Homeಎಕಾನಮಿಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ....

ಡೇಟಾ ಖೋಲಿ: NDRF ಅಂದ್ರ ಏನಂತ ಗೊತ್ತೈತೇನ್ರಿ….

- Advertisement -
- Advertisement -

ಏನಿಲ್ಲಾ, ಈ ನಮ್ಮ ಕರುನಾಡಿನ ಸಚಿವ ಸಂಪುಷ್ಟದ ಸನ್ಮಾನ್ಯ ಸದಸ್ಯರೆಲ್ಲಾ ʻNDRF NDRF’ ಅನ್ನಾಕ ಹತ್ಯಾರೆಲ್ಲಾ, ಏನದು?

ಅಷ್ಟ ಅಲ್ಲಾ, ಇದು ಒಂದಲ್ಲ. ಎರಡು. ಬದಲಾದ ರಾಜಕೀಯ ಪರಿಸ್ಥಿತಿಯೊಳಗ ಎಲ್ಲದಕ್ಕೂ ಎರಡೆರಡು ರೂಪ ಇರತಾವಲ್ಲಾ, ನಾಯಕರದು ರಾಜ್ಯಮಟ್ಟದೊಳಗ ಒಂದು, ತಮ್ಮ ಕ್ಷೇತ್ರದೊಳಗ ಇನ್ನೊಂದು ರೂಪ ಇರ್ತದಲ್ಲಾ, ಹಂಗ, ಇದರದೂ ಎರಡು ರೂಪ ಅದಾವು.

ದೇಶದ ಯಾವುದೇ ಮೂಲಿಯೊಳಗ ನೆರೆ, ಬರ, ಭೂಕಂಪ, ಸುಂಟರಗಾಳಿ ಅಥವಾ ಇತರ ಪ್ರಕೃತಿ ವಿಕೋಪಗಳು ಆದರ ಅಲ್ಲಿಗೆ ಸಹಾಯ ಮಾಡಲಿಕ್ಕೆ ಅಂತ ಇರೋದು ಭಾರತೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ. ಇದು ಕೇಂದ್ರ ಗೃಹ ಇಲಾಖೆಯ ಪ್ರಕೃತಿ ವಿಕೋಪ ವಿಭಾಗದ ಒಂದು ಭಾಗ. ಈ ಸಂಸ್ಥೆಯ ಕೆಳಗಡೆ ಇರೋವು ವಿವಿಧ ರಾಜ್ಯಗಳ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆಗಳು. ಸನ್ 2005 ರಲ್ಲಿ ಜಾರಿಯಾದ ಪ್ರಕೃತಿ ವಿಕೋಪ ನಿರ್ವಹಣಾ ಕಾಯಿದೆಯ ಕೆಳಗ ಈ ಸಂಸ್ಥೆಗಳು ಆರಂಭವಾದವು.

ಇಂಥಾ ಎಜೆನ್ಸಿಗಳಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪ್ರಕೃತಿ ವಿಕೋಪಗಳು ಎಲ್ಲೆಲ್ಲಿ ಆಗತಾವೋ ಅಲ್ಲಲ್ಲಿ ತನು ಮನ ಧನ ಸಹಾಯ ಮಾಡಬೇಕು ಅಥವಾ ಹಾಗೇಂತ ನಮ್ಮ ಆಶಾ ಇರಬಹುದೇನೋ.

ಈಗ ನಮ್ಮಲ್ಲೆ ತನುವಿಗೊಂದು ಎನ್‍ಡಿಆರ್‌ಎಫ್ ಹಾಗೂ ಧನಕ್ಕೆ ಇನ್ನೊಂದು ಎನ್‍ಡಿಆರ್‌ಎಫ್ ಅವ. ಆದರ ಮನಕ್ಕ ಅಂತ ಮಾತ್ರ ಪ್ರತ್ಯೇಕ ಸಂಸ್ಥೆ ಇಲ್ಲ. ಅದು ಕೇಂದ್ರ ಸರಕಾರದ ಮನದಲ್ಲಿ ಇರಬಹುದೇನೋ, ಹೋಗಲಿ ಬಿಡರಿ.

ಒಂದನೇ ಎನ್‍ಡಿಆರ್‌ಎಫ್ ಅಂದರ ರಾಷ್ಟ್ರೀಯ ಪ್ರಕೃತಿ ವಿಕೋಪ ಪ್ರತಿಕ್ರಿಯೆ ದಳ. (NDRF national disaster response force) ದೆಹಲಿಯ ಮುಖ್ಯ ಕಚೇರಿ ಬಿಟ್ಟರ ಇದಕ್ಕ ಬ್ಯಾರೆ ಬ್ಯಾರೆ ರಾಜ್ಯದೊಳಗ 17 ಉಪವಿಭಾಗ ಅವ.

ಇದರಾಗ ಭಾರತೀಯ ಪೊಲೀಸ್ ಸೇವೆ ಹಾಗೂ ಭಾರತೀಯ ಅರೆಸೇನಾ ದಳದ ಅಧಿಕಾರಿಗಳು ಮತ್ತ ಬ್ಯಾರೆ ಬ್ಯಾರೆ ಸಿಬ್ಬಂದಿ ಇದ್ದಾರ. ಈ ಹಿಂದಿನ 15 ವರ್ಷದೊಳಗ ಇವರೆಲ್ಲಾ ಕೂಡಿ ಸುಮಾರು 17 ಲಕ್ಷ ಜನರ ಜೀವಾ ಉಳಿಸ್ಯಾರ. ಇಂಥವರ ಕೆಲಸದ ಬಗ್ಗೆ ಯಾರಿಗೂ ತಕರಾರು ಇಲ್ಲ. ಇರಲಿಕ್ಕೆ ಸಾಧ್ಯನೂ ಇಲ್ಲ. ಇದರಾಗೇನು ರಾಜಕೀಯ ಇದ್ದಂತಿಲ್ಲ. ಹೋದವರ್ಷ ಮಹಾರಾಷ್ಟ್ರದ ಕೊಲ್ಹಾಪುರದ ಪ್ರವಾಹದಾಗ ಉಳದ ಹೆಣಮಗಳೊಬ್ಬಳು ಆ ಸಿಬ್ಬಂದಿ ಕಾಲಿಗೆ ಬಿದ್ದು ‘ನೀನೇ ನಮ್ಮ ಪಾಂಡುರಂಗೋ ಯಪ್ಪಾ’ ಅಂತ ಹೇಳಿದ್ದ ವಿಡಿಯೋ ನಿಮ್ಮ ಫೋನಿನ ವಾಟ್ಸಪ್ಪಿಗೆ ಬಂದಿತ್ತಲ್ಲ, ಅಕೀ ಭಾವನೆಯೇ ಉಳಿದೆ ಎಲ್ಲಾರ ಭಾವನೆ.

ಆದರ ಎಲ್ಲಾರ ತಕರಾರು ಇರುವುದು ಆ ಇನ್ನೊಂದು ಎನ್‍ಡಿಆರ್‌ಎಫ್‍ನ ಬಗ್ಗೆ. ಇದು ರಾಷ್ಟ್ರೀಯ ಪ್ರಕೃತಿ ವಿಕೋಪ ಪರಿಹಾರ ನಿಧಿ (NDRF national disaster response force).

ಇವರು ರಾಜ್ಯಗಳೊಳಗ ವಿಕೋಪ ನಡೆದಾಗ ಅವರಿಗೆ ದುಡ್ಡು ಕೊಡುವವರು. (ಕೇಂದ್ರಕ್ಕಂತೂ ಪ್ರಕೃತಿ ವಿಕೋಪ ಬರಂಗಿಲ್ಲಲ್ಲಾ. ಅಲ್ಲಿ ಬರೋ ವಿಕೋಪ ಅಂದರ ಬರೇ ಎಲೆಕ್ಷನ್ ಒಂದ)

ಇವರು ಯಾವಾಗ ಯಾರಿಗೆ ಏನು ಕೊಡುತ್ತಾರೆ ಅನ್ನೋದು ಮಾತ್ರ ಭಾರತೀಯ ಮತದಾರನ ಮನಸ್ಸಿಗಿಂತಾ ನಿಗೂಢ. ಯಾವಾಗರ ಹಿಂದೀ ಝೀ ಟಿವಿಯೊಳಗ ನಿಗೂಢ ರಹಸ್ಯ ಅಂತ ಇದರದ್ದೂ ಒಂದು ಎಪಿಸೋಡು ಬರಬಹುದು.

ಉದಾಹರಣೆಗೆ, ಈ ಸತೆ, ಕರ್ನಾಟಕಕ್ಕ 1,872 ಕೋಟಿ ಕೊಟ್ಟಾರ (ಕೇಂದ್ರ ಹಾಗೂ ರಾಜ್ಯ ನಿಧಿಗಳ ಲೆಕ್ಕದಲ್ಲಿ) ಮಹಾರಾಷ್ಟ್ರಕ್ಕ 3,150 ಕೋಟಿ, ಓಡಿಶಾಗೆ 3,666 ಕೋಟಿ . ರಾಜಸ್ತಾನಕ್ಕೆ 1,666 ಕೋಟಿ, ಆಂಧ್ರ 770 ಕೋಟಿ, ಮತ್ತ ಉತ್ತರ ಪ್ರದೇಶಕ್ಕೆ 541 ಕೋಟಿ . ಹಿಮಾಚಲ ಪ್ರದೇಶಕ್ಕೆ 434 ಕೋಟಿ, ಗೋವಾ ಮಿಜೋರಾಮಿಗೆ ಏನಿಲ್ಲಾ. ನಾಗಾಲ್ಯಾಂಡಿಗೆ 5 ಕೋಟಿ ಹಾಗೂ ಮಣಿಪುರಕ್ಕೆ 9.9 ಕೋಟಿ ಬಿಡುಗಡೆ ಆಗೇದ.

ಇದಲ್ಲಾಗಿಂತ ಮಜಾ ಏನೆಂದರ ನಾವು ಆರಿಸಿ ಕಳಿಸಿದ ಘನ ಸರಕಾರದವರು ನಾವು ಕಟ್ಟಿದ ಸುಂಕದ ರೊಕ್ಕದಾಗ ಈ ಸಂಸ್ಥಾದ ತಿಜೋರಿಯೊಳಗ ಒಂದು ವರ್ಷಕ್ಕೆ ಇಟ್ಟಿರೋದು ಬರೇ 23,465 ಕೋಟಿ ರೂಪಾಯಿ.

ಕರ್ನಾಟಕದ ಜನಾ ಒಂದು ವರ್ಷಕ್ಕ ಸುಮಾರು 29,000 ಕೋಟಿ ರೂಪಾಯಿ ಬರೇ ಜಿಎಸ್‍ಟಿ ಅಂದರ ಗಬ್ಬರ ಸಿಂಗ್ ಟ್ಯಾಕ್ಸ ಕಟ್ಟತಾರ. ಬ್ಯಾರೆ ಟ್ಯಾಕ್ಸಿನ ಲೆಕ್ಕಾ ಬ್ಯಾರೆ ಮತ್ತ. ಇದರಿಂದ ಸೆಂಟರಿನವರ ಹಾರ್ಟು ಎಷ್ಟು ದೊಡ್ಡದು ಅಂತ ತಿಳಕೋಬಹುದು.

ಅದರಾಗೂನು, ಎಲ್ಲಾ ರಾಜ್ಯಗಳ ಎಲ್ಲಾ ಥರದ ವಿಕೋಪಗಳಿಗೆ ಅವರು ಬಿಡುಗಡೆ ಮಾಡಿರುವುದು ಬರೇ 6,614 ಕೋಟಿ. ಅವರ ತಿಜೋರಿಯೊಳಗ ಇನ್ನೂ 51 ಶೇಕಡಾ ಹಣದ ಶಿಲ್ಕು ಹಂಗ ಬಾಕಿ ಉಳಿದದ.

ನಮ್ ಸೀಎಮ್ ಬಿ.ಎಸ್ ಯಡಿಯೂರಪ್ಪನವರು ಮನ್ನೆ ನೆರೆ ಪರಿಹಾರಕ್ಕೆ 38,000 ಕೋಟಿ ರೂಪಾಯಿ ಕೇಳಿದಾಗ ಮ್ಯಾಲಿನವರು ನಿಮ್ಮ ನಷ್ಟದ ಅಂದಾಜೇ ಸರಿ ಇಲ್ಲ ಎಂದು ಬೈದು ಕಳಿಸಿದ್ದು ಯಾಕ ಅಂತ ಗೊತ್ತಾತಲ್ಲಾ ? ನೋಡ್ರಿ, ಹೆಂಗದ ಮಜಾ!

ಹೆಚ್ಚಿನ ವಿವರಗಳಿಗೆ –

www.ndrf.gov.in

https://www.ndmindia.nic.in/images/allocation.PDF

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...