Homeರಾಷ್ಟ್ರೀಯಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

- Advertisement -
- Advertisement -

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು.

ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ ತಮ್ಮನ್ನು ಮತದಾರರು ದುರ್ಬಲರು ಎಂದು ತಿಳಿಯುತ್ತಾರೆ… ತಾನು ಸಹ ಅಮೇರಿಕಾ-ಇಸ್ರೇಲ್ ತರಹ ತೋಳ್ಬಲ ಪ್ರದರ್ಶಿಸುವ ವಿಶ್ವಗುರು ಎನ್ನುವ ಪ್ರಚಾರ ಮುಕ್ಕಾಗದಂತೆ ನೋಡಿಕೊಳ್ಳಬೇಕು..
ಇಸ್ರೇಲ್ ಹಾಗೂ ನೇತನ್ಯಾಹು ನಮ್ಮ ರೀತಿ, ಇಲ್ಲಿನ ಹಿಂದುತ್ವ ರಾಜಕಾರಣ ಅಲ್ಲಿನ ಜುಡಾಯಿಸಂ… ಇಬ್ಬರಿಗೂ ಇಸ್ಲಾಂ ಸಮಾನ ಶತೃ ಎನ್ನುವ ಕಥನ ಸೃಷ್ಟಿಸಲಾಗಿದೆ.. ಈಗ ಅದನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಿದೆ.. ಇದಕ್ಕಾಗಿ ಇಸ್ರೇಲ್ ನ ಭಯೋತ್ಪಾದನೆ ಧೋರಣೆಯನ್ನು ಬೆಂಬಲಿಸುವಂತಹ ಸ್ಥಿತಿಯಲ್ಲಿದ್ದಾರೆ…
ಇಲ್ಲಿ ಮುಸ್ಲಿಂರ ವಿರುದ್ಧ ನೆರೇಶನ್ ಸೃಷ್ಟಿಸಿ ಜಾಗತಿಕವಾಗಿ ಇಸ್ಲಾಂ ದೇಶದ ಪರವಾಗಿ ಮಾತನಾಡಿದರೆ ತಮ್ಮ ಮತಬ್ಯಾಂಕ್ ಮೇಲೆ ಪರಿಣಾಮ ಬೀರುತ್ತದೆ…
ಒಂದುವೇಳೆ ಕಾಂಗ್ರೆಸ್ ಪಕ್ಷ, ಚಿಂತಕರು, ಸಂಘಟನೆಗಳು ಏನಾದರೂ ಇರಾನ್ ಪರ ನಿಲುವು ತಾಳಿದರೆ ಅವರನ್ನು ದೇಶದ್ರೋಹಿಗಳು ಎಂದು ಪ್ರಚಾರ ಮಾಡಲು ಮತ್ತು ಮುಂಬರುವ ಪ.ಬಂಗಾಳ, ಅಸ್ಸಾಂ ಚುನಾವಣೆಗಳಲ್ಲಿ ಇದನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ…
ಪ್ರಚಾರದ ಸಂದರ್ಭದಲ್ಲಿ ಮೋದಿ ‘ನಾವು ದೇಶದ ಹಿತಕ್ಕಾಗಿ, ಅವರು ಇರಾನ್ ಹಿತಕ್ಕಾಗಿ’ ಎಂದು ಭಾಷಣ ಮಾಡುವುದರಲ್ಲಿ ಅನುಮಾನವೇ ಇರಲಿಲ್ಲ…
ಒಟ್ಟಿನಲ್ಲಿ ಪ.ಬಂಗಾಳ, ಕೇರಳ, ಅಸ್ಸಾಂ ರಾಜ್ಯದ ಚುನಾವಣಾ ಪ್ರಚಾರದ ಹೊತ್ತಿಗೆ ಇರಾನ್ – ಮುಸ್ಲಿಂ ವಿರುದ್ಧ ನೆರೇಶನ್ ನ ರೆಸಿಪಿ ತಯಾರಿಸುವ ಕೆಲಸ ಶುರುವಾಗಿತ್ತು…

ಆದರೆ ಎರಡು ವಾರಗಳಲ್ಲಿ ಎಲ್ಲವೂ ತಲೆಕೆಳಗಾಗಿ ಮೋದಿ ‘ಇಂಡಿಯಾ ದೇಶ ಇರಾನ್ ನ ಸ್ನೇಹಿತರು’ ಎನ್ನುವ ಸ್ಥಿತಿ ನಿರ್ಮಾಣವಾಗಿದೆ…

ಅತ್ತ ಸರ್ಕಾರದ ಮಟ್ಟದಲ್ಲಿ

ಈ ಯುದ್ಧ ಬಹು ದಿನಗಳ ಕಾಲ ನಡೆಯುವುದಿಲ್ಲ. ನಾಲ್ಕೈದು ದಿನಗಳಲ್ಲಿ ಮುಗಿದು ಇರಾಕ್, ಈಜಿಪ್ಟ್ ರೀತಿ ಇರಾನ್ ಶರಣಾಗುತ್ತದೆ, ಆಂತರಿಕವಾಗಿ ಅಲ್ಲಿನ ಜನ ಬೀದಿಗೆ ಬರುತ್ತಾರೆ.. ಹೀಗಾಗಿ ಆರಂಭದಿಂದಲೂ ಅಮೇರಿಕಾ -ಇಸ್ರೇಲ್ ಪರವಾಗಿದ್ದರೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.. ಇದು ಈ ಸರ್ಕಾರದ ಯೋಚನಾ ಲಹರಿ.. ಇದು ಸಂಭವಿಸಿದರೆ ‘ಮೋದಿ ಅಂದರೆ ಸಾಮಾನ್ಯವೇ’ ಎನ್ನುವ ಪ್ರಚಾರ…
ಆದರೆ ಎಲ್ಲಾ ತಲೆಕೆಳಗಾಗಿ ಇಂದು ಯುದ್ಧ ಆರಂಭಿಸಿದ ಟ್ರಂಪ್ ಗೆ ಮುಂದಿನ ದಾರಿ ಏನು? ಯುದ್ಧ ನಿಲ್ಲಿಸುವುದು ಹೇಗೆ? ಇದರಿಂದ ಹೊರಬರಲು ದಾರಿಗಳೇನು? ಒಂದೂ ಗೊತ್ತಾಗದೆ ದಿಗ್ಮೂಢಗೊಂಡಿದ್ದರೆ ಇವರನ್ನು ನಂಬಿ ರಾಜತಾಂತ್ರಿಕ ವ್ಯವಹಾರ ಮಾಡಿ ದೇಶದ ಘನತೆ ಹಾಳುಗೆಡವಿದ್ದು ಮೋದಿಯವರ ಸಾಧನೆ…

ಮೋದಿಯವರು ಯುದ್ಧ ನಡೆಯುವ ಎರಡು ದಿನಗಳ ಮುಂಚೆ ಇಸ್ರೇಲ್ ದೇಶಕ್ಕೆ ಹೋಗಿದ್ದು ಯಾಕೆ? ನೇತನ್ಯಾಹುನ್ನು ಹೊಗಳಿದ್ದು ಯಾಕೆ? ಇದು ಅವರ ವೈಯಕ್ತಿಕ ನಿಲುವೇ? ಅಥವಾ ವಿದೇಶಾಂಗ ಇಲಾಖೆಯದೇ?
ಇವರಿಗೆ ತಮ್ಮ ಭೇಟಿಯ ನಂತರ ಕೆಲವೇ ದಿನಗಳಲ್ಲಿ ಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿರಲಿಲ್ಲವೇ? ಅದರ ಮುನ್ಸೂಚನೆ ಇರಲಿಲ್ಲವೇ? ಹೌದಾದರೆ ಅಮೆರಿಕ -ಇಸ್ರೇಲ್ ದೇಶಗಳು ಭಾರತದ ಜಿಗ್ರಿ ದೋಸ್ತ್ ಎನ್ನುವ ಮಾತಿಗೆ ಬೆಲೆಯಿಲ್ಲದಂತಾಯಿತೇ?
ಟ್ರಂಪ್, ನೇತಾನ್ಯಾಹು ನನಗೆ ತೀರಾ ಹತ್ತಿರ ಎಂದು ಹೇಳಿಕೊಳ್ಳುವ ಮೋದಿಯವರ ವಿಶ್ವಾಸಾರ್ಹತೆ ಪ್ರಶ್ನಾರ್ಹವಲ್ಲವೇ?
ದೇಶದ ಹಿತಾಸಕ್ತಿಯನ್ನು ಈ ರೀತಿ ವೈಯಕ್ತಿಕ ವೈಭವೀಕರಣಕ್ಕೆ ಬಲಿ ಕೊಟ್ಟಂತಲ್ಲವೇ?
ಅಥವಾ ಗೊತ್ತಿದ್ದರೆ ಕೊಲ್ಲಿ ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಎಚ್ಚರಿಸುವ, ಅಲ್ಲಿಂದ ಕರೆತರುವ ಪ್ರಯತ್ನ ಯಾಕೆ ಮಾಡಲಿಲ್ಲ?

ಅಮೇರಿಕಾ-ಇಸ್ರೇಲ್ ದಾಳಿಯನ್ನು, ಖಮೇನಿ ಹತ್ಯೆಯನ್ನು ಇದುವರೆಗೂ ಖಂಡಿಸಿಲ್ಲ.. ಯುದ್ಧ ಪ್ರಾರಂಭವಾಗಿ ಒಂದು ವಾರದ ನಂತರ ವಿದೇಶಾಂಗ ಕಾರ್ಯದರ್ಶಿ ಇರಾನಿನಲ್ಲಿನ ಸಾವುಗಳಿಗೆ ಒಂದು ಸಾಲಿನಲ್ಲಿ ಖೇದ ವ್ಯಕ್ತಪಡಿಸುತ್ತಾರೆ.
ಆದರೆ ಈ ಸಾವಿರಾರು ಸಾವುಗಳಿಗೆ ಕಾರಣರಾದವರ ಕುರಿತು ಹೇಳಿಕೆ ನೀಡುವುದಿಲ್ಲ
ಆದರೆ ವಿಶ್ವಸಂಸ್ಥೆಯಲ್ಲಿ ಗಲ್ಫ್ ದೇಶಗಳ ಮೇಲಿನ ಇರಾನ್ ದಾಳಿಯನ್ನು ಖಂಡಿಸುವ ನಿರ್ಣಯಕ್ಕೆ ಬೆಂಬಲ ವ್ಯಕ್ತಪಡಿಸಿ ಸಹಿ ಹಾಕುತ್ತಾರೆ..
ಇದು ತಟಸ್ಥ ನೀತಿಯೇ?

ಭಾರತ ಬ್ರಿಕ್ಸ್ ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. ಆದರೆ ಈ ಒಕ್ಕೂಟದ ಸದಸ್ಯ ದೇಶವಾದ ಇರಾನ್ ಪರ ಮಾತನಾಡುತ್ತಿಲ್ಲ..
ಮುಂದಿನ ನವೆಂಬರ್ ತಿಂಗಳಲ್ಲಿ ಬ್ರಿಕ್ಸ್ ಶೃಂಗಸಭೆ ಇದೆ. ಆಗ ಯಾವ ಮುಖ ಹೊತ್ತು ಭಾಗವಹಿಸುತ್ತದೆ?
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಜೊತೆಗೆ ಮೋದಿಯವರು ಫೋನ್ ಮೂಲಕ ಮಾತನಾಡಿ ‘ಹೊರ್ಮೂಜ್ ಜಲಸಂಧಿ’ ಮೂಲಕ ತೈಲ ನೌಕೆಗಳು ಹಾದು ಹೋಗಲು ಕುರಿತು ಚರ್ಚೆ ನಡೆಸಿದರು ಎಂದು ವರದಿಯಾಗಿದೆ. ನಿಜ ಇದು ಅಗತ್ಯವಿದೆ.
ಆದರೆ ಇರಾನ್ ‘ಭಾರತದಿಂದ ರಾಜತಾಂತ್ರಿಕವಾಗಿ ಮರಳಿ ನಮಗೇನು ಸಿಗುತ್ತಿದೆ’ ಎಂದು ಕೇಳುತ್ತಿದೆ.. ಇದಕ್ಕೆ ಭಾರತದ ಬಳಿ ಉತ್ತರವಿಲ್ಲ..
ಹೊರ್ಮೂಜ್ ಜಲಸಂಧಿ ಮೂಲಕ ಭಾರತದ ಹತ್ತಾರು ತೈಲ ನೌಕೆಗಳು ಹಾದು ಬರಬೇಕು ಎಂದು ಗೊತ್ತಿದ್ದರೂ ಇರಾನ್ ಜೊತೆಗೆ ಮಾತುಕತೆ ನಡೆಸುವ ಗೋಜಿಗೆ ಹೋಗದೆ ಅದರ ವಿರೋಧಿ ಪಾಳ್ಯದಲ್ಲಿ ಗುರುತಿಸಿಕೊಂಡಿದ್ದು ಅನೈತಿಕತೆ ಮತ್ತು ರಾಜತಾಂತ್ರಿಕ ವೈಫಲ್ಯ.

ಜೂನ್ 2025ರಲ್ಲಿಯೇ ಅಮೇರಿಕಾ ಏಕಪಕ್ಷೀಯವಾಗಿ ಇರಾನ್ ಮೇಲೆ ದಾಳಿ ಮಾಡಿದಾಗ ಎಚ್ಚೆತ್ತುಕೊಂಡು ಸುರಕ್ಷಿತ ಪ್ರಮಾಣದ ತೈಲ ಸಂಗ್ರಹದ ಕಡೆ ಯಾಕೆ ಗಮನ ಹರಿಸದೆ ವ್ಯರ್ಥವಾಗಿ ಕಾಲ ಕಳೆದರು? ಇಂದಿನ ಗಂಭೀರ ಪರಿಸ್ಥಿತಿ ತಂದುಕೊಂಡಿದ್ಯಾಕೆ?
ಇದನ್ನು ‘ಉತ್ತಮ ಆಡಳಿತ ‘ ಎಂದು ಕರೆಯಲು ಸಾಧ್ಯವೇ?

ರಷ್ಯಾ ಜೊತೆಗೆ ತೈಲ ಖರೀದಿ ಸಂಬಂಧದ ವ್ಯವಹಾರ ಒಪ್ಪಂದ ಕುರಿತು ಸರ್ಕಾರದ ನಡೆ ಅವಮಾನಕರವಾಗಿದೆ. ಉತ್ತಮ ರಾಜತಾಂತ್ರಿಕತೆಯ ಕೊರತೆ ಮತ್ತು ಆ ಕುರಿತು ಅಜ್ಞಾನದ ಕಾರಣ ಇಡೀ ದೇಶವೇ ಸಂದಿಗ್ಧತೆಯಲ್ಲಿದೆ.
ರಷ್ಯಾ ಜೊತೆಗೆ ತೈಲ ಖರೀದಿ ವ್ಯವಹಾರವನ್ನು ಸಮರ್ಥವಾಗಿ ನಿರ್ವಹಿಸಿದ್ದರೆ ಇಂದಿನ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ…

ಇದಕ್ಕೆ ಮೋದಿ ನೇತೃತ್ವದ ಸರ್ಕಾರ ಜವಾಬ್ದಾರಿ ಹೊರಬೇಕು.. ಉತ್ತರ ಕೊಡಬೇಕು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳದ ಆಹಾರ ಸಂಸ್ಕೃತಿಯನ್ನು ಗೌರವಿಸುತ್ತೇವೆ ಎಂಬ ಬಿಜೆಪಿಯ ಚುನಾವಣಾ ಭರವಸೆಗೆ ಈಗ ‘ಮೊಟ್ಟೆ’ ಮೊದಲ ಬಲಿ

ಚುನಾವಣಾ ಸಮಯದಲ್ಲಿ, ಬಿಜೆಪಿ ಪರಿಸ್ಥಿತಿಯನ್ನು ಮತ್ತು ಮೀನಿನ ಮಾರುಕಟ್ಟೆಯ ನಾಡಿಮಿಡಿತವನ್ನು ಸರಿಯಾಗಿಯೇ ಅರ್ಥಮಾಡಿಕೊಂಡಿತ್ತು. ಅವರ ನಾಯಕರು ಟಿವಿ ಕ್ಯಾಮೆರಾಗಳ ಮುಂದೆ ಮೀನುಗಳನ್ನು ಪ್ರದರ್ಶಿಸಿದರು ಮತ್ತು ಕುರಿ ಮಾಂಸದೂಟವನ್ನು ಸವಿದಿದ್ದರು. ಬಂಗಾಳಿಗಳ ತಟ್ಟೆಗೆ (ಆಹಾರಕ್ಕೆ)...

24 ಗಂಟೆಗೂ ಮೊದಲೇ ಮಹಾರಾಷ್ಟ್ರದಲ್ಲಿ TET ಪ್ರಶ್ನೆ ಪತ್ರಿಕೆ ಸೋರಿಕೆ: ರದ್ದಾದ ಪರೀಕ್ಷೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಪರೀಕ್ಷಾ ಅಕ್ರಮದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜೂನ್ 28ರ ಭಾನುವಾರ ನಡೆಯಬೇಕಿದ್ದ ‘ಶಿಕ್ಷಕರ ಅರ್ಹತಾ ಪರೀಕ್ಷೆ’ (TET) ಆರಂಭಕ್ಕೆ ಕೇವಲ 24 ಗಂಟೆಗಳ ಮುನ್ನವೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ...

ಸೌತೆಕಾಯಿ ಕೃಷಿಗೆ ತನ್ನ ಸಚಿವಾಲಯದಿಂದಲೇ ₹99 ಲಕ್ಷ ಸಬ್ಸಿಡಿ ಪಡೆದ ಕೇಂದ್ರ BJP ಸಚಿವ ಭಾಗೀರಥ್ ಚೌಧರಿ

ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಭಾಗೀರಥ್ ಚೌಧರಿ ಅವರು ತಮ್ಮದೇ ಸಚಿವಾಲಯದ ವ್ಯಾಪ್ತಿಗೆ ಒರುವ ಯೋಜನೆಯಡಿ, ವಾಣಿಜ್ಯ ಸೌತೆಕಾಯಿ ಕೃಷಿ ಯೋಜನೆಗಾಗಿ 99.03 ಲಕ್ಷ ರೂ. ಸಬ್ಸಿಡಿ (ಸಹಾಯಧನ) ಪಡೆದಿರುವುದು ತನಿಖಾ...

‘ಆರ್‌ಎಸ್‌ಎಸ್‌ ನೋಂದಣಿಯಾದರೆ ಒಳ್ಳೆಯದು’: ರಾಮಮಂದಿರ ಹಗರಣ ವಿಚಾರದಲ್ಲಿ ‘ಸತ್ಯ ಹೊರಬರಬೇಕು’: ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

‘ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್‌) ನೋಂದಣಿ ಮಾಡಿಸಿದರೆ ಯಾರಿಗೂ ಆರೋಪ ಮಾಡಲು ಅವಕಾಶ ಇರುವುದಿಲ್ಲ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಶುಕ್ರವಾರ ಹೇಳಿದ್ದಾರೆ. ಆರ್‌ಎಸ್‌ಎಸ್ ನೋಂದಣಿ ಕುರಿತು ಕರ್ನಾಟಕದ ಗೃಹ ಸಚಿವ...

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...