ಮುಂಬೈನ ವರ್ಲಿಯಲ್ಲಿ ಭಾನುವಾರ ಮುಂಜಾನೆ ಕುಡಿದ ಮತ್ತಿನಲ್ಲಿ ತನ್ನ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸಿ, ದ್ವಿಚಕ್ರ ವಾಹನದ ಹಿಂಬದಿ ಸವಾರೆಯಾದ 45 ವರ್ಷದ ಮಹಿಳೆಗೆ ಸಾವಿಗೆ ಕಾರಣನಾದ ಮಿಹಿರ್ ಶಾ ಮೂರು ದಿನಗ ಕಳೆದರೂ ಪತ್ತೆಯಾಗಿಲ್ಲ.
ಪತ್ತೆಕಾರ್ಯ ತೀವ್ರಗೊಳಿಸಿರುವ ಪೊಲೀಸರು, ಆರೋಪಿಯ ಸ್ನೇಹಿತರು ಸೇರಿದಂತೆ ಇದುವರೆಗೆ ಡಜನ್ಗಿಂತಲೂ ಹೆಚ್ಚು ಜನರನ್ನು ವಿಚಾರಣೆಗೊಳಪಡಿಸಿದ್ದಾರೆ. ಆತನ ಪತ್ತೆಗೆ ಅನೇಕ ಕಾರ್ಯಪಡೆಗಳನ್ನು ರಚಿಸಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನಾ ಬಣದ ಸದಸ್ಯ ರಾಜಕಾರಣಿ ರಾಜೇಶ್ ಶಾ ಅವರ ಮಗ, ತನ್ನ ತಾಯಿ ಮತ್ತು ಸಹೋದರಿ ಸೇರಿದಂತೆ ಇತರ ಕುಟುಂಬ ಸದಸ್ಯರೊಂದಿಗೆ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ಕುಟುಂಬದ ಎಲ್ಲ ಸದಸ್ಯರು ಮತ್ತು ಹತ್ತಿರದ ಸಂಬಂಧಿಗಳ ತಿಳಿದಿರುವ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿವೆ.
ಭಾನುವಾರ ಬಂಧಿತರಾಗಿದ್ದ ಆರೋಪಿ ತಂದೆ, ಶಿವಸೇನಾ ನಾಯಕ ರಾಜೇಶ್ ಶಾ ಅವರು ₹15,000 ಹಣ ಪಾವತಿಸಿ 24 ಗಂಟೆಗಳಲ್ಲಿ ಜಾಮೀನು ಪಡೆದರು. ಇನ್ನೂ ಜೈಲಿನಲ್ಲಿರುವ ಏಕೈಕ ಆರೋಪಿ ರಾಜಋಷಿ ಬಿಡಾವತ್ ಎಂಬಾತ ಬಾರ್ನಲ್ಲಿ ಸುಮಾರು ₹20,000 ಖರ್ಚು ಮಾಡಿದ ಗಂಟೆಗಳ ನಂತರ, ಆರೋಪಿಗೆ ಕಾರು ಓಡಿಸುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದನು. ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ ಹೊಡೆದಾಗ, ತಾನೇ ಕಾರು ಚಲಾಯಿಸುತ್ತಿದ್ದಂತೆ ಸುಳ್ಳು ಹೇಳಿದ್ದ.
ಪೊಲೀಸರ ಪ್ರಕಾರ, ಭಾನುವಾರ ಮಿಹಿರ್ ಶಾ ಜುಹುದಲ್ಲಿರುವ ವೈಸ್ – ಗ್ಲೋಬಲ್ ತಪಸ್ ಬಾರ್ನಲ್ಲಿ ಪಾರ್ಟಿಗಾಗಿ ಮನೆಯಿಂದ ಹೊರಟರು. ಆ ಸಮಯದಲ್ಲಿ ಅವನು ತನ್ನ ತಂದೆ ಹೆಸರಿಗೆ ನೋಂದಾಯಿಸಿದ ಮರ್ಸಿಡಿಸ್ ಅನ್ನು ಓಡಿಸುತ್ತಿದ್ದು, ನಾಲ್ವರು ಗೆಳೆಯರು ಜೊತೆಗಿದ್ದರು ಎನ್ನಲಾಗಿದೆ.
ಐವರು ಬಾರ್ನಲ್ಲಿ ರಾತ್ರಿ 11 ಗಂಟೆಯವರೆಗೆ ಪಾರ್ಟಿ ಮಾಡಿದರು; 1.15 ಕ್ಕೆ (ಸೋಮವಾರ) ಮಿಹಿರ್ ಷಾ ತನ್ನ ಸ್ನೇಹಿತರನ್ನು ತನ್ನ ಮರ್ಸಿಡಿಸ್ನಲ್ಲಿ ಮನೆಗೆ ಹಿಂದಿರುಗಿಸಿದ್ದಾನೆ. ನಂತರ, ಮುಂಜಾನೆ 4 ಗಂಟೆಗೆ ಆತ ಬಿಡಾವತ್ನನ್ನು ತನ್ನ ಕಾರ್ನಲ್ಲಿ ಮರೈನ್ ಡ್ರೈವ್ನಲ್ಲಿ ‘ಜಾಲಿ ರೈಡ್’ಗೆ ಕರೆದೊಯ್ಯಲು ಹೇಳಿದ್ದಾನೆ. ಮುಂಜಾನೆ 5 ಗಂಟೆಗೆ, ಮರೀನ್ ಡ್ರೈವ್ ಮೇಲೆ ಮತ್ತು ಕೆಳಗೆ ಕಾರು ಓಡಿಸಿದ ನಂತರ, ಮನೆಗೆ ತಿರುಗಿಸಲಾಯಿತು. ಈ ಸಮಯದಲ್ಲಿ ಷಾ ಬಿಡಾವತ್ ಜೊತೆ ಸೀಟುಗಳನ್ನು ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಇದು ನಿಜವಾಗಿದ್ದರೆ, ಬೆಳಿಗ್ಗೆ 5.30 ಕ್ಕೆ ಬೈಕ್ಗೆ ಡಿಕ್ಕಿ ಹೊಡೆದಾಗ ಶಾ ಕಾರು ಚಲಾಯಿಸುತ್ತಿದ್ದ. ಸಾವನ್ನಪ್ಪಿರುವ ಮಹಿಳೆಯನ್ನು ಕಾವೇರಿ ನಖ್ವಾ (45) ಎಂದು ಗುರುತಿಸಲಾಗಿದೆ. ಆಕೆ ತನ್ನ ಪತಿ ಪ್ರದೀಪ್ನೊಂದಿಗೆ ಪ್ರಯಾಣಿಸುತ್ತಿದ್ದಳು ಮತ್ತು ಇಬ್ಬರು ಅಡುಗೆ ಮಾಡಲು ಮೀನುಗ ಕೊಳ್ಳಲು ಹೋಗಿದ್ದರು ಎಂದು ವರದಿಯಾಗಿದೆ.
1.5 ಕಿಲೋಮೀಟರ್ ಮಹಿಳೆಯನ್ನು ಎಳೆದೊಯ್ದ ಶಾ
ಬಿಎಂಡಬ್ಲ್ಯು ಬೈಕ್ಗೆ ಗುದ್ದಿಸಿದ ನಂಯರ ಮೃತ ಮಹಿಳೆ ನಖ್ವಾ ಅವರನ್ನು 1.5 ಕಿಮೀ ಎಳೆದೊಯ್ಯಲಾಗಿದೆ ಎಂದು ಸೂಚಿಸುವ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಅಪಘಾತದ ಭಯಾನಕ ವಿವರಗಳು ಹೊರಹೊಮ್ಮಿವೆ. ಶಾ ನಂತರ ಬಿಡಾವತ್ನೊಂದಿಗೆ ಸೀಟು ವಿನಿಮಯ ಮಾಡಿಕೊಂಡಿದ್ದು, ಮಹಿಳೆಯ ಶವವನ್ನು ಕಾರಿನಡಿಯಿಂದ ಹೊರತೆಗೆದು ರಸ್ತೆಯಲ್ಲಿ ಬಿಟ್ಟಿದ್ದನ್ನು ಕೂಡ ದೃಶ್ಯದಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಭೀಕರವೆಂದರೆ, ಚಾಲಕನು ಸಿಸಿಟಿವಿಯ ದೃಷ್ಟಿ ಕ್ಷೇತ್ರದಿಂದ ವೇಗವಾಗಿ ಚಲಿಸುವ ಮೊದಲು ಮತ್ತೊಂದು ಬಾರಿ ಆಕೆಯ ದೇಹದ ಮೇಲೆ ಕಾರನ್ನು ಹಿಮ್ಮುಖವಾಗಿ ಓಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದ್ದರಿಂದ ಬಿಡಾವತ್ ಅವರು “ತನ್ನ ಕೃತ್ಯಗಳ ಬಗ್ಗೆ ತಿಳಿದಿದ್ದರು ಮತ್ತು ಇತರ ಆರೋಪಿಗಳಿಗೆ ಸಹಾಯ ಮಾಡಿದರು” ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದು, ಚಾಲಕನ ವಿರುದ್ಧದ ತಪ್ಪಿತಸ್ಥ ನರಹತ್ಯೆಯ ಆರೋಪವನ್ನು ಪ್ರಶ್ನಿಸಿದ್ದಾರೆ.
ಅಪಘಾತದ ನಂತರ ಮಿಹಿರ್ ಶಾ ತಪ್ಪಿಸಿಕೊಳ್ಳುವ ಯೋಜನೆಯಲ್ಲಿ ತನ್ನ ತಂದೆಗೆ ಅನೇಕ ಫೋನ್ ಕರೆಗಳನ್ನು ಮಾಡಿದ್ದ. ಅವರು, ಕಾರನ್ನು ಬಿಟ್ಟು ಆಟೋ ರಿಕ್ಷಾದಲ್ಲಿ ಗೋರೆಗಾಂವ್ನಲ್ಲಿರುವ ತನ್ನ ಗೆಳತಿಯ ಮನೆಗೆ ಹೋಗುವಂತೆ ಆದೇಶ ನೀಡಿದ್ದಾರೆ. ಗಂಟೆಗಳ ನಂತರ ಆತನನ್ನು ಅಪರಿಚಿತ ವ್ಯಕ್ತಿಯೊಬ್ಬ ಗೆಳತಿ ಮನೆಯಿಂದ ಕರೆದೊಯ್ದಿದ್ದಾನೆ.
ಈ ಮಧ್ಯೆ, ರಾಜೇಶ್ ಶಾ ಮತ್ತು ಚಾಲಕ ಬಿಎಂಡಬ್ಲ್ಯು ಕಾರನ್ನು ಕಲಾನಗರಕ್ಕೆ ಓಡಿಸಿದರು, ಅಲ್ಲಿ ಅವರು ಶಿವಸೇನೆ ಸ್ಟಿಕ್ಕರ್ ಅನ್ನು ವಿಂಡ್ಶೀಲ್ಡ್ನಿಂದ ಕಿತ್ತು ಕಾರನ್ನು ಮರೆಮಾಡಲು ಪ್ರಯತ್ನಿಸಿದರು. ಆದರೆ, ವರ್ಲಿ ಠಾಣೆಯ ಪೊಲೀಸರು ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ; ‘ಒಬಿಸಿಗಳನ್ನು ಮರಾಠರ ವಿರುದ್ಧ ನಿಲ್ಲುವಂತೆ ಮಾಡುತ್ತಿದ್ದೀರಿ..’; ಫಡ್ನವಿಸ್ ವಿರುದ್ಧ ಗುಡುಗಿದ ಮನೋಜ್ ಜಾರಂಗೆ


