ರಾಜ್ಯ ಸರ್ಕಾರ ನಡೆಸಿರುವ ‘ಪಠ್ಯಪುಸ್ತಕ ಹಗರಣ’ವನ್ನು ವಿರೋಧಿಸಿ ಜೂನ್ 18ರ ಶನಿವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನಾ ರ್ಯಾಲಿಯ ಮುನ್ನವಾಗಿ ‘#ನಾಡದ್ರೋಹಿBJPಸರ್ಕಾರ’, ‘#BoycottRSStextbooks’ ಹ್ಯಾಷ್ಟ್ಯಾಗ್ಗಳು ಟ್ವಿಟರ್ನಲ್ಲಿ ಟ್ರೆಂಡ್ ಆಗಿವೆ.
ಈ ಹ್ಯಾಷ್ಟ್ಯಾಗ್ನಲ್ಲಿ ಸಾವಿರಾರು ಟ್ವೀಟ್ಗಳನ್ನು ಮಾಡಲಾಗಿದೆ.
ಈ ಕುರಿತು ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ಸರಣಿ ಟ್ವೀಟ್ಗಳನ್ನು ಮಾಡಿದ್ದು, “ಒಂದು ವೇಳೆ ಸರ್ಕಾರ ಕೂಡಲೇ ಪರಿಷ್ಕೃತ ಪಠ್ಯಗಳನ್ನು ಹಿಂದಕ್ಕೆ ಪಡೆಯದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಇಡೀ ರಾಜ್ಯದ ಶಾಂತಿ ಕದಡಿ ಹೋಗುತ್ತದೆ. ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಜನರನ್ನು ಎದುರುಹಾಕಿಕೊಂಡ ಸರ್ಕಾರಗಳು ಉಳಿಯುವುದಿಲ್ಲ. ಇದನ್ನು ಮರೆಯಬೇಡಿ” ಎಂದು ಎಚ್ಚರಿಸಿದ್ದಾರೆ.
ಒಂದು ವೇಳೆ ಸರ್ಕಾರ ಕೂಡಲೇ ಪರಿಷ್ಕೃತ ಪಠ್ಯಗಳನ್ನು ಹಿಂದಕ್ಕೆ ಪಡೆಯದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಇಡೀ ರಾಜ್ಯದ ಶಾಂತಿ ಕದಡಿ ಹೋಗುತ್ತದೆ. ಅದರ ಹೊಣೆಯನ್ನು ಸರ್ಕಾರವೇ ಹೊರಬೇಕಾಗುತ್ತದೆ. ಜನರನ್ನು ಎದುರುಹಾಕಿಕೊಂಡ ಸರ್ಕಾರಗಳು ಉಳಿಯುವುದಿಲ್ಲ. ಇದನ್ನು ಮರೆಯಬೇಡಿ.#ನಾಡದ್ರೋಹಿBJPಸರ್ಕಾರ#BoykottRSSTextBooks
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 17, 2022
“ಬಸವಣ್ಣ, ಅಲ್ಲಮಪ್ರಭು, ವಾಲ್ಮೀಕಿ, ಕನಕದಾಸ, ಪುರಂದರದಾಸ, ಶಂಕರಾಚಾರ್ಯ, ಶಿಶುನಾಳ ಶರೀಫ, ಕುವೆಂಪು ಮೊದಲುಗೊಂಡು ಕರ್ನಾಟಕದ ದಾರ್ಶನಿಕರು, ಸಂತರಿಗೆ ಪರಿಷ್ಕೃತ ಪಠ್ಯದಲ್ಲಿ ಅಪಮಾನಿಸಲಾಗಿದೆ. ಕನ್ನಡತನ, ಕನ್ನಡಾಭಿಮಾನಕ್ಕೆ ಕುತ್ತು ತರಲಾಗಿದೆ. ಇದನ್ನು ಒಪ್ಪಿಕೊಳ್ಳುವುದು ಸಾಧ್ಯವೇ ಇಲ್ಲ” ಎಂದಿದ್ದಾರೆ.
ವಿಶ್ವಮಾನವ, ಕ್ರಾಂತಿಕಾರಿ, ಮಹಾಕವಿ ಕುವೆಂಪು ಹೋರಾಟ ಸಮಿತಿ ಜೂನ್ 18ರಂದು ಏರ್ಪಡಿಸಿರುವ ಬೃಹತ್ ಪ್ರತಿಭಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಬೆಂಬಲಿಸುತ್ತದೆ ಮತ್ತು ವೇದಿಕೆಯ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಸರ್ಕಾರ ಕೂಡಲೇ ಪರಿಷ್ಕೃತ ಪಠ್ಯಪುಸ್ತಕಗಳನ್ನು ಹಿಂದಕ್ಕೆ ಪಡೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸುತ್ತದೆ. pic.twitter.com/EI3jkrvrFb
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) June 14, 2022
ಬಿಟ್ಟಿ ಉಪದೇಶ ಹೇಳುವುದು, ಹಿಂದೂ ನಾವೆಲ್ಲ ಒಂದು 10 ಜನ ಪಠ್ಯಪುಸ್ತಕ ಸಮಿತಿ ಸದಸ್ಯರಲ್ಲಿ 9 ಜನ ಬ್ರಾಹ್ಮಣರು.
ಬೇರೆ ಜಾತಿಯಲ್ಲಿ ಶಿಕ್ಷಣ ತಜ್ಞರು ಇಲ್ಲವೇ!? ಬೇರೆ ಜಾತಿಯವರೆಲ್ಲಾ ದಡ್ಡರೂ ಅನ್ನುವ ಭಾವನೆ ಬಿಜೆಪಿಗರದ್ದೇ!?#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/DzwY4J3qLD— ಬೆಳಗಾವಿ ರಾಯಣ್ಣ (@3HmuQVowFNEGMjc) June 17, 2022
“ನಾಡ ದ್ರೋಹಿ ಕಪಟಿಗಳ ವಿರುದ್ಧ ನಡೆಯಲಿರುವ ನಾಳಿನ ಹೋರಾಟ ಪಕ್ಷಾತೀತವಾದದ್ದು. ಸರ್ವ ಜಾತಿ ಜನಾಂಗಗಳ ಹೋರಾಟ. ಬನ್ನಿ ಕೈ ಜೋಡಿಸಿ. ನಾಡ ರಕ್ಷಣೆಗೆ ಮುಂದಾಗಿ” ಎಂದು ಕಾಂಗ್ರೆಸ್ ನಾಯಕ ಪ್ರಕಾಶ್ ರಾಥೋಡ್ ಮನವಿ ಮಾಡಿದ್ದಾರೆ.
“ಬಸವಣ್ಣ ಅವರ ಬಗ್ಗೆ ಪರಿಷ್ಕೃತ ಪಠ್ಯದಲ್ಲಿ ಬರೆದಿರುವ ಮಾಹಿತಿ ತಪ್ಪು ಗ್ರಹಿಕೆಯಿಂದ ಕೂಡಿವೆ. ಸಂಸ್ಕೃತ ತೊರೆದು ಕನ್ನಡದ ಮೂಲಕ ದೇವರನ್ನು ಪೂಜಿಸುವ ಬಗೆ ತೋರಿದ್ದು ಬಸವಣ್ಣ. ವೀರಶೈವ ಮತ ಅಭಿವೃದ್ದಿ ಪಡಿಸಲಿಲ್ಲ ಬದಲಾಗಿ ವೈದಿಕ ಧರ್ಮಕ್ಕೆ ವಿರುದ್ಧವಾಗಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು” ಎಂದು ಹಿರಿಯ ಪತ್ರಕರ್ತ ಬಸವರಾಜು ತಿಳಿಸಿದ್ದಾರೆ.
ಬಸವಣ್ಣ ಅವರ ಬಗ್ಗೆ ಪರಿಷ್ಕೃತ ಪಠ್ಯದಲ್ಲಿ ಬರೆದಿರುವ ಮಾಹಿತಿ ತಪ್ಪು ಗ್ರಹಿಕೆಯಿಂದ ಕೂಡಿವೆ.ಸಂಸ್ಕೃತ ತೊರೆದು ಕನ್ನಡದ ಮೂಲಕ ದೇವರನ್ನು ಪೂಜಿಸುವ ಬಗೆ ತೋರಿದ್ದು ಬಸವಣ್ಣ. ವೀರಶೈವ ಮತ ಅಭಿವೃದ್ದಿ ಪಡಿಸಲಿಲ್ಲ ಬದಲಾಗಿ ವೈದಿಕ ಧರ್ಮಕ್ಕೆ ವಿರುದ್ಧವಾಗಿ ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು #ನಾಡದ್ರೋಹಿBJPಸರ್ಕಾರ#BoycottRSStextbooks
— basavaraju (@crpatna) June 17, 2022
“ಬಿಟ್ಟಿ ಉಪದೇಶ ಹೇಳುವುದು, ಹಿಂದೂ ನಾವೆಲ್ಲ ಒಂದು. 10 ಜನ ಪಠ್ಯಪುಸ್ತಕ ಸಮಿತಿ ಸದಸ್ಯರಲ್ಲಿ 9 ಜನ ಬ್ರಾಹ್ಮಣರು. ಬೇರೆ ಜಾತಿಯಲ್ಲಿ ಶಿಕ್ಷಣ ತಜ್ಞರು ಇಲ್ಲವೇ!? ಬೇರೆ ಜಾತಿಯವರೆಲ್ಲಾ ದಡ್ಡರೂ ಅನ್ನುವ ಭಾವನೆ ಬಿಜೆಪಿಗರದ್ದೇ!?” ಎಂದು ‘ಬೆಳಗಾವಿ ರಾಯಣ್ಣ’ ಹೆಸರಿನ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
“ಟಿಪ್ಪು ಚರಿತ್ರೆ ತಿರುಚಿದ್ರು, ಸಂತ ಶರೀಫರನ್ನು ಆಚೆ ಇಟ್ರು, ಆಗ ಇದು ಸಾಬರ ವಿಷಯ ಅಂತ ಸುಮ್ನಾದ್ರು. ಈಗ ನಾರಾಯಣ ಗುರುಗಳ ವಿಷಯ ಬಂದಾಗ ಒಕ್ಕಲಿಗರು ಸುಮ್ನಾದ್ರೆ ನಾಳೆ ಕೆಂಪೇಗೌಡ ಬೆಂಗಳೂರು ಕಟ್ಟೆ ಇಲ್ಲ ಅಂತಾರೆ” ಎಂದು ಕನ್ನಡ ಕುಡಿ ಟ್ವಿಟರ್ ಖಾತೆ ಅಭಿಪ್ರಾಯಪಟ್ಟಿದೆ.
ಟಿಪ್ಪು ಚರಿತ್ರೆ ತಿರುಚಿದ್ರು, ಸಂತ ಶರೀಫರನ್ನು ಆಚೆ ಇಟ್ರು, ಆಗ ಇದು ಸಾಬರ ವಿಷಯ ಅಂತ ಸುಮ್ನಾದ್ರು. ಈಗ ನಾರಾಯಣ ಗುರುಗಳ ವಿಷಯ ಬಂದಾಗ ವೊಕ್ಕಲಿಗರು ಸುಮ್ನಾದ್ರೆ ನಾಳೆ ಕೆಂಪೇಗೌಡ ಬೆಂಗಳೂರು ಕಟ್ಟೆ ಇಲ್ಲ ಅಂತಾರೆ @BSBommai #ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/3lQAsCHeGc
— ಕನ್ನಡ ಕುಡಿ – Kannada Kudi (@KannadaKudi) June 17, 2022
“ಸಾವಿತ್ರಿಬಾಯಿಫುಲೆ ಸೇರಿ ಮಹಿಳಾ ಸಮಾಜ ಸುಧಾರಕಿಯರ ಪಠ್ಯ ಕೈಬಿಟ್ಟ ಮಹಿಳಾ ವಿರೋಧಿ ಸರ್ಕಾರಕ್ಕೆ ಧಿಕ್ಕಾರ” ಎಂದು ಜೆ.ಎಸ್.ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಸಾವಿತ್ರಿಬಾಯಿಫುಲೆ ಸೇರಿ ಮಹಿಳಾ ಸಮಾಜ ಸುಧಾರಕಿಯರ ಪಠ್ಯ ಕೈಬಿಟ್ಟ ಮಹಿಳಾ ವಿರೋಧಿ ಸರ್ಕಾರಕ್ಕೆ ಧಿಕ್ಕಾರ#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/2W0sysiZQ0
— Dr J S Patil (@JagadishSPatil2) June 17, 2022
#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/Dkx3KWk3Qn
— Dr J S Patil (@JagadishSPatil2) June 17, 2022
“ಪದೇ ಪದೇ ನಾರಾಯಣಗುರುಗಳಿಗೆ ಅವಮಾನ ಮಾಡುವ ಮೂಲಕ ಬಿಜೆಪಿ ಸರ್ಕಾರ ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಜನಾಕ್ರೋಶದ ಕಟ್ಟೆಯೊಡೆದರೆ ಬಿಜೆಪಿಗೆ ಉಳಿಗಾಲವಿಲ್ಲ ಎನ್ನುವುದನ್ನು ಜೂನ್ 18ರ ಪ್ರತಿಭಟನೆಯಲ್ಲಿ ತೋರಿಸೋಣ” ಎಂದು ಉಮ್ಮರ್ ಬ್ಯಾರಿ ಸಾಲೆತ್ತೂರು ಹೇಳಿದ್ದಾರೆ.
ಪದೇ ಪದೇ ನಾರಾಯಣಗುರುಗಳಿಗೆ ಅವಮಾನ ಮಾಡುವ ಮೂಲಕ ಬಿಜೆಪಿ ಸರ್ಕಾರ ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಜನಾಕ್ರೋಶದ ಕಟ್ಟೆಯೊಡೆದರೆ ಬಿಜೆಪಿಗೆ ಉಳಿಗಾಲವಿಲ್ಲ ಎನ್ನುವುದನ್ನು ಜೂನ್ 18ರ ಪ್ರತಿಭಟನೆಯಲ್ಲಿ ತೋರಿಸೋಣ. #ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/9zDdJqPUzx
— ಉಮ್ಮರ್ ಬ್ಯಾರಿ ಸಾಲೆತ್ತೂರು/Ummar salethur (@USalathur) June 17, 2022
“ತ್ಯಾಗ ಬಲಿದಾನಗಳಿಂದ ಕಟ್ಟಿದ ಈ ದೇಶವನ್ನು ಕೋಮುವಾದದಿಂದ ಉಳಿಸೋಣ..ನಾಳೆ ಜತೆಯಾಗಿ ನಡೆಯೋಣ.ನಮ್ಮವಿರೋಧವನ್ನು ದಾಖಲಿಸೋಣ” ಎಂದು ಗುಲಾಬಿ ಬಿಳಿಮಲೆಯವರು ತಿಳಿಸಿದ್ದಾರೆ.
ತ್ಯಾಗ ಬಲಿದಾನಗಳಿಂದ ಕಟ್ಟಿದ ಈ ದೇಶವನ್ನು ಕೋಮುವಾದದಿಂದ ಉಳಿಸೋಣ..ನಾಳೆ ಜತೆಯಾಗಿ ನಡೆಯೋಣ.ನಮ್ಮವಿರೋಧವನ್ನು ದಾಖಲಿಸೋಣ#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/rTYKwf7g0L
— Gulabi Bilimale (@GBilimale) June 17, 2022
“ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಾವಿರ ಕಂಬಗಳ ಬಸದಿ, ಧರ್ಮಸ್ಥಳ ಮಂಜುನಾಥ ದೇವಾಲಯ, ಉಲ್ಲಾಳ ಜುಮ್ಮಾ ಮಸೀದಿ, ಸಂತ ಅಲೋಸಿಯಸ್ ಚರ್ಚ್ ಕುರಿತ ಮಾಹಿತಿ ಕೈಬಿಟ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ” ಮಧು ಕರೆಡೇವು ಕರವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಾವಿರ ಕಂಬಗಳ ಬಸದಿ, ಧರ್ಮಸ್ಥಳ ಮಂಜುನಾಥ ದೇವಾಲಯ, ಉಲ್ಲಾಳ ಜುಮ್ಮಾ ಮಸೀದಿ, ಸಂತ ಅಲೋಸಿಯಸ್ ಚರ್ಚ್ ಕುರಿತ ಮಾಹಿತಿ ಕೈಬಿಟ್ಟ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/QI6KwonDLg
— ಮಧು ಕರಡೇವು ಕರವೇ (@KardevMadhu) June 17, 2022
“ಇಂಥ ಕನ್ನಡ ದ್ರೋಹಿಯನ್ನು ಪೋಷಿಸುತ್ತಿರುವ ಬಿಜೆಪಿ ಅಧಿಕಾರಕ್ಕೆ ಮತ್ತೆ ಬರದಿರಲಿ” ಎಂದು ಮನು ಟ್ವೀಟ್ ಎಚ್ಚರಿಸಿದ್ದಾರೆ.
ಇಂತ ಕನ್ನಡ ದ್ರೋಹಿಯನ್ನ ಪೋಷಿಸುತ್ತಿರುವ ಇಂತ ನಾಡಾದ್ರೋಹಿ @BJP4Karnataka ಪಕ್ಷ ಇನ್ನು ಮುಂದೆ ಕರ್ನಾಟಕದಲ್ಲಿ ಬರದಿರಲಿ.#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/SOiQSRM5BU
— ಮನು🧡❤ (@MANOJHR11) June 17, 2022
“ಬುದ್ದ, ಕುವೆಂಪು, ಬಸವಣ್ಣ, ಅಂಬೇಡ್ಕರ್, ಕನ್ನಡ ನಾಡು, ನುಡಿ, ಬಾವುಟ, ಪ್ರಾದೇಶಿಕತೆಯ ಬಗ್ಗೆ ಕೀಳಾಗಿ ಮಾತನಾಡಿದ ಚಕ್ರತಿರ್ಥನ ಬಂಧನವಾಗಲಿ” ಎಂದು ದಿನೇಶ್ ದೊಡ್ಡಮನೆ ಆಗ್ರಹಿಸಿದ್ದಾರೆ.
ಬುದ್ದ, ಕುವೆಂಪು, ಬಸವಣ್ಣ, ಅಂಬೇಡ್ಕರ್, ಕನ್ನಡ ನಾಡು, ನುಡಿ, ಬಾವುಟ, ಪ್ರಾದೇಶಿಕತೆಯ ಬಗ್ಗೆ ಕೀಳಾಗಿ ಮಾತನಾಡಿದ ಚಕ್ರತಿರ್ಥನ ಬಂದನ ಮತ್ತು ಗಡಿಪಾರಾಗಲಿ, ಅವನು ಪರಿಷಿಲಿಸಿದ ಪಠ್ಯ ತಿಪ್ಪೆಗೆ ಹೋಗಲಿ.#ನಾಡದ್ರೋಹಿBJPಸರ್ಕಾರ#BoycottRSStextbooks pic.twitter.com/xGMkiteDC4
— Dinesh Doddamane (@DoddamaneDinesh) June 17, 2022
“ಪದೇ ಪದೇ ನಾರಾಯಣಗುರುಗಳಿಗೆ ಅವಮಾನ ಮಾಡುವ ಮೂಲಕ ಬಿಜೆಪಿ ಸರ್ಕಾರ ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದೆ. ಜನಾಕ್ರೋಶದ ಕಟ್ಟೆಯೊಡೆದರೆ ಬಿಜೆಪಿಗೆ ಉಳಿಗಾಲವಿಲ್ಲ ಎನ್ನುವುದನ್ನು ಜೂನ್ 18ರ ಪ್ರತಿಭಟನೆಯಲ್ಲಿ ತೋರಿಸೋಣ” ಎಂದು ‘ಕೋಮುವಾದಿಗಳ ವಿರುದ್ಧ’ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
All right thinking people of Karnataka should join the protest rally in a big way tomorrow.The message should be loud and clear
ಕಳ್ಳ ದೋಚಿಕೊಂಡು ಹೋದ ಮ್ಯಾಲೆ ದಿಡ್ಡಿ ಬಾಗಿಲು ಹಾಕಿದರಂತೆ . ಹಂಗಾಯ್ತು ಇವರ ಬಾಳು…. ಪರಿಷ್ಕ್ರುತ ಪಠ್ಯಪುಸ್ತಕ ಈಗಾಗಲೇ ಮಕ್ಕಳ ಕೈ ಸೇರಿ ಆಗಿದೆ… ಭಾಜಪದವರು ಒಳಗೊಳಗೆ ಎಲ್ಲಾ ಶಾಲೆಗಳಿಗೆ ಕಳುಹಿಸಿಕೊಟ್ಟಿದ್ದಾರೆ… ಇವರು ಇವತ್ತು ಒಂದು ದಿನ ಹೋರಾಟ ಮಾಡಿ ಸುಮ್ಮನಾಗ್ತಾರೆ. ಎಲ್ಲಾರೂ ಒಂದೇ ಬಿಡಿ. ನಾ ಹೊಡದಂಗ ಮಾಡ್ತೀನಿ… ನೀ ಅತ್ತಂಗ ಮಾಡು ಹಾಗಯ್ತು ಇವರ ಬಾಳು
You are all opposing the revision of text book because the members of the committe are Brahmin. So your purpose is to oppose what ever Brahmins are doing. If you are really concerned then you must show before and after corrections and tell governament to reconsider it next year.
Nanu gauri as a responsible media must be fair to all caste and community.