Homeಮುಖಪುಟವಸಾಹತು ಕಾನೂನು ಬದಲಿಸುವ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತಷ್ಟು ಕರಾಳ ಕಾನೂನುಗಳನ್ನು ಸೇರಿಸಿದೆಯೇ?

ವಸಾಹತು ಕಾನೂನು ಬದಲಿಸುವ ನೆಪದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಮತ್ತಷ್ಟು ಕರಾಳ ಕಾನೂನುಗಳನ್ನು ಸೇರಿಸಿದೆಯೇ?

- Advertisement -
- Advertisement -

ಭಾರತದ ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕಲು ಬ್ರಿಟಿಷರು ಅನೇಕ ಕಠಿಣ ಕಾನೂನುಗಳನ್ನು ಜಾರಿ ಮಾಡಿದ್ದರು. ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಈಗಲೂ ಅವೇ ಕಠಿಣ ಕಾನೂನುಗಳನ್ನು ಜಾರಿಯಲ್ಲಿಟ್ಟಿರುವುದಕ್ಕೆ ಸಾಕಷ್ಟು ವಿರೋಧಗಳಿವೆ. ದೇಶದ್ರೋಹ ಕಾನೂನು ಇದಕ್ಕೆ ಜ್ವಲಂತ ಉದಾಹರಣೆ. ಆದರೆ ಕೇಂದ್ರ ಸರ್ಕಾರ ಇತ್ತೀಚೆಗೆ ಮುಂಗಾರು ಅಧಿವೇಶನದಲ್ಲಿ ಕೆಲವು ಕಾನೂನುಗಳನ್ನು ಬದಲಾಯಿಸುವ ಮಸೂದೆಯನ್ನು ಅಂಗೀಕಾರ ಮಾಡಿತು. ಇದರಲ್ಲಿ ಕೆಲವೊಂದು ಸ್ವಾಗತಾರ್ಹ ಸಂಗತಿಗಳಿದ್ದರೂ, ದೇಶದ ಜನರ ಮುಂದೆ ಇನ್ನಷ್ಟು ಕರಾಳ ಕಾನೂನುಗಳನ್ನು ಮಂಡಿಸಲಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬದಲಾದ ಕಾನೂನುಗಳು

1860ರ ಭಾರತೀಯ ದಂಡಸಂಹಿತೆ (IPC)- ಭಾರತೀಯ ನ್ಯಾಯ ಸಂಹಿತಾ, 2023 (Bharatiya Nyaya Sanhita, 2023)ವಾಗಿ ಬದಲಾಗಿದೆ.

1973ರ ಅಪರಾಧ ಪ್ರಕ್ರಿಯಾ ಸಂಹಿತೆ (CRPC)- ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, (Bharatiya Nagarik Suraksha Sanhita, 2023)ವಾಗಿ ಬದಲಾಗಿದೆ.

1872ರ ಭಾರತೀಯ ಸಾಕ್ಷಿ ಕಾಯಿದೆ (Indian Evidence Act)- ಭಾರತೀಯ ಸಾಕ್ಷ್ಯ ಸಂಹಿತಾ 2023 (Bharatiya Sakshya Bill, 2023) ಆಗಿ ಬದಲಾಗಿದೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಸ್ತೆಗಳ, ನಗರಗಳ, ಐತಿಹಾಸಿಕ ಕಟ್ಟಡಗಳ ಮತ್ತು ಸ್ಮಾರಕಗಳ ಹೆಸರುಗಳನ್ನು ಬದಲಾಯಿಸುವುದನ್ನು ರೂಢಿ ಮಾಡಿಕೊಂಡಿದೆ. ಇದೀಗ ಈ ಕಾನೂನಗಳ ಹೆಸರು ಬದಲಾಯಿಸುವುದರಲ್ಲಿಯೂ ಮುಂದುವರೆಸಿದೆಯೇ ಎಂದು ಪ್ರಶ್ನೆ ಮೇಲ್ನೋಟಕ್ಕೆ ತೋರುತ್ತದೆ.

ಭಾರತದಲ್ಲಿನ ಪ್ರತಿಯೊಂದು ಕಾನೂನು ಪ್ರತಿ ರಾಜ್ಯದ ಆಯಾ ಅಧಿಕೃತ ಭಾಷೆಯಲ್ಲಿ ಅಧಿಕೃತ ಅನುವಾದವನ್ನು ಹೊಂದಿದೆ. ಹಾಗಾಗಿ IPC, CrPC ಮತ್ತು ಎವಿಡೆನ್ಸ್ ಆಕ್ಟ್‌ಅನ್ನು ಕೇವಲ ಹಿಂದಿಯಲ್ಲಿ ಮಾತ್ರ ಉಲ್ಲೇಖಿಸುವ ಪ್ರಯತ್ನ ಕೂಡ ಪ್ರಶ್ನಾರ್ಹವಾಗಿದೆ.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಜಸ್ಟಿಸ್ ನಾಗಮೋಹನ್ ದಾಸ್ ಅವರು, “ಬ್ರಿಟಿಷರಿಗಿಂತ ಕೆಟ್ಟದಾದ ಕಾನೂನುಗಳನ್ನು ಜಾರಿ ಮಾಡುವ ಹಿಡನ್ ಅಜೆಂಡಾ ಇದರಲ್ಲಿ ಕಾಣುತ್ತದೆ. ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮಾನವ ಹಕ್ಕುಗಳ ವಿರೋಧಿ ಕಾನೂನುಗಳನ್ನು ಜಾರಿ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಬ್ರಿಟಿಷರು ಮನುಷ್ಯತ್ವ ವಿರೋಧಿ ನೀತಿ ಮತ್ತು ಕಾನೂನುಗಳನ್ನು ತಂದಿದ್ದರು; ನಾವುಗಳು ಅವನ್ನು ವಿರೋಧ ಮಾಡುತ್ತಿದ್ದೆವು. ಉದಾಹರಣೆಗೆ ಬ್ರಿಟಿಷರು ಡಿವೈಡ್ ಅಂಡ್ ರೂಲ್ ತಂದರು, ಅದು ಜಾತಿ-ಜಾತಿಗಳ ನಡುವೆ, ಧರ್ಮ-ಧರ್ಮಗಳ ನಡುವೆ, ಭಾಷೆ ಭಾಷೆಗಳ ಬೆಂಕಿ ಹಚ್ಚುವಂತೆ ಮಾಡಿ ದೇಶದ ಜನರು ಒಟ್ಟಾಗದಂತೆ ಮಾಡಿದ್ದರು.

“ಮತ್ತೊಂದು ಉದಾಹರಣೆ ಎಂದರೆ ಸಾರ್ವಜನಿಕವಾಗಿ ಜನರನ್ನು ಕೊಲ್ಲುವುದು, ಮರಣದಂಡನೆ ನೀಡುವುದು, ಚಿತ್ರಹಿಂಸೆ ನೀಡುವುದು; ಇಂತಹ ಶಿಕ್ಷೆಗಳ ಮೂಲಕ ಸರ್ಕಾರದ ವಿರುದ್ಧ ಧ್ವನಿ ಎತ್ತದಂತೆ ನೋಡಿಕೊಳ್ಳುವುದು. ಇಂತಹ ಶಿಕ್ಷೆಗಳನ್ನು ನೀಡುವುದನ್ನು ಬ್ರಿಟಿಷರು ಕಾನೂನನ್ನಾಗಿಸಿದರು. ದೇಶದ್ರೋಹ ಕಾನೂನು, ನ್ಯಾಯಾಂಗ ನಿಂದನೆ ಕಾನೂನು, ಕ್ರಿಮಿನಲ್ ಮಾನನಷ್ಟ ಕಾನೂನುಗಳನ್ನು ಪರಿಚಯಸಿದರು. ಈ ಮೂರನ್ನೂ ಇಂದಿಗೂ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ.

“ಬ್ರಿಟಿಷರ ಕಾಲದ ಈ ಕಾಯ್ದೆಗಳು ಸ್ವಾತಂತ್ರ್ಯ ಬಂದು 76 ವರ್ಷ ಕಳೆದರೂ ಬದಲಾವಣೆಯಾಗಿಲ್ಲ. ಈ ಕಾಯ್ದೆಗಳ ಸದ್ಬಳಕೆಗಿಂತ ದುರ್ಬಳಕೆ ಮಾಡಿಕೊಂಡದ್ದೇ ಹೆಚ್ಚು. ಹಾಗಾಗಿ ದೇಶದ ಜನರು ಈ ಎಲ್ಲ ಕಾನೂನುಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೇಶದ್ರೋಹದ ಕಾನೂನನ್ನು ಸರ್ಕಾರಗಳು ಬಹಳಷ್ಟು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಪ್ರಭುತ್ವವನ್ನು ಪ್ರಶ್ನೆ ಮಾಡುವ ಹಾಗಿಲ್ಲ, ಟೀಕೆ ಮಾಡುವ ಹಾಗಿಲ್ಲ. ಒಂದು ವೇಳೆ ಟೀಕೆ ವಿಮರ್ಶೆ ಮಾಡಿದರೆ ಬಂಧನ ಮಾಡೋದು; ವರ್ಷಾನುಗಟ್ಟಲೇ ಜೈಲಲ್ಲಿ ಇಡೋದನ್ನ ಮಾಡಲಾಗುತ್ತಿದೆ. ಇಂತಹ ಕರಾಳ ಕಾನೂನುಗಳನ್ನು ವಿರೋಧ ಪಕ್ಷದ ನಾಯಕರು, ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು, ಮಾನವ ಹಕ್ಕುಗಳ ಹೋರಾಟಗಾರರು, ಲೇಖಕರು, ವಕೀಲರು ಹಾಗೂ ಪತ್ರರ್ಕರ ಮೇಲೆ ಹೇರಲಾಗುತ್ತಿದೆ.

“ಇಂತಹ ಸಮಯದಲ್ಲಿ ರಾಷ್ಟ್ರೀಯ ಕಾನೂನು ಆಯೋಗ ಒಂದು ವರದಿ ನೀಡಿತು. ಅದರಲ್ಲಿ ಈ ದೇಶದ್ರೋಹ ಕಾನೂನನ್ನು ಮುಂದುವರಿಸಬೇಕು ಮತ್ತು ಶಿಕ್ಷೆಯನ್ನು ಎರಡು ಪಟ್ಟು ಹೆಚ್ಚಿಗೆ ಮಾಡಬೇಕು ಎಂದು ಹೇಳಲಾಗಿದೆ. ಆ ವರದಿಯನ್ನು ಆಧರಿಸಿ ದೇಶದ್ರೋಹ ಎನ್ನುವ ಪದವನ್ನು ಮಾತ್ರ ಕಿತ್ತುಹಾಕುತ್ತಿದ್ದಾರೆ. ಇದು ಜನರ ಕಣ್ಣೊರೆಸುವ ನಾಟಕವಾಗಿದೆ, ಆದರೆ ಅದಕ್ಕಿಂತ ಬರ್ಬರವಾದ ಕಾನೂನನ್ನು ಜಾರಿಗೆ ತರಲಾಗುತ್ತಿದೆ.

ಎಚ್.ಎನ್ ನಾಗಮೋಹನ್ ದಾಸ್

“ಇದೇ ರೀತಿಯಲ್ಲಿ ನ್ಯಾಯಾಂಗನಿಂದನೆ ಹಾಗೂ ಕ್ರಿಮಿನಲ್ ಮಾನನಷ್ಟ ಕಾನೂನಿನಲ್ಲೂ ಬದಲಾವಣೆ ತರಲು ಮುಂದಾಗಿದ್ದಾರೆ. ಇತ್ತೀಚಿನ ಘಟನೆಯಲ್ಲಿ ರಾಹುಲ್ ಗಾಂಧಿ ಅವರ ಮೇಲಿನ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಲಾಯಿತು. ಕೋಲಾರದಲ್ಲಿ ಹೇಳಿಕೆ ನೀಡಿದ್ದಾರೆ. ಅದರ ವಿಚಾರಣೆ ಸೂರತ್‌ನಲ್ಲಿ ನಡೆದು ತೀರ್ಪು ಕೊಟ್ಟಿದ್ದಾರೆ. ಒಂದು ಹೇಳಿಕೆಗೆ 2 ವರ್ಷ ಜೈಲು ಕೊಡಬಹುದಾ? ಇನ್ನು, ಆ ತೀರ್ಪು ಬರೆದ ನ್ಯಾಯಾಧೀಶರ ಪೆನ್ನಿನ ಇಂಕು ಆರುವ ಮುನ್ನವೇ ಅವರನ್ನು ಲೋಕಸಭೆ ಸಭೆ ಸದಸ್ಯತ್ವವನ್ನು ರದ್ದು ಮಾಡುತ್ತಾರೆ ಎನ್ನುವುದಾದರೆ ಇವರ ಉದ್ದೇಶ ಏನಾಗಿತ್ತು ಎನ್ನುವುದು ಅಲ್ಲಿಗೆ ಸ್ಪಷ್ಟವಾಗುತ್ತದೆ. ಅವರು ಈ ಕಾನೂನುಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ಒಂದುವೇಳೆ ರಾಹುಲ್ ಗಾಂಧಿ ತಪ್ಪು ಮಾಡಿದ್ದಾರೆ ಎಂದೇ ಭಾವಿಸಿದರೂ ಕೂಡ, ಎರಡು ವಾರ ಅಥವಾ ಎರಡು ತಿಂಗಳು ಶಿಕ್ಷೆ ನೀಡಬಹುದಿತ್ತು; ಆದರೆ ಮ್ಯಾಕ್ಸಿಮಮ್ ಯಾಕೆ ನೀಡಿದ್ದು? ಇದೆಲ್ಲಾ ನೋಡಿದಾಗ ಈ ಕಾನೂನುಗಳ ದುರ್ಬಳಕೆಯಾಗುತ್ತಿದೆಯೆಂದು ಸುಲಭವಾಗಿ ಎಲ್ಲರಿಗೂ ತಿಳಿಯುತ್ತದೆ.

“ಈ ಕ್ರಿಮಿನಲ್ ಅಮೆಂಡ್‌ಮೆಂಟ್ ಲಾ ಎನ್ನುವುದನ್ನು ಬ್ರಿಟಿಷ್ ಕಾನೂನುಗಳನ್ನು ಕಿತ್ತುಹಾಕಲಿಕ್ಕೆ ಮಾಡಿರುವಂತದ್ದಲ್ಲ; ಬದಲಾಗಿ ಇನ್ನಷ್ಟು ಕಠಿಣ ಕಾನೂನು ಜಾರಿ ಮಾಡುವುದು ಇದರ ಉದ್ದೇಶವಾಗಿದೆ. ಇದು ಸರ್ಕಾರದ ಆಷಾಢಭೂತಿತನವಾಗಿದೆ. ಇದನ್ನು ನಾನು ವಿರೋಧ ಮಾಡುತ್ತೇನೆ ಏಕೆಂದರೆ ಈ ಸರ್ಕಾರ ಇದರ ಮೂಲಕ ಬ್ರಿಟಿಷರಿಗಿಂತ ಬರ್ಬರವಾದ ಕಾನೂನು ತರಲು ಹೊರಟಿದೆ. ಇದು ಸಂವಿಧಾನ ವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿಯಾಗಿದೆ” ಎಂದು ನಿವೃತ್ತ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಮಸೂದೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿರುವ ಖ್ಯಾತ ವಕೀಲ ಬಾಲನ್ ಅವರು, ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಬದಲಾವಣೆ ಮಾಡುವುದು ನಿಶ್ಚಿತ ಎಂದು ಹೇಳಿದ್ದಾರೆ.

ಇದನ್ನೂ ಓದಿ: “ದೇಶದ್ರೋಹ” ಕಾನೂನನ್ನು ರದ್ದು ಮಾಡಿ, ಹೊಸ ಕಾನೂನಿನಡಿ 7 ವರ್ಷ ಜೈಲು-ಅಮಿತ್ ಶಾ

“ಇತ್ತೀಚೆಗೆ ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಕ್ರಿಮಿನಲ್ ಅಮೆಂಡ್‌ಮೆಂಟ್ ಲಾದಲ್ಲಿ ಕಾನೂನುಗಳಿಗೆ ಹೊಸ ಹೆಸರು ನಾಮಕರಣ ಮಾಡಿದ್ದಾರೆ. ಅವು- ಭಾರತೀಯ ನ್ಯಾಯಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಹಾಗೂ ಭಾರತೀಯ ಸಾಕ್ಷ್ಯ ಸಂಹಿತಾ… ಇದು ವೇದ ಭಾಷೆಗಳಿಂದ ಕೂಡಿದೆ. ಇದು ಮನುಭಾಷೆಯಾಗಿದ್ದು, ದೇಶದ ಭಾಷೆ ಅಲ್ಲವೇ ಅಲ್ಲ.

“ನಮ್ಮ ದೇಶದಲ್ಲಿ ಇಂಡಿಯನ್ ಪಿನಲ್ ಕೋಡ್‌ನಲ್ಲಿ 511 ಸೆಕ್ಷನ್ ಇವೆ, ಇಂಡಿಯನ್ ಎವಿಡೆನ್ಸ್ ಆಕ್ಟ್‌ನಲ್ಲಿ 167 ಸೆಕ್ಷನ್ ಇವೆ, ಸಿಆರ್‌ಪಿಸಿನಲ್ಲಿ 484 ಸೆಕ್ಷನ್ ಇವೆ. ಲಕ್ಷಾಂತರ ತೀರ್ಪುಗಳಿವೆ. ಎನ್‌ಡಿಎಗೆ ಈ ಕ್ರಿಮಿನಲ್ ಲಾ ಬೇಡ ಅದಕ್ಕೆ ಮನು ಲಾ ಬೇಕಾಗಿದೆ.

“ನಮ್ಮ ದೇಶದಲ್ಲಿ ಬಂದಿರುವ ಈ ಕಾನೂನುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾರಿಯಲ್ಲಿವೆ. ಕೇವಲ ಬ್ರಿಟಿಷರು ತಂದಿರುವ ಕಾನೂನು ಎಂದು ಹೇಳಿ ತಗೆದಿಲ್ಲ. ಬ್ರಿಟಿಷರು ತಂದಿರುವವು ಎಂದು ಹೇಳಿ ರೈಲು ವ್ಯವಸ್ಥೆಯ ಹಳಿಗಳನ್ನು ತೆಗೆಯಲಾಗುತ್ತಾ?” ಎಂದು ಬಾಲನ್ ಪ್ರಶ್ನೆ ಮಾಡಿದ್ದಾರೆ.

“ಈ ಸರ್ಕಾರದಲ್ಲಿ ಎಲ್ಲವೂ ರಾತ್ರೋರಾತ್ರಿ ನಿರ್ಧಾರಗಳಾಗುತ್ತಿವೆ. ಹಿಂದೆ ಪ್ರಧಾನಿ ಮೋದಿ ಅವರು ರಾತ್ರಿ 8 ಗಂಟೆಗೆ ಟಿವಿ ಮುಂದೆಬಂದು 500 ಮತ್ತು 1000 ರೂ ಮುಖಬೆಲೆ ನೋಟುಗಳು ಬ್ಯಾನ್ ಎಂದರು. ಅದರಿಂದ ಜನಸಾಮಾನ್ಯರಿಗೆ ಸಾಕಷ್ಟು ಕಷ್ಟ ಆಯ್ತು. ಅದೇರೀತಿ ಇದೀಗ ಈ ಜಾರಿಯಲ್ಲಿರುವ ಕಾನೂನುಗಳನ್ನು ನಾಶಮಾಡಲು ಹೊರಟಿದೆ.

“ಈಗ ಇರುವ ಎವಿಡೆನ್ಸ್ ಆಕ್ಟ್‌ನಲ್ಲಿ ಸೆಕ್ಷನ್ 25 ಮತ್ತು 26ರಲ್ಲಿ ಪೊಲೀಸರ ಎದುರು ಏನೇ ಹೇಳಿಕೆ ಕೊಟ್ಟರೂ ಅದಕ್ಕೆ ಬೆಲೆ ಇರುವುದಿಲ್ಲ; ಆರ್ಟಿಕಲ್ 20(3)ನಲ್ಲಿ ನನಗೆ ವಿರೋಧವಾಗಿ ನನ್ನನ್ನೇ ಸಾಕ್ಷಿ ಮಾಡುವಂತಿಲ್ಲ ಎನ್ನುವುದಾಗಿದೆ. ಆದರೆ ಈಗಿನ ಹೊಸ ಕಾನೂನು ಅದನ್ನು ನಾಶ ಮಾಡಿದೆ. ಇದರಿಂದ ಪೊಲೀಸರು ಏನು ಚಾರ್ಜ್‌ಶೀಟ್ ಸಲ್ಲಿಕೆ ಮಾಡುತ್ತಾರೋ ಅದೇ ಅಂತಿಮ ಆಗೋಗುತ್ತದೆ. ಅದರ ವಿರುದ್ಧ ಬಡವರು ಹೋರಾಟ ಮಾಡುವುದು ಕಷ್ಟವಾಗುತ್ತದೆ.

“ಪ್ರಕರಣವೊಂದರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದರೆ ಆತನನ್ನು 24 ಗಂಟೆಯಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. 90ದಿನದಲ್ಲಿ ಆತನ ಮೇಲೆ ಚಾರ್ಜ್‌ಶೀಟ್ ಆಗಬೇಕು, ಇಲ್ಲದಿದ್ದರೆ ಆತನನ್ನು ಬೇಲ್ ಮೇಲೆ ಬಿಡುಗಡೆ ಮಾಡಬೇಕು ಎನ್ನುವುದಿದೆ. ಆದರೆ ಈಗ ತಂದಿರುವ ಹೊಸ ಕಾನೂನಿನಲ್ಲಿ 180 ದಿನ ಜೈಲಲ್ಲಿ ಇರಬೇಕು; ಬೇಲ್ ಅನ್ನೋದನ್ನ ಬಹುತೇಕ ಕಡೆಗೆ ತೆಗೆದಿದ್ದಾರೆ.

ಎಸ್. ಬಾಲನ್

“ಭಯೋತ್ಪಾದಕತೆಗೆ ಸಂಬಂಧಿಸಿದಂತೆ ಒಂದು ಕಾನೂನು ತಿದ್ದುಪಡಿ ಮಾಡಿದ್ದಾರೆ. ಒಬ್ಬ ವ್ಯಕ್ತಿ ಭಯೋತ್ಪಾದಕ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದಾನೆ ಎನ್ನುವುದನ್ನು ಹೇಗೆ ಕಂಡುಹಿಡಿಯುತ್ತಾರೆ? ಒಬ್ಬ ವ್ಯಕ್ತಿ ತನ್ನ ಲ್ಯಾಪ್‌ಟಾಪ್‌ನಲ್ಲಿ ಭಯೋತ್ಪಾದಕ ಸಂಘಟನೆಯ ಒಂದು ಲೋಗೋ ಡೌನ್‌ಲೋಡ್ ಮಾಡಿದ್ದರೂ ಕೂಡ ಆತ ಟೆರೆರಿಸ್ಟ್ ಅಂತ ಇವರು ಜೀವಾವದಿ ಶಿಕ್ಷೆ ನೀಡುವ ಸಾಧ್ಯತೆ ಇದೆ.

“2018ರಲ್ಲಿ ನಿವೃತ್ತ ನ್ಯಾಯಾಧೀಶ, ಲಾ ಕಾಲೇಜು ಪ್ರಿನ್ಸಿಪಲ್ ಮತ್ತು ಬಿಜೆಪಿಯ ರಾಮ್‌ಜೆಟ್ ಮಲಾನಿ ಅವರ ಮಗ ಮಹೇಶ್‌ಜೆಟ್ ಮಲಾನಿ ಅವರ ನೇತೃತ್ವದಲ್ಲಿ ಒಂದು ಕಮಿಟಿ ರಚನೆ ಮಾಡಿದರು. ಈ ಕಮಿಟಿ ನಾಗಪುರದಿಂದ ವರದಿ ರಚನೆ ಮಾಡಿದೆ. ಅದೇ ವರದಿಯನ್ನು ಇಂದು ಕೇಂದ್ರ ಸರ್ಕಾರ ಕಾನೂನಾಗಿ ಜಾರಿ ಮಾಡಿದೆ.

“ಈ ಕಾನೂನು ತಿದ್ದುಪಡಿಯಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಲಾಗಿದೆ. ಒಬ್ಬ ವ್ಯಕ್ತಿಯ ಮೇಲೆ ಪೊಲೀಸರು ಯುಎಪಿಎ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಬಿಟ್ಟರೆ, ಆರೋಪಿತನಿಗೆ ಯಾವುದೇ ಹಕ್ಕುಗಳಿರುವುದಿಲ್ಲ. ಆತನ ಜೀವನವೇ ಅಂತ್ಯವಾಗಿಬಿಡುತ್ತದೆ. ಇಂತಹ ಪ್ರಕರಣಗಳಲ್ಲಿ ಈಗಾಗಲೇ ಸಾಕಷ್ಟು ಜನ ಜೈಲು ಸೇರಿದ್ದಾರೆ. ಅವರಲ್ಲಿ ಹೆಚ್ಚಿನವರು ದಲಿತರು, ಅಲ್ಪಸಂಖ್ಯಾತರು ಹಾಗೂ ಬುಡಕಟ್ಟು ಸಮಾಜದವರೇ ಸೇರಿದ್ದಾರೆ. ಇದು ದೇಶವನ್ನು ಸಾವಿರಾರು ವರ್ಷ ಹಿಂದಕ್ಕೆ ತಗೆದುಕೊಂಡು ಹೋಗುವ ಕಾನೂನಾಗಿದೆ.

“ಅವರಿಗೆ ಬಹುಮತ ಇದೆ ಎನ್ನುವ ಕಾರಣಕ್ಕೆ ಅವರ ಮನಸೋಇಚ್ಛೆ ಕಾನೂನುಗಳನ್ನು ತರುತ್ತಿದ್ದಾರೆ. ಹೀಗೆ ಮುಂದುವರಿದರೆ ಮತ್ತು ಮುಂದೆ 2024ರಲ್ಲಿ ಮತ್ತೆ ಅವರೇ ಅಧಿಕಾರಕ್ಕೆ ಬಂದರೆ ಅವರು ಸಂವಿಧಾನವನ್ನೇ ಬದಲು ಮಾಡುವುದಕ್ಕೆ ಮುಂದಾಗುತ್ತಾರೆ” ಎಂದು ಬಾಲನ್ ಅವರು ಕಳವಳ ವ್ಯಕ್ತಪಡಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...