HomeUncategorizedಈ ಪತ್ರಗಳು ಹೆಚ್ಚಿಸುತ್ತಿರುವುದು ನಮ್ಮ ಸಂತಸವನ್ನಷ್ಟೇ ಅಲ್ಲ

ಈ ಪತ್ರಗಳು ಹೆಚ್ಚಿಸುತ್ತಿರುವುದು ನಮ್ಮ ಸಂತಸವನ್ನಷ್ಟೇ ಅಲ್ಲ

- Advertisement -
- Advertisement -

“ನಮ್ಮ ಗೌರಿ ಪತ್ರಿಕೆಯು ‘ನ್ಯಾಯಪಥ’ ಹೆಸರಿನಲ್ಲಿ ಮತ್ತೆ ಪ್ರಾರಂಭವಾಗಿರುವುದನ್ನು ಓದಿ ಬಹಳ ಸಂತೋಷವಾಗುತ್ತಿದೆ. ತಪ್ಪದೇ ನನ್ನ ವಿಳಾಸಕ್ಕೆ ಪತ್ರಿಕೆ ಕಳಿಸಿರಿ. ಅದರ ಚಂದಾ ಹಣ ಕಳಿಸುವೆನು. ತಾವು ನನ್ನ ವಿಳಾಸಕ್ಕೆ ಪತ್ರಿಕೆ ಕಳಿಸಿದ್ದಕ್ಕೆ ಧನ್ಯವಾದಗಳು. ಉಳಿದ ವಿಷ್ಯ ಆಮೇಲೆ ಪತ್ರಮುಖೇನ ಬರೆಯುವೆನು. ಮೊದಲು ಒಂದು ವರ್ಷದ ಚಂದಾ ಹಣ ಚೆಕ್ ಮೂಲಕ ಕಳಿಸಿ ನಂತರ ಉಳಿದೆಲ್ಲ ವ್ಯವಹರಿಸುತ್ತೇನೆ. ರೈತ ಗೆಳೆಯರಿಗೆ, ನನ್ನ ಮಕ್ಕಳಿಗೂ ಪತ್ರಿಕೆ ತರಿಸಿಕೊಳ್ಳಲು ಹೇಳುವೆನು.

46ನೇ ಸಂಚಿಕೆ ಬಂದಾಗಲಾದರೂ ವಿಷಯ ತಿಳಿಯಿತಲ್ಲ. ನನಗೆ ಆರೋಗ್ಯ ಸರಿಯಿಲ್ಲದೇ ಮೊದಲಿನಂತೆ ತಿರುಗಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿಯೂ ಈ ಪತ್ರಿಕೆ ಓದಲು ಇಷ್ಟು ತಡವಾಯಿತು. ಕ್ಷಮೆ ಇರಲಿ. ನನ್ನ ವಿಳಾಸ ತಿಳಿದು ಪತ್ರಿಕೆ ಕಳಿಸಿದ್ದಕ್ಕಾಗಿ ನೂರಲ್ಲ, ಸಾವಿರ ನಮಸ್ಕಾರಗಳು.’ – ಕಡಿದಾಳು ಶಾಮಣ್ಣ ರೈತ.

ಪೋಸ್ಟ್ ಕಾರ್ಡ್‍ನಲ್ಲಿ ನಮಗೆ ಈ ಪತ್ರ ಬಂದಿತು. ರೈತಸಂಘದ ಹಿರಿಯರಲ್ಲಿ ಹಲವರು ರೂಢಿಸಿಕೊಂಡಿರುವಂತೆ ಹಸಿರು ಇಂಕಿನಲ್ಲಿ ಬರೆದ ಪತ್ರವದು. ಶಾಮಣ್ಣನವರಂತಹ ಹಿರಿಯರಿಗೆ ಇಷ್ಟು ಕಾಲ ಪತ್ರಿಕೆ ತಲುಪಿಸದಿದ್ದಕ್ಕೆ ನಾವು ನಾಚಿಕೆ ಪಟ್ಟುಕೊಳ್ಳಬೇಕು. ಆದರೆ, ಅವರು ತಾನು ಹೆಚ್ಚು ತಿರುಗಾಡದೇ ಇರುವುದರಿಂದ ಪತ್ರಿಕೆಯ ಬಗ್ಗೆ ತಾನೇ ತಿಳಿಯದಿದ್ದುದು ತಪ್ಪು ಎಂದು ಭಾವಿಸುವ ದೊಡ್ಡ ಮನಸ್ಸಿನವರು.
ಇದೇ ರೀತಿಯಲ್ಲಿ ಹೆಚ್ಚು ಓಡಾಡಲು ಆಗದ ಹೇಮಕ್ಕನವರು ನಮ್ಮ ಪತ್ರಿಕೆಯ ಓದನ್ನು ಒಂದು ವಾರವೂ ತಪ್ಪಿಸಿಲ್ಲ. ಪತ್ರಿಕೆಯ ಅಖಂಡ ಅಭಿಮಾನಿಯಾದ ಅವರು ಕಳೆದ ವಾರದ ಸಂಚಿಕೆಯಲ್ಲಿದ್ದ ಪ್ರೂಫ್ ತಪ್ಪುಗಳ ಪಟ್ಟಿ ಮಾಡಿ ಕಳಿಸಿದ್ದಾರೆ.

ನಮ್ಮ ಕನ್ಸಲ್ಟಿಂಗ್ ಎಡಿಟರ್ ಉಮಾಪತಿಯವರು, ಪತ್ರಿಕೆಯನ್ನು ನೋಡಿದಕೂಡಲೇ ಸಗಟಾಗಿ ಸಾಕಷ್ಟು ಹೊಗಳಿ ನಮ್ಮ ಸ್ಫೂರ್ತಿ ಹೆಚ್ಚಿಸುತ್ತಾರೆ. ನಂತರ ನಾವು ಮಾಡಿರುವ ತಪ್ಪುಗಳನ್ನು ಒಂದಾದಮೇಲೆ ಒಂದು ಹೇಳುತ್ತಾರೆ. ಮೂಲೆಯಲ್ಲಿದ್ದ ಕವನದಲ್ಲಿ ಬಚ್ಚಿಟ್ಟುಕೊಂಡಿರುವ ಒಂದು ಪ್ರೂಫ್ ತಪ್ಪು ಸಹ ಅವರಿಗೆ ಕಾಣಿಸಿರುತ್ತದೆ. ಆಯಾ ವಾರದ ಸಂಚಿಕೆ ರೂಪಿಸುವಾಗ ತಾನು ತಲೆ ಮೇಲೆ ಕೂರಬಾರದು ಎಂಬ ಬಗ್ಗೆ ಅವರು ಬಹಳ ಪ್ರಜ್ಞಾಪೂರ್ವಕವಾಗಿರುತ್ತಾರೆ. ಆದರೆ, ಹಿಂದಿನ ಸಂಚಿಕೆಗಳ ಅವರ ರಿವ್ಯೂ ಮುಂದಿನ ಸಂಚಿಕೆಗಳನ್ನೂ ರೂಪಿಸುತ್ತಿರುತ್ತದೆ. ಈ ವಾರ ಉದ್ಯಮಿ ಸಿದ್ದಾರ್ಥ ಹೆಗಡೆಯ ಮಿಸ್ಸಿಂಗ್ ಕುರಿತು ಬರೆಯುವಾಗ ಆತನ ಬದುಕಿನ ಮಾನವೀಯ ಅಂಶಗಳು ಮತ್ತು ರಾಜಕೀಯ ಬಲದ ಮೂಲಕ ಮಾಡಿರಬಹುದಾದ ಹಗರಣಗಳನ್ನು ಎರಡನ್ನೂ ಯಾವ ಬ್ಯಾಲೆನ್ಸ್‍ನಲ್ಲಿ ಬರೆಯಬೇಕೆಂಬ ಕುರಿತು ವಿಶೇಷ ಕಿವಿಮಾತು ಹೇಳಿದರು.

ಶನಿವಾರ, ಭಾನುವಾರ ಮಂಡ್ಯದಲ್ಲಿ ನಡೆದ ಮನುಜಮತ ಸಿನಿಯಾನ ಸಿನೆಮಾ ಹಬ್ಬದಲ್ಲಿ ಮೈಸೂರಿನ ಗೆಳೆಯರೊಬ್ಬರು ಸಿಕ್ಕರು. ಸಿನೆಮಾ ಕ್ಷೇತ್ರದ ಕುರಿತು ಅಪಾರ ಆಸಕ್ತಿ ಮತ್ತು ವಿಶೇಷ ಒಳನೋಟಗಳಿರುವ ಅವರು ‘ನಾನು ಇತ್ತೀಚೆಗೆ ನ್ಯೂಸ್ ಫಾಲೋ ಮಾಡಲು ಬೇರೆ ಯಾವುದನ್ನೂ ನೋಡುತ್ತಿಲ್ಲ ಸರ್. ನಾನುಗೌರಿ.ಕಾಂ ಮಾತ್ರ ನೋಡುತ್ತೇನೆ’ ಎಂದರು. ಅದರಲ್ಲಿ ನಮ್ಮ ಬಗೆಗಿನ ಮೆಚ್ಚುಗೆಗಿಂತ ನ್ಯೂಸ್ ಚಾನೆಲ್‍ಗಳ ಕುರಿತ ಸಿಟ್ಟೇ ಹೆಚ್ಚಿರಬಹುದು ಎನಿಸಿತು.

ಚಿತ್ರದುರ್ಗ ಮತ್ತು ದಾವಣಗೆರೆಗಳಲ್ಲಿ ನಡೆದ ಪತ್ರಿಕಾ ಬಳಗದ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದ ಗಿರೀಶ್ ತಾಳಿಕಟ್ಟೆಯವರಿಗೆ ಆಶ್ಚರ್ಯವಾಗಿತ್ತು. ಅಷ್ಟೂ ವಾರಗಳಲ್ಲಿ ನಮ್ಮಲ್ಲಿ ಯಾವ ಇಶ್ಯೂ ಕುರಿತು ಹೆಚ್ಚು ಲೇಖನಗಳು ಬಂದಿಲ್ಲ ಎಂದು ಕೆಲವು ಓದುಗರು ಗುರುತಿಸಿ ಹೇಳಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಈಗಲೂ ಅವರೆಲ್ಲರಿಗೆ ಲಂಕೇಶರು ಸಂಪಾದಿಸುತ್ತಿದ್ದ ‘ಲಂಕೇಶ್ ಪತ್ರಿಕೆ’ಯೇ ಗುಣಮಟ್ಟದ ಟ್ಯಾಬ್ಲಾಯ್ಡ್ ಹೇಗಿರಬೇಕು ಎಂಬುದಕ್ಕೆ ಅಳತೆಗೋಲು! ಈ ಎರಡು ಜಿಲ್ಲೆಗಳ ಸಭೆಗಳ ಅನುಭವದ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಮಾಲೋಚನಾ ಸಭೆಗಳು ನಿಗದಿಯಾಗಿವೆ. ಬಿಜಾಪುರದ ಸಭೆಯಲ್ಲಿ ಭಾಗವಹಿಸಲು ಬಸ್ ಹತ್ತುವ ಮುನ್ನ ಇದನ್ನು ಬರೆಯುತ್ತಿದ್ದೇನೆ.

ಇದನ್ನು ಓದಿ: ಮನ ಮುಟ್ಟುವ ಪತ್ರಿಕೋದ್ಯಮದ ಹಾದಿಯಲ್ಲಿ ಇನ್ನೊಂದು ಹೆಜ್ಜೆ

ಮೇಲಿನವೆಲ್ಲವೂ ನಮ್ಮ ಮೇಲಿರುವ ಜವಾಬ್ದಾರಿಯ ಪ್ರಮಾಣವನ್ನು ತೋರುತ್ತಿವೆ. ಇದನ್ನು ಪ್ರೀತಿಯಿಂದ ಸ್ವೀಕರಿಸಲು ಬಹಳಷ್ಟು ಜನರಿದ್ದಾರೆ. ಅದಕ್ಕೆ ಅನುಗುಣವಾಗಿ ರಂಜನೆ, ಬೋಧನೆ, ಪ್ರಚೋದನೆಗಳ ಸರಿಯಾದ ಮಿಶ್ರಣದ ಎರಕ ಹೊಯ್ದು ಪ್ರತೀವಾರವೂ ಪತ್ರಿಕೆ ಸಿದ್ಧಪಡಿಸಬೇಕು. 20 ವರ್ಷಗಳಲ್ಲಿ ಬದಲಾಗಿರುವ ರಾಜಕೀಯ, ಸಾಮಾಜಿಕ, ಸಾಂಸ್ಕøತಿಕ ಪರಿಸ್ಥಿತಿ ಮತ್ತು ಅಭಿರುಚಿಗಳನ್ನು ಅರ್ಥಮಾಡಿಕೊಂಡು, ಈ ಹೊತ್ತಿನ ಜಾಣ ಜಾಣೆಯರಿಗೂ ಇದನ್ನು ತಲುಪಿಸಬೇಕು.

ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಅದನ್ನು ಮಾಡಬೇಕಿದೆ. ಉದಾಹರಣೆಗೆ ಪ್ರೂಫ್ ತಪ್ಪುಗಳ ಬಗ್ಗೆ ನಮಗೂ ಅರಿವಿದೆ. ನಮ್ಮ ಕಚೇರಿಯಲ್ಲಿ ಎ 3 ಸೈಜಿನ ಪ್ರಿಂಟರ್ ಸಹ ಇಲ್ಲ. ಹಾಗಾಗಿ ಕಿರಿದಾದ ಅಕ್ಷರಗಳ ನಡುವೆ ತಪ್ಪುಗಳು ನುಸುಳುತ್ತಲೇ ಇವೆ. ಈ ಸಂಚಿಕೆಯಿಂದ ಮೂರು ಬಾರಿ ಪ್ರೂಫ್ ತಿದ್ದುವ ಮೂಲಕ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಪ್ರತೀ ವಾರವೂ ಹೊಸಬರು ಬರೆಯಲಿದ್ದಾರೆ. ಬರಹಗಳ ವೈವಿಧ್ಯ, ನಮ್ಮ ಪ್ರಸಾರ ವ್ಯಾಪ್ತಿ ಮತ್ತು ಆರ್ಥಿಕ ಬಲ ಹೆಚ್ಚಾಗಲು ನೀವೆಲ್ಲರೂ ಇನ್ನಷ್ಟು ಕೈ ಜೋಡಿಸುವ ಅಗತ್ಯವಿದೆ.

ನಿಮ್ಮೆಲ್ಲರ ಪ್ರೀತಿ ಹೆಚ್ಚಾದಂತೆ ಕೆಲವರ ಅಸೂಯೆ ಮತ್ತು ದಾಳಿಯೂ ಹೆಚ್ಚಾಗುತ್ತಾ ಹೋಗುತ್ತದೆ. ಅದನ್ನೂ ಸಮತೋಲನದಿಂದ ಎದುರಿಸುತ್ತಾ ನಮ್ಮ ಕರ್ತವ್ಯವನ್ನು ಮುಂದುವರೆಸುತ್ತೇವೆಂಬ ಭರವಸೆಯನ್ನು ನಮ್ಮ ತಂಡದ ಪರವಾಗಿ ನೀಡುತ್ತೇನೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...