Homeಅಂಕಣಗಳುಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

- Advertisement -
- Advertisement -

ಯಾವುದೇ ಪಕ್ಷವಾದರೂ ಹೊಂದಿಕೊಂಡು ಆ ಪಕ್ಷದ ವಕ್ತಾರನಂತೆ ಮಾತನಾಡುತ್ತ ಪಾರ್ಟಿಯ ಮಾನ ಮರ್ಯಾದೆ ಕಾಪಾಡುವಂತಹ ಶಿವರಾಮೇಗೌಡರನ್ನ ಮಾತನಾಡಿಸಿ, ಅವರು ಜೆಡಿಎಸ್‌ನಿಂದ ವಜಾಗೊಂಡಿರುವ ಸಮಯದಲ್ಲಿ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಲ್ಲವೆ ಎಂದು ಯೋಚಿಸಿ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ “ಯಾರು ಏನು ಮಾಡುವರು, ನನಗೇನೂ ಕೇಡು ಮಾಡುವರು, ಯಾರು…”

“ಹಲೋ ಯಾರು”

“ನಾನು ಸಾರ್ ನಿಮ್ಮ ಹಿತೈಷಿ ಯಾಹೂ.”

“ಹಿತೈಷಿ ಅನ್ನೊರಿಂದ್ಲೆ ಹಿಂಗಾದದ್ದು ಕಂಡ್ರಿ.”

“ನಾವಂಥೋರಲ್ಲ ಸಾ. ನೀವು ಮಾತಾಡಿದ್ದ ನಿಮ್ಮ ಬುಡಕೆ ತರೋದಿಲ್ಲ ಸಾ.”

“ಆಕೆ ಹೆಣ್ಣುಮಗಳು ವಳ್ಯೊಳು ಅಂತ ಮಾತಾಡಿದ್ನಪ್ಪ, ಹಿಂಗೆ ಮಾಡ್ತಳೆ ಅಂತ ಯಾರಿಗೊತ್ತು.”

“ಆಗೊದ್ಯಲ್ಲ ವಳ್ಳೆದ್ಕೆ ಅಂತ ಭಗವದ್ಗೀತೆ ಹೇಳ್ಯದೆ ಸಾ.”

“ಏನೊಳ್ಳೆದಾಯ್ತದೆ.”

“ಡಿ.ಕೆ ಶಿವಕುಮಾರ್ ಮತ್ತೆ ನೀವು ಆತ್ಮೀಯ ಗೆಳೆಯರಲ್ಲವ ಸಾ.”

“ಅದೇನೊ ನಿಜ.”

“ಮತ್ತೆ ಅವುರು ಮುಂದೆ ಪವರಿಗೆ ಬತ್ತಾಯಿರುವಾಗ ನೀವು ಜೆಡಿಎಸ್ಸಿನಲ್ಲಿರದು ಸರೀನಾ ಸಾರ್.”

“ನೀವೇಳಿದ್ದು ಸರಿನೆ, ಅದ್ರೆ ಕುಮಾರಣ್ಣ ನನ್ನ ಬುಟ್ಟು ಯಾರು ಸರಕಾರ ಮಾಡ್ತರೆ ನೋಡ್ತಿನಿ ಅಂದವುನಲಾ.”

“ಅಷ್ಟ್‌ವೊತ್ತಿಗೆ ಏನಾಗ್ತದೊ ಏನೋ, ಯಾರು ಕಂಡವುರೆ, ನೀವು ಡಿ.ಕೆಶಿಗೆ ತುಂಬ ಬೇಕಾದೊರಾದಾಗ ನಿಮ್ಮನ್ನ ನೆಗ್ಲೆಟ್ ಮಾಡಕ್ಕೆ ಬರಲ.”

“ನನ್ನನ್ನ ಯಾರೂ ನೆಗ್ಲೆಟ್ ಮಾಡಕ್ಕಾಗಲ್ಲ ಕಂಡ್ರಿ.”

“ಆಗಲ್ಲ ಸಾರ್, ಪವರಿಗೆ ಬಂದವುರ ಮನೆ ಬಾಗ್ಲಲ್ಲಿ ದಿನ ಹೋಗಿ ನಿಂತಗತ್ತಿರಿ, ಒಂದಿನ ವಳಿಗೆ ಕರದೇ ಕರಿತರೆ.”

“ಏನೇಳ್ತಯಿದ್ದಿರಿ ನೀವು.”

“ಆಗ ದೇವೆಗೌಡ್ರಿಗೆ ಅಂಗೆ ಮಾಡಿದ್ರಲ್ಲ ಸಾರ್, ಅವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪಾಜಿ, ಅಪ್ಪಾಜಿ ಅಂತ ಮನೆತಕ್ಕೊಗಿ ಕೂಗುತಿದ್ರಿ ಪಾಪ. ಅವುರ ಮಕ್ಕಾಳ್ಯಾರು ಅಂಗೆ ಕರಿತಿರಲಿಲ್ಲ. ಯಲ್ಲ ಯಪ್ಪ ಯಪ್ಪ ಅಂತಿದ್ದೊ ನೀವು ಅಪ್ಪಾಜಿ ಅಂತ ಕಾಲಿಗೆ ಬಿದ್ದಿದ್ದು ವರ್ಕೌಟಾಯ್ತು, ಹೌಸಿಂಗ್ ಬೋರ್ಡ್ ಛೇರ್ಮನ್ ಮಾಡಿದ್ರು.”

“ಅದ್ಯಲ್ಲ ಹಳೆ ಕತೆ, ಈಗಂಗಿಲ್ಲ ಅವುರು.”

“ನೀವಂಗೆ ಇದ್ದಿರಲ್ಲ ಸಾ, ನೀವು ಬದ್ಲಾಗಿದ್ರೆ ಹಿಂಗ್ಯಾಕಾಗದು.”

“ಅಲ್ಲ ಕಂಡ್ರಿ, ಸತ್ಯ ಮಾತಾಡದು ತಪ್ಪ.”

“ಏನು ಸತ್ಯ ಮಾತಾಡಿದ್ರಿ.”

“ಆ ಮಾದೇಗೌಡ ನನಿಗೆ ಎರಡು ಸತಿ ಟಿಕೆಟ್ ತಪ್ಪಿಸಿದ. ನಾನು ನಮ್ಮೂರಲ್ಲಿ ಒಬ್ಬನ ಮನೆ ಮ್ಯಾಲೆ ದಾಳಿ ಮಾಡಿಸಿದೆ. ಅದ ನೋಡಕ್ಕೆ ಬಂದ ಮಾದೇಗೌಡನಿಗೆ ನನ್ನ ಕಂಡ್ರಾಯ್ತಿರಲಿಲ್ಲ. ಸೋಲಂಗೆ ಮಾಡಿದ. ಆಗ ನಾನು ಗೆದ್ದಿದ್ರೆ ಯಸ್ಸೆಂ ಕೃಷ್ಣನ ಸಂಪುಟದಲ್ಲಿ ಡಿ.ಕೆ ಶಿವಕುಮಾರ್ ಜೊತೆ ನಾನು ಮಂತ್ರಿಯಾಯ್ತಿದ್ದೆ. ಡ್ರಸ್‌ನೂ ಕೂಡ ವಲಿಸಿದ್ದೆ ಕಂಡ್ರಿ, ವಟ್ಟುರಿಯಕ್ಕಿಲ್‌ವೆ ನನಿಗೆ.”

“ಡಿ.ಕೆ ಶಿವಕುಮಾರ್‌ಗೆ ಆಸ್ತಿ ಜಾಸ್ತಿಯಾಗಿ ತೊಂದ್ರೆ ಅನುಭವುಸ್ತಾಯಿದ್ರೆ, ನೀವು ನಾಳಗೆ ತೊಂದಗರಿಗೆ ಸಿಗಾತ್ತಾಯಿದ್ದಿರಿ ಸಾ.”

“ಸತ್ಯ ಮಾತಾಡದ್ರೆ ತಪ್ಪೇನ್ರಿ.”

“ಸತ್ಯ ಮಾತಾಡಿ ಅದರ ಪರಿಣಾಮ ಹೆದ್ರಸಕ್ಕೂ ರೆಡಿಯಾಗಿ.”

“ಈಗ ರೆಡಿಯಾಗಿ ಇದ್ದಿನಲ್ಲ, ನಿಂತ ನೆಲಿಲೆ ಕುಮಾರಸ್ವಾಮಿ ನನ್ನನ್ನ ವಜಾ ಮಾಡಿದ್ರೆ ಹೋಗಿ ಕಾಲಿಗೆ ಬೀಳಕ್ಕಾಯ್ತದಾ.”

“ಆಗಲ್ಲ ಸಾ, ಅವುರ ತಂದೆ ಕಾಲಿಗೇನೂ ಬೀಳಬಹುದು, ಆದ್ರೆ ಕುಮಾರಣ್ಣ ಕಾಲಿಗೆ ನಿಮ್ಮಂತ ಸೀನಿಯರು ಬೀಳಬಾರ್ದು.”

“ಅಲ್ಲ ಕಂಡ್ರಿ ಈ ಅಪ್ಪ ಮಕ್ಕಳು ನನ್ನ ಉಪಕಾರನೆ ಮರತುಬುಡ್ತರಲ್ಲ ಹೇಳಿ.”

“ಉಪಕಾರ ಏನು ಮಾಡಿದ್ರಿ ಸಾ.”

“ಸುಮಲತ ಎಲಕ್ಷನ್ನಿಗೆ ನಿಂತಾಗ ಇದೇ ನಾಗಮಂಗಲದಲ್ಲಿ ಪ್ರಧಾನ ಭಾಷಣಕಾರ ನಾನೆಯ, ಆಗ ಸುಮಲತಕ್ಕನ್ನ ಇವುಳು ಮಾಯಾಂಗನೆ ಜಯಲಲಿತ ಆಗಕ್ಕೆ ಬಂದವುಳೆ ಬುಡಬ್ಯಾಡಿ ಸೋಲಿಸಿ ಅಂದೆ. ಅಗ ದ್ಯಾವೇಗೌಡ್ರು ಮೆಚ್ಚಿ ಶಿವರಾಮೇಗೌಡರು ಮಾತನಾಡಿದ ಮೇಲೆ ನಾನು ಭಾಷಣ ಮಾಡೊ ಅಗತ್ಯ ಇಲ್ಲ ಅಂದ್ರು, ಅವತ್ತು ನಾನು ಕ್ಯಟ್ಟ ಮಾತಾಡಕ್ಕೆ ಪುಸಲಾಯಿಸಿದೋರು. ಇವತ್ತು ಅಂತವೇ ಮಾತಾಡಿದ್ರೆ ಪಾರ್ಟಿಯಿಂದ್ಲೆ ವಜಾ ಮಾಡ್ತಾರೆ ಇದಕೇನೇಳನ.”

“ಅದ್ಕೆ ಸಾರ್ ಯಾರಿಗೂ ಕೆಟ್ಟ ಮಾತಾಡಬಾರ್ದು.”

“ಅದ್ಯಂಗ್ರಿ ಇರಕ್ಕಾಯ್ತದೆ, ಕ್ಯಟ್ಟ ಮನುಸ್ರನ ವಳ್ಳೆ ಮನುಸ್ರು ಅನ್ನಕಾಯ್ತದೆ.”

“ಮಾದೇಗೌಡ್ರು ಕ್ಯಟ್ಟೊರಲ್ಲ, ಮಂಡ್ಯದ ರೈತ ನಾಯಕರು.”

“ಯಾವ ಸೀಮೆ ರೈತನಾಯಕ. ರೈತರಾಗಿದ್ರೆ ವಲ ಉಳತಿದ್ರು, ಮಂಡ್ಯಕ್ಕೆ ಬಂದು ರಾಜಕಾರಣ ಮಾಡತಿರಲಿಲ್ಲ.”

“ರೈತ ನಾಯಕರು ವಲ ಉಳೋ ಅಗತ್ಯಯಿಲ್ಲ, ಕೂಲಿಕೊಟ್ಟು ಉಳುಸಬಹುದು. ಇವತ್ತು ಕಾವೇರಿ ಇಶ್ಯೂ ಹಿಡಕಂಡು ಹೋರಾಡೊ ಅಂಥೋರು ವಬ್ರೂಯಿಲ್ಲ. ಯಾರಿಗೂ ಕೇರ್ ಮಾಡ್ದೆ ನೇರಾ ನೇರಾ ಮಾತಾಡತಿದ್ದ ಮಾದೇಗೌಡ್ರು ಸಮಾಧಿ ವಳಗಿದ್ದ ಕಂಡೇ ನಿಮ್ಮನ್ನ ವಜಾ ಮಾಡುಸ್ತರೆ ಅಂದ್ರೆ, ಅವುರ ಪವರೆಸ್ಟದೆ ಲ್ಯಕ್ಕ ಹಾಕಿ ಸಾ.”

“ಇದ್ಕೆ ನಿಮ್ಮನ್ನ ತಲಿಲ್ದ ಪತ್ರಕರ್ತರು ಅನ್ನದು.”

“ಅಂಗಂತಿರಾ.”

“ಮತ್ತಿನೇನು ಸಾಕ್ಷಿನೆ ಸಿಕ್ತಲ್ಲಾ, ಅಲ್ಲ ಕಂಡ್ರೀ ಜೆಡಿಎಸ್ಸು ಮಂಡ್ಯ ಜಿಲ್ಲೆಲಿ ನ್ಯಲೆ ಕಳಕತ್ತಾ ಅದೆ. ಅಂಥಾ ಟೈಮಲ್ಲಿ ನಾನು ಮಾದೇಗೌಡ್ರು ಬೋದಿದ್ದಿನಿ, ಅದ್ಕೆ ಕುಮಾರಣ್ಣ ಮಾದೇಗೌಡ್ರು ನಮ್ಮವರು, ಅವುರು ಒಕ್ಕಲಿಗರ ಲೀಡ್ರು ಅಂತ ಜಾತಿ ಮಾತಾಡಿ ನನ್ನ ವಜಾ ಮಾಡಿ ಜೆಡಿಎಸ್ ಬ್ಯಳಸಕ್ಕೆ ವಂಟವುರೆ, ಸುಮಲತನ್ನ ಬೈಯಿ ಅಂತ ಹೇಳಿದೋರು, ಮಾದೇಗೌಡ್ರು ಬೋದ್ರೆ ವಜಾ ಮಾಡ್ತರಲ್ಲಾ. ಇದು ರಾಜಕಾರಣ ಅಲವೇನ್ರಿ, ಅದರಲ್ಲೂ ಜಾತಿರಾಜಕಾರಣ ಅಲವೇನ್ರಿ. ಇಂತ ವಿಷಯನೆ ನಿಮಗೆ ತಿಳಿಯದಿಲ್ಲ. ಶಿವರಾಮೇಗೌಡ ಮಾದೇಗೌಡ್ರು ಬೋದ ಅಂತ ಅಲ್ಲೆ ಗಿರಕಿ ವಡಿತಿರಿ.”

“ಮಾದೇಗೌಡ್ರುನ ಏಕವಚನದಲ್ಲಿ ಅಂದು ಬಾಳ ಹಿಂದೆ ಸಾಯಬೇಕಾಗಿತ್ತು ಅಂದಿದ್ದು ತಪ್ಪಲವ ಸಾ.”

“ಅಂದಿದ್ದು ಆಯ್ತು, ಪಾರ್ಟಿಯಿಂದ ತಗದಾಕಿದ್ದು ಆಯ್ತು, ಈಗ್ಯಾಕ್ರಿ ತಪ್ಪಾಯ್ತು ಅನ್ನನಾ.”

“ಥೂತ್ತೇರಿ.”


ಇದನ್ನೂ ಓದಿ: ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...