Homeಕರ್ನಾಟಕದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ...

ದೇವನೂರ ಮಹದೇವ ಅವರ ಕಿರುಹೊತ್ತಿಗೆ ’ಆರ್‌ಎಸ್‌ಎಸ್- ಆಳ ಮತ್ತು ಅಗಲ’ದಿಂದ ಆಯ್ದ ಅಧ್ಯಾಯ; ಇಂದು, ವರ್ತಮಾನದಲ್ಲಿ…

- Advertisement -
- Advertisement -

ಇಂದು, ವರ್ತಮಾನದಲ್ಲಿ ಆರ್‌ಎಸ್‌ಎಸ್ ಸಂತಾನಗಳಲ್ಲಿ ಒಂದಾದ ಬಿಜೆಪಿಯು ಕೇಂದ್ರದಲ್ಲೂ, ಕೆಲವು ರಾಜ್ಯಗಳಲ್ಲೂ ಅಧಿಕಾರದ ಚುಕ್ಕಾಣಿ ಹಿಡಿದಿದೆ. ನಮ್ಮ ಕರ್ನಾಟಕದಲ್ಲೂ ಅಂತು ಇಂತು ಎಂತೊ ಒಟ್ಟಿನಲ್ಲಿ ಅಧಿಕಾರ ಹಿಡಿದಿದೆ. 1975ರ ತುರ್ತು ಪರಿಸ್ಥಿತಿ ಕಾಲದಲ್ಲಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಆಡಳಿತವನ್ನು ವಿರೋಧಿಸುವ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದ ಆಂದೋಲನದೊಳಗೆ ಜನಸಂಘ (ಬಿಜೆಪಿ) ನುಸುಳಿಕೊಂಡಿತು. ಅಂದಿನಿಂದ ಅದರ ಜಾಯಮಾನ ಬೇರೆಯೇ ಆಗಿಬಿಟ್ಟಿತು. ಸಮಾಜದಿಂದ ನಿರಾಕರಣೆಗೆ ಒಳಗಾಗಿದ್ದ ಬಿಜೆಪಿಯು ಸಮಾಜದಲ್ಲಿ ಒಪ್ಪಿತವಾಗತೊಡಗಿತು. ಆ ಸಮಯದಲ್ಲಿ ನೂತನವಾಗಿ ರೂಪಿತವಾಗುವ ಜನತಾ ಪಕ್ಷದಲ್ಲಿ ಸೇರ್ಪಡೆಯಾಗುವ ಮೊದಲು, ಜಯಪ್ರಕಾಶ್ ನಾರಾಯಣ್ ಅವರಿಗೆ ಅಂದಿನ ಆರ್‌ಎಸ್‌ಎಸ್ ಮುಖ್ಯಸ್ಥರೂ ಒಪ್ಪಿಗೆ ನೀಡಿ ಇಂದಿನ ಬಿಜೆಪಿಯಾಗಿರುವ ಅಂದಿನ ಜನಸಂಘವು, ತಾನು ದ್ವಿಸದಸ್ಯತ್ವ ತೊರೆಯುವುದಾಗಿ ವಚನ ನೀಡಿದ್ದವು. ಈ ಮಾತು ಕೊಟ್ಟವರಲ್ಲಿ ಎ.ಬಿ.ವಾಜಪೇಯಿ, ಎಲ್.ಕೆ. ಅದ್ವಾನಿಯವರೂ ಜೊತೆಗೆ ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾ ಸಾಹೇಬ ದೇವರಸ್ ಪ್ರಮುಖರು. ಇವರು ಎತ್ತರದ ನಾಯಕರು ಎಂದು ವಿಶ್ವಾಸವಿಟ್ಟಿದ್ದ ಜೆಪಿಯವರು ಅವರ ಮಾತುಗಳನ್ನು ನಂಬಿದ್ದರು. ಆದರೆ ಆರ್‌ಎಸ್‌ಎಸ್ ಮೂಲದವರು ಜನತಾಪಕ್ಷವಾಗಿ ಎಲ್ಲರ ಜೊತೆಯಾದರೂ ಆರ್‌ಎಸ್‌ಎಸ್‌ನೊಡನೆ ತನ್ನ ದ್ವಿಸದಸ್ಯತ್ವ ತೊರೆದುಕೊಳ್ಳಲಿಲ್ಲ. ವಚನಭ್ರಷ್ಟವಾಯ್ತು. ಜೆಪಿಯವರನ್ನು ನಂಬಿಸಿ ದ್ರೋಹ ಮಾಡಿತು. ಜಯಪ್ರಕಾಶ್ ನಾರಾಯಣ್ ಅವರು ತಮ್ಮ ಇಳಿಗಾಲದಲ್ಲಿ ಆರ್‌ಎಸ್‌ಎಸ್ ಮೂಲದವರ ದ್ರೋಹವನ್ನು ನೆನಪಿಸಿಕೊಂಡು ’ನನಗೆ ವಿಶ್ವಾಸದ್ರೋಹ ಬಗೆದರು’ ಎನ್ನುತ್ತ ಪರಿತಪಿಸುತ್ತಾರೆ. (1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣರನ್ನು ಚಂಡಿಗಢದಲ್ಲಿ ಗೃಹಬಂಧನದಲ್ಲಿಟ್ಟಿದ್ದಾಗ ಜೆಪಿಯವರನ್ನು ಗಮನಿಸುವ ಉಸ್ತುವಾರಿಯಾಗಿ ಅಲ್ಲಿನ ಜಿಲ್ಲಾಧಿಕಾರಿಗಳಾದ ಎಂ.ಜಿ.ದೇವಸಹಾಯಂ ಅವರನ್ನು ನೇಮಿಸಿರುತ್ತದೆ. ದಿನನಿತ್ಯದ ಒಡನಾಟದಲ್ಲಿ ಅವರು ಜೆಪಿಯವರ ಆತ್ಮೀಯರಾಗಿಬಿಡುತ್ತಾರೆ. ಬಿಡುಗಡೆಯಾದ ಮೇಲೂ ಅವರ ಒಡನಾಟ ಮುಂದುವರಿಯುತ್ತದೆ. ಶ್ರೀ ಎಂ.ಜಿ.ದೇವಸಹಾಯಂ ಅವರು ಅಜಾಜ್ ಅಶ್ರಫ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮೇಲ್ಕಂಡ ಉಲ್ಲೇಖಿತ ಮಾತುಗಳು ಬರುತ್ತವೆ. ಇದು ನ್ಯೂಸ್‌ಕ್ಲಿಕ್ ಅಂತರ್‌ಜಾಲ ಪತ್ರಿಕೆಯಲ್ಲಿ 26 ಜೂನ್, 2019ರಂದು ಪ್ರಕಟವಾಗಿದೆ.)

ಅಲ್ಲಿಂದ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಘಪರಿವಾರದ ವಂಚನಾ ಪರ್ವ ದೇಶದ ಉದ್ದಗಲಕ್ಕೂ ವ್ಯಾಪಿಸುತ್ತದೆ. ಪಾಕಿಸ್ತಾನವನ್ನು ಶಾಶ್ವತ ಶತ್ರುರಾಷ್ಟ್ರವಾಗಿ ಬಿಂಬಿಸುತ್ತ ಇಲ್ಲಿ ಸಣ್ಣಪುಟ್ಟ ಗಲಾಟೆಗಳಾದರೂ ಅದಕ್ಕೆಲ್ಲಾ ಪಾಕಿಸ್ತಾನವೇ ಕಾರಣವೆಂದು ಪ್ರಚಾರ ಮಾಡುತ್ತಾ, ಪರಸ್ಪರ ಎತ್ತಿಕಟ್ಟುತ್ತಾ, ಸಮಾಜದಲ್ಲಿ ಭೀತಿ ವಾತಾವರಣ ಉಂಟುಮಾಡುತ್ತಾ, ಕೆಲವು ಸಲ ತಾವೇ ಗಲಾಟೆ ಮಾಡಿ ಅದನ್ನು ಮುಸ್ಲಿಮರ ಮೇಲೆ ಆರೋಪಿಸುತ್ತಾ, ಒಟ್ಟಿನಲ್ಲಿ ಎಲ್ಲರ ನೆಮ್ಮದಿ ಕೆಡಿಸಿ ಉಂಟಾದ ಗೊಂದಲ, ಅನುಮಾನ, ದ್ವೇಷದ ವಾತಾವರಣದಲ್ಲಿ ಬಿಜೆಪಿ ಅಧಿಕಾರಕ್ಕೂ ಬಂದುಬಿಟ್ಟಿತು. ಈಗ, ನೂರಾರು ಪಂಥಗಳ, ನಾಕಾರು ಧರ್ಮಗಳ ವೈವಿಧ್ಯಮಯ ಸಮೃದ್ಧ ವಿಶಾಲ ಹಿಂದೂ ಧರ್ಮವೂ ಜಯಪ್ರಕಾಶ್ ನಾರಾಯಣ್‌ರಂತೆ ’ತಾನು ಮೋಸ ಹೋದೆ’ ಅಂತ ಪರಿತಪಿಸುವಂತಾಗಿದೆ.

ಜಯಪ್ರಕಾಶ್ ನಾರಾಯಣ್

ಬಿಜೆಪಿಯು ತಾನು ಅಧಿಕಾರಕ್ಕೆ ಬರುವ ಮೊದಲು, ಕೊಟ್ಟ ಮಾತುಗಳೆಷ್ಟು, ತೊಟ್ಟ ವೇಷಗಳೆಷ್ಟು? ಒಂದೇ? ಎರಡೆ? ವಿದೇಶಗಳಲ್ಲಿ ಭಾರತೀಯರು ಇಟ್ಟಿರುವ ಕಪ್ಪುಹಣ ತಂದು ಎಲ್ಲಾ ಭಾರತೀಯರ ಅಕೌಂಟ್‌ಗೆ 15 ಲಕ್ಷ ಹಾಕುತ್ತೇವೆ ಅಂದರು. ಸ್ವತಃ ಪ್ರಧಾನಿ ಮೋದಿಯವರೇ ಅಂದರು. ಯಾರಿಗೆ ಬಂತು? ಬಂದಿದ್ದರೆ ಎಲ್ಲಿಗೆ ಹೋಯಿತು? ಆಮೇಲೆ ಮೋದಿಯವರೇ ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸುತ್ತೇವೆಂದರು. ಎಂದೂ ಇಲ್ಲದಷ್ಟು ನಿರುದ್ಯೋಗ ಹೆಚ್ಚಿಸಿಬಿಟ್ಟರು! ಹೇಳುವವರು ಯಾರು? ಕೇಳುವವರು ಯಾರು? ರೈತರ ಆದಾಯವನ್ನು ದುಪ್ಪಟ್ಟುಗೊಳಿಸುತ್ತೇವೆಂದರು. ಇರುವ ಆದಾಯವನ್ನಾದರೂ ಉಳಿಯಗೊಡಿಸಲಿಲ್ಲ. ನೆಲಕಚ್ಚಿಸಿಬಿಟ್ಟರು. ಇವರು ಯಾವುದನ್ನೂ ಉಳಿಯಗೊಳಿಸುತ್ತಿಲ್ಲ. ಸಾರ್ವಜನಿಕ ಸಂಪತ್ತನ್ನು ಖಾಸಗಿಗೆ ಮಾರುತ್ತ ಬದುಕುತ್ತಿದ್ದಾರೆ. ವಿದೇಶಿ ಸಾಲವನ್ನೂ ಎಂದೂ ಇಲ್ಲದಷ್ಟು ಹೆಚ್ಚು ಮಾಡಿದ್ದಾರೆ. ಇದನ್ನೆಲ್ಲಾ ನೋಡಿದಾಗ ಇವರು ಮರಳಲ್ಲೆ ಮನೆಕಟ್ಟುತ್ತ ಬಣ್ಣದ ಮಾತುಗಳನ್ನು ಆಡುತ್ತ ಭಾರತವನ್ನು ಪಾಪರ್ ಮಾಡಿಬಿಡುತ್ತಾರೇನೊ ಅನ್ನಿಸಿಬಿಡುತ್ತದೆ. ಇವರ ಆಳ್ವಿಕೆಯಲ್ಲಿ ನಿರುದ್ಯೋಗ ಹೆಚ್ಚಾದರೂ ಇವರಿಗೆ ಸಮಸ್ಯೆ ಅಲ್ಲ; ಬೆಲೆ ಏರಿಕೆ ಹೆಚ್ಚಾದರೂ ಇವರಿಗೆ ಸಮಸ್ಯೆ ಅಲ್ಲ. ಜನಸಮುದಾಯಗಳ ನಡುವೆ ದ್ವೇಷದ ಕಿಡಿ ಹಚ್ಚಿ ಅದರಲ್ಲಿ ಜನ ಕುದಿಯುವಂತೆ ಮಾಡಿ ಅವರ ಹೊಟ್ಟೆಗೆ ದ್ವೇಷದ ಆಹಾರ ನೀಡಿ ಮಲಗಿಸುತ್ತಿದೆ- ಹೀಗಿದೆ ಇವರ ಆಳ್ವಿಕೆ. ಬಿಜೆಪಿಗೆ ಮತ ನೀಡಿ ಅವರನ್ನು ಅಧಿಕಾರದ ಗದ್ದುಗೆ ಮೇಲೆ ಕೂರಿಸಿದ ಮತದಾರರೂ ಇಂದು ಪರಿತಪಿಸಬೇಕಾಗಿದೆ.

ಇದಕ್ಕೆಲ್ಲಾ ಕಾರಣ, ಇಂದು ಭಾರತದಲ್ಲಿ ಪ್ರಜೆಗಳ ಪ್ರಭುತ್ವದ ಸ್ಥಿತಿಯು ಗತಿಗೆಟ್ಟಿದೆ. ಪ್ರಜೆಗಳಿಂದ ಆಯ್ಕೆಯಾದ ಪ್ರಜಾಪ್ರತಿನಿಧಿಯು ತನ್ನನ್ನು ಆಯ್ಕೆ ಮಾಡಿದ ಪ್ರಜೆಗಳ ಕಷ್ಟಸುಖಕ್ಕೆ ಹಿತಾಸಕ್ತಿಗೆ ನಿಷ್ಠನಾಗಿಲ್ಲ. ಇದಕ್ಕೆ ಕಾರಣ ಭಾರತದ ರಾಜಕೀಯ ಪಕ್ಷಗಳ ಚಹರೆ ನೋಡಿದರೆ, (1) ಏಕವ್ಯಕ್ತಿ ನಿಯಂತ್ರಿತ ಪಕ್ಷ ರಾಜಕಾರಣ (2) ಕುಟುಂಬ ನಿಯಂತ್ರಿತ ಪಕ್ಷ ರಾಜಕಾರಣ (3) ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷ ರಾಜಕಾರಣ, ಈ ಮೂರು ಬಗೆಯ ಪಕ್ಷಗಳು ಭಾರತದಲ್ಲಿ ಒಂದಲ್ಲಾ ಒಂದು ಕಡೆ ಆಳ್ವಿಕೆ ನಡೆಸುತ್ತಿವೆ. ಈ ಮೂರೂ ಪ್ರಜಾಪ್ರಭುತ್ವಕ್ಕೆ ಮಾರಕವಾದವುಗಳು. ದೇಶದ ಚುಕ್ಕಾಣಿಯನ್ನು ಮೂರನೆಯ ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷ ಬಿಜೆಪಿ ಹಿಡಿದಿದೆ. ಈ ಮೂರೂ ಪಕ್ಷಗಳಿಂದ ಆಯ್ಕೆಯಾದವರ ನಿಷ್ಠೆಯು ತನ್ನನ್ನು ಆಯ್ಕೆ ಮಾಡಿದ ಮತದಾರರ ಹಿತಕ್ಕಿಂತಲೂ ಹೆಚ್ಚಾಗಿ ತನ್ನ ಪಕ್ಷವನ್ನು ನಿಯಂತ್ರಿಸುವ ವ್ಯಕ್ತಿಗೆ/ಕುಟುಂಬಕ್ಕೆ ಇರುವಂತೆ, ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿಸುವ ಪಕ್ಷದ ಪ್ರಜಾಪ್ರತಿನಿಧಿಗಳ ನಿಷ್ಠೆ ಆ ಸಂವಿಧಾನೇತರ ಸಂಘಕ್ಕೇನೆ ಹೆಚ್ಚು ಇರುತ್ತದೆ. ಇದು ಪ್ರಜಾಪ್ರಭುತ್ವಕ್ಕೆ ಎಲ್ಲಕ್ಕಿಂತ ಹೆಚ್ಚು ಡೇಂಜರ್. ಇಂದು ಬಿಜೆಪಿಯ ಶಾಸಕ, ಸಂಸದ, ಸಚಿವರು ಅಥವಾ ಯಾವುದೇ ನಾಯಕನು ನಾ ಮುಂದು ತಾ ಮುಂದು ಎಂಬಂತೆ ತನ್ನ ಬಿಜೆಪಿಯ ರಾಜಕಾರಣವನ್ನು ನಿಯಂತ್ರಿಸುವ ಆರ್‌ಎಸ್‌ಎಸ್ ಮೆಚ್ಚಿಸಲು ಅಬ್ಬರಿಸುವುದಕ್ಕೆ ಇದಲ್ಲದೆ ಬೇರೆ ಕಾರಣ ಇರಲಾರದು!

ಇಲ್ಲಿ ಇನ್ನೊಂದು ಗಮನಿಸಬೇಕು. ಉದಾಹರಣೆಗೆ ಬಿಜೆಪಿಗೆ ಬಹುಮತ ತಂದು ಕೊಟ್ಟು ಪ್ರಧಾನಿಯಾದ ಮೋದಿಯವರು ಬಲಿಷ್ಠ ನಾಯಕರೆಂಬಂತೆ ಬಿಂಬಿತವಾಗುತ್ತಿದ್ದಾರೆ. ಆದರೆ ಇವರು ಉತ್ಸವಮೂರ್ತಿ ಅಷ್ಟೆ. ಆದರೆ ಮೂಲ ದೇವರಾದ ಆರ್.ಎಸ್.ಎಸ್ ನಾಗಪುರದ ಗುಡಿಯಲ್ಲಿ ಕೂತಿರುತ್ತಿತ್ತು. ಉತ್ಸವಮೂರ್ತಿ ದೇಶದ ಉದ್ದಗಲಕ್ಕೂ ವಿಜೃಂಭಿಸುತ್ತಿರುತ್ತದೆ. ಜೈ ಜೈ ಅನ್ನಿಸಿಕೊಳ್ಳುತ್ತಿರುತ್ತದೆ. ಉತ್ಸವಮೂರ್ತಿಗೆ ಬೇಕಾದ ಸಾಮರ್ಥ್ಯ ಎಂದರೆ ಪ್ರದರ್ಶನ ನೀಡುವ ಕಲೆಗಾರಿಕೆ ಹಾಗೂ ತನ್ನ ಆಳ್ವಿಕೆಯಲ್ಲಿ ಸಮಸ್ಯೆಗಳು ಉಲ್ಬಣವಾಗಿ ನಿಯಂತ್ರಣ ತಪ್ಪುತ್ತಿರುವಾಗ, ಅದನ್ನು ಭಾವನಾತ್ಮಕವಾಗಿ ತಿರುಗಿಸಿ ಮರೆಮಾಚುವ ಚಾಣಾಕ್ಷತನ ಹಾಗೂ ಜನರನ್ನು ಮರುಳು ಮಾಡುವ ಮೋಡಿ ವಿದ್ಯೆ ಹಾಗೂ ಗರ್ಭಗುಡಿ ದೇವರಿಗೆ ಪರಮ ನಿಷ್ಠೆ. ಇದಿಷ್ಟೆ ಬೇಕಾಗಿರುವುದು. ಇದಿಷ್ಟ ಅಲ್ಲವೇ ಇಂದು ಆಗುತ್ತಿರುವುದು? ಮತ್ತು ಇಂಥ ಕಡೆ ಪ್ರಜಾಪ್ರಭುತ್ವಕ್ಕೆ ಸಂಭವನೀಯ ಇನ್ನೊಂದು ದುರಂತವೆಂದರೆ, ಸಂವಿಧಾನೇತರ ಸಂಘ ನಿಯಂತ್ರಿತ ಪಕ್ಷದ ನಾಯಕತ್ವದ ಪಟ್ಟವು ಗರ್ಭಗುಡಿಯಲ್ಲಿರುವ ದೇವರು ಹೂ ಕೊಟ್ಟಂತೆ ನಿರ್ಧರಿಸಲ್ಪಡುತ್ತದೆ, ಎಲ್ಲವೂ ತೊಗಲುಗೊಂಬೆ ಆಟದಂತೆ! ಹಾಲಿ ನಾಟಕವಾಡುತ್ತಿರುವ ತೊಗಲುಗೊಂಬೆಗಿಂತಲೂ ಇನ್ನೊಂದು ಹೆಚ್ಚು ಬಣ್ಣದ, ಹೆಚ್ಚು ನಿಷ್ಠೆ ಅಥವಾ ರಾಜಕೀಯ ಬೇರಿಲ್ಲದ ಮತ್ತು ಕಡ್ಡಾಯವಾಗಿ ತಾಳಕ್ಕೆ ಕುಣಿಯುವ, ಹೆಚ್ಚು ಮರುಳು ಮಾಡುವ ಹೊಸ ತೊಗಲುಗೊಂಬೆ ಸಿಕ್ಕರೆ ಅದು ರಂಗಪ್ರವೇಶ ಮಾಡುತ್ತದೆ. ಅದು ನಾಯಕ ಆಗುತ್ತದೆ. ಮೊದಲು ನಾಯಕ ಆಟ ಆಡಿದ್ದು ಮೂಲೆಗೆ ಎಸೆಯಲ್ಪಡುತ್ತದೆ. ಪ್ರಜೆಗಳಿಂದ ಆಯ್ಕೆಯಾದವರ ಪರಿಸ್ಥಿತಿಯೆ ಹೀಗಾದರೆ? ಇದು ಘನಘೋರ. ಪ್ರಜಾಪ್ರಭುತ್ವಕ್ಕೆ ಇದೇ ಎಲ್ಲಕ್ಕಿಂತಲೂ ತುಂಬಾ ಅಪಾಯಕಾರಿ ಬೆಳವಣಿಗೆ.

ಕೊರೊನಾ ಉಲ್ಭಣ: ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ? | naanu gauriಇವೆಲ್ಲಾ ಕೂಡಿಕೊಂಡು ಜನಜೀವನ ಘನಘೋರವಾಗಿದೆ. ಸಂವಿಧಾನೇತರ ಸಂಘ/ಸಂಘಟನೆ ನಿಯಂತ್ರಿತ ಪಕ್ಷವಾದ ಬಿಜೆಪಿಯ ನೇತಾರ, ದೇಶದ ಪ್ರಧಾನಿಗೆ ಸಾಮರ್ಥ್ಯ ಇದ್ದಿದ್ದರೆ ನಿರುದ್ಯೋಗ ಕಮ್ಮಿ ಆಗುತ್ತಿತ್ತು. ಬೆಲೆ ಏರಿಕೆ ನಿಯಂತ್ರಣದಲ್ಲಿರುತ್ತಿತ್ತು. ಸಾರ್ವಜನಿಕ ಸಂಪತ್ತನ್ನು ಮಾರುತ್ತ ನಡೆಸುತ್ತಿರಲಿಲ್ಲ. ವಿದೇಶಿ ಸಾಲ ಹೆಚ್ಚು ಮಾಡುತ್ತಿರಲಿಲ್ಲ. ಭಾರತದ ಸ್ವಾಯತ್ತ ಸಂಸ್ಥೆಗಳ ಹಲ್ಲು, ಉಗುರು ಕಿತ್ತು ನಿಸ್ತೇಜಗೊಳಿಸುತ್ತಿರಲಿಲ್ಲ. ಪ್ರಧಾನಿ ಮೋದಿ ದುನಿಯಾದಲ್ಲಿ ಕೊರೊನಾಕ್ಕೆ ಮೊದಲು 2020ರಲ್ಲಿ ಅಂಬಾನಿಯವರ ಒಟ್ಟು ಸಂಪತ್ತು 2.86 ಲಕ್ಷ ಕೋಟಿ ಇತ್ತು. ಕೇವಲ ಎರಡೇ ವರ್ಷಗಳಲ್ಲಿ (ಜೂನ್ 10, 2022) ಅದು 8,03 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ! ಹೀಗೆಯ ಅದಾನಿಯವರ ಒಟ್ಟು ಸಂಪತ್ತು ಕೊರೋನಾಕ್ಕೆ ಮೊದಲು 2020ರಲ್ಲಿ 65 ಸಾವಿರ ಕೋಟಿಗಳಷ್ಟು ಇತ್ತು, ಅಂದರೆ ಅಣ್ಣ ಅಂಬಾನಿಯ ಸಂಪತ್ತಿನ ಕಾಲುಭಾಗದಲ್ಲಿ ಕಾಲು ಭಾಗವೂ ಇರಲಿಲ್ಲ! ಹೀಗಿದ್ದ ಅದಾನಿಯವರ ಸಂಪತ್ತು ಕೇವಲ ಎರಡು ವರ್ಷಗಳಲ್ಲಿ (ಜೂನ್ 10, 2022) 7.80 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. (ಉಲ್ಲೇಖ: FORBES Magazine) ಒಂದೇ ಎರಡೆ? ಭಾರತವು ಭೀಕರ ಅಸಮಾನತೆ, ಅಸಮತೋಲನಗಳಿಂದ ಸೂತ್ರ ಕಿತ್ತ ಪಟದಂತೆ ಗೋತ ಹೊಡೆಯುತ್ತಾ ಹಾರಾಡುತ್ತಿದೆ! ಆದರೂ ಸಂಪತ್ತು ಉಳ್ಳವರಿಗೆ ಸರ್ಕಾರದ ಎಲ್ಲಾ ರಿಯಾಯಿತಿ, ತೆರಿಗೆಯಲ್ಲೂ ಕಡಿತ, ಅವರ ಹಿಂತಿರುಗಿಸದ ಸಹಸ್ರಾರು ಕೋಟಿ ಸಾಲವನ್ನು Write off ಮಾಡಿ, ಅಂದರೆ ಅದು ಮುಂದೊಂದು ದಿನ ಬರುತ್ತದೆಂದು ಅದರ ಲೆಕ್ಕಾಚಾರವನ್ನು ಪಕ್ಕಕ್ಕಿಟ್ಟು ಮತ್ತೆ ಅವರಿಗೆ ಸಾಲಕ್ಕೆ ಅವಕಾಶ ಕಲ್ಪಿಸುವುದೇ ಮುಂತಾದವಕ್ಕೆ ಮಾತ್ರ ಈ ಸರ್ಕಾರ ಇದೆಯೇನೋ ಅನಿಸುತ್ತದೆ. ಈ ಸರ್ಕಾರ ಯಾರಿಗಾಗಿ ಇದೆ? ಇಡೀ ಭಾರತದ ಜನತೆ ಈಗ ತಲೆ ಮೇಲೆ ಕೈ ಹೊತ್ತು ಚಿಂತಿಸಬೇಕಾಗಿದೆ.

ಆದರೆ ಶತಾಯಗತಾಯ ಏನೇ ಆಗಲಿ, ಪ್ರಜೆಗಳು ಸಮಸ್ಯೆಗಳಿಂದ ತತ್ತರಿಸುತ್ತಿರಲಿ, ಏನೇ ಬರಲಿ, ಅಥವಾ ಏನೇ ಆಗಲಿ, ದೇಶ ಧೂಳೀಪಟವಾದರೂ ಸರಿಯೇ, ಸಂವಿಧಾನೇತರ ಸಂಘ ನಿಯಂತ್ರಿತ ಪಕ್ಷ ಬಿಜೆಪಿಯು ದೇಶಪ್ರೇಮ ಜಪಿಸುತ್ತ ತರುತ್ತಿರುವ ಕಾನೂನುಗಳೊ ತಿದ್ದುಪಡಿಗಳೊ ಅದರಲ್ಲಿ ಮಾತ್ರ ಚಾತುರ್ವರ್ಣ ಪದ್ಧತಿ, ಮನುಧರ್ಮಶಾಸ್ತ್ರ ನುಸುಳುವಿಕೆ, ಭಾರತ ಸಂವಿಧಾನದ ಧ್ವಂಸ, ಇಸ್ಲಾಂ, ಕ್ರಿಶ್ಚಿಯನ್ ಅಸಹನೆ, ಜೊತೆಗೆ ಆರ್ಯನ್ ಶ್ರೇಷ್ಠತೆ ಇವು ಇದ್ದಿರಲೇಬೇಕು. ಇವು ಹುಡುಕಿದರೆ ಸಿಗುತ್ತಾ ಹೋಗುತ್ತವೆ. ಈಗಾಗಲೇ, ಕರ್ನಾಟಕದಲ್ಲಿ ತಂದಿರುವ ’ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆ ಕಾಯ್ದೆ’ ಮೇಲ್ನೋಟಕ್ಕೆ ಇದು ಏನೋ ಒಂದು ಕಾಯ್ದೆ ಎಂಬಂತಿದೆ.ಇದರ ಹೊಟ್ಟೆ ಒಳಗೆ ಭಾರತ ಸಂವಿಧಾನದ ಧ್ವಂಸ ಹಾಗೂ ಮನುಧರ್ಮ ಶಾಸ್ತ್ರದ ಪ್ರತಿಷ್ಠಾಪನೆ ಇದೆ. ಸಂವಿಧಾನದ ಪ್ರಕಾರ ಇರುವ ಸ್ವಾತಂತ್ರ್ಯದ ಬಗ್ಗೆ ನಾವೆಲ್ಲರೂ ಮಾತಾಡುತ್ತೇವೆ. ಆದರೆ ಆರ್‌ಎಸ್‌ಎಸ್‌ಗೆ
’ಸ್ವಾತಂತ್ರ್ಯ’ದ ಅರ್ಥವೇ ಬೇರೆ. ಆರ್‌ಎಸ್‌ಎಸ್‌ನ ಗುರೂಜಿ ಗೋಲ್ವಾಲ್ಕರ್ ಅವರು ’ನಮ್ಮ ರಾಷ್ಟ್ರೀಯ ಜೀವನ ಮೌಲ್ಯ’ವನ್ನು, ಎಂದರೆ ನಮ್ಮ ’ಧರ್ಮ’ ಮತ್ತು ’ಸಂಸ್ಕೃತಿ’ಯನ್ನು ರಕ್ಷಿಸಿ ಪ್ರಸಾರ ಮಾಡುವುದೇ ’ಸ್ವತಂತ್ರ’ತೆಯ ಅಸ್ತಿತ್ವಕ್ಕೆ ’ಮೂಲ ಸ್ಫೂರ್ತಿ’ ಎಂಬುದು ನಮ್ಮ ಚಾರಿತ್ರಿಕ ಸಂಪ್ರದಾಯದ ದೃಷ್ಟಿ’ ಎಂದು ತಮ್ಮ ’ಚಿಂತನಗಂಗಾ’ ಕೃತಿಯಲ್ಲಿ ಹೇಳುತ್ತಾರೆ. ಆರ್‌ಎಸ್‌ಎಸ್ ಸಂತಾನ ಬಿಜೆಪಿಗೆ ಅವರ ಗುರು ಗೋಲ್ವಾಲ್ಕರ್ ಅವರ ಮಾತೇ ಸಂವಿಧಾನವಾಗಿದೆ.

ಗೌರಿ ಮೀಡಿಯಾ ಟ್ರಸ್ಟ್ ಪ್ರಕಟಿಸಿರುವ
ದೇವನೂರ ಮಹಾದೇವರವರ ಹೊಸ ಪುಸ್ತಕ
ಆರ್ ಎಸ್ ಎಸ್ – ಆಳ ಮತ್ತು ಅಗಲ
ಬೆಲೆ-40

ಪುಸ್ತಕ ಕೊಳ್ಳಲು ಲಿಂಕ್ ಮೇಲೆ ಕ್ಲಿಕ್ ಮಾಡಿ.

ಒಂದು ಪುಸ್ತಕ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ

10 ಪ್ರತಿಗಳ ಗುಚ್ಚ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ.

20 ಪ್ರತಿಗಳನ್ನು ಕೊಂಡು ಪ್ರೋತ್ಸಾಹಿಸಲು ಈ ಲಿಂಕ್ ಫಾಲೋ ಮಾಡಿ..

ದೇವನೂರ ಮಹದೇವ

ದೇವನೂರ ಮಹದೇವ
ಕನ್ನಡದ ಖ್ಯಾತ ಸಾಹಿತಿ. ’ಕುಸುಮಬಾಲೆ’, ’ಒಡಲಾಳ ಮತ್ತು ಇತರ ಕಥೆಗಳು’, ’ಎದೆಗೆ ಬಿದ್ದ ಅಕ್ಷರ’ ಪುಸ್ತಕಗಳ ಮೂಲಕ ಮನೆಮಾತಾಗಿದ್ದಾರೆ.


ಇದನ್ನೂ ಓದಿ: ಚೀನಾವೂ ಭಾರತಕ್ಕೆ ಸೇರಿತ್ತು; ಪಠ್ಯಕ್ಕೆ ನುಸುಳಿದೆ ‘ಆರ್‌ಎಸ್‌ಎಸ್‌ ಅಖಂಡ ಭಾರತ!’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...