Homeದಲಿತ್ ಫೈಲ್ಸ್ತುಮಕೂರು: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?

ತುಮಕೂರು: ಮುಚ್ಚಿ ಹೋಗುತ್ತಿದೆಯೇ ಮತ್ತೊಬ್ಬ ದಲಿತನ ಕೊಲೆ ಪ್ರಕರಣ?

- Advertisement -
- Advertisement -

ತುಮಕೂರು ತಾಲ್ಲೂಕು ಕೋರಾ ಹೋಬಳಿ ಜಕ್ಕೇನಹಳ್ಳಿ ಗ್ರಾಮದಲ್ಲಿ ಏಪ್ರಿಲ್‌ 29ನೇ ತಾರೀಕಿನಿಂದ ಈ ಪ್ರಕರಣ ತೆರೆದುಕೊಳ್ಳುತ್ತದೆ. ಊರಿನ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿಯ ಚಾನೆಲ್‌ನಲ್ಲಿ ಮಾದಿಗ ಸಮುದಾಯದ ಮುತ್ತುರಾಜ (26) ಎಂಬ ಯುವಕನ ಶವ ಪತ್ತೆಯಾಗುತ್ತದೆ. ಅಂದು ಮುತ್ತುರಾಜನ ತಂದೆ ಮುತ್ತುರಾಯಪ್ಪ (65) ನೀಡಿದ ದೂರು ದಾಖಲಾಗುತ್ತದೆ. ಆದರೆ ದೂರಿನಲ್ಲಿ ಏನು ಬರೆದಿದೆ ಎಂಬುದೇ ಗೊತ್ತಾಗದ, ಕೇವಲ ಸಹಿ ಮಾಡಲು ಬರುವ ಮುತ್ತುರಾಯಪ್ಪ ಮತ್ತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯ ಮೆಟ್ಟಿಲೇರುತ್ತಾರೆ.

ಶವವಾಗಿ ಪತ್ತೆಯಾದ ಮುತ್ತುರಾಜನನ್ನು ಸವರ್ಣೀಯ ಜಾತಿಯವರು ಕೊಂದಿದ್ದಾರೆ ಎಂಬುದು ಮುತ್ತುರಾಯಪ್ಪನವರ ಕುಟುಂಬದ ಆರೋಪ. ಜಕ್ಕೇನಹಳ್ಳಿಯ ಜಿಲ್ಲಾ ಪೊಲೀಸ್ ಕಚೇರಿಗೆ ಜೂನ್‌ 7ರಂದು ತೆರಳಿದ ಮುತ್ತುರಾಯಪ್ಪ ಹೀಗೆ ದೂರು ನೀಡುತ್ತಾರೆ:

“ತುಮಕೂರು ಗ್ರಾಮಾಂತರ ಪೊಲೀಸ್‌ ಠಾಣಾಧಿಕಾರಿಗಳು ನಾನು ನೀಡಿದ್ದ ಕೈ ಬರವಣಿಗೆಯ ದೂರನ್ನು ಮರೆಮಾಚಿ ಪೊಲೀಸ್‌ನವರೇ ಒಂದು ದೂರನ್ನು ಸೃಷ್ಟಿ ಮಾಡಿಕೊಂಡು ಅನಕ್ಷರಸ್ಥನಾದ ನನ್ನ ಸಹಿಯನ್ನು ಪಡೆದುಕೊಂಡು ನನಗೆ ಅನ್ಯಾಯ ಮಾಡಿದ್ದಾರೆ. ಇದರ ವಿರುದ್ಧ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸುತ್ತಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜಕ್ಕೇನಹಳ್ಳಿ  ಗ್ರಾಮದ ಬಳಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಚಾನಲ್‌ನಲ್ಲಿ ನನ್ನ ಮಗನಾದ ಮುತ್ತುರಾಜನ ಮೃತದೇಹವು ತೇಲುತ್ತಿತ್ತು. ಸಾರ್ವಜನಿಕರು ಗಮನಿಸಿ ವಿಚಾರ ತಿಳಿಸಿದರು. ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ಬಂದರು. ಪೊಲೀಸ್‌ನವರ ಸಮಕ್ಷಮ ಮೃತ ದೇಹವನ್ನು ಹೊರತೆಗೆದು ತುಮಕೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಮೃತದೇಹವನ್ನು ನಮ್ಮ ವಶಕ್ಕೆ ಕೇಳಿದಾಗ ಪೊಲೀಸರ ಕಂಪ್ಲೇಟ್ ಅಗತ್ಯವೆಂದರು. ಆ ದಿನ ನಾನು ತುಂಬ ದುಃಖಿತನಾಗಿದ್ದೆ. ಏನನ್ನೂ ಸರಿಯಾಗಿ ಹೇಳುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಆದರೆ ನಾನು ನನಗೆ ಗೊತ್ತಿರುವ ಒಬ್ಬರಿಂದ ಒಂದು ದೂರನ್ನು ಕೈಯಲ್ಲಿ ಬರೆಯಿಸಿ ಆ ದೂರಿಗೆ ನಾನು ಸಹಿ ಮಾಡಿರುತ್ತೇನೆ. ನಾನು ಸಹಿ ಮಾಡುವುದನ್ನು ಮಾತ್ರ ಕಲಿತಿರುತ್ತೇನೆ. ಓದಲು, ಬರೆಯಲು ಬರುವುದಿಲ್ಲ. ಆದರೆ ಪೊಲೀಸ್‌ನವರು ನಾನು ನೀಡಿದ್ದ ದೂರನ್ನು ಮರೆಮಾಚಿ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನಾಸ್ಪದ ವ್ಯಕ್ತಿಗಳನ್ನು ಕಾಪಾಡುವ ಸಲುವಾಗಿ ಅಮಾಯಕನಾದ ನನಗೆ ಮೋಸ ಮಾಡಿರುತ್ತಾರೆ” ಎಂದು ಮುತ್ತುರಾಯಪ್ಪ ಆರೋಪಿಸುತ್ತಾರೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ದಲಿತರ ಹತ್ಯೆ ಪ್ರಕರಣ: ಅನುಮಾನಕ್ಕೆ ಆಸ್ಪದ ನೀಡಿದ ತನಿಖಾಧಿಕಾರಿಗಳ ಜಾತಿ, ಹಿನ್ನೆಲೆ; ಆರೋಪ

ಕುಟುಂಬ ಏನು ಹೇಳುತ್ತದೆ? ಆರೋಪಿಗಳು ಯಾರು?

ಮಹಾಲಕ್ಷ್ಮಮ್ಮ- ಮುತ್ತುರಾಯಪ್ಪ ಜಕ್ಕೇನಹಳ್ಳಿ ಗ್ರಾಮದ ದಂಪತಿ. ಇವರಿಗೆ ಮೂರು ಜನ ಹೆಣ್ಣು ಮಕ್ಕಳು. ಒಬ್ಬ ಗಂಡು ಮಗ. ಮೂವರು ಹೆಣ್ಣುಮಕ್ಕಳಲ್ಲಿ ನಡುಮಧ್ಯೆಯವರಾದ ಮುತ್ತಮ್ಮ ಅವರು ಜಕ್ಕೇನಹಳ್ಳಿಯ ಗ್ರಾಮದ ಒಕ್ಕಲಿಗ ಜಾತಿಯ ನಾಗರಾಜ್‌ (ಕೆಎಸ್‌ಆರ್‌ಟಿಸಿ ಡ್ರೈವರ್‌) ಎಂಬವರನ್ನು ಸುಮಾರು ಆರೇಳು ವರ್ಷಗಳ ಹಿಂದೆ ಮದುವೆಯಾಗುತ್ತಾರೆ. ನಾಗರಾಜ್‌- ಮುತ್ತಮ್ಮ ಕುಟುಂಬ ತುಮಕೂರಿನಲ್ಲೇ ವಾಸವಿತ್ತು.

ನಾಗರಾಜ್‌ ಅವರ ಬಾಮೈದ ಬಸವರಾಜನು ಮುತ್ತುರಾಜನ ಜೊತೆ ಆಗಾಗ್ಗೆ ಜಗಳವಾಡುತ್ತಿದ್ದನು. “ನಿಮ್ಮಕ್ಕ ನಮ್ಮ ಭಾವನನ್ನು ಮದುವೆಯಾದ ಕಾರಣ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ” ಎಂದು ತಕರಾರು ತೆಗೆಯುತ್ತಿದ್ದನು. ಮುತ್ತರಾಜ ತನ್ನ ಅಕ್ಕನಲ್ಲಿ ಹೋಗಿ, “ಆಗಿದ್ದು ಆಗಿಹೋಯಿತು. ನಾನು ನಿನ್ನನ್ನು ಸಾಕಿಕೊಳ್ಳುತ್ತೇನೆ. ನಮ್ಮ ಮನೆಗೆ ಬಂದು ಬಿಡು” ಎಂದು ಕೇಳಿಕೊಂಡಿದ್ದ. ಅವರು ಬಂದಿರಲಿಲ್ಲ.

ಕೊಲೆಯಾಗುವ ಸಮಯದಲ್ಲಿ ಜಕ್ಕೇನಹಳ್ಳಿಯಲ್ಲಿ ಜಾತ್ರೆ ಇತ್ತು. ಅದಕ್ಕೂ ಐದಾರು ದಿನಗಳ ಮುಂಚೆ ಬಸವರಾಜನು ಮುತ್ತುರಾಜನೊಂದಿಗೆ ಚೆನ್ನಾಗಿ ಹೊಂದಾಣಿಕೆಯಿಂದ ಇದ್ದನು. ಏಪ್ರಿಲ್‌ 28ರ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯ ಬಳಿ ಬಂದ ಬಸವರಾಜ, ಮುತ್ತುರಾಜರನ್ನು ಕರೆದುಕೊಂಡು ಹೋಗುತ್ತಾನೆ. ಮುತ್ತುರಾಜ ಟವೆಲ್‌ ಧರಿಸಿದ್ದರು. ಸಂಜೆ ವೇಳೆಗೆ ಮತ್ತೆ ಒಬ್ಬನೇ ಮರಳಿದ ಬಸವರಾಜನು ಮುತ್ತುರಾಜನ ಟವೆಲ್ ವಾಪಸ್‌ ತಂದಿರುತ್ತಾನೆ. “ಟವಲ್‌ ಮಾತ್ರ ತಂದಿದ್ದೀಯ. ನಮ್ಮ ಹುಡುಗ ಎಲ್ಲೋ” ಎಂದು ಮಹಾಲಕ್ಷ್ಮಮ್ಮ  ಕೇಳುತ್ತಾರೆ. ಆದರೆ ಆತ, “ನನಗೆ ಮಾಹಿತಿ ಇಲ್ಲ” ಎಂದು ಹೇಳುತ್ತಾನೆ.

ಮುತ್ತುರಾಯಪ್ಪನವರ ಹೆಂಡತಿ ಮಹಾಲಕ್ಷ್ಮಮ್ಮ ತುಮಕೂರಿನ ನರಸಿಂಹಯ್ಯ ಆಸ್ಪತ್ರೆಯಲ್ಲಿ ಸ್ಲೀಪರ್‌ ಕೆಲಸ ಮಾಡುತ್ತಿದ್ದು, ರಾತ್ರಿ ಪಾಳಿಗೆಂದು ಅಂದು ಸಂಜೆ ಹೋಗಿರುತ್ತಾರೆ. ಬೆಳಿಗ್ಗೆ ವಾಪಸ್‌ ಮನೆಗೆ ಮರಳಿದಾಗ ಅವರಿಗೆ ಕೆಟ್ಟ ಸುದ್ದಿ ಕಾದಿರುತ್ತದೆ.

ಪೊಲೀಸರು ಬಂದು ಹೆಣವನ್ನು ಶವಾಗಾರಕ್ಕೆ ತೆಗೆದುಕೊಂಡು ಹೋಗುತ್ತಾರೆ. ಮರಣೋತ್ತರ ಪರೀಕ್ಷೆಯ ನಂತರ ಹೆಣವನ್ನು ಕುಟುಂಬಕ್ಕೆ ಹಸ್ತಾಂತರಿಸುತ್ತಾರೆ. ರಾತ್ರಿ ಅಂತ್ಯಸಂಸ್ಕಾರ ನಡೆಯುತ್ತದೆ. ಅಂದು ಹತ್ತು ಗಂಟೆಯ ಸಮಯದಲ್ಲಿ ನಾಗರಾಜ್‌ (ಮುತ್ತಮ್ಮನ ಗಂಡ) ಕುಡಿದ ಮತ್ತಲ್ಲಿ- “ನಾವೇ ಕೊಲೆ ಮಾಡಿದ್ದೀವಿ” ಎಂದು ಹೇಳಿದ್ದರು ಎಂದು ಕುಟುಂಬ ಆರೋಪಿಸುತ್ತದೆ.

ಎಸ್‌ಪಿಗೆ ದೂರು

ನ್ಯಾಚುರಲ್‌ ಡೆತ್‌ ಎಂದು ಹೇಳಲಾಗುತ್ತಿತ್ತು. ಆದರೆ ಕುಟುಂಬ ಇದನ್ನು ಒಪ್ಪಲಿಲ್ಲ. ವಿಷಯ ಅರಿತ ದಲಿತ ಸಂಘರ್ಷ ಸಮಿತಿ ಮುಖಂಡರು ಪ್ರಕರಣವನ್ನು ಮುಚ್ಚಿ ಹಾಕಲು ಬಿಡಲಿಲ್ಲ. ಮೇ 7ರಂದು ಎಸ್‌ಪಿಗೆ ವಿಷಯ ತಿಳಿಸಿದರು. ಬಳಿಕ ಮೇ 18ರಂದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮರು ದೂರು ನೀಡಿದ ಬಳಿಕ ಪ್ರಕರಣದ ದಾಖಲಾಗುತ್ತದೆ.

ಇದನ್ನೂ ಓದಿರಿ: ಪೆದ್ದನಹಳ್ಳಿ ಪ್ರಕರಣ: ಇಬ್ಬರು ದಲಿತ ಯುವಕರ ಹತ್ಯೆಯ ಸುತ್ತ ಎಷ್ಟೊಂದು ಸಂಕಟ!

“ನನ್ನ ಮಗನಿಗೆ ಈಜಲು ಬರುತ್ತಿತ್ತು. ಒಕ್ಕಲಿಗ ಜನಾಂಗಕ್ಕೆ ಸೇರಿದ ಬಸವರಾಜು ಮತ್ತು ಆತನ ಸ್ನೇಹಿತರು ಸೇರಿ ನನ್ನ ಮಗನಾದ ಮುತ್ತುರಾಜನನ್ನು ಕೊಲೆ ಮಾಡಿ ನಾಲೆಗೆ ಹಾಕಿರುತ್ತಾರೆ” ಎಂದು ಮುತ್ತುರಾಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. ಐಪಿಸಿ ಹಾಗೂ ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟ ಡಿವೈಎಸ್‌ಪಿಯವರನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ಮಾಹಿತಿ ನೀಡಲು ನಿರಾಕರಿಸಿದ ಅವರು, ಎಸ್‌ಪಿಯವರನ್ನು ಸಂಪರ್ಕಿಸಿ ಎಂದು ಪ್ರತಿಕ್ರಿಯಿಸಿದರು.

“ಇಷ್ಟೆಲ್ಲ ಆದ ಮೇಲೆ, ಪ್ರಕರಣ ಏನಾಯಿತೆಂಬ ಮಾಹಿತಿ ದೊರಕುತ್ತಿಲ್ಲ. ಅವರಿವರಲ್ಲಿಗೆ ಓಡಾಡಲು ನಮ್ಮ ಬಳಿ ದುಡ್ಡು-ಕಾಸು ಇಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ತಪ್ಪಿತಸ್ಥರ ಬಂಧನವಾಗಿದೆಯೋ ಇಲ್ಲವೋ ಗೊತ್ತಿಲ್ಲ” ಎಂದು ಕುಟುಂಬ ಸದಸ್ಯರು ದುಃಖಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...