Homeಮುಖಪುಟಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ಡಿಜಿಟಲ್ ವೇದಿಕೆಗಳಲ್ಲಿ ಸೊರಗಿದ ರಂಗಭೂಮಿ; ಆಪ್ತತೆಯ ಸಂವಾದ ಮರುಕಳಿಸಲಿ

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೋಲಿಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ.

- Advertisement -
- Advertisement -

ರಂಗಭೂಮಿ ಮಾಧ್ಯಮದ ದೊಡ್ಡ ಶಕ್ತಿಯಿರುವುದು ಅದು ಜನರನ್ನು ನೇರಾನೇರ, ಜೀವಂತವಾಗಿ ಎದುರುಗೊಳ್ಳುವ ಬಗೆಯಲ್ಲಿ. ಇಂತಹ ಜೀವಂತ ಒಡನಾಟದಲ್ಲಿ ಉಂಟಾಗಬಹುದಾದ ಹಲವು ಬಗೆಯ ಕೊಳು-ಕೊಡುಗೆಗಳು, ಕಟ್ಟಿಕೊಳ್ಳುವ ದೇಶ-ಕಾಲಗಳನ್ನು ರೂಪಾಂತರಗೊಳಿಸುವ ಆಟಗಳು, ಬೇರೆ ಯಾವ ಕಲಾ ಮಾಧ್ಯಮಕ್ಕಿಂತಲೂ ರಂಗಭೂಮಿ ಮಾಧ್ಯಮಕ್ಕೆ ಅನಿವಾರ್ಯ. ಅದನ್ನು ಬಿಟ್ಟು ಆನ್ಲೈನ್ ಥಿಯೇಟರ್, ಡಿಜಿಟಲ್ ಥಿಯೇಟರ್ ರೀತಿಯ ಏನೇ ಕಸರತ್ತು ಮಾಡಿದರೂ ಅದು ’ರಂಗಭೂಮಿ’ ಅನಿಸಿಕೊಳ್ಳಲು ಸಾಧ್ಯವಿಲ್ಲ. ಇಂತಹವುಗಳು ನಾವು ಈ ಕ್ಷಣ ಸುಮ್ಮನಿರಲಾದ ಜಿದ್ದಿಗೆ ರೂಪಿಸಿಕೊಂಡ ಕಳಪೆ ಮಾದರಿಗಳು. ನಾನಿಲ್ಲಿ ರಂಗಭೂಮಿ ಮಾಧ್ಯಮದ ಶುದ್ಧತೆಯ ಬಗೆಗೆ ಮಾತಾಡುತ್ತಿಲ್ಲ. (ರಂಗಭೂಮಿ ಯಾವತ್ತಿಗೂ ಶುದ್ಧತೆಯ ವಿರೋಧಿ). ಬದಲಿಗೆ ಬೇರೆ ಯಾವುದೇ ಕಲಾ ಮಾಧ್ಯಮಕ್ಕೂ ಸಾಧ್ಯವಿಲ್ಲದ ರಂಗಭೂಮಿ ಮಾಧ್ಯಮದ ನಿಜ ’ಎಸ್ಸೆನ್ಸ್’ ಕುರಿತು ಮಾತಾಡುತ್ತಿದ್ದೇನೆ.

ಮೊದಲಿನಿಂದಲೂ ರಂಗಭೂಮಿಯ ಈ ಎಸ್ಸೆನ್ಸ್‌ನ ಹುಡುಕಾಟದ ಕುರಿತು ಹಲವು ಪ್ರಯೋಗಗಳು, ಚರ್ಚೆಗಳು, ತಕರಾರುಗಳು ಇದ್ದೇ ಇವೆ. ಡಿಜಿಟಲ್ ಇಡಿಚಿದ ಆರಂಭದ ಕಾಲದಿಂದಲೂ ರಂಗಭೂಮಿ, ತಂತ್ರಜ್ಞಾನವನ್ನು ತನ್ನ ಇರುವಿಕೆಯ ಭಾಗವಾಗಿಸಿಕೊಂಡು ಬೆಳೆಯಲು ಪ್ರಯತ್ನಿಸಿದೆ. ಆದರೆ ಹೆಚ್ಚಿನ ಬಾರಿ ಈ ಪ್ರಯತ್ನಗಳಲ್ಲಿ ಸೋತಿದೆ. ಕೆಲವು ಬಾರಿ ಗಿಮಿಕ್ ಎನ್ನಿಸುವಂತಹ ರೀತಿಯಲ್ಲಿ ತಂತ್ರಜ್ಞಾನವು ಬಳಕೆಯಾಗಿ ತನ್ನ ಪ್ರಯೋಗದಲ್ಲಿ ಗೆದ್ದಿರುವ ಉದಾಹರಣೆಗಳೂ ಇವೆ. ಇಂತಹ ಪ್ರಯೋಗಗಳು ’ನಟ ಮತ್ತು ಪ್ರೇಕ್ಷಕ’ ಜೀವಂತವಾಗಿ ಎದುರುಗೊಳ್ಳುವ ಪ್ರಕ್ರಿಯೆಯನ್ನು ಮತ್ತು ಅವರು ಕೂಡಿ ಕಟ್ಟುವ ಆಟವನ್ನು re-create ಮಾಡಲು ತಿಣುಕಾಡಿ ಹೋಗಿವೆ. ಸಾಮಾನ್ಯವಾಗಿ ರಂಗಭೂಮಿಯಲ್ಲಿ ನಟ ಮತ್ತು ಪ್ರೇಕ್ಷಕರು ಒಬ್ಬರನ್ನೊಬ್ಬರು ಎದುರುಗೊಂಡು ಹಲವು ಬಗೆಯ ರೂಪಾಂತರಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳುತ್ತಾರೆ ಮತ್ತು ಈ ರೂಪಾಂತರವು ಆ ಕ್ಷಣದ ಜೀವಂತ ಒಡನಾಟವನ್ನು ಅವಲಂಬಿಸಿರುತ್ತದೆ. ಬೇರೆಲ್ಲ ಕಲಾಮಾಧ್ಯಮಗಳಿಗೆ ಹೋಲಿಸಿದರೆ ಇಲ್ಲಿ ಪ್ರೇಕ್ಷಕನ ಕ್ರಿಯಾಶೀಲ ಕೊಡುಗೆಯ ಅಗತ್ಯತೆ ಹೆಚ್ಚು. ರಂಗಭೂಮಿ ಬೇರೆ ಕಲಾಮಾಧ್ಯಮಗಳಿಗಿಂತಲೂ ಹೆಚ್ಚಾಗಿ ತನ್ನ ನೋಡುಗನನ್ನು ಸಹ ಸೃಷ್ಟಿಕಾರ ಎಂದು ನಂಬುತ್ತದೆ, ಮತ್ತದು ಸತ್ಯವೂ ಕೂಡ. ನಾಟಕದಲ್ಲಿನ ಪ್ರತಿಯೊಬ್ಬ ನಟನು ಏಕಕಾಲಕ್ಕೆ ತನ್ನ ಕಲ್ಪನಾ ಜಗತ್ತು ಮತ್ತು ಪ್ರೇಕ್ಷಕನ ಕಲ್ಪನಾ ಜಗತ್ತನ್ನು ನಂಬಿ ತನ್ನ ಸೃಜನಶೀಲ ಅಭಿವ್ಯಕ್ತಿಯನ್ನು ಸೃಜಿಸಬೇಕಾಗುತ್ತದೆ, ಕಾಣಿಸಬೇಕಾಗುತ್ತದೆ. ಈ ಕಾರಣದಿಂದಲೇ ರಂಗಭೂಮಿಯ ಮೂಲ ಅಗತ್ಯ ನಟ ಮತ್ತು ಪ್ರೇಕ್ಷಕನ ಜೀವಂತ ಒಡನಾಟದ ಹೊರತಾಗಿ ಬೇರಾವುದು ಅಲ್ಲ. ಮೂಲ ಅಗತ್ಯ ಇಷ್ಟು ಸರಳವಾದ್ದು ಮತ್ತು ಚೆಲುವಾದ್ದು. ಆದ್ದರಿಂದಲೇ ರಂಗಭೂಮಿಯು ಹರಡಿಕೊಂಡಿರುವ ವ್ಯಾಪ್ತಿ ಹೆಚ್ಚು.

ದುರಂತವೊಂದು ಅನಿರೀಕ್ಷಿತವಾಗಿ ಒದಗಿಬಂದಾಗ ಅದಕ್ಕೆ ಪ್ರತಿಕ್ರಿಯಿಸುವ ರೀತಿ ಗೊತ್ತಿಲ್ಲದೇ ಯಾವುದೇ ಜೀವಿಯಾದರೂ ಭಯ ಮತ್ತು ಆತುರದಲ್ಲಿ ಪ್ರತಿಕ್ರಿಯಿಸುವುದು ಸಹಜವಾದ್ದೇ. ಬರ, ಭೂಕಂಪ, ಸುನಾಮಿ, ಪ್ರವಾಹಗಳು ಆದಾಗ ಹೇಗೆ ಪ್ರತಿಕ್ರಿಯಿಸಬೇಕು ಹೇಗೆ ಜೀವ ಉಳಿಸಿಕೊಳ್ಳಬೇಕೆಂದು ಜನಗಳಿಗೆ ತಿಳಿದಿರುವುದಿಲ್ಲ. ಅಳಿವುಉಳಿವಿನ ಸ್ಥಿತಿ ಉಂಟಾದಾಗ ಆತುರದ ಮತ್ತು ಚಡಪಡಿಕೆ ಪ್ರತಿಕ್ರಿಯೆಗಳೆ ಹೆಚ್ಚು. ಆಗ ಇಡೀ ಸಮೂಹ ಒಂದು ರೀತಿಯ social anxiety ಗೆ ಒಳಗಾಗುತ್ತದೆ.

ರಂಗಭೂಮಿ ಸಮುದಾಯದ್ದು ಇದೇ ಬಗೆಯ ವರ್ತನೆ. ತನ್ನನ್ನು ಹೇಗಾದರೂ ಉಳಿಸಿಕೊಳ್ಳುವ ಮತ್ತು ಸುಮ್ಮನೆ ಇರಲಾರದ ಚಡಪಡಿಕೆ. ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ರಂಗಭೂಮಿಯ ಹೆಸರಿನಲ್ಲಿ ರಾಶಿ ರಾಶಿ ಡಿಜಿಟಲ್ ಮೆಟೀರಿಯಲ್ ಇಂತಹ ಸಮಯದಲ್ಲಿ, ಈ ಬಿಕ್ಕಟ್ಟಿನಲ್ಲಿ ಸೃಷ್ಟಿಯಾಯಿತು. ಇದು ರಂಗಭೂಮಿ ತನ್ನ ಮೂಲ ಎಸೆನ್ಸ್ ಇಂದ ದೂರ ನಡೆದು ತನ್ನನ್ನು ತಾನು ದುರ್ಬಲಗೊಳಿಸಿಕೊಂಡ ನಡೆ ಮತ್ತು ಜಗತ್ತಿನಾದ್ಯಂತ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ತನ್ನ ರಕ್ಷಕನ ರೀತಿಯಲ್ಲಿ ಕಂಡು ಅವುಗಳೇ ತಮ್ಮ ಉಳಿವಿನ ದಾರಿ ಎಂಬಂತೆ ವರ್ತಿಸಿದ್ದು ಈ ಸಾಮಾಜಿಕ ಆತಂಕದ ಭಾಗವಾಗಿಯೇ.

ಈಗ ಕೊರೊನಾ ನಿಯಮಗಳು ಸಾಕಷ್ಟು ಸಡಿಲಗೊಂಡಿದ್ದರೂ, ಪ್ರೇಕ್ಷಕರ ಜೀವಂತ ಒಡನಾಟದಲ್ಲಿ ನಾಟಕಗಳನ್ನು ಮಾಡಲು ಸಾಧ್ಯವಿದ್ದರು ಅದರ ಕಡೆ ಗಮನ ಕೊಡದೇ ಆನ್ಲೈನ್ ಪ್ಲಾಟ್‌ಫಾರ್ಮ್, zoom ಥಿಯೇಟರ್ ತರದ ವೇದಿಕೆಗಳಲ್ಲಿ ಮುಂದುವರಿದಿರುವುದು ರಂಗಭೂಮಿಯಂತಹ ಮಾಧ್ಯಮಕ್ಕೆ ಮಾಡಬಹುದಾದ ದೊಡ್ಡ ಡ್ಯಾಮೇಜ್. ಮೊದಲೆ ಹೇಳಿದಂತೆ ರಂಗಭೂಮಿ ಮೂಲಭೂತ ಅಗತ್ಯತೇ ಬಹಳ ಸರಳ: ನಟ ಮತ್ತು ಪ್ರೇಕ್ಷಕ. ಆದ್ದರಿಂದರೇ ಅದರ ವ್ಯಾಪ್ತಿ ಹೆಚ್ಚು.

ನಾಟಕವೊಂದು ನಡೆಯಲು ಇಂತಹದ್ದೊಂದು ಜಾಗವೇ ಆಗಬೇಕೆಂದೇನಿಲ್ಲ. ಮನೆ, ಶಾಲೆ, ಬೀದಿ, ಹಳ್ಳಿಯ ಮೈದಾನ, ರಂಗಮಂದಿರಗಳು ಎಲ್ಲಿಯಾದರೂ ಸರಿ. ಪ್ರೇಕ್ಷಕ-ನಟನಿದ್ದರೆ ನಿಂತ ನೆಲವೇ ರಂಗಭೂಮಿಯಾಗುತ್ತದೆ. ಆದ್ದರಿಂದಲೇ ಮೂಲದಲ್ಲಿ ಇದೊಂದು ಸರಳ ಕಲೆ. ಎಲ್ಲರ ಕೈಗೂ ಸಿಗಬಹುದಾದ ಎಲ್ಲರನ್ನೂ ಒಳಗೊಳ್ಳಬಯಸುವ ಸಮುದಾಯದ ಕಲೆ. ಎಲ್ಲಿಯಾದರೂ ಯಾವ ಗಳಿಗೆಯಲ್ಲಾದರೂ ರಂಗಭೂಮಿಯ ಮ್ಯಾಜಿಕ್ ಘಟಿಸಬಹುದು. ಆದರೆ social anxietyಯ ಭಾಗವಾಗಿ ಹುಟ್ಟಿಕೊಂಡ ಡಿಜಿಟಲ್ ವೇದಿಕೆಗಳು ಇಂತಹ ದೈತ್ಯ ಸಾಧ್ಯತೆಯನ್ನು ಕಸಿದುಕೊಳ್ಳುವ ಅಪಾಯವಿದೆ.

ನಾವುಗಳು ಈಗ ಆನ್ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಾಟಕದ ಷೋಗಳನ್ನು ನಡೆಸಿದ ಮತ್ತು ನಡೆಸುತ್ತಿರುವ ಸಂಸ್ಥೆಗಳನ್ನು ಗಮನಿಸಿದರೆ ಅವೆಲ್ಲವೂ ಸರ್ಕಾರಿ ಅಥವಾ ಕಾರ್ಪೊರೆಟ್ ಅನುದಾನ ಪಡೆದ elite ಹಿನ್ನೆಲೆಯ, ರಂಗಭೂಮಿಯ inclusive ಗುಣವನ್ನು ಗಣನೆಗೆ ತೆಗೆದುಕೊಳ್ಳದ ಸಂಸ್ಥೆಗಳು. ಇಂತಹ ಸಂಸ್ಥೆಗಳು ಮತ್ತು ಅವುಗಳು ಮಾಡುವ ಎಲೀಟ್ ರಂಗಭೂಮಿ ಯಾವುದೇ ಅಡಚಣೆಯಿಲ್ಲದೆ ಮುಂದುವರಿಯುತ್ತದೆ. ಆದರೆ ದೊಡ್ಡ ಹೊಡೆತ ಬಿದ್ದಿರುವುದು ಸಾವಿರಾರು ಅಸಂಘಟಿತ ಕಲಾವಿದರುಗಳು ತಮ್ಮ ತಮ್ಮ ಊರು-ಕೇರಿಗಳಲ್ಲಿ ಹತ್ತಾರು ಜನಗಳು ಕೂಡಿ ಕಟ್ಟಿಕೊಂಡು ಆಡುತ್ತಿದ್ದ ಸಮುದಾಯ ರಂಗಭೂಮಿಗೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ರಂಗಭೂಮಿ ಹಿಂದಿನಿಂದಲೂ ಪ್ರಭುತ್ವವನ್ನು ಪ್ರಶ್ನಿಸುವ, ಎಚ್ಚರಿಸುವ, ತಪ್ಪುಗಳನ್ನು ವಿರೋಧಿಸುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಸಿನಿಮಾ ತರದ ಮಾಧ್ಯಮಗಳಿಗೆ ಹೊಲೀಸಿದರೆ ಸೆನ್ಸಾರ್‌ನ ಹೇರಿಕೆ ರಂಗಭೂಮಿಗೆ ಕಡಿಮೆ. ತನಗೆ ಅನಿಸಿದ್ದನ್ನು ಹೇಳುವ, ಚರ್ಚಿಸುವ, ತೋರಿಸುವ ಅವಕಾಶವನ್ನು, ಧೈರ್ಯವನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಅದಕ್ಕಾಗಿ ಕೆಲವು ಬಾರಿ ಬಲಿಗಳನ್ನು ಕೊಡಬೇಕಾಗಿ ಬಂದಿದೆ. (ಕೆಲವು ಸಮಯದಲ್ಲಿ ಕೆಲವು ನಾಟಕಗಳ ಮೇಲೆ ’ಸಂಸ್ಕೃತಿ’ ಉಳಿಸುವವರ ಪ್ರಾಯೋಜಿತ ದಾಳಿಗಳು ನಡೆದಿವೆ).

ಈಗ ಹೆಚ್ಚು ಹೆಚ್ಚು ಆನ್ಲೈನ್ ವೇದಿಕೆಗಳಲ್ಲಿ ರಂಗಭೂಮಿ ಚಟುವಟಿಕೆಗಳನ್ನು ನಡೆಸುವುದು ಅಲ್ಲಿ ತೋರಿಸಬಹುದಾದ, ಹೇಳಬಹುದಾದ ವಸ್ತು ವಿಷಯಗಳ ಮೇಲೆ ಅಘೋಷಿತ ಸೆನ್ಸಾರ್ ಹೇರಿಕೊಂಡಂತೆಯೇ. ಬಿಗ್‌ಬಾಸ್‌ಗಳಿಗೆ ಇವೆಲ್ಲವನ್ನು ತಮ್ಮ ಕಣ್ಗಾವಲಿನಲ್ಲಿ ಇರಿಸಿಕೊಂಡು ವಾಚ್ ಮಾಡುವುದು ಮತ್ತು ಮಾನಿಟರ್ ಮಾಡುವುದು ಸುಲಭ. ಪ್ರಭುತ್ವ ಜನಗಳ imaginationಅನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಲು ಯಾವಾಗಲೂ ಜಾಲ ಹೂಡುತ್ತದೆ. ಎಲ್ಲವು ಡಿಜಿಟಲ್ ವೇದಿಕೆಗಳಲ್ಲಿ ಸಿಕ್ಕಕೂಡಲೇ ಅದನ್ನು ಸಾಧಿಸಿಕೊಳ್ಳುವುದು ಬಹಳ ಸುಲಭ. ರಂಗಭೂಮಿಯದು ಇದರ ವಿರುದ್ಧ ದಿಕ್ಕು. ತನ್ನ ಪ್ರೇಕ್ಷಕರ imaginationಅನ್ನು ವಿಸ್ತರಿಸುವ ಮತ್ತು ಆ ಮೂಲಕ ಅವರ ಯೋಚನೆ ಮತ್ತು ಅರಿವನ್ನು ವಿಸ್ತರಿಸುವುದು ರಂಗಭೂಮಿಯ ಮೂಲತತ್ವ. ಡಿಜಿಟಲ್ ಥಿಯೇಟರ್ ಪ್ರೇಕ್ಷಕರ imaginationಅನ್ನು ಮಿತಿಗೊಳಿಸುತ್ತದೆ.

ಹೆಚ್ಚಿನ ಜನರುಗಳನ್ನು ರೀಚ್ ಅಗುತ್ತದೆ ಅನ್ನುವ ಏಕೈಕ ಕಾರಣಕ್ಕೆ ಡಿಜಿಟಲ್ ಥಿಯೇಟರ್ ಪ್ಲಾಟ್‌ಫಾರ್ಮ್‌ಳನ್ನು ಈ ಕಾಲದ ಹೊಸ ಅನ್ವೇಷಣೆ ಅನ್ನುವ ರೀತಿಯಲ್ಲು ನೋಡಲಾಗುತ್ತಿದೆ. ಆದರೆ ರಂಗಭೂಮಿ ತನ್ನ ಮೂಲ ಸತುವನ್ನು ಕಳೆದುಕೊಂಡು ರೀಚ್ ಆಗುವ ಸಂಖ್ಯೆಯಲ್ಲಿ ತನ್ನ ಬೆಳವಣಿಗೆಯನ್ನು ಕಾಣುವುದಾದರೆ ಅದರಷ್ಟು ಮರುಭೂಮಿತನ ಮತ್ತೊಂದು ಇರಲಾರದು. ಇಡೀ ರಂಗಭೂಮಿ ಸಮುದಾಯ ಈಗಲಾದರೂ ವ್ಯವಧಾನದಿಂದ ಯೋಚಿಸಿ ಡಿಜಿಟಲ್ ವೇದಿಕೆಗಳಿಂದ ಬದಿಗೆ ಸರಿದು ಕಡಿಮೆ ಸಂಖ್ಯೆಯ ಪ್ರೇಕ್ಷಕರಾದರು ಅವರ ನೇರ ಭಾಗವಹಿಸುವಿಕೆಯಲ್ಲಿ ನಾಟಕಗಳನ್ನು ಆಡದೇ ಹೋದರೆ ಉಳ್ಳವರ ಹೊರತಾಗಿ ಇರುವ ಬೇರೊಂದು ದೊಡ್ಡ ಸಮೂಹವನ್ನು ಮುಟ್ಟುವುದರಿಂದ ವಂಚಿತರಾಗುತ್ತೇವೆ. ಇದು ಹೀಗೆ ಮುಂದುವರಿದರೆ ರಂಗಭೂಮಿ ಸಮುದಾಯದ ಕಲೆ ಅನ್ನುವುದಕ್ಕೆ ಅರ್ಥವೇ ಇರುವುದಿಲ್ಲ.

ಜಗತ್ತ್ತಿನಾದ್ಯಂತ ಕೊರೊನಾ ಕಾರಣದಿಂದಾಗಿ ಎಲ್ಲ ಕ್ಷೇತ್ರಗಳೂ ತಾವು ಕೆಲಸ ಮಾಡುವ ರೀತಿಯಲ್ಲಿ ಹಲವು ಮಾರ್ಪಾಡುಗಳನ್ನು ಮಾಡಿಕೊಂಡಿವೆ ಮತ್ತು ಮಾಡಿಕೊಳ್ಳುತ್ತಿವೆ. ಅಂತಾರಾಷ್ಟ್ರೀಯ ಮಟ್ಟದ ಕಡೆಗೆ ಮುಖ ಮಾಡಲು ಹವಣಿಸುತ್ತಿದ್ದ ಎಲ್ಲ ಕ್ಷೇತ್ರಗಳ ದೃಷ್ಟಿ ಈಗ ಸ್ಥಳೀಯತೆ ಕಡೆಗೆ ಹೊರಳಿವೆ. ಈ ಬಗೆಯ ನೋಟವು ರಂಗಭೂಮಿಗೂ ಹೊಸ ಚಲನೆಯನ್ನು ನೀಡುವ ನೋಟವಾಗಬಹುದೇನೋ! ಸದಾ ಜಿಲ್ಲಾ ಮತ್ತು ನಗರ ಕೇಂದ್ರಿತವಾದ ಕನ್ನಡ ರಂಗಭೂಮಿ ವಲಯ ಈ ಕಾಲವನ್ನು ಒಂದು ಅವಕಾಶದಂತೆ ಬಳಸಿಕೊಂಡು ಹಳ್ಳಿ ಹಳ್ಳಗಳ ರೀತಿ ರಂಗಭೂಮಿ ಹರಿಯುವಂತೆ ರೂಪಿಸಲು ಸಾಧ್ಯವಾದರೆ ಅದು ಸಣ್ಣ ಮತ್ತು ಆಪ್ತವಾದ ರಂಗಪ್ರಯೋಗಗಳಿಗೆ ದಾರಿ ಮಾಡಿಕೊಡುತ್ತದೆ.

ಇಡಿಯ ಮನುಷ್ಯಕುಲಕ್ಕೆ ಆಪ್ತತೆಯ ಸಂವಾದಗಳು ಎಷ್ಟು ಮುಖ್ಯ ಎನ್ನುವುದನ್ನು ಕೊರೊನಾ ಕಾಲವು ಅಂಕಿ ಅಂಶಗಳ ಮೂಲಕ ನಮಗೆ ಸ್ಪಷ್ಟಪಡಿಸಿದೆ. ರಂಗಭೂಮಿ ಮಾಧ್ಯಮವು ಇದನ್ನು ಗಮನದಲ್ಲಿಟ್ಟುಕೊಂಡು ಮೆಗಾ ಪ್ರಾಜೆಕ್ಟ್‌ಗಳ ಖೆಡ್ಡಾಕ್ಕೆ ಬೀಳದೆ ಸ್ಥಳೀಯ, ಸಣ್ಣ, ಆಪ್ತ ಪ್ರಯೋಗಗಳನ್ನು ಕಟ್ಟಲು ಸಾಧ್ಯವಾದರೆ ಅದು ಈ ಕಾಲದ ಹಲವು ಒಳ ಹೊರಗಿನ ಕಾಯಿಲೆಗಳಿಗೆ ಗುಣಮುಖತೆಯ ದಾರಿ ತೋರಿಸಬಹುದು ಅನಿಸುತ್ತದೆ.

ಈ ರೀತಿಯ ಪ್ರಯೋಗಗಳು ನ್ಯೂಜಿಲ್ಯಾಂಡ್‌ನಂತಹ ದೇಶಗಳಲ್ಲಿ ಆರಂಭವಾಗಿವೆ. ಇದು ರಂಗಭೂಮಿ ಸಮುದಾಯ, ಪ್ರಜ್ಞಾವಂತ ಪ್ರೇಕ್ಷಕ ಸಮುದಾಯ ಮತ್ತು ಸಂವೇದನೆ ಇರಬಹುದಾದ ಸರಕಾರಗಳು ಒಟ್ಟೊಟ್ಟಿಗೆ ಸೇರಿ ಮಾಡಬೇಕಾದ ಕೆಲಸ. ಕೊರೊನಾದಿಂದಾಗಿ ಕಲಾವಿದರ ಬದುಕಿನಲ್ಲಿ ಉಂಟಾಗಿರುವ ಅನಿಶ್ಚಿತತೆಗೆ ಈ ಕ್ಷಣಕ್ಕೆ ಪರಿಹಾರವಂತೂ ಇಲ್ಲ. ಆದರೆ ಈಗ ನಾವು ಇಡಲಿರುವ ಹೊಸ ಬಗೆಯ ಹೆಜ್ಜೆಗಳು ನಮ್ಮೆಲ್ಲರ ಸಾಂಸ್ಕೃತಿಕ ಬದುಕನ್ನು ಮತ್ತು ಕಲಾವಿದರ ಬದುಕನ್ನು ಸಹ್ಯವಾಗಿಸುವಂತೆ ನೋಡಿಕೊಳ್ಳಬೇಕು ಇಲ್ಲದೆ ಹೋದರೆ ಮತ್ತದೇ ಹಳೆಯ ತಪ್ಪುಗಳನ್ನು ಹೊಸತಾಗಿ ಮಾಡಿದಂತಾಗುತ್ತದೆ ಅಷ್ಟೆ.

ಲಕ್ಷ್ಮಣ ಕೆ.ಪಿ

ಲಕ್ಷ್ಮಣ ಕೆ.ಪಿ
ರಂಗಕರ್ಮಿ, ನಟ. ಭಾರತ, ಸಿಂಗಾಪುರ್ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ನಾಟಕ ಪ್ರದರ್ಶನ ನೀಡಿರುವ ಇವರು, ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ ಕೃತಿ ಆಧರಿತ ನಾಟಕದಲ್ಲೂ ಅಭಿನಯಿಸಿದ್ದಾರೆ.


ಇದನ್ನೂ ಓದಿ: ದೆಹಲಿ ಪೂರ್ವಭಾಗದಲ್ಲಿ ಭುಗಿಲೆದ್ದ ಮತ್ತೊಂದು ’ರೈತ ಪ್ರತಿಭಟನೆ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...