ ತೋಟ ಮಾತ್ರವಲ್ಲದೇ, ಲಂಕೇಶರ ಸಮಾಧಿಯ ಜಾಗವನ್ನೂ ಸೇರಿಸಿ ಮಾರಾಟ ಮಾಡಲಾಗಿದೆ ಎಂದು ದಾಖಲೆಗಳು ಹೇಳುತ್ತವೆ. ಕುಟುಂಬದ ಮೂಲಗಳು ತಮಗೆ ಗೊತ್ತೇ ಆಗದಂತೆ ಮಾರಾಟವಾಗಿದ್ದನ್ನು ನೋವಿನಿಂದ ನೆನಪಿಸಿಕೊಳ್ಳುತ್ತವೆ. ಅಂದಹಾಗೆ ಸಮಾಧಿಯನ್ನೂ ಸೇರಿಸಿ ತೋಟ ಮಾರಾಟ ಮಾಡಿದ ವ್ಯಕ್ತಿಯೇ ಇಂದು ಪತ್ರಿಕಾಗೋಷ್ಠಿ ಮಾಡುತ್ತಿರುವುದು.

ಫೆಬ್ರವರಿ 22, 2005. ಬಸವನಗುಡಿ ಪೊಲೀಸ್ ಠಾಣೆ

ಬಸವನಗುಡಿ ಪೊಲೀಸ್ ಠಾಣೆಗೂ, ನಂ.9 ಇಎಟಿ ಸ್ಟ್ರೀಟ್, ಬಸವನಗುಡಿಗೂ ಸಾಕಷ್ಟು ಸಂಬಂಧವಿದೆ. ದುಷ್ಟರನ್ನೂ, ಭ್ರಷ್ಟರನ್ನೂ ಬಯಲುಗೊಳಿಸುವ ಬರಹಗಳನ್ನು ನಿರ್ಭೀತಿಯಿಂದ ಬರೆದ ಪತ್ರಿಕೆಯ ಕಚೇರಿ ಅದಾಗಿತ್ತು. ಅಂತಹ ದುಷ್ಟರು ಕಚೇರಿಯ ಮುಂದೆ ಗಲಾಟೆ ಮಾಡಲು ಬರುವುದು ಯಾವಾಗಲೋ ಒಮ್ಮೆ ನಡೆಯುತ್ತಲೇ ಇತ್ತು. ಆದರೆ, ಫೆಬ್ರವರಿ 22, 2005ರಂದು ಒಂದು ವಿಷಾದಕರ ದೂರು ಆ ಠಾಣೆಗೆ ಹೋಯಿತು.

ಆ ದೂರಿನಲ್ಲಿರುವ ಸಂಗತಿಗಳ ಕುರಿತು ಇಂದು ಇಂದ್ರಜಿತ್ ಮಾತಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಅವರ ಒಡನಾಡಿಗಳು ಕೇಳುತ್ತಾರೆ. ಇಂದು ಗೌರಿಯವರಿಲ್ಲ. ಆದರೆ ಅವರು ಕೊಟ್ಟ ದೂರಿದೆ. ಅದು ಏಳಿಸುವ ಪ್ರಶ್ನೆಗಳು ಹೀಗಿವೆ. ಗೌರಿಯವರಿಗೆ ಬಂದೂಕು ತೋರಿಸಿ ಹೆದರಿಸಿದ್ದು ಯಾರು? ಸ್ವತಃ ಗೌರಿ ಲಂಕೇಶರು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಈತನ ಮೇಲೆ ಕೊಟ್ಟ ದೂರು ಏನಾಗಿತ್ತು? ಬೆಂಗಳೂರು ಪ್ರೆಸ್‍ಕ್ಲಬ್‍ನಲ್ಲಿ ಕುಟುಂಬ ಸಮೇತ ಮಾಡಿದ ಪತ್ರಿಕಾಗೋಷ್ಠಿಯಲ್ಲಿ ಏನು ಹೇಳಿದರು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಕೇಂದ್ರ ಮತ್ತು ರಾಜ್ಯ; ಎರಡೂ ಕಡೆ ಮನುವಾದಿಗಳು ಅಧಿಕಾರಕ್ಕೆ ಏರಿರುವುದರಿಂದ, ಜಾತ್ಯತೀತ ಶಕ್ತಿಗಳ ವಿರುದ್ಧ ಅವರು ನಿರಂತರ ದಾಳಿಗಳನ್ನು ಮಾಡುತ್ತಲೇ ಇರುತ್ತಾರೆ.
    ಇದಕ್ಕೆ ಜಾತ್ಯತೀತರು ಹೆದರುವ ಅಗತ್ಯ ಇಲ್ಲ. ಆದರೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...