Homeಮುಖಪುಟಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!

ಗುಜರಾತ್ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ!

- Advertisement -
- Advertisement -

ರಾಜ್ಯ ಸರಕಾರವು ಹಲವಾರು ಪ್ರತಿಭಟನೆಗಳನ್ನು ಮತ್ತು ಚಳವಳಿಗಳನ್ನು ಎದುರಿಸುತ್ತಿರುವುದರೊಂದಿಗೆ ಗುಜರಾತ್ ಬಿಜೆಪಿಯ ಮುಂದಿನ ಪ್ರದರ್ಶನವು ಕೇವಲ ನರೇಂದ್ರ ಮೋದಿಯನ್ನು ಅವಲಂಬಿಸಿದೆ. ಸರಕಾರದ ಎದುರು ಹೋರಾಟದ ಕಣಕ್ಕೆ ಧುಮುಕಿರುವವರಲ್ಲಿ ರೈತರು, ಪಶುಗಳನ್ನು ಸಾಕುತ್ತಿರುವವರು, ಆದಿವಾಸಿಗಳು, ವೈದ್ಯರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮಾಜಿ ಸೇನಾ ಸಿಬ್ಬಂದಿಗಳು, ಮಧ್ಯಾಹ್ನದ ಬಿಸಿಯೂಟದ ಸಿಬ್ಬಂದಿ, ಸರಕಾರದ ಎಲ್ಲಾ ಗುತ್ತಿಗೆ ಕೆಲಸಗಾರರು ಮತ್ತು ಇನ್ನೂ ಹಲವರು ಸೇರಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯಾದ – ನಂತರ ಪ್ರಧಾನ ಮಂತ್ರಿಯಾದ ನಂತರದಿಂದ ಭಾರತೀಯ ಜನತಾ ಪಕ್ಷಕ್ಕೆ ಇಷ್ಟವಾದ ಸಮಜಾಯಿಷಿ ಎಂದರೆ, ‘ಮೋದಿ ಹೈ ತೋ ಮುಮ್ಕಿನ್ ಹೈ’ ಅಂದರೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ ಎಂಬುದಾಗಿದೆ. ಆದರೆ, ಬಹುಶಃ ಮೋದಿ ಇದ್ದರೆ ಮಾತ್ರವೇ ಎಲ್ಲವೂ ಸಾಧ್ಯ ಎಂದು 2017ರ ರಾಜ್ಯ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಗೆ ಮನವರಿಕೆ ಆಗಿರಬೇಕಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಿಜೆಪಿಯು ಬೇರೆಯೇ ಮುಖ್ಯಮಂತ್ರಿಯ ಅಡಿಯಲ್ಲಿ 2022ರಲ್ಲಿ ಕಷ್ಟಕರವಾದ ಚುನಾವಣೆ ಎದುರಿಸುತ್ತಿದೆ ಎಂಬುದು ನಿಜವೆಂಬಂತೆ ಕಾಣುತ್ತಿದೆ. ಹಿಂದಿನ ವಿಜಯ್ ರೂಪಾನಿ ಆಡಳಿತದ ವೇಳೆ ಆರಂಭಗೊಂಡ ಸರಕಾರ ವಿರೋಧಿ ಭಾವನೆ, ಕೋವಿಡ್-19 ಅವಧಿಯಲ್ಲಿ ಇನ್ನಷ್ಟು ಉಲ್ಭಣಿಸಿ, ಒಂದು ವರ್ಷ ಹಿಂದೆಯಷ್ಟೇ ಮುಖ್ಯಮಂತ್ರಿ ಸ್ಥಾನದಲ್ಲಿ ಸ್ಥಾಪಿಸಲಾದ ಭೂಪೇಂದ್ರ ಪಟೇಲ್ ಅವಧಿಯಲ್ಲೂ ಮುಂದುವರಿದಿದೆ.

ಗುಜರಾತಿನಲ್ಲಿ ತನ್ನ 30 ವರ್ಷಗಳ ಗೆಲುವಿನ ಹಾದಿಯಲ್ಲಿ ಬಿಜೆಪಿಯು 2017ರಲ್ಲಿ ಮೊದಲ ಬಾರಿಗೆ ಎರಡಂಕೆಗೆ- ಅಂದರೆ, 99 ಸ್ಥಾನಗಳಿಗೆ ಇಳಿಯಿತು. ಅಂದರೆ, 182 ಸ್ಥಾನಗಳ ವಿಧಾನಸಭೆಯಲ್ಲಿ ಅದು ಹೇಗೋ ಸೋಲಿನಿಂದ ತನ್ನನ್ನು ಪಾರುಮಾಡಿಕೊಂಡಿತು. ಕಾಂಗ್ರೆಸ್ ಕೂಡಾ ತನ್ನ ಅತ್ಯಂತ ಕಠಿಣ ಸವಾಲಾದ ಗುಜರಾತಿನಲ್ಲಿ ಮೊತ್ತ ಮೊದಲ ಬಾರಿಗೆ ಆಗಲೇ ಒಂದು ಚಿಕ್ಕ ಆಶಾವಾದವನ್ನು ಕಂಡಿರಬೇಕೆಂದು ಬೇರೆ ಹೇಳಬೇಕಾಗಿಲ್ಲ. ಆದರೆ ಅದು ಹಾಗೆ ಆಗಲಿಲ್ಲ.

ಇದನ್ನೂ ಓದಿ: ಗುಜರಾತ್‌: ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿ ಯುವಕರಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು

ಒಂದು ವಿರೋಧ ಪಕ್ಷಕ್ಕಾಗಿ ಖಾಲಿಯಾಗಿ ಕಾಯುತ್ತಿದ್ದ ಗುಜರಾತಿನ ಬಯಲಿಗೆ ಪ್ರವೇಶಿಸಿದ ಆಮ್ ಆದ್ಮಿ ಪಾರ್ಟಿಯು ಒಂದು ಗಂಭೀರ ಸ್ಪರ್ಧಿಯಾಯಿತು. ದಿನಗಳು ಕಳೆದಂತೆ ಬೆಳೆಯುತ್ತಿರುವ ಈ ದಿಲ್ಲಿ ಪಕ್ಷವು ಬಿಜೆಪಿಯ ಕೊಠಡಿಯಲ್ಲಿ ಕುಳಿತ ಆನೆಯ ಕತೆಯಂತಾಯಿತು.

ಸದ್ಯಕ್ಕೆ ಪ್ರತಿಪಕ್ಷಗಳ ಸುದ್ದಿ ಬಿಡಿ. 1992ರ ಚುನಾವಣೆಗಳ ನಂತರದಿಂದ ಬಿಜೆಪಿಯ ಭರ್ಜರಿ ಗೆಲುವುಗಳ ದಾಖಲೆಯ ಹೊರತಾಗಿಯೂ, ಆಪ್ ಸಾರ್ವಜನಿಕವಾಗಿ ಮತ್ತು ಕಾಂಗ್ರೆಸ್ ನಾಯಕರು ಖಾಸಗಿ ಸಂಭಾಷಣೆಗಳಲ್ಲಿ 2022ರ ಚುನಾವಣೆಗಳಲ್ಲಿ ಒಂದು ಅವಕಾಶವನ್ನು ಕಾಣುವಂತೆ ಮಾಡಿರುವ ಬಿಜೆಪಿಯ ಸ್ಥಿತಿ ಏನು? 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಹೊಸ ಮುಖ್ಯಮಂತ್ರಿಯ ಅಡಿಯಲ್ಲಿ ಎದುರಿಸುತ್ತಿರುವ ಎರಡನೇ ವಿಧಾನಸಭಾ ಚುನಾವಣೆ ಇದೆಂಬುದು ಗಮನಾರ್ಹ.

ಈ ಎಂಟು ವರ್ಷಗಳ ಅವಧಿಯಲ್ಲಿ ಬಿಜೆಪಿ ಮೂವರು ಮುಖ್ಯಮಂತ್ರಿಗಳನ್ನು ತಂದಿತು- ಆನಂದಿಬೆನ್ ಪಟೇಲ್, ವಿಜಯ್ ರೂಪಾನಿ ಮತ್ತು ಭೂಪಿಂದರ್ ಪಟೇಲ್. ಆನಂದಿ ಮತ್ತು ರೂಪಾನಿ ಇಬ್ಬರನ್ನೂ- ಸರಕಾರ ವಿರೋಧಿ ಅಲೆಯು ಬಿಜೆಪಿಯನ್ನು ದುರುಗುಟ್ಟಿ ನೋಡುತ್ತಿರುವಾಗ- ಕಿತ್ತು ಹಾಕಲಾಯಿತು. ಅದರಲ್ಲೂ ರೂಪಾನಿಯನ್ನು ಇಡೀ ಸಂಪುಟದ ಸಹಿತ. ಕೆಲವು ಈಗ ಪತನಗೊಂಡಿರುವ ಮುಖಗಳನ್ನು ಬಿಟ್ಟರೆ ಯಾರೊಬ್ಬರೂ ಪ್ರತಿಭಟಿಸಲಿಲ್ಲ. ಯಾಕೆ? ಯಾಕೆಂದರೆ, ಮೋದಿ ಇದ್ದರೆ ಎಲ್ಲವೂ ಸಾಧ್ಯ!

ಇದನ್ನೂ ಓದಿ: ಪ್ರತಿಭಟನೆ ಪರಿಣಾಮ: ಗೋವು ನಿಯಂತ್ರಣ ಮಸೂದೆಯನ್ನು ಹಿಂಪಡೆದ ಗುಜರಾತ್ ಸರ್ಕಾರ

2015ರಲ್ಲಿ ಮೋದಿಯ ನಂತರ ಬಿಜೆಪಿಯು ಮೊದಲ ಬಾರಿಗೆ ಆನಂದಿಬೆನ್ ಪಟೇಲ್ ನೇತೃತ್ವದಲ್ಲಿ ಸ್ಥಳೀಯಾಡಳಿತ ಚುನಾವಣೆಗಳನ್ನು ಎದುರಿಸಿತು. ಹಾರ್ದಿಕ್ ಪಟೇಲ್ ನೇತೃತ್ವದ ಪಾಟೀದಾರ್ ಚಳವಳಿಯ ಹಿನ್ನೆಲೆಯಲ್ಲಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ಅದು ಭಾರೀ ಹಿನ್ನಡೆ ಅನುಭವಿಸಿತು. ಆನಂದಿಗೆ ಕೆಳಗಿಳಿಯುವಂತೆ ಆದೇಶಿಸಿ, ರೂಪಾನಿಯನ್ನು ತರಲಾಯಿತು. ಆದರೆ, ಆಗಲೇ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ವಿಜಯದ ವೇದಿಕೆ ಸಿದ್ಧವಾಗಿತ್ತು. ಆದರೆ, ಬಿಜೆಪಿಯು ಆ ಚುನಾವಣೆಯಲ್ಲಿ ವಿಜಯ್ ರೂಪಾನಿ ನಾಯಕತ್ವದಲ್ಲಿ ಸೋಲಿಗೆ ಹತ್ತಿರ ಬಂದರೂ ಗೆದ್ದಿತ್ತು. ಇದಕ್ಕೆ ಏಕೈಕ ಕಾರಣವೆಂದರೆ, ಮೋದಿಯ ಆಕ್ರಮಣಕಾರಿ ಮಣ್ಣಿನ ಮಗ ಅಭಿಯಾನ. ಮೋದಿ ಇದ್ದರೆ ಎಲ್ಲವೂ ಸಾಧ್ಯ!

2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಎಲ್ಲಾ 26 ಸ್ಥಾನಗಳನ್ನು ಗೆದ್ದಿತು-ಅದೂ ಕೂಡಾ ನಂಬಲಸಾಧ್ಯ ಅಂತರಗಳಲ್ಲಿ. ಅತ್ಯಂತ ಕಡಿಮೆ ಅಂತರವೆಂದರೆ, 1.25 ಲಕ್ಷ ಮತಗಳು. ಆ ಹೊತ್ತಿಗೆ ಅಧಿಕಾರದಲ್ಲಿ ಇದ್ದದ್ದು ರೂಪಾನಿಯಾದರೂ ಮತ ಬಿದ್ದದ್ದು ಮಾತ್ರ ಮೋದಿಗೆ!

ಈಗ, ಬಿಜೆಪಿಯು 2017ಕ್ಕಿಂತಲೂ ಕೆಟ್ಟ ಸ್ಥಿತಿಯಲ್ಲಿದೆ. ಆಪ್ ಮತ್ತು ಕಾಂಗ್ರೆಸ್ ಟೊಂಕಕಟ್ಟಿ ನಿಂತಿವೆ ಎಂಬ ಕಾರಣಕ್ಕಾಗಿ ಅಲ್ಲ. ಒಟ್ಟಾರೆಯಾಗಿ ರಾಜ್ಯವನ್ನು ಆವರಿಸಿರುವ ಅಸಮಾಧಾನದ ಕಾರಣದಿಂದ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸುಮಾರು 30ರಷ್ಟು ದೊಡ್ಡ ಮತ್ತು ಚಿಕ್ಕ ಮಟ್ಟದ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ. ಇವುಗಳಲ್ಲಿ ಅತಿದೊಡ್ಡ ಜನವಿಭಾಗಗಳೆಂದರೆ, ಪೊಲೀಸ್ ಮತ್ತು ಲೋಕರಕ್ಷಕ ದಳದ ಸಿಬ್ಬಂದಿಗಳು ಸೇರಿದಂತೆ ವಿವಿಧ ಸರಕಾರಿ ಇಲಾಖೆಗಳಿಗೆ ಸೇರಿದ ನೌಕರರು.

ಇದನ್ನೂ ಓದಿ: ಅದಾನಿ ಸಂಸ್ಥೆಗೆ ಅಕ್ರಮ ಭೂ ಮಂಜೂರಾತಿ: ಗುಜರಾತ್ ಸರ್ಕಾರಕ್ಕೆ 58 ಕೋಟಿ ರೂ ನಷ್ಟ

ಸರಕಾರದ ವಿರುದ್ಧ ಹೋರಾಟದ ಹಾದಿ ಹಿಡಿದಿರುವವರಲ್ಲಿ ರೈತರು, ರಾಸುಗಳನ್ನು ಸಾಕುತ್ತಿರುವವರು, ಆದಿವಾಸಿಗಳು, ವೈದ್ಯರು, ಶಿಕ್ಷಕರು, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಕೋವಿಡ್ ಪಿಡುಗಿನ ಕಾಲದಲ್ಲಿ ಜೀವವನ್ನೇ ಪಣಕ್ಕಿಟ್ಟು ದುಡಿದ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಮಾಜಿ ಸೇನಾ ಸಿಬ್ಬಂದಿಗಳು, ಮಧ್ಯಾಹ್ನದ ಬಿಸಿಯೂಟದ ಸಿಬ್ಬಂದಿ, ಸರಕಾರದ ಎಲ್ಲಾ ಗುತ್ತಿಗೆ ಕೆಲಸಗಾರರು, ಸರಕಾರಿ ಪರೀಕ್ಷೆ ಬರೆಯಲು ಬಯಸುವವರು, ಆಟೋರಿಕ್ಷಾ ಚಾಲಕರು, ರಸ್ತೆ ಬದಿಯಲ್ಲಿ ಮೊಟ್ಟೆ ಮತ್ತು ಮಾಂಸಾಹಾರದ ಗಾಡಿಗಳನ್ನು ಇಟ್ಟವರು ಮತ್ತು ಮಾರಾಟಗಾರರು, ವಿದ್ಯಾ ಸಹಾಯಕರು ಅಂದರೆ, ಗುತ್ತಿಗೆ ಶಿಕ್ಷಕರು ಸೇರಿದ್ದಾರೆ.

ಇವರೆಲ್ಲಾ ಹೋರಾಟಗಳು ಹಳೆಯ ಪಿಂಚಣಿ ನೀತಿ ಜಾರಿಗಾಗಿ ನಡೆಯುತ್ತಿರುವ ರಾಜ್ಯ ಸರಕಾರಿ ನೌಕರರ ಪ್ರಭಾವಿ ಹೋರಾಟಕ್ಕೆ ಹೆಚ್ಚುವರಿಯಾಗಿ ನಡೆಯುತ್ತಿವೆ. ಅವರ ಬೇಡಿಕೆಗಳು ಹಲವಿವೆ. ಅವುಗಳಲ್ಲಿ ಮುಖ್ಯವಾದವು ಎಂದರೆ, ಹಲವು ವರ್ಷಗಳಿಂದ ಬಾಕಿ ಇರುವ ವೇತನ ಪರಿಷ್ಕರಣೆ, ಗುತ್ತಿಗೆ ಮತ್ತು ಹೊರಗುತ್ತಿಗೆ ಪದ್ಧತಿ ರದ್ದು. ಏಕೆಂದರೆ, ಬಹುತೇಕ ಸರಕಾರಿ ನೌಕರರು ವರ್ಷಗಳಿಂದ ಜುಜುಬಿ ಸಂಬಳಕ್ಕೆ ಪೂರ್ಣಾವಧಿ ಕೆಲಸ ಮಾಡುತ್ತಿದ್ದಾರೆ. ಇಂತವರಲ್ಲಿ ಸರಕಾರಿ ಶಾಲೆಗಳ ಶಿಕ್ಷಕರೂ ಸೇರಿದ್ದಾರೆ. 1995ರಲ್ಲಿ ಮೊದಲ ಬಿಜೆಪಿ ಸರಕಾರದೊಂದಿಗೆ ಬಂದ ಹೊರ ಗುತ್ತಿಗೆ ಪಿಡುಗು ಈಗ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಎಲ್ಲಾ ಸರಕಾರಿ ಇಲಾಖೆಗಳಿಗೆ ವ್ಯಾಪಿಸಿದೆ.

2017ರಲ್ಲಿ ಬಿಜೆಪಿಯು 99 ಸ್ಥಾನಗಳಿಗೆ ಕುಸಿಯುವುದಕ್ಕೆ ಆಗಲೂ ನಡೆಯುತ್ತಿದ್ದ ಈ ಹೋರಾಟಗಳು ಕೂಡಾ ಕಾರಣವಾಗಿದ್ದರೂ, ಹಾರ್ದಿಕ್ ಪಟೇಲರ ಪಾಟೀದಾರ್ ಚಳವಳಿ, ಅಲ್ಪೇಶ್‌ ಠಾಕೂರ್‌ ಅವರ ಹಿಂದುಳಿದ ವರ್ಗಗಳ ಚಳವಳಿ ಮತ್ತು ಜಿಗ್ನೇಶ್ ಮೇವಾನಿಯವರ ದಲಿತ ಚಳವಳಿಯ ಹಿನ್ನೆಲೆಯಲ್ಲಿ ಅವು ಹೆಚ್ಚು ಪ್ರಸಿದ್ಧಿ ಪಡೆಯಲಿಲ್ಲ.

ಇದನ್ನೂ ಓದಿ: ಶಾಸಕ ಜಿಗ್ನೇಶ್‌‌ ಮೇವಾನಿ ಮೇಲೆ ಗುಜರಾತ್‌ ಮಾಜಿ ಗೃಹ ಸಚಿವರ ಗೂಂಡಾಗಳಿಂದ ಹಲ್ಲೆ

ಈ ಬಾರಿ ಅದು ಎದುರಿಸುತ್ತಿರುವ ಗಂಭೀರ ಹೆಚ್ಚವರಿ ಸಮಸ್ಯೆ ಎಂದರೆ, ಆರೆಸ್ಸೆಸ್ ಅಂಗಸಂಸ್ಥೆಯಾಗಿರುವ ಭಾರತೀಯ ಕಿಸಾನ್ ಸಂಘ (ಬಿಕೆಎಸ್)ವು ಸರಕಾರದ ಎದುರು ಬಿದ್ದಿರುವುದು. 26 ಬೇಡಿಕೆಗಳನ್ನು ಮುಂದಿಟ್ಟು ತಿಂಗಳಿಂದ ಗಾಂಧಿನಗರದಲ್ಲಿ ಧರಣಿ ನಡೆಸುತ್ತಿರುವ ಬಿಕೆಎಸ್‌ನ ಬಿಕ್ಕಟ್ಟು- ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ನಡೆಸಿದ “ನಮೋ ಖೇದುತ್ (ರೈತ) ಪಂಚಾಯತ್ಗೆ” ಬಿಕೆಎಸ್ ನಾಯಕರನ್ನು ಕರೆಯದೇ ಅವಗಣಿಸಿರುವುದರಿಂದ ಇನ್ನಷ್ಟು ಉಲ್ಭಣಿಸಿದೆ.

ನಡ್ಡಾ ಜೊತೆಗೆ ಮಾತುಕತೆಯ ಬೇಡಿಕೆಯಿಟ್ಟು ಬಂದ ಬಿಕೆಎಸ್ ರೈತನಾಯಕರನ್ನು ಪೊಲೀಸ್ ವಾಹನಗಳಲ್ಲಿ ತುಂಬಿ ಕೂಡಿಟ್ಟು, ಸಮಾವೇಶ ಮುಗಿದ ನಂತರ ಬಿಡುಗಡೆ ಮಾಡಲಾಯಿತು. ಬಿಕೆಎಸ್‌ನ ಸಹ ಪ್ರಚಾರ ಪ್ರಮುಖ್ ಮನ್‌ಸುಖ್ ಪಟೋಲಿಯಾ ಸೇರಿದಂತೆ ಅದರ ನಾಯಕರು ಜೆ‌.ಪಿ. ನಡ್ಡಾರನ್ನು ಮಾಧ್ಯಮಗಳಲ್ಲಿ ಕಟುವಾಗಿ ಟೀಕಿಸಿ,‘‘ಕೊನೆಯ ಎಚ್ಚರಿಕೆ”ಯನ್ನೂ ನೀಡಿದ್ದರು.

ಅದೇ ರೀತಿಯಲ್ಲಿ ಗುಜರಾತ್- ಕೆಳಹಂತದ ಪೊಲೀಸ್ ಸಿಬ್ಬಂದಿ ಮತ್ತು ಲೋಕರಕ್ಷಕ (ಗೃಹರಕ್ಷಕ) ದಳದ ಸಿಬ್ಬಂದಿಗಳ ಅಸಾಧಾರಣವಾದ ಪ್ರತಿಭಟನೆಯನ್ನೂ ಕಂಡಿದೆ. ಶಿಸ್ತಿನ ತರಬೇತಿ ಹೊಂದಿರುವ ಅವರು ಸಾಮಾನ್ಯವಾಗಿ ಪ್ರತಿಭಟನೆಗೆ ಇಳಿಯುವುದಿಲ್ಲ. ಆದರೆ, ಈ ಬಾರಿ ಅವರ ಕುಟುಂಬದವರೂ ಬೀದಿಗಿಳಿದಿದ್ದರು. ಇದರ ಲಾಭಪಡೆಯುವ ಸಲುವಾಗಿ ಅರವಿಂದ ಕೇಜ್ರಿವಾಲ್, ಪೊಲೀಸರಿಗೆ ದೇಶದಲ್ಲೇ ಅತ್ಯುತ್ತಮ ಸಂಬಳದ ಭರವಸೆ ನೀಡಿದ ಬೆನ್ನಲ್ಲೇ, ಭೂಪಿಂದರ್ ಪಟೇಲ್ ಪೊಲೀಸರಿಗೆ 550 ಕೋಟಿ ರೂ.ಗಳ ಪ್ಯಾಕೇಜ್ ಘೋಷಿಸಿದರು. ಇದು ತಾತ್ಕಾಲಿಕ ಕ್ರಮವೇ ಹೊರತು, ವೇತನ ಪರಿಷ್ಕರಣೆ ಅಲ್ಲವೆಂದು ಪೊಲೀಸರು ಇನ್ನೂ ಅಸಮಾಧಾನಗೊಂಡಿದ್ದಾರೆ.

ಇದನ್ನೂ ಓದಿ: ‘ಬಿಲ್ಕಿಸ್ ಬಾನೊ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿ’ – ಗುಜರಾತ್ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ ವಾಗ್ದಾಳಿ

ಮಾರ್ಚ್ 31, 2022ರ ಬಜೆಟ್ ಅಧಿವೇಶನದ ಕೊನೆಯ ದಿನ ಮಧ್ಯರಾತ್ರಿಯ ತನಕ ಚರ್ಚಿಸಿ ಜಾರಿಗೊಳಿಸಿದ್ದ ಬೀಡಾಡಿ ದನಗಳ ನಿಯಂತ್ರಣ ಕುರಿತ ಕಠಿಣ ಕಾನೂನನ್ನೂ ಸರಕಾರ ಹಿಂದೆಗೆದುಕೊಂಡಿತು. ಈ ಕಾನೂನು ಬಂದ ತಕ್ಷಣವೇ ಮಾಲ್‌ದಾರಿಗಳು (ಪಶುಪಾಲಕರು) ಉಗ್ರ ಪ್ರತಿಭಟನೆ ನಡೆಸಿದ ಪರಿಣಾಮವಾಗಿ, ಸರಕಾರ ಈ ಕಾಯಿದೆಯನ್ನು ಅಮಾನತಿನಲ್ಲಿ ಇರಿಸಿತ್ತು. ಇದರಿಂದ ತೃಪ್ತರಾಗದ ಅವರು ಬಿಜೆಪಿಯನ್ನು ಬಹಿಷ್ಕರಿಸುವ ಬೆದರಿಕೆ ಹಾಕಿದುದರಿಂದ, ವಿಧಾನಮಂಡಲದ ಎರಡು ದಿನಗಳ ವಿಶೇಷ ಅಧಿವೇಶನದ ನಂತರ, ಸೆಪ್ಟೆಂಬರ್ 21ರಂದು ಸರಕಾರ ಈ ಕಾಯಿದೆಯನ್ನೇ ಹಿಂತೆಗೆದುಕೊಳ್ಳಬೇಕಾಯಿತು.

ಅದೇ ರೀತಿಯಲ್ಲಿ ಮಹಾರಾಷ್ಟ್ರ ಸಹಯೋಗದ ಪಾರ್-ತಾಪಿ-ನರ್ಮದಾ ನದಿ ಜೋಡಣೆ ಯೋಜನೆಯನ್ನೂ ದಕ್ಷಿಣ ಗುಜರಾತಿನ ಆದಿವಾಸಿಗಳ ಭಾರೀ ಪ್ರತಿಭಟನೆಯ ನಂತರ ಹಿಂತೆಗೆದುಕೊಳ್ಳಬೇಕಾಯಿತು. ಈ ಯೋಜನೆಯನ್ನು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಭಾರೀ ವಾಲಗದೊಂದಿಗೆ 2022-23ರ ಬಜೆಟಿನಲ್ಲಿ ಘೋಷಿಸಿದ್ದರು. ಇಂತಾ ಪರಿಸ್ಥಿತಿಯಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮೋದಿ ಬಿಟ್ಟರೆ ಗತಿಯಿಲ್ಲ.

ಮೂಲ: ದರ್ಶನ್ ದೇಸಾಯಿ
ಲೇಕಖರು ಗುಜರಾತಿನ ಡೆವಲಪ್‌ಮೆಂಟ್ ನ್ಯೂಸ್ ನೆಟ್‌ವರ್ಕ್‌ನ ಸ್ಥಾಪಕ ಸಂಪಾದಕರು
ಇಮೈಲ್: [email protected]
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...