Homeಮುಖಪುಟಸಾರಿಪುತ್ರನ ಕಡೆಯ ದಿನಗಳು: ವೈದಿಕರ ತಿರುಚಿದ ಕಥೆ

ಸಾರಿಪುತ್ರನ ಕಡೆಯ ದಿನಗಳು: ವೈದಿಕರ ತಿರುಚಿದ ಕಥೆ

- Advertisement -
- Advertisement -

ನನ್ನ ಸ್ನೇಹಿತರೊಬ್ಬರು ಇತ್ತೀಚೆಗೆ ನನಗೊಂದು ವಿಡಿಯೋವನ್ನು ನೋಡಲು ಸೂಚಿಸಿದರು. ಬೌದ್ಧ ತತ್ವಗಳಲ್ಲಿ ಅಪಾರ ಶ್ರದ್ಧೆ ಇಟ್ಟುಕೊಂಡ ಅವರು, ವಿಡಿಯೋ ಕಂಟೆಂಟ್‌ನಿಂದ ತುಂಬಾ ಬೇಸರಗೊಂಡಿದ್ದರು. ’ನೋಡಿ, ಬುದ್ಧರನ್ನು ಮತ್ತು ಅವರ ತತ್ವಗಳನ್ನು ಹೇಗೆ ವಿಕೃತಗೊಳಿಸುತ್ತಾರೆ?’ ಎಂದರು. ಇದು ವಾಸವಿ ಸಾಹಿತ್ಯ ಕಲಾ ವೇದಿಕೆಯಿಂದ ’ಕಥಾವಚನ 185’ ಮಾಸ್ತಿಯವರ ಸಣ್ಣಕಥೆಗಳ ಮಾಲಿಕೆಯಲ್ಲಿ 18ನೆಯ ಕಥೆಯನ್ನು ಡಾ. ವಾಣಿ ಎಂಬವರು ಓದುತ್ತಿದ್ದರು. ಅದು “ಸಾರಿಪುತ್ರನ ಕಡೆಯ ದಿನಗಳು” ಎಂಬ ಕಥೆ. ಶ್ರೀಯುತ ಮಾಸ್ತಿಯಂತಹ ಪ್ರಸಿದ್ಧ ಲೇಖಕರು ಬೌದ್ಧ ಧರ್ಮದ ಬಗ್ಗೆ ಯಾವ ಅಧ್ಯಯನವನ್ನೂ ಮಾಡದೆ, ಸಾರಿಪುತ್ತರ ಜೀವನದ ಬಗ್ಗೆಯೂ ತಿಳಿದುಕೊಳ್ಳದೇ ಬೌದ್ಧ ತತ್ವಗಳಲ್ಲಿ ಕೇವಲ ತಮ್ಮ ವೈದಿಕ ನಂಬಿಕೆಗಳನ್ನು ತುರುಕಿ ವಿಕೃತಗೊಳಿಸಿ ವಿಜೃಂಭಿಸಲೆತ್ನಿಸಿರುವದು ನಿಜಕ್ಕೂ ವಿಷಾದನೀಯ. ಈ ಕಥೆ ಬೌದ್ಧ ತತ್ವಗಳಿಗೂ ಬದ್ದವಾಗಿಲ್ಲ, ಸಾರಿಪುತ್ತರ ಐತಿಹಾಸಿಕ ಘಟನೆಗಳಿಗೂ ಬದ್ದವಾಗಿಲ್ಲ. ಈ ಕಥೆಗೆ ಬರುವದಕ್ಕಿಂತ ಮೊದಲು ಭಗವಾನ್ ಬುದ್ಧರ ಮುಖ್ಯ ಶಿಷ್ಯರಾದ ಸಾರಿಪುತ್ತರ ಜೀವನಚರಿತ್ರೆಯ ಮೂಲ ಐತಿಹ್ಯದ ಬಗ್ಗೆ ಒಂದು ಕಣ್ಣೋಟ; ಇದು ಪೂಜ್ಯ ಭಂತೆ ನ್ಯಾನಪೋಲಿಕಾ ಥೇರಾರವರು (ಮೂಲ ಜರ್ಮನ್, ಶ್ರಿಲಂಕಾದಲ್ಲಿ ಬಿಕ್ಖುವಾದವರು) ತಿಪೀಟಕ ಮತ್ತು ಬೌದ್ಧ ಸಾಹಿತ್ಯದಿಂದ ಸಂಗ್ರಹಿಸಿ ಬರೆದದ್ದು.

ಸಾರಿಪುತ್ತ ಮತ್ತು ಮಹಾ ಮೊಗ್ಗಲಾನ ಇಬ್ಬರೂ ಭಗವಾನ್ ಬುದ್ಧರ ಮುಖ್ಯ ಶಿಷ್ಯರು. ಇಬ್ಬರೂ ಸಮಾನ ವಯಸ್ಕರು, ಗೆಳೆಯರು ಮತ್ತು ಅಕ್ಕಪಕ್ಕದ ಊರಿನವರು ಆಗಿದ್ದರು. ಸಾರಿಪುತ್ತರ ಊರು ರಾಜಗೃಹದ ಪಕ್ಕದ ಹಳ್ಳಿ ನಾಲಕ. ಇದನ್ನು ನಾಲ ಅಥವಾ ನಾಲಕ ಎಂದು ಚೀನಿಯಾತ್ರಿ ಫಾಹಿಯಾನ್ ವಿವರಿಸಿದ್ದಾನೆ. ಬ್ರಿಟಿಶ್ ಅಧಿಕಾರಿ ಕನ್ನಿಂಗ್‌ಹ್ಯಾಮ್ ಈಗಿನ ನಾಲಂದಾವೇ ಆ ಸ್ಥಳ ಎಂದು ಉತ್ಖತನದ ಮೂಲಕ ತೋರಿಸಿದ್ದಾನೆ. ಸಾರಿಪುತ್ತರ ಮೊದಲ ಹೆಸರು ಉಪತಿಸ್ಸ, ತಾಯಿ ಸಾರಿ. ಅದರಿಂದಾಗಿಯೆ ಮುಂದೆ ಬಿಕ್ಖುವಾದ ಮೇಲೆ ತನ್ನ ಹೆಸರನ್ನು ಸಾರಿಪುತ್ತ ಎಂದಿಟ್ಟುಕೊಳ್ಳುತ್ತಾರೆ. ಸಾರಿಪುತ್ತ ಮತ್ತು ಮೊಗ್ಗಲಾನ ಇಬ್ಬರೂ ಬೇರೆಬೇರೆ ಗುರುಗಳಲ್ಲಿ ಅಧ್ಯಯನ ಮಾಡಿ ಯಾವುದರಲ್ಲಿಯೂ ಸತ್ಯದ ದಾರಿಕಾಣದೆ ಕೊನೆಗೆ ಬುದ್ಧರನ್ನು ಕಾಣಲು ನಿರ್ಧರಿಸುತ್ತಾರೆ. ಬುದ್ಧರು ಆಗ ಗಯೆಯಿಂದ ರಾಜಗೃಹಕ್ಕೆ ಹೋಗುವ ದಾರಿಯಲ್ಲಿ ವೇಲುವನದಲ್ಲಿ ತಂಗಿರುತ್ತಾರೆ. ಬುದ್ಧರ ಶಿಷ್ಯರಾದ ಹಿರಿಯ ಅಸ್ಸಾಜಿ ಭಿಕ್ಷೆಗೆ ಹೊರಟಿರುವ ಸಮಯದಲ್ಲಿ ಉಪತಿಸ್ಸನು ಅವರನ್ನು ಸಂಧಿಸಿ ಪ್ರಶ್ನೆ ಮಾಡುತ್ತಾನೆ. ಇಷ್ಟೊಂದು ತೇಜೋವಂತರಾದ ತಮ್ಮ ಗುರುಗಳು ಯಾರು? ಆಗ ಅಸ್ಸಾಜಿ ಬಿಕ್ಖುವು ಮಹಾಸಮಣ ಬುದ್ಧರು ತಮ್ಮ ಗುರುಗಳೆಂದು ಹೇಳಲು, ಅವರ ಮುಖ್ಯವಾದ ಉಪದೇಶವೇನೆಂದು ಸಾರಿಪುತ್ತ ಕೇಳುತ್ತಾನೆ. ಆಗ ಅಸ್ಸಾಜಿ ಹೇಳುತ್ತಾರೆ: “ಮಹಾಸಮಣರು ಹೀಗೆ ಹೇಳಿದ್ದಾರೆ; ಯೇ ಧಮ್ಮಾ ಹೇತುಪ್ಪಭವಾ; ತೇಸಂ ಹೇತುಂ ತಥಾಗತೋ ಆಹ| ತೇಸಂ ಚ ಯೋ ನಿರೋಧೋ ಏವಂ ವಾದಿ ಮಹಾಸಮಣೋ||” – “ಕಾರಣದಿಂದ ಕಾರ್ಯವಿಧಾನವು ಉತ್ಪನ್ನವಾಗುತ್ತದೆ. ಜ್ಞಾನೋದಯ ಪಡೆದವರು ಕಾರಣವನ್ನೂ ಅದರ ನಿವಾರಣೆಯನ್ನೂ ಬಿಡಿಸಿ ಹೇಳಿದ್ದಾರೆ. ಇದು ಮಹಾಸಮಣರ ಉಪದೇಶ.” (ವಿನಯ)

(ಇದು ಸಾರನಾಥದ ಅಶೋಕನ ಧಮ್ಮಲಿಪಿಯ ಶಿಲಾಶಾಸನದಲ್ಲಿದ್ದನ್ನು ಮೊದಲ ಬಾರಿಗೆ ಧಮ್ಮಲಿಪಿಯಲ್ಲಿ ಓದಿದ್ದು ಜೇಮ್ಸ್ ಪ್ರಿನ್ಸೆಪ್. ಬೋಧಗಯಾದಲ್ಲಿನ ಇದೇ ಶ್ಲೋಕದ ಸಂಸ್ಕೃತ ಶಾಸನವನ್ನು ಕಂಡುಹಿಡಿದದ್ದು ಬುಖಾನನ್.)

ಉಪತಿಸ್ಸನು ಅದನ್ನು ಅರ್ಥಮಾಡಿಕೊಂಡು ಪ್ರಭಾವಿತನಾಗಿ ಅಲ್ಲಿಂದ ಬೀಳ್ಕೊಟ್ಟು ಮುಂದೆ ತನ್ನ ಗೆಳೆಯ ಕೋಲಿತನ ಜೊತೆಗೂಡಿ ಭಗವಾನರಲ್ಲಿಗೆ ಬಂದು ಅವರ ಶಿಷ್ಯರಾಗುತ್ತಾರೆ. ಉಪತಿಸ್ಸನು ಸಾರಿಪುತ್ತನಾಗಿಯೂ, ಕೋಲಿತನು ಮಹಾಮೊಗ್ಗಲಾನನಾಗಿಯೂ ಶಿಷ್ಯತ್ವವನ್ನು ಸ್ವೀಕರಿಸುತ್ತಾರೆ. ಬುದ್ಧ ತತ್ವಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡ ಇಬ್ಬರೂ ಉಳಿದ ಶಿಷ್ಯರಿಗೂ ಮಾರ್ಗದರ್ಶಕರಾಗುತ್ತಾರೆ. ಬುದ್ಧರು ಸಾರಿಪುತ್ತನನ್ನು ತನ್ನ ಬಲಗಣ್ಣೆಂದು ಮೊಗ್ಗಲಾನನನ್ನು ಎಡಗಣ್ಣೆಂದು ವರ್ಣಿಸಿದ್ದಾರೆ. ಸಾರಿಪುತ್ತ ಭಗವಾನರಿಂದ ಅತ್ಯಂತ ಕ್ಲಿಷ್ಟವಾದ ಅಭಿಧಮ್ಮವನ್ನು ಅರ್ಥಮಾಡಿಕೊಂಡು ಅಭಿಧಮ್ಮದ ಮೂಲ ಸಿದ್ಧಾಂತವನ್ನು ವಿವರಿಸಿದ್ದಾರೆ.

ಸಾರಿಪುತ್ತ ಬುದ್ಧರೊಡನೆ ನಲವತ್ತು ವರ್ಷಗಳ ಕಾಲ ಇದ್ದು ಅವರ ಸೇವೆ ಮಾಡುತ್ತಾ ಮತ್ತು ಶಿಷ್ಯರಿಗೆ, ಜನರಿಗೆ ಧಮ್ಮ ಮತ್ತು ಅಷ್ಟಾಂಗ ಮಾರ್ಗವನ್ನು ತಿಳಿಸಿದರು. ಭಗವಾನರ ಪರಿನಿಬ್ಬಾಣದ ಮುಂಚೆಯೇ ತನ್ನ ಅಂತ್ಯಕಾಲ ಸಮೀಪಿಸಿದುದನ್ನು ತಿಳಿದು ಬುದ್ಧರಿಂದ ಅಪ್ಪಣೆ ಪಡೆದು ತನ್ನ ಹುಟ್ಟೂರಾದ ನಾಲಂದಕ್ಕೆ ಮರಳಿ ಅಲ್ಲಿ ತನ್ನ ತಾಯಿಗೆ ಧಮ್ಮದೇಸನವನ್ನು ಕೊಟ್ಟು ಅಲ್ಲಿಯೇ ಪರಿನಿಬ್ಬಾಣವನ್ನು ಹೊಂದುತ್ತಾರೆ. ಅವರೊಡನೆ ಹೋಗಿದ್ದ ಚುಂದನೆಂಬ ಶಿಷ್ಯನು ಸಾರಿಪುತ್ತರ ಅಸ್ತಿ ಅವಶೇಷಗಳು, ಅವರ ಭಿಕ್ಷಾಪಾತ್ರೆ ಬಟ್ಟೆಗಳನ್ನು ತಂದು ಭಗವಂತರಿಗೆ ಒಪ್ಪಿಸುತ್ತಾನೆ. ಅವರಿಗೆ ಅಲ್ಲಿ ಜೇತವನ ವಿಹಾರದಲ್ಲಿ ಸ್ತೂಪವನ್ನು ನಿರ್ಮಿಸುತ್ತಾರೆ. ಮುಂದೆ ಅಶೋಕನ ಕಾಲದಲ್ಲಿ ಆ ಅಸ್ತಿಗಳ ಭಾಗ ಮಾಡಿ ಅಶೋಕನು ಬೇರೆಬೇರೆ ಕಡೆಗೆ ಅವರ ಗೌರವಾರ್ಥ ಸ್ತೂಪಗಳನ್ನು ನಿರ್ಮಿಸಲಾಗುತ್ತದೆ.

1857ರಲ್ಲಿ Allexander Cunningham ಮತ್ತು Maisey ಎಂಬ ಅಧಿಕಾರಿಗಳು ಉತ್ಖತನ ನಡೆಸುತ್ತಿದ್ದಾಗ ಸಾಂಚಿಯಲ್ಲಿ ಎರಡು ಕಡೆಗೆ ಮತ್ತು ಅಲ್ಲಿಯೇ ಹತ್ತಿರದ ಸಾತಧಾರಾ ಎಂಬಲ್ಲಿ ಸಾರಿಪುತ್ತ ಮತ್ತು ಮೊಗ್ಗಲಾನರ ಅವಶೇಷಗಳು ಸಿಗುತ್ತವೆ. ಸ್ಪಷ್ಟವಾಗಿ ಅವಶೇಷಗಳನ್ನು ಹೊತ್ತ ಕರಂಡಕಗಳ ಮೇಲೆ ಧಮ್ಮಲಿಪಿಯಲ್ಲಿ ಬರೆದ ’ಸಾರಿಪುತಸ’ ಮತ್ತು ’ಮಹಾ ಮೊಗಲಾನಸ’ ಎಂಬ ಹೆಸರುಗಳು ಸಿಕ್ಕಿವೆ.

ಇನ್ನು ಮಾಸ್ತಿಯವರ ಕಥೆಯಲ್ಲಿನ ಅಸಂಗತತೆಗಳನ್ನು ನೋಡೋಣ

1) ಗುರುದೇವರ ಪರಿನಿರ್ವಾಣದ ನಂತರ ಸಾರಿಪುತ್ರನು ಊರ ಕಡೆಗೆ ತಿರುಗಿದನು.

ಬುದ್ಧರ ಪರಿನಿಬ್ಬಾಣದ ಮುಂಚೆಯೇ ತನ್ನ ಅಂತ್ಯಕಾಲದ ಸೂಚನೆಯನ್ನರಿತ ಸಾರಿಪುತ್ತರು ತಮ್ಮ ತಾಯಿಯನ್ನು ನೋಡಿ ಅವರಿಗೂ ಬುದ್ಧರ ಉಪದೇಶಗಳನ್ನು ಕೊಡಬೇಕೆಂದು ತನ್ನೂರ ಕಡೆಗೆ ಹೋಗುತ್ತಾರೆ. ಸಾರಿಪುತ್ತರು ಬುದ್ಧರ ಮುಂಚೆಯೇ ಪರಿನಿಬ್ಬಾಣವನ್ನು ಹೊಂದುತ್ತಾರೆ. ನಂತರ ಚುಂದನು ಸಾರಿಪುತ್ತರ ಅಸ್ತಿ ಮತ್ತು ಇತರ ಅವಶೇಷಗಳನ್ನು ಜೇತವನದಲ್ಲಿದ್ದ ಬುದ್ಧರಲ್ಲಿಗೆ ತರುತ್ತಾನೆ. ಇದು ಸಂಯುತ್ತ ನಿಕಾಯದ ಚುಂದ ಸುತ್ತದಲ್ಲಿ ವಿವರಿಸಲಾಗಿದೆ.

2) ಸಾರಿಪುತ್ರನ ಮೊದಲ ಹೆಸರು ನರಸಿಂಹ ಶರ್ಮ ಎಂದು. ಅವನು ನರಸಿಂಹೇಶ್ವರ ಅಗ್ರಹಾರದ ಸಂಸ್ಕೃತ ಪಂಡಿತನಾಗಿದ್ದನು.

ಇದನ್ನೂ ಓದಿ: ವೈದಿಕರಿಂದ ಗೌತಮ ಬುದ್ಧನ ಅಪಹರಣ

ಅವರ ಮೊದಲ ಹೆಸರು ಉಪತಿಸ್ಸ ಎಂದು. ಆ ಕಾಲದ ಎಲ್ಲ ಹೆಸರುಗಳೂ ಪಾಲಿ ಮೂಲವೇ ಇರುತ್ತಿತ್ತು. ಅವರು ಬ್ರಾಹ್ಮಣ ಎಂದು ತೋರಿಸಲು ಸಂಸ್ಕೃತದ ಹೆಸರನ್ನು ಕಲ್ಪಿಸಲಾಗಿದೆ.

3) ಹೆಂಡತಿ ವೇದವತಿ, ಮಗಳು ಕುಮುದ್ವತಿ.

ತಿಪೀಟಕಗಳಲ್ಲಿ ಎಲ್ಲಿಯೂ ಅವರಿಗೆ ಹೆಂಡತಿ ಮಗಳು ಇದ್ದ ಪ್ರಸ್ತಾಪ ಇಲ್ಲ. ತಾಯಿ ಇದ್ದರು.

4) ಬುದ್ಧರನ್ನು ಭೆಟ್ಟಿಯಾದಾಗ ಅವರ ಸುತ್ತಲು ನಾಲ್ಕು ವೈದಿಕ ಪಂಡಿತರು ಕುಳಿತಿದ್ದರು. ಅವರ ಜೊತೆಗಿನ ಮಾತುಗಳನ್ನು ಕೇಳಿದ ಮೇಲೆ ಸಾರಿಪುತ್ರನಿಗೆ ಅನಿಸಿದ್ದು “ಇವನೇ ಒಂಬತ್ತನೆಯ ಅವತಾರ. ದೇವರಲ್ಲದವನಿಗೆ ಈ ಪ್ರಜ್ಞೆಯು ಬರುವದು ಹೇಗೆ? ನಾನು ದೇವರನ್ನು ಕಣ್ಣಾರೆ ಕಂಡೆ” ಎನ್ನುತ್ತಾನೆ. ಶಿಷ್ಯನಾದ ಮೇಲೂ ಬುದ್ಧರನ್ನು ದೇವರೆಂದೇ ನಂಬುತ್ತಾನೆ ಮತ್ತು ಅದಕ್ಕೆ ಬುದ್ಧರು ಒಪ್ಪಿಗೆ ಕೊಡುತ್ತಾರೆ. ದಿನಕಳೆದಂತೆ ಬುದ್ಧರು ದೇವರ ಅವತಾರವೆಂದು ಅವನಿಗೆ ಮನವರಿಕೆಯಾಗುತ್ತದೆ.

ದೇವರನ್ನು ಖಡಾಖಂಡಿತವಾಗಿ ನಿರಾಕರಿಸುವ ಬುದ್ಧರು ಅನಿತ್ಯ, ಅನಾತ್ಮ ಹಾಗು ದುಃಖ ಇವು ವಿಶ್ವಾತ್ಮಕ ಸತ್ಯಗಳೆಂದು ಹೇಳಿದರು. ಆದರೆ ಈ ನಿರಾಕರಣೆ nihilistic ಆಗಿರಲಿಲ್ಲ. ನಮ್ಮ ಕರ್ಮಗಳಿಂದುಂಟಾದ ವಿಭವವು ಮುಂದಿನ ಭವಕ್ಕೆ ಸುತ್ತಿಸುತ್ತದೆ ಎಂದು ವಿವರಿಸಿದರು. ಶಾಶ್ವತವಾದ ಆತ್ಮ, ಪರಮಾತ್ಮವಾದವನ್ನು ತಿರಸ್ಕರಿಸಿದರು. ಇಲ್ಲಿ ಮೇಲಿಂದ ಮೇಲೆ ಬುದ್ಧರನ್ನು ದೇವರ ಅವತಾರ ಎನ್ನುವದು ಒಂದು ವರ್ಗದ ಸ್ವಾರ್ಥದ ಬಹು ದೊಡ್ಡ ಧಾರ್ಮಿಕ ರಾಜಕಾರಣದ ಭಾಗವಾಗಿತ್ತು. ಶಂಕರಾಚಾರ್ಯರ ನಂತರ ಭಾರತದ ರಾಜರುಗಳು ನಾನಾ ಕಾರಣಗಳಿಂದ ವೈದಿಕ ಧರ್ಮದ ಕಡೆಗೆ ವಾಲಿ, ಬೆಂಬಲ ಕೊಡುತ್ತಾ ಬರುತ್ತಾರೆ. ಇದೇ ಅವಕಾಶವನ್ನು ಬಳಸಿಕೊಂಡು ಬೌದ್ಧ ಬಿಕ್ಖುಗಳನ್ನು ಹತ್ಯೆ ಮಾಡುವಲ್ಲಿ, ಗಡಿಯಿಂದ ಹೊರಹಾಕುವಲ್ಲಿ ವೈದಿಕರು ಸಫಲರಾಗುತ್ತಾರೆ. ಆಗ ವಾರಸುದಾರರಿಲ್ಲದೇ ಹೋಗುವ ವಿಹಾರಗಳನ್ನು ಮತ್ತು ಬೌದ್ಧ ಮಂದಿರಗಳನ್ನು ವಶಪಡಿಸಿಕೊಳ್ಳುವ ಸಲುವಾಗಿ, ಬುದ್ಧರನ್ನು ವಿಷ್ಣುವಿನ ಅವತಾರವೆಂದು ಪ್ರಚಾರ ಮಾಡಿದರೆ ಈ ಕೆಲಸ ಸುಲಭ ಎನ್ನಿಸಿ ವೈದಿಕರು ಈ ತಂತ್ರಕ್ಕೆ ಕೈಹಾಕಿದರು ಮತ್ತು ಯಶಸ್ವಿಯೂ ಆದರು. ಬುದ್ಧ ಅವಲೋಕಿತೇಶ್ವರರ ಮೂರ್ತಿಗಳು ಶಿವನ, ವಿಷ್ಣುವಿನ ಮೂರ್ತಿಗಳಾದವು. ಈಗಲೂ ಅದೇ ತಂತ್ರವನ್ನು ಮಾಡುತ್ತಿದ್ದಾರೆ. ಒಂದು ಕಡೆ ತಮ್ಮ ಧರ್ಮಗ್ರಂಥಗಳಲ್ಲಿ ಬುದ್ಧರನ್ನು ನಿಂದಿಸುತ್ತಾ ಇನ್ನೊಂದು ಕಡೆಗೆ ಅವರನ್ನು ದೇವರ ಅವತಾರ ಎನ್ನುವದು.

5) ಯಾರಾದರೂ ವೇದ ಪಂಡಿತರು ಬಂದರೆ ಬುದ್ಧರು ’ನಾನು ವೇದಗಳನ್ನು ಓದಿಲ್ಲ. ಸಾರಿಪುತ್ರನು ಅದರಲ್ಲಿ ಪಾರಂಗತನಾಗಿದ್ದಾನೆ. ನೀವು ಅವನೊಂದಿಗೆ ಮಾತನಾಡಿ’ ಎನ್ನುತ್ತಿದ್ದರಂತೆ.

ಇವು ತಿಳಿವಳಿಕೆಯಿಲ್ಲದ ಅಹಂಕಾರನ ಮಾತುಗಳಲ್ಲದೆ ಮತ್ತೇನು? ಬ್ರಾಹ್ಮಣನ ಎದುರು ಬುದ್ಧರು ಕಡಿಮೆ ಜ್ಞಾನಿ ಎಂದು ಹೇಳುವ ರೀತಿಯಿದು. ಬುದ್ಧರ ಕಾಲದಲ್ಲಿ ವೇದಗಳೇ ಇರಲಿಲ್ಲ. ಸಾಕಷ್ಟು ಮೂಢನಂಬಿಕೆಗಳು, ಬಲಿಪ್ರಥಾ ಇದ್ದವು. ಬೇರೆಬೇರೆ ಪಂಗಡಗಳ ಪುರೋಹಿತರು ಇದ್ದರು. ಅವರು ಜನರನ್ನು ಸಾಕಷ್ಟು ಶೋಷಣೆ ಮಾಡುತ್ತಿದ್ದರು. ತೇವಿಜ್ಜ ಸುತ್ತದಲ್ಲಿ ಮೂರು ವಿದ್ಯೆಗಳನ್ನು ತಿಳಿದ ಪಂಡಿತರು ಎನ್ನುವ ಮಾತು ಬರುತ್ತದೆ. ಅದನ್ನು ಮೂರು ವೇದಗಳು ಎಂದು ಇಂಗ್ಲಿಷ್ ಹಾಗೂ ಎಲ್ಲ ಭಾಷೆಗಳಲ್ಲಿ ತಪ್ಪಾಗಿ ಅನುವಾದಿಸಿದ್ದಾರೆ. ಈ ಮೂರು ವಿದ್ಯೆಗಳು ಯಾವವು ಎನ್ನುವದನ್ನು ಸಂಗೀತಿ ಮತ್ತು ದಸುತ್ತರ ಸುತ್ತಗಳಲ್ಲಿ ವಿವರಿಸಲಾಗಿದೆ.

6) ಆತ ತನ್ನ ಬಾಲ್ಯದ ನರ್ಮದಾ ನದೀ ತೀರಕ್ಕೆ ಬರುತ್ತಾನೆ.

ಅವರ ಊರು ನಾಲಂದ, ಸ್ಪಷ್ಟವಾಗಿ ರಾಜಗೃಹದ ಹತ್ತಿರ ಎಂದಿದೆ. ಅದು ನರ್ಮದಾ ತೀರವಲ್ಲ.

7) ಎಲ್ಲವೂ ಭಗವಂತನ ಅನುಗ್ರಹ ಎಂದುಕೊಂಡನು. ಸಾರಿಪುತ್ರನು ಬೌದ್ಧನಾದರೂ ಭಗವಂತನನ್ನು ಬಿಡಲಿಲ್ಲ.

ವೈದಿಕರ ದೃಷ್ಟಿಯಲ್ಲಿ ಭಗವಂತ ಎಂದರೆ ಶಾಶ್ವತನಾದ ದೇವರೆಂದೇ ಅರ್ಥ. ಆದರೆ ಬೌದ್ಧ ಅಥವಾ ಸಮಣ ಪರಂಪರೆಯಲ್ಲಿ ಭಗವನ್/ ಭಗವಂತ ಎಂದರೆ ಭಗ್ನವಾನ್ ಅಂದರೆ ಎಲ್ಲ ಬಂಧಗಳನ್ನು ಕತ್ತರಿಸಿಕೊಂಡವನು ಎಂದರ್ಥ.

ಈ ಕಥೆಯ ಮುಖ್ಯ ಉದ್ದೇಶವೇ ಬೌದ್ಧ ತತ್ವಗಳನ್ನು ವಿಕೃತಗೊಳಿಸುವದು. ಅವರ ಸಮಾನತೆ, ಕರುಣೆ, ವೈಜ್ಞಾನಿಕ ನಿಲುವುಗಳನ್ನು ಎದುರಿಸಲಾಗದೇ ಕಾಲ್ಪನಿಕ ಕಥೆಗಳನ್ನು ಹೆಣೆದು ಜನರಿಗೆ ಬುದ್ಧರನ್ನು ಕಾಣದಂತೆ ಮಾಡುವದು. ಮಾಸ್ತಿಯವರು ತಮ್ಮ ಕಾಲದ (ತಪ್ಪು) ತಿಳಿವಳಿಕೆಯಲ್ಲಿ ಬರೆದಿರಬಹುದು ಎಂದಿಟ್ಟುಕೊಳ್ಳೋಣ. ಈಗ ಮತ್ತೆ ವಿಡಿಯೋ ಮುಖಾಂತರ ಅದೇ ಕಥೆಯನ್ನು ಹೇಳುವ ಉದ್ದೇಶ ಏನು? ಮತ್ತೆ ಇನ್ನೂ ಬುದ್ಧರನ್ನು ದೇವರನ್ನಾಗಿಸುವ ಅಜೆಂಡಾ ಜಾರಿಯಲ್ಲಿದೆ ಅಂತಾಯಿತಲ್ಲ! ಇಂತಹ ತಂತ್ರಗಳನ್ನು ಬಯಲು ಮಾಡಿ ಬುದ್ಧ ತತ್ವಗಳನ್ನು ಜನರ ಅರಿವಿಗೆ ತರಬೇಕಾಗಿದೆ.

ಎಲ್ಲರ ಎದೆಗಳಲ್ಲಿಯೂ ಬುದ್ಧ ಜ್ಯೋತಿ ಬೆಳಗಲಿ.

ರಮಾಕಾಂತ ಪುರಾಣಿಕ

ರಮಾಕಾಂತ ಪುರಾಣಿಕ
ಮೂಲತಃ ವಿಜಯಪುರ ಜಿಲ್ಲೆಯವರು. BSNLನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಬೌದ್ಧ ಸಾಹಿತ್ಯ, ವಚನ ಸಾಹಿತ್ಯ ಮತ್ತು ಕಾವ್ಯದಲ್ಲಿ ಆಸಕ್ತಿ, ಓದು ಮತ್ತು ಬರಹ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...