Homeಮುಖಪುಟಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!

ಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!

- Advertisement -
- Advertisement -

ರಾಜ್ಯ ಸರಕಾರವು ಹಲವಾರು ಪ್ರತಿಭಟನೆಗಳನ್ನು ಮತ್ತು ಚಳವಳಿಗಳನ್ನು ಎದುರಿಸುತ್ತಿರುವುದರೊಂದಿಗೆ ಗುಜರಾತ್ ಬಿಜೆಪಿಯ ಮುಂದಿನ ಪ್ರದರ್ಶನವು ಕೇವಲ ನರೇಂದ್ರ ಮೋದಿಯನ್ನು ಅವಲಂಬಿಸಿದೆ. ಸರಕಾರದ ಎದುರು ಹೋರಾಟದ ಕಣಕ್ಕೆ ಧುಮುಕಿರುವವರಲ್ಲಿ ರೈತರು, ಪಶುಗಳನ್ನು ಸಾಕುತ್ತಿರುವವರು, ಆದಿವಾಸಿಗಳು, ವೈದ್ಯರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮಾಜಿ ಸೇನಾ ಸಿಬ್ಬಂದಿಗಳು, ಮಧ್ಯಾಹ್ನದ ಬಿಸಿಯೂಟದ ಸಿಬ್ಬಂದಿ, ಸರಕಾರದ ಎಲ್ಲಾ ಗುತ್ತಿಗೆ ಕೆಲಸಗಾರರು ಮತ್ತು ಇನ್ನೂ ಹಲವರು ಸೇರಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದ – ನಂತರ ಪ್ರಧಾನ ಮಂತ್ರಿಯಾದ ನಂತರದಿಂದ ಭಾರತೀಯ ಜನತಾ ಪಕ್ಷಕ್ಕೆ ಇಷ್ಟವಾದ ಸಮಜಾಯಿಷಿ ಎಂದರೆ, ‘ಮೋದಿ ಹೈ ತೋ ಮುಮ್ಕಿನ್ ಹೈ’ ಅಂದರೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದಾಗಿದೆ. ಆದರೆ, ಬಹುಶಃ ಮೋದಿ ಇದ್ದರೆ ಮಾತ್ರವೇ ಎಲ್ಲವೂ ಸಾಧ್ಯ ಎಂದು 2017ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಗೆ ಮನವರಿಕೆ ಆಗಿರಬೇಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಬೇರೆಯೇ ಮುಖ್ಯಮಂತ್ರಿಯ ಅಡಿಯಲ್ಲಿ 2022ರಲ್ಲಿ ಕಷ್ಟಕರವಾದ ಚುನಾವಣೆ ಎದುರಿಸುತ್ತಿದೆ ಎಂಬುದು ನಿಜವೆಂಬಂತೆ ಕಾಣುತ್ತಿದೆ. ಹಿಂದಿನ ವಿಜಯ್ ರೂಪಾನಿ ಆಡಳಿತದ ವೇಳೆ ಆರಂಭಗೊಂಡ ಸರಕಾರ ವಿರೋಧಿ ಭಾವನೆ, ಕೋವಿಡ್-19 ಅವಧಿಯಲ್ಲಿ ಇನ್ನಷ್ಟು ಉಲ್ಭಣಿಸಿ, ಒಂದು ವರ್ಷ ಹಿಂದೆಯಷ್ಟೇ ಮುಖ್ಯಮಂತ್ರಿ ಸ್ಥಾನದಲ್ಲಿ ಸ್ಥಾಪಿಸಲಾದ ಭೂಪೇಂದ್ರ ಪಟೇಲ್ ಅವಧಿಯಲ್ಲೂ ಮುಂದುವರಿದಿದೆ.

ಗುಜರಾತಿನಲ್ಲಿ ತನ್ನ 30 ವರ್ಷಗಳ ಗೆಲುವಿನ ಹಾದಿಯಲ್ಲಿ ಬಿಜೆಪಿಯು 2017ರಲ್ಲಿ ಮೊದಲ ಬಾರಿಗೆ ಎರಡಂಕೆಗೆ- ಅಂದರೆ, 99 ಸ್ಥಾನಗಳಿಗೆ ಇಳಿಯಿತು. ಅಂದರೆ, 182 ಸ್ಥಾನಗಳ ವಿಧಾನಸಭೆಯಲ್ಲಿ ಅದು ಹೇಗೋ ಸೋಲಿನಿಂದ ತನ್ನನ್ನು ಪಾರುಮಾಡಿಕೊಂಡಿತು. ಕಾಂಗ್ರೆಸ್ ಕೂಡಾ ತನ್ನ ಅತ್ಯಂತ ಕಠಿಣ ಸವಾಲಾದ ಗುಜರಾತಿನಲ್ಲಿ ಮೊತ್ತ ಮೊದಲ ಬಾರಿಗೆ ಆಗಲೇ ಒಂದು ಚಿಕ್ಕ ಆಶಾವಾದವನ್ನು ಕಂಡಿರಬೇಕೆಂದು ಬೇರೆ ಹೇಳಬೇಕಾಗಿಲ್ಲ. ಆದರೆ ಅದು ಹಾಗೆ ಆಗಲಿಲ್ಲ.

ಇದನ್ನೂ ಓದಿ: ಗುಜರಾತ್‌: ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು

ಒಂದು ವಿರೋಧ ಪಕ್ಷಕ್ಕಾಗಿ ಖಾಲಿಯಾಗಿ ಕಾಯುತ್ತಿದ್ದ ಗುಜರಾತಿನ ಬಯಲಿಗೆ ಪ್ರವೇಶಿಸಿದ ಆಮ್ ಆದ್ಮಿ ಪಾರ್ಟಿಯು ಒಂದು ಗಂಭೀರ ಸ್ಪರ್ಧಿಯಾಯಿತು. ದಿನಗಳು ಕಳೆದಂತೆ ಬೆಳೆಯುತ್ತಿರುವ ಈ ದಿಲ್ಲಿ ಪಕ್ಷವು ಬಿಜೆಪಿಯ ಕೊಠಡಿಯಲ್ಲಿ ಕುಳಿತ ಆನೆಯ ಕತೆಯಂತಾಯಿತು.

ಸದ್ಯಕ್ಕೆ ಪ್ರತಿಪಕ್ಷಗಳ ಸುದ್ದಿ ಬಿಡಿ. 1992ರ ಚುನಾವಣೆಗಳ ನಂತರದಿಂದ ಬಿಜೆಪಿಯ ಭರ್ಜರಿ ಗೆಲುವುಗಳ ದಾಖಲೆಯ ಹೊರತಾಗಿಯೂ, ಆಪ್ ಸಾರ್ವಜನಿಕವಾಗಿ ಮತ್ತು ಕಾಂಗ್ರೆಸ್ ನಾಯಕರು ಖಾಸಗಿ ಸಂಭಾಷಣೆಗಳಲ್ಲಿ 2022ರ ಚುನಾವಣೆಗಳಲ್ಲಿ ಒಂದು ಅವಕಾಶವನ್ನು ಕಾಣುವಂತೆ ಮಾಡಿರುವ ಬಿಜೆಪಿಯ ಸ್ಥಿತಿ ಏನು? 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೊಸ ಮುಖ್ಯಮಂತ್ರಿಯ ಅಡಿಯಲ್ಲಿ ಎದುರಿಸುತ್ತಿರುವ ಎರಡನೇ ವಿಧಾನಸಭಾ ಚುನಾವಣೆ ಇದೆಂಬುದು ಗಮನಾರ್ಹ.

ಈ ಎಂಟು ವರ್ಷಗಳ ಅವಧಿಯಲ್ಲಿ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ತಂದಿತು- ಆನಂದಿಬೆನ್ ಪಟೇಲ್, ವಿಜಯ್ ರೂಪಾನಿ ಮತ್ತು ಭೂಪಿಂದರ್ ಪಟೇಲ್. ಆನಂದಿ ಮತ್ತು ರೂಪಾನಿ ಇಬ್ಬರನ್ನೂ- ಸರಕಾರ ವಿರೋಧಿ ಅಲೆಯು ಬಿಜೆಪಿಯನ್ನು ದುರುಗುಟ್ಟಿ ನೋಡುತ್ತಿರುವಾಗ- ಕಿತ್ತು ಹಾಕಲಾಯಿತು. ಅದರಲ್ಲೂ ರೂಪಾನಿಯನ್ನು ಇಡೀ ಸಂಪುಟದ ಸಹಿತ. ಕೆಲವು ಈಗ ಪತನಗೊಂಡಿರುವ ಮುಖಗಳನ್ನು ಬಿಟ್ಟರೆ ಯಾರೊಬ್ಬರೂ ಪ್ರತಿಭಟಿಸಲಿಲ್ಲ. ಯಾಕೆ? ಯಾಕೆಂದರೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ!

ಇದನ್ನೂ ಓದಿ: ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

2015ರಲ್ಲಿ ಮೋದಿಯ ನಂತರ ಬಿಜೆಪಿಯು ಮೊದಲ ಬಾರಿಗೆ ಆನಂದಿಬೆನ್ ಪಟೇಲ್ ನೇತೃತ್ವದಲ್ಲಿ ಸ್ಥಳೀಯಾಡಳಿತ ಚುನಾವಣೆಗಳನ್ನು ಎದುರಿಸಿತು. ಹಾರ್ದಿಕ್ ಪಟೇಲ್ ನೇತೃತ್ವದ ಪಾಟೀದಾರ್ ಚಳವಳಿಯ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಅದು ಭಾರೀ ಹಿನ್ನಡೆ ಅನುಭವಿಸಿತು. ಆನಂದಿಗೆ ಕೆಳಗಿಳಿಯುವಂತೆ ಆದೇಶಿಸಿ, ರೂಪಾನಿಯನ್ನು ತರಲಾಯಿತು. ಆದರೆ, ಆಗಲೇ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದ ವೇದಿಕೆ ಸಿದ್ಧವಾಗಿತ್ತು. ಆದರೆ, ಬಿಜೆಪಿಯು ಆ ಚುನಾವಣೆಯಲ್ಲಿ ವಿಜಯ್ ರೂಪಾನಿ ನಾಯಕತ್ವದಲ್ಲಿ ಸೋಲಿಗೆ ಹತ್ತಿರ ಬಂದರೂ ಗೆದ್ದಿತ್ತು. ಇದಕ್ಕೆ ಏಕೈಕ ಕಾರಣವೆಂದರೆ, ಮೋದಿಯ ಆಕ್ರಮಣಕಾರಿ ಮಣ್ಣಿನ ಮಗ ಅಭಿಯಾನ. ಮೋದಿ ಇದ್ದರೆ ಎಲ್ಲವೂ ಸಾಧ್ಯ!

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ 26 ಸ್ಥಾನಗಳನ್ನು ಗೆದ್ದಿತು-ಅದೂ ಕೂಡಾ ನಂಬಲಸಾಧ್ಯ ಅಂತರಗಳಲ್ಲಿ. ಅತ್ಯಂತ ಕಡಿಮೆ ಅಂತರವೆಂದರೆ, 1.25 ಲಕ್ಷ ಮತಗಳು. ಆ ಹೊತ್ತಿಗೆ ಅಧಿಕಾರದಲ್ಲಿ ಇದ್ದದ್ದು ರೂಪಾನಿಯಾದರೂ ಮತ ಬಿದ್ದದ್ದು ಮಾತ್ರ ಮೋದಿಗೆ!

ಈಗ, ಬಿಜೆಪಿಯು 2017ಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿದೆ. ಆಪ್ ಮತ್ತು ಕಾಂಗ್ರೆಸ್ ಟೊಂಕಕಟ್ಟಿ ನಿಂತಿವೆ ಎಂಬ ಕಾರಣಕ್ಕಾಗಿ ಅಲ್ಲ. ಒಟ್ಟಾರೆಯಾಗಿ ರಾಜ್ಯವನ್ನು ಆವರಿಸಿರುವ ಅಸಮಾಧಾನದ ಕಾರಣದಿಂದ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 30ರಷ್ಟು ದೊಡ್ಡ ಮತ್ತು ಚಿಕ್ಕ ಮಟ್ಟದ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಅತಿದೊಡ್ಡ ಜನವಿಭಾಗಗಳೆಂದರೆ, ಪೊಲೀಸ್ ಮತ್ತು ಲೋಕರಕ್ಷಕ ದಳದ ಸಿಬ್ಬಂದಿಗಳು ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಿಗೆ ಸೇರಿದ ನೌಕರರು.

ಇದನ್ನೂ ಓದಿ: ಅದಾನಿ ಸಂಸ್ಥೆಗೆ ಅಕ್ರಮ ಭೂ ಮಂಜೂರಾತಿ: ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂ ನಷ್ಟ

ಸರಕಾರದ ವಿರುದ್ಧ ಹೋರಾಟದ ಹಾದಿ ಹಿಡಿದಿರುವವರಲ್ಲಿ ರೈತರು, ರಾಸುಗಳನ್ನು ಸಾಕುತ್ತಿರುವವರು, ಆದಿವಾಸಿಗಳು, ವೈದ್ಯರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಕೋವಿಡ್ ಪಿಡುಗಿನ ಕಾಲದಲ್ಲಿ ಜೀವವನ್ನೇ ಪಣಕ್ಕಿಟ್ಟು ದುಡಿದ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮಾಜಿ ಸೇನಾ ಸಿಬ್ಬಂದಿಗಳು, ಮಧ್ಯಾಹ್ನದ ಬಿಸಿಯೂಟದ ಸಿಬ್ಬಂದಿ, ಸರಕಾರದ ಎಲ್ಲಾ ಗುತ್ತಿಗೆ ಕೆಲಸಗಾರರು, ಸರಕಾರಿ ಪರೀಕ್ಷೆ ಬರೆಯಲು ಬಯಸುವವರು, ಆಟೋರಿಕ್ಷಾ ಚಾಲಕರು, ರಸ್ತೆ ಬದಿಯಲ್ಲಿ ಮೊಟ್ಟೆ ಮತ್ತು ಮಾಂಸಾಹಾರದ ಗಾಡಿಗಳನ್ನು ಇಟ್ಟವರು ಮತ್ತು ಮಾರಾಟಗಾರರು, ವಿದ್ಯಾ ಸಹಾಯಕರು ಅಂದರೆ, ಗುತ್ತಿಗೆ ಶಿಕ್ಷಕರು ಸೇರಿದ್ದಾರೆ.

ಇವರೆಲ್ಲಾ ಹೋರಾಟಗಳು ಹಳೆಯ ಪಿಂಚಣಿ ನೀತಿ ಜಾರಿಗಾಗಿ ನಡೆಯುತ್ತಿರುವ ರಾಜ್ಯ ಸರಕಾರಿ ನೌಕರರ ಪ್ರಭಾವಿ ಹೋರಾಟಕ್ಕೆ ಹೆಚ್ಚುವರಿಯಾಗಿ ನಡೆಯುತ್ತಿವೆ. ಅವರ ಬೇಡಿಕೆಗಳು ಹಲವಿವೆ. ಅವುಗಳಲ್ಲಿ ಮುಖ್ಯವಾದವು ಎಂದರೆ, ಹಲವು ವರ್ಷಗಳಿಂದ ಬಾಕಿ ಇರುವ ವೇತನ ಪರಿಷ್ಕರಣೆ, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿ ರದ್ದು. ಏಕೆಂದರೆ, ಬಹುತೇಕ ಸರಕಾರಿ ನೌಕರರು ವರ್ಷಗಳಿಂದ ಜುಜುಬಿ ಸಂಬಳಕ್ಕೆ ಪೂರ್ಣಾವಧಿ ಕೆಲಸ ಮಾಡುತ್ತಿದ್ದಾರೆ. ಇಂತವರಲ್ಲಿ ಸರಕಾರಿ ಶಾಲೆಗಳ ಶಿಕ್ಷಕರೂ ಸೇರಿದ್ದಾರೆ. 1995ರಲ್ಲಿ ಮೊದಲ ಬಿಜೆಪಿ ಸರಕಾರದೊಂದಿಗೆ ಬಂದ ಹೊರ ಗುತ್ತಿಗೆ ಪಿಡುಗು ಈಗ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಎಲ್ಲಾ ಸರಕಾರಿ ಇಲಾಖೆಗಳಿಗೆ ವ್ಯಾಪಿಸಿದೆ.

2017ರಲ್ಲಿ ಬಿಜೆಪಿಯು 99 ಸ್ಥಾನಗಳಿಗೆ ಕುಸಿಯುವುದಕ್ಕೆ ಆಗಲೂ ನಡೆಯುತ್ತಿದ್ದ ಈ ಹೋರಾಟಗಳು ಕೂಡಾ ಕಾರಣವಾಗಿದ್ದರೂ, ಹಾರ್ದಿಕ್ ಪಟೇಲರ ಪಾಟೀದಾರ್ ಚಳವಳಿ, ಅಲ್ಪೇಶ್‌ ಠಾಕೂರ್‌ ಅವರ ಹಿಂದುಳಿದ ವರ್ಗಗಳ ಚಳವಳಿ ಮತ್ತು ಜಿಗ್ನೇಶ್ ಮೇವಾನಿಯವರ ದಲಿತ ಚಳವಳಿಯ ಹಿನ್ನೆಲೆಯಲ್ಲಿ ಅವು ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ.

ಇದನ್ನೂ ಓದಿ: ಶಾಸಕ ಜಿಗ್ನೇಶ್‌‌ ಮೇವಾನಿ ಮೇಲೆ ಗುಜರಾತ್‌ ಮಾಜಿ ಗೃಹ ಸಚಿವರ ಗೂಂಡಾಗಳಿಂದ ಹಲ್ಲೆ

ಈ ಬಾರಿ ಅದು ಎದುರಿಸುತ್ತಿರುವ ಗಂಭೀರ ಹೆಚ್ಚವರಿ ಸಮಸ್ಯೆ ಎಂದರೆ, ಆರೆಸ್ಸೆಸ್ ಅಂಗಸಂಸ್ಥೆಯಾಗಿರುವ ಭಾರತೀಯ ಕಿಸಾನ್ ಸಂಘ (ಬಿಕೆಎಸ್)ವು ಸರಕಾರದ ಎದುರು ಬಿದ್ದಿರುವುದು. 26 ಬೇಡಿಕೆಗಳನ್ನು ಮುಂದಿಟ್ಟು ತಿಂಗಳಿಂದ ಗಾಂಧಿನಗರದಲ್ಲಿ ಧರಣಿ ನಡೆಸುತ್ತಿರುವ ಬಿಕೆಎಸ್‌ನ ಬಿಕ್ಕಟ್ಟು- ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನಡೆಸಿದ “ನಮೋ ಖೇದುತ್ (ರೈತ) ಪಂಚಾಯತ್ಗೆ” ಬಿಕೆಎಸ್ ನಾಯಕರನ್ನು ಕರೆಯದೇ ಅವಗಣಿಸಿರುವುದರಿಂದ ಇನ್ನಷ್ಟು ಉಲ್ಭಣಿಸಿದೆ.

ನಡ್ಡಾ ಜೊತೆಗೆ ಮಾತುಕತೆಯ ಬೇಡಿಕೆಯಿಟ್ಟು ಬಂದ ಬಿಕೆಎಸ್ ರೈತನಾಯಕರನ್ನು ಪೊಲೀಸ್ ವಾಹನಗಳಲ್ಲಿ ತುಂಬಿ ಕೂಡಿಟ್ಟು, ಸಮಾವೇಶ ಮುಗಿದ ನಂತರ ಬಿಡುಗಡೆ ಮಾಡಲಾಯಿತು. ಬಿಕೆಎಸ್‌ನ ಸಹ ಪ್ರಚಾರ ಪ್ರಮುಖ್ ಮನ್‌ಸುಖ್ ಪಟೋಲಿಯಾ ಸೇರಿದಂತೆ ಅದರ ನಾಯಕರು ಜೆ‌.ಪಿ. ನಡ್ಡಾರನ್ನು ಮಾಧ್ಯಮಗಳಲ್ಲಿ ಕಟುವಾಗಿ ಟೀಕಿಸಿ,‘‘ಕೊನೆಯ ಎಚ್ಚರಿಕೆ”ಯನ್ನೂ ನೀಡಿದ್ದರು.

ಅದೇ ರೀತಿಯಲ್ಲಿ ಗುಜರಾತ್- ಕೆಳಹಂತದ ಪೊಲೀಸ್ ಸಿಬ್ಬಂದಿ ಮತ್ತು ಲೋಕರಕ್ಷಕ (ಗೃಹರಕ್ಷಕ) ದಳದ ಸಿಬ್ಬಂದಿಗಳ ಅಸಾಧಾರಣವಾದ ಪ್ರತಿಭಟನೆಯನ್ನೂ ಕಂಡಿದೆ. ಶಿಸ್ತಿನ ತರಬೇತಿ ಹೊಂದಿರುವ ಅವರು ಸಾಮಾನ್ಯವಾಗಿ ಪ್ರತಿಭಟನೆಗೆ ಇಳಿಯುವುದಿಲ್ಲ. ಆದರೆ, ಈ ಬಾರಿ ಅವರ ಕುಟುಂಬದವರೂ ಬೀದಿಗಿಳಿದಿದ್ದರು. ಇದರ ಲಾಭಪಡೆಯುವ ಸಲುವಾಗಿ ಅರವಿಂದ ಕೇಜ್ರಿವಾಲ್, ಪೊಲೀಸರಿಗೆ ದೇಶದಲ್ಲೇ ಅತ್ಯುತ್ತಮ ಸಂಬಳದ ಭರವಸೆ ನೀಡಿದ ಬೆನ್ನಲ್ಲೇ, ಭೂಪಿಂದರ್ ಪಟೇಲ್ ಪೊಲೀಸರಿಗೆ 550 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದರು. ಇದು ತಾತ್ಕಾಲಿಕ ಕ್ರಮವೇ ಹೊರತು, ವೇತನ ಪರಿಷ್ಕರಣೆ ಅಲ್ಲವೆಂದು ಪೊಲೀಸರು ಇನ್ನೂ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ‘ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿ’ – ಗುಜರಾತ್ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ವಾಗ್ದಾಳಿ

ಮಾರ್ಚ್ 31, 2022ರ ಬಜೆಟ್ ಅಧಿವೇಶನದ ಕೊನೆಯ ದಿನ ಮಧ್ಯರಾತ್ರಿಯ ತನಕ ಚರ್ಚಿಸಿ ಜಾರಿಗೊಳಿಸಿದ್ದ ಬೀಡಾಡಿ ದನಗಳ ನಿಯಂತ್ರಣ ಕುರಿತ ಕಠಿಣ ಕಾನೂನನ್ನೂ ಸರಕಾರ ಹಿಂದೆಗೆದುಕೊಂಡಿತು. ಈ ಕಾನೂನು ಬಂದ ತಕ್ಷಣವೇ ಮಾಲ್‌ದಾರಿಗಳು (ಪಶುಪಾಲಕರು) ಉಗ್ರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ, ಸರಕಾರ ಈ ಕಾಯಿದೆಯನ್ನು ಅಮಾನತಿನಲ್ಲಿ ಇರಿಸಿತ್ತು. ಇದರಿಂದ ತೃಪ್ತರಾಗದ ಅವರು ಬಿಜೆಪಿಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದುದರಿಂದ, ವಿಧಾನಮಂಡಲದ ಎರಡು ದಿನಗಳ ವಿಶೇಷ ಅಧಿವೇಶನದ ನಂತರ, ಸೆಪ್ಟೆಂಬರ್ 21ರಂದು ಸರಕಾರ ಈ ಕಾಯಿದೆಯನ್ನೇ ಹಿಂತೆಗೆದುಕೊಳ್ಳಬೇಕಾಯಿತು.

ಅದೇ ರೀತಿಯಲ್ಲಿ ಮಹಾರಾಷ್ಟ್ರ ಸಹಯೋಗದ ಪಾರ್-ತಾಪಿ-ನರ್ಮದಾ ನದಿ ಜೋಡಣೆ ಯೋಜನೆಯನ್ನೂ ದಕ್ಷಿಣ ಗುಜರಾತಿನ ಆದಿವಾಸಿಗಳ ಭಾರೀ ಪ್ರತಿಭಟನೆಯ ನಂತರ ಹಿಂತೆಗೆದುಕೊಳ್ಳಬೇಕಾಯಿತು. ಈ ಯೋಜನೆಯನ್ನು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಭಾರೀ ವಾಲಗದೊಂದಿಗೆ 2022-23ರ ಬಜೆಟಿನಲ್ಲಿ ಘೋಷಿಸಿದ್ದರು. ಇಂತಾ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ.

ಮೂಲ: ದರ್ಶನ್ ದೇಸಾಯಿ
ಲೇಕಖರು ಗುಜರಾತಿನ ಡೆವಲಪ್‌ಮೆಂಟ್ ನ್ಯೂಸ್ ನೆಟ್‌ವರ್ಕ್‌ನ ಸ್ಥಾಪಕ ಸಂಪಾದಕರು
ಇಮೈಲ್: [email protected]
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...