ಸಿಂಧನೂರು: SIR ವಿರೋಧಿಸಿ ನಡೆಸಲಾಗುತ್ತಿರುವ ಜಾಗೃತಿ ಜಾಥ ರಾಯಚೂರು ಜಿಲ್ಲೆಯ ಸಿಂಧನೂರು ಪ್ರವೇಶಿಸಿತ್ತು. ನಗರದ ಜಮಾತ್ ಎ ಇಸ್ಲಾಂ ಹಿಂದ್ ಕಚೇರಿಯಲ್ಲಿ ಹಲವು ಸಮುದಾಯದ ಮುಖಂಡರು ಹಾಗೂ ಹೋರಾಟಗಾರರು ಹಾಜರಿದ್ದರು. ಜಾಥಾದ ಭಾಗವಾಗಿ ಪತ್ರಕರ್ತರಾದ ಚಂದ್ರು ತರಹುಣಿಸೆ ಮಾತನಾಡಿಸಿ SIR ಎಂಬುದು ಜನರ ಮೇಲೆ ತೂಗುಗತ್ತಿ ತರುತ್ತಿದೆ. ಇದು ಯಾವುದೂ ಒಂದು ಸಮುದಾಯಕ್ಕೆ ಆಗುವ ಸಮಸ್ಯೆಯಲ್ಲ, ಇದು ಎಲ್ಲಾ ಜನರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಇಂದು ದೊಡ್ಡ ಜನವಿರೋಧಿ ಕೃತ್ಯ ಎಂದು ವಿವರಿಸಿದರು.
ಮನುಜ ಮತ ಬಳಗದ ಅಧ್ಯಕ್ಷರಾದ ಡಿ.ಹೆಚ್. ಕಂಬಳಿ ಮಾತನಾಡುತ್ತಾ, ನಾವು ಸಂವಿಧಾನವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದೇವೆ ಇಡೀ ಸಮಯದಲ್ಲಿ SIR ಎಂದು ನಮ್ಮನ್ನು ನೀವು ಈ ದೇಶದ ಪ್ರಜೆಗಳೇ ಅಲ್ಲ ಹಾಗಾಗಿ ನೀವು ಸಂವಿಧಾನದ ಕುರಿತು ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ.



ಇದು ಬಿಜೆಪಿ ಹಾಗೂ ಆರೆಸ್ಸೆಸ್ ನ ದ್ವೇಷ ಸಿದ್ಧಾಂತದ ಭಾಗವೇ ಆಗಿದೆ. ಈ ಜನವಿರೋಧಿ ಸಿದ್ಧಾಂತವು ಮೇಲುಗೈ ಸಾಧಿಸಲು ನಾವು ಬಿಡಬಾರದು. ಈ ದೇಶವನ್ನು, ಸಂವಿಧಾನವನ್ನು ಹಾಗೂ ದೇಶದ ಜನರನ್ನೂ ಬಿಜೆಪಿಯ ಮುಷ್ಟಿಯಿಂದ ಬಿಡುಗಡೆಗೊಳಿಸಲು ಸ್ಮಾನಮಾನಕರೆಲ್ಲರೂ ಒಟ್ಟುಗೂಡಿ ಕೆಲಸ ಮಾಡಬೇಕಿದೆ.
ಈ ಜಾಗೃತಿ ಜಾಥಾ ಮುಂತಾದವುಗಳಿಂದ ನೀರ ನುಕೂಲ್ ಪಡೆದುಕೊಳ್ಳುವ ಕಾಂಗ್ರೆಸ್ ಪಕ್ಷವು ಬೀದಿಗಿಳಿದು SIR ದುಷ್ಕೃತ್ಯವನ್ನು ಎದುರಿಸಬೇಕಿದೆ. ಆದರೆ ಕಾಂಗ್ರೆಸ್ ಪಕ್ಷ ಇನ್ನೂ ನಿದ್ರಾವಸ್ತೆಯಲ್ಲಿದೆ. ಇದು ಈ ದೇಶದ ದುರಂತ.
ಈ ಜಾಥಾ ಕೇವಲ ಆರಂಭ ಮಾತ್ರವೇ. ಮುಂದಿನ ದಿನಗಳಲ್ಲಿ SIR ಕುರಿತು ಬಹಳ ದೊಡ್ಡ ಸಂಘರ್ಷಕ್ಕೆ ಕರುನಾಡು ಸಾಕ್ಷಿಯಾಗಲಿದೆ. ಎಂದು ವಿವರಿಸಿದರು.
ಜಮಾತ್ ಎ ಇಸ್ಲಾಂ ಹಿಂದ್ ನ ಟಿ ಹುಸೇನ್ ಸಾಬ್ ಮಾತನಾಡುತ್ತಾ, SIR ಪ್ರಕ್ರಿಯೆಯಿಂದ ಈ ದೇಶದಲ್ಲಿನ ಎಲ್ಲ ಜಾತಿಗಳ ಜನರಿಗೂ ಸಮಸ್ಯೆಯಾಗುತ್ತದೆ, ಈ ಹಿಂದೆ CAA- NRC ತಂದಿದ್ದರು. ಆಗ ಅದನ್ನು ಎಲ್ಲರೂ ಪ್ರತಿಭಟಿಸಿ ಹಿಮ್ಮೆಟ್ಟಿಸಿದೆವು. ಆದರೆ ಈಗ ಬೇರೊಂದು ರೂಪದಲ್ಲಿ ಮತ್ತೆ ತರುತ್ತಿದ್ದಾರೆ. ಇದನ್ನೂ ಪ್ರಬಲವಾಗಿ ಪ್ರತಿಭಟಿಸಿ ಹಿಮ್ಮೆಟ್ಟಿಸೋಣ ಎಂದರು.
ಸಭೆಯಲ್ಲಿ ಬಸವರಾಜ್ ಬಾದರ್ಲಿ, ಶರಣಪ್ಪ ಟೆಂಗಿನಕಾಯಿ, ಖಾಜಿ ಮಲ್ಲಿಖ್ ಅದ್ಯಕ್ಷರು ಬ್ಲಾಕ್ ಕಾಂಗ್ರೆಸ್, ಮಂಜುನಾಥ್ ಗಾಂಧಿನಗರ, ಬಿ.ಎನ್ ಯರದಿಹಾಳ, ಬೀಮಣ್ಣ ನಗನೂರು, ಡಾ.ವಸಿಂ ಅಹ್ಮದ್ ಅನೀಲ್ ಕುಮಾರ್ ಕಾಂಗ್ರೆಸ್ ಮುಖಂಡರು ಅಭಿಲೇಶ್ ನಾಯ್ಕ ಹಾಜರಿದ್ದರು.
ಕಾರ್ಯಕಾರಿ ಸಂಪಾದಕ, ನಾನುಗೌರಿ.ಕಾಮ್


