Homeಸಾಹಿತ್ಯ-ಸಂಸ್ಕೃತಿಕವನಕಳೆದುಹೋದನು ಹೇಗೆ ಪರಶುರಾಮ?

ಕಳೆದುಹೋದನು ಹೇಗೆ ಪರಶುರಾಮ?

- Advertisement -
- Advertisement -

ರಾಮ ರಾಮಾ ರಾಮ ಅಯ್ಯೋ ಶ್ರೀರಾಮಾ
ಎಲ್ಲಿರುವನೋ ನನ್ನ ಪರಶುರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮಾ
ಇಲ್ಲದಿರೆ ನನ್ನನ್ನೂ ಬಲಿ ತೆಗೆದುಕೋ ರಾಮ

ಕೈಯಲ್ಲಿ ಬಂದೂಕು ಹಿಡಿದನಂತೆ
ನನ್ನಂಥ ಹೆಣ್ಣನ್ನೇ ಹೊಡೆದನಂತೆ
‘ಅಮ್ಮ’ ಎನ್ನುತ್ತಲೇ ಎದೆ ಸೀಳುವಾಗ
ಹೆತ್ತಮ್ಮನನ್ನೇ ಮರೆತಿದ್ದನಂತೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಏಳುಕೊಳ್ಳದೆಲ್ಲವಗ ಹರಕೆ ಹೊತ್ತಿದ್ದೆ
ಒಂಬತ್ತು ತಿಂಗಳು ಹೊಟ್ಟೆ ಹೊತ್ತಿದ್ದೆ
ರಕ್ತ ಮಾಂಸ ಬಸಿದು ಕೂಸ ಮಾಡಿದ್ದೆ
ನೋವು ಬ್ಯಾನಿ ತಿಂದು ಸತ್ತು ಹಡೆದಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ವರ್ಷಗಟ್ಟಲೆ ಎದೆಯ ಹಾಲು ಉಣಿಸಿದ್ದೆ
ತೋಳ ತೊಟ್ಟಿಲು ತೂಗಿ ಲಾಲಿ ಹಾಡಿದ್ದೆ
ತೆಪ್ಪೆಜ್ಜಿ ಕಿತ್ತಾಗ ಹಾಡಿ ಕುಣಿದಿದ್ದೆ
ತೊದಲನುಡಿಯೊಳಗ ಕೈಲಾಸ ಕಂಡಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಸಾಲಿಗಿ ಕಳಿಸಿದ ಸಡಗರ ಸಡಗರ
ಸಾಹೇಬನಾಗುವ ಕನಸಿನ ಸಡಗರ
ಕೂಲಿನಾಲಿ ಮಾಡಿ ಬೆಳೆಸಿದ ಸಡಗರ
ಬಡತನವ ಮರೆಸಿದ್ದ ಮುದ್ದು ಸುಕುಮಾರ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಹರೆಯವು ಮೈತುಂಬಿ ಹೋರಿಯಾಗಿದ್ದ
ಚೆಲುವೆಯರ ಕಣ್ಣಾಗ ಬುಗುರಿಯಾಗಿದ್ದ
ಅಪ್ಪನ ಹೆಗಲ ಭಾರ ಹೊರುತ್ತಿದ್ದ
ಅವ್ವನಲಿ ಸೊಸೆ ತರುವ ಕನಸ ಬೆಳೆಸಿದ್ದ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ನಿಂತಲ್ಲೇ ಕತ್ತರಿಸಿ ನೆಲಕ ಬಿದ್ದೇನಿ
ಎದೆಯಿಂದ ನೆಲವ ಬಗೆಯುತ್ತಿದ್ದೀನಿ
ಕಣ್ಣು ಕತ್ತಲಗೂಡಿ ಹೊರಳುತಿದ್ದೀನಿ
ಮಗನ ಹೆಸರಿಡಿದು ಚೀರುತಿದ್ದೀನಿ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಹರೆಯದ ಕೈಗೆ ಬಂದೂಕು ಕೊಟ್ಟವರಾರು ?
ಹರೆಯದ ಮೈ ಹೊಕ್ಕ ಕೊಲೆಗಡುಕರಾರು ?
ಯಾರು ಉಣಿಸಿದರವನ ಎದೆಗೆ ವಿಷವ ?
ಯಾರು ಕಕ್ಕಿಸಿದರು ನನ್ನೆದೆಯ ಹಾಲು ?
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಕರುಣೆ ಬಾರದೇನೋ ರಾಮ ಶ್ರೀರಾಮಾ
ಮರಣವಾದರೂ ನೀಡೋ ರಾಮ ಶ್ರೀರಾಮಾ
ಯಾರ ಸೇನೆಯಲ್ಲಿ ಕಳೆದುಹೋದೆಯೋ ರಾಮ
ಕಾಯುತಿರುವೆನು ತಾಯಿ ರಾಮಶ್ರೀರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮ
ಇಲ್ಲದಿರೆ ನನ್ನೊಡಲ ಬೆಂಕಿಯಲಿ ಬೂದಿಯಾಗೋ

-ಎಂ. ಡಿ. ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...