Homeಮುಖಪುಟಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೋಲಿಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ.

- Advertisement -
- Advertisement -

ರಂಗಭೂಮಿ ಮಾಧ್ಯಮದ ದೊಡ್ಡ ಶಕ್ತಿಯಿರುವುದು ಅದು ಜನರನ್ನು ನೇರಾನೇರ, ಜೀವಂತವಾಗಿ ಎದುರುಗೊಳ್ಳುವ ಬಗೆಯಲ್ಲಿ. ಇಂತಹ ಜೀವಂತ ಒಡನಾಟದಲ್ಲಿ ಉಂಟಾಗಬಹುದಾದ ಹಲವು ಬಗೆಯ ಕೊಳು-ಕೊಡುಗೆಗಳು, ಕಟ್ಟಿಕೊಳ್ಳುವ ದೇಶ-ಕಾಲಗಳನ್ನು ರೂಪಾಂತರಗೊಳಿಸುವ ಆಟಗಳು, ಬೇರೆ ಯಾವ ಕಲಾ ಮಾಧ್ಯಮಕ್ಕಿಂತಲೂ ರಂಗಭೂಮಿ ಮಾಧ್ಯಮಕ್ಕೆ ಅನಿವಾರ್ಯ. ಅದನ್ನು ಬಿಟ್ಟು ಆನ್ಲೈನ್ ಥಿಯೇಟರ್, ಡಿಜಿಟಲ್ ಥಿಯೇಟರ್ ರೀತಿಯ ಏನೇ ಕಸರತ್ತು ಮಾಡಿದರೂ ಅದು ’ರಂಗಭೂಮಿ’ ಅನಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹವುಗಳು ನಾವು ಈ ಕ್ಷಣ ಸುಮ್ಮನಿರಲಾದ ಜಿದ್ದಿಗೆ ರೂಪಿಸಿಕೊಂಡ ಕಳಪೆ ಮಾದರಿಗಳು. ನಾನಿಲ್ಲಿ ರಂಗಭೂಮಿ ಮಾಧ್ಯಮದ ಶುದ್ಧತೆಯ ಬಗೆಗೆ ಮಾತಾಡುತ್ತಿಲ್ಲ. (ರಂಗಭೂಮಿ ಯಾವತ್ತಿಗೂ ಶುದ್ಧತೆಯ ವಿರೋಧಿ). ಬದಲಿಗೆ ಬೇರೆ ಯಾವುದೇ ಕಲಾ ಮಾಧ್ಯಮಕ್ಕೂ ಸಾಧ್ಯವಿಲ್ಲದ ರಂಗಭೂಮಿ ಮಾಧ್ಯಮದ ನಿಜ ’ಎಸ್ಸೆನ್ಸ್’ ಕುರಿತು ಮಾತಾಡುತ್ತಿದ್ದೇನೆ.

ಮೊದಲಿನಿಂದಲೂ ರಂಗಭೂಮಿಯ ಈ ಎಸ್ಸೆನ್ಸ್‌ನ ಹುಡುಕಾಟದ ಕುರಿತು ಹಲವು ಪ್ರಯೋಗಗಳು, ಚರ್ಚೆಗಳು, ತಕರಾರುಗಳು ಇದ್ದೇ ಇವೆ. ಡಿಜಿಟಲ್ ಇಡಿಚಿದ ಆರಂಭದ ಕಾಲದಿಂದಲೂ ರಂಗಭೂಮಿ, ತಂತ್ರಜ್ಞಾನವನ್ನು ತನ್ನ ಇರುವಿಕೆಯ ಭಾಗವಾಗಿಸಿಕೊಂಡು ಬೆಳೆಯಲು ಪ್ರಯತ್ನಿಸಿದೆ. ಆದರೆ ಹೆಚ್ಚಿನ ಬಾರಿ ಈ ಪ್ರಯತ್ನಗಳಲ್ಲಿ ಸೋತಿದೆ. ಕೆಲವು ಬಾರಿ ಗಿಮಿಕ್ ಎನ್ನಿಸುವಂತಹ ರೀತಿಯಲ್ಲಿ ತಂತ್ರಜ್ಞಾನವು ಬಳಕೆಯಾಗಿ ತನ್ನ ಪ್ರಯೋಗದಲ್ಲಿ ಗೆದ್ದಿರುವ ಉದಾಹರಣೆಗಳೂ ಇವೆ. ಇಂತಹ ಪ್ರಯೋಗಗಳು ’ನಟ ಮತ್ತು ಪ್ರೇಕ್ಷಕ’ ಜೀವಂತವಾಗಿ ಎದುರುಗೊಳ್ಳುವ ಪ್ರಕ್ರಿಯೆಯನ್ನು ಮತ್ತು ಅವರು ಕೂಡಿ ಕಟ್ಟುವ ಆಟವನ್ನು re-create ಮಾಡಲು ತಿಣುಕಾಡಿ ಹೋಗಿವೆ. ಸಾಮಾನ್ಯವಾಗಿ ರಂಗಭೂಮಿಯಲ್ಲಿ ನಟ ಮತ್ತು ಪ್ರೇಕ್ಷಕರು ಒಬ್ಬರನ್ನೊಬ್ಬರು ಎದುರುಗೊಂಡು ಹಲವು ಬಗೆಯ ರೂಪಾಂತರಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ ಮತ್ತು ಈ ರೂಪಾಂತರವು ಆ ಕ್ಷಣದ ಜೀವಂತ ಒಡನಾಟವನ್ನು ಅವಲಂಬಿಸಿರುತ್ತದೆ. ಬೇರೆಲ್ಲ ಕಲಾಮಾಧ್ಯಮಗಳಿಗೆ ಹೋಲಿಸಿದರೆ ಇಲ್ಲಿ ಪ್ರೇಕ್ಷಕನ ಕ್ರಿಯಾಶೀಲ ಕೊಡುಗೆಯ ಅಗತ್ಯತೆ ಹೆಚ್ಚು. ರಂಗಭೂಮಿ ಬೇರೆ ಕಲಾಮಾಧ್ಯಮಗಳಿಗಿಂತಲೂ ಹೆಚ್ಚಾಗಿ ತನ್ನ ನೋಡುಗನನ್ನು ಸಹ ಸೃಷ್ಟಿಕಾರ ಎಂದು ನಂಬುತ್ತದೆ, ಮತ್ತದು ಸತ್ಯವೂ ಕೂಡ. ನಾಟಕದಲ್ಲಿನ ಪ್ರತಿಯೊಬ್ಬ ನಟನು ಏಕಕಾಲಕ್ಕೆ ತನ್ನ ಕಲ್ಪನಾ ಜಗತ್ತು ಮತ್ತು ಪ್ರೇಕ್ಷಕನ ಕಲ್ಪನಾ ಜಗತ್ತನ್ನು ನಂಬಿ ತನ್ನ ಸೃಜನಶೀಲ ಅಭಿವ್ಯಕ್ತಿಯನ್ನು ಸೃಜಿಸಬೇಕಾಗುತ್ತದೆ, ಕಾಣಿಸಬೇಕಾಗುತ್ತದೆ. ಈ ಕಾರಣದಿಂದಲೇ ರಂಗಭೂಮಿಯ ಮೂಲ ಅಗತ್ಯ ನಟ ಮತ್ತು ಪ್ರೇಕ್ಷಕನ ಜೀವಂತ ಒಡನಾಟದ ಹೊರತಾಗಿ ಬೇರಾವುದು ಅಲ್ಲ. ಮೂಲ ಅಗತ್ಯ ಇಷ್ಟು ಸರಳವಾದ್ದು ಮತ್ತು ಚೆಲುವಾದ್ದು. ಆದ್ದರಿಂದಲೇ ರಂಗಭೂಮಿಯು ಹರಡಿಕೊಂಡಿರುವ ವ್ಯಾಪ್ತಿ ಹೆಚ್ಚು.

ದುರಂತವೊಂದು ಅನಿರೀಕ್ಷಿತವಾಗಿ ಒದಗಿಬಂದಾಗ ಅದಕ್ಕೆ ಪ್ರತಿಕ್ರಿಯಿಸುವ ರೀತಿ ಗೊತ್ತಿಲ್ಲದೇ ಯಾವುದೇ ಜೀವಿಯಾದರೂ ಭಯ ಮತ್ತು ಆತುರದಲ್ಲಿ ಪ್ರತಿಕ್ರಿಯಿಸುವುದು ಸಹಜವಾದ್ದೇ. ಬರ, ಭೂಕಂಪ, ಸುನಾಮಿ, ಪ್ರವಾಹಗಳು ಆದಾಗ ಹೇಗೆ ಪ್ರತಿಕ್ರಿಯಿಸಬೇಕು ಹೇಗೆ ಜೀವ ಉಳಿಸಿಕೊಳ್ಳಬೇಕೆಂದು ಜನಗಳಿಗೆ ತಿಳಿದಿರುವುದಿಲ್ಲ. ಅಳಿವುಉಳಿವಿನ ಸ್ಥಿತಿ ಉಂಟಾದಾಗ ಆತುರದ ಮತ್ತು ಚಡಪಡಿಕೆ ಪ್ರತಿಕ್ರಿಯೆಗಳೆ ಹೆಚ್ಚು. ಆಗ ಇಡೀ ಸಮೂಹ ಒಂದು ರೀತಿಯ social anxiety ಗೆ ಒಳಗಾಗುತ್ತದೆ.

ರಂಗಭೂಮಿ ಸಮುದಾಯದ್ದು ಇದೇ ಬಗೆಯ ವರ್ತನೆ. ತನ್ನನ್ನು ಹೇಗಾದರೂ ಉಳಿಸಿಕೊಳ್ಳುವ ಮತ್ತು ಸುಮ್ಮನೆ ಇರಲಾರದ ಚಡಪಡಿಕೆ. ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಂಗಭೂಮಿಯ ಹೆಸರಿನಲ್ಲಿ ರಾಶಿ ರಾಶಿ ಡಿಜಿಟಲ್ ಮೆಟೀರಿಯಲ್ ಇಂತಹ ಸಮಯದಲ್ಲಿ, ಈ ಬಿಕ್ಕಟ್ಟಿನಲ್ಲಿ ಸೃಷ್ಟಿಯಾಯಿತು. ಇದು ರಂಗಭೂಮಿ ತನ್ನ ಮೂಲ ಎಸೆನ್ಸ್ ಇಂದ ದೂರ ನಡೆದು ತನ್ನನ್ನು ತಾನು ದುರ್ಬಲಗೊಳಿಸಿಕೊಂಡ ನಡೆ ಮತ್ತು ಜಗತ್ತಿನಾದ್ಯಂತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ತನ್ನ ರಕ್ಷಕನ ರೀತಿಯಲ್ಲಿ ಕಂಡು ಅವುಗಳೇ ತಮ್ಮ ಉಳಿವಿನ ದಾರಿ ಎಂಬಂತೆ ವರ್ತಿಸಿದ್ದು ಈ ಸಾಮಾಜಿಕ ಆತಂಕದ ಭಾಗವಾಗಿಯೇ.

ಈಗ ಕೊರೊನಾ ನಿಯಮಗಳು ಸಾಕಷ್ಟು ಸಡಿಲಗೊಂಡಿದ್ದರೂ, ಪ್ರೇಕ್ಷಕರ ಜೀವಂತ ಒಡನಾಟದಲ್ಲಿ ನಾಟಕಗಳನ್ನು ಮಾಡಲು ಸಾಧ್ಯವಿದ್ದರು ಅದರ ಕಡೆ ಗಮನ ಕೊಡದೇ ಆನ್ಲೈನ್ ಪ್ಲಾಟ್‌ಫಾರ್ಮ್, zoom ಥಿಯೇಟರ್ ತರದ ವೇದಿಕೆಗಳಲ್ಲಿ ಮುಂದುವರಿದಿರುವುದು ರಂಗಭೂಮಿಯಂತಹ ಮಾಧ್ಯಮಕ್ಕೆ ಮಾಡಬಹುದಾದ ದೊಡ್ಡ ಡ್ಯಾಮೇಜ್. ಮೊದಲೆ ಹೇಳಿದಂತೆ ರಂಗಭೂಮಿ ಮೂಲಭೂತ ಅಗತ್ಯತೇ ಬಹಳ ಸರಳ: ನಟ ಮತ್ತು ಪ್ರೇಕ್ಷಕ. ಆದ್ದರಿಂದರೇ ಅದರ ವ್ಯಾಪ್ತಿ ಹೆಚ್ಚು.

ನಾಟಕವೊಂದು ನಡೆಯಲು ಇಂತಹದ್ದೊಂದು ಜಾಗವೇ ಆಗಬೇಕೆಂದೇನಿಲ್ಲ. ಮನೆ, ಶಾಲೆ, ಬೀದಿ, ಹಳ್ಳಿಯ ಮೈದಾನ, ರಂಗಮಂದಿರಗಳು ಎಲ್ಲಿಯಾದರೂ ಸರಿ. ಪ್ರೇಕ್ಷಕ-ನಟನಿದ್ದರೆ ನಿಂತ ನೆಲವೇ ರಂಗಭೂಮಿಯಾಗುತ್ತದೆ. ಆದ್ದರಿಂದಲೇ ಮೂಲದಲ್ಲಿ ಇದೊಂದು ಸರಳ ಕಲೆ. ಎಲ್ಲರ ಕೈಗೂ ಸಿಗಬಹುದಾದ ಎಲ್ಲರನ್ನೂ ಒಳಗೊಳ್ಳಬಯಸುವ ಸಮುದಾಯದ ಕಲೆ. ಎಲ್ಲಿಯಾದರೂ ಯಾವ ಗಳಿಗೆಯಲ್ಲಾದರೂ ರಂಗಭೂಮಿಯ ಮ್ಯಾಜಿಕ್ ಘಟಿಸಬಹುದು. ಆದರೆ social anxietyಯ ಭಾಗವಾಗಿ ಹುಟ್ಟಿಕೊಂಡ ಡಿಜಿಟಲ್ ವೇದಿಕೆಗಳು ಇಂತಹ ದೈತ್ಯ ಸಾಧ್ಯತೆಯನ್ನು ಕಸಿದುಕೊಳ್ಳುವ ಅಪಾಯವಿದೆ.

ನಾವುಗಳು ಈಗ ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಾಟಕದ ಷೋಗಳನ್ನು ನಡೆಸಿದ ಮತ್ತು ನಡೆಸುತ್ತಿರುವ ಸಂಸ್ಥೆಗಳನ್ನು ಗಮನಿಸಿದರೆ ಅವೆಲ್ಲವೂ ಸರ್ಕಾರಿ ಅಥವಾ ಕಾರ್ಪೊರೆಟ್ ಅನುದಾನ ಪಡೆದ elite ಹಿನ್ನೆಲೆಯ, ರಂಗಭೂಮಿಯ inclusive ಗುಣವನ್ನು ಗಣನೆಗೆ ತೆಗೆದುಕೊಳ್ಳದ ಸಂಸ್ಥೆಗಳು. ಇಂತಹ ಸಂಸ್ಥೆಗಳು ಮತ್ತು ಅವುಗಳು ಮಾಡುವ ಎಲೀಟ್ ರಂಗಭೂಮಿ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುತ್ತದೆ. ಆದರೆ ದೊಡ್ಡ ಹೊಡೆತ ಬಿದ್ದಿರುವುದು ಸಾವಿರಾರು ಅಸಂಘಟಿತ ಕಲಾವಿದರುಗಳು ತಮ್ಮ ತಮ್ಮ ಊರು-ಕೇರಿಗಳಲ್ಲಿ ಹತ್ತಾರು ಜನಗಳು ಕೂಡಿ ಕಟ್ಟಿಕೊಂಡು ಆಡುತ್ತಿದ್ದ ಸಮುದಾಯ ರಂಗಭೂಮಿಗೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೊಲೀಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ. (ಕೆಲವು ಸಮಯದಲ್ಲಿ ಕೆಲವು ನಾಟಕಗಳ ಮೇಲೆ ’ಸಂಸ್ಕೃತಿ’ ಉಳಿಸುವವರ ಪ್ರಾಯೋಜಿತ ದಾಳಿಗಳು ನಡೆದಿವೆ).

ಈಗ ಹೆಚ್ಚು ಹೆಚ್ಚು ಆನ್ಲೈನ್ ವೇದಿಕೆಗಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು ನಡೆಸುವುದು ಅಲ್ಲಿ ತೋರಿಸಬಹುದಾದ, ಹೇಳಬಹುದಾದ ವಸ್ತು ವಿಷಯಗಳ ಮೇಲೆ ಅಘೋಷಿತ ಸೆನ್ಸಾರ್ ಹೇರಿಕೊಂಡಂತೆಯೇ. ಬಿಗ್‌ಬಾಸ್‌ಗಳಿಗೆ ಇವೆಲ್ಲವನ್ನು ತಮ್ಮ ಕಣ್ಗಾವಲಿನಲ್ಲಿ ಇರಿಸಿಕೊಂಡು ವಾಚ್ ಮಾಡುವುದು ಮತ್ತು ಮಾನಿಟರ್ ಮಾಡುವುದು ಸುಲಭ. ಪ್ರಭುತ್ವ ಜನಗಳ imaginationಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಜಾಲ ಹೂಡುತ್ತದೆ. ಎಲ್ಲವು ಡಿಜಿಟಲ್ ವೇದಿಕೆಗಳಲ್ಲಿ ಸಿಕ್ಕಕೂಡಲೇ ಅದನ್ನು ಸಾಧಿಸಿಕೊಳ್ಳುವುದು ಬಹಳ ಸುಲಭ. ರಂಗಭೂಮಿಯದು ಇದರ ವಿರುದ್ಧ ದಿಕ್ಕು. ತನ್ನ ಪ್ರೇಕ್ಷಕರ imaginationಅನ್ನು ವಿಸ್ತರಿಸುವ ಮತ್ತು ಆ ಮೂಲಕ ಅವರ ಯೋಚನೆ ಮತ್ತು ಅರಿವನ್ನು ವಿಸ್ತರಿಸುವುದು ರಂಗಭೂಮಿಯ ಮೂಲತತ್ವ. ಡಿಜಿಟಲ್ ಥಿಯೇಟರ್ ಪ್ರೇಕ್ಷಕರ imaginationಅನ್ನು ಮಿತಿಗೊಳಿಸುತ್ತದೆ.

ಹೆಚ್ಚಿನ ಜನರುಗಳನ್ನು ರೀಚ್ ಅಗುತ್ತದೆ ಅನ್ನುವ ಏಕೈಕ ಕಾರಣಕ್ಕೆ ಡಿಜಿಟಲ್ ಥಿಯೇಟರ್ ಪ್ಲಾಟ್‌ಫಾರ್ಮ್‌ಳನ್ನು ಈ ಕಾಲದ ಹೊಸ ಅನ್ವೇಷಣೆ ಅನ್ನುವ ರೀತಿಯಲ್ಲು ನೋಡಲಾಗುತ್ತಿದೆ. ಆದರೆ ರಂಗಭೂಮಿ ತನ್ನ ಮೂಲ ಸತುವನ್ನು ಕಳೆದುಕೊಂಡು ರೀಚ್ ಆಗುವ ಸಂಖ್ಯೆಯಲ್ಲಿ ತನ್ನ ಬೆಳವಣಿಗೆಯನ್ನು ಕಾಣುವುದಾದರೆ ಅದರಷ್ಟು ಮರುಭೂಮಿತನ ಮತ್ತೊಂದು ಇರಲಾರದು. ಇಡೀ ರಂಗಭೂಮಿ ಸಮುದಾಯ ಈಗಲಾದರೂ ವ್ಯವಧಾನದಿಂದ ಯೋಚಿಸಿ ಡಿಜಿಟಲ್ ವೇದಿಕೆಗಳಿಂದ ಬದಿಗೆ ಸರಿದು ಕಡಿಮೆ ಸಂಖ್ಯೆಯ ಪ್ರೇಕ್ಷಕರಾದರು ಅವರ ನೇರ ಭಾಗವಹಿಸುವಿಕೆಯಲ್ಲಿ ನಾಟಕಗಳನ್ನು ಆಡದೇ ಹೋದರೆ ಉಳ್ಳವರ ಹೊರತಾಗಿ ಇರುವ ಬೇರೊಂದು ದೊಡ್ಡ ಸಮೂಹವನ್ನು ಮುಟ್ಟುವುದರಿಂದ ವಂಚಿತರಾಗುತ್ತೇವೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ಜಗತ್ತ್ತಿನಾದ್ಯಂತ ಕೊರೊನಾ ಕಾರಣದಿಂದಾಗಿ ಎಲ್ಲ ಕ್ಷೇತ್ರಗಳೂ ತಾವು ಕೆಲಸ ಮಾಡುವ ರೀತಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿವೆ ಮತ್ತು ಮಾಡಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಕಡೆಗೆ ಮುಖ ಮಾಡಲು ಹವಣಿಸುತ್ತಿದ್ದ ಎಲ್ಲ ಕ್ಷೇತ್ರಗಳ ದೃಷ್ಟಿ ಈಗ ಸ್ಥಳೀಯತೆ ಕಡೆಗೆ ಹೊರಳಿವೆ. ಈ ಬಗೆಯ ನೋಟವು ರಂಗಭೂಮಿಗೂ ಹೊಸ ಚಲನೆಯನ್ನು ನೀಡುವ ನೋಟವಾಗಬಹುದೇನೋ! ಸದಾ ಜಿಲ್ಲಾ ಮತ್ತು ನಗರ ಕೇಂದ್ರಿತವಾದ ಕನ್ನಡ ರಂಗಭೂಮಿ ವಲಯ ಈ ಕಾಲವನ್ನು ಒಂದು ಅವಕಾಶದಂತೆ ಬಳಸಿಕೊಂಡು ಹಳ್ಳಿ ಹಳ್ಳಗಳ ರೀತಿ ರಂಗಭೂಮಿ ಹರಿಯುವಂತೆ ರೂಪಿಸಲು ಸಾಧ್ಯವಾದರೆ ಅದು ಸಣ್ಣ ಮತ್ತು ಆಪ್ತವಾದ ರಂಗಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತದೆ.

ಇಡಿಯ ಮನುಷ್ಯಕುಲಕ್ಕೆ ಆಪ್ತತೆಯ ಸಂವಾದಗಳು ಎಷ್ಟು ಮುಖ್ಯ ಎನ್ನುವುದನ್ನು ಕೊರೊನಾ ಕಾಲವು ಅಂಕಿ ಅಂಶಗಳ ಮೂಲಕ ನಮಗೆ ಸ್ಪಷ್ಟಪಡಿಸಿದೆ. ರಂಗಭೂಮಿ ಮಾಧ್ಯಮವು ಇದನ್ನು ಗಮನದಲ್ಲಿಟ್ಟುಕೊಂಡು ಮೆಗಾ ಪ್ರಾಜೆಕ್ಟ್‌ಗಳ ಖೆಡ್ಡಾಕ್ಕೆ ಬೀಳದೆ ಸ್ಥಳೀಯ, ಸಣ್ಣ, ಆಪ್ತ ಪ್ರಯೋಗಗಳನ್ನು ಕಟ್ಟಲು ಸಾಧ್ಯವಾದರೆ ಅದು ಈ ಕಾಲದ ಹಲವು ಒಳ ಹೊರಗಿನ ಕಾಯಿಲೆಗಳಿಗೆ ಗುಣಮುಖತೆಯ ದಾರಿ ತೋರಿಸಬಹುದು ಅನಿಸುತ್ತದೆ.

ಈ ರೀತಿಯ ಪ್ರಯೋಗಗಳು ನ್ಯೂಜಿಲ್ಯಾಂಡ್‌ನಂತಹ ದೇಶಗಳಲ್ಲಿ ಆರಂಭವಾಗಿವೆ. ಇದು ರಂಗಭೂಮಿ ಸಮುದಾಯ, ಪ್ರಜ್ಞಾವಂತ ಪ್ರೇಕ್ಷಕ ಸಮುದಾಯ ಮತ್ತು ಸಂವೇದನೆ ಇರಬಹುದಾದ ಸರಕಾರಗಳು ಒಟ್ಟೊಟ್ಟಿಗೆ ಸೇರಿ ಮಾಡಬೇಕಾದ ಕೆಲಸ. ಕೊರೊನಾದಿಂದಾಗಿ ಕಲಾವಿದರ ಬದುಕಿನಲ್ಲಿ ಉಂಟಾಗಿರುವ ಅನಿಶ್ಚಿತತೆಗೆ ಈ ಕ್ಷಣಕ್ಕೆ ಪರಿಹಾರವಂತೂ ಇಲ್ಲ. ಆದರೆ ಈಗ ನಾವು ಇಡಲಿರುವ ಹೊಸ ಬಗೆಯ ಹೆಜ್ಜೆಗಳು ನಮ್ಮೆಲ್ಲರ ಸಾಂಸ್ಕೃತಿಕ ಬದುಕನ್ನು ಮತ್ತು ಕಲಾವಿದರ ಬದುಕನ್ನು ಸಹ್ಯವಾಗಿಸುವಂತೆ ನೋಡಿಕೊಳ್ಳಬೇಕು ಇಲ್ಲದೆ ಹೋದರೆ ಮತ್ತದೇ ಹಳೆಯ ತಪ್ಪುಗಳನ್ನು ಹೊಸತಾಗಿ ಮಾಡಿದಂತಾಗುತ್ತದೆ ಅಷ್ಟೆ.

ಲಕ್ಷ್ಮಣ ಕೆ.ಪಿ

ಲಕ್ಷ್ಮಣ ಕೆ.ಪಿ
ರಂಗಕರ್ಮಿ, ನಟ. ಭಾರತ, ಸಿಂಗಾಪುರ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ನಾಟಕ ಪ್ರದರ್ಶನ ನೀಡಿರುವ ಇವರು, ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕೃತಿ ಆಧರಿತ ನಾಟಕದಲ್ಲೂ ಅಭಿನಯಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....