Homeಅಂಕಣಗಳುಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

ಸತ್ಯ ಹೇಳಿದ್ರೆ ಪಾರ್ಟಿಯಿಂದ್ಲೆ ತಗೀತರಲ್ರಿ?

- Advertisement -
- Advertisement -

ಯಾವುದೇ ಪಕ್ಷವಾದರೂ ಹೊಂದಿಕೊಂಡು ಆ ಪಕ್ಷದ ವಕ್ತಾರನಂತೆ ಮಾತನಾಡುತ್ತ ಪಾರ್ಟಿಯ ಮಾನ ಮರ್ಯಾದೆ ಕಾಪಾಡುವಂತಹ ಶಿವರಾಮೇಗೌಡರನ್ನ ಮಾತನಾಡಿಸಿ, ಅವರು ಜೆಡಿಎಸ್‌ನಿಂದ ವಜಾಗೊಂಡಿರುವ ಸಮಯದಲ್ಲಿ ಸಾಂತ್ವನ ಹೇಳುವುದು ನಮ್ಮ ಕರ್ತವ್ಯವಲ್ಲವೆ ಎಂದು ಯೋಚಿಸಿ ಮಾಡಿದರೆ ರಿಂಗಾಯ್ತು. ರಿಂಗ್ ಟೋನ್ “ಯಾರು ಏನು ಮಾಡುವರು, ನನಗೇನೂ ಕೇಡು ಮಾಡುವರು, ಯಾರು…”

“ಹಲೋ ಯಾರು”

“ನಾನು ಸಾರ್ ನಿಮ್ಮ ಹಿತೈಷಿ ಯಾಹೂ.”

“ಹಿತೈಷಿ ಅನ್ನೊರಿಂದ್ಲೆ ಹಿಂಗಾದದ್ದು ಕಂಡ್ರಿ.”

“ನಾವಂಥೋರಲ್ಲ ಸಾ. ನೀವು ಮಾತಾಡಿದ್ದ ನಿಮ್ಮ ಬುಡಕೆ ತರೋದಿಲ್ಲ ಸಾ.”

“ಆಕೆ ಹೆಣ್ಣುಮಗಳು ವಳ್ಯೊಳು ಅಂತ ಮಾತಾಡಿದ್ನಪ್ಪ, ಹಿಂಗೆ ಮಾಡ್ತಳೆ ಅಂತ ಯಾರಿಗೊತ್ತು.”

“ಆಗೊದ್ಯಲ್ಲ ವಳ್ಳೆದ್ಕೆ ಅಂತ ಭಗವದ್ಗೀತೆ ಹೇಳ್ಯದೆ ಸಾ.”

“ಏನೊಳ್ಳೆದಾಯ್ತದೆ.”

“ಡಿ.ಕೆ ಶಿವಕುಮಾರ್ ಮತ್ತೆ ನೀವು ಆತ್ಮೀಯ ಗೆಳೆಯರಲ್ಲವ ಸಾ.”

“ಅದೇನೊ ನಿಜ.”

“ಮತ್ತೆ ಅವುರು ಮುಂದೆ ಪವರಿಗೆ ಬತ್ತಾಯಿರುವಾಗ ನೀವು ಜೆಡಿಎಸ್ಸಿನಲ್ಲಿರದು ಸರೀನಾ ಸಾರ್.”

“ನೀವೇಳಿದ್ದು ಸರಿನೆ, ಅದ್ರೆ ಕುಮಾರಣ್ಣ ನನ್ನ ಬುಟ್ಟು ಯಾರು ಸರಕಾರ ಮಾಡ್ತರೆ ನೋಡ್ತಿನಿ ಅಂದವುನಲಾ.”

“ಅಷ್ಟ್‌ವೊತ್ತಿಗೆ ಏನಾಗ್ತದೊ ಏನೋ, ಯಾರು ಕಂಡವುರೆ, ನೀವು ಡಿ.ಕೆಶಿಗೆ ತುಂಬ ಬೇಕಾದೊರಾದಾಗ ನಿಮ್ಮನ್ನ ನೆಗ್ಲೆಟ್ ಮಾಡಕ್ಕೆ ಬರಲ.”

“ನನ್ನನ್ನ ಯಾರೂ ನೆಗ್ಲೆಟ್ ಮಾಡಕ್ಕಾಗಲ್ಲ ಕಂಡ್ರಿ.”

“ಆಗಲ್ಲ ಸಾರ್, ಪವರಿಗೆ ಬಂದವುರ ಮನೆ ಬಾಗ್ಲಲ್ಲಿ ದಿನ ಹೋಗಿ ನಿಂತಗತ್ತಿರಿ, ಒಂದಿನ ವಳಿಗೆ ಕರದೇ ಕರಿತರೆ.”

“ಏನೇಳ್ತಯಿದ್ದಿರಿ ನೀವು.”

“ಆಗ ದೇವೆಗೌಡ್ರಿಗೆ ಅಂಗೆ ಮಾಡಿದ್ರಲ್ಲ ಸಾರ್, ಅವರು ಮುಖ್ಯಮಂತ್ರಿಯಾಗಿದ್ದಾಗ ಅಪ್ಪಾಜಿ, ಅಪ್ಪಾಜಿ ಅಂತ ಮನೆತಕ್ಕೊಗಿ ಕೂಗುತಿದ್ರಿ ಪಾಪ. ಅವುರ ಮಕ್ಕಾಳ್ಯಾರು ಅಂಗೆ ಕರಿತಿರಲಿಲ್ಲ. ಯಲ್ಲ ಯಪ್ಪ ಯಪ್ಪ ಅಂತಿದ್ದೊ ನೀವು ಅಪ್ಪಾಜಿ ಅಂತ ಕಾಲಿಗೆ ಬಿದ್ದಿದ್ದು ವರ್ಕೌಟಾಯ್ತು, ಹೌಸಿಂಗ್ ಬೋರ್ಡ್ ಛೇರ್ಮನ್ ಮಾಡಿದ್ರು.”

“ಅದ್ಯಲ್ಲ ಹಳೆ ಕತೆ, ಈಗಂಗಿಲ್ಲ ಅವುರು.”

“ನೀವಂಗೆ ಇದ್ದಿರಲ್ಲ ಸಾ, ನೀವು ಬದ್ಲಾಗಿದ್ರೆ ಹಿಂಗ್ಯಾಕಾಗದು.”

“ಅಲ್ಲ ಕಂಡ್ರಿ, ಸತ್ಯ ಮಾತಾಡದು ತಪ್ಪ.”

“ಏನು ಸತ್ಯ ಮಾತಾಡಿದ್ರಿ.”

“ಆ ಮಾದೇಗೌಡ ನನಿಗೆ ಎರಡು ಸತಿ ಟಿಕೆಟ್ ತಪ್ಪಿಸಿದ. ನಾನು ನಮ್ಮೂರಲ್ಲಿ ಒಬ್ಬನ ಮನೆ ಮ್ಯಾಲೆ ದಾಳಿ ಮಾಡಿಸಿದೆ. ಅದ ನೋಡಕ್ಕೆ ಬಂದ ಮಾದೇಗೌಡನಿಗೆ ನನ್ನ ಕಂಡ್ರಾಯ್ತಿರಲಿಲ್ಲ. ಸೋಲಂಗೆ ಮಾಡಿದ. ಆಗ ನಾನು ಗೆದ್ದಿದ್ರೆ ಯಸ್ಸೆಂ ಕೃಷ್ಣನ ಸಂಪುಟದಲ್ಲಿ ಡಿ.ಕೆ ಶಿವಕುಮಾರ್ ಜೊತೆ ನಾನು ಮಂತ್ರಿಯಾಯ್ತಿದ್ದೆ. ಡ್ರಸ್‌ನೂ ಕೂಡ ವಲಿಸಿದ್ದೆ ಕಂಡ್ರಿ, ವಟ್ಟುರಿಯಕ್ಕಿಲ್‌ವೆ ನನಿಗೆ.”

“ಡಿ.ಕೆ ಶಿವಕುಮಾರ್‌ಗೆ ಆಸ್ತಿ ಜಾಸ್ತಿಯಾಗಿ ತೊಂದ್ರೆ ಅನುಭವುಸ್ತಾಯಿದ್ರೆ, ನೀವು ನಾಳಗೆ ತೊಂದಗರಿಗೆ ಸಿಗಾತ್ತಾಯಿದ್ದಿರಿ ಸಾ.”

“ಸತ್ಯ ಮಾತಾಡದ್ರೆ ತಪ್ಪೇನ್ರಿ.”

“ಸತ್ಯ ಮಾತಾಡಿ ಅದರ ಪರಿಣಾಮ ಹೆದ್ರಸಕ್ಕೂ ರೆಡಿಯಾಗಿ.”

“ಈಗ ರೆಡಿಯಾಗಿ ಇದ್ದಿನಲ್ಲ, ನಿಂತ ನೆಲಿಲೆ ಕುಮಾರಸ್ವಾಮಿ ನನ್ನನ್ನ ವಜಾ ಮಾಡಿದ್ರೆ ಹೋಗಿ ಕಾಲಿಗೆ ಬೀಳಕ್ಕಾಯ್ತದಾ.”

“ಆಗಲ್ಲ ಸಾ, ಅವುರ ತಂದೆ ಕಾಲಿಗೇನೂ ಬೀಳಬಹುದು, ಆದ್ರೆ ಕುಮಾರಣ್ಣ ಕಾಲಿಗೆ ನಿಮ್ಮಂತ ಸೀನಿಯರು ಬೀಳಬಾರ್ದು.”

“ಅಲ್ಲ ಕಂಡ್ರಿ ಈ ಅಪ್ಪ ಮಕ್ಕಳು ನನ್ನ ಉಪಕಾರನೆ ಮರತುಬುಡ್ತರಲ್ಲ ಹೇಳಿ.”

“ಉಪಕಾರ ಏನು ಮಾಡಿದ್ರಿ ಸಾ.”

“ಸುಮಲತ ಎಲಕ್ಷನ್ನಿಗೆ ನಿಂತಾಗ ಇದೇ ನಾಗಮಂಗಲದಲ್ಲಿ ಪ್ರಧಾನ ಭಾಷಣಕಾರ ನಾನೆಯ, ಆಗ ಸುಮಲತಕ್ಕನ್ನ ಇವುಳು ಮಾಯಾಂಗನೆ ಜಯಲಲಿತ ಆಗಕ್ಕೆ ಬಂದವುಳೆ ಬುಡಬ್ಯಾಡಿ ಸೋಲಿಸಿ ಅಂದೆ. ಅಗ ದ್ಯಾವೇಗೌಡ್ರು ಮೆಚ್ಚಿ ಶಿವರಾಮೇಗೌಡರು ಮಾತನಾಡಿದ ಮೇಲೆ ನಾನು ಭಾಷಣ ಮಾಡೊ ಅಗತ್ಯ ಇಲ್ಲ ಅಂದ್ರು, ಅವತ್ತು ನಾನು ಕ್ಯಟ್ಟ ಮಾತಾಡಕ್ಕೆ ಪುಸಲಾಯಿಸಿದೋರು. ಇವತ್ತು ಅಂತವೇ ಮಾತಾಡಿದ್ರೆ ಪಾರ್ಟಿಯಿಂದ್ಲೆ ವಜಾ ಮಾಡ್ತಾರೆ ಇದಕೇನೇಳನ.”

“ಅದ್ಕೆ ಸಾರ್ ಯಾರಿಗೂ ಕೆಟ್ಟ ಮಾತಾಡಬಾರ್ದು.”

“ಅದ್ಯಂಗ್ರಿ ಇರಕ್ಕಾಯ್ತದೆ, ಕ್ಯಟ್ಟ ಮನುಸ್ರನ ವಳ್ಳೆ ಮನುಸ್ರು ಅನ್ನಕಾಯ್ತದೆ.”

“ಮಾದೇಗೌಡ್ರು ಕ್ಯಟ್ಟೊರಲ್ಲ, ಮಂಡ್ಯದ ರೈತ ನಾಯಕರು.”

“ಯಾವ ಸೀಮೆ ರೈತನಾಯಕ. ರೈತರಾಗಿದ್ರೆ ವಲ ಉಳತಿದ್ರು, ಮಂಡ್ಯಕ್ಕೆ ಬಂದು ರಾಜಕಾರಣ ಮಾಡತಿರಲಿಲ್ಲ.”

“ರೈತ ನಾಯಕರು ವಲ ಉಳೋ ಅಗತ್ಯಯಿಲ್ಲ, ಕೂಲಿಕೊಟ್ಟು ಉಳುಸಬಹುದು. ಇವತ್ತು ಕಾವೇರಿ ಇಶ್ಯೂ ಹಿಡಕಂಡು ಹೋರಾಡೊ ಅಂಥೋರು ವಬ್ರೂಯಿಲ್ಲ. ಯಾರಿಗೂ ಕೇರ್ ಮಾಡ್ದೆ ನೇರಾ ನೇರಾ ಮಾತಾಡತಿದ್ದ ಮಾದೇಗೌಡ್ರು ಸಮಾಧಿ ವಳಗಿದ್ದ ಕಂಡೇ ನಿಮ್ಮನ್ನ ವಜಾ ಮಾಡುಸ್ತರೆ ಅಂದ್ರೆ, ಅವುರ ಪವರೆಸ್ಟದೆ ಲ್ಯಕ್ಕ ಹಾಕಿ ಸಾ.”

“ಇದ್ಕೆ ನಿಮ್ಮನ್ನ ತಲಿಲ್ದ ಪತ್ರಕರ್ತರು ಅನ್ನದು.”

“ಅಂಗಂತಿರಾ.”

“ಮತ್ತಿನೇನು ಸಾಕ್ಷಿನೆ ಸಿಕ್ತಲ್ಲಾ, ಅಲ್ಲ ಕಂಡ್ರೀ ಜೆಡಿಎಸ್ಸು ಮಂಡ್ಯ ಜಿಲ್ಲೆಲಿ ನ್ಯಲೆ ಕಳಕತ್ತಾ ಅದೆ. ಅಂಥಾ ಟೈಮಲ್ಲಿ ನಾನು ಮಾದೇಗೌಡ್ರು ಬೋದಿದ್ದಿನಿ, ಅದ್ಕೆ ಕುಮಾರಣ್ಣ ಮಾದೇಗೌಡ್ರು ನಮ್ಮವರು, ಅವುರು ಒಕ್ಕಲಿಗರ ಲೀಡ್ರು ಅಂತ ಜಾತಿ ಮಾತಾಡಿ ನನ್ನ ವಜಾ ಮಾಡಿ ಜೆಡಿಎಸ್ ಬ್ಯಳಸಕ್ಕೆ ವಂಟವುರೆ, ಸುಮಲತನ್ನ ಬೈಯಿ ಅಂತ ಹೇಳಿದೋರು, ಮಾದೇಗೌಡ್ರು ಬೋದ್ರೆ ವಜಾ ಮಾಡ್ತರಲ್ಲಾ. ಇದು ರಾಜಕಾರಣ ಅಲವೇನ್ರಿ, ಅದರಲ್ಲೂ ಜಾತಿರಾಜಕಾರಣ ಅಲವೇನ್ರಿ. ಇಂತ ವಿಷಯನೆ ನಿಮಗೆ ತಿಳಿಯದಿಲ್ಲ. ಶಿವರಾಮೇಗೌಡ ಮಾದೇಗೌಡ್ರು ಬೋದ ಅಂತ ಅಲ್ಲೆ ಗಿರಕಿ ವಡಿತಿರಿ.”

“ಮಾದೇಗೌಡ್ರುನ ಏಕವಚನದಲ್ಲಿ ಅಂದು ಬಾಳ ಹಿಂದೆ ಸಾಯಬೇಕಾಗಿತ್ತು ಅಂದಿದ್ದು ತಪ್ಪಲವ ಸಾ.”

“ಅಂದಿದ್ದು ಆಯ್ತು, ಪಾರ್ಟಿಯಿಂದ ತಗದಾಕಿದ್ದು ಆಯ್ತು, ಈಗ್ಯಾಕ್ರಿ ತಪ್ಪಾಯ್ತು ಅನ್ನನಾ.”

“ಥೂತ್ತೇರಿ.”


ಇದನ್ನೂ ಓದಿ: ಬಂಡಾಯ, ಕಿಲಾಡಿ, ಕಿಡಿಗೇಡಿತನ: ಚಂಪಾರವರೊಂದಿಗೆ ಯಾಹೂ ಮಾತುಕತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...

ಬಾಗಲಕೋಟೆ: ಪತಿಯಿಂದ 23 ವರ್ಷದ ಪತ್ನಿಯ ಕ್ರೂರ ಕೊಲೆ, ಪೋಷಕರಿಗೆ ವೀಡಿಯೊ ಕರೆ ಮಾಡಿ ಮಗಳ ಸಾವು-ಬದುಕಿನ ಹೋರಾಟ ತೋರಿಸಿದ ವಿಕೃತ ಪತಿ

ಬಾಗಲಕೋಟೆ: ಪತಿಯೋರ್ವ ತನ್ನ 23 ವರ್ಷದ ಪತ್ನಿಯ ಮೇಲೆ ವಿವಾಹೇತರ ಅನೈತಿಕ ಸಂಬಂಧದ ಶಂಕೆ ವ್ಯಕ್ತಪಡಿಸಿ, ಆಕೆಯ ಮೇಲೆ ಮರದ ದಿಮ್ಮಿಯಿಂದ ಕ್ರೂರವಾಗಿ ಹಲ್ಲೆ ನಡೆಸಿ, ತದನಂತರ ನೇಣಿಗೆ ಬಿಗಿದು ಅತ್ಯಂತ ಅಮಾನವೀಯವಾಗಿ...

ಕಾನೂನು-ಸುವ್ಯವಸ್ಥೆಗೆ ವಿದ್ಯಾರ್ಥಿಗಳು ಸಮಸ್ಯೆಯಾಗುತ್ತಾರೆ ಎಂದು ಪರಿಗಣಿಸಿದ್ದು ಏಕೆ: ಅಭಿಷೇಕ್ ಬ್ಯಾನರ್ಜಿ

ರಾಷ್ಟ್ರ ರಾಜಧಾನಿ ದೆಹಲಿ ಮತ್ತು ದೆಶದಾದ್ಯಂತ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಭಾರೀ ಪೊಲೀಸ್ ಬಲಪ್ರಯೋವನ್ನು ವಿಪಕ್ಷಗಳು ಇಂದು ಲೋಕಸಭೆಯಲ್ಲಿ ಖಂಡಿಸಿವೆ. ವಿದ್ಯಾರ್ಥಿಗಳ...

ಪಬ್ಲಿಕ್ ಟಿವಿ ನಿರೂಪಕ ಅರುಣ್ ಬಡಿಗೇರ್ ವಿರುದ್ದ ಮೈಸೂರಿನಲ್ಲಿ ದೂರು ದಾಖಲು

ಸಂವಿಧಾನಬದ್ಧ ಮೀಸಲಾತಿಯ ಕುರಿತು ಅತ್ಯಂತ ನಿಂದನಾತ್ಮಕ, ಅವಹೇಳನಕಾರಿ ಹಾಗೂ ಸಮಾಜದಲ್ಲಿ ದ್ವೇಷ ಪ್ರಚೋದಿಸುವ ರೀತಿಯ ಹೇಳಿಕೆ ನೀಡಿರುವ 'ಪಬ್ಲಿಕ್ ಟಿವಿ' ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಮೈಸೂರಿನಲ್ಲಿ ಕಾನೂನು ಕ್ರಮಕ್ಕೆ ಆಗ್ರಹಿಸಿ ಪೊಲೀಸ್‌...