Homeಸಾಹಿತ್ಯ-ಸಂಸ್ಕೃತಿಕವನಕಳೆದುಹೋದನು ಹೇಗೆ ಪರಶುರಾಮ?

ಕಳೆದುಹೋದನು ಹೇಗೆ ಪರಶುರಾಮ?

- Advertisement -
- Advertisement -

ರಾಮ ರಾಮಾ ರಾಮ ಅಯ್ಯೋ ಶ್ರೀರಾಮಾ
ಎಲ್ಲಿರುವನೋ ನನ್ನ ಪರಶುರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮಾ
ಇಲ್ಲದಿರೆ ನನ್ನನ್ನೂ ಬಲಿ ತೆಗೆದುಕೋ ರಾಮ

ಕೈಯಲ್ಲಿ ಬಂದೂಕು ಹಿಡಿದನಂತೆ
ನನ್ನಂಥ ಹೆಣ್ಣನ್ನೇ ಹೊಡೆದನಂತೆ
‘ಅಮ್ಮ’ ಎನ್ನುತ್ತಲೇ ಎದೆ ಸೀಳುವಾಗ
ಹೆತ್ತಮ್ಮನನ್ನೇ ಮರೆತಿದ್ದನಂತೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಏಳುಕೊಳ್ಳದೆಲ್ಲವಗ ಹರಕೆ ಹೊತ್ತಿದ್ದೆ
ಒಂಬತ್ತು ತಿಂಗಳು ಹೊಟ್ಟೆ ಹೊತ್ತಿದ್ದೆ
ರಕ್ತ ಮಾಂಸ ಬಸಿದು ಕೂಸ ಮಾಡಿದ್ದೆ
ನೋವು ಬ್ಯಾನಿ ತಿಂದು ಸತ್ತು ಹಡೆದಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ವರ್ಷಗಟ್ಟಲೆ ಎದೆಯ ಹಾಲು ಉಣಿಸಿದ್ದೆ
ತೋಳ ತೊಟ್ಟಿಲು ತೂಗಿ ಲಾಲಿ ಹಾಡಿದ್ದೆ
ತೆಪ್ಪೆಜ್ಜಿ ಕಿತ್ತಾಗ ಹಾಡಿ ಕುಣಿದಿದ್ದೆ
ತೊದಲನುಡಿಯೊಳಗ ಕೈಲಾಸ ಕಂಡಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಸಾಲಿಗಿ ಕಳಿಸಿದ ಸಡಗರ ಸಡಗರ
ಸಾಹೇಬನಾಗುವ ಕನಸಿನ ಸಡಗರ
ಕೂಲಿನಾಲಿ ಮಾಡಿ ಬೆಳೆಸಿದ ಸಡಗರ
ಬಡತನವ ಮರೆಸಿದ್ದ ಮುದ್ದು ಸುಕುಮಾರ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಹರೆಯವು ಮೈತುಂಬಿ ಹೋರಿಯಾಗಿದ್ದ
ಚೆಲುವೆಯರ ಕಣ್ಣಾಗ ಬುಗುರಿಯಾಗಿದ್ದ
ಅಪ್ಪನ ಹೆಗಲ ಭಾರ ಹೊರುತ್ತಿದ್ದ
ಅವ್ವನಲಿ ಸೊಸೆ ತರುವ ಕನಸ ಬೆಳೆಸಿದ್ದ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ನಿಂತಲ್ಲೇ ಕತ್ತರಿಸಿ ನೆಲಕ ಬಿದ್ದೇನಿ
ಎದೆಯಿಂದ ನೆಲವ ಬಗೆಯುತ್ತಿದ್ದೀನಿ
ಕಣ್ಣು ಕತ್ತಲಗೂಡಿ ಹೊರಳುತಿದ್ದೀನಿ
ಮಗನ ಹೆಸರಿಡಿದು ಚೀರುತಿದ್ದೀನಿ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಹರೆಯದ ಕೈಗೆ ಬಂದೂಕು ಕೊಟ್ಟವರಾರು ?
ಹರೆಯದ ಮೈ ಹೊಕ್ಕ ಕೊಲೆಗಡುಕರಾರು ?
ಯಾರು ಉಣಿಸಿದರವನ ಎದೆಗೆ ವಿಷವ ?
ಯಾರು ಕಕ್ಕಿಸಿದರು ನನ್ನೆದೆಯ ಹಾಲು ?
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಕರುಣೆ ಬಾರದೇನೋ ರಾಮ ಶ್ರೀರಾಮಾ
ಮರಣವಾದರೂ ನೀಡೋ ರಾಮ ಶ್ರೀರಾಮಾ
ಯಾರ ಸೇನೆಯಲ್ಲಿ ಕಳೆದುಹೋದೆಯೋ ರಾಮ
ಕಾಯುತಿರುವೆನು ತಾಯಿ ರಾಮಶ್ರೀರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮ
ಇಲ್ಲದಿರೆ ನನ್ನೊಡಲ ಬೆಂಕಿಯಲಿ ಬೂದಿಯಾಗೋ

-ಎಂ. ಡಿ. ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...