Homeಮುಖಪುಟಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

ಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

- Advertisement -
- Advertisement -

ಕನ್ನಡದ ಪ್ರಜ್ಞೆಯನ್ನು ಕಾಡಿ, ಕದಡಿ, ತಲೆಮಾರುಗಳನ್ನೇ ಜೀವಪರ ಮೌಲ್ಯಗಳಿಗೆ ಒಗ್ಗಿಸಲು ತಮ್ಮ ಬರವಣಿಗೆ ಮತ್ತು ಪತ್ರಿಕೋದ್ಯಮದ ಮೂಲಕ ಪ್ರಯತ್ನಿಸಿದ ಪಿ. ಲಂಕೇಶ್ ಅವರ ಮಗಳಾದ್ದರಿಂದಲೋ ಏನೋ ಗೌರಿ ಲಂಕೇಶ್ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡರು. ಕನ್ನಡ ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದ್ದ ಅಪ್ಪನ ಪ್ರಭಾವ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಿದ್ದರೂ, ಇಂಗ್ಲಿಷ್ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ತನ್ನ ಸ್ವಂತಿಕೆಯ ಕಾರಣಕ್ಕೇ ಆಗಿತ್ತು. ಆ ಕಾಲಕ್ಕೆ ವಿದೇಶದಲ್ಲಿ, ದೇಶದ ಹಲವೆಡೆ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ಗೌರಿ ತಾಯ್ನಾಡಿಗೆ ಬರುವಷ್ಟರಲ್ಲಿ ಕನ್ನಡನಾಡು ಲಂಕೇಶರ ಪ್ರತಿಭೆಯಿಂದ ಸಾಕಷ್ಟು ಪ್ರಭಾವಕ್ಕೆ ಒಳಪಟ್ಟಿತ್ತು. ಆದರೆ, ಅಷ್ಟರಲ್ಲಿ ಲಂಕೇಶ್ ಭೌತಿಕವಾಗಿ ವೇದಿಕೆಯಿಂದ ನಿರ್ಗಮಿಸಿದ್ದರು. ಒಂದಿಡೀ ತಲೆಮಾರಿನ ಪ್ರಜ್ಞೆಯ ಜೊತೆಗೇ ಹೊಂದಿಕೊಂಡಿದ್ದ, ಆ ಪ್ರಜ್ಞೆಯನ್ನು ಆರೋಗ್ಯಕರವಾಗಿ ರೂಪಿಸಲು ಶ್ರಮಿಸುತ್ತಿದ್ದ ’ಲಂಕೇಶ್ ಪತ್ರಿಕೆ’ಯ ಹೊಣೆ ಗೌರಿ ಲಂಕೇಶರ ಹೆಗಲಿಗೆ ಬಿದ್ದಾಗ, ಆ ಜವಾಬ್ದಾರಿ ಕೇವಲ ಒಂದು ಪತ್ರಿಕೆಯನ್ನು ನಡೆಸುವುದಷ್ಟೇ ಅಲ್ಲ ಎಂಬ ಅರಿವು ಅವರಿಗಿತ್ತು. ಈ ಜವಾಬ್ದಾರಿಯನ್ನು ಅವರು ಕೋಮುವಾದದ ವಿರುದ್ಧದ ಸಕ್ರಿಯ ಹೋರಾಟದ ಮೂಲಕ ವಿಸ್ತರಿಸಿಕೊಂಡು ಸಾಗಿದರು.

ಕುಟುಂಬದ ಹಿರಿಯ ಮಗಳಾದ್ದರಿಂದ ಕೆಲವು ಸಂಕಷ್ಟಗಳೂ ಎದುರಾದವು. ’ಲಂಕೇಶ್ ಪತ್ರಿಕೆ’ಯನ್ನು ’ಗೌರಿ ಲಂಕೇಶ್ ವಾರ ಪತ್ರಿಕೆ’ಯನ್ನಾಗಿ ಬದಲಿಸಬೇಕಾಯಿತು. ಇಡೀ ಪತ್ರಿಕೆಯನ್ನು ಕೋಮುವಾದದ ವಿರುದ್ಧದ ಪ್ರಜ್ಞಾವಾಹಿನಿಯಾಗಿ ಬದಲಿಸಿದರು. ಟೀಕೆ, ಮೆಚ್ಚುಗೆಗಳ ಜೊತೆಗೆ ಹಳಬರ ನಿರ್ಗಮನ ಹೊಸಬರ ಆಗಮನಗಳಿಂದ ಗೌರಿ ಲಂಕೇಶ್ ’ಗೌರಿ’ಯಾಗುತ್ತಾ ಸಾಗಿದರು ಮತ್ತು ಅದೇ ದಾರಿಯಲ್ಲಿ ಹಠಾತ್ತನೆ ನಿರ್ಗಮಿಸಿದರು. ಅವರು ನಿರ್ಗಮಿಸುವಂತಹ ವಿಷಮ ವಾತಾವರಣ ಆಗಲೇ ಈ ನಾಡಿನಲ್ಲಿ ನಿರ್ಮಾಣವಾಗಿತ್ತು. ಅದರ ವಿರುದ್ಧದ ಅವರ ಹೋರಾಟದ ಕಾರಣಕ್ಕಾಗಿಯೇ, ಆ ವಿಷಮ ವಾತಾವರಣವನ್ನು ನಿರ್ಮಿಸಿದವರು ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು.

ಲಂಕೇಶರು ತೀರಿಹೋದಾಗಿನಿಂದ ಗೌರಿ ಅವರ ಬೆನ್ನಿಗೆ ನಿಂತ ಅವರ ತಂಗಿ ಕವಿತಾ ಲಂಕೇಶ್ ’ಗೌರಿ ಪ್ರಜ್ಞೆ’ಯನ್ನು ಈಗ ಪ್ರಪಂಚದಾದ್ಯಂತ ಹೊತ್ತು ಸಾಗುತ್ತಿದ್ದಾರೆ; ಇದು ಗೌರಿಯವರ ಹೋರಾಟದ ಮುಂದುವರಿಕೆಯೇ ಆಗಿದೆ. ಅದರ ಭಾಗವಾಗಿಯೇ ಕವಿತಾ ಅವರು ನಿರ್ದೇಶಿಸಿರುವ ’ಗೌರಿ’ ಸಾಕ್ಷ್ಯಚಿತ್ರ ಮೂಡಿಬಂದಿದೆ. ಇಡೀ ಚಿತ್ರ ಗೌರಿ ಲಂಕೇಶರ ಹೋರಾಟದ ಮತ್ತು ಪತ್ರಿಕೋದ್ಯಮದ ಬದುಕಿನ ಎಳೆಗಳನ್ನು ಹೆಣೆಯುವುದರಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ನೋಡುವವರಿಗೆ, ಪತ್ರಕರ್ತರಿಗಿರಬೇಕಾದ ಸಾಮಾಜಿಕ ಹೊಣೆಯ ಚಿತ್ರಣ ಹಾಗೂ ಕನ್ನಡ ಪ್ರಜ್ಞೆಯಂತಹ ಆದಿಮ ಪ್ರತಿಭಟನಾತ್ಮಕ ಧಾರೆಯು ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಹೇಗೆ ನಿಲ್ಲಬೇಕೆಂಬ ಮಾದರಿ ಸಿಗುತ್ತದೆ. ಅಲ್ಲದೆ, ಒಂದು ಚಳವಳಿ ಯಾವುದೆಲ್ಲವನ್ನು ಒಳಗೊಳ್ಳಬೇಕು ಹಾಗೂ ಆ ಮೂಲಕ ಜನಾಭಿಪ್ರಾಯವನ್ನು ಹೋರಾಟದ ಶಕ್ತಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬ ಅರಿವು ದಕ್ಕುತ್ತದೆ.

ಗೌರಿ ಇಲ್ಲವಾಗಿ ಐದು ವರ್ಷಗಳು ಸಂದುಹೋಗಿವೆ. ಅದರ ಜೊತೆಗೆ ಜಗತ್ತಿನ ಇತಿಹಾಸದಲ್ಲಿ ಅಳಿದು ಹೋದ ಫ್ಯಾಸಿಸ್ಟ್ ಶಕ್ತಿಗಳನ್ನೂ ಮೀರಿಸುವ ಕ್ರೌರ್ಯ ನಮ್ಮ ನೆಲದಲ್ಲಿ ಚಿಗುರೊಡೆದು ವರ್ಷಗಳಾಗಿವೆ. ಈ ಕ್ರೌರ್ಯವನ್ನು ಕನ್ನಡ ಪ್ರಜ್ಞೆ ಒಂದು ಎಚ್ಚರವಾಗಿ ಎದುರಿಸಬೇಕಿರುವುದನ್ನು ’ಗೌರಿ’ ಸಿನಿಮಾ ನೆನಪಿಸಿ ಸಾಕ್ಷೀಕರಿಸುತ್ತದೆ. ಗೌರಿಯವರು ಪತ್ರಿಕೆ ವಹಿಸಿಕೊಂಡ ದಿನದಿಂದ ಅವರು ಒಡನಾಡಿದ, ಹೋರಾಟಗಳನ್ನು ದಾಖಲಿಸಲಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಕೋಮುವಾದದ ವಿರುದ್ಧ ನಡೆದ ಮೂರು ದಶಕಗಳ ಹೋರಾಟವನ್ನು ಸಾಕ್ಷ್ಯಚಿತ್ರ ದಾಖಲಿಸುತ್ತದೆ. ಈ ದಾಖಲೆಯಲ್ಲಿ ಸಾಹಿತಿಗಳು, ಹೋರಾಟಗಾರರು, ಕಲಾವಿದರು ಮೊದಲಾಗಿ ಗೌರಿಯವರ ಒಡನಾಡಿಗಳೆಲ್ಲ ಕಾಣಸಿಗುತ್ತಾರೆ.

ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

ಗೌರಿ ಲಂಕೇಶರನ್ನು ಕಂಡರೇ ನಡುಗುತ್ತಿದ್ದ ಸಂಘ ಪರಿವಾರದವರ ಮೈ ಪರಚಿಕೊಳ್ಳುವ ಭಾಷಣಗಳ ಫುಟೇಜ್‌ಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಗೌರಿಯನ್ನು ಸುಟ್ಟೆವೆಂದು ಹರ್ಷಾಚರಣೆ ಮಾಡಿದ ಮುಠ್ಠಾಳರಿಗೆ ಈ ಮೂಲಕ ಲಕ್ಷಾಂತರ ಗೌರಿಯರ ಬದುಕು ನಿದ್ದೆಗೆಡಿಸುತ್ತದೆ. ಅವರನ್ನು ಕೊಂದಾಗ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಗ್ರೌಂಡಿಗೆ “ನಾನೂ ಗೌರಿ ನಾವೆಲ್ಲಾ ಗೌರಿ” ಎಂದು ಎದೆ ತಟ್ಟಿಕೊಳ್ಳುತ್ತಾ ಹರಿದು ಬಂದ ಜನಸಾಗರದ ದೃಶ್ಯಗಳಂತೂ ಗೌರಿ ಸಿನಿಮಾದ ಮುಖ್ಯ ಭಾಗ. ಆ ದಿನ ಬೆಂಗಳೂರಿನಲ್ಲಿ ಮೊಳಗಿದ ಘೋಷಣೆಗಳು ಆನಂತರದ ದಿನಗಳಲ್ಲಿ ಪ್ರತಿರೋಧದ ಶಕ್ತಿಯಾಗಿ ದೇಶಾದ್ಯಂತ ಪಸರಿಸಿದ ಹೋರಾಟದ ಕಿಚ್ಚನ್ನೂ ಸಿನಿಮಾದಲ್ಲಿ ಪ್ರಾತಿನಿಧಿಕವಾಗಿ ಒಳಗೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಕರ್ನಾಟಕದಲ್ಲಿ ನನ್ನಂತಹ ಹೊಸತಲೆಮಾರಿನ ಯುವಜನರಿಗಂತೂ ಕೋಮುವಾದವನ್ನು, ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲೇಬೇಕಾದ ಪಾಠಗಳನ್ನು ಆ ’ನಾನೂ ಗೌರಿ’ ಸಮಾವೇಶ ನೀಡಿತು.

ಗೌರಿ ಅವರ ಜೊತೆಗೆ ಒಡನಾಡಿದ ಕೆಲವು ಪ್ರಮುಖ ವ್ಯಕ್ತಿಗಳನ್ನು ಸಿನಿಮಾಗಾಗಿ ಮಾತನಾಡಿಸಲಾಗಿದೆ. ಅದರಲ್ಲಿ ಕವಿತಾ ಅವರ ಮಗಳು ಇಶಾ ಮಾತುಗಳು ಹೆಚ್ಚು ಆರ್ದ್ರವಾಗಿ ಮೂಡಿಬಂದಿವೆ. ಸಾವಿನ ದಿನಗಳಲ್ಲಿ ಗೌರಿಯವರ ಪ್ರೀತಿಯಲ್ಲಿ ಮಿಂದಿದ್ದ ನೂರಾರು ಯುವಜನರ ಕಣ್ಣುಗಳ ಹನಿಗಳನ್ನು ಇಶಾ ಮಾತಾಗಿಸಿದ್ದಾರೆ. ಕೆ.ಷರೀಫಾ ಅವರ ಒಡನಾಟದ ನೆನಪು ಗೌರಿಯವರ ಎಲ್ಲಾ ಒಡನಾಡಿಗಳ ನೆನಪಾಗಿ ನೋಡುಗರ ಎದೆಯೊಳಗೆ ಪಲ್ಲವಿಸುತ್ತದೆ.

ಇನ್ನು ಕೋಮು ಸೌಹಾರ್ದ ವೇದಿಕೆಯ ಪ್ರತಿಭಟನೆಗಳು, ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಶನದಲ್ಲಿ ಗೌರಿ ಅವರು ಮಾತನಾಡಲು ಹೋದಾಗ ಅಲ್ಲಿ ಅವರಿಗೆ ಎದುರಾದ ವಿರೋಧವನ್ನು ಚಂದ್ರಶೇಖರ ಪಾಟೀಲರು ಛಲಬಿಡದೆ ನಿಭಾಯಿಸಿದ್ದು, ದಿಡ್ಡಳ್ಳಿ ಹೋರಾಟದಲ್ಲಿ ಭೂಮಿ ವಸತಿ ವಂಚಿತರಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದು ಈ ಎಲ್ಲಾ ವಿವರಗಳೂ ಪತ್ರಕರ್ತೆಯಾಗಿದ್ದ ಗೌರಿಯವರು ಹೋರಾಟಗಾರ್ತಿ ಪತ್ರಕರ್ತೆಯಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಮಂಡಿಸುತ್ತವೆ.

ಪಶ್ಚಿಮಘಟ್ಟದ ಕಾಡುಗಳಲ್ಲಿ ಇಳಿದು ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿದ ವಿವರಗಳಂತೂ ಮೈಜುಮ್ಮೆನ್ನಿಸುತ್ತವೆ. ಕನ್ನಡ ಪತ್ರಿಕೋದ್ಯಮದಲ್ಲಿ ಮರೆವಿಗೆ ಸಂದಿದ್ದ ಸಾಹಸದ ಆಕ್ಟಿವಿಸ್ಟ್ ಪತ್ರಿಕೋದ್ಯಮ ಗೌರಿಯವರಿಂದ ಮುನ್ನಲೆಗೆ ಬರುತ್ತದೆ. ನಕ್ಸಲ್ ಹೋರಾಟಗಳಲ್ಲಿದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜರವರನ್ನು ಸಮಾಜದ ಮುಖ್ಯವಾಹಿನಿಗೆ ತಂದದ್ದು ಮುಖ್ಯ ಸಾಹಸಗಳಲ್ಲೊಂದು.

ಭಾರತದ ಯುವ ಪ್ರಜ್ಞೆಗಳಾದ ಜಿಗ್ನೇಶ್ ಮೆವಾನಿ, ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್ ಮತ್ತು ಉಮರ್ ಖಾಲಿದ್ ಅವರನ್ನು ಗೌರಿ ಅವರು ಹಚ್ಚಿಕೊಂಡಿದ್ದು ಮತ್ತು ಅವರೂ ಗೌರಿಯವರನ್ನು ತಾಯಿಯಂತೆ ಭಾವಿಸುತ್ತಿದ್ದುದು ಕರ್ನಾಟಕದ ಹೋರಾಟಗಾರ ಯುವಜನತೆಗೆ ಸ್ಫೂರ್ತಿಯಾಗಿತ್ತು. ಸಿನಿಮಾ ಅದನ್ನೂ ದಾಖಲಿಸಿದೆ.

ಬಹಳ ಶ್ರಮವಹಿಸಿ ಕವಿತಾ ಅವರು ’ಗೌರಿ’ ಸಿನಿಮಾ ಕಟ್ಟಿದ್ದಾರೆ. ಆದರೆ, ನನ್ನ ತಿಳಿವಿನ ಮಿತಿಯಲ್ಲಿ ಸಿನಿಮಾ ಒಳಗೊಳ್ಳಬೇಕಿದ್ದ ಇನ್ನೂ ಕೆಲವು ಅಂಶಗಳಿದ್ದವು; ಗೌರಿಯವರನ್ನು ಆತುಕೊಂಡ ದಲಿತ ಹೋರಾಟಗಾರರ-ಹೋರಾಟಗಳ ವಿವರಗಳು, ಚಲೋ ಉಡುಪಿ ಜಾಥಾ ಹಾಗೂ ಸಮಾವೇಶ, ಅವರೇ ಜಿಗ್ನೇಶ್ ಜೊತೆ ನಿಂತು ಕಂಬನಿ ತುಂಬಿದ ಕಣ್ಣುಗಳಿಂದಲೇ ಭಾಗವಹಿಸಿದ ಚಲೋ ತುಮಕೂರು, ಹಗಲು ರಾತ್ರಿ ಫ್ರೀಡಂ ಪಾರ್ಕಿನ ಹುಲ್ಲುಹಾಸಿನ ಮೇಲೆ ಕೂತು ಶ್ರಮವಹಿಸಿ ನಡೆಸಿದ ಬೆಂಗಳೂರು ಚಲೋ ಹೋರಾಟಗಳ ವಿವರಗಳನ್ನು ಸಿನಿಮಾ ಒಳಗೊಂಡಿದ್ದರೆ ಗೌರಿಯ ವ್ಯಕ್ತಿತ್ವದ ವಿಸ್ತೃತ ಹರವನ್ನು ದಾಖಲಿಸಿದಂತಾಗುತ್ತಿತ್ತು. ಹಾಗೂ ಗೌರಿಯವರು ಒಡನಾಟ ಇಟ್ಟುಕೊಂಡಿದ್ದ ಹಲವು ಬಗೆಯ ಪ್ರಗತಿಪರ ಸಂಘಟನೆಗಳ ಚಿತ್ರಣವೂ ಅದಾಗುತ್ತಿತ್ತು.

ಈ ಸಣ್ಣಪುಟ್ಟ ಕೊರತೆಗಳೊಂದಿಗೆಯೇ ಕವಿತಾ ಲಂಕೇಶ್ ರೂಪಿಸಿದ ’ಗೌರಿ’ ಎಲ್ಲರೂ ನೋಡಲೇಬೇಕಾದ ಸಿನಿಮಾ.

ಅಶ್ವಿನಿ ಬೋಧ್

ಅಶ್ವಿನಿ ಬೋಧ್
ಕನ್ನಡ ಉಪನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....