Homeಮುಖಪುಟನುಡಿ ನೆನಪು; ರಂಗಭೂಮಿಯ ಭಾರ್ಗವಿ ನಾರಾಯಣ್ ನೆನಪು ಸದಾ ಹಸಿರು..

ನುಡಿ ನೆನಪು; ರಂಗಭೂಮಿಯ ಭಾರ್ಗವಿ ನಾರಾಯಣ್ ನೆನಪು ಸದಾ ಹಸಿರು..

- Advertisement -
- Advertisement -

1998ರಲ್ಲಿ ನಾನು ನ್ಯಾಷನಲ್ ಕಾಲೇಜಿನ ನಾಟಕದ ಸಂಚಾಲಕನಾಗಿ ವಿದ್ಯಾರ್ಥಿಗಳಿಗೊಂದು ರಂಗತರಬೇತಿ ಕಾರ್ಯಾಗಾರವನ್ನು ನಡೆಸಿದ್ದೆ. ಆಗ ಮೇಕಪ್ ನಾಣಿ ಅವರನ್ನು ಮೇಕಪ್ ಕ್ಲಾಸ್ ಮಾಡಲು ಆಹ್ವಾನಿಸಿದ್ದೆ. ಅದೇ ಸಂದರ್ಭದಲ್ಲಿ ಶ್ರೀಮತಿ ಭಾರ್ಗವಿ ನಾರಾಯಣ್ ಅವರನ್ನೂ ತಮ್ಮ ರಂಗಭೂಮಿಯ ಅನುಭವವನ್ನು ಹಂಚಿಕೊಂಡು ನಮ್ಮ ವಿದ್ಯಾರ್ಥಿಗಳನ್ನು ಪ್ರೇರೇಪಿಸಬೇಕೆಂದು ಕೇಳಿಕೊಂಡಿದ್ದೆ. ಅದೇ ವರ್ಷ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಪ್ರಶಸ್ತಿಯೂ ಸಂದಿತ್ತು. ಅವರು ಬಂದು ವಿದ್ಯಾರ್ಥಿಗಳೊಡನೆ ಅಮ್ಮನಂತೆ ಬೆರೆತು ಪ್ರೀತಿಯಿಂದ ಮಾತನಾಡಿದರು. ನಾಟಕಗಳಲ್ಲಿ ಹೆಣ್ಣಿನ ಪಾತ್ರಗಳನ್ನು ಗಂಡಸೇ ಮಾಡುತ್ತಿದ್ದ ಅಂದಿನ ಸಂದರ್ಭದಲ್ಲಿ ತಾವು ಕನ್ನಡ ರಂಗಭೂಮಿಯನ್ನು ಪ್ರವೇಶಿಸಿ ಹೆಣ್ಣಿನ ಪಾತ್ರವನ್ನು ನಿರ್ವಹಿಸಿದ್ದನ್ನು ಸ್ವಾರಸ್ಯಕರವಾಗಿ ಹೇಳಿ ವಿದ್ಯಾರ್ಥಿಗಳನ್ನು ಆಶ್ಚರ್ಯಗೊಳ್ಳುವಂತೆ ಮಾಡಿದ್ದರು.

ನಂತರದಲ್ಲಿ ನ್ಯಾಷನಲ್ ಕಾಲೇಜಿಗೆ ಸಂಜೆಯ ವೇಳೆ ವಿವಿಧ ನಾಟಕ ತಂಡಗಳ ನಾಟಕದ ತಾಲೀಮಿಗಾಗಿ ಬರುತ್ತಿದ್ದಾಗ ಕೆಲವೊಮ್ಮೆ ಕಂಡು ಮಾತನಾಡಿಸಿದ್ದೆ. ಅಷ್ಟೇ ನನ್ನ ಅವರ ಪರಿಚಯ ಮತ್ತು ಭೇಟಿ. ನಂತರದಲ್ಲಿ ನಾನು ಅವರನ್ನು ಕಂಡದ್ದು ಕೆಲವು ನಾಟಕಗಳಲ್ಲಿ ಮಾತ್ರ. ಅದರಲ್ಲೂ ಕಲಾಗಂಗೋತ್ರಿ ತಂಡ ಅಭಿನಯಿಸಿದ ಎರಡು ನಾಟಕಗಳು ನನಗೆ ಅವರ ನೆನಪನ್ನು ಯಾವಾಗಲೂ ಹಸಿರಾಗಿಸಿಡುತ್ತದೆ. ಒಂದು ’ಪರಹಿತ ಪಾಷಾಣ’ ಎಂಬ ನಾಟಕದಲ್ಲಿ ಯಮುನಾ ಮೂರ್ತಿಯವರೊಡನೆ ಜೋಡಿಯಾಗಿ ನಟಿಸಿದ್ದರು. ಅದರಲ್ಲಿ ಇಬ್ಬರು ಮದುವೆಯಾಗದೇ ಉಳಿದ ಹಿರಿಯ ಹೆಂಗಸರು ಮನೆಗೆ ಬಂದ ಅತಿಥಿಗಳನ್ನು ಕೊಲ್ಲುವ ಕಥೆಯುಳ್ಳ ಆ ನಾಟಕ. ಅದರಲ್ಲಿ ಅವರದು ’ಅಕ್ಕಯ್ಯಮ್ಮ’ನ ಪಾತ್ರ. ಆ ಪಾತ್ರವನ್ನು ಅವರು ನಿರ್ವಹಿಸಿದ ರೀತಿ ನನಗೆ ತುಂಬಾ ಮೆಚ್ಚುಗೆಯಾಗಿತ್ತು.

ತಣ್ಣನೆಯ ಕ್ರೌರ್ಯವನ್ನು ಮುಂದಿಡುವ ಆ ನಾಟಕದಲ್ಲಿ ಭಾರ್ಗವಿ ಅವರದು ಅಮಾಯಕತೆಯೇ ಮೈವೆತ್ತಿದಂತಹ ಪಾತ್ರ. ಹಾಸ್ಯದ ಧಾಟಿಯಲ್ಲಿ ಅತ್ಯಂತ ಸಹಜ ನಟನೆಯಲ್ಲಿ ರಂಜಿಸುತ್ತಿದ್ದರು. ಅವರು ನಾಟಕದ ಪಾತ್ರ ಎಂದು ಅಂದುಕೊಡೇ ಇಲ್ಲವೇನೋ ಎಂಬಷ್ಟು ಸಹಜವಾಗಿತ್ತು ಅವರ ರಂಗದ ಮೇಲಿನ ಓಡಾಟ. ಆ ಇಬ್ಬರು ಹಿರಿಯ ಜೀವಗಳ ನಟನಾ ಚಾತುರ್ಯವನ್ನು ಯಾರೂ ಮರೆಯಲಾರರು. ಇನ್ನೊಂದು ನಾಟಕ ಕಲಾಗಂಗೋತ್ರಿ ಅಭಿನಯಿಸಿದ ಅತ್ಯಂತ ಯಶಸ್ವೀ ನಾಟಕ ’ಮುಖ್ಯಮಂತ್ರಿ’. ಅದರಲ್ಲಿ ಅವರು ಮುಖ್ಯಮಂತ್ರಿಯವರ ಹೆಂಡತಿ ಪ್ರದ್ಯುಮ್ನಾದೇವಿಯವರ ಪಾತ್ರವನ್ನು ನಿರ್ವಹಿಸಿದ್ದರು. ಈ ಎರಡೂ ನಾಟಕಗಳ ಪಾತ್ರಗಳ ವೈವಿಧ್ಯತೆಯನ್ನು ತುಂಬಿಕೊಡುತ್ತಿದ್ದ ಭಾರ್ಗವಿ ನಾರಾಯಣ್ ಅವರು ಎಲ್ಲ ಬಗೆಯ ಗೌರವಗಳಿಗೂ ಅರ್ಹರು. ಅಂತೇ ಅವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳೂ ಲಭಿಸಿವೆ. ಒಂದು ಬಾರಿ ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರೂ ಆಗಿದ್ದರು.

ಭಾರ್ಗವಿ ನಾರಾಯಣ್ ಅವರ ಸಿನೆಮಾ ನಟನೆಯ ಬಗೆಗೆ ನನಗೆ ಅಷ್ಟೇನೂ ಮೆಚ್ಚುಗೆ ಇಲ್ಲ. ಬಹುಷಃ ’ವಂಶವೃಕ್ಷ’ ಚಿತ್ರದಲ್ಲಿ ಅವರನ್ನು ನೋಡಿದಂತೆ ಇನ್ನಿತರ ಚತ್ರಗಳಲ್ಲಿ ನಾನು ಅವರನ್ನು ಕಾಣಲಿಲ್ಲ. ಇನ್ನೊಂದು ಚಿತ್ರ ಪ್ರೊಫೆಸರ್ ಹುಚ್ಚೂರಾಯ. ಇದರಲ್ಲಿ ಅವರಿಗೆ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿಯೂ ಸಂದಿದೆ. ನಾನು ನೋಡಿದ ಇತರೆ ಚಿತ್ರಗಳಲ್ಲಿ ಅವರದು ಒಂದೇ ಬಗೆಯ ನಟನೆ, ಎಲ್ಲ ಪಾತ್ರಗಳೂ ಒಂದೇ ಏನೋ ಎಂಬಂತಿರುತ್ತಿತ್ತು. ಬಹುಷಃ ಇದು ನಮ್ಮ ಚಿತ್ರರಂಗದ ಮಿತಿಯೇನೋ ಅದು! ಹೆಚ್ಚಗಿನ ಧಾರಾವಾಹಿಗಳಲ್ಲಿ ಮಧ್ಯಮವರ್ಗದ ಬ್ರಾಹ್ಮಣ ಕುಟುಂಬದ ಹೆಣ್ಣುಮಗಳ ಪಾತ್ರವನ್ನು ಮನಮುಟ್ಟುವಂತೆ ಅಭಿನಯಿಸುತ್ತಿದ್ದರು.

ಎಲ್ಲಕ್ಕಿಂತ ಹೆಚ್ಚಾಗಿ ಅವರ ರಂಗದ ಮೇಲಿನ ಚಟುವಟಿಕೆಯ ಪಾತ್ರಪೋಷಣೆ ನಮ್ಮನ್ನು ಬೆರಗುಗೊಳಿಸುತ್ತಿದ್ದುದು ನಿಜ. ಬೆಂಗಳೂರು ಆಕಾಶವಾಣಿಯ ಕಲಾವಿದೆಯಾಗಿದ್ದರು. ರೇಡಿಯೋ ನಾಟಕಗಳಲ್ಲಿ ಭಾಗವಹಿಸಿ, ಆಕಾಶವಾಣಿಗಾಗಿ ಹಲವಾರು ನಾಟಕಗಳನ್ನೂ ಬರೆದು ನಿರ್ದೇಶಿಸಿದರು. 600ಕ್ಕೂ ಹೆಚ್ಚು ನಾಟಕಗಳು, ನೂರಾರು ಸಿನೆಮಾಗಳು, ಹತ್ತಾರು ಧಾರಾವಾಹಿಗಳು, ನಿರಂತರ ರಂಗಭೂಮಿ ಮತ್ತಿತರ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆ – ಈ ಎಲ್ಲವೂ ಅವರ ವೈವಿಧ್ಯಮಯ ಬದುಕಿನ ಆಯ್ಕೆಗೆ ಹಿಡಿದ ಕನ್ನಡಿಯೇ ಆಗಿದೆ. ಭಾರ್ಗವಿ ಅವರು ತಮ್ಮ ಜೀವನವನ್ನು ಕುರಿತಂತೆ ’ನಾನು ಭಾರ್ಗವಿ’ ಎಂಬ ಆತ್ಮಕಥೆಯನ್ನು ಬರೆದಿದ್ದಾರೆ. ಹಾಗೇ ’ನಾ ಕಂಡ ನಮ್ಮವರು’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಡಾ. ಎಚ್.ಎನ್ ಅವರನ್ನು ಕಂಡರೆ ಅವರಿಗೆ ತುಂಬಾ ಗೌರವ. ಡಾ. ಎಚ್.ಎನ್ ಕೂಡಾ ಆಗಾಗ ನಾಣಿಯವರ ಬಗೆಗೆ ಮಾತು ಬಂದಾಗಲೆಲ್ಲ ಇವರನ್ನು ಅಕ್ಕರೆಯಿಂದ ಹಾಸ್ಯಮಯವಾಗಿ ನೆನಪಿಸಿಕೊಳ್ಳುತ್ತಿದ್ದುದನ್ನು ನಾನು ನೋಡಿದ್ದೇನೆ.

ಭಾರ್ಗವಿ ಅವರು ಕುಟುಂಬದಲ್ಲೂ ಅತ್ಯಂತ ಪ್ರಭಾವಶಾಲೀ ವ್ಯಕ್ತಿತ್ವ. ಪತಿ ಬಿ.ಎನ್.ನಾಣಿ, ಮಕ್ಕಳು ಎಲ್ಲರೂ ರಂಗಭೂಮಿ, ಕಿರುತೆರೆ, ಹಿರಿತೆರೆ ಎಲ್ಲದರಲ್ಲೂ ತುಂಬಾ ಚಟುವಟಿಕೆಯಿಂದ ನಿರಂತರವಾಗಿ ಸುದ್ದಿಯಲ್ಲಿರುವವರು. ತುಂಬು ಜೀವನವನ್ನು ಕಂಡ ಅವರು 84ನೇ ವಯಸ್ಸಿನಲ್ಲಿ ತೀರಿಕೊಂಡರು. ಅವರ ಅಗಲಿಕೆ ಸಹಜವಾಗಿಯೇ ದುಃಖ ತರುವಂಥದ್ದು. ರಂಗಭೂಮಿಯ ಹಿರಿಯರೆಲ್ಲರೂ ಒಬ್ಬೊಬ್ಬರಾಗಿ ಲೋಕವನ್ನು ಬಿಡುತ್ತಿದ್ದರೆ ಮುಂದಿನ ಯುವ ಜನಾಂಗಕ್ಕೆ ಅಗತ್ಯವಾಗಿ ಕಲೆಯ ಬದ್ಧತೆಯನ್ನು ತಿಳಿಸುವ ಅಗಣಿತ ಪ್ರೇರಣೆಯ ಕೊಂಡಿಗಳು ಕಳಚುತ್ತಾ ಬಂದಂತೆ ಎಂದೆನಿಸುತ್ತದೆ.

ಡಾ. ಹೆಚ್.ವಿ. ವೇಣುಗೋಪಾಲ್

ಡಾ. ಹೆಚ್.ವಿ. ವೇಣುಗೋಪಾಲ್
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿ ಮತ್ತು ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಮುದಾಯ ರಂಗತಂಡದಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ.


ಇದನ್ನೂ ಓದಿ: ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...