Homeಸಾಹಿತ್ಯ-ಸಂಸ್ಕೃತಿಕವನಕಳೆದುಹೋದನು ಹೇಗೆ ಪರಶುರಾಮ?

ಕಳೆದುಹೋದನು ಹೇಗೆ ಪರಶುರಾಮ?

- Advertisement -
- Advertisement -

ರಾಮ ರಾಮಾ ರಾಮ ಅಯ್ಯೋ ಶ್ರೀರಾಮಾ
ಎಲ್ಲಿರುವನೋ ನನ್ನ ಪರಶುರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮಾ
ಇಲ್ಲದಿರೆ ನನ್ನನ್ನೂ ಬಲಿ ತೆಗೆದುಕೋ ರಾಮ

ಕೈಯಲ್ಲಿ ಬಂದೂಕು ಹಿಡಿದನಂತೆ
ನನ್ನಂಥ ಹೆಣ್ಣನ್ನೇ ಹೊಡೆದನಂತೆ
‘ಅಮ್ಮ’ ಎನ್ನುತ್ತಲೇ ಎದೆ ಸೀಳುವಾಗ
ಹೆತ್ತಮ್ಮನನ್ನೇ ಮರೆತಿದ್ದನಂತೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಏಳುಕೊಳ್ಳದೆಲ್ಲವಗ ಹರಕೆ ಹೊತ್ತಿದ್ದೆ
ಒಂಬತ್ತು ತಿಂಗಳು ಹೊಟ್ಟೆ ಹೊತ್ತಿದ್ದೆ
ರಕ್ತ ಮಾಂಸ ಬಸಿದು ಕೂಸ ಮಾಡಿದ್ದೆ
ನೋವು ಬ್ಯಾನಿ ತಿಂದು ಸತ್ತು ಹಡೆದಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ವರ್ಷಗಟ್ಟಲೆ ಎದೆಯ ಹಾಲು ಉಣಿಸಿದ್ದೆ
ತೋಳ ತೊಟ್ಟಿಲು ತೂಗಿ ಲಾಲಿ ಹಾಡಿದ್ದೆ
ತೆಪ್ಪೆಜ್ಜಿ ಕಿತ್ತಾಗ ಹಾಡಿ ಕುಣಿದಿದ್ದೆ
ತೊದಲನುಡಿಯೊಳಗ ಕೈಲಾಸ ಕಂಡಿದ್ದೆ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಸಾಲಿಗಿ ಕಳಿಸಿದ ಸಡಗರ ಸಡಗರ
ಸಾಹೇಬನಾಗುವ ಕನಸಿನ ಸಡಗರ
ಕೂಲಿನಾಲಿ ಮಾಡಿ ಬೆಳೆಸಿದ ಸಡಗರ
ಬಡತನವ ಮರೆಸಿದ್ದ ಮುದ್ದು ಸುಕುಮಾರ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಹರೆಯವು ಮೈತುಂಬಿ ಹೋರಿಯಾಗಿದ್ದ
ಚೆಲುವೆಯರ ಕಣ್ಣಾಗ ಬುಗುರಿಯಾಗಿದ್ದ
ಅಪ್ಪನ ಹೆಗಲ ಭಾರ ಹೊರುತ್ತಿದ್ದ
ಅವ್ವನಲಿ ಸೊಸೆ ತರುವ ಕನಸ ಬೆಳೆಸಿದ್ದ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ನಿಂತಲ್ಲೇ ಕತ್ತರಿಸಿ ನೆಲಕ ಬಿದ್ದೇನಿ
ಎದೆಯಿಂದ ನೆಲವ ಬಗೆಯುತ್ತಿದ್ದೀನಿ
ಕಣ್ಣು ಕತ್ತಲಗೂಡಿ ಹೊರಳುತಿದ್ದೀನಿ
ಮಗನ ಹೆಸರಿಡಿದು ಚೀರುತಿದ್ದೀನಿ
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ
ಹರೆಯದ ಕೈಗೆ ಬಂದೂಕು ಕೊಟ್ಟವರಾರು ?
ಹರೆಯದ ಮೈ ಹೊಕ್ಕ ಕೊಲೆಗಡುಕರಾರು ?
ಯಾರು ಉಣಿಸಿದರವನ ಎದೆಗೆ ವಿಷವ ?
ಯಾರು ಕಕ್ಕಿಸಿದರು ನನ್ನೆದೆಯ ಹಾಲು ?
ಹೇಗೆ ನಂಬಲಿ ಶಿವನೇ ಅಯ್ಯೋ ಶ್ರೀರಾಮಾ
ಕಳೆದು ಹೋದನು ಹೇಗೆ ಪರಶುರಾಮ ನನ್ನ ಪರಶುರಾಮ

ಕರುಣೆ ಬಾರದೇನೋ ರಾಮ ಶ್ರೀರಾಮಾ
ಮರಣವಾದರೂ ನೀಡೋ ರಾಮ ಶ್ರೀರಾಮಾ
ಯಾರ ಸೇನೆಯಲ್ಲಿ ಕಳೆದುಹೋದೆಯೋ ರಾಮ
ಕಾಯುತಿರುವೆನು ತಾಯಿ ರಾಮಶ್ರೀರಾಮ
ಮರಳಿ ಕೊಡುವೆಯಾ ಮಗನ ರಾಮ ಶ್ರೀರಾಮ
ಇಲ್ಲದಿರೆ ನನ್ನೊಡಲ ಬೆಂಕಿಯಲಿ ಬೂದಿಯಾಗೋ

-ಎಂ. ಡಿ. ಒಕ್ಕುಂದ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...

ಮಧ್ಯಪ್ರದೇಶ| ವಂದೇ ಮಾತರಂ ಹಾಡಲು ನಿರಾಕರಣೆ; ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್

ಏಪ್ರಿಲ್ 8 ರಂದು ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್‌ನ ಬಜೆಟ್ ಅಧಿವೇಶನದಲ್ಲಿ ಧಾರ್ಮಿಕ ಮತ್ತು ಸಾಂವಿಧಾನಿಕ ಕಾರಣಗಳನ್ನು ಉಲ್ಲೇಖಿಸಿ ವಂದೇ ಮಾತರಂ ಹಾಡಲು ನಿರಾಕರಿಸಿದ್ದಕ್ಕಾಗಿ ಮಧ್ಯಪ್ರದೇಶ ಪೊಲೀಸರು ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳ ವಿರುದ್ಧ ಎಫ್‌ಐಆರ್...

ನ್ಯಾಯಾಂಗ ಸೇವೆಗಳು, ಸರ್ಕಾರಿ ಸಮಿತಿಗಳಲ್ಲಿ ಶೇ. 50 ಮಹಿಳಾ ಪ್ರಾತಿನಿಧ್ಯ ಕೋರಿ ಪಿಐಎಲ್ : ವಜಾಗೊಳಿಸಿದ ಸುಪ್ರೀಂ ಕೋರ್ಟ್

ಸರ್ಕಾರಿ ಸಮಿತಿಗಳು ಮತ್ತು ನ್ಯಾಯಾಂಗ ಸೇವೆಯ ಖಾಲಿ ಇರುವ ಸ್ಥಾನಗಳಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಪ್ರಾತಿನಿಧ್ಯ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಿಚಾರಣೆಗೆ ಸ್ವೀಕರಿಸಲು ಸುಪ್ರೀಂ ಕೋರ್ಟ್ ಗುರುವಾರ...

ರಷ್ಯಾ ತೈಲ ಖರೀದಿಸಲು ಭಾರತಕ್ಕೆ ನೀಡಿದ್ದ ಕಾಲಾವಕಾಶ ವಿಸ್ತರಿಸುವುದಿಲ್ಲ: ಅಮೆರಿಕ

ಇರಾನ್ ಮತ್ತು ರಷ್ಯಾದಿಂದ ತೈಲವನ್ನು ಖರೀದಿಸಲು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ಈವರೆಗೆ ನೀಡಲಾಗಿದ್ದ ನಿರ್ಬಂಧ ಸಡಿಲಿಕೆಯನ್ನು ಇನ್ನು ಮುಂದೆ ಮುಂದುವರಿಸುವುದಿಲ್ಲ ಎಂದು ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಬುಧವಾರ (ಏ.15)...