Homeಅಂಕಣಗಳುನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ

ನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ

- Advertisement -
- Advertisement -

| ಯಾಹೂ |

ಲಿಂಗನಮಕ್ಕಿ ಜಲಾಶಯದಿಂದ ಬೆಂಗಳೂರೇ ಬೆಳಗುತ್ತಿದೆ. ಆದರೆ ಈಗ ಬೆಳಕಷ್ಟೇ ಸಾಲದು, ಬೆಂಗಳೂರಿಗರಿಗೆ ಕುಡಿಯಲೋಸ್ಕರ ಲಿಂಗನಮಕ್ಕಿ ನೀರು ಕೊಡಲು ಮಂಗನಂತಹ ರಾಜಕಾರಣಿಗಳು ಯೋಜನೆ ರೂಪಿಸಿದ್ದಾರಂತಲ್ಲಾ. ಅತ್ತ ಲಿಂಗನಮಕ್ಕಿ ಕತೆಯೇನಾಗಿದೆಯೆಂದರೆ, ಒಂದು ಕಾಲದಲ್ಲಿ ವರ್ಷಪೂರ್ತಿ ಭೋರ್ಗರೆಯುತ್ತಿದ್ದ ಜೋಗ, ಡ್ಯಾಂ ಕಟ್ಟಿದ ಮೇಲೆ ನಿಂತು ಹೋಯ್ತು. ಗುಡ್ಡಗಳ ಜವುಗಿನಿಂದ ಅಳುತ್ತಿದ್ದ ಜೋಗ ಈಗ ಗಟ್ಟಿ ಮನಸ್ಸು ಮಾಡಿ ಅದನ್ನು ನಿಲ್ಲಿಸಿದೆ. ಆದರೆ ರಾಜಕಾರಣಿಗಳು ಬರುವ ಪ್ರವಾಸಿಗರಿಗಾಗಿ ಮಾರ್ಕೆಟ್ ನಿರ್ಮಿಸಿ ಬಾಡಿಗೆ ಕೊಟ್ಟಿದ್ದಾರೆ. ಐಶಾರಾಮಿ ಐಬಿ ಕಟ್ಟಿಸಿದ್ದಾರೆ. ಜೊತೆಗೆ ಮುನಿಸಿಕೊಂಡ ಶರಾವತಿಯನ್ನು ಬೆಂಗಳೂರಿನವರೆಗೂ ಎಳೆದು ತರಲು ಯೋಜಿಸಿದ್ದಾರೆ. ಈ ಮೂರ್ಖರ ದೆಸೆಯಿಂದ ಈಗಾಗಲೇ ಗಾಜನೂರು ಬಲದಂಡೆ ತೋಡಲಾಗಿದೆ. ಭದ್ರಾ ಮೇಲ್ದಂಡೆ ಪಾತಾಳದಲ್ಲಿ ಹರಿಯಬೇಕಿದೆ. ಎತ್ತಿನಹೊಳೆ ತಿರುಗಿಸಲಾಗಿದೆ. ಇದಲ್ಲದೆ ಮಳೆ ನೀರು ಸಂಗ್ರಹಕ್ಕಾಗಿ ಇಡೀ ಕರ್ನಾಟಕದಲ್ಲಿ ಕೃಷಿ ಹೊಂಡ ತೋಡಿದ್ದಾರೆ. ಈ ಕೃಷಿ ಹೊಂಡದಲ್ಲಿ ನೀರು ತುಂಬುವ ಬದಲು ಜನಗಳ ಜೇಬು ಎಷ್ಟು ತುಂಬಿದೆ ಎಂದರೆ, ಇವರ ಕಡೆಯವರು ಯಾವ ಕೋಳಿಗಳನ್ನೂ ಬಿಡುತ್ತಿಲ್ಲ, ಯಾವ ಬ್ರಾಂಡಿ ಶಾಪನ್ನೂ ಬಿಡುತ್ತಿಲ್ಲ. ಇಂತವೇ ಹೋಗಿ ವಿಧಾನಸೌಧದಲ್ಲಿ ಕುಳಿತಿರುವುದರಿಂದ ಶರಾವತಿಗೆ ಕಂಟಕ ಎದುರಾಗಿದೆ. ಆದರದು ಅಷ್ಟು ಸುಲಭವಲ್ಲವಂತಲ್ಲಾ ಥೂತ್ತೇರಿ.

ನಿಜಕ್ಕೂ ಈಗ ದೇಶ ಅವ್ಯಕ್ತ ಕ್ಷೋಭೆಯಿಂದ ಕೂಡಿದೆ. ಕ್ರಿಕೆಟ್ ಮ್ಯಾಚನ್ನ ಸಂಭ್ರಮಿಸಲಾಗುತ್ತಿಲ್ಲ. ಏಕೆಂದರೆ ಟಿವಿಯಲ್ಲಿರುವ ಮೂರ್ಖರು ಕ್ಯಾಪ್ಟನ್ ಕೊಯ್ಲಿ ಜೊತೆಗೆ ಮೋದಿ ಫೋಟೊವನ್ನ ಹಾಕುತ್ತಿದ್ದಾರೆ. ನಮ್ಮ ಕ್ರಿಕೆಟಿಗರಿಗೆ ಮೋದಿ ಕೋಚ್ ಎಂಬುದು ಗೊತ್ತೇ ಇರಲಿಲ್ಲ. ಆದಿರಲಿ ಕರ್ನಾಟಕದ ಮಟ್ಟಿಗೆ ಭೀಕರವಾದ ಬಿಕ್ಕಟ್ಟುಗಳಿವೆ. ಶರಾವತಿ, ಐಎಂಎ ದರೋಡೆ, ಜಿಂದಾಲ್ ಭೂಹಗರಣ ಇವೆಲ್ಲ ಸಮಸ್ಯೆಗಳು ತೊಡರಿಕೊಂಡಿರುವಾಗ, ನಮ್ಮ ಮಾಜಿ ಪ್ರಧಾನಿಗಳಾದ ದೇವೇಗೌಡರು ಮಧ್ಯಂತರ ಚುನಾವಣೆಯ ಧಮಕಿ ಹಾಕಿ ರಾಜಕಾರಣಿಗಳನ್ನು ಬೆಚ್ಚಿಸಿದ್ದಾರಲ್ಲಾ. ಈ ಬಗ್ಗೆ ಅವರನ್ನೇ ಮಾತನಾಡಿಸಿದರೆ ಹೇಗೆ ಎಂದು ಫೋನ್ ಮಾಡಲಾಗಿ ರಿಂಗಾಯ್ತು.

ರಿಂಗ್‍ಟೋನ್; “ಜಾಡಿಸಿ ಹೊದಿ, ಅವರನ್ನು ಥೂ ಎಂದು ಉಗಿ ಜಾಡಿಸಿ…..” ಹಲೋ…
“ನಮಸ್ಕಾರ ಸಾರ್ ನಾನು ಯಾಹೂ.”
“ಗೌರಿ ಸಿಸ್ಟರ್ ಪತ್ರಿಕೆ ಬರ್ತಾಯಿದೆಯಾ.”
“ಬರ್ತಾಯಿದೆ ಸಾರ್.”
“ಒಂದು ಕಳಿಸಿ ಕೊಡಿ.”
“ಆಯ್ತು ಸಾರ್, ಒಂದೆರಡು ಪ್ರಶ್ನೆ ಕೇಳಬೇಕು.”
“ಕೇಳಿ.”
“ಮಧ್ಯಂತರ ಚುನಾವಣೆ ಎದುರಿಸೋಣ ಅಂದಿದ್ದಿರಲ್ಲಾ ಸಾ.”
“ಈ ದೇವೇಗೌಡ ಯಾವತ್ತು ಚುನಾವಣೆಗೆದಿರಿಲ್ಲ.”
“ನೀವು ಹೆದರಲ್ಲ ಸಾರ್, ಆದ್ರೆ ಎಮ್ಮೆಲ್ಲೆಗಳು ಬೆಚ್ಚಿ ಬಿದ್ದವುರೆ.”
“ಈಚಿನ ಚುನಾವಣೆ ಅಂದ್ರೆ ಹುಡುಗಾಟದ ಮಾತಲ್ಲ ಕೋಟಿಗಳ ಮಾತು.”
“ಅಕಸ್ಮಾತ್ ನೀವು ಚುನಾವಣೆಗೋದ್ರೆ ನಿಮಿಗೆ ಇಪ್ಪತ್ತೈದು, ಕಾಂಗ್ರೆಸ್‍ಗೆ ಐವತ್ತು, ಬಿಜೆಪಿಗೆ ಮೆಜಾರಿಟಿ ಬರುತ್ತಲ್ಲವಾ ಸಾರ್.”
“ಅದನ್ನು ತಮ್ಮಿಂದ ಕೇಳಿ ತಿಳಕೊಬೇಕಾಗಿಲ್ಲ ನನಿಗೂ ಗೊತ್ತು.”
“ಸಾರಿ ಸಾರ್, ನಿಮ್ಮ ಅನುಭವ ಮತ್ತೆ ಆತ್ಮವಿಶ್ವಾಸ ಒಂದೊಂದು ಸಾರಿ ಕೈ ಕೊಟ್ಟಿದೆಯಲ್ಲವ ಸಾರ್.”
“ಯಾವಾಗ.”
“ಕುಮಾರಣ್ಣ ಇಪ್ಪತ್ತು ತಿಂಗಳು ಮುಗಿಸಿದ ಮೇಲೆ, ಎಡೂರಪ್ಪನಿಗೆ ಬೆಂಬಲ ಕೊಡದು ಬೇಡ ಅಂತ ಹಟ ಹಿಡಿದ್ರಿ.”
“ಅದು ನನ್ನ ಭಾಗದ ಸರಿಯಾದ ತೀರ್ಮಾನ.”
“ಆದ್ರೆ ಎಡೂರಪ್ಪ ನಿಮ್ಮ ಕೈಲಿ ಗೂಸಾ ತಿಂದೋರಂಗೆ ಇಡೀ ಕರ್ನಾಟಕದಲ್ಲಿ ಅಳತ ತಿರುಗಾಡಿದರು. ಬಹುಮತ ಪಡೆದ್ರು ನೀವು ಇಪ್ಪತ್ತೈದು ಸೀಟಿಗೆ ನಿಂತೋದ್ರಿ ಅಲ್ಲವ ಸಾರ್.”
“ಹೌದು, ನನಿಗೆ ಇಪ್ಪತ್ತೈದು ಸೀಟು ಬಂದಿದ್ಕೆ ಯಾವ ಬೇಸರನೂ ಇಲ್ಲ. ಆದ್ರೆ ಕುಮಾರ ಬಿಜೆಪಿಗೆ ಸಪೋರ್ಟ್ ಮಾಡಿದ್ರೆ ನಾನು ಮುಖ ಎತ್ತಿಕೊಂಡು ರಾಜಕಾರಣ ಮಾಡಕ್ಕಾಗ್ತಿತ್ತ.”
“ಯಾಕೆ ಸಾರ್.”
“ನೀನು ಬಿಜೆಪಿಗೋಗಿ ಮುಖ್ಯಮಂತ್ರಿ ಆಗೋದಾದ್ರೆ ನನ್ನ ಹೆಣ ನೋಡಬೇಕಾಗತ್ತೆ ಅಂತ ಕುಮಾರನಿಗೆ ಹೇಳಿದ್ದೆ. ಲೋಕಸಭೆಲಿ ನಿಂತು ನಾನಿಲ್ಲದಾಗ ನನ್ನ ಮಗನನ್ನ ಕರೆದುಕೊಂಡೋಗಿ ಬಿಜೆಪಿಯವರು ಅಧಿಕಾರ ಹಿಡಿದ್ರು ಅಂತ ಹೇಳಿದ್ದೆ. ಇಷ್ಟಾದ ಮೇಲೆ ನಾನು ಎಡೂರಪ್ಪನಿಗೆ ಸಪೋರ್ಟ್ ಮಾಡು ಅನ್ನಕ್ಕಾಗತ್ತ.”
“ಇಲ್ಲ ಸಾರ್, ರಾಜಕಾರಣದಲ್ಲಿ ನೈತಿಕತೆ ಅಂದ್ರೆ ಇದೆ ಅಲ್ಲವ ಸಾರ್.”
“ನಾನು ಯಾವತ್ತಿಗೂ ಬಿಜೆಪಿಯವರ ಜೊತೆ ಸರಸ ಆಡಿದವನಲ್ಲ.”
“ನಿಜ ಸಾರ್, ಅಷ್ಟೇ ಅಲ್ಲ ಮಾಜಿ ಪ್ರಧಾನಿಗಳಾಗಿದ್ದು ಆ ಮೋದಿ ಬಗ್ಗೆ ಮಾತಾಡಲಿಲ್ಲ. ರಫೇಲ್ ಹಗರಣ, ಹುಸಿ ಯುದ್ಧ ಮತ್ತೆ ಮೋದಿ ಸುಳ್ಳು ಬಗ್ಗೆನೂ ಚಕಾರ ಎತ್ತಲಿಲ್ಲ.”
“ನನ್ನ ರಾಜಕಾರಣ ಅದಲ್ಲ.”
“ಇನ್ನೊಂದು ವಿಷಯ ಸಾರ್, ಕಾಂಗ್ರೆಸ್‍ನವರು ನೀವು ಸರಕಾರ ಮಾಡಿ ಅಂತ ಹೇಳಿದಾಗ, ಖರ್ಗೆ ಮುಖ್ಯಮಂತ್ರಿ ಆಗಲಿ ಅಂದ್ರಂತೆ. ಈಗ ಚುನಾವಣೆಗೆ ಹೋಗೋದರ ಬದಲು ಖರ್ಗೆ ಮಾಡಿ ಕೈ ತೊಳಕೊಂಡ್ರೆಂಗೇ.”
“ಅದಷ್ಟು ಸುಲಭವಲ್ಲ ಕಾಂಗೈನಲ್ಲೇ ವಿರೋಧ ಇದೆ.”
“ನೀವು ಮನಸು ಮಾಡಿದ್ರೆ ಆಗತ್ತೆ ಸಾರ್. ಆಗ ಹಾಸನ ಜಿಲ್ಲಾ ಪಂಚಾಯ್ತಿಗೆ ಹರಿಜನರ ಹುಡುಗನ್ನ ಅಧ್ಯಕ್ಷನ್ನ ಮಾಡಿದ್ರಿ. ಈಗ ಅಂತ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ ಸಾರ್.”
“ಈ ಬಗ್ಗೆ ತೀರ್ಮಾನ ತಗೋಬೇಕಾದವರು ಕಾಂಗ್ರೆಸಿಗರು. ಮುಖ್ಯವಾಗಿ ನನ್ನನ್ನ ತುಮಕೂರಲ್ಲಿ ನಿಲ್ಲಿಸಿ ಸೋಲಿಸಿದಂತಹ ಮಹಾ ನಾಯಕರು ಈ ಬಗ್ಗೆ ಮನಸು ಮಾಡಬೇಕು.”
“ನಿಮ್ಮನ ತುಮಕೂರಲ್ಲಿ ನಿಲ್ಲಂಗೆ ಮಾಡಿದ ಮಹಾ ನಾಯಕರು ಮುಟ್ಟಿನೋಡಿಕಳಂಗಾಯ್ತು ಸಾರ್. ಮೈಸೂರು ಒಕ್ಕಲಿಗರು ಕಾಂಗ್ರೆಸ್‍ಗೆ ಓಟಾಕಲಿಲ್ಲ. ತುಮಕೂರು ಕುರುಬ್ರು ನಿಮಗೆ ಓಟು ಮಾಡಲಿಲ್ಲ ಅಲ್ಲವ ಸಾರ್.”
“ಹಾಗೇಳಕ್ಕೆ ಬರಲ್ಲ.”
“ಅಂಗಂದ್ರೆ ಮುದ್ದ ಹನುಮೇಗೌಡರನ್ನ ಮುದ್ದು ಮಾಡೋರು ನಿಮ್ಮನ್ನ ಮುಗಿಸಿದ್ರು ಅಂದಂಗಾಗತ್ತೆ.”
“ಸೋಲನ್ನ ನಾನು ಒಪ್ಪಿಕಂಡಿದ್ದಿನಿ.”
“ಒಪ್ಪದೆಯಿದ್ರೆ ಗೆಲವು ಅಂತ ಅನ್ನಕ್ಕಾಗಲ್ಲ ಸಾರ್. ಆದ್ರೆ ನಿಮ್ಮ ತೀರ್ಮಾನ ಸರಿಯಿರಲಿಲ್ಲ. ಆದ್ರು ನೀವು ಸಿದ್ದರಾಮಯ್ಯ ಈಗ ಒಂದಾಗಿರಬೇಕು ಸಾರ್.”
“ಅದರಗತ್ಯ ಇದಿಯಾ.”
“ಇದೆ ಸಾರ್, ನಿಮ್ಮಿಬ್ಬರ ರಾಜಕಾರಣದಿಂದ ಅಣ್ಣ ತಮ್ಮಂದಿರಂಗಿದ್ದ ಕುರುಬ್ರು ಒಕ್ಕಲಿಗರು ವೈರಿಗಳಾಗಿದ್ದಾದಾರೆ, ನೀವು ಒಂದಾದ್ರೆ ಲಿಂಗಾಯಿತರ ಹೆದರಿಸಬವುದು.”
“ಈ ತರದ ಜಾತಿ ಲೆಕ್ಕಾಚಾರದ ರಾಜಕಾರಣವನ್ನ ಈ ದೇವೇಗೌಡ ಎಂದೂ ಮಾಡಿಲ್ಲ.”
“ಮತ್ಯಾಕೆ ಸಾರ್, ಜಾತ್ಯಾತೀತವಾಗಿದ್ದ ಒಕ್ಕಲಿಗರು ಹಿಂಗಾದ್ರು.”
“ಹ್ಯಂಗಾಗಿದಾರೆ.”
“ಒಂದು ಕಾಲದಲ್ಲಿ ಸಿಂಧ್ಯನ ಎದುರಿಗೆ ನಿಮ್ಮನ್ನೇ ಸೋಲಸತಿದ್ರು. ದೇವರಾಜ ಅರಸು ಎದುರಿಗೆ ತಿಮ್ಮೇಗೌಡನ್ನ ಸೋಲಿಸತಿದ್ರು, ಚಿಗರಿಗೌಡನ ಎದುರಿಗೆ ಎಚ್.ಬಿ.ಕೃಷ್ಣಪ್ಪನ್ನ ಸೋಲಿಸಿದ್ರು. ಆದ್ರೀಗ ಅವುರೂ ಲಿಂಗಾಯತರಂಗೆ ಆಗ್ಯವುರೆ ಇದನ್ಯಲ್ಲ ನೋಡಿದ್ರೆ ಕಮ್ಯುನಿಟಿ ಲೀಡ್ರು ಹೊಣೆಗಾರಾಗಬೇಕಾಗತ್ತೆ ಸಾರ್.”
“ನೋಡಿ ಕಾಲ ಬದಲಾಗಿದೆ ಆದ್ರಿಂದ ರಾಜಕಾರಣ ತುಂಬ ವ್ಯಾಪಿಸಿಕೊಂಡಿದೆ. ಸರಕಾರಿ ಜನ ಕೂಡ ತಮ್ಮ ಜನಾಂಗದ ಲೀಡರನ್ನ ಆಶ್ರಯಿಸಿದಾರೆ, ಒಬ್ಬ ರಾಜಕಾರಣಿ ಎಲ್ಲ ಜನಾಂಗದವರ ಕೆಲಸಗಳನ್ನ ಮಾಡಿದ್ರೆ ಹೀಗಾಗತಿರಲಿಲ್ಲ. ನಾವು ಎಂದೂ ಜಾತಿ ರಾಜಕಾರಣ ಮಾಡಿದವರಲ್ಲ. ಕುಟುಂಬದ ರಾಜಕಾರಣವನ್ನೂ ಮಾಡಿದವರಲ್ಲ. ಭ್ರಷ್ಟ ಕೆಲಸ ಮಾಡಕ್ಕೆ ನಮ್ಮಿಂದ ಸಾಧ್ಯವಾಗಲೇಯಿಲ್ಲ. ಆದ್ರಿಂದ ಕಳೆದ ಅರವತ್ತು ವರ್ಷಗಳಿಂದ ರಾಜಕಾರಣದಲ್ಲಿದ್ದೀನಿ. ಇದು ಜನರ ಆಶೀರ್ವಾದಗಳಿಂದ ಮಾಡಿಕೊಂಡು ಬಂದ ರಾಜಕಾರಣವೇ ಪರಂತೂ. ಇನ್ಯಾರಿಂದ್ಲೂ ಅಲ್ಲ.”
“ಇನ್ನೊಂದು ಗುರುತರವಾದ ಆಪಾದನೆ ಸಾರ್, ನೀವು ಕುರುಬ ಜನಾಂಗದವರಂತೆ ನಿಜವ.”
“ಯಾವ ಬೋಸುಡಿ ಮಗ ಅಂಗಂದೋನು.”
“ಥೂತ್ತೇರಿ.”

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...