Homeಕರ್ನಾಟಕಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ...

ಬಾಬಾಸಾಹೇಬರ ಫೋಟೋ ತೆರವು ಘಟನೆ; ಈ ಅವಮಾನ ಕೊನೆಯದಲ್ಲ…

- Advertisement -
- Advertisement -

ಸಂವಿಧಾನ ಸಭೆಯಲ್ಲಿ ಮುಖ್ಯನ್ಯಾಯಾಧೀಶ ಹುದ್ದೆಯ ಅಧಿಕಾರದ ಬಗ್ಗೆ ಚರ್ಚೆಗಳಾಗುತ್ತಿದ್ದಾಗ ಡಾ. ಬಿ. ಆರ್. ಅಂಬೇಡ್ಕರ್ ’ನಾನೂ ವೈಯಕ್ತಿಕವಾಗಿ ಒಪ್ಪುತ್ತೇನೆ. ಮುಖ್ಯ ನ್ಯಾಯಾಧೀಶರು ಬಹಳ ಶ್ರೇಷ್ಠ ವ್ಯಕ್ತಿ. ಆದರೆ, ಎಷ್ಟಾದರೂ ಅವರು ನಮ್ಮಂತೆ ಮನುಷ್ಯರೇ. ಎಲ್ಲರಂತೆ ಲೋಪಗಳು, ಭಾವನೆಗಳು ಮತ್ತು ಪೂರ್ವಾಗ್ರಹಗಳನ್ನು ಹೊಂದಿರುತ್ತಾರೆ’ ಎಂದಿದ್ದರು. ಅವರ ಈ ಮಾತುಗಳಲ್ಲಿ ನ್ಯಾಯಾಧೀಶರಾದವರು ಈ ಸಮಾಜದ ಸಹಜ ಲೋಪಗಳನ್ನು ಸದಾ ಮೀರಬೇಕೆಂಬ ತುಡಿತವಿತ್ತು. ಭಾರತದ ಸಂವಿಧಾನ ಪೀಠಿಕೆಯೂ ಸಹ ಸಾಮಾಜಿಕ ನ್ಯಾಯವನ್ನು ಈ ನಿಟ್ಟಿನಲ್ಲಿಯೇ ಎತ್ತಿ ಹಿಡಿಯುತ್ತದೆ. ನ್ಯಾಯವನ್ನು ನೀಡುವ ಮನುಷ್ಯರು ಸಾಧ್ಯವಾದಷ್ಟು ಸಾಮಾಜಿಕ ಪಟ್ಟಭದ್ರ ಹಿತಾಸಕ್ತಿಗಳಿಂದ ದೂರವಿರಬೇಕಾದ್ದು ನ್ಯಾಯಾಂಗದ ಮೊಟ್ಟ ಮೊದಲ ಅರ್ಹತೆ. ಆದರೇನು ಮಾಡುವುದು ನಮ್ಮ ನ್ಯಾಯಾಂಗದ ನಡವಳಿಕೆಗಳು ಕೆಲವೊಮ್ಮೆ ಭಾರತದ ಸಂವಿಧಾನದ ಮೌಲ್ಯಗಳ ವಿರುದ್ಧವಿರುತ್ತದೆ.

ಮಲ್ಲಿಕಾರ್ಜುನ ಗೌಡ

ಕೆಳಹಂತದ ನ್ಯಾಯಾಧೀಶರ ಕತೆಗಳೊಂದಷ್ಟನ್ನು ಕೇಳಿಬಿಟ್ಟರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಒಂದೆರಡು ಉದಾಹರಣೆಗಳನ್ನು ನೋಡುವುದಾದರೆ, 2013ರಲ್ಲಿ ಅಲಹಾಬಾದ್‌ನಲ್ಲಿ ಜಿಲ್ಲಾ ನ್ಯಾಯಾಧೀಶರೊಬ್ಬರು ತಮಗೆ ಗೊತ್ತು ಮಾಡಿದ ಕೊಠಡಿಯನ್ನು ಗಂಗಾಜಲದಿಂದ ಶುದ್ಧೀಕರಿಸಿದ್ದರಂತೆ. ಅದಕ್ಕೆ ಕಾರಣ ಈ ಹಿಂದೆ ಆ ಕೊಠಡಿಯಲ್ಲಿದ್ದದ್ದು ದಲಿತ ನ್ಯಾಯಾಧೀಶರು! ಇದೇ ವರ್ಷದಲ್ಲಿ ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರು ಎಲ್ಲಾ ಶಾಲಾಮಕ್ಕಳಿಗೂ ಬ್ರಾಹ್ಮಣ ಜ್ಯೋತಿಷಿಯ ಬಳಿ ಭವಿಷ್ಯ ಕೇಳಿಸಿ ಶಾಲೆಗೆ ದಾಖಲಿಸಬೇಕೆಂದು ಅಭಿಪ್ರಾಯಪಟ್ಟಿದ್ದರು. ಬಾಂಬೆ ಹೈಕೋರ್ಟ್ ಜ್ಯೋತಿಷ್ಯವನ್ನು ವಿಜ್ಞಾನವೆಂದು ತೀರ್ಪು ನೀಡಿತ್ತು. ಹೀಗಿದ್ದ ನ್ಯಾಯಾಧೀಶರು 2021ರಷ್ಟೊತ್ತಿಗೆ ಯಾವ ಮಟ್ಟ ತಲುಪಿದ್ದಾರೆ ನೋಡಿ. ಅಲಹಾಬಾದ್ ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ’ಆಕ್ಸಿಜನ್‌ಅನ್ನು ಹೊರಹಾಕುವ ಏಕೈಕ ಪ್ರಾಣಿ ದನವಾಗಿದೆ’ ಎಂದಿದ್ದರು. ’ದನವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು’ ಎಂದಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟಿನ ಹಾಲಿ ನ್ಯಾಯಾಧೀಶರಾದ ಅಬ್ದುಲ್ ನಜೀರ್ ಸಾಬ್ ’ಮನು, ಚಾಣಕ್ಯರಂತಹ ದೇಸೀ ನ್ಯಾಯದಿಶಾರದರ ನ್ಯಾಯಸಂಹಿತೆಯನ್ನು ಅಳವಡಿಸಿಕೊಳ್ಳಬೇಕೆಂದು’ ಕರೆ ನೀಡಿದ್ದರು.

ಈ ಮೇಲಿನಂತೆ ನೂರಾರು ಹೇಳಿಕೆಗಳಿವೆ ಬಿಡಿ. ಇಂತಹ ನ್ಯಾಯಾಧೀಶರಿಂದ ಸಂವಿಧಾನ ಮೌಲ್ಯವನ್ನು ಎತ್ತಿಹಿಡಿಯಲಾಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಮುಖಾಮುಖಿಯಾಗಿ ಮೊನ್ನೆ ರಾಯಚೂರಿನ ಜಿಲ್ಲಾ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡನ ತಾರತಮ್ಯಪೂರಿತ ಅವಿವೇಕತನವನ್ನು ನೋಡಬೇಕಿದೆ. ಆತನಿಗೆ ಉದ್ಯೋಗ ನೀಡಿ ಕರ್ತವ್ಯಗಳ ಪಟ್ಟಿಯನ್ನು ನಿಗದಿಪಡಿಸಿರುವುದು ಭಾರತದ ಸಂವಿಧಾನವಾದರೂ ಅವರ ತಲೆಯಲ್ಲಿ ತುಂಬಿರುವುದು ಮಾತ್ರ ಭಾರತದ ವಿಲಕ್ಷಣ ಜಾತಿ ತಾರತಮ್ಯ ವ್ಯವಸ್ಥೆ. ನ್ಯಾಯಾಧೀಶನೊಬ್ಬ ಈ ಹಿಂದೆ ಇಂತಹ ತಾರತಮ್ಯ ಮಾಡಲು ಹಿಂದುಮುಂದು ನೋಡುತ್ತಿದ್ದನೇನೋ (ಕನಿಷ್ಟ 80-90 ರ ದಶಕದಲ್ಲಿ ಇದು ಸತ್ಯವಾಗಿರುತ್ತದೆ). ಕನಿಷ್ಠ ತನ್ನ ಇತರೆ ಜಾತಿಯ ಸಹವರ್ತಿಗಳು ತನ್ನ ಬಗ್ಗೆ ಏನೆಲ್ಲಾ ಭಾವಿಸಬಹುದು ಎಂದು ಅಳುಕುತ್ತಿದ್ದನೇನೋ. ಆದರೆ ಇಂದು ಪ್ರಭುತ್ವವೇ ಇಂತಹ ನ್ಯಾಯಾಧೀಶರ ಪರವಾಗಿ ನಿಂತಿದೆ. ಸುಪ್ರೀಂ ಕೋರ್ಟ್ ಎಸ್.ಸಿ ಮತ್ತು ಎಸ್.ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1989 (ಅಟ್ರಾಸಿಟಿ ತಡೆ ಕಾಯ್ದೆ) ಮತ್ತು ತಿದ್ದುಪಡಿ 2015 ಇದನ್ನು ದಲಿತರು ’ಅತಿರೇಕದ ದುರ್ಬಳಕೆ’ ಮಾಡಿಕೊಳ್ಳುತ್ತಿದ್ದಾರೆ ಎಂದು ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಇಂತಹ ಮನಸ್ಥಿತಿಗಳ ಹಿಂದೆ ಪ್ರಭುತ್ವದ ಒಪ್ಪಿಗೆ ಇರಲೇಬೇಕು. ಪ್ರಭುತ್ವದ ಧೋರಣೆಯೇ ಸಮಾಜದ ಧೋರಣೆಯೆಂದು ಬಿಂಬಿಸುವ ಜಾಗಟೆಗಳಿರಬೇಕು. ಆ ಜಾಗಟೆಗಳು ಇದನ್ನು ಸಾರ್ವತ್ರೀಕರಣಗೊಳಿಸಬೇಕು. ಹೀಗೆ ಪ್ರಭುತ್ವವೊಂದು ನಮ್ಮದೆಂದು ಜನತೆಗೆ ಅನಿಸಿದಾಗ ಪ್ರಭುತ್ವದ ವಿರೋಧಿಗಳೆಲ್ಲ ಜನರ ವಿರೋಧಿಗಳಾಗಿಯೂ ಪ್ರಭುತ್ವಕ್ಕೆ ಬಹುಪರಾಕು ಹೇಳುವವರೆಲ್ಲ ಜನನಾಯಕರಂತೆಯೂ ಕಾಣುತ್ತಾರೆ. ಅಲ್ಲಿಗೆ ಫ್ಯಾಸಿಸಂ ತನ್ನ ಬಲೆಗಳನ್ನು ದೊಡ್ಡದು ಮಾಡಿಕೊಳ್ಳುತ್ತಾ ಹೋಗುತ್ತಿರುತ್ತದೆ.

ಭಾರತದ ಸಂವಿಧಾನ ಜಾರಿಯಾದಾಗಿನಿಂದಲೂ ಅದರ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಎನ್ನುವುದನ್ನು ಒಪ್ಪಿಕೊಳ್ಳಲು ತಿಣುಕಾಡುತ್ತಿದ್ದ ಬೆರಳೆಣಿಕೆಯಷ್ಟು ಜನರ ಸಂಖ್ಯೆ ಇಂದು ಗಮನಾರ್ಹವಾಗಿ ಬೆಳೆದು ನಿಂತಿದೆ. ಸಂವಿಧಾನ ಸಭೆಯ ಚರ್ಚೆಗಳನ್ನು ಹೆಕ್ಕಿ ಮುಂದಿಟ್ಟರೂ ಸತ್ಯವನ್ನು ಅರಿಯಲು ಅವರಿಂದ ಸಾಧ್ಯವಾಗುತ್ತಿಲ್ಲ. ಮತ್ತೊಂದು ಕಡೆ ’ಸಂವಿಧಾನವನ್ನು ಬದಲಾಯಿಸುತ್ತೇವೆ’ ಎಂದು ಸರ್ಕಾರದ ಪಾಲುದಾರನೇ ಹೇಳುತ್ತಿದ್ದರು ಅದನ್ನು ನಂಬಲು ಹಲವರಿಗೆ ಸಾಧ್ಯವಾಗುತ್ತಿಲ್ಲ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ’ಗೋಹತ್ಯಾ ನಿಷೇಧ ಹಾಗೂ ಮತಾಂತರ ನಿಷೇಧ ಕಾಯ್ದೆ’ಗಳು ಸೇರಿಕೊಳ್ಳಲು ಹೇಗೆ ಸಾಧ್ಯ? ಬ್ರಾಹ್ಮಣರಾದಿಯಾಗಿ ಮೇಲ್ಜಾತಿಗಳಿಗೆ ಕೇವಲ ಆರ್ಥಿಕ ಮಾನದಂಡದ ಆಧಾರದಲ್ಲಿ ಅವರ ಜನಸಂಖ್ಯೆಗಿಂತಲೂ ಹೆಚ್ಚಿಗೆ ಮೀಸಲಾತಿ ಕೊಡಲು ಹೇಗೆ ಸಾಧ್ಯ? 72 ವರ್ಷದ ನಂತರವೂ ಅಸ್ಪೃಶ್ಯತೆ ನಿಷೇಧವಾಗದಿರಲು ಹೇಗೆ ಸಾಧ್ಯ? ಕೇವಲ 10 ಶ್ರೀಮಂತರು ಭಾರತದ ಶೇ. 45 ರಷ್ಟು ಸಂಪತ್ತನ್ನು ಹೊಂದಲು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ಉತ್ತರವೇನು? ಎಲ್ಲಾ ಭಾರತೀಯರಿಗಾಗಿ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಉಳ್ಳವರು ತಮ್ಮ ಪರವಾಗಿ ತಿದ್ದುಪಡಿ ಮಾಡಿಕೊಳ್ಳುತ್ತಿದ್ದಾರೆ ಎಂಬುದಲ್ಲವೇ?

ಅಬ್ದುಲ್ ನಜೀರ್ ಸಾಬ್

ಮೇಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡಾಗ ಮಾತ್ರ ಜಿಲ್ಲಾ ನ್ಯಾಯಾಧೀಶನೊಬ್ಬ ’ಸಂವಿಧಾನ ಶಿಲ್ಪಿಯ ಭಾವಚಿತ್ರವನ್ನು ಇಡಲು ಹಾಗೂ ಇಟ್ಟ ಭಾವಚಿತ್ರವನ್ನು ನಿರಾಕರಿಸಲು ಇರುವ ಕಾರಣಗಳನ್ನು ತಿಳಿಯಬಹುದಾಗಿದೆ. ಅಂದು ಅಂಬೇಡ್ಕರರ ಭಾವಚಿತ್ರಕ್ಕೆ ಆದ ಅವಮಾನಕ್ಕೆ ಅದೆಷ್ಟು ಜನ ಕೆಂಡಾಮಂಡಲರಾದರೋ ಬಹುಶಃ ಅದಕ್ಕಿಂತಲೂ ಹೆಚ್ಚು ಜನ ಒಳಗೊಳಗೇ ಖುಷಿಗೊಂಡಿಲ್ಲ ಎಂಬುದನ್ನು ಖಚಿತವಾಗಿ ಹೇಳುವ ಧೈರ್ಯ ಯಾರಿಗಿದೆ? ಇದು ಕೇವಲ ಭಾವಚಿತ್ರದ ಕತೆಯಲ್ಲ. ಇಡೀ ದೇಶದ ಕತೆ. ಭಾರತೀಯರ ಕತೆ. ಕೊಳೆತ ಹೆಣವನ್ನು ಹೂಳದೆ ಮಮ್ಮಿಯಾಗಿಸಿಕೊಂಡು ಅದನ್ನೇ ಪರಂಪರೆಯೆಂದು ಕೊಂಡಾಡುತ್ತ ಆಗಾಗ ಸುಗಂಧದ್ರವ್ಯವನ್ನು ಲೇಪಿಸಿಕೊಂಡಿರುವ ಸಮಾಜದಲ್ಲಿ ಸದಾ ಚಿಗುರುತ್ತಲೇ ಇರುವ ಅಂಬೇಡ್ಕರ್ ವಿಚಾರಧಾರೆಯನ್ನು ಸಹಿಸಿಕೊಳ್ಳುವುದಾದರೂ ಹೇಗೆ? ಹಾಗಾಗಿ ಒಮ್ಮೆ ಹೊಗಳಬೇಕು, ಹೊಗಳಿ ದೇವರಾಗಿಸಬೇಕು. ಇಲ್ಲವೇ ಆಗಾಗ ತೆಗಳಿ ಚಿಗುರನ್ನು ಚಿವುಟುತ್ತಿರಬೇಕು. ಈ ಎರಡೂ ಕೆಲಸವನ್ನು ಪ್ರಭುತ್ವ ಈಗಾಗಲೇ ಅಂಬೇಡ್ಕರರ ವಿಷಯದಲ್ಲಿ ಮಾಡಿದೆ, ಮಾಡುತ್ತಿದೆ. ಎರಡನೆಯದರ ಭಾಗವಾಗಿ ಮಲ್ಲಿಕಾರ್ಜುನ ಗೌಡ ತನ್ನ ಕೆಲಸವನ್ನು ಮುಂದುವರೆಸಿದ್ದಾರೆ. ಮೊದಲನೆಯದ್ದರ ಭಾಗವಾಗಿ ಪ್ರಭುತ್ವ ’ಪಂಚತೀರ್ಥ’ವನ್ನಾಗಿಸುತ್ತಿದೆ. ನಿಜವಾದ ಅಂಬೇಡ್ಕರ್ ಅನುಯಾಯಿಗಳ ಮುಂದಿರುವ ಆಯ್ಕೆ ಇವೆರಡರಲ್ಲಿ ಒಂದಾದರೆ ಅದು ಅಂಬೇಡ್ಕರ್ ಅವರಿಗೆ ಬಗೆದ ದ್ರೋಹವಾಗುತ್ತದೆ. ಹಾಗೆಂದರೆ ಮೂರನೆಯದೊಂದಿದೆಯೇ? ಎಂದು ಪ್ರಶ್ನಿಸಿದರೆ ಮೂರನೆಯದ್ದೋ.. ನಾಲ್ಕನೆಯದ್ದೋ.. ಐದನೆಯದ್ದೋ.. ಬನ್ನಿ ಜಾತಿವಿನಾಶದೆಡೆಗೆ ಹಲವು ಪ್ರಯೋಗ ಮಾಡುತ್ತಾ ಅಂಬೇಡ್ಕರರ ರಥವನ್ನು ಮುಂದೆಳೆಯೋಣ ಎಂದು ಹೇಳುತ್ತೇನೆ.


ಇದನ್ನೂ ಓದಿ: ಕೋಮುವಾದಿಗಳು ಆಕ್ಟೀವ್ ಆಗಿರುವುದರಿಂದ ಇಂತಹ ಘಟನೆಗಳಾಗುತ್ತಿವೆ: ಜಸ್ಟೀಸ್ ದಾಸ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...