Homeಮುಖಪುಟ8 ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿಚ್ಛಿದ್ರಕಾರಿ ಸಾಧನೆಗಳು

8 ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿಚ್ಛಿದ್ರಕಾರಿ ಸಾಧನೆಗಳು

- Advertisement -
- Advertisement -

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಎಷ್ಟೊಂದು ಸ್ವಮೋಹಿಯೆಂದರೆ ಇವರು ಯಾವತ್ತು ’ನಮ್ಮ ಸರ್ಕಾರ’, ’ಬಿಜೆಪಿ ಸರ್ಕಾರ’ ಅಥವಾ ’ಭಾರತ ಸರ್ಕಾರ’ ಎನ್ನಲಿಲ್ಲ. ’ಮೋದಿ ಸರ್ಕಾರ’ ಎಂದೇ ಕರೆದುಕೊಳ್ಳುತ್ತಿದ್ದಾರೆ. ದ್ವೇಷವನ್ನು ಬಿತ್ತುವ ಕೆಲಸ ಮಾಡಿರುವುದೇ ಇವರ ಎಂಟು ವರ್ಷಗಳ ಸಾಧನೆಯಾಗಿದೆ. ಈತನ ಸಾಧನೆಗಳು ಎಷ್ಟು ಪೊಳ್ಳು ಎನ್ನುವುದಕ್ಕೆ ಇವರು ಕಳೆದ ಎಂಟು ವರ್ಷಗಳಲ್ಲಿ ಒಂದೇ ಒಂದು ಪತ್ರಿಕಾಗೋಷ್ಠಿ ಎದುರಿಸದಿರುವುದೇ ಸಾಕ್ಷಿ. ಮಾಂಸಾಹಾರ-ಸಸ್ಯಾಹಾರ ಎನ್ನುವ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿರುವುದು ಇವರ ಮಹತ್ತರ ಸಾಧನೆಯಾಗಿದೆ. ಜನರು ಯಾವ ಧರ್ಮಕ್ಕೆ ಸೇರಿದ್ದಾರೆ ಎಂಬುದನ್ನು ಅವರು ಧರಿಸಿರುವ ಬಟ್ಟೆಯ ಮೇಲೆ ಗುರುತಿಸಬಹುದು ಎನ್ನುವ ಪ್ರಧಾನಮಂತ್ರಿ ಯಾವ ಬಗೆಯ ಸಂದೇಶವನ್ನು ನಮ್ಮ ಮಕ್ಕಳಿಗೆ ನೀಡಬಹುದು? ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರವು ಮಾಡಿರುವ ಸಾಧನೆಗಳಿಗಿಂತ ಅದು ಮಾಡಿರುವ ಅನಾಹುತಗಳು ಅದೆಷ್ಟೋಪಟ್ಟು ಅಧಿಕವಾಗಿವೆ. ’ನುಡಿಯೊಳಗಾಗಿ ನಡೆಯದಿದ್ದರೆ ಕೂಡಲಸಂಗಮ ಒಲಿಯುವುದಿಲ್ಲ’ ಎಂಬುದು ಬಸವ ಸೂತ್ರ. ಮೋದಿ ಸರ್ಕಾರದ ಸಾಧನೆಯೆಂದರೆ ನುಡಿದದ್ದನ್ನು ನಡೆಯದಿರುವುದೇ ಆಗಿದೆ.

(1) ಮೋದಿಯವರನ್ನು ಸೇರಿಸಿಕೊಂಡು ಬಾಬಾ ರಾಮದೇವ್, ಶ್ರೀ ರವಿಶಂಕರ ಗುರೂಜಿ, ನಳಿನ್ ಕುಮಾರ್ ಕಟೀಲ್ ಮುಂತಾದವರು 2013-14ರಲ್ಲಿ ರೂಪಾಯಿಯ ವಿನಿಮಯ ದರ ಅಂದಿನ ಡಾಲರ್ ಎದುರಿಗೆ ರೂ. 60ರಷ್ಟಿದ್ದುದನ್ನು ರೂ. 30ಕ್ಕೆ ಅಥವಾ ರೂ. 40ಕ್ಕೆ ಇಳಿಸುವುದಾಗಿ ’ನುಡಿದಿದ್ದರು’. ಅದು ನಡೆಯಲ್ಲಿ ಜಾರಿಗೆ ಬಂದಿತೆ? ತದ್ವಿರುದ್ಧವಾಗಿ ಡಾಲರಿನ ಎದುರಿಗೆ ರೂಪಾಯಿಯ ವಿನಿಮಯ ದರ ಸ್ವಾತಂತ್ರ್ಯಾನಂತರ
ಕಂಡರಿಯದ ಪಾತಾಳಕ್ಕಿಳಿದಿದೆ. ಒಂದು ಡಾಲರಿಗೆ ಇಂದು ರೂ. 77.5 ನೀಡಬೇಕಾಗಿದೆ. ಇದು ನಮ್ಮ ಸರ್ಕಾರದ ವೈಫಲ್ಯ ಎನ್ನುವುದನ್ನು ಒಪ್ಪಿಕೊಳ್ಳುವ ಮುತ್ಸದ್ಧಿತನ ಮೋದಿಯವರಿಲ್ಲ. ಅವರು ಮುಂದಿನ ಚುನಾವಣೆ ಬಗ್ಗೆ ಗಮನ ನೀಡುವ ರಾಜಕಾರಣಿಯೇ ವಿನಾ ಮುಂದಿನ ಜನಾಂಗದ ಬಗ್ಗೆ ಯೋಚಿಸುವ ಮುತ್ಸದ್ಧಿಯಲ್ಲ.

(2) ವಾರ್ಷಿಕ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಮೋದಿ ಮತ್ತು ಮೋದಿ ಸರ್ಕಾರದವರು ’ನುಡಿದಿದ್ದರು’. ಇಲ್ಲಿಯೂ ಸ್ವಾತಂತ್ರ್ಯಾನಂತರ ಕಂಡುಕಾಣರಿಯದ ರೀತಿಯ ನಿರುದ್ಯೋಗವನ್ನು ಭಾರತ ಇಂದು ಎದುರಿಸುತ್ತಿದೆ. ಅರ್ಥಶಾಸ್ತ್ರಜ್ಞರು ಹೇಳುತ್ತಿರುವಂತೆ ’ಜಾಬ್-ಲೆಸ್ ಗ್ರೋಥ್’ ಎಂಬುದು ಹೋಗಿ ಇಂದು ನಾವು ’ಜಾಬ್-ಲಾಸ್ಟ್ ಗ್ರೋಥ್’ ಎದುರಿಸುವಂತಾಗಿದೆ. ಇದು ಮೋದಿ ಸರ್ಕಾರವು ಅನುಸರಿಸುತ್ತಿರುವ ಖುಲ್ಲಂಖುಲ್ಲಾ ಖಾಸಗೀಕರಣ-ಕಾರ್ಪೊರೆಟೀಕರಣದ ಪರಿಣಾಮವಾಗಿದೆ. ಇದು ಸರ್ಕಾರದ ವಿವೇಚನಾರಹಿತ ನೀತಿಗಳ ಪರಿಣಾಮವಾಗಿದೆ ಎಂಬುದನ್ನು ತಜ್ಞರು ಹೇಳುತ್ತಿದ್ದಾರೆ. ಮಹಿಳೆಯರ ನಿರುದ್ಯೋಗ ಪ್ರಮಾಣವು ಮಿತಿಮೀರಿದೆ ಎಂಬುದು ವರದಿಗಳಿಂದ ತಿಳಿಯುತ್ತದೆ.

(3)ಹೇಳಿಕೊಳ್ಳಬಹುದಾದಂತಹ ಒಂದು ಉದ್ಯೋಗ ಕಾರ್ಯಕ್ರಮವನ್ನು ಮೋದಿ ಸರ್ಕಾರವು ಕಳೆದ 8 ವರ್ಷಗಳಲ್ಲಿ ಜಾರಿಗೊಳಿಸಲಿಲ್ಲ. ಈ ಸರ್ಕಾರಕ್ಕೆ ಉದ್ಯೋಗ ನೀತಿ ಎಂಬುದೇ ಇದ್ದಂತಿಲ್ಲ. ಎಂಜಿಎನ್‌ಆರ್‌ಈಜಿಎ ಎಂಬ ಕಾರ್ಯಯೋಜನೆಯನ್ನು ಪ್ರಧಾನಿಗಳು ಕಾಂಗ್ರೆಸ್ಸಿನ ’ವೈಫಲ್ಯದ ಸ್ಮಾರಕ’ ಎಂದು ಅಸಹ್ಯಕರವಾಗಿ ಲೋಕಸಭೆಯಲ್ಲಿ ಹೀಯಾಳಿಸಿದ್ದರು. ಆದರೆ ಅದೇ ಕಾರ್ಯಕ್ರಮವು ಕೋವಿಡ್ ಪೆಂಡಮಿಕ್ ಸಂದರ್ಭದಲ್ಲಿ ಕೋಟ್ಯಂತರ ಗ್ರಾಮೀಣವಾಸಿಗಳಿಗೆ ಜೀವನೋಪಾಯವನ್ನು ಒದಗಿಸಿತು ಎಂಬುದನ್ನು ಸರ್ಕಾರ
ಮರೆತಿರಬಹುದು. ನಮಗೆ ಇದನ್ನು ಮರೆಯುವುದಕ್ಕೆ ಯಾವುದೇ ಕಾರಣವಿಲ್ಲ.

(4) ಮೋದಿ ಸರ್ಕಾರದ ಆರ್ಥಿಕ ಸಲಹೆಗಾರ ಮಂಡಳಿಯು ನೀಡಿರುವ ’ಭಾರತದಲ್ಲಿ ಅಸಮಾನತೆಯ ಸ್ಥಿತಿಗತಿ’ ಎಂಬ ವರದಿಯಲ್ಲಿ ವರಮಾನದಲ್ಲಿನ ಅಸಮಾನತೆಯು ಏರಿಕೆಯಾಗುತ್ತಿರುವುದನ್ನು ದಾಖಲಿಸಲಾಗಿದೆ. ಈ ವರದಿಯಲ್ಲಿ ಮೋದಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಲು ಮಂಡಳಿಯು ಬಹಳಷ್ಟು ಕಷ್ಟಪಟ್ಟಿದೆ. ಆದರೆ ಏರಿಕೆಯಾಗುತ್ತಿರುವ ಅಸಮಾನತೆಯನ್ನು ಮರೆಮಾಚಲು ಅದಕ್ಕೆ ಸಾಧ್ಯವಾಗಿಲ್ಲ. ಇದೇ ವಿಷಯವನ್ನು ಕುರಿತು ಆಕ್ಸ್‌ಫಾಮ್ ಸಂಸ್ಥೆಯು 2022ರಲ್ಲಿ ಪ್ರಕಟಿಸಿರುವ ವರದಿಯ ಶೀರ್ಷಿಕ ’ಇನೀಕ್ವಾಲಿಟಿ ಕಿಲ್ಸ್’ ಎಂಬುದಾಗಿದೆ ಮತ್ತು ಇದರಲ್ಲಿ ಭಾರತವನ್ನು ’ಅತಿ ಅಸಮಾನತೆಯ ದೇಶ’ ಎಂದು ಕರೆದಿದೆ. ಈ ಅಸಮಾನತೆಯ ಬಗ್ಗೆ ಪ್ರಧಾನಮಂತ್ರಿ ಒಂದು ಬಾರಿಯೂ ಮಾತನಾಡಿಲ್ಲ. ಇನ್ನು ಕ್ರಮಗಳನ್ನು ತೆಗೆದುಕೊಳ್ಳುವುದು ದೂರವೇ ಉಳಿಯಿತು!

(5) ನಮ್ಮ ಪ್ರಧಾನಮಂತ್ರಿ ಏರಿಕೆಯಾಗುತ್ತಿರುವ ಅಸಮಾನತೆಯ ಬಗ್ಗೆ ಏಕೆ ಮಾತನಾಡುವುದಿಲ್ಲ? ಉತ್ತರ ಸ್ಪಷ್ಟವಾಗಿದೆ. ಇವರು ಯಾವುದನ್ನು ನಾವು ’ಸನಾತನ ಅಸಮಾನತೆ’ ಎಂದು ಕರೆಯುತ್ತಿದ್ದೇವೆಯೋ ಆ ಚಾತುರ್ವರ್ಣ ವ್ಯವಸ್ಥೆಗೆ ಬದ್ಧರಾಗಿದ್ದಾರೆ. ಅದು ಸೈದ್ಧಾಂತಿಕವಾಗಿಯೇ ಅಸಮಾನತೆಯ ಪ್ರಣಾಳಿಕೆ. (ಅ). ನಾಲ್ಕು ವರ್ಣಗಳಲ್ಲಿ ಮೊದಲ ಮೂರು ದ್ವಿಜ ವರ್ಣಗಳಾದರೆ ನಾಲ್ಕನೆಯದು ಅದ್ವಿಜ ವರ್ಣ. (ಆ). ಅದ್ವಿಜ ವರ್ಣಗಳಲ್ಲಿನ ಜನರು ಮೇಲಿನ ತ್ರೈವರ್ಣೀಕರ ಸೇವೆ ಮಾಡಿಕೊಂಡಿರಬೇಕು. ಈ ಸೇವೆಗೆ ಪ್ರತಿಫಲವನ್ನು ನಿರೀಕ್ಷಿಸಬಾರದು. (ಇ). ತ್ರೈವರ್ಣೀಕ ಮಹಿಳೆಯರನ್ನು ಸೇರಿಸಿಕೊಂಡು ಎಲ್ಲ ಮಹಿಳೆಯರಿಗೆ ಧಾರ್ಮಿಕ ಹಕ್ಕುಗಳಿಲ್ಲ, ಅವರು ವೇದಗಳನ್ನು ಪಠಿಸುವಂತಿಲ್ಲ. ಇವರಿಗೆ ಮೋಕ್ಷವಿಲ್ಲ. (ಈ). ಚಾತುರ್ವರ್ಣ ವ್ಯವಸ್ಥೆಯು ಎಷ್ಟೊಂದು ಅಮಾನವೀಯವಾಗಿತ್ತೆಂದರೆ ಸಮಾಜದಲ್ಲಿನ ಶೇ.25ರಷ್ಟಿದ್ದ ದಲಿತರಿಗೆ ಚಾತುರ್ವರ್ಣದಲ್ಲಿ ’ಅವಕಾಶ’ವನ್ನೇ ನೀಡಿರಲಿಲ್ಲ. (ಉ). ದಲಿತರು ಸಮಾಜದ ಅಂಚಿನಲ್ಲಿ ವಂಚಿತ ಬದುಕನ್ನು ಬದುಕಬೇಕಾಗಿತ್ತು.

(6) ಪ್ರಸಿದ್ಧ ಸಮಾಜ ವಿಜ್ಞಾನಿ ಪ್ರತಾಪ್‌ಭಾನು ಮೆಹತ ಅವರು ಕರಣ್ ಥಾಪರ್ ಅವರಿಗೆ ನೀಡಿದ್ದ ಒಂದು ಸಂದರ್ಶನದಲ್ಲಿ ಯಾವುದೇ ಅನುಮಾನಕ್ಕೆ ಅವಕಾಶವಿಲ್ಲದಂತೆ ಮೋದಿ ಅವರ ಆಳ್ವಿಕೆಯನ್ನು ಮೂರು ಲಕ್ಷಣಗಳಿಂದ ಗುರುತಿಸುತ್ತಾರೆ. (ಅ). ಮೆಜಾರಿಟೇರಿಯನಿಸಮ್ (ಅಲ್ಪಸಂಖ್ಯಾತರನ್ನು ಎರಡನೆಯ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುವ ಬಹುಸಂಖ್ಯಾತ ಜನವರ್ಗದ ನಡೆವಳಿಕೆ) (ಆ). ಅಥಾರಿಟೇರಿಯನಿಸಮ್ (ವಿರೋಧ ಪಕ್ಷವನ್ನು, ಸರ್ಕಾರದ ಪಾಲಿಸಿಗಳನ್ನು ಟೀಕಿಸುವ ವಿದ್ವಾಂಸರನ್ನು, ಭಿನ್ನಮತೀಯರನ್ನು ಎಲ್ಲ ರೀತಿಯ ಅಪ್ರಜಾಪ್ರಭುತ್ವ ಕ್ರಮಗಳಿಂದ ದಮನಿಸುವ ಆಳ್ವಿಕೆ) (ಇ). ಕಮ್ಯುನಲಿಸಮ್ (ಸಮಾಜದಲ್ಲಿ ಒಂದು ಧರ್ಮದವರ ದಬ್ಬಾಳಿಕೆ ಮತ್ತು ಅಲ್ಪಸಂಖ್ಯಾತರನ್ನು ಧಾರ್ಮಿಕ ಆಕ್ರಮಣದ ಮೂಲಕ ಶೋಷಣೆ ಮಾಡುವುದು). ಇಂದು ಮೋದಿ ಆಡಳಿತದ ಪ್ರಧಾನ ಮೂರು ಗುಣಗಳು. ಇವುಗಳ ಮೆರೆದಾಟವನ್ನು ಹೆಜ್ಜೆಹೆಜ್ಜೆಗೂ, ಕರ್ನಾಟಕವನ್ನು ಸೇರಿಸಿಕೊಂಡಂತೆ ಎಲ್ಲ ’ಡಬಲ್ ಎಂಜಿನ್’ ಸರ್ಕಾರಗಳಿರುವ ರಾಜ್ಯಗಳಲ್ಲಿ ಕಾಣಬಹುದು.

(7) ಮೋದಿ ಅವರ ಎಂಟು ವರ್ಷಗಳ ಆಳ್ವಿಕೆಯ ಮತ್ತೊಂದು ಮಹತ್ತರ ಸಾಧನೆಯೆಂದರೆ ಸಂವಿಧಾನದತ್ತ ’ಒಕ್ಕೂಟ ವ್ಯವಸ್ಥೆ’ಯನ್ನು ದುರ್ಬಲಗೊಳಿಸುತ್ತಿರುವುದು. ಕರ್ನಾಟಕಕ್ಕೆ ಬಂದು ಮೋದಿ ಸರ್ಕಾರದ ಎರಡನೆಯ ಹಂತದ ನಾಯಕ ಮತ್ತು ಗೃಹ ಮಂತ್ರಿ ಅಮಿತ್ ಶಾ ’ಹಿಂದಿ ರಾಷ್ಟ್ರೀಯ ಭಾಷೆ’ ಎಂದು ಹೇಳಿ ಪ್ರ್ರಾದೇಶಿಕ ಭಾಷೆಗಳನ್ನು ಮೂಲೆಗೆ ತಳ್ಳುವಂತಹ ಭಾಷಾ ಧಮಕಿ ಹಾಕುತ್ತಾರೆ. ಪ್ರಧಾನಮಂತ್ರಿ ತಮಿಳುನಾಡಿಗೆ ಹೋಗಿ ತಮಿಳು ಪ್ರಾಚೀನ ಭಾಷೆ, ಅದು ಒಂದು ರಾಷ್ಟ್ರೀಯ ಭಾಷೆ ಎಂದು ಉದ್ಗರಿಸುತ್ತಾರೆ. ಇವರಿಗೆ ಒಕ್ಕೂಟ ತತ್ವದ ಬಗ್ಗೆ ಅರಿವಿಲ್ಲ ಎಂಬುದು ಇದರಿಂದ ತಿಳಿಯುತ್ತದೆ. ಸಂವಿಧಾನದಲ್ಲಿ ಕೃಷಿಯ ಬಗ್ಗೆ ಕಾಯಿದೆ ರೂಪಿಸುವ ಅಧಿಕಾರನ್ನು ರಾಜ್ಯಗಳಿಗೆ ನೀಡಿದ್ದರೆ ಮೋದಿ ಸರ್ಕಾರವು ಇಂತಹ ಸೂಕ್ಷ್ಮ ಸಂಗತಿಗಳನ್ನು ಬುಲ್‌ಡೋಜರ್ ಮಾಡಿ ಕೃಷಿಯನ್ನು ಕಾರ್ಪೊರೆಟೀಕರಣಕ್ಕೆ ಅನುವು ಮಾಡಿಕೊಡುವಂತಹ ಮೂರು ಕೃಷಿ ಕಾಯಿದೆಗಳನ್ನು ಜಾರಿಗೊಳಿಸುತ್ತದೆ. ಅವನ್ನು ಈಗ ರದ್ದುಪಡಿಸಲಾಗಿದೆ ಎನ್ನುವುದು ಬೇರೆ ಸಂಗತಿ. ಎರಡು-ಮೂರು ದಶಕಗಳಿಂದ ರಾಜ್ಯಗಳು, ಅದರಲ್ಲೂ ದಕ್ಷಿಣ ಭಾರತ ರಾಜ್ಯಗಳು ತಮ್ಮದೆ ರೀತಿಯಲ್ಲಿ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಅತ್ಯುತ್ತಮ ರೀತಿಯ ಪ್ರವೇಶ ಪರೀಕ್ಷೆ ನಡೆಸಿಕೊಂಡು ಬರುತ್ತಿದ್ದವು. ಇದರಿಂದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಕಲಿತ ಮತ್ತು ಸ್ಥಳೀಯ ಪಠ್ಯಕ್ರಮವನ್ನು ಅನುಸರಿಸಿದ ಗ್ರಾಮೀಣವಾಸಿ ಮಕ್ಕಳಿಗೆ, ಒಬಿಸಿ. ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ ಸಾಮಾಜಿಕ ನ್ಯಾಯವನ್ನು ನೀಡುವ ಮಹತ್ವದ ಕೆಲಸವನ್ನು ನಿಯತ್ತಿನಿಂದ ಮಾಡಿಕೊಂಡುಬರುತ್ತಿದ್ದವು. ಈ ವ್ಯವಸ್ಥೆಯು ಒಕ್ಕೂಟ ತತ್ವಕ್ಕೆ ತಕ್ಕುದಾಗಿತ್ತು
ಮತ್ತು ಸಂವಿಧಾನಾತ್ಮಕ ಮೌಲ್ಯಗಳಿಗೆ ಅನುಗುಣವಾಗಿತ್ತು. ಸಾಮಾಜಿಕ ನ್ಯಾಯಕ್ಕೆ ಮತ್ತು ಸಮಾನತೆ ಮೌಲ್ಯಗಳ ಬಗ್ಗೆ ಬದ್ಧತೆಯಿಲ್ಲದ ಮೋದಿ ಇಂತಹ ವ್ಯವಸ್ಥೆಯನ್ನು ರದ್ದುಪಡಿಸಿ ರಾಷ್ಟ್ರಮಟ್ಟದ ’ಎನ್‌ಇಇಟಿ’ ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಸ್ಥಳೀಯ ಶಿಕ್ಷಣ ಕ್ರಮದಲ್ಲಿ ಕಲಿತ ಮಕ್ಕಳಿಗೆ, ವಿಶೇಷವಾಗಿ ಒಬಿಸಿ, ಪ.ಜಾ. ಮತ್ತು ಪ.ಪಂ. ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಈ ವ್ಯವಸ್ಥೆಯನ್ನು ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ಉಳ್ಳವರಿಗೆ, ಉನ್ನತ ಜಾತಿವರ್ಗಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ರೂಪಿಸಿರುವ ಕ್ರಮವಾಗಿದೆ. ’ಒಂದು ದೇಶ, ಒಂದು ತೆರಿಗೆ’ ಹೆಸರಿನಲ್ಲಿ ಸಂವಿಧಾನವು ರಾಜ್ಯಗಳಿಗೆ ನೀಡಿದ್ದ ತೆರಿಗೆ ವಿಧಿಸುವ ಮತ್ತು ಅದರ ಉತ್ಪತ್ತಿಯನ್ನು ಬಳಸಿಕೊಳ್ಳುವ ಅಧಿಕಾರವನ್ನು ’ಜಿಎಸ್‌ಟಿ’ ಎಂಬ ವ್ಯವಸ್ಥೆಯ ಮೂಲಕ ಹರಣ ಮಾಡಲಾಗಿದೆ. ಈಗ ರಾಜ್ಯಗಳು ಒಕ್ಕೂಟ ರ್ಕಾರದ ಮುಂದೆ ಸಂಪನ್ಮೂಲಕ್ಕಾಗಿ ಕೈಯ್ಯೊಡ್ಡಿ ನಿಲ್ಲಬೇಕಾದ ಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ.

(8) ಡಿಮಾನಿಟೈಸೇಶನ್ – ನೋಟು ಅಮಾನ್ಯೀಕರಣ ಎಂಬ ಜನ-ವಿರೋಧಿ ಕ್ರಮವನ್ನು ಹಣಕಾಸಿಗೆ ಸಂಬಂಧಿಸಿದ ಪ್ರಾಥಮಿಕ ನಿಯಮವನ್ನೂ ಪಾಲಿಸದೆ ಜಾರಿಗೊಳಿಸಿದ ಪರಿಣಾಮವಾಗಿ ನಮ್ಮ ಆರ್ಥಿಕತೆಯು ಇನ್ನಿಲ್ಲದ ಸಮಸ್ಯೆಗಳನ್ನು ಇಂದಿಗೂ ಅನುಭವಿಸುತ್ತಿದೆ. ಇದೂ ಕೂಡ ಒಕ್ಕೂಟ ತತ್ವವನ್ನು ಅನುಸರಿಸದೆ
ಜಾರಿಗೊಳಿಸಿದ ಕ್ರಮವಾಗಿತ್ತು. ಇಡೀ ದೇಶದಲ್ಲಿ ನೂರಾರು ಹಿರಿಯ ನಾಗರಿಕರು ಬ್ಯಾಂಕುಗಳ ಮುಂದೆ, ಎಟಿಎಮ್‌ಗಳ ಮುಂದೆ ಸರದಿ ನಿಂತು ಪ್ರಾಣ ಕಳೆದುಕೊಂಡರು. ಡಿಮಾನಿಟೈಸೇಶನ್ ಘೋಷಿಸಿದ ಸಂದರ್ಭದಲ್ಲಿ ಪ್ರಧಾನರು ನೀಡಿದ್ದ ಅದರ ಉದ್ದೇಶಗಳಾವುದು ಅನುಷ್ಠಾನಕ್ಕೆ ಬಂದಿಲ್ಲ. ಇಡೀ ಅರ್ಥಶಾಸ್ತ್ರದ ಮತ್ತು ಹಣಕಾಸು ತಜ್ಞರ ಜಗತ್ತು ಇದನ್ನು ಒಂದು ಅಮೋಘ ವೈಫಲ್ಯದ ಕ್ರಮ ಎಂದು ಬಣ್ಣಿಸಿದ್ದಾರೆ. ಆದರೆ ಇದನ್ನು ಒಪ್ಪಿಕೊಂಡು ಅದರ ದುಷ್ಪರಿಣಾಮಗಳನ್ನು ಪರಿಹರಿಸುವ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ.

(9) ಇದರ ನಂತರ ಅವರು ಮಾಡಿದ ಮತ್ತೊಂದು ಮಹಾ ಅವಘಡ ಎಂದರೆ ಜನರಿಗೆ, ರಾಜ್ಯ ಸರ್ಕಾರಗಳಿಗೆ ಯಾವ ಮುನ್ಸೂಚನೆಯನ್ನು ನೀಡದೆ ಕೋವಿಡ್ ಪೆಂಡಮಿಕ್ ನಿಯಂತ್ರಿಸುವ ಕ್ರಮವಾಗಿ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದು. ಇದೊಂದು ಅವಿವೇಕದ, ದ್ರಾಷ್ಟ್ಯತನದ ತೀರ್ಮಾನವಾಗಿತ್ತು. ಲಕ್ಷಾಂತರ ಜನರು ಸೋಂಕಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡರೆ, ಎಷ್ಟೋ ಜನ ಲಾಕ್‌ಡೌನ್ ಕಾರಣಕ್ಕೆ ಹಸಿವಿನಿಂದ ಸತ್ತರು. ಅನೇಕ ದಶಕಗಳಿಂದ ಭಾರತವು ವ್ಯಾಕ್ಸಿನೇಶನ್ ಅಭಿಯಾನವನ್ನು ಉಚಿತವಾಗಿ ನಡೆಸಿಕೊಂಡು ಬಂದಿತ್ತು. ಆದರೆ ಕೋವಿಡ್‌ನ ವ್ಯಾಕ್ಸಿನೇಶನ್ ಅಭಿಯಾನದಲ್ಲಿ ಮೊದಲು ಹಿರಿಯ ನಾಗರಿಕರಿಗೆ ಉಚಿತ, ಉಳಿದವರಿಗೆ ರಾಜ್ಯ ಸರ್ಕಾರಗಳು ಕೊಂಡು ನೀಡಬೇಕು ಎಂಬ ಕ್ರಮವನ್ನು ಜಾರಿಗೊಳಿಸಿತು. ಆದರೆ ಯಾವಾಗ ಸರ್ವೋಚ್ಚ ನ್ಯಾಯಾಲಯ ಇದರಲ್ಲಿ ಮಧ್ಯಪ್ರವೇಶಿಸಿ ಕೆಲವು ಅಹಿತಕರ ಪ್ರಶ್ನೆಗಳನ್ನು ಕೇಳತೊಡಗಿತೋ ಅದರಿಂದ ಎಚ್ಚರಗೊಂಡ ಸರ್ಕಾರ ಉಚಿತ ವ್ಯಾಕ್ಸಿನೇಶನ್ ಕಾರ್ಯಕ್ರಮ ಜಾರಿಗೊಳಿಸಿತು. ಕೋವಿಡ್ ವ್ಯಾಕ್ಸಿನೇಶನ್ ಎಂಬುದು ಸರ್ವೋಚ್ಚ ನ್ಯಾಯಾಲಯದ ಕ್ರಮದಿಂದ ಉಚಿತವಾಗಿ ಲಭ್ಯವಾಯಿತೇ ವಿನಾ ನರೇಂದ್ರ ಮೋದಿ ಅವರ ಸರ್ಕಾರ ತೆಗೆದುಕೊಂಡ ಕ್ರಮದಿಂದಲ್ಲ!

(10)ನಮ್ಮ ಆರ್ಥಿಕತೆಯು ಇಂದು ಅತ್ಯಂತ ಅಪಾಯಕರ ಸ್ಥಿತಿಯಲ್ಲಿದೆ. ಬೆಲೆಯೇರಿಕೆಯು ಮಿತಿಮೀರುತ್ತಿದೆ. ಜಿಡಿಪಿ ಬೆಳವಣಿಗೆಯು ಎಲ್ಲರಿಗೂ ತಿಳಿದಿರುವಂತೆ 2017-18ರಿಂದಲೇ (ಕೋವಿಡ್ ಪೂರ್ವದಲ್ಲಿಯೇ) ಕುಸಿಯುತ್ತಾ ನಡೆದಿದೆ. ನಿರುದ್ಯೋಗವು ಜನರ ಬದುಕನ್ನು ಮೂರಾಬಟ್ಟೆ ಮಾಡುತ್ತಿದೆ. ಈ ಸರ್ಕಾರಕ್ಕೆ ಒಂದು ಆರ್ಥಿಕ ನೀತಿಯಿದೆ ಎಂಬುದರ ಬಗ್ಗೆ ಅನುಮಾನವಿದೆ. ನೊಬೆಲ್ ಪ್ರಶಸ್ತಿ ವಿಜೇತ ಭಾರತೀಯ ಅರ್ಥಶಾಸ್ತ್ರಜ್ಞರು ಮತ್ತು ಇತರೆ ತಜ್ಞರು ಇಂದಿನ ಆರ್ಥಿಕ ಬಿಕ್ಕಟ್ಟಿನ ಮೂಲ ಬೇಡಿಕೆಯ ಕೊರತೆಯಲ್ಲಿದೆ ಎಂದು ಹೇಳುತ್ತಿದ್ದಾರೆ. ಇದನ್ನು ಒಪ್ಪದ ಮೋದಿ ಸರ್ಕಾರವು ಪೂರೈಕೆ ಪ್ರಣೀತ ನೀತಿಗಳನ್ನು ಅನುಸರಿಸುತ್ತಿದೆ. ಬಂಡವಾಳ ಹೂಡಿಕೆಯೇ ಅಭಿವೃದ್ಧಿ ಎಂದು ಇವರು ಭಾವಿಸಿದಂತಿದೆ. ಇಂದಿನ ನಮ್ಮ ಆರ್ಥಿಕ ಕ್ರೈಸಿಸ್‌ಗೆ ಇವರ ಬಳಿಯಲ್ಲಿ ಪರಿಹಾರಗಳೇ ಇಲ್ಲವೆಂದು ಕಾಣುತ್ತದೆ. ಡಿಮಾನಿಟೈಸೇಶನ್ ಕ್ರಮದಿಂದ ಮತ್ತು ಜಿಎಸ್‌ಟಿ ಕ್ರಮದಿಂದ ಸರಿಸುಮಾರು 12 ಕೋಟಿ ಜನರು ಅವಲಂಬಿಸಿರುವ 650 ಲಕ್ಷ ’ಎಮ್‌ಎಸ್‌ಎಮ್‌ಈ’ ಉದ್ದಿಮೆಗಳು ನೆಲಕಚ್ಚಿವೆ. ಆದರೆ ಸರ್ಕಾರವು ಬೃಹತ್ ಉದ್ದಿಮೆಗಳಿ ಬಗ್ಗೆ, ಬೃಹತ್ ಬಂಡವಾಳ ಹೂಡಿಕೆ ಬಗ್ಗೆ ಮಾತ್ರ ಗಮನ ನೀಡುತ್ತಿದೆ. ಕಾರ್ಪೊರೆಟ್ ತೆರಿಗೆಗಳಲ್ಲಿ ಗಣನೀಯ ಕಡಿತ ಮಾಡಿದೆ. ಬಡವರು, ಕಾರ್ಮಿಕರು, ಅಸಂಘಟಿತ ದುಡಿಮೆಗಾರರು, ಮಹಿಳೆಯರು, ಸಣ್ಣಪುಟ್ಟ ವ್ಯಾಪಾರಿಗಳು ಮತ್ತು ರೈತಾಪಿಗಳ ಮೇಲೆ ವಿಧಿಸುವ ಜಿಎಸ್‌ಟಿಯನ್ನು (ಪರೋಕ್ಷ ತೆರಿಗೆಯನ್ನು) ಇನ್ನಿಲ್ಲದಂತೆ ಹೆಚ್ಚಿಸಲಾಗಿದೆ. ಉಳ್ಳವರಿಗೆ ತೆರಿಗೆ ವಿನಾಯಿತಿ; ಉಳಿದವರಿಗೆ ತೆರಿಗೆ ಭಾರ. ಇದು ಮೋದಿ ತೆರಿಗೆ ನೀತಿ. ಇದರಿಂದ ಉಳ್ಳವರ ಸಂಪತ್ತು ಪೆಂಡಮಿಕ್ ಸಂದರ್ಭದಲ್ಲಿಯೂ ಅನೇಕ ಪಟ್ಟು ಏರಿಕೆಯಾಗಿದೆ, ಆದರೆ ಬಡವರ ಬದುಕು ಮತ್ತಷ್ಟು ಬಡತನಕ್ಕೆ ನೂಕಲ್ಪಟ್ಟಿದೆ. ಇದು ಮೋದಿ ಅವರು 8 ವರ್ಷಗಳ ಆಳ್ವಿಕೆಯ ಸಾಧನೆ.

ಕೊನೆಯದಾಗಿ ಮೋದಿ ಅವರ ಮಹತ್ವದ ಸಾಧನೆಯೆಂದರೆ ಸಮಾಜವನ್ನು ಒಡೆದು ಆಳ್ವಿಕೆ ನಡೆಸುವ ಕ್ರಮವಾಗಿದೆ. ಭಾರತ ಹಿಂದೆಂದೂ ಇಂತಹ ಒಡೆದು ಆಳ್ವಿಕೆ ನಡೆಸುವಂತಹ ನಾಯಕರನ್ನು ಪಡೆದಿರಲಿಲ್ಲ. ಅಯೋಧ್ಯಗೆ ಹೋಗಿ ಯಜ್ಞದಲ್ಲಿ ಭಾಗವಹಿಸುತ್ತಾರೆ, ಮತ್ತೆಲ್ಲಿಯೋ ಗಂಗೆಯಲ್ಲಿ ಚೊಂಬು ಹಿಡಿದುಕೊಂಡು ಮಜ್ಜನ ಮಾಡುತ್ತಾರೆ. ಜಾತ್ಯತೀತತೆಗೆ ಇದಕ್ಕಿಂತ ಇನ್ನೇನು ಕಂಟಕ ಬೇಕು? ಸರ್ಕಾರವೊಂದು ಯಾವ ಎಗ್ಗಿಲ್ಲದೆ ಒಂದು ಧಾರ್ಮಿಕತೆಯೊಂದಿಗೆ ಸಮೀಕರಿಸಿಕೊಂಡರೆ ಅಲ್ಲಿ ಸರ್ವಧರ್ಮಸಮಭಾವ ಎಲ್ಲಿಂದ ಬರಬೇಕು? ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಅವರ ಸಾಧನೆಯೆಂದರೆ ಕಳೆದ ಅನೇಕ ದಶಕಗಳಿಂದ ನಾಡು ಬೆಳೆಸಿಕೊಂಡು ಬಂದಿದ್ದ ವೈಜ್ಞಾನಿಕ-ವೈಚಾರಿಕ ಮನೋಭಾವವನ್ನು ಮೂಲೆಗುಂಪು ಮಾಡಿದ್ದು ಎಂದು ಹೇಳಬಹುದು. ಅಂಧಶ್ರದ್ಧೆಯನ್ನು ಸರ್ಕಾರ ಪೋಷಿಸುತ್ತಿದೆ.

ಇದಕ್ಕೆಲ್ಲ ಉತ್ತರ: ಸ್ವಾತಂತ್ರ್ಯಪೂರ್ವದಲ್ಲಿ ಲಾಹೋರ್ ನಗರದಲ್ಲಿ ಜನವರಿ 19ನೆಯ 1929ರಲ್ಲಿ ಕಾಂಗ್ರೆಸ್ ಅಧಿವೇಶನದಲ್ಲಿ ತೆಗೆದುಕೊಂಡ ’ಪೂರ್ಣಸ್ವರಾಜ್’ ನಿರ್ಣಯವು ನಮಗೆ ದಾರಿಯಾಗಬಹುದು.

“We believe that it is the inalienable right of the Indian people, as of any other people, to have freedom and to enjoy the fruits of their toil and have the necessities of life, so that they may have full opportunities of growth. We believe also that if any government deprives people of these rights and oppresses them, the people have a further right to alter it or to abolish it”

ಡಾ. ಟಿ. ಆರ್. ಚಂದ್ರಶೇಖರ

ಡಾ. ಟಿ. ಆರ್. ಚಂದ್ರಶೇಖರ
ಅಭಿವೃದ್ಧಿ ಅರ್ಥಶಾಸ್ತ್ರದ ಪ್ರಾಧ್ಯಾಪಕರಾಗಿ ಹಂಪಿ ವಿ.ವಿಯಲ್ಲಿ ಸೇವೆ ಸಲ್ಲಿಸಿರುವ ಚಂದ್ರಶೇಖರ್ ಅವರು ಅರ್ಥಶಾಸ್ತ್ರದ ವಿಷಯದಲ್ಲಿ ಹಲವು ಪುಸ್ತಕಗಳನ್ನು ರಚಿಸಿದ್ದಾರೆ. ಇತಿಹಾಸ-ಸಂಸ್ಕೃತಿಗಳ ಬಗ್ಗೆಯೂ ತಮ್ಮ ವಿಶಿಷ್ಟ ಚಿಂತನೆಗಳನ್ನು ಪ್ರಸ್ತುತಪಡಿಸುತ್ತಿರುವ ಮುಂಚೂಣಿ ಚಿಂತಕರು


ಇದನ್ನೂ ಓದಿ: ಜನಸಾಮಾನ್ಯರನ್ನು ಕೆರಳಿಸಿದ ಪಠ್ಯಪುಸ್ತಕ ಪರಿಷ್ಕರಣೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಭಾರತೀಯತೆಯ ಪ್ರಪ್ರಥಮ ವಿರೋಧಿಗಳು ಎಂದರೆ ಪ್ರಗತಿಪರ ಚಿಂತಕರು, ತೆರಿಗೆದಾರರ ಹಣದಿಂದ ಸಂಬಳ ಪಡೆಯುತ್ತಾ ದೇಶೀಯತೆಯನ್ನು ವಿರೋಧಿಸುವ ಪರಮ,,,,,, ಪರದೇಶದ ಸಂಸ್ಕೃತಿ ಪ್ರದೇಶದವರ ಇತಿಹಾಸವನ್ನು ಓದುವುದು ನಮ್ಮ ಕರ್ಮ, ಇದೆಲ್ಲವೂ ಅವರಂತಹವರ ಅತೀ ಬುದ್ಧಿವಂತ ತನದ ರಚಿತ ದೇಶ ತನ್ನತನವನ್ನ ಉಳಿಸಿಕೊಳ್ಳುವತ್ತ ನಡೆಯುತ್ತಿದ್ದರೆ ಕೂಗುಮಾರಿ ಗಳಾಗಿದ್ದಾರೆ, ಗೆಳೆಯರೇ ಮಾಧ್ಯಮ ಬೆಳೆದಿದೆ ಬೆರಳಂಚಿನಲ್ಲಿ ಎಲ್ಲವೂ ತಿಳಿಯುತ್ತಿದೆ ಎಷ್ಟೇ ವ್ಯವಸ್ಥಿತವಾಗಿ ಅಪಪ್ರಚಾರ ಮಾಡಿದರು ಪ್ರತಿಫಲ ಶೂನ್ಯ ಶೂನ್ಯ ನೆನಪಿಡಿ ವಂದನೆಗಳು

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...