Homeಅಂಕಣಗಳುಹನಿಮೂನ್ ಸಾಕು ತಗೋ ತಲಾಕು

ಹನಿಮೂನ್ ಸಾಕು ತಗೋ ತಲಾಕು

- Advertisement -
- Advertisement -

ಆಘಾತವಾಣಿ ವಾರ್ತೆಗಳು, ಕೇಳುಗರಿಗೆಲ್ಲ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಆಗಿದ್ದಾಗ್ಲಿ ಹೋಗಿದ್ದೋಗ್ಲಿ, ಆರು ಮೂರಾಗ್ಲಿ, ಮೂರು ಮುವ್ವತ್ತಾಗ್ಲಿ, ನಾನೂ ಕೆಲ್ಸ ಮಾಡಲ್ಲ, ಬೇರೇಯವ್ರಿಗೂ ಕೆಲ್ಸ ಮಾಡೋಕೆ ಬಿಡಲ್ಲ ಅಂತ ವೀರಪ್ರತಿಜ್ಞೆ ಮಾಡಿರೋ ಪಕೋಡೇಂದ್ರ ಕುಂಡಾಲಯ್ಯನ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ. ವರ್ಷಗಳ ಹಿಂದೆ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷದಿಂದ ಮಕಮೂತಿಗೆ ಇಕ್ಕಿಸಿಕೊಂಡು ಮಣ್ಣುಮುಕ್ಕಿದ್ದ ಪಕೋಡೇಂದ್ರರವರು ಕೇಜ್ರಿವಾಲ್ ತಲೆ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಶೋಕೇಸ್ ಪೀಸೊಂದನ್ನು ಕುಕ್ಕಿದ್ದನು. ಈ ಲಡಾಸಿ ಗೌರ್ನರ್ ದೆಹಲಿಯ ಐಎಎಸ್ ಅಧಿಕಾರಿಗಳ ತಲೆಸವರಿ ಒಳಕ್ಕೆಳೆದುಕೊಂಡು ತಾನಿರುವ ಸರ್ಕಾರದ ವಿರುದ್ಧವೇ ಸ್ಟ್ರೈಕು ಮಾಡಿಸಲು ಹಚ್ಚಿದ್ದಾರೆಂದು ಸುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ತಮ್ಮ ತಂಡದೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಕಚೇರಿಯೊಳಗೇ ಮೊಕ್ಕಾಂ ಹೂಡಿ ಧರಣಿ ಕೂತು ವಾರ ಕಳೆದರೂ ಚೇಂಬರಿನಿಂದ ಹೊರಬರದೆ ಟೇಬಲ್ ಕೆಳಗೆ ಅವಿತು ಕುಳಿತಿದ್ದ ಆತನು ದೆಹಲಿಯ ಜನರು ಕೈಗೆ ಪ್ಯಾರಗಾನ್ ಚಡಾವು ಕಳಚಿಕೊಳ್ಳುತ್ತಿದ್ದಂತೆ ಆಫೀಸಿಂದ ಈಚೆ ಬಂದು ಕೇಜ್ರಿವಾಲ್ ಬೇಡಿಕೆಗಳಿಗೆ ಸೈನ್ ಹಾಕಿ ಮತ್ತೆ ಹೋಗಿ ಟೇಬಲ್ ಕೆಳಗೆ ಅವಿತುಕೊಂಡಿದ್ದಾನೆಂದು ವರದಿಯಾಗಿದೆ.
****
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಮೂರು ಮುಕ್ಕಾಲು ಸೀಟು ಪಡೆದು ಕಾಶ್ಮೀರ ಪ್ರತ್ಯೇಕತಾವಾದಿ ಪಿಡಿಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸಿದ್ದ ಬ್ಲೂಜೆಪಿ ಪಕ್ಷದ ವತಿಯಿಂದ ಹೊಸ ನ್ಯೂಸೊಂದು ಎಗರಿ ಬಂದಿದೆ. ಪುಡಿಪುಕ್ಕ ಸೀಟುಗಳನ್ನು ಕಂಕುಳಿಗಿಟ್ಟುಕೊಂಡು “ ಪ್ರೀತ್ಸೇ ಪ್ರೀತ್ಸೇ, ಮೂರೂ ಬಿಟ್ಟು ನನ್ನೇ ಪ್ರೀತ್ಸೇ” ಅಂತ ಈ ಕಡೆಯಿಂದ ಪಿಡಿಪಿ ಪಕ್ಷದ ಸೊಂಟ ಗಿಲ್ಲಿದಾಗ, ಆ ಕಡೆಯಿಂದ “ ಆಜಾ ಮೆರಿ ಗಾಡಿ ಮೇ ಬೈಟ್ ಜಾ, ಆಜಾ ಮೆರಿ ಗಾಡಿ ಮೇ ಬೈಟ್ ಜಾ” ಅನ್ನೋ ರೆಸ್ಪಾನ್ಸ್ ಬಂದಿತ್ತು. ನಂತ್ರ ಇಬ್ಬರೂ ಸೇರಿ ಕಾಶ್ಮೀರದಲ್ಲಿ ಕಲಬೆರಕೆ ಸರ್ಕಾರ ರಚಿಸಿ ಒಬ್ಬರ ಸೊಂಟ ಒಬ್ಬರು ಹಿಡಿದು “ ಬೆರಕೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹೂ ಅಂತೀಯ, ಉಹೂ ಅಂತೀಯ” ಅಂತ ಡ್ಯಾನ್ಸ್ ಮಾಡ್ತಿದ್ದ ಎರಡೂ ಪಕ್ಷಗಳು ಈಗ ಮಕಮಕ ಪರಚಾಡಿಕೊಂಡು ದಿಢೀರ್ ಡೈವೋರ್ಸ್ ತಗೊಂಡಿವೆ.
****
ಈ ಢಮಾರ್ ಡೈವೋರ್ಸಿಗೆ ಕಾರಣಗಳೇನೆಂದು ಕೆದಕಿದಾಗ ಕುತೂಹಲಕಾರಿ ಕಿತಾಪತಿ ಮಾಹಿತಿಗಳು ನಮಗೆ ಲಭ್ಯವಾಗಿವೆ. ದೇಶದ ತುಂಬ ಕಾಶ್ಮೀರಿ ಟೆರರಿಸ್ಟ್‍ಗಳ ಬಗ್ಗೆ ಪುಯ್ಯೋ ಪುಯ್ಯೋ ಎಂದು ಪುಂಗಿ ಊದುವ ಬ್ಲೂಜೆಪಿ ಪಕ್ಷವು, ಈ ಪ್ರತ್ಯೇಕತಾವಾದಿಗಳ ಜೊತೆಗೆ ಕಾಶ್ಮೀರದಲ್ಲಿ ತಮ್ಮದೇ ಸರ್ಕಾರದಲ್ಲಿ ಕುಸುಕು ಮುಸುಕು ನಡೆಸುತ್ತಿದ್ದುದು ಎಲ್ಲರಿಗು ತಿಳಿದ ಸತ್ಯ. ಪೊಲೀಸರು-ಮಿಲಿಟರಿಯವರು ಅರೆಸ್ಟ್ ಮಾಡಿದ ಟೆರರಿಸ್ಟುಗಳ ಕೈಗೆ ಹೂಗುಚ್ಛ ಕೊಟ್ಟು ಜೈಲಿಂದ ಬಿಡಿಸಿ ಕಳಿಸುತ್ತಿದ್ದ ಇದೇ ಬೆರಕೆ ಪಕ್ಷದವರು ಬೇರೆ ರಾಜ್ಯಗಳಲ್ಲಿ ಇದಕ್ಕೆ ಉಲ್ಟಾ ಭಾಷಣಗಳನ್ನು ಬೊಗಳುತ್ತ ಚಿಲ್ರೆಕಾಸು ದುಡಿದು ಹೊಟ್ಟೆ ಹೊರೆಯುತ್ತಿದ್ದರು. ಅದೇನಾಯ್ತೋ ಏನೋ ಪಿಡಿಪಿ ಪಕ್ಷಕ್ಕೆ ಬ್ಲೂಜೆಪಿ ಜೊತೆಗಿನ ಕುಸುಕು ಮುಸುಕು ಪ್ರಣಯ ಸಾಕಾಗಿ ಬ್ಲೂಜೆಪಿಯನ್ನು ಸರ್ಕಾರದಿಂದ ಒದ್ದೋಡಿಸುವ ಪ್ರಯತ್ನದಲ್ಲಿತ್ತು. ಅಷ್ಟರಲ್ಲಿ ತನ್ನ ಲಂಗೋಟಿ-ಪುಟಗೋಸಿಯನ್ನು ಗಂಟು ಕಟ್ಟಿಕೊಂಡು ತಲೆ ಮೇಲೆ ಟವೆಲ್ಲು ಹಾಕಿಕೊಂಡ ಬ್ಲೂಜೆಪಿಯು ತಾನೇ ಸರ್ಕಾರದಿಂದ ಈಚೆಗೆ ಬರುತ್ತಿದ್ದೇನೆಂಬ ಡ್ರಾಮಾ ಆಡಿ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆಯೆಂದು ಬಲ್ಲ ಮೂಲಗಳು ಬೊಂಬಡ ಹೊಡೆಯುತ್ತ ತಿಳಿಸಿವೆ.
****
ಪ್ರಸ್ತುತ ಮಾಟ-ಮಂತ್ರ ಕವಡೆಶಾಸ್ತ್ರ ತಜ್ಞರ ರಾಜ್ಯಮಟ್ಟದ ಸಮ್ಮೇಳನದಂತೆ ಕಾಣುತ್ತಿರುವ ಕರ್ನಾಟಕದ ‘ಮಿಕ್ಸ್ ಮಸಾಲ ಸರ್ಕಾರ’ದ ಕಡೆಯಿಂದ ಹೊಸ “ಮಮ್ಮಿ ಮೆಟ್ಟು” ವರದಿಯೊಂದು ಕುಪ್ಪಳಿಸುತ್ತ ಬಂದಿದೆ. ಪ್ರೈಮರಿಶಾಲೆಯ ಮಂತ್ರಿಯೊಬ್ಬರು ಮದನಪಲ್ಲಿ ಮೂಲದ ರೇಪಿಸ್ಟನೊಬ್ಬನ ಪತ್ನಿ ಹಾಗೂ ಮಾಜಿಸುಂದರಿ ಮತ್ತು ಹಾಲಿ “ಮಮ್ಮಿ ಭಗವಾನ್” ದೇವಿಯ ಮರದ ಎಕ್ಕಡಗಳನ್ನು ಸ್ಲೋಮೋಷನ್ನಿನಲ್ಲಿ ಮೈಗೆಲ್ಲ ಚರಚರನೆ ಸವರಿಕೊಂಡು ಪಠಾಪಠಾ ಹೊಡೆದುಕೊಂಡು ಆಶೀರ್ವಾದ ತೆಗೆದುಕೊಂಡ ಹಾಸ್ಯಾಸ್ಪದ ಸುದ್ದಿಯೊಂದು ಲಭ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮಮ್ಮಿ ಭಗವಾನ್ ಭಕ್ತಮಂತ್ರಿಯ ಎಕ್ಕಡಸೇವೆಯ ವಿಡಿಯೋ ಕಡ್ಲೆಪುರಿಯಂತೆ ಖರ್ಚಾಗುತ್ತಿರುವುದು ರಾಜ್ಯದ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳಲ್ಲಿ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ನಿಮ್ಮ ಒಪಿನಿಯನ್ ಏನೆಂದು ಕೇಳಿದಾಗ “ಓಟಿಗೋಸ್ಕರ ಹಿಂಗೆಲ್ಲ ಕಂಡೋರ ಎಕ್ಕಡವನ್ನು ಮತದಾರರ ಇಚ್ಛೆಯಂತೆ ಮೈಗೆಲ್ಲ ಸವರಿಕೊಳ್ಳಬೇಕಾಗ್ತದೆ” ಎಂದು ಸದರೀ ಮಮ್ಮಿ ಭಗವಾನ್ ಭಕ್ತಮಂತ್ರಿಯು ಆಲಾಪಿಸಿದೆ. ಓಟು ಕೊಡೋರು “ನಮ್ಮನೆ ಎಮ್ಮೆಸೆಗಣಿ ತಿನ್ನಿ, ಮೇಲ್ಜಾತಿ ಜನರ ಬೀದಿಯ ಚರಂಡಿನೀರು ತಗೊಂಡು ತಲೆಗೆ ಚಿಮುಕಿಸ್ಕೊಳಿ” ಅಂದ್ರೆ ಅದನ್ನೂ ಮಾಡ್ತೀರ ಸ್ವಾಮಿ? ಎಂದು ಕೇಳಿದಾಗ.. ಕಂಗಾಲಾದ ಭಕ್ತಮಂತ್ರಿಯು ಮುಳುಮುಳನೆ ಗೋಳಾಡುತ್ತ ತನ್ನ ಭಜನೆಭಕ್ತರೊಡನೆ ಇನ್ನೊಂದು “ಡ್ಯಾಡಿ ಭಗವಾನ್” ಮಠದತ್ತ ಬರಿಗಾಲಲ್ಲಿ ಓಡಿಹೋದ ಘಟನೆ ತಡವಾಗಿ ವರದಿಯಾಗಿದೆ.
****
ಹೊಟ್ಟೆಪಾಡಿಗೊಂದು ಕೆಲಸವೂ ಇಲ್ಲದೆ ತೆಂಗಿನಚಿಪ್ಪೊಂದನ್ನು ತಲೇ ಮೇಲಿಟ್ಟುಕೊಂಡು ಊರೂರಲ್ಲಿ ತಿರುಪೆಯೆತ್ತಿಕೊಂಡು ಅಂಡಲೆಯುತ್ತಿರುವ ‘ಪ್ರಬೋದ್ ಮೂತ್ರಲೀಕ್’ ಎಂಬ ವಯೋವೃದ್ಧ ಗುಳ್ಳೆನರಿಯು ಈ ಜನ್ಮದಲ್ಲಿ ಉದ್ದಾರವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲವೆಂಬುದಕ್ಕೆ ಇತ್ತೀಚೆಗೆ ಮತ್ತೊಂದು ಸಾಕ್ಷಿ ದೊರಕಿದೆ. ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಡ್ರಾಮಾಮಾಸ್ಟರ್ ಕುಂಡಾಲೇಂದ್ರ ರೆಸ್ಪಾಂಡ್ ಮಾಡಬೇಕೆ? ಎಂದು ಈ ಕೆಟ್ಟಮುಸುಡಿ ಗುಳ್ಳೆನರಿಯು ಊಳಿಟ್ಟಿದೆ. ಈ ಸುದ್ದಿ ಕೇಳಿದ ಹುಬ್ಬಳ್ಳಿಯ ಪಾನ್ ಬೀಡಾ ಅಂಗಡಿ ಓನರ್ ಸಿದ್ದಪ್ಪಶೆಟ್ಟಿಯವರು, “ಇವನ ಮನೆ ಹಾಳಾಗ, ಇದೆಲ್ಲಾ ಕಿಸಲಗೇಡಿ ಮಾತಾಡೋ ಈ ಮೂತ್ರಲೀಕ್, ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ನನ್ನ ಬಳಿ 300 ರುಪಾಯಿ ತೆಗೆದುಕೊಂಡು ತಲೆಮರೆಸಿಕೊಂಡು ತಿರುಗುತ್ತಿದ್ದಾನೆ, ಇವನನ್ನು ಕಂಡವರು ಇವನ ಕೈಕಾಲು ಕಟ್ಟಿ ಹತ್ತಿರದ ಪಾಳುಬಾವಿಯೊಂದರೊಳಗೆ ಎತ್ತಿಹಾಕಿ, ನನಗೊಂದು ಮಿಸ್ ಕಾಲ್ ಕೊಟ್ರೆ ಓಡಿ ಬಂದು ಮೂತ್ರಲೀಕ್ ಬಿದ್ದಿರುವ ಪಾಳುಬಾವಿಗೆ ಮುವ್ವತ್ತು ಮಂಕರಿ ತಿಪ್ಪೆಗೊಬ್ಬರ ಸುರಿಯುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಕರ್ನಾಟಕ ಕಿಚಡಿ ಗೌರ್ಮೆಂಟಿನ ಚೀಫ್ ಮಂತ್ರಿಯಾಗಿರುವ ಕುಮಾರಣ್ಣನವರ ತಲೆ ಇತ್ತೀಚೆಗೆ ಕೆಟ್ಟು ಕೇಸರಿಬಾತ್ ಆಗಿರುವ ಲಕ್ಷಣಗಳು ಗೋಚರವಾಗುತ್ತಿವೆ. ಹಾವು ಮುಂಗುಸಿಗಳನ್ನು ಒಂದೇ ಮೂಟೆಯೊಳಗೆ ತುಂಬಿಟ್ಟಂತಾಗಿರುವ ಕಿಚಡಿ ಸರ್ಕಾರದಲ್ಲಿ ಕಂಡಕಂಡವರೆಲ್ಲ ಕುಮಾರಣ್ಣನ ನುಣುಪಾದ ತಲೆಗೆ ಟುಕು ಟುಕು ಕುಟ್ಟುತ್ತಿರುವುದರಿಂದ ರೋಸತ್ತು ಹೋಗಿರುವ ಮು.ಮಂ. ಅವರು ಇನ್ನುಮುಂದೆ ತಲೆಗೆ 25 ಕೇಜಿ ತೂಕದ ತಾಮ್ರದ ಹೆಲ್ಮೆಟ್ಟು ಧರಿಸಿಕೊಂಡು ಓಡಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅತ್ತ ನಿಂಬೆಹಣ್ ತಜ್ಞ ಲೇವಣ್ಣ, ಇತ್ತ ಹೋಮಹವನ ಪಂಡಿತ ಪಲಮೇಶ್ವರ್, ಆ ಕಡೆ ಹೆಡ್ ಮೇಸ್ಟ್ರು ದೊಡ್ಡಗೌಡ್ರು, ಈ ಕಡೆ 24/7 ಗಢಾರಿ ಹಿಡಿದುಕೊಂಡೇ ಓಡಾಡೋ ಎಂ.ಬಿ. ಘಾಟೀಲ್, ಮತ್ತೊಂದು ಕಡೆ ಉದುರೋ ಕಡ್ಲೆಬೀಜ ಫಾಲೋ ಮಾಡ್ಕೊಂಡು ಹಿಂದಿಂದೆಯೇ ಸುತ್ತುತ್ತಿರೋ ಧಡಿಯೂರಪ್ಪ, ಇನ್ನೊಂದ್ಕಡೆ ಈ ಗೌರ್ಮೆಂಟ್ ಅದುರಿ ಅಲ್ಲಾಡಿ, ನೆಗರಿ ನಿಗುರಾಡಿ ಸರ್ವನಾಶ ಆಗಲಿ ಅಂತ ದಿನಬೆಳಗಾದರೆ ಕಯ್ಯಯ್ಯೋ ಅನ್ನೋ ‘ಆಲ್‍ರೈಟ್ ರಂಗ’ ಅಂಡ್ ಪಟಾಲಂನ ರಕ್ತಬೇಧಿಯ ಕಾಟ ತಡೆಯಲಾರದೆ ಕುಮಾರಣ್ಣ ಕಕ್ಕಾಬಿಕ್ಕಿಯಾಗಿ, ತಲೆಗೇರಿಸಿಕೊಂಡ ತಾಮ್ರದ ಹೆಲ್ಮೆಟ್ಟನ್ನು ಮಲಗೋವಾಗಲು ಸಹ ತೆಗೆಯದೆ ಸೇಫ್ಟಿಯಾಗಿದ್ದಾರೆಂದು ಅವರ ಕಾರ್ ಡ್ರೈವರ್ ಎಣ್ಣೆ ಏಟಿನಲ್ಲಿ ಬಾರ್ ಸಪ್ಲೈಯರ್ ಜೊತೆಗೆ ಚರ್ಚೆ ನಡೆಸಿದ್ದಾರೆಂದು ಗುಪ್ತದಳದ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ. ನಮಸ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...