Homeಚಳವಳಿದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

- Advertisement -
- Advertisement -

ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ದೇಶದಾದ್ಯಂತ ರೈತರು ಈಗಾಗಲೇ ಹೋರಾಟ ಮಾಡುತ್ತಿದ್ದಾರೆ. ದೆಹಲಿಯ ಹೋರಾಟ 43 ನೇ ದಿನಕ್ಕೆ ಕಾಲಿಟ್ಟಿದೆ. ದೆಹಲಿ ಗಡಿಯಲ್ಲಿ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದು ಪಡಿಸಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ಕಾನೂನು ತರಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೆ ದೆಹಲಿಯ ಪೂರ್ವ ಭಾಗದಲ್ಲಿ ಮತ್ತೊಂದು ರೈತ ಪ್ರತಿಭಟನೆ ಭುಗಿಲೆದ್ದಿದ್ದು, ಉತ್ತರ ಪ್ರದೇಶದ ಕಬ್ಬು ಬೆಳೆಗಾರರು ಬಾಕಿ ಪಾವತಿಗೆ ಆಗ್ರಹಿಸಿ ಹೋರಾಟ ಪ್ರಾರಂಭಿಸಿದ್ದಾರೆ.

ಕಳೆದ ಹಂಗಾಮಿನ ಕಬ್ಬಿನ ಬಾಕಿ ಪಾವತಿಯಾಗದೇ ಇರುವುದು, ಕಬ್ಬು ಅರೆದು ಎರಡು ತಿಂಗಳಾದರೂ 2020-21 ರ ಸಾಲಿನ ರಾಜ್ಯ ಸಲಹೆ ಮಾಡಿದ ಬೆಲೆ (state advised price-SAP) ಘೋಷಿಸದಿರುವುದು ಯುಪಿಯ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿದೆ.

ಉತ್ತರಪ್ರದೇಶದ ಮುಖ್ಯ ಬೆಳೆಯಾಗಿರುವ ಕಬ್ಬನ್ನು ಎಪಿಎಂಸಿ ಮಂಡಿಗಳಲ್ಲಿ ಮಾರುವುದಿಲ್ಲ. ಅದಕ್ಕೆ ’ರಾಜ್ಯ ಸಲಹೆ ಮಾಡಿದ ಬೆಲೆ(ಎಸ್‌ಎಪಿ)’ ನಿಗದಿ ಮಾಡಲಾಗುತ್ತದೆ. ಈ ಬೆಲೆ ಶಾಸನ ಬದ್ಧವಾಗಿರುತ್ತದೆ. ಇಲ್ಲಿ ಎಂಎಸ್‌ಪಿ ಪ್ರಶ್ನೆ ಬರುವುದಿಲ್ಲ, ಸಕ್ಕರೆ ಕಾರ್ಖಾನೆಗಳು ಎಸ್‌ಎಪಿ ಆಧರಿಸಿ ರೈತರಿಗೆ ಪಾವತಿಸಲೇಬೇಕು.

ಇದನ್ನೂ ಓದಿ: ರೈತ ಪ್ರತಿಭಟನೆಯಲ್ಲಿ ಪಂಜಾಬಿನ ರೈತ ಕೂಲಿಯಾಳುಗಳ ಕತೆ

ದೆಹಲಿ-ಉತ್ತರಪ್ರದೇಶ ಗಡಿಯ ಘಾಜಿಪುರದ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರು ಭಾಗವಹಿಸುತ್ತಿದ್ದಾರೆ. ಕಬ್ಬನ್ನು ಕಾರ್ಖಾನೆಗೆ ತಲುಪಿಸಿದ 14 ದಿನದಲ್ಲಿ ಎಸ್‌ಎಪಿ ಪಾವತಿಸಬೇಕು ಎಂಬ ಕಾನೂನು ಇದ್ದರೂ, 2019-20 ರ ಹಂಗಾಮಿನ (ಸೆಪ್ಟೆಂಬರ್-ಅಕ್ಟೋಬರ್) ಕಬ್ಬಿಗೆ ಕಾರ್ಖಾನೆಗಳು ಇನ್ನೂ ಹಣ ಪಾವತಿ ಮಾಡಿಲ್ಲ. 2020 ರ ಅಕ್ಟೋಬರ್ ಅಂತ್ಯದಿಂದಲೇ ಕಾರ್ಖಾನೆಗಳು 2020-21 ರ ಹಂಗಾಮಿಯ ಕಬ್ಬು ಅರೆಯಲು ಶುರು ಮಾಡಿದ್ದರೂ, ಆದಿತ್ಯನಾಥ ಸರ್ಕಾರವು ಈವರೆಗೂ ಈ ಹಂಗಾಮಿ ಎಸ್‌ಎಪಿಯನ್ನು ಘೋಷಣೆ ಮಾಡಿಲ್ಲ.

ಪಶ್ಚಿಮ ಯುಪಿಯ ಭಾಗಪತ್ ಜಿಲ್ಲೆಯ ಖಾಸಿಮಪುರ್ ಖೇರಿಯಲ್ಲಿ ಒಂದು ಎಕರೆ ಜಮೀನು ಹೊಂದಿರುವ ರಾಕೇಶ್ ತೋಮರ್, 2019-20 ರ ಹಂಗಾಮಿಯ ಒಟ್ಟು 15 ’ಪಾರ್ಚಿ’ ಕಬ್ಬನ್ನು (ಪಾರ್ಚಿ ಎಂದರೆ ಒಂದು ಎತ್ತಿನ ಚಕ್ಕಡಿ ಭರ್ತಿ ಕಬ್ಬು, ತಲಾ 18 ಕ್ವಿಂಟಾಲ್ ತೂಗುತ್ತದೆ) ರಾಮಲಾ ಸಹಕಾರಿ ಮಿಲ್‌ಗೆ ನೀಡಿದ್ದಾರೆ. ಮಿಲ್ ಜೂನ್ 14 ರಂದೇ ಕಬ್ಬು ಅರೆಯುವಿಕೆ ಆರಂಭಿಸಿದೆ. ರಾಕೇಶ್ ಅವರಿಗೆ ಇನ್ನೂ 4 ಪಾರ್ಚಿ ಕಬ್ಬಿನ ಬಾಕಿ ಬರಬೇಕಿದ್ದು, ಇದು 23,400 ಆಗುತ್ತದೆ. ಹೊಸ ಹಂಗಾಮಿಯ 6 ಪಾರ್ಚಿ ಕಬ್ಬನ್ನೂ ಅವರು ಮಿಲ್‌ಗೆ ಪೂರೈಸಿದ್ದಾರೆ. ಅಕ್ಟೋಬರ್ ಅಂತ್ಯದಲ್ಲೇ ಅರಿಯುವಿಕೆ ಆರಂಭಗೊಂಡರೂ ಇನ್ನೂ ಬಾಕಿ ಬಂದಿಲ್ಲ.

ಇದನ್ನೂ ಓದಿ: ಈ ಬಾರಿ ಕೆಂಪುಕೋಟೆಯಲ್ಲಿ ಮೋದಿ ಧ್ವಜಾರೋಹಣ ಮಾಡಲು ಬಿಡುವುದಿಲ್ಲ: ಟ್ರಾಕ್ಟರ್ ರ್ಯಾಲಿಯಲ್ಲಿ ರೈತರ ಎಚ್ಚರಿಕೆ

ಶಾಮ್ಲಿಯಲ್ಲಿರುವ ಮಿಲ್‌ಗೆ ಅನೂಜ್ ಕಲ್ಕಂಡೆಯವರು ಜನವರಿ 3 ರಂದು 20 ಕ್ವಿಂಟಾಲ್ ಕಬ್ಬು ಪೂರೈಸಿದ್ದರು. ಕಳೆದ ಹಂಗಾಮಿನಲ್ಲಿ 2,400 ಕ್ವಿಂಟಾಲ್ ಪೂರೈಸಿದ್ದರು. ಹಿಂದಿನ ಹಂಗಾಮಿನ ಬಾಕಿಯೂ ಬಂದಿಲ್ಲ. ಈ ಸಲ ಇನ್ನೂ ಎಸ್‌ಎಪಿ ಘೋಷಣೆಯಾಗದ ಕಾರಣ, ಈ ಸಲವೂ ವಿಳಂಬವಾಗಲಿದೆ. ಸರ್ಕಾರ ಎಸ್‌ಎಪಿ ಘೋಷಣೆ ಮಾಡದೇ ಕಾರ್ಖಾನೆಗಳಿಗೆ ಪರೀಕ್ಷವಾಗಿ ಸಹಾಯ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

2021 ರ ಜನವರಿ 5 ರ ಅಂಕಿಅಂಶಗಳ ಪ್ರಕಾರ, ಮಿಲ್/ಕಾರ್ಖಾನೆಗಳು 2019-20 ರ ಹಂಗಾಮಿನಲ್ಲಿ ಒಟ್ಟು 35,898 ಕೋಟಿ ರೂ ಮೌಲ್ಯದ (ಎಸ್‌ಎಪಿ ಅನ್ವಯ) ಕಬ್ಬು ಖರೀದಿಸಿದ್ದು, ಇನ್ನೂ 2019-20 ರ ಸಾಲಿನ 2,470 ಕೋಟಿ ರೂ. ಬಾಕಿ ಪಾವತಿಸಿಲ್ಲ. ಈ ಹಂಗಾಮಿನಲ್ಲಿ ಅವು ಈಗಾಗಲೇ 363.20 ಲಕ್ಷ ಟನ್ ಕಬ್ಬನ್ನೂ ಅರೆದಿವೆ.

ಈಗಲೂ ಎಸ್‌ಎಪಿ ಘೋಷಣೆಯಾಗದ ನೆಪದಲ್ಲಿ ರೈತರಿಗೆ ಹಣ ಪಾವತಿ ಮಾಡುತ್ತಿಲ್ಲ. ಹೋದ ವರ್ಷದ ಎಸ್‌ಎಪಿ ಆಧಾರದಲ್ಲಿ ಹೇಳುವುದಾದರೆ, 11,660 ಕೋಟಿ ರೂ. ಮೌಲ್ಯದ ಕಬ್ಬನ್ನೂ ಈಗಾಗಲೇ ಅರೆಯಲು ಆರಂಭಿಸಿವೆ. ಇಲ್ಲಿವರೆಗೆ ಅವು 11,660 ಕೋಟಿ ರೂ. ಪೈಕಿ ಕೇವಲ 2,427 ಕೋಟಿ ರೂ ಪಾವತಿಸಿದ್ದು, ಎಸ್‌ಎಪಿ ಘೋಷಣೆ ನಂತರ ಉಳಿದ ಹಣ ಪಾವತಿಸುವ ಭರವಸೆ ನೀಡಿವೆ. ಆದರೆ ಕಳೆದ ಹಂಗಾಮಿನ ಬಾಕಿಯನ್ನೂ ಇನ್ನೂ ಕೊಡದ ಪರಿಣಾಮ ಕಬ್ಬು ಬೆಳೆಗಾರರು ಯುಪಿ ಸರ್ಕಾರ ಮತ್ತು ಕಾರ್ಖಾನೆಗಳ ವಿರುದ್ಧ ದೆಹಲಿಯ ಪೂರ್ವ ಗಡಿಯ ಘಾಜಿಪುರ್‌ನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ದೆಹಲಿ ಹೋರಾಟದಲ್ಲಿ ರೈತರ ಜೊತೆ ಬುದ್ದ, ಅಂಬೇಡ್ಕರ್‌, ಭಗತ್‌ಸಿಂಗ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...