Homeದಲಿತ್ ಫೈಲ್ಸ್ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

ಸ್ವಾತಂತ್ರ್ಯದ ಅಮೃತ ಮಹೋತ್ಸವ: ದಲಿತರ ಸ್ಥಿತಿಗತಿಗಳು

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದವು. ದಲಿತ ಚಳವಳಿಯ ಸ್ಥಿತಿಗತಿ ಮತ್ತು ದಲಿತರ ಪರ್ಯಾಯ ರಾಜಕೀಯ ನಿಲುವುಗಳನ್ನು ನಾವು ಮರುಅವಲೋಕಿಸಿಕೊಳ್ಳಲು ಇದು ಸಕಾಲ ಅನಿಸುತ್ತದೆ. ಭಾರತವೆಂಬ ಮುಚ್ಚಲ್ಪಟ್ಟ ಸಮಾಜದೊಳಗೆ ಸಾವಿರಾರು ವರ್ಷಗಳಿಂದ ಹಲವು ರೀತಿಯ ದಬ್ಬಾಳಿಕೆ, ತಾರತಮ್ಯ ಮತ್ತು ಶೋಷಣೆಗಳನ್ನು ಅನುಭವಿಸಿದ ಅಸ್ಪೃಶ್ಯ ಜಾತಿಗಳ ಸ್ಥಿತಿಗಳಲ್ಲಿ ಇಂದೇನಾದರೂ ಬದಲಾವಣೆ ಆಗಿದೆಯೇ ಎಂಬುದನ್ನು ಅವಲೋಕಿಸಿದರೆ, ದಬ್ಬಾಳಿಕೆ-ತಾರತಮ್ಯ-ಶೋಷಣೆಗಳ ಸ್ವರೂಪ ಬದಲಾಗಿದೆಯೇ ಹೊರತು ಸ್ಥಿತಿ-ಗತಿ ಹಾಗೆಯೇ ಇರುವುದನ್ನು ನಾವು ಗಮನಿಸಬಹುದು. ಜಾತಿ ವ್ಯವಸ್ಥೆ ತನ್ನ ಸ್ವರೂಪವನ್ನು ಸಮಯಕ್ಕೆ ತಕ್ಕಂತೆ ಬದಲಿಸಿಕೊಂಡು, ಇವತ್ತಿಗೂ ನಿರಂತರವಾಗಿ ಮುಂದುವರಿಯುತ್ತಿರುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲಿ ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿಯಾದ ಚೋಮನ ದುಡಿಯಲ್ಲಿ ಬರುವ ದಲಿತರ ಬದುಕಿನ ಚಿತ್ರಣ ನೆನಪಿಗೆ ಬರುತ್ತಿದೆ. 1931ರಲ್ಲಿ ಪ್ರಕಟಗೊಂಡ ಈ ಕೃತಿ ಕನ್ನಡದಲ್ಲಿ ಬಹುಚರ್ಚಿತವಾದ ಕಾದಂಬರಿಯಾಗಿದ್ದು ಅಸ್ಪೃಶ್ಯ ಸಮುದಾಯದ ಚೋಮನನ್ನು ಕೇಂದ್ರಪಾತ್ರದಲ್ಲಿಟ್ಟು ನಿರೂಪಿಸಲ್ಪಟ್ಟಿರುವ ಕಥನವಿದೆ; ಈ ಕಥನದಲ್ಲಿ ಸ್ವಾತಂತ್ರ್ಯಪೂರ್ವದ ದಲಿತರ ದಾರುಣ ಬದುಕನ್ನು ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ನೋಡಿದರೆ ಚೋಮನದುಡಿ ಏಕಕಾಲದಲ್ಲಿ ಕಾದಂಬರಿಯೂ ಹೌದು, ಹಾಗೆಯೇ ಭಾರತೀಯ ಸಾಮಾಜಿಕ ಚರಿತ್ರೆಯು ಹೌದು; ಏಕೆಂದರೆ ಸ್ವಾತಂತ್ರ್ಯಪೂರ್ವದ ಅಸ್ಪೃಶ್ಯರ ಬದುಕನ್ನು ಕಾದಂಬರಿ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ. ಚೋಮನ ಬದುಕೇ ಅಂದಿನ ನಿಜವಾದ ದಲಿತರ ಬದುಕಾಗಿತ್ತು ಎಂಬುದರಮಟ್ಟಿಗೆ ದಲಿತರ ಜೀವನ ಈ ಕಾದಂಬರಿಯಲ್ಲಿ ಅಭಿವ್ಯಕ್ತಗೊಂಡಿದೆ. ಚೋಮ ಒಂದು ತುಂಡು ಭೂಮಿಗಾಗಿ ತನ್ನ ದಣಿಯ ಮುಂದೆ ಎಷ್ಟೇ ಅಧೀರನಾಗಿ ಮತ್ತು ದೈನ್ಯತೆಯಿಂದ ಕೇಳಿಕೊಂಡರೂ ಅದು ಸಾಧ್ಯವಾಗದ ಸ್ಥಿತಿ ಒಂದೆಡೆಯಾದರೆ, ಹೀಗೆ ಭೂಮಿ ಇಲ್ಲದ ನೂರಾರು ಕುಟುಂಬಗಳು ಕೂಲಿ ಕಾರ್ಮಿಕರಾಗಿ ಕಾಫಿ ಎಸ್ಟೇಟ್‌ಗೆ ವಲಸೆ ಹೋಗಿ ಆಳುಗಳಾಗಿ ದುಡಿಯುವ ಮತ್ತೊಂದು ಚಿತ್ರಣ ಕೂಡ ಈ ಕಾದಂಬರಿಯಲ್ಲಿದೆ. ಚೋಮನ ಪಾತ್ರ ಪ್ರಮುಖವಾಗಿ ನಮ್ಮೆದುರಿಗೆ ನಿಂತರೂ ಅವನಂತೆ ಇರುವ ಸಾವಿರಾರು ಕುಟುಂಬಗಳ ಚಿತ್ರಣ ಚೋಮನ ಕುಟುಂಬದ ನೆರಳಿನಂತೆ ನಮಗೆ ಇಲ್ಲಿ ಭಾಸವಾಗುತ್ತದೆ. ಅದೇ ರೀತಿ ಚೋಮನ ಬದುಕು ಮತ್ತು ಅವನನ್ನು ಈ ಸಮಾಜ ನಡೆಸಿಕೊಳ್ಳುವ ಅಂಶವನ್ನು ಗಮನಿಸೋಣ; ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿಹೋಗುವ ಚೋಮನ ಕಿರಿಯ ಮಗನನ್ನು ರಕ್ಷಿಸಲು ಒಬ್ಬ ಬ್ರಾಹ್ಮಣ ಸಮುದಾಯದ ಯುವಕ ಮುಂದಾದಾಗ ಅಲ್ಲೇ ನಡೆದುಹೋಗುತ್ತಿದ್ದ ಮತ್ತೊಬ್ಬ ಬ್ರಾಹ್ಮಣ ಅವನನ್ನು ಮುಟ್ಟಬಾರದು, ಅವನು ಅಸ್ಪೃಶ್ಯ ಎನ್ನುತ್ತಾನೆ. ಆಗ ಆ ಯುವಕ ಬೆಚ್ಚಿದವನಂತೆ ನಿಂತು ಚೋಮನ ಮಗನನ್ನು ರಕ್ಷಿಸಲು ಹೋಗುವುದಿಲ್ಲ. ಎರಡನೆ ಘಟನೆ; ಚೋಮ ಗೇಣಿಗೆ ಭೂಮಿ ಕೊಡುವಂತೆ ತನ್ನ ದಣಿಗಳಲ್ಲಿ ವಿನಂತಿಸಿಕೊಂಡಾಗ ದಣಿ ಸಂಕಪ್ಪಯ್ಯನವರು ತಮ್ಮ ತಾಯಿಯವರ ಅಭಿಪ್ರಾಯವನ್ನು ಕೇಳುತ್ತಾರೆ. ಆಗ ಅವರ ತಾಯಿ ನೀಡುವ ಪ್ರತಿಕ್ರಿಯೆ: “ಏನು ಆ ಹೊಲೆಯನಿಗೆ ಅಷ್ಟು ಸೊಕ್ಕು ಬಂತೆ”, ಹೀಗೆ ಮಗನಿಗೆ ಹೇಳುತ್ತಾ, “ನೋಡು ಇದುವರೆಗೂ ಘಟ್ಟದ ಮೇಲೆ ಯಾರೂ ಅಸ್ಪೃಶ್ಯನಿಗೆ ಭೂಮಿ ಗೇಣಿಗೆ ಕೊಟ್ಟ ಉದಾಹರಣೆಗಳಿಲ್ಲ. ನೀನು ಅಸ್ಪೃಶ್ಯನಿಗೆ ಭೂಮಿಯನ್ನು ಗೇಣಿಗೆ ಕೊಟ್ಟೆ ಎಂಬ ಅಪಕೀರ್ತಿಗೆ ಒಳಗಾಗಬೇಡ” ಎಂದು ತಾಯಿ ಎಚ್ಚರಿಸುತ್ತಾಳೆ. ಈ ಮಾತನ್ನು ಕೇಳುವ ಸಂಕಪ್ಪಯ್ಯ, “ನೋಡು ಚೋಮ ನಮ್ಮ ತಾಯಿ ಇರುವದರೆಗೂ ನಿನಗೆ ಭೂಮಿ ಕೊಡಲು ಸಾಧ್ಯವಾಗುವುದಿಲ್ಲ” ಎನ್ನುತ್ತಾನೆ. ಸ್ವಾತಂತ್ರ್ಯಪೂರ್ವದ ಈ ಸ್ಥಿತಿ ಇಂದಿಗೂ ಬದಲಾಗದೆ ಇರುವುದು ದುರಂತ.

ಇತ್ತೀಚಿಗೆ ಕೋಲಾರ ಜಿಲ್ಲೆಯ ಟೇಕಲ್ ಹೋಬಳಿಯ ಹುಳ್ಳೇರಹಳ್ಳಿ ಗ್ರಾಮದಲ್ಲಿ ಒಬ್ಬ ದಲಿತ ಬಾಲಕ ದೇವರ ಕೋಲನ್ನು ಮುಟ್ಟಿದ ಎಂಬ ಕಾರಣಕ್ಕೆ ಆ ಬಾಲಕನ ಕುಟುಂಬಕ್ಕೆ ಬಹಿಷ್ಕಾರ ಹಾಕಿ, ದಂಡ ವಿಧಿಸಲಾಯಿತು; ಈ ಮನಸ್ಥಿತಿಗೂ ಚೋಮನ ಮಗ ನೀರಿನಲ್ಲಿ ಕೊಚ್ಚಿ ಹೋಗುವಾಗ ಅವನು ಅಸ್ಪೃಶ್ಯ, ಅವನನ್ನು ಮುಟ್ಟಬಾರದು ಎಂದು ಆ ಮಗುವಿನ ಸಾವಿಗೆ ಕಾರಣವಾದ ಮನಸ್ಥಿತಿಗೂ ಅಂತಹ ಯಾವ ವ್ಯತ್ಯಾಸಗಳೂ ಇಲ್ಲ. ಇನ್ನು ಭೂಮಿಯ ಪ್ರಶ್ನೆ ಬಂದಾಗ ಚೋಮನಂತೆ ಇವತ್ತಿಗೂ ಗೇಣು ಭೂಮಿಗಾಗಿ ವರ್ಷಗಳಿಂದ ಸರ್ಕಾರಿ ಕಚೇರಿಗಳಿಗೆ ಪರದಾಡುತ್ತಿರುವ ಕೋಟ್ಯಂತರ ಚೋಮರನ್ನು ಕಾಣಬಹುದು. ಪ್ರಜಾಪ್ರಭುತ್ವ ವ್ಯವಸ್ಥೆ ಬಂದು ಏಳು ದಶಕಗಳೇ ಕಳೆದುಹೋದರೂ ಅಸ್ಪೃಶ್ಯ ಜನಾಂಗಗಳ ಬದುಕುಗಳಲ್ಲಿ ಯಾವ ಮಟ್ಟದ ಸುಧಾರಣೆಗಳು ಸಾಧ್ಯವಾಗಿವೆ ಎಂಬುದು ಇವತ್ತಿಗೂ ಪ್ರಶ್ನೆಗಳಾಗಿಯೇ ಉಳಿದಿವೆ.

ಅಂದ ಮಾತ್ರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಶೋಷಿತ ಸಮುದಾಯಗಳ ಬದುಕಿಗೆ ಆಸರೆಯಾಗಿಲ್ಲವೇ ಎಂಬ ಪ್ರಶ್ನೆಯು ಬರುತ್ತದೆ; ಸಂವಿಧಾನ ಮತ್ತು ಪ್ರಜಾಪ್ರಭುತ್ವ ಈ ಸ್ಥಗಿತ ಸಮಾಜವು ಚಲನೆಗೊಳ್ಳಲು ನೆರವಾಗಿವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಆದರೆ ದಲಿತರ ಮೇಲೆ ದಾಖಲಾಗುತ್ತಿರುವ ದೌರ್ಜನ್ಯ ಪ್ರಕರಣಗಳು ಮಾತ್ರ ದಿನೇದಿನೇ ಹೆಚ್ಚಾಗುತ್ತಲೇ ಇವೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ಕರ್ನಾಟಕದಲ್ಲಿ ದಲಿತ ಸಮುದಾಯಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆ ಆದ ಪ್ರಮಾಣ ಅತ್ಯಂತ ಕಡಿಮೆ ಎಂಬುದು ದುರಂತ ಸಂಗತಿ. ಇವತ್ತಿಗೂ ಪತ್ರಿಕೆಗಳಲ್ಲಿ ಮತ್ತು ಇತರ ಸುದ್ದಿ ಮಾಧ್ಯಮಗಳಲ್ಲಿ ದಿನಕ್ಕೊಂದಾದರು ದಲಿತರ ಮೇಲಿನ ದೌರ್ಜನ್ಯ, ಬಹಿಷ್ಕಾರ, ದಲಿತ ಹೆಣ್ಣು ಮಕ್ಕಳನ್ನು ಮೇಲೆ ಅತ್ಯಾಚಾರ ಮುಂತಾದ ಸುದ್ದಿಗಳು ಇದ್ದೇ ಇರುತ್ತವೆ. ದಲಿತ ಸಮುದಾಯಗಳ ವ್ಯಕ್ತಿಗಳ ಮೇಲಿನ ಈ ದೌರ್ಜನ್ಯ, ಶೋಷಣೆ ಮತ್ತು ದಬ್ಬಾಳಿಕೆಗಳನ್ನು ತಡೆಯುವಲ್ಲಿ ಸರ್ಕಾರಗಳಿಗಾಗಲೀ, ದಲಿತ ಚಳವಳಿಗಳಿಗಾಗಲೀ ಏಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ನಾವೆಲ್ಲರೂ ಅವಲೋಕನ ಮಾಡಿಕೊಳ್ಳಬೇಕಾಗಿದೆ.

ಇದನ್ನೂ ಓದಿ: ಮಾತು ಮರೆತ ಭಾರತ-29; ಲಾಕ್‌ಡೌನ್ ಫೈಲ್ಸ್: ಕ್ವಾರಂಟೈನ್ ಅಲ್ಲೂ ದಲಿತರಿಗೆ ಇಲ್ಲದಾದ ರಕ್ಷಣೆ

ಕರ್ನಾಟಕದ ದಲಿತ ಚಳವಳಿಗಳು ಇಲ್ಲಿನ ದಮನಿತ ಜನಸಮುದಾಯಗಳಲ್ಲಿ ಜಾಗೃತಿಯನ್ನು ಮೂಡಿಸಿರುವುದು ನಿಜವೇ ಆದರೂ ದಲಿತರನ್ನು ರಾಜಕೀಯವಾಗಿ ಪ್ರಬಲಗೊಳಿಸುವಲ್ಲಿ ಯಶಸ್ವಿಯಾಗಿಲ್ಲ. ಇದಕ್ಕಿಂತ ಮುಖ್ಯವಾದ ಸಂಗತಿ, ದಲಿತ ಚಳವಳಿ ಬದಲಾದ ಕಾಲಘಟ್ಟಕ್ಕೆ ಬೇಕಿರುವ ಹೊಸ ನಾಯಕತ್ವವನ್ನು ಬೆಳೆಸದಿರುವುದರ ಜೊತೆಗೆ ಚಳವಳಿಯಲ್ಲಿ ಬೆಳೆದ ನಾಯಕತ್ವದ ಬಿಕ್ಕಟ್ಟು ಮತ್ತು ಉಪಜಾತಿಗಳ ಸಂಘರ್ಷಗಳು ಈ ಚಳವಳಿಯ ಪರಿಣಾಮವನ್ನು ಕುಂಠಿಸುವುದಕ್ಕೆ ಕಾರಣವಾದವು. ಇವೆಲ್ಲವುದರಿಂದ ದಲಿತರ ಬಗೆಗಿನ ನೈಜ ಕಾಳಜಿ ಹಿನ್ನೆಲೆಗೆ ಸರಿದಿರುವುದು ನಮ್ಮೆಲ್ಲರಿಗೂ ತಿಳಿಯದಿರುವ ವಿಚಾರವೇನಲ್ಲ.

ಇವೆಲ್ಲವೂ ಚಳವಳಿಯ ಧ್ವನಿ ಕಡಿಮೆಯಾಗಲು ಮುಖ್ಯ ಕಾರಣವಾಗಿದ್ದರೆ, ಇದರ ದುಷ್ಪರಿಣಾಮಗಳು ನೇರವಾಗಿ ದಲಿತ ಸಮುದಾಯದ ಮೇಲೆ ಆಗುತ್ತಿದ್ದು, ದೌರ್ಜನ್ಯಗಳು ಹೆಚ್ಚಾಗಲೂ ಕಾರಣವಾಗುತ್ತಿದೆ. ಈ ಸಂಗತಿಗಳನ್ನು ಗಂಭೀರವಾಗಿ ತೆಗೆದುಕೊಂಡು ದಲಿತ ಚಳವಳಿ ಕಾಲಕ್ಕೆ ತಕ್ಕಂತೆ ತನ್ನ ಸ್ವರೂಪವನ್ನು ಬದಲಿಸಿಕೊಂಡು ಮರುರೂಪುಗೊಳ್ಳಬೇಕಿದೆ ಹಾಗೂ ಅದರ ಜೊತೆಗೆ ಪರ್ಯಾಯ ರಾಜಕೀಯ ಶಕ್ತಿಯಾಗಿ ಪ್ರಬಲಗೊಳ್ಳಬೇಕಾದ ಅನಿವಾರ್ಯತೆಯ ಕಾಲದಲ್ಲಿ ನಾವಿದ್ದೇವೆ. ಇಲ್ಲದಿದ್ದರೆ ದಲಿತರ ಅಮೂಲ್ಯವಾದ ಮತಗಳು ಎಂದಿನಂತೆ ಉಳ್ಳವರ ಸರಕಾಗಿ ದಲಿತರ ಶತಮಾನಗಳ ಸ್ಥಿತಿ-ಗತಿ ಯಥಾಸ್ಥಿತಿಯಾಗಿಯೇ ಉಳಿದುಕೊಳ್ಳಲಿದೆ.

ಡಾ. ನಾರಾಯಣ್ ಕ್ಯಾಸಂಬಳ್ಳಿ

ಡಾ. ನಾರಾಯಣ್ ಕ್ಯಾಸಂಬಳ್ಳಿ
ಬೆಂಗಳೂರು ನಗರ ವಿಶ್ವವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರು. ಹಲವು ಚಳವಳಿ ಮತ್ತು ಹೋರಾಟಗಳ ಸಂಗಾತಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...