Homeಮುಖಪುಟ'ಬುದ್ಧನ ಕೆಫೆ'ಯಲ್ಲಿ 'ಪ್ರೀತಿ ವಿಸ್ತಾರತೆ'ಯ ಸಂದೇಶ ಸಾರುವ 'ಲವ್ ಅಂಡ್ ಲೆಟ್ ಲವ್' ಕಿರುಚಿತ್ರ

‘ಬುದ್ಧನ ಕೆಫೆ’ಯಲ್ಲಿ ‘ಪ್ರೀತಿ ವಿಸ್ತಾರತೆ’ಯ ಸಂದೇಶ ಸಾರುವ ‘ಲವ್ ಅಂಡ್ ಲೆಟ್ ಲವ್’ ಕಿರುಚಿತ್ರ

- Advertisement -
- Advertisement -

‘ಹೆಣ್ಣು, ಗಂಡು, ಅಥವಾ ಸಲಿಂಗಿ ಎಂಬ ಭೇದವೇ ಇಲ್ಲದೆ, ಮನುಷ್ಯರಾದ ನಾವೆಲ್ಲರೂ ಪ್ರೀತಿಗಾಗಿ ಹಂಬಲಿಸುತ್ತೇವೆ. ಹೆಣ್ಣಿಗೆ ಗಂಡಿನ ಪ್ರೀತಿಯ ಅಗತ್ಯವಿದೆ, ಹಾಗೆಯೇ ಗಂಡಿಗೆ ಹೆಣ್ಣಿನ ಪ್ರೀತಿಯ ಅಗತ್ಯವಿದೆ’ ಇವು ಕನ್ನಡದ ಖ್ಯಾತ ಲೇಖಕಿ ಎಚ್.ಎಸ್. ಶ್ರೀಮತಿ ಅವರು ತಮ್ಮ ‘ಬಾರಯ್ಯ ಮಮ ಬಂಧು’ ಎಂಬ ಅನುವಾದಿತ ಕೃತಿಗೆ ಬರೆದ ಸಾಲು.. ಹೀಗೆ ಹಲವರು, ಪ್ರೀತಿಯ ಹಲವು ರೀತಿಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನೀವು, ನಿಮ್ಮತನ, ಇಡೀ ವಿಶ್ವದಲ್ಲಿರುವ ಯಾರಾದರೂ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯಕ್ಕೆ ಅರ್ಹರು’ ಎನ್ನುತ್ತಾನೆ ಇಡೀ ಜಗತ್ತಿಗೆ ಪ್ರೀತಿಯ ಕಾರುಣ್ಯವನ್ನು ಹಂಚಿದ ಗೌತಮ ಬುದ್ಧ. ‘ಕೆಫೆ ಬುದ್ಧ’ದಲ್ಲಿ ಕೊನೆಗೊಳ್ಳುವ ‘ಲವ್ ಅಂಡ್ ಲೆಟ್ ಲವ್’ ಕಿರುಚಿತ್ರ ಕೂಡ ಇದೇ ಸಂದೇಶವನ್ನು, ಯಾವುದೇ ಸಂಭಾಷಣೆ ಇಲ್ಲದೆ ಪ್ರೀತಿ ಭಾಷೆಯಾದ ಮೌನದಲ್ಲೇ ಹೇಳುತ್ತದೆ.

ತಮಿಳಿನ ಖ್ಯಾತ ಅಂಬೇಡ್ಕರ್‌ವಾದಿ ನಿರ್ದೇಶಕ ಪಾ. ರಂಜಿತ್ ಅವರು ತಮ್ಮ ನೀಲಂ ಸಂಸ್ಥೆ ಮೂಲಕ ಹಲವು ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಚಿತ್ರ ನಿರ್ಮಾಣ, ಸಂಗೀತ ತಂಡ, ಕಿರುಚಿತ್ರ, ಪತ್ರಿಕೆ ಮುದ್ರಣ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಅಂಬೇಡ್ಕರ್ ಮತ್ತು ಬುದ್ಧನ ಸಂದೇಶಗಳನ್ನು ಪ್ರಚಾರ ಮಾಡುತ್ತಿದ್ದಾರೆ. ತಮಿಳಿನ ‘ನಚ್ಚತ್ತಿರಮ್ ನಗರ್ಗಿರದು’ ಸಿನಿಮಾ ಮೂಲಕ ಪ್ರೀತಿಯ ವಿಸ್ತಾರತೆಯನ್ನು ಚರ್ಚಿಸಿದ್ದ ರಂಜಿತ್, ಇದೀಗ ‘ಲವ್ ಅಂಡ್ ಲೆಟ್ ಲವ್’ ಕಿರು ಚಿತ್ರವನ್ನು ನೋಡುಗರ ಮುಂದಿಟ್ಟಿದ್ದಾರೆ.

‘ಪ್ರೀತಿ ಎಂದರೆ ಹೆಣ್ಣು ಮತ್ತು ಗಂಡಿನ ನಡುವೆ ಮಾತ್ರ, ಅದರಲ್ಲೂ ಅವಿವಾಹಿತರ ನಡುವೆ ಇದ್ದರೆ ಮಾತ್ರ ಪ್ರೀತಿ ಪವಿತ್ರವಾದದದ್ದು’ ಎಂಬ ಭಾರತೀಯ ಚಲನಚಿತ್ರಗಳ ನಡುವೆ, ಪ್ರೀತಿ ವಿಸ್ತಾರತೆಯನ್ನು ಸಾರುವ ‘ಲವ್ ಅಂಡ್ ಲೆಟ್ ಲವ್’ ಕಿರುಚಿತ್ರ ಈ ಕಾಲಕ್ಕೆ ಮಾಡಲೇಬೇಕಾಗಿದ್ದ ಸಿನಿಮಾವಾಗಿದೆ. ಪ್ರೀತಿಗೆ ಯಾವುದೇ ಗಡಿ ಇಲ್ಲ, ಅದು ವಯಸ್ಕರು, ವಯೋವೃದ್ಧರು, ಯುವಕ-ಯುವತಿಯರು, ಸಮಾನ ಲಿಂಗಿಗಳಲ್ಲಿ ಅರಳುವ ಸಹಜ ಕ್ರಿಯೆ ಎಂಬುದನ್ನು ಚಿತ್ರ ಸಾರಿ ಹೇಳುತ್ತದೆ.

7 ನಿಮಿಷ, 47 ಸೆಕೆಂಡ್ ಅವಧಿಯ ಇಡೀ ಸಿನಿಮಾದಲ್ಲಿ ಒಂದೇ ಒಂದು ಸಂಭಾಷಣೆ ಇಲ್ಲ.. ನವಿರಾದ ಹಿನ್ನೆಲೆ ಸಂಗೀತ ಮತ್ತು ಕಣ್ಣ ಭಾಷೆಯೇ ನೋಡುಗರಿಗೆ ಎಲ್ಲವನ್ನೂ ತಲುಪಿಸುತ್ತವೆ. ಕ್ಯಾಮೆರಾ ಕೆಲಸವೂ ಕಥೆಗೆ ಪೂರಕವಾಗಿದ್ದು, ಸಿನಿಮಾದಲ್ಲಿ ಕಾಣಿಸುವ ಬಣ್ಣವು ಕಣ್ಣಿಗೆ ಮುದ ನೀಡುತ್ತದೆ. ತಾವು ಅಂದುಕೊಂಡಿದ್ದನ್ನು ತೆರೆಗೆ ತರುವಲ್ಲಿ ನಿರ್ದೇಶಕರಾದ ಶೈಲಜಾ ಪಡಿಂಡಾಲ ಯಶಸ್ವಿಯಾಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಭಾಗವಾಗಿರುವ ‘ಕ್ವೀರ್‌’ ಜಗತ್ತನ್ನು ‘ನಾನು ಲೇಡೀಸ್’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದ ಅವರು, ‘ಲವ್ ಅಂಡ್ ಲೆಟ್ ಲವ್’ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ.

ನಿರ್ದೇಶಕರಾದ ಶೈಲಜಾ ಪಡಿಂಡಾಲ

ಪ್ರೀತಿಯನ್ನ ಅಧಿಕಾರವಾಗಲ್ಲದೆ, ಬಂಧವಾಗಿ ಮಾತ್ರವಲ್ಲದೆ ಬೆಳಕಾಗಿ, ಬಿಡುಗಡೆಗಾಗಿ ಎದುರು ನೋಡುವವರೇ ಹೆಚ್ಚು. ಇದೇ ಸ್ವತಂತ್ರವನ್ನು ಮುಕ್ತತೆಯನ್ನು ಹೇಳುವ ಕಿರು ಚಿತ್ರ ‘ಪ್ರೀತಿಸಿ ಮತ್ತು ಪ್ರೀತಿಸಲು ಬಿಡಿ’. ಪ್ರೇಮವೆನ್ನುವುದು ಸರಪಳಿಯಾಗದೇ ರೆಕ್ಕೆಯಾಗಬೇಕೆಂಬುದು ಎಲ್ಲಾ ಪ್ರೇಮಿಗಳ, ಮನುಷ್ಯರ ಕನಸು. ಆದರೆ ಸಮಾಜದ ಕಟ್ಟಲೆಗಳು ಪ್ರೇಮವನ್ನ ಸಂಕುಚಿತ ಚೌಕಟ್ಟುಗಳಿಗೆ ಒಳಪಡಿಸಿ, ಅದನ್ನು ಮುಕ್ತವಾಗಿ ಬಿಡದೇ ಬಂಧನವಾಗಿಸಿದೆ. ಇಲ್ಲಿ ಪ್ರೇಮಕ್ಕೆ ನೂರಾರು ಅಡೆತಡೆಗಳಿವೆ. ಧರ್ಮ, ಜಾತಿ, ಬಣ್ಣ, ವಯಸ್ಸು ಇನ್ನೂ ಏನೇನೋ. ಆದರೆ, ಪ್ರತಿಯೊಬ್ಬರು ತಮ್ಮಾಳದಲ್ಲಿ ಚಡಪಡಿಸುವುದು ಎದುರು ನೋಡುವುದು ಈ ಚೌಕಟ್ಟುಗಳನ್ನು ಮೀರಿಕೊಂಡ ಪ್ರೇಮಿಗಾಗಿಯೇ ಈ ಭಾವಕ್ಕೆ ಬೇಧ ವಿಲ್ಲ. ನೈಸರ್ಗಿಕವಾಗಿ ಅರಳುವ ಪ್ರೀತಿಯನ್ನು ಅದರ ಪಾಡಿಗೆ ಬಿಡಿ ಎಂಬ ಪ್ರಬಲ ಸಂದೇಶವನ್ನು ಈ ಸಿನಿಮಾ ಮೌನದಲ್ಲೇ ಕೂಗಿ ಹೇಳಿದೆ.

‘ಲವ್ ಅಂಡ್ ಲೆಟ್ ಲವ್‌’ ಚಿತ್ರದಲ್ಲಿ ಮಗಳ ಪಾತ್ರವು ಆಕೆ ಕೇವಲ ಲೆಸ್ಬಿಯನ್ ಎಂಬುದಲ್ಲ. ಅವಳ ಗುರುತು ಅವಳು ಕೇವಲ ಸಲಿಂಗಕಾಮಿ ಎಂದು ಅಲ್ಲ.. ಅವಳು ಓದುವ ಪುಸ್ತಕಗಳು ಅವಳ ಪಾತ್ರದ ಆಳವನ್ನು ನಿಖರವಾಗಿ ಹೇಳುತ್ತದೆ. ಅವಳು ಕ್ರಾಂತಿಕಾರಿ ವರ್ಣಚಿತ್ರಗಾರ್ತಿ ಫ್ರಿಡಾವನ್ನು ಆರಾಧಿಸುವ ಕಲಾವಿದೆ.

ಆಕೆಯ ದಿ ಡಾಟರ್, ಮ್ಯಾಕ್ಸಿಮ್ ಗೋರ್ಕಿ, ಔರ್ಡೆ ಲಾರ್ಡ್ ಅವರಂತಹ ಕಾದಂಬರಿಕಾರರು ಮತ್ತು ರಾಜಕೀಯ ಕಾರ್ಯಕರ್ತರನ್ನು ಆರಾಧಿಸುತ್ತಾಳೆ. ರಿಚರ್ಡ್ ಡಾಕಿನ್ಸ್ ಬರೆದಿರುವ SELFISH GENE ಪುಸ್ತಕವಿದೆ, ಆ ಪುಸ್ತಕವು ಮಾನವ ಧರ್ಮ ಮತ್ತು ದೇವರನ್ನು ಪ್ರಶ್ನಿಸುತ್ತದೆ.. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾತಿ ವಿನಾಶದ ಪುಸ್ತಕವೂ ಇದೆ, ಈ ಪುಸ್ತಕಗಳು ಅವಳು ಚಿತ್ರದಲ್ಲಿ ಕ್ರಾಂತಿಕಾರಿ ಏನಾದರೂ ಮಾಡಲಿದ್ದಾಳೆಂದು ಸೂಚಿಸುತ್ತವೆ.

ಮತ್ತೊಂದು ಕಡೆ ಅವಳ ತಾಯಿಗೆ ಪುಸ್ತಕಗಳಲ್ಲಿ ಆಸಕ್ತಿಯಿಲ್ಲ; ವಾಸ್ತವವಾಗಿ ಅವರು ಇನ್ನೂ ತನ್ನ ಹಿಂದಿನ ನೆನಪಿನಲ್ಲಿ ದಿನಕಳೆಯುತ್ತಿದ್ದಾರೆ. ಹೀಗಾಗಿ, ಅವರ ಕೋಣೆಯಲ್ಲಿ ಅವರ ಹಳೆಯ ಚಿತ್ರಗಳನ್ನು ಹೊಂದಿದ್ದಾರೆ. ತನ್ನ ಮಗಳು ಚಿಕ್ಕವಳಿದ್ದಾಗ ರಚಿಸಿದ ರೇಖಾಚಿತ್ರವನ್ನು ಅವರು ಪ್ರೀತಿಯಿಂದ ರೂಪಿಸಿದ್ದಾರೆ, ಇದು ಅವರ ಮಗಳು ತನ್ನ ಜೀವನದ ಅಮೂಲ್ಯ ಅಂಶವಾಗಿದೆ ಎಂದು ತೋರಿಸುತ್ತದೆ.

ಸಮಾಜಕ್ಕೆ ವಿರುದ್ಧವಾದುದನ್ನು ಒಪ್ಪಿಕೊಳ್ಳುವ ಕಲಿಕೆಯು ತನ್ನ ಮಗಳಂತೆ ತಾಯಿಗೆ ಪುಸ್ತಕಗಳನ್ನು ಓದುವುದರಿಂದ ಬಂದಿಲ್ಲ. ಆದರೆ, ಆಕೆಯ ನಿಜ ಜೀವನದ ಅನುಭವದಿಂದ ಹಲವಾರು ಪಾಠ ಕಲಿತಿದ್ದಾರೆ. ಸಿಂಗಲ್ ಪೇರೆಂಟ್ ಆದ ಆಕೆಯು ತನ್ನ ಮಗಳನ್ನು ಬೆಳೆಸುವ ಪ್ರಯಾಣದಲ್ಲಿ ಬಹುಶಃ ಪಿತೃಪ್ರಧಾನ ಸಮಾಜದ ವಿರುದ್ಧ ಹೋರಾಡಿದ್ದಾಳೆ.

ಪ್ರೇಮಿಗಳ ದಿನದಂದು ಮನೆಯಿಂದ ಹೊರಡುವ ಮೊದಲು ತಾಯಿ ಮತ್ತು ಮಗಳು ತಬ್ಬಿಕೊಂಡಾಗ, ಅವರು ಸ್ನೇಹಿತರಂತೆ ಸಮಾನ ಸಂಬಂಧವನ್ನು ಹಂಚಿಕೊಳ್ಳುತ್ತಾರೆ. ಅವರದ್ದು ಪರಂಪರಾಗತವಾಗಿ ಬಂದ ಪೋಷಕರು-ಮಗಳ ಸಂಬಂಧವಲ್ಲ ಎಂಬುದನ್ನು ಸೂಚಿಸುತ್ತದೆ… ಒಳಗೊಳ್ಳುವಿಕೆಯ ಸಂಪೂರ್ಣ ತಿಳುವಳಿಕೆಯಿಂದ ಇದು ಸಾಧ್ಯ ಮತ್ತು ಅಂತಹ ವಾತಾವರಣದಲ್ಲಿ ಮಾತ್ರ ಪ್ರಗತಿಯು ಅರಳಬಹುದು ಎಂಬುದನ್ನು ಈ ದೃಶ್ಯ ಹೇಳುತ್ತದೆ. ತನ್ನ ಮಗುವನ್ನು ಒಂಟಿ ಪೋಷಕರಾಗಿ ಬೆಳೆಸುವಲ್ಲಿ ತಾಯಿಯ ಹೋರಾಟವು ಬಹುಶಃ ಮುಂದಿನ ಪೀಳಿಗೆಯು ತನ್ನ ಪೀಳಿಗೆಗೆ ಹೊಂದಿದ್ದ ಹಿಂಜರಿಕೆಯ ಸಂಪ್ರದಾಯಗಳಿಂದ ಬಳಲಬಾರದು ಎಂಬ ಪ್ರಗತಿಪರ ದೃಷ್ಟಿಕೋನವನ್ನು ನೀಡಿದೆ.

ಬುದ್ಧ ಕೆಫೆಯಲ್ಲಿ ತಾಯಿಯು ತನ್ನ ಸ್ನೇಹಿತನನ್ನು ಭೇಟಿಯಾದಾಗ, ಅವನು ಗಾರ್ಕಿಯ ಪುಸ್ತಕವನ್ನು ಓದುವುದನ್ನು ಸಹ ಕಾಣಬಹುದು. ಗಾರ್ಕಿಯ ಅತ್ಯಾಸಕ್ತಿಯ ಓದುಗನೂ ಆಗಿರುವ ಆತ ತನ್ನ ಮಗಳಿಗೆ ಒಳ್ಳೆಯ ತಂದೆಯಾಗಬಹುದು ಎಂಬುದನ್ನು ಹೇಳಲು ‘ರೂಪಕವಾಗಿ’ ಬಳಸಲಾಗಿದೆ.

ತಾಯಿ ಮತ್ತು ಮಗಳ ಪ್ರೇಮ ವಿಧಾನದಲ್ಲಿ ಭಿನ್ನವಾಗಿದ್ದರೂ, ಅವರಿಬ್ಬರೂ ತಮ್ಮ ಸಂಗಾತಿಗಳನ್ನು ಭೇಟಿಯಾಗಲು ಬುದ್ಧ ಕೆಫೆಗೆ ತೆರಳುತ್ತಾರೆ. ಬುದ್ಧ ಜಾತಿ ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ವಿರೋಧಿಸಿ ಮೊದಲ ರಾಜ! ಜಾತಿ ಬಂಡಾಯವಾದಾಗ ಮಾತ್ರ ಸಮಾಜದಲ್ಲಿ ವಿಮೋಚನೆಯ ಬೆಳವಣಿಗೆಯಾಗುತ್ತದೆ.
ಜಾತಿ, ಬಂಡವಾಳಶಾಹಿ ಮತ್ತು ಪಿತೃಪ್ರಭುತ್ವವು ಪರಸ್ಪರ ಸಂಬಂಧ ಹೊಂದಿದೆಯೆಂದರೆ, ಈ ಅಂಶಗಳನ್ನು ಬಂಡಾಯ ಮಾಡದೆ, ಮಹಿಳೆಯರಿಗೆ, ತುಳಿತಕ್ಕೊಳಗಾದವರಿಗೆ ಮತ್ತು ವಿಲಕ್ಷಣರಿಗೆ ಯಾವುದೇ ವಿಮೋಚನೆ ಇಲ್ಲ ಎಂದು ಹೇಳುತ್ತಾನೆ.

‘ಲವ್ ಅಂಡ್ ಲೆಟ್ ಲವ್’ ಚಿತ್ರದ ಕೊನೆಯ ದೃಶ್ಯ

ಬುದ್ಧ ಕೆಫೆಯಲ್ಲಿ ತನ್ನ ಸ್ನೇಹಿತನ್ನು ಭೇಟಿಯಾಗಲು ಬರುವ ತಾಯಿಯು, ಮಗಳನ್ನು ಆಕೆಯ ಸಲಿಂಗಿ ಸ್ನೇಹಿತೆಯೊಂದಿಗೆ ನೋಡಿ ಆತಂಕಕ್ಕೀಡಾಗುತ್ತಾಳೆ; ತಾನು ಹಿಡಿದಿದ್ದ ಸಂಗಾತಿಯ ಕೈ ಸಡಿಲಿಸುತ್ತಾಳೆ. ಕೆಲವೇ ಹೊತ್ತಿನಲ್ಲಿ ಆಕೆ ಇಬ್ಬರನ್ನು ತನ್ನ ಬಳಿಗೆ ಕರೆದು, ಅವರ ಪ್ರೀತಿಗೆ ಕಣ್ಣಿನಲ್ಲೆ ಸಮ್ಮತಿಸುತ್ತಾಳೆ. ಚಿತ್ರವು ಪರಸ್ಪರ ಒಪ್ಪಿಕೊಳ್ಳಲು ಹೆಚ್ಚಿನ ನಾಟಕವಿಲ್ಲದೆ, ಕಣ್ಣಸನ್ನೆಯ ಸಂತೋಷದಲ್ಲಿ ಕೊನೆಗೊಳ್ಳುತ್ತದೆ.

ಮಗಳಾಗಿ ಪಾತ್ರ ನಿರ್ವಹಿಸಿರುವ ಚೈತ್ರಾ ಜೆ. ಆಚಾರ್‌, ತಾಯಿಯಾಗಿ ಕೈಲಾಸಂ ಗೀತಾ ಸಹಜವಾಗಿ ನಟಿಸಿದ್ದಾರೆ. ಮಾಲಿನಿ ಮತ್ತು ಬೈಜು ಬುದ್ಧ ಕೆಫೆಯಲ್ಲಿ ಕಾಣಿಸಿಕೊಂಡು ಇಷ್ಟವಾಗುತ್ತಾರೆ. ‘ಪ್ರೀತಿಯೇ ಭಾಷೆ’ಯಾಗಿರುವುದರಿಂದ ಚಿತ್ರವು ಎಲ್ಲ ಭಾಷೆಯ ಜನರನ್ನು ತಲುಪುವುದಕ್ಕೆ ಸಹಕಾರಿಯಾಗಿದೆ; ಸಂಭಾಷಣೆ ಬಳಸದೆ ಸಂದೇಶ ನೀಡಿರುವುದು ಚಿತ್ರದ ಹೆಚ್ಚುಗಾರಿಕೆ ಎನ್ನಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...

‘ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆ ನಿವಾರಿಸಲು ಸರ್ಕಾರ ಬದ್ಧ’: ಮುಖ್ಯಮಂತ್ರಿ ಸಿದ್ದರಾಮಯ್ಯ

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಸರ್ಕಾರ ಬದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುವ ಜನರ ಸರ್ಕಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.  ಮಾರ್ಚ್ 14ರಂದು, ಬಾಗಲಕೋಟೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ...

ಮಣಿಪುರ ಹಿಂಸಾಚಾರ: ಕಾಮ್ಜಾಂಗ್‌ನಲ್ಲಿ ಇಬ್ಬರು ಕುಕಿ ಪುರುಷರು ಶವವಾಗಿ ಪತ್ತೆ; ಹೆಚ್ಚಿದ ಉದ್ವಿಗ್ನತೆ 

ಮಣಿಪುರದ ಕಾಮ್ಜಾಂಗ್ ಜಿಲ್ಲೆಯಲ್ಲಿ ಬುಧವಾರದಿಂದ ನಾಪತ್ತೆಯಾಗಿದ್ದ ಇಬ್ಬರು ಕುಕಿ ಪುರುಷರು ಗುರುವಾರ ಥವಾಯ್ ಕುಕಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದರಿಂದ ಉದ್ವಿಗ್ನತೆ ಹೆಚ್ಚಾಗಿದೆ. ಜಿಲ್ಲೆಯ ಥಾವಾಯಿ ಕುಕಿ ಗ್ರಾಮದ 42 ವರ್ಷದ ಥೇಂಗಿನ್...

ಉತ್ತರ ಪ್ರದೇಶ | ಮುಸ್ಲಿಮರೊಂದಿಗಿನ ಶಾಂತಿ ಸಭೆಯಲ್ಲಿ ‘ಇರಾನ್‌ಗೆ ಹೋಗಿ’ ಎಂದ ಪೊಲೀಸ್‌ ಅಧಿಕಾರಿ : ತೀವ್ರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಈದುಲ್ ಫಿತರ್ (ರಂಝಾನ್) ಹಬ್ಬಕ್ಕೆ ಪೂರ್ವಭಾವಿಯಾಗಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಂಭಾಲ್ ಜಿಲ್ಲೆಯ ಅಸ್ಮೋಲಿ ಪ್ರದೇಶದಲ್ಲಿ ರಂಝಾನ್ ತಿಂಗಳ ಕೊನೆಯ...

ಪಶ್ಚಿಮ ಏಷ್ಯಾ ಸಂಘರ್ಷ: ಲೆಬನಾನ್‌ನಲ್ಲಿ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ದಾಳಿ: ವೈದ್ಯರು, ದಾದಿಯರು ಸೇರಿ 12 ಮಂದಿ ಸಾವು

ದಕ್ಷಿಣ ಲೆಬನಾನ್‌ನಲ್ಲಿರುವ ಆರೋಗ್ಯ ಕೇಂದ್ರದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ 12 ವೈದ್ಯಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ ಎಂದು ಲೆಬನಾನಿನ ಸಾರ್ವಜನಿಕ ಆರೋಗ್ಯ ಸಚಿವಾಲಯ ವರದಿ ಮಾಡಿದೆ.  ಲೆಬನಾನ್‌ನಾದ್ಯಂತ ಇಸ್ರೇಲಿ ದಾಳಿಯಲ್ಲಿ ಈವರೆಗೂ 103 ಮಕ್ಕಳು...

ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಪರ ತೀರ್ಮಾನಕ್ಕೆ ಎಲ್ಲರೂ ಸಹಕರಿಸಿ: ಒಳಮೀಸಲಾತಿ ಹೋರಾಟ ಸಮಿತಿ ಮನವಿ

ಬೆಂಗಳೂರು: ಒಳಮೀಸಲಾತಿ ಜಾರಿ ಮಾಡುವ ಪ್ರಕ್ರಿಯೆಯು ಕೊನೆಯ ಹಂತಕ್ಕೆ ತಲುಪಿದ್ದು, ಇದನ್ನು ಸುಲಲಿತವಾಗಿ ಬಗೆಹರಿಸಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಆಗ್ರಹಿಸಿ ಇಂದು (14 ಮಾರ್ಚ್)‌ ನಗರದ ಪ್ರೆಸ್‌ ಕ್ಲಬ್‌ನಲ್ಲಿ ಒಳಮೀಸಲಾತಿ ಹೋರಾಟಗಾರರು...

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಅಕ್ರಮ ನೇಮಕಾತಿ; ರೋಸ್ಟರ್ ಮೀಸಲು ಕ್ರಮ ಉಲ್ಲಂಘನೆ ಆರೋಪ: ನ್ಯಾಯಾಂಗ ತನಿಖೆಗೆ ಆಗ್ರಹ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿರುವ Central University of Karnataka ದಲ್ಲಿ ಬೋಧಕ ಹುದ್ದೆಗಳ ನೇಮಕಾತಿಯಲ್ಲಿ ಮೀಸಲು ಕ್ರಮ ಉಲ್ಲಂಘನೆ ಹಾಗೂ ಅಕ್ರಮ ನೇಮಕಾತಿಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ...

ಸಂಭಾಲ್ | ಮಸೀದಿಯಲ್ಲಿ ನಮಾಝ್ ಮಾಡುವವರ ಸಂಖ್ಯೆ ಮಿತಿಗೊಳಿಸಲು ಸಾಧ್ಯವಿಲ್ಲ; ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ರಾಜೀನಾಮೆ ನೀಡಿ: ಅಧಿಕಾರಿಗಳಿಗೆ ಅಲಹಾಬಾದ್ ಹೈಕೋರ್ಟ್ ತರಾಟೆ

ಸಂಭಾಲ್ ಜಿಲ್ಲೆಯ ಮಸೀದಿಯೊಂದರಲ್ಲಿ ರಂಝಾನ್ ಸಮಯದಲ್ಲಿ ನಮಾಝ್ ಮಾಡುವವರ ಸಂಖ್ಯೆಯನ್ನು ಮಿತಿಗೊಳಿಸುವ ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಅಲಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ ಎಂದಿದೆ. ಫೆಬ್ರವರಿ 27ರಂದು...