Homeಸಾಮಾಜಿಕವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

ವಿಜ್ಞಾನ ನಾಚುವಂತಹ ಪೂಜಾ, ಜ್ಯೋತಿಷ್ಯ ಆವಿಷ್ಕಾರಗಳು!

- Advertisement -
- Advertisement -

ಪ್ಪತ್ತನೆಯ ಶತಮಾನದ ಅದಿಭಾಗದಿಂದ ಹಿಡಿದು ಇತ್ತೀಚಿನವರೆಗೆ ವಿಶ್ವದಲ್ಲಿ ಸಾವಿರಾರು ಆವಿಷ್ಕಾರಗಳಾಗಿವೆ. ಇಂದು ಮಧ್ಯವಯಸ್ಸಿನಲ್ಲಿರುವವರು ಅದೃಷ್ಟಶಾಲಿಗಳೆಂದು ಹೇಳಬಹುದು!
ಚಿಮಣಿ ದೀಪಗಳಿದ್ದ ಮನೆಗಳಿಗೆ ವಿದ್ಯುತ್ ದೀಪಗಳು ಬಂದಿವೆ. ಟೆಂಟು ಬಂದರೆ ಮಾತ್ರ ನೋಡಲು ಸಾಧ್ಯವಾಗುತ್ತಿದ್ಧ ಸಿನಿಮಾ ಮನೆಯಲ್ಲೇ ಕುಳಿತು ನೋಡಬಹುದು. ಸಿನಿಮಾ, ಧಾರಾವಾಹಿಗಳೇ ಜೀವನ ಎಂದು ತಿಳಿದುಕೊಂಡವರೂ ನಮ್ಮ ನಡುವೆ ಇದ್ದಾರೆ.
ಸಂಪರ್ಕದ ಕೊಂಡಿಯಾಗಿದ್ದ ಅಂಚೆ ಇಂದು ಇತಿಹಾಸವಾಗುತ್ತಿದೆ. ಯಾರಾದರೂ ಸತ್ತರೆ ದೂರದ ಊರುಗಳಲ್ಲಿ ಇರುವ ಬಂಧುಗಳಿಗೆ “ಮದರ್ ಸೀರಿಯಸ್. ಸ್ಟಾರ್ಟ್ ಇಮ್ಮಿಡಿಯೆಟ್ಲಿ” ಎಂದು ‘ವಯರ್’ ಕಳಿಸುತ್ತಿದ್ದ- ಅಂದರೆ ಟೆಲಿಗ್ರಾಂ ಕಳಿಸುತ್ತಿದ್ದ ಕಾಲದಿಂದ ವಯರ್ ಇಲ್ಲದೇ ಹೆಣದ ಫೋಟೊ ತೆಗೆದು ಲೈವಾಗಿ ಸಂಬಂಧಿಕರಿಗೆ ತಿಳಿಸುವ ಯುಗವನ್ನು ಮುಟ್ಟಿದ್ದೇವೆ! ಕಂಪ್ಯೂಟರ್ ಬಂದಿದೆ! ಕ್ಯಾಷ್‍ಲೆಸ್ ಆಗಿದ್ದೇವೆ! ವಿಜ್ಞಾನದ ಆವಿಷ್ಕಾರಗಳ ಫಲವನ್ನು ಉಣ್ಣುತ್ತಾ ಬಂದಿದ್ದೇವೆ. ಮೂಷಿಕ, ಗರುಡ, ಸಿಂಹ, ನಂದಿ ವಾಹನರಾಗಿದ್ದ ನಾವು- ಬೈಕ್, ಸ್ಕೂಟರ್, ಕಾರು, ಬಸ್ಸು, ರೈಲು ವಿಮಾನ ವಾಹನರಾಗಿದ್ದೇವೆ! ಚಪ್ಪಡೆ ಭೂಮಿಯನ್ನು ದುಂಡಗೆ ಮಾಡಿದ್ದೇವೆ! ಸಾಮೂಹಿಕ ವಿನಾಶದ ಅಸ್ತ್ರಗಳನ್ನು ದಾಸ್ತಾನು ಇಟ್ಟಿದ್ದೇವೆ! … ವಿಷಗಳನ್ನು, ವಿಷಯಗಳನ್ನು ಉತ್ಪಾದಿಸುತ್ತಿದ್ದೇವೆ!
ಬರೆಯುತ್ತಾ ಹೋದರೆ ಸಾವಿರಾರಿವೆ! ನಮ್ಮ ಸುತ್ತಲೂ ಬೇಕೆಂದೋ ಬೇಡವೆಂದೋ ರಾಶಿಬಿದ್ದಿರುವ ಸಲಕರಣೆಗಳು ತಂತ್ರಜ್ಞಾನಗಳನ್ನು ಒಮ್ಮೆ ನೋಡಿದರೆ, ಇದನ್ನು ಕಂಡುಹಿಡಿದವರ ನೆನಪಾದರೂ ನಮಗಿದೆಯೆ?
ಅದರೆ, ನಮಗೆ ಕೋಟ್ಯಾಂತರ ದೇವರು, ದೈವಗಳ, ಅಂತರ, ಬೆಂತರ, ಕುಲೆ, ಪಿಶಾಚಿಗಳ ನೆನಪಿದೆ! ಯಾಕೆಂದರೆ ನಮಗೆ ಭಯವಿದೆ! ಅದನ್ನೇ ನಾವು ನಂಬಿಕೆ ಎಂದು ಕರೆಯುತ್ತೇವೆ!
ಇದೇ ಭಯವನ್ನು ಬಂಡವಾಳ ಮಾಡಿಕೊಂಡು ಸಾವಿರದ ಒಂದು, ಹನ್ನೊಂದು ಸಾವಿರದ ಒಂದು… ಹೀಗೆ ಜ್ಯೋತಿಷ್ಯ ಮತ್ತು ಪೂಜಾ ಕ್ಷೇತ್ರಗಳಲ್ಲಿ ಅವಿಷ್ಕಾರಗಳಾಗಿವೆ! ಹಿಂದೆ ಮನೆಯ ಒಂದು ಕೋಣೆಯೊಳಗಿನ ಅಥವಾ ಗೋಡೆಗಂಟಿದ ಹಲವಾರು ದೇವರುಗಳಿಗೆ ಊದುಬತ್ತಿ ಹಚ್ಚಿ, ಕೈಮುಗಿದು ಬೇಡಿಕೊಂಡರೆ ಸಾಕಿತ್ತು. ಹೆಚ್ಚು ಭಯವಾದರೆ ಮುಡಿಪು ಇಟ್ಟರೆ ಸಾಕಿತ್ತು! ಅದರೆ, ಈ ಕೋಮುವಾದಿ ವಿಷ ಧರ್ಮದಲ್ಲಿ ಇರಲಿಲ್ಲ! ಈಗ ಹೇಗೆ ಧರ್ಮವನ್ನು ಕೋಮುವಾದಿ ಬಿಸಿನೆಸ್ ಮಾಡುವಲ್ಲಿ ಎಷ್ಟೆಲ್ಲಾ ಅವಿಷ್ಕಾರಗಳನ್ನು ಮಾಡಲಾಗಿದೆ ಎಂಬುದನ್ನು ನೀವೇ ನೋಡಬಹುದು.
ಮಗುವಿಗೆ ಹೆಸರು ಇಡುವುದರಿಂದ ಹಿಡಿದು, ಹುಟ್ಟಿದ ಜಾತಕ, ತಗಲಿಕೊಂಡಿರುವ ರೋಗಗಳು, ಪೂರ್ವಜಾತ ದೋಷಗಳು, ನಕ್ಷತ್ರಗಳು, ಅವುಗಳ ಫಲಗಳು, ಯಮಗಂಡ, ರಾಹುಗಂಡ, ಕೇತುಗಂಡ, ನಾಗದೋಷ, ಶನಿಪ್ರಭಾವ ಮತ್ತು ಶಾಪ, ಹಿರಿಯರ ಶಾಪ, ಅಶಾಂತಿ… ಮತ್ತದಕ್ಕೆ ಪರಿಹಾರಗಳು! ಎಲ್ಲವಕ್ಕೂ ಮಹಾ ಸಂಶೋಧನೆಗಳು ಅಗಿವೆ- ವಿಜ್ಞಾನವನ್ನು ನಾಚಿಸುವಷ್ಟು! ನೀವೇ ಯೋಚಿಸಿದರೆ ಲೆಕ್ಕ ಹಾಕಬಹುದು! ಆದರೂ ಮುಂದಕ್ಕೆ ಎಲ್ಲಾ ಸಂಶೋಧನೆಗಳನ್ನೂ ಸಂಶೋಧಕರನ್ನು ವಿವರವಾಗಿ ನೋಡಿ! ಸಂಶೋಧನೆಯ ವಿವರಗಳು ಅನಂತವಾಗಿವೆ!
ಇಂದು ಬೆಳಗಾಗುತ್ತ ಎದ್ದಾಗ ನಾವು ನೋಡುವುದೇನು?! ಟಿವಿ, ಇಂಟರ್ನೆಟ್! ವಿಜ್ಞಾನದ ಉತ್ಪತ್ತಿಗಳಲ್ಲಿ ರಾರಾಜಿಸುವುದೇನು ಬ್ರಹ್ಮಾಂಡ ಜ್ಯೋತಿಷ್ಯದ ಮಹಾನ್ ಆವಿಷ್ಕಾರಗಳು! ಆ ಮಹಾನ್ ಸಂಶೋಧನೆಗಳು!
ಮಗು ಹುಟ್ಟಿದಾಗ ಏನು ಮಾಡಬೇಕು? ಬಾಲ ಕರ್ಮಗಳೇನು? ಜಾತದೋಷಗಳೇನು? ಭವಿಷ್ಯ ಏನು? ಗಂಡಗಳೇನು? ದೋಷಗಳೇನು? ಪರಿಹಾರಗಳೇನು?
ಹಾವು ಸತ್ತರೆ ಏನು ಮಾಡಬೇಕು? ಎಷ್ಟು ಜನ ಬ್ರಾಹ್ಮಣರಿಗೆ ಊಟ ಹಾಕಬೇಕು? ಗೋದಾನ, ಭೂದಾನ, ಸುವರ್ಣ ದಾನ ಇತ್ಯಾದಿಗಳ ಪುಣ್ಯ ಫಲವೇನು? ಗೋವು, ಸುವರ್ಣ ಇಲ್ಲದಿದ್ದಲ್ಲಿ ಪರಿಹಾರವೇನು? ಇಂಟರ್‍ನೆಟ್‍ನಿಂದ ಹೇಗೆ ಪೂಜೆ ಮಾಡಿಸಬಹುದು? ಪ್ರಸಾದ ಪಡೆಯಬಹುದು? ಇವೆಲ್ಲವುಗಳ ಬಗ್ಗೆ ಸಾವಿರಾರು ಸಂಶೋಧನೆಗಳು ಲಭ್ಯವಿವೆ! ಪೇಟೆಂಟ್ ಮಾಡಿಕೊಂಡಿರುವ ವಿಜ್ಞಾನಿಗಳೂ ಲಭ್ಯವಿದ್ದಾರೆ! ಅವರನ್ನೆಲ್ಲಾ ಮುಂದಿನ ವಾರ ಭೇಟಿಯಾಗೋಣ!

– ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...

‘ರಾಮನಿಗೆ ಅವಮಾನಿಸಿದ್ದಕ್ಕೆ ಶಾಯಿ ಎರಚಿದೆ’: ಜಂತರ್ ಮಂತರ್‌ನಲ್ಲಿ ಅಭಿಜೀತ್ ದೀಪ್ಕೆ ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬರ್ಖಾ ಟ್ರೆಹಾನ್

ನವದೆಹಲಿ: ದೇಶದ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಜುಲೈ 18 ರ ಶನಿವಾರದಂದು ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ‘ಜಿರಳೆ ಜನತಾ ಪಕ್ಷ’ದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ಮೇಲೆ ಶಾಯಿ ಎರಚಿದ...

ಸರ್ವಪಕ್ಷ ಸಭೆ: TMC ಬಂಡಾಯ ಸಂಸದರಿಗೆ ಸ್ಪೆಷಲ್ ಸೀಟು, INDIA ಮೈತ್ರಿಕೂಟದ ಸಂಸದರು ವಾಕೌಟ್

ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ರವಿವಾರ ನಡೆದ ಸರ್ವಪಕ್ಷಗಳ ಸಭೆಯು ತೀವ್ರ ರಾಜಕೀಯ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ತೃಣಮೂಲ ಕಾಂಗ್ರೆಸ್ (TMC) ಪಕ್ಷದಿಂದ ಬಂಡಾಯವೆದ್ದ ಸಂಸದರಿಗೆ ಕೇಂದ್ರ ಸರ್ಕಾರವು...

ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಹಾದಿ ತಪ್ಪಿಸಲು BJP ಪಿತೂರಿ: ಸಿಜೆಪಿ ಗಂಭೀರ ಆರೋಪ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್‌ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು...

‘ನಿಮ್ಮ ಮೌನ ಸ್ವೀಕಾರಾರ್ಹವಲ್ಲ’: ರಾಮ ಮಂದಿರ ದೇಣಿಗೆ ‘ಕಳ್ಳತನ’ದ ತನಿಖೆಗೆ ಮೋದಿಗೆ ಖರ್ಗೆ-ರಾಹುಲ್ ಗಾಂಧಿ ಪತ್ರ

ನವದೆಹಲಿ: ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ, ಅಯೋಧ್ಯೆ ರಾಮ ಮಂದಿರ ನಿರ್ಮಾಣದ ದೇಣಿಗೆಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಆರ್ಥಿಕ ಅಕ್ರಮ ಹಾಗೂ ‘ಕಳ್ಳತನ’ದ ವಿಷಯ ರಾಷ್ಟ್ರ ರಾಜಕಾರಣದಲ್ಲಿ...

ಶಾಂತಿಯುತ ಪ್ರತಿಭಟನೆಗಳನ್ನು ಮೋದಿ ಸರ್ಕಾರ ಹತ್ತಿಕ್ಕುತ್ತಿದೆ: ರಾಹುಲ್ ಗಾಂಧಿ

ದೆಹಲಿಯ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಸಾಗಿಸಿದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮೌನ ಮುರಿದಿದ್ದಾರೆ. "ಶಾಂತಿಯುತ ಪ್ರತಿಭಟನೆಗಳನ್ನು...

ಸೋನಮ್ ವಾಂಗ್‌ಚುಕ್ ಬಲವಂತದ ಬಂಧನ; ಕಣ್ಣೀರಿಟ್ಟು ಉಪವಾಸ ಸತ್ಯಾಗ್ರಹ ಆರಂಭಿಸಿದ ಅಭಿಜೀತ್ ದಿಪ್ಕೆ

ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಮ್ ವಾಂಗ್‌ಚುಕ್ ಅವರನ್ನು ದೆಹಲಿ ಪೊಲೀಸ್ ಸಿಬ್ಬಂದಿ ಬಲವಂತವಾಗಿ, ಬಲಪ್ರಯೋಗದ ಮೂಲಕ ಆಸ್ಪತ್ರೆಗೆ ಕರೆದೊಯ್ಯುವಾಗ ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಲ್ಲಿ ಗದ್ದಲ ಉಂಟಾಯಿತು....

ಜಮ್ಮು-ಕಾಶ್ಮೀರ| ಭದ್ರತಾ ಸಿಬ್ಬಂದಿ ಗುಂಡಿಗೆ ವ್ಯಕ್ತಿ ಸಾವು; ಭುಗಿಲೆದ್ದ ಪ್ರತಿಭಟನೆ

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾದ ಜೈ ಕಣಿವೆ ಪ್ರದೇಶದಲ್ಲಿ ಗುರುವಾರ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ 30 ವರ್ಷದ ನಾಗರಿಕನೊಬ್ಬ ಸಾವನ್ನಪ್ಪಿ ಇಬ್ಬರು ಗಾಯಗೊಂಡಿದ್ದು ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ಮೃತರನ್ನು...

ಸಿಜೆಪಿ ಪ್ರತಿಭಟನೆ ಮೇಲೆ ಕೇಂದ್ರದ ಬಲಪ್ರಯೋಗ: ಸೋನಮ್ ವಾಂಗ್‌ಚುಕ್ ಅವರನ್ನು ಬಂಧಿಸಿ ಆಸ್ಪತ್ರೆಗೆ ಕರೆದೊಯ್ದ ಪೊಲೀಸರು

ದೆಹಲಿಯ ಜಂತರ್ ಮಂತರ್‌ನಲ್ಲಿ 21 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಪರಿಸರ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರನ್ನು ಪ್ರತಿಭಟನಾ ಸ್ಥಳದಿಂದ ಪೊಲೀಸರು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶನಿವಾರ ಬೆಳಿಗ್ಗೆ ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ...

ಪ್ರಶ್ನೆಪತ್ರಿಕೆ ಸೋರಿಕೆಗೆ ಇಡೀ ವ್ಯವಸ್ಥೆಯನ್ನೇ ದೂಷಿಸಿದ ವಿಪಕ್ಷ ನಾಯಕ ರಾಹುಲ್ ಗಾಂಧಿ

ರಾಜಕೀಯ ಪಕ್ಷ ಅಥವಾ ಸಂಘಟನೆಯು ಯಾವುದೇ ಶಿಕ್ಷಣ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಬಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (ಜು.17) ರಂದು ಹೇಳಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯ ವಿಷಯದ ಬಗ್ಗೆ ರಾಜಕೀಯ ಒಮ್ಮತಕ್ಕೆ ಕರೆ...