Homeಮುಖಪುಟಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

ಗೌರಿ ಸಾಕ್ಷ್ಯಚಿತ್ರ; ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಹೋರಾಡಬೇಕಾದ ಕನ್ನಡ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾ

- Advertisement -
- Advertisement -

ಕನ್ನಡದ ಪ್ರಜ್ಞೆಯನ್ನು ಕಾಡಿ, ಕದಡಿ, ತಲೆಮಾರುಗಳನ್ನೇ ಜೀವಪರ ಮೌಲ್ಯಗಳಿಗೆ ಒಗ್ಗಿಸಲು ತಮ್ಮ ಬರವಣಿಗೆ ಮತ್ತು ಪತ್ರಿಕೋದ್ಯಮದ ಮೂಲಕ ಪ್ರಯತ್ನಿಸಿದ ಪಿ. ಲಂಕೇಶ್ ಅವರ ಮಗಳಾದ್ದರಿಂದಲೋ ಏನೋ ಗೌರಿ ಲಂಕೇಶ್ ತಮ್ಮ ಉನ್ನತ ವಿದ್ಯಾಭ್ಯಾಸಕ್ಕಾಗಿ ಪತ್ರಿಕೋದ್ಯಮವನ್ನು ಆರಿಸಿಕೊಂಡರು. ಕನ್ನಡ ಪತ್ರಿಕೋದ್ಯಮದ ದಿಕ್ಕನ್ನೇ ಬದಲಿಸಿದ್ದ ಅಪ್ಪನ ಪ್ರಭಾವ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಿದ್ದರೂ, ಇಂಗ್ಲಿಷ್ ಪತ್ರಿಕೋದ್ಯಮವನ್ನು ಆಯ್ಕೆ ಮಾಡಿಕೊಂಡಿದ್ದು ತನ್ನ ಸ್ವಂತಿಕೆಯ ಕಾರಣಕ್ಕೇ ಆಗಿತ್ತು. ಆ ಕಾಲಕ್ಕೆ ವಿದೇಶದಲ್ಲಿ, ದೇಶದ ಹಲವೆಡೆ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ಗೌರಿ ತಾಯ್ನಾಡಿಗೆ ಬರುವಷ್ಟರಲ್ಲಿ ಕನ್ನಡನಾಡು ಲಂಕೇಶರ ಪ್ರತಿಭೆಯಿಂದ ಸಾಕಷ್ಟು ಪ್ರಭಾವಕ್ಕೆ ಒಳಪಟ್ಟಿತ್ತು. ಆದರೆ, ಅಷ್ಟರಲ್ಲಿ ಲಂಕೇಶ್ ಭೌತಿಕವಾಗಿ ವೇದಿಕೆಯಿಂದ ನಿರ್ಗಮಿಸಿದ್ದರು. ಒಂದಿಡೀ ತಲೆಮಾರಿನ ಪ್ರಜ್ಞೆಯ ಜೊತೆಗೇ ಹೊಂದಿಕೊಂಡಿದ್ದ, ಆ ಪ್ರಜ್ಞೆಯನ್ನು ಆರೋಗ್ಯಕರವಾಗಿ ರೂಪಿಸಲು ಶ್ರಮಿಸುತ್ತಿದ್ದ ’ಲಂಕೇಶ್ ಪತ್ರಿಕೆ’ಯ ಹೊಣೆ ಗೌರಿ ಲಂಕೇಶರ ಹೆಗಲಿಗೆ ಬಿದ್ದಾಗ, ಆ ಜವಾಬ್ದಾರಿ ಕೇವಲ ಒಂದು ಪತ್ರಿಕೆಯನ್ನು ನಡೆಸುವುದಷ್ಟೇ ಅಲ್ಲ ಎಂಬ ಅರಿವು ಅವರಿಗಿತ್ತು. ಈ ಜವಾಬ್ದಾರಿಯನ್ನು ಅವರು ಕೋಮುವಾದದ ವಿರುದ್ಧದ ಸಕ್ರಿಯ ಹೋರಾಟದ ಮೂಲಕ ವಿಸ್ತರಿಸಿಕೊಂಡು ಸಾಗಿದರು.

ಕುಟುಂಬದ ಹಿರಿಯ ಮಗಳಾದ್ದರಿಂದ ಕೆಲವು ಸಂಕಷ್ಟಗಳೂ ಎದುರಾದವು. ’ಲಂಕೇಶ್ ಪತ್ರಿಕೆ’ಯನ್ನು ’ಗೌರಿ ಲಂಕೇಶ್ ವಾರ ಪತ್ರಿಕೆ’ಯನ್ನಾಗಿ ಬದಲಿಸಬೇಕಾಯಿತು. ಇಡೀ ಪತ್ರಿಕೆಯನ್ನು ಕೋಮುವಾದದ ವಿರುದ್ಧದ ಪ್ರಜ್ಞಾವಾಹಿನಿಯಾಗಿ ಬದಲಿಸಿದರು. ಟೀಕೆ, ಮೆಚ್ಚುಗೆಗಳ ಜೊತೆಗೆ ಹಳಬರ ನಿರ್ಗಮನ ಹೊಸಬರ ಆಗಮನಗಳಿಂದ ಗೌರಿ ಲಂಕೇಶ್ ’ಗೌರಿ’ಯಾಗುತ್ತಾ ಸಾಗಿದರು ಮತ್ತು ಅದೇ ದಾರಿಯಲ್ಲಿ ಹಠಾತ್ತನೆ ನಿರ್ಗಮಿಸಿದರು. ಅವರು ನಿರ್ಗಮಿಸುವಂತಹ ವಿಷಮ ವಾತಾವರಣ ಆಗಲೇ ಈ ನಾಡಿನಲ್ಲಿ ನಿರ್ಮಾಣವಾಗಿತ್ತು. ಅದರ ವಿರುದ್ಧದ ಅವರ ಹೋರಾಟದ ಕಾರಣಕ್ಕಾಗಿಯೇ, ಆ ವಿಷಮ ವಾತಾವರಣವನ್ನು ನಿರ್ಮಿಸಿದವರು ಅವರನ್ನು ಭೌತಿಕವಾಗಿ ಇಲ್ಲವಾಗಿಸಿದರು.

ಲಂಕೇಶರು ತೀರಿಹೋದಾಗಿನಿಂದ ಗೌರಿ ಅವರ ಬೆನ್ನಿಗೆ ನಿಂತ ಅವರ ತಂಗಿ ಕವಿತಾ ಲಂಕೇಶ್ ’ಗೌರಿ ಪ್ರಜ್ಞೆ’ಯನ್ನು ಈಗ ಪ್ರಪಂಚದಾದ್ಯಂತ ಹೊತ್ತು ಸಾಗುತ್ತಿದ್ದಾರೆ; ಇದು ಗೌರಿಯವರ ಹೋರಾಟದ ಮುಂದುವರಿಕೆಯೇ ಆಗಿದೆ. ಅದರ ಭಾಗವಾಗಿಯೇ ಕವಿತಾ ಅವರು ನಿರ್ದೇಶಿಸಿರುವ ’ಗೌರಿ’ ಸಾಕ್ಷ್ಯಚಿತ್ರ ಮೂಡಿಬಂದಿದೆ. ಇಡೀ ಚಿತ್ರ ಗೌರಿ ಲಂಕೇಶರ ಹೋರಾಟದ ಮತ್ತು ಪತ್ರಿಕೋದ್ಯಮದ ಬದುಕಿನ ಎಳೆಗಳನ್ನು ಹೆಣೆಯುವುದರಲ್ಲಿ ಯಶಸ್ವಿಯಾಗಿದೆ. ಈ ಸಿನಿಮಾ ನೋಡುವವರಿಗೆ, ಪತ್ರಕರ್ತರಿಗಿರಬೇಕಾದ ಸಾಮಾಜಿಕ ಹೊಣೆಯ ಚಿತ್ರಣ ಹಾಗೂ ಕನ್ನಡ ಪ್ರಜ್ಞೆಯಂತಹ ಆದಿಮ ಪ್ರತಿಭಟನಾತ್ಮಕ ಧಾರೆಯು ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಹೇಗೆ ನಿಲ್ಲಬೇಕೆಂಬ ಮಾದರಿ ಸಿಗುತ್ತದೆ. ಅಲ್ಲದೆ, ಒಂದು ಚಳವಳಿ ಯಾವುದೆಲ್ಲವನ್ನು ಒಳಗೊಳ್ಳಬೇಕು ಹಾಗೂ ಆ ಮೂಲಕ ಜನಾಭಿಪ್ರಾಯವನ್ನು ಹೋರಾಟದ ಶಕ್ತಿಯಾಗಿ ಹೇಗೆ ರೂಪಿಸಿಕೊಳ್ಳಬೇಕು ಎಂಬ ಅರಿವು ದಕ್ಕುತ್ತದೆ.

ಗೌರಿ ಇಲ್ಲವಾಗಿ ಐದು ವರ್ಷಗಳು ಸಂದುಹೋಗಿವೆ. ಅದರ ಜೊತೆಗೆ ಜಗತ್ತಿನ ಇತಿಹಾಸದಲ್ಲಿ ಅಳಿದು ಹೋದ ಫ್ಯಾಸಿಸ್ಟ್ ಶಕ್ತಿಗಳನ್ನೂ ಮೀರಿಸುವ ಕ್ರೌರ್ಯ ನಮ್ಮ ನೆಲದಲ್ಲಿ ಚಿಗುರೊಡೆದು ವರ್ಷಗಳಾಗಿವೆ. ಈ ಕ್ರೌರ್ಯವನ್ನು ಕನ್ನಡ ಪ್ರಜ್ಞೆ ಒಂದು ಎಚ್ಚರವಾಗಿ ಎದುರಿಸಬೇಕಿರುವುದನ್ನು ’ಗೌರಿ’ ಸಿನಿಮಾ ನೆನಪಿಸಿ ಸಾಕ್ಷೀಕರಿಸುತ್ತದೆ. ಗೌರಿಯವರು ಪತ್ರಿಕೆ ವಹಿಸಿಕೊಂಡ ದಿನದಿಂದ ಅವರು ಒಡನಾಡಿದ, ಹೋರಾಟಗಳನ್ನು ದಾಖಲಿಸಲಾಗಿದೆ. ಆ ಮೂಲಕ ಕರ್ನಾಟಕದಲ್ಲಿ ಕೋಮುವಾದದ ವಿರುದ್ಧ ನಡೆದ ಮೂರು ದಶಕಗಳ ಹೋರಾಟವನ್ನು ಸಾಕ್ಷ್ಯಚಿತ್ರ ದಾಖಲಿಸುತ್ತದೆ. ಈ ದಾಖಲೆಯಲ್ಲಿ ಸಾಹಿತಿಗಳು, ಹೋರಾಟಗಾರರು, ಕಲಾವಿದರು ಮೊದಲಾಗಿ ಗೌರಿಯವರ ಒಡನಾಡಿಗಳೆಲ್ಲ ಕಾಣಸಿಗುತ್ತಾರೆ.

ಇದನ್ನೂ ಓದಿ: ‘ಗೌರಿ’ ಸಾಕ್ಷ್ಯಚಿತ್ರ: “ದಡ ದಡ, ಒಂದಲ್ಲ ಎರಡಲ್ಲ… ಸಾಲಾಗಿ ಏಳು, ತೂರಿದ್ದು ಗೌರಿಗೆ, ತಾಕಿದ್ದು ನಮ್ಮೆದೆಗೆ…”

ಗೌರಿ ಲಂಕೇಶರನ್ನು ಕಂಡರೇ ನಡುಗುತ್ತಿದ್ದ ಸಂಘ ಪರಿವಾರದವರ ಮೈ ಪರಚಿಕೊಳ್ಳುವ ಭಾಷಣಗಳ ಫುಟೇಜ್‌ಗಳನ್ನು ಈ ಸಾಕ್ಷ್ಯಚಿತ್ರ ಒಳಗೊಂಡಿದೆ. ಗೌರಿಯನ್ನು ಸುಟ್ಟೆವೆಂದು ಹರ್ಷಾಚರಣೆ ಮಾಡಿದ ಮುಠ್ಠಾಳರಿಗೆ ಈ ಮೂಲಕ ಲಕ್ಷಾಂತರ ಗೌರಿಯರ ಬದುಕು ನಿದ್ದೆಗೆಡಿಸುತ್ತದೆ. ಅವರನ್ನು ಕೊಂದಾಗ ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಗ್ರೌಂಡಿಗೆ “ನಾನೂ ಗೌರಿ ನಾವೆಲ್ಲಾ ಗೌರಿ” ಎಂದು ಎದೆ ತಟ್ಟಿಕೊಳ್ಳುತ್ತಾ ಹರಿದು ಬಂದ ಜನಸಾಗರದ ದೃಶ್ಯಗಳಂತೂ ಗೌರಿ ಸಿನಿಮಾದ ಮುಖ್ಯ ಭಾಗ. ಆ ದಿನ ಬೆಂಗಳೂರಿನಲ್ಲಿ ಮೊಳಗಿದ ಘೋಷಣೆಗಳು ಆನಂತರದ ದಿನಗಳಲ್ಲಿ ಪ್ರತಿರೋಧದ ಶಕ್ತಿಯಾಗಿ ದೇಶಾದ್ಯಂತ ಪಸರಿಸಿದ ಹೋರಾಟದ ಕಿಚ್ಚನ್ನೂ ಸಿನಿಮಾದಲ್ಲಿ ಪ್ರಾತಿನಿಧಿಕವಾಗಿ ಒಳಗೊಂಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಕರ್ನಾಟಕದಲ್ಲಿ ನನ್ನಂತಹ ಹೊಸತಲೆಮಾರಿನ ಯುವಜನರಿಗಂತೂ ಕೋಮುವಾದವನ್ನು, ಫ್ಯಾಸಿಸ್ಟ್ ಶಕ್ತಿಗಳನ್ನು ವಿರೋಧಿಸಲೇಬೇಕಾದ ಪಾಠಗಳನ್ನು ಆ ’ನಾನೂ ಗೌರಿ’ ಸಮಾವೇಶ ನೀಡಿತು.

ಗೌರಿ ಅವರ ಜೊತೆಗೆ ಒಡನಾಡಿದ ಕೆಲವು ಪ್ರಮುಖ ವ್ಯಕ್ತಿಗಳನ್ನು ಸಿನಿಮಾಗಾಗಿ ಮಾತನಾಡಿಸಲಾಗಿದೆ. ಅದರಲ್ಲಿ ಕವಿತಾ ಅವರ ಮಗಳು ಇಶಾ ಮಾತುಗಳು ಹೆಚ್ಚು ಆರ್ದ್ರವಾಗಿ ಮೂಡಿಬಂದಿವೆ. ಸಾವಿನ ದಿನಗಳಲ್ಲಿ ಗೌರಿಯವರ ಪ್ರೀತಿಯಲ್ಲಿ ಮಿಂದಿದ್ದ ನೂರಾರು ಯುವಜನರ ಕಣ್ಣುಗಳ ಹನಿಗಳನ್ನು ಇಶಾ ಮಾತಾಗಿಸಿದ್ದಾರೆ. ಕೆ.ಷರೀಫಾ ಅವರ ಒಡನಾಟದ ನೆನಪು ಗೌರಿಯವರ ಎಲ್ಲಾ ಒಡನಾಡಿಗಳ ನೆನಪಾಗಿ ನೋಡುಗರ ಎದೆಯೊಳಗೆ ಪಲ್ಲವಿಸುತ್ತದೆ.

ಇನ್ನು ಕೋಮು ಸೌಹಾರ್ದ ವೇದಿಕೆಯ ಪ್ರತಿಭಟನೆಗಳು, ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಶನದಲ್ಲಿ ಗೌರಿ ಅವರು ಮಾತನಾಡಲು ಹೋದಾಗ ಅಲ್ಲಿ ಅವರಿಗೆ ಎದುರಾದ ವಿರೋಧವನ್ನು ಚಂದ್ರಶೇಖರ ಪಾಟೀಲರು ಛಲಬಿಡದೆ ನಿಭಾಯಿಸಿದ್ದು, ದಿಡ್ಡಳ್ಳಿ ಹೋರಾಟದಲ್ಲಿ ಭೂಮಿ ವಸತಿ ವಂಚಿತರಿಗೆ ನ್ಯಾಯ ಕೊಡಿಸಲು ಶ್ರಮಿಸಿದ್ದು ಈ ಎಲ್ಲಾ ವಿವರಗಳೂ ಪತ್ರಕರ್ತೆಯಾಗಿದ್ದ ಗೌರಿಯವರು ಹೋರಾಟಗಾರ್ತಿ ಪತ್ರಕರ್ತೆಯಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಮಂಡಿಸುತ್ತವೆ.

ಪಶ್ಚಿಮಘಟ್ಟದ ಕಾಡುಗಳಲ್ಲಿ ಇಳಿದು ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿದ ವಿವರಗಳಂತೂ ಮೈಜುಮ್ಮೆನ್ನಿಸುತ್ತವೆ. ಕನ್ನಡ ಪತ್ರಿಕೋದ್ಯಮದಲ್ಲಿ ಮರೆವಿಗೆ ಸಂದಿದ್ದ ಸಾಹಸದ ಆಕ್ಟಿವಿಸ್ಟ್ ಪತ್ರಿಕೋದ್ಯಮ ಗೌರಿಯವರಿಂದ ಮುನ್ನಲೆಗೆ ಬರುತ್ತದೆ. ನಕ್ಸಲ್ ಹೋರಾಟಗಳಲ್ಲಿದ್ದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜರವರನ್ನು ಸಮಾಜದ ಮುಖ್ಯವಾಹಿನಿಗೆ ತಂದದ್ದು ಮುಖ್ಯ ಸಾಹಸಗಳಲ್ಲೊಂದು.

ಭಾರತದ ಯುವ ಪ್ರಜ್ಞೆಗಳಾದ ಜಿಗ್ನೇಶ್ ಮೆವಾನಿ, ಕನ್ಹಯ್ಯ ಕುಮಾರ್, ಶೆಹ್ಲಾ ರಷೀದ್ ಮತ್ತು ಉಮರ್ ಖಾಲಿದ್ ಅವರನ್ನು ಗೌರಿ ಅವರು ಹಚ್ಚಿಕೊಂಡಿದ್ದು ಮತ್ತು ಅವರೂ ಗೌರಿಯವರನ್ನು ತಾಯಿಯಂತೆ ಭಾವಿಸುತ್ತಿದ್ದುದು ಕರ್ನಾಟಕದ ಹೋರಾಟಗಾರ ಯುವಜನತೆಗೆ ಸ್ಫೂರ್ತಿಯಾಗಿತ್ತು. ಸಿನಿಮಾ ಅದನ್ನೂ ದಾಖಲಿಸಿದೆ.

ಬಹಳ ಶ್ರಮವಹಿಸಿ ಕವಿತಾ ಅವರು ’ಗೌರಿ’ ಸಿನಿಮಾ ಕಟ್ಟಿದ್ದಾರೆ. ಆದರೆ, ನನ್ನ ತಿಳಿವಿನ ಮಿತಿಯಲ್ಲಿ ಸಿನಿಮಾ ಒಳಗೊಳ್ಳಬೇಕಿದ್ದ ಇನ್ನೂ ಕೆಲವು ಅಂಶಗಳಿದ್ದವು; ಗೌರಿಯವರನ್ನು ಆತುಕೊಂಡ ದಲಿತ ಹೋರಾಟಗಾರರ-ಹೋರಾಟಗಳ ವಿವರಗಳು, ಚಲೋ ಉಡುಪಿ ಜಾಥಾ ಹಾಗೂ ಸಮಾವೇಶ, ಅವರೇ ಜಿಗ್ನೇಶ್ ಜೊತೆ ನಿಂತು ಕಂಬನಿ ತುಂಬಿದ ಕಣ್ಣುಗಳಿಂದಲೇ ಭಾಗವಹಿಸಿದ ಚಲೋ ತುಮಕೂರು, ಹಗಲು ರಾತ್ರಿ ಫ್ರೀಡಂ ಪಾರ್ಕಿನ ಹುಲ್ಲುಹಾಸಿನ ಮೇಲೆ ಕೂತು ಶ್ರಮವಹಿಸಿ ನಡೆಸಿದ ಬೆಂಗಳೂರು ಚಲೋ ಹೋರಾಟಗಳ ವಿವರಗಳನ್ನು ಸಿನಿಮಾ ಒಳಗೊಂಡಿದ್ದರೆ ಗೌರಿಯ ವ್ಯಕ್ತಿತ್ವದ ವಿಸ್ತೃತ ಹರವನ್ನು ದಾಖಲಿಸಿದಂತಾಗುತ್ತಿತ್ತು. ಹಾಗೂ ಗೌರಿಯವರು ಒಡನಾಟ ಇಟ್ಟುಕೊಂಡಿದ್ದ ಹಲವು ಬಗೆಯ ಪ್ರಗತಿಪರ ಸಂಘಟನೆಗಳ ಚಿತ್ರಣವೂ ಅದಾಗುತ್ತಿತ್ತು.

ಈ ಸಣ್ಣಪುಟ್ಟ ಕೊರತೆಗಳೊಂದಿಗೆಯೇ ಕವಿತಾ ಲಂಕೇಶ್ ರೂಪಿಸಿದ ’ಗೌರಿ’ ಎಲ್ಲರೂ ನೋಡಲೇಬೇಕಾದ ಸಿನಿಮಾ.

ಅಶ್ವಿನಿ ಬೋಧ್

ಅಶ್ವಿನಿ ಬೋಧ್
ಕನ್ನಡ ಉಪನ್ಯಾಸಕಿ ಮತ್ತು ಸಾಮಾಜಿಕ ಕಾರ್ಯಕರ್ತೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...