Homeಕರ್ನಾಟಕಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ: ದೇವನೂರ ಮಹಾದೇವ

ಎಟಿ&ಎಸ್ ಕಾರ್ಮಿಕರ ಧರಣಿಗೆ 365 ದಿನಗಳು ತುಂಬಿದ ಸಂದರ್ಭದಲ್ಲಿ: ದೇವನೂರ ಮಹಾದೇವ

ಎಟಿ&ಎಸ್ ಸಮಸ್ಯೆ ತಕ್ಷಣವೇ ಬಗೆಹರಿಯದಿದ್ದರೆ, ಶಾಸಕ ಹರ್ಷವರ್ಧನ್ ಅವರು ಧರಣಿ ನಿರತ ನೌಕರರ ನಡುವೆ ತಾವೂ ಭಾಗಿಗಳಾಗಿ ಧರಣಿ ಮಾಡುವ ಮೂಲಕ ನಿಜವಾದ ಜನಪ್ರತಿನಿಧಿ ಆಗಬೇಕಿದೆ.

- Advertisement -
- Advertisement -

ನಮ್ಮ ನಂಜನಗೂಡಿನಲ್ಲಿರುವ, ವಿದೇಶಿ ಮೂಲದ ಬಹುರಾಷ್ಟ್ರೀಯ ಕಂಪನಿಯಾದ ಎಟಿ&ಎಸ್ ಕಂಪನಿಗೆ ಸೇರಿದ ಟ್ರೈನಿ ನೌಕರರು ಹಾಗೂ ಕಾರ್ಮಿಕವರ್ಗವು ಎರಡೂ ಕರೋನಾ ಅಲೆಗಳನ್ನು ದಾಟಿಕೊಂಡು ನಡೆಸುತ್ತಿರುವ ಈ ಧರಣಿ ಚಳುವಳಿಗೆ ಇಂದಿಗೆ ಒಂದು ವರ್ಷ ತುಂಬಿತು. ಇದು ದುಃಖದ ದಿನ. ಕಳೆದ ಒಂದು ವರ್ಷದ ಕಾಲದ ಈ ಕಾರ್ಮಿಕರ ಬದುಕನ್ನು ಹೇಗೆ ವಿವರಿಸಬೇಕು? ಅವರ ಬದುಕು ಒಂದು ಯಾತನಾ ಶಿಬಿರದಂತೆಯೇ ಕಾಣಿಸುತ್ತದೆ. ಈ ಯಾತನಾ ಶಿಬಿರ ಯಾಕಾಗಿ? ನೌಕರರು ಕೇಳುತ್ತಿರುವುದಾದರೂ ಏನು?

ಅವರು ಕೇಳುತ್ತಿರುವುದು ಇಷ್ಟೆ : “ನಾವು ಟ್ರೈನಿಗಳು ಕಳೆದ ಎಂಟತ್ತು ವರ್ಷಗಳಿಂದಲೂ ತಿಂಗಳಿಗೆ ಹೆಚ್ಚೆಂದರೆ ಹತ್ತು ಸಾವಿರ ರೂಪಾಯಿಗಳಿಗೆ ಕೆಲಸ ಮಾಡುತ್ತಾ ಬಂದಿದ್ದೇವೆ. ನಾವು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ 2 ವರ್ಷಗಳು ಟ್ರೈನಿ ಅವಧಿ ಎಂದಿತ್ತು. ಆ ಅವಧಿ ಮುಗಿದು ಎಷ್ಟೋ ವರ್ಷಗಳಾಗಿದ್ದರೂ ನಮ್ಮನ್ನು ಖಾಯಂ ಮಾಡಿಲ್ಲ. ಈಗಲಾದರೂ ನಮ್ಮ ಕೆಲಸವನ್ನು ಪರ್ಮನೆಂಟ್ ಮಾಡಿ ಹಾಗೂ ನಮ್ಮ ಸಂಬಳವನ್ನು ಹೆಚ್ಚು ಮಾಡಿ” – ಇದಿಷ್ಟೆ ಈ ನೌಕರರು ಕೇಳುತ್ತಿರುವುದು. ಇದಿಷ್ಟೆ. ಇದಿಷ್ಟನ್ನು ಕೇಳಿದ್ದಕ್ಕಾಗಿ ಈ ವಿದೇಶಿ ಮೂಲದ ಎಟಿ&ಎಸ್ ಕಂಪನಿಯು ನ್ಯಾಯ ಕೇಳಿದ ನೌಕರರನ್ನು ಕೆಲಸದಿಂದಲೇ ವಜಾ ಮಾಡಿಬಿಟ್ಟಿತು. ಈ ಅನ್ಯಾಯವನ್ನು ಪ್ರಶ್ನಿಸಿದ್ದಕ್ಕಾಗಿ, ಪ್ರಶ್ನಿಸಿದ ಕಾರ್ಮಿಕ ನಾಯಕನನ್ನೇ ವಜಾ ಮಾಡಿಬಿಟ್ಟಿತು. ವಜಾ ಮಾಡಿದ್ದಕ್ಕೆ “ಆ ಕಾರ್ಮಿಕ ನಾಯಕ ಒಂದು ದಿನ ಕೆಲಸಕ್ಕೆ ಗೈರು ಹಾಜರಾಗಿದ್ದ” ಎಂಬ ಚಿಲ್ಲರೆ ಕಾರಣ ಕೊಟ್ಟಿತು! ಇದು ಕಂಪನಿ ಆಡಳಿತ ಮಂಡಳಿಯ ಚಿಲ್ಲರೆ ಬುದ್ದಿಯ ಕೆಲಸ. ಇದಿರಲಿ, ತಮ್ಮ ಕಾರ್ಮಿಕ ನಾಯಕನನ್ನು ವಜಾ ಮಾಡಿದ್ದಕ್ಕೆ ನೊಂದ ಕಾರ್ಮಿಕರು ಸಾಂಕೇತಿಕ ಪ್ರತಿರೋಧವಾಗಿ “ಮೂರು ದಿನಗಳ ಕಾಲ ಕಂಪನಿ ಕಾರ್ಖಾನೆಯ ಕ್ಯಾಂಟೀನಿನಲ್ಲಿ ಊಟ ಮಾಡಲ್ಲ” ಎಂದು ಆಡಳಿತ ಮಂಡಳಿಗೆ ಪತ್ರ ಬರೆದದ್ದಕ್ಕೆ ಆ ಕಾರ್ಮಿಕರನ್ನೂ ವಜಾ ಮಾಡಲಾಯ್ತು. ಏನಿದು? ಉಸಿರೆತ್ತಿದರೆ ಉಸಿರನ್ನೇ ತೆಗೆಯುವ ಕೆಲಸ. ಹೀಗೆ 75 ಜನ ಕಾರ್ಮಿಕರನ್ನು ವಜಾ ಮಾಡಿದ್ದಾರೆ. ವಜಾದ ಮೇಲೆ ವಜಾ. ನಾವು ನೋಡಿಕೊಂಡು ಪ್ರೇಕ್ಷಕರಾಗಿದ್ದೇವೆ.

ಇದರ ನಡುವೆ ಒಂದು ತಮಾಷೆ. ಆಥವಾ ಕ್ರೂರ ವ್ಯಂಗ್ಯ. ಈ ವಿದೇಶಿ ಮೂಲದ ಕಂಪನಿಗೆ ನಂದಕಿಶೋರ್ ರವರು ಮಾನವ ಸಂಪನ್ಮೂಲ ಅಧಿಕಾರಿ. ಇವರು ಇಂಡಸ್ಟ್ರಿಯಲ್ ಟ್ರಿಬ್ಯೂನಲ್ ಗೆ ಲಿಖಿತ ಹೇಳಿಕೆ ನೀಡುತ್ತಾ ತಮ್ಮ ಕಂಪನಿಯು ಟ್ರೈನಿ ನೌಕರರಿಗೆ ತಿಂಗಳಿಗೆ ಹೆಚ್ಚೆಂದರೆ ಹತ್ತು ಸಾವಿರ ಕೊಡುವುದನ್ನೆ “ಕಂಪನಿಯು ಎಲ್ಲರಿಗಿಂತಲೂ Better, ಅಂದರೆ ಉತ್ತಮ ಸಂಬಳವನ್ನು ನೀಡುತ್ತಿದೆ” ಎಂದು ಹೇಳಿದ್ದಾರೆ. ನಾನು ಕುತೂಹಲಕ್ಕೆ ಅವರ ಸಂಬಳವನ್ನು ವಿಚಾರಿಸಿದೆ. ಶ್ರೀ ನಂದಕಿಶೋರ್ ಅವರು ತಿಂಗಳಿಗೆ ಅಧಿಕೃತವಾಗಿ ಎರಡೂವರೆ ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದಾರೆ! ಇವರಿಗೆ ಅತ್ಮಸಾಕ್ಷಿ ಇದೆಯೇ? ಅವರ ಅತ್ಮಸಾಕ್ಷಿ ಸತ್ತಿದೆ ಎಂದುಕೊಳ್ಳೊಣ. ಆದರೆ ಅವರ ಮಕ್ಕಳು ಸಂವೇದನಾಶೀಲರಾಗಿದ್ದಲ್ಲಿ “ಈ ನಮ್ಮ ಅಪ್ಪ ತಾನು ಮಾತ್ರ ತಿಂಗಳಿಗೆ ಎರಡೂವರೆ ಲಕ್ಷ ಸಂಬಳ ತೆಗೆದುಕೊಳ್ಳುತ್ತಾ, ತನ್ನ ಕಂಪನಿಯ ಕಾರ್ಮಿಕರಿಗೆ ತಿಂಗಳಿಗೆ ಕೇವಲ ಹತ್ತು ಸಾವಿರ ಕೊಟ್ಟು ಅದನ್ನು Better ಸಂಬಳ ಅನ್ನುತ್ತಿದ್ದಾರಲ್ಲ! ಇವರಿಗೆ ಏನಾಗಿದೆ?” ಎಂಬ ಪ್ರಶ್ನೆ ಅವರ ಮಕ್ಕಳಲ್ಲಿ ಬಂದರೆ, ಶ್ರೀ ನಂದಕಿಶೋರ್ ಅವರ ಮಕ್ಕಳ ಕಣ್ಣಲ್ಲಿ ಕುಬ್ಜರಾಗುವುದಿಲ್ಲವೇ?.

ಇದನ್ನೆಲ್ಲಾ ಹೇಗೆ ಆರ್ಥಮಾಡಿಕೊಳ್ಳಬೇಕೋ ನನಗೆ ಅರ್ಥವಾಗುತ್ತಿಲ್ಲ. ಒಟ್ಟಿನಲ್ಲಿ ಎಟಿ&ಎಸ್ ಆಡಳಿತ ಮಂಡಳಿಯ ನಡಾವಳಿ ನೋಡಿದರೆ ಇದು ಮನುಷ್ಯರು ಮಾಡುವ ಕೆಲಸ ಅಲ್ಲ ಅನಿಸುತ್ತದೆ. ಅಥವಾ ಆ ಆಡಳಿತ ಮಂಡಳಿಯಲ್ಲಿ ‘ಮನುಷ್ಯರು’ ಇದ್ದರೂ ಅವರೊಳಗೆ ‘ಮನುಷ್ಯತ್ವ’ ಇಲ್ಲ ಅನ್ನಿಸಿಬಿಡುತ್ತದೆ.
ಅಥವಾ ಹೀಗೂ ಇರಬಹುದೇ? “BECAUSE WE SAY SO” ಅಂತ ಒಂದು ಪುಸ್ತಕ ಇದೆ. ‘ಯಾಕೆಂದರೆ ನಾವು ಹೇಳ್ತಾ ಇದ್ದೇವೆ, ಅಷ್ಟೇ’ ಅಂತ ಆದರ ಅರ್ಥ. ಇದನ್ನು ಬರೆದವರು ನೋಮ್ ಚೋಮ್‌ಸ್ಕಿ. ಜಗತ್ತಿನ ಮಹಾನ್ ಚಿಂತಕ. ಇವರು ಜಗತ್ತಿಗೇ ಸೇರಿದವರು. ನೋಮ್ ಚೋಮ್‌ಸ್ಕಿಯವರು ಹೇಳಿದ ಆ ಮಾತು, ಬಂಡವಾಳಶಾಹಿ ಕಾಂಚಾಣದ ಧಿಮಾಕಿನ ಗರ್ವದ ಬಗ್ಗೆ. ಇಲ್ಲೂ ನಂಜನಗೂಡಿನ ಎಟಿ&ಎಸ್ ಕಂಪನಿ ಆಡಳಿತ ಮಂಡಳಿಯೂ ಅದೇ ಕಾಂಚಾಣದ ಗರ್ವದ ಧಿಮಾಕು ತೋರಿಸಿದೆ. ಅವರು ಹೇಳಿದ್ದೇ ಮಾತು. ಅದರಲ್ಲಿ ಸತ್ಯ ನ್ಯಾಯ ಇರಬೇಕೆಂದಿಲ್ಲ. ಅವರು ಹೇಳಿದ್ದೇ ಕಾನೂನು! ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲವೆ? ಸರ್ಕಾರದ ಕಾರ್ಮಿಕ ಇಲಾಖೆ, ಇಂಡಸ್ಟ್ರಿಯಲ್ ಟ್ರಿಬ್ಯೂನಲ್ ಹಾಗೂ ಕಾರ್ಮಿಕ ನ್ಯಾಯಾಲಯ ಏನು ಮಾಡುತ್ತಿವೆ?
ಇವುಗಳದೂ ಕೂಡಾ ಒಂದು ದಾರುಣ ಕಥೆಯೇ. ಕೆಲಸ ಕಳೆದುಕೊಂಡ ಕಾರ್ಮಿಕರ ಬದುಕು ಪ್ರೈ ಆಗುತ್ತ ಬೇಯುತ್ತಿದ್ದರೂ, ಕಳೆದ ಮೂರು ವರ್ಷಗಳಿಂದಲೂ ಕಾರ್ಮಿಕ ಇಲಾಖೆ, ಇಂಡಸ್ಟ್ರಿಯಲ್ ಟ್ರಿಬ್ಯೂನಲ್, ಕಾರ್ಮಿಕ ನ್ಯಾಯಾಲಯಗಳು ಈ ಸಮಸ್ಯೆಯ ವಾದವಿವಾದವನ್ನು ಸವಿಯುತ್ತಾ ಕಾಲ ಸವೆಸುತ್ತಿವೆ. ಹೀಗೆ ಇನ್ನೊಂದಿಷ್ಟು ದಿನ ತಳ್ಳಿಬಿಟ್ಟರೆ ಆ ಕೆಲಸ ಕಳೆದುಕೊಂಡ ನೌಕರರ ಸೇವಾವಧಿಯೇ ಮುಗಿದು ಬಿಡುವುದೇನೊ? ನ್ಯಾಯವು ಎಲ್ಲಿದೆ?

ನೋಮ್ ಚಾಮ್ಸ್ಕಿ

ಆಯ್ತು, ಈ ಕಾಯ್ದೆಗಳನ್ನು ರೂಪಿಸುವವರಾದರೂ ಯಾರು? ಶಾಸನಗಳನ್ನು ರೂಪಿಸುವುದಕ್ಕಾಗಿಯೇ ರಾಜ್ಯದಲ್ಲಿ ಶಾಸನಸಭೆ ಅಂತ ಒಂದಿದೆ. ಶಾಸನಗಳನ್ನು ರೂಪಿಸುವುದಕ್ಕಾಗೇ ಶಾಸನಸಭೆ ಅಂತ ಇರೋದು. ಮತದಾರರ ಮೂಲಕ ಆಯ್ಕೆಯಾಗಿ ಶಾಸನಸಭೆಗೆ ಹೋಗುವ ಇಂದಿನ ಬಹುಸಂಖ್ಯಾತ ಶಾಸಕರಿಗೆ, ತಾವು ಶಾಸನ ಮಾಡುವುದಕ್ಕಾಗಿ ಆಯ್ಕೆಯಾಗಿ ಶಾಸಕ ಆಗಿರುವುದು ಎಂಬ ಅರಿವು ಇದ್ದಂತಿಲ್ಲ. ಇಂಥವರು ಆಯ್ಕೆಯಾದ ಮೇಲೆ ತಾವು ಜನಪ್ರತಿನಿಧಿಗಳು ಎಂದು ಅಂದುಕೊಂಡಂತೂ ಇಲ್ಲ. ಅವರಿಗೆ ಪ್ರಜ್ಞೆ ಇದ್ದಿದ್ದರೆ, ಎಲ್ಲಾದರೂ ಎರಡು ವರ್ಷಗಳ ಟ್ರೈನಿ ಕಾಲಾವಧಿ ಮುಗಿದ ಮೇಲೆ ಅಲ್ಲೆ ಕೆಲಸವನ್ನು ಮುಂದುವರಿಸಿದರೆ ಅದು ‘ಖಾಯಂ’ ಎಂದೇ ಆಗುತ್ತದೆ ಎಂಬ ಕಾಯ್ದೆ ರಚಿಸಲ್ಪಡುತ್ತಿತ್ತು. ಆದ್ದರಿಂದ, ದುರಂತ ಇರುವುದು ಇಲ್ಲೇ.

ಈಗ ನಂಜನಗೂಡಿಗೆ ಬಂದರೆ, ಇಲ್ಲಿ ನಡೆಯುತ್ತಿರುವ ಎಟಿ&ಎಸ್ ಕಾರ್ಮಿಕರ 365 ದಿನಗಳ ಬವಣೆ ನೋಡಿಕೊಂಡು ಈ ಕ್ಷೇತ್ರದ ಶಾಸಕರು ಇದ್ದಾರೋ ಇಲ್ಲವೋ ಅನ್ನುವಂತೆ ಇದ್ದಾರೆ. ನಿಗೂಢವಾದ ಮೌನ ವಹಿಸಿದ್ದಾರೆ. ಇಲ್ಲಿನ ಶಾಸಕರು ತಮ್ಮ ಮೌನವನ್ನು ಇನ್ನೂ ಮುಂದುವರಿಸಿದರೆ, ದಿನಕಳೆದಂತೆ ಅದಕ್ಕೆ ‘ನಾನಾರ್ಥ’ ಹುಟ್ಟಿಕೊಳ್ಳುತ್ತದೆ. ಇದು ನನಗೆ ಹೆಚ್ಚು ನೋವು ತಂದಿದೆ. ಯಾಕೆಂದರೆ, ಶಾಸಕ ಹರ್ಷವರ್ಧನ್ ಅವರು ಕರ್ನಾಟಕದ ಧೀಮಂತ ನಾಯಕ ಬಸವಲಿಂಗಪ್ಪನವರ ಮೊಮ್ಮಗ. ಹಾಗೇ ದಿಟ್ಟತನಕ್ಕೆ ಹೆಸರಾದ ಸಂಸದ ಶ್ರೀನಿವಾಸ ಪ್ರಸಾದ್ ಅವರ ಅಳಿಯ. ಪ್ರಸಾದ್ ರವರು ಎಟಿ&ಎಸ್ ಕಂಪನಿಯ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿದ್ದಾರೆ ಕೂಡ. ಆದರೂ ಅವರ ಮಾತಿಗೆ ಬೆಲೆ ಸಿಕ್ಕಿಲ್ಲ. ಬಸವಲಿಂಗಪ್ಪ, ಶ್ರೀನಿವಾಸ ಪ್ರಸಾದ್‌ರವರ ಗೌರವ ಉಳಿಸುವುದು ಶ್ರೀ ಹರ್ಷವರ್ಧನ್ ಅವರ ಕರ್ತವ್ಯ ಮತ್ತು ಹೊಣೆಗಾರಿಕೆ ಎಂದು ಅವರಿಗೆ ನೆನಪಿಸುತ್ತಿರುವೆ, ಕಳಕಳಿಯಿಂದ ಕೇಳಿಕೊಳ್ಳುತ್ತಿದ್ದೇನೆ. ಎಟಿ&ಎಸ್ ಸಮಸ್ಯೆ ತಕ್ಷಣವೇ ಬಗೆಹರಿಯದಿದ್ದರೆ, ಶಾಸಕ ಹರ್ಷವರ್ಧನ್ ಅವರು ಧರಣಿ ನಿರತ ನೌಕರರ ನಡುವೆ ತಾವೂ ಭಾಗಿಗಳಾಗಿ ಧರಣಿ ಮಾಡುವ ಮೂಲಕ ನಿಜವಾದ ಜನಪ್ರತಿನಿಧಿ ಆಗಬೇಕಿದೆ. ಇವರು ಇನ್ನೂ ಯುವಕರಾಗಿರುವುದರಿಂದ ಇದನ್ನು ಅವರಿಂದ ನಿರೀಕ್ಷಿಸುತ್ತೇನೆ.

ಬಿ ಹರ್ಷವರ್ಧನ್

ಇಲ್ಲದಿದ್ದರೆ, ನಾಳೆ ಏನಾದರೂ ಜನತಾ ನ್ಯಾಯಾಲಯ ಏರ್ಪಟ್ಟು ಎಟಿ&ಎಸ್ ಕಾರ್ಮಿಕರ ಸಮಸ್ಯೆ ವಿಚಾರಣೆ ನಡೆದರೆ, ಅಲ್ಲಿ, ಆ ಜನತಾ ನ್ಯಾಯಾಲಯದಲ್ಲಿ ಮೊದಲನೇ ಅಪರಾಧಿ ಸ್ಥಾನದಲ್ಲಿ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ನಂದಕಿಶೋರ್ ಹಾಗೂ ಎರಡನೇ ಸ್ಥಾನದಲ್ಲಿ ಈ ಕ್ಷೇತ್ರದ ಶಾಸಕ ಶ್ರೀ ಹರ್ಷವರ್ಧನ್ ನಿಲ್ಲುತ್ತಾರೆ ಎಂದೇ ನನಗೆ ಅನ್ನಿಸುತ್ತದೆ. ಇದಾಗದಿರಲಿ ಎಂದು ಆಶಿಸುವೆ.

ಇದನ್ನೂ ಓದಿ: ಹಿಜಾಬ್-ಕೇಸರಿ ವಿಚಾರ: ಎರಡೂ ಕಡೆಯ ವಿದ್ಯಾರ್ಥಿಗಳೆ ಬಲಿಪಶುಗಳು – ದೇವನೂರು ಮಹಾದೇವ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...