Homeಅಂಕಣಗಳುಹನಿಮೂನ್ ಸಾಕು ತಗೋ ತಲಾಕು

ಹನಿಮೂನ್ ಸಾಕು ತಗೋ ತಲಾಕು

- Advertisement -
- Advertisement -

ಆಘಾತವಾಣಿ ವಾರ್ತೆಗಳು, ಕೇಳುಗರಿಗೆಲ್ಲ ಸ್ವಾಗತ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತ. ಈಗ ವಾರ್ತೆಗಳ ವಿವರ.

ಆಗಿದ್ದಾಗ್ಲಿ ಹೋಗಿದ್ದೋಗ್ಲಿ, ಆರು ಮೂರಾಗ್ಲಿ, ಮೂರು ಮುವ್ವತ್ತಾಗ್ಲಿ, ನಾನೂ ಕೆಲ್ಸ ಮಾಡಲ್ಲ, ಬೇರೇಯವ್ರಿಗೂ ಕೆಲ್ಸ ಮಾಡೋಕೆ ಬಿಡಲ್ಲ ಅಂತ ವೀರಪ್ರತಿಜ್ಞೆ ಮಾಡಿರೋ ಪಕೋಡೇಂದ್ರ ಕುಂಡಾಲಯ್ಯನ ಕಡೆಯಿಂದ ಹೊಸ ಸುದ್ದಿಯೊಂದು ಬಂದಿದೆ. ವರ್ಷಗಳ ಹಿಂದೆ ದೆಹಲಿ ಚುನಾವಣೆಯಲ್ಲಿ ಕೇಜ್ರಿವಾಲ್ ಪಕ್ಷದಿಂದ ಮಕಮೂತಿಗೆ ಇಕ್ಕಿಸಿಕೊಂಡು ಮಣ್ಣುಮುಕ್ಕಿದ್ದ ಪಕೋಡೇಂದ್ರರವರು ಕೇಜ್ರಿವಾಲ್ ತಲೆ ಮೇಲೆ ಲೆಫ್ಟಿನೆಂಟ್ ಗೌರ್ನರ್ ಎಂಬ ಶೋಕೇಸ್ ಪೀಸೊಂದನ್ನು ಕುಕ್ಕಿದ್ದನು. ಈ ಲಡಾಸಿ ಗೌರ್ನರ್ ದೆಹಲಿಯ ಐಎಎಸ್ ಅಧಿಕಾರಿಗಳ ತಲೆಸವರಿ ಒಳಕ್ಕೆಳೆದುಕೊಂಡು ತಾನಿರುವ ಸರ್ಕಾರದ ವಿರುದ್ಧವೇ ಸ್ಟ್ರೈಕು ಮಾಡಿಸಲು ಹಚ್ಚಿದ್ದಾರೆಂದು ಸುಪ್ತಚರ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಪ್ರತಿಯಾಗಿ ಕೇಜ್ರಿವಾಲ್ ತಮ್ಮ ತಂಡದೊಂದಿಗೆ ಲೆಫ್ಟಿನೆಂಟ್ ಗೌರ್ನರ್ ಕಚೇರಿಯೊಳಗೇ ಮೊಕ್ಕಾಂ ಹೂಡಿ ಧರಣಿ ಕೂತು ವಾರ ಕಳೆದರೂ ಚೇಂಬರಿನಿಂದ ಹೊರಬರದೆ ಟೇಬಲ್ ಕೆಳಗೆ ಅವಿತು ಕುಳಿತಿದ್ದ ಆತನು ದೆಹಲಿಯ ಜನರು ಕೈಗೆ ಪ್ಯಾರಗಾನ್ ಚಡಾವು ಕಳಚಿಕೊಳ್ಳುತ್ತಿದ್ದಂತೆ ಆಫೀಸಿಂದ ಈಚೆ ಬಂದು ಕೇಜ್ರಿವಾಲ್ ಬೇಡಿಕೆಗಳಿಗೆ ಸೈನ್ ಹಾಕಿ ಮತ್ತೆ ಹೋಗಿ ಟೇಬಲ್ ಕೆಳಗೆ ಅವಿತುಕೊಂಡಿದ್ದಾನೆಂದು ವರದಿಯಾಗಿದೆ.
****
ಕಳೆದ ಲೋಕಸಭೆ ಚುನಾವಣೆಯಲ್ಲಿ ಕಾಶ್ಮೀರದಲ್ಲಿ ಮೂರು ಮುಕ್ಕಾಲು ಸೀಟು ಪಡೆದು ಕಾಶ್ಮೀರ ಪ್ರತ್ಯೇಕತಾವಾದಿ ಪಿಡಿಪಿ ಪಕ್ಷದ ಜೊತೆ ಸೇರಿ ಸರ್ಕಾರ ರಚಿಸಿದ್ದ ಬ್ಲೂಜೆಪಿ ಪಕ್ಷದ ವತಿಯಿಂದ ಹೊಸ ನ್ಯೂಸೊಂದು ಎಗರಿ ಬಂದಿದೆ. ಪುಡಿಪುಕ್ಕ ಸೀಟುಗಳನ್ನು ಕಂಕುಳಿಗಿಟ್ಟುಕೊಂಡು “ ಪ್ರೀತ್ಸೇ ಪ್ರೀತ್ಸೇ, ಮೂರೂ ಬಿಟ್ಟು ನನ್ನೇ ಪ್ರೀತ್ಸೇ” ಅಂತ ಈ ಕಡೆಯಿಂದ ಪಿಡಿಪಿ ಪಕ್ಷದ ಸೊಂಟ ಗಿಲ್ಲಿದಾಗ, ಆ ಕಡೆಯಿಂದ “ ಆಜಾ ಮೆರಿ ಗಾಡಿ ಮೇ ಬೈಟ್ ಜಾ, ಆಜಾ ಮೆರಿ ಗಾಡಿ ಮೇ ಬೈಟ್ ಜಾ” ಅನ್ನೋ ರೆಸ್ಪಾನ್ಸ್ ಬಂದಿತ್ತು. ನಂತ್ರ ಇಬ್ಬರೂ ಸೇರಿ ಕಾಶ್ಮೀರದಲ್ಲಿ ಕಲಬೆರಕೆ ಸರ್ಕಾರ ರಚಿಸಿ ಒಬ್ಬರ ಸೊಂಟ ಒಬ್ಬರು ಹಿಡಿದು “ ಬೆರಕೆ ಪ್ರೀತಿಯಲ್ಲಿ ಇರೋ ಸುಖ ಗೊತ್ತೇ ಇರಲಿಲ್ಲ, ಹೂ ಅಂತೀಯ, ಉಹೂ ಅಂತೀಯ” ಅಂತ ಡ್ಯಾನ್ಸ್ ಮಾಡ್ತಿದ್ದ ಎರಡೂ ಪಕ್ಷಗಳು ಈಗ ಮಕಮಕ ಪರಚಾಡಿಕೊಂಡು ದಿಢೀರ್ ಡೈವೋರ್ಸ್ ತಗೊಂಡಿವೆ.
****
ಈ ಢಮಾರ್ ಡೈವೋರ್ಸಿಗೆ ಕಾರಣಗಳೇನೆಂದು ಕೆದಕಿದಾಗ ಕುತೂಹಲಕಾರಿ ಕಿತಾಪತಿ ಮಾಹಿತಿಗಳು ನಮಗೆ ಲಭ್ಯವಾಗಿವೆ. ದೇಶದ ತುಂಬ ಕಾಶ್ಮೀರಿ ಟೆರರಿಸ್ಟ್‍ಗಳ ಬಗ್ಗೆ ಪುಯ್ಯೋ ಪುಯ್ಯೋ ಎಂದು ಪುಂಗಿ ಊದುವ ಬ್ಲೂಜೆಪಿ ಪಕ್ಷವು, ಈ ಪ್ರತ್ಯೇಕತಾವಾದಿಗಳ ಜೊತೆಗೆ ಕಾಶ್ಮೀರದಲ್ಲಿ ತಮ್ಮದೇ ಸರ್ಕಾರದಲ್ಲಿ ಕುಸುಕು ಮುಸುಕು ನಡೆಸುತ್ತಿದ್ದುದು ಎಲ್ಲರಿಗು ತಿಳಿದ ಸತ್ಯ. ಪೊಲೀಸರು-ಮಿಲಿಟರಿಯವರು ಅರೆಸ್ಟ್ ಮಾಡಿದ ಟೆರರಿಸ್ಟುಗಳ ಕೈಗೆ ಹೂಗುಚ್ಛ ಕೊಟ್ಟು ಜೈಲಿಂದ ಬಿಡಿಸಿ ಕಳಿಸುತ್ತಿದ್ದ ಇದೇ ಬೆರಕೆ ಪಕ್ಷದವರು ಬೇರೆ ರಾಜ್ಯಗಳಲ್ಲಿ ಇದಕ್ಕೆ ಉಲ್ಟಾ ಭಾಷಣಗಳನ್ನು ಬೊಗಳುತ್ತ ಚಿಲ್ರೆಕಾಸು ದುಡಿದು ಹೊಟ್ಟೆ ಹೊರೆಯುತ್ತಿದ್ದರು. ಅದೇನಾಯ್ತೋ ಏನೋ ಪಿಡಿಪಿ ಪಕ್ಷಕ್ಕೆ ಬ್ಲೂಜೆಪಿ ಜೊತೆಗಿನ ಕುಸುಕು ಮುಸುಕು ಪ್ರಣಯ ಸಾಕಾಗಿ ಬ್ಲೂಜೆಪಿಯನ್ನು ಸರ್ಕಾರದಿಂದ ಒದ್ದೋಡಿಸುವ ಪ್ರಯತ್ನದಲ್ಲಿತ್ತು. ಅಷ್ಟರಲ್ಲಿ ತನ್ನ ಲಂಗೋಟಿ-ಪುಟಗೋಸಿಯನ್ನು ಗಂಟು ಕಟ್ಟಿಕೊಂಡು ತಲೆ ಮೇಲೆ ಟವೆಲ್ಲು ಹಾಕಿಕೊಂಡ ಬ್ಲೂಜೆಪಿಯು ತಾನೇ ಸರ್ಕಾರದಿಂದ ಈಚೆಗೆ ಬರುತ್ತಿದ್ದೇನೆಂಬ ಡ್ರಾಮಾ ಆಡಿ ಮುಖ ಉಳಿಸಿಕೊಳ್ಳಲು ಪ್ರಯತ್ನಿಸಿದೆಯೆಂದು ಬಲ್ಲ ಮೂಲಗಳು ಬೊಂಬಡ ಹೊಡೆಯುತ್ತ ತಿಳಿಸಿವೆ.
****
ಪ್ರಸ್ತುತ ಮಾಟ-ಮಂತ್ರ ಕವಡೆಶಾಸ್ತ್ರ ತಜ್ಞರ ರಾಜ್ಯಮಟ್ಟದ ಸಮ್ಮೇಳನದಂತೆ ಕಾಣುತ್ತಿರುವ ಕರ್ನಾಟಕದ ‘ಮಿಕ್ಸ್ ಮಸಾಲ ಸರ್ಕಾರ’ದ ಕಡೆಯಿಂದ ಹೊಸ “ಮಮ್ಮಿ ಮೆಟ್ಟು” ವರದಿಯೊಂದು ಕುಪ್ಪಳಿಸುತ್ತ ಬಂದಿದೆ. ಪ್ರೈಮರಿಶಾಲೆಯ ಮಂತ್ರಿಯೊಬ್ಬರು ಮದನಪಲ್ಲಿ ಮೂಲದ ರೇಪಿಸ್ಟನೊಬ್ಬನ ಪತ್ನಿ ಹಾಗೂ ಮಾಜಿಸುಂದರಿ ಮತ್ತು ಹಾಲಿ “ಮಮ್ಮಿ ಭಗವಾನ್” ದೇವಿಯ ಮರದ ಎಕ್ಕಡಗಳನ್ನು ಸ್ಲೋಮೋಷನ್ನಿನಲ್ಲಿ ಮೈಗೆಲ್ಲ ಚರಚರನೆ ಸವರಿಕೊಂಡು ಪಠಾಪಠಾ ಹೊಡೆದುಕೊಂಡು ಆಶೀರ್ವಾದ ತೆಗೆದುಕೊಂಡ ಹಾಸ್ಯಾಸ್ಪದ ಸುದ್ದಿಯೊಂದು ಲಭ್ಯವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಮಮ್ಮಿ ಭಗವಾನ್ ಭಕ್ತಮಂತ್ರಿಯ ಎಕ್ಕಡಸೇವೆಯ ವಿಡಿಯೋ ಕಡ್ಲೆಪುರಿಯಂತೆ ಖರ್ಚಾಗುತ್ತಿರುವುದು ರಾಜ್ಯದ ಪ್ರಾಥಮಿಕ ಶಾಲೆಯ ಪುಟ್ಟಮಕ್ಕಳಲ್ಲಿ ಗಾಬರಿ ಹುಟ್ಟಿಸಿದೆ. ಈ ಬಗ್ಗೆ ನಿಮ್ಮ ಒಪಿನಿಯನ್ ಏನೆಂದು ಕೇಳಿದಾಗ “ಓಟಿಗೋಸ್ಕರ ಹಿಂಗೆಲ್ಲ ಕಂಡೋರ ಎಕ್ಕಡವನ್ನು ಮತದಾರರ ಇಚ್ಛೆಯಂತೆ ಮೈಗೆಲ್ಲ ಸವರಿಕೊಳ್ಳಬೇಕಾಗ್ತದೆ” ಎಂದು ಸದರೀ ಮಮ್ಮಿ ಭಗವಾನ್ ಭಕ್ತಮಂತ್ರಿಯು ಆಲಾಪಿಸಿದೆ. ಓಟು ಕೊಡೋರು “ನಮ್ಮನೆ ಎಮ್ಮೆಸೆಗಣಿ ತಿನ್ನಿ, ಮೇಲ್ಜಾತಿ ಜನರ ಬೀದಿಯ ಚರಂಡಿನೀರು ತಗೊಂಡು ತಲೆಗೆ ಚಿಮುಕಿಸ್ಕೊಳಿ” ಅಂದ್ರೆ ಅದನ್ನೂ ಮಾಡ್ತೀರ ಸ್ವಾಮಿ? ಎಂದು ಕೇಳಿದಾಗ.. ಕಂಗಾಲಾದ ಭಕ್ತಮಂತ್ರಿಯು ಮುಳುಮುಳನೆ ಗೋಳಾಡುತ್ತ ತನ್ನ ಭಜನೆಭಕ್ತರೊಡನೆ ಇನ್ನೊಂದು “ಡ್ಯಾಡಿ ಭಗವಾನ್” ಮಠದತ್ತ ಬರಿಗಾಲಲ್ಲಿ ಓಡಿಹೋದ ಘಟನೆ ತಡವಾಗಿ ವರದಿಯಾಗಿದೆ.
****
ಹೊಟ್ಟೆಪಾಡಿಗೊಂದು ಕೆಲಸವೂ ಇಲ್ಲದೆ ತೆಂಗಿನಚಿಪ್ಪೊಂದನ್ನು ತಲೇ ಮೇಲಿಟ್ಟುಕೊಂಡು ಊರೂರಲ್ಲಿ ತಿರುಪೆಯೆತ್ತಿಕೊಂಡು ಅಂಡಲೆಯುತ್ತಿರುವ ‘ಪ್ರಬೋದ್ ಮೂತ್ರಲೀಕ್’ ಎಂಬ ವಯೋವೃದ್ಧ ಗುಳ್ಳೆನರಿಯು ಈ ಜನ್ಮದಲ್ಲಿ ಉದ್ದಾರವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲವೆಂಬುದಕ್ಕೆ ಇತ್ತೀಚೆಗೆ ಮತ್ತೊಂದು ಸಾಕ್ಷಿ ದೊರಕಿದೆ. ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಡ್ರಾಮಾಮಾಸ್ಟರ್ ಕುಂಡಾಲೇಂದ್ರ ರೆಸ್ಪಾಂಡ್ ಮಾಡಬೇಕೆ? ಎಂದು ಈ ಕೆಟ್ಟಮುಸುಡಿ ಗುಳ್ಳೆನರಿಯು ಊಳಿಟ್ಟಿದೆ. ಈ ಸುದ್ದಿ ಕೇಳಿದ ಹುಬ್ಬಳ್ಳಿಯ ಪಾನ್ ಬೀಡಾ ಅಂಗಡಿ ಓನರ್ ಸಿದ್ದಪ್ಪಶೆಟ್ಟಿಯವರು, “ಇವನ ಮನೆ ಹಾಳಾಗ, ಇದೆಲ್ಲಾ ಕಿಸಲಗೇಡಿ ಮಾತಾಡೋ ಈ ಮೂತ್ರಲೀಕ್, ಕಟಿಂಗ್ ಶೇವಿಂಗ್ ಮಾಡಿಸಿಕೊಳ್ಳಲು ನನ್ನ ಬಳಿ 300 ರುಪಾಯಿ ತೆಗೆದುಕೊಂಡು ತಲೆಮರೆಸಿಕೊಂಡು ತಿರುಗುತ್ತಿದ್ದಾನೆ, ಇವನನ್ನು ಕಂಡವರು ಇವನ ಕೈಕಾಲು ಕಟ್ಟಿ ಹತ್ತಿರದ ಪಾಳುಬಾವಿಯೊಂದರೊಳಗೆ ಎತ್ತಿಹಾಕಿ, ನನಗೊಂದು ಮಿಸ್ ಕಾಲ್ ಕೊಟ್ರೆ ಓಡಿ ಬಂದು ಮೂತ್ರಲೀಕ್ ಬಿದ್ದಿರುವ ಪಾಳುಬಾವಿಗೆ ಮುವ್ವತ್ತು ಮಂಕರಿ ತಿಪ್ಪೆಗೊಬ್ಬರ ಸುರಿಯುತ್ತೇನೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
****
ಕರ್ನಾಟಕ ಕಿಚಡಿ ಗೌರ್ಮೆಂಟಿನ ಚೀಫ್ ಮಂತ್ರಿಯಾಗಿರುವ ಕುಮಾರಣ್ಣನವರ ತಲೆ ಇತ್ತೀಚೆಗೆ ಕೆಟ್ಟು ಕೇಸರಿಬಾತ್ ಆಗಿರುವ ಲಕ್ಷಣಗಳು ಗೋಚರವಾಗುತ್ತಿವೆ. ಹಾವು ಮುಂಗುಸಿಗಳನ್ನು ಒಂದೇ ಮೂಟೆಯೊಳಗೆ ತುಂಬಿಟ್ಟಂತಾಗಿರುವ ಕಿಚಡಿ ಸರ್ಕಾರದಲ್ಲಿ ಕಂಡಕಂಡವರೆಲ್ಲ ಕುಮಾರಣ್ಣನ ನುಣುಪಾದ ತಲೆಗೆ ಟುಕು ಟುಕು ಕುಟ್ಟುತ್ತಿರುವುದರಿಂದ ರೋಸತ್ತು ಹೋಗಿರುವ ಮು.ಮಂ. ಅವರು ಇನ್ನುಮುಂದೆ ತಲೆಗೆ 25 ಕೇಜಿ ತೂಕದ ತಾಮ್ರದ ಹೆಲ್ಮೆಟ್ಟು ಧರಿಸಿಕೊಂಡು ಓಡಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅತ್ತ ನಿಂಬೆಹಣ್ ತಜ್ಞ ಲೇವಣ್ಣ, ಇತ್ತ ಹೋಮಹವನ ಪಂಡಿತ ಪಲಮೇಶ್ವರ್, ಆ ಕಡೆ ಹೆಡ್ ಮೇಸ್ಟ್ರು ದೊಡ್ಡಗೌಡ್ರು, ಈ ಕಡೆ 24/7 ಗಢಾರಿ ಹಿಡಿದುಕೊಂಡೇ ಓಡಾಡೋ ಎಂ.ಬಿ. ಘಾಟೀಲ್, ಮತ್ತೊಂದು ಕಡೆ ಉದುರೋ ಕಡ್ಲೆಬೀಜ ಫಾಲೋ ಮಾಡ್ಕೊಂಡು ಹಿಂದಿಂದೆಯೇ ಸುತ್ತುತ್ತಿರೋ ಧಡಿಯೂರಪ್ಪ, ಇನ್ನೊಂದ್ಕಡೆ ಈ ಗೌರ್ಮೆಂಟ್ ಅದುರಿ ಅಲ್ಲಾಡಿ, ನೆಗರಿ ನಿಗುರಾಡಿ ಸರ್ವನಾಶ ಆಗಲಿ ಅಂತ ದಿನಬೆಳಗಾದರೆ ಕಯ್ಯಯ್ಯೋ ಅನ್ನೋ ‘ಆಲ್‍ರೈಟ್ ರಂಗ’ ಅಂಡ್ ಪಟಾಲಂನ ರಕ್ತಬೇಧಿಯ ಕಾಟ ತಡೆಯಲಾರದೆ ಕುಮಾರಣ್ಣ ಕಕ್ಕಾಬಿಕ್ಕಿಯಾಗಿ, ತಲೆಗೇರಿಸಿಕೊಂಡ ತಾಮ್ರದ ಹೆಲ್ಮೆಟ್ಟನ್ನು ಮಲಗೋವಾಗಲು ಸಹ ತೆಗೆಯದೆ ಸೇಫ್ಟಿಯಾಗಿದ್ದಾರೆಂದು ಅವರ ಕಾರ್ ಡ್ರೈವರ್ ಎಣ್ಣೆ ಏಟಿನಲ್ಲಿ ಬಾರ್ ಸಪ್ಲೈಯರ್ ಜೊತೆಗೆ ಚರ್ಚೆ ನಡೆಸಿದ್ದಾರೆಂದು ಗುಪ್ತದಳದ ಮೂಲಗಳು ತಿಳಿಸಿವೆ.
ಇಲ್ಲಿಗೆ ಆಘಾತವಾಣಿ ವಾರ್ತೆಗಳು ಮುಕ್ತಾಯವಾಯಿತು. ಮತ್ತೆ ನಮ್ಮ ನಿಮ್ಮ ಬೇಟಿ ಮುಂದಿನವಾರ. ಅಲ್ಲೀತನಕ ನೀವೂ ನೆಮ್ದಿಯಾಗಿರಿ, ನಾವೂ ನೆಮ್ದಿಯಾಗಿರುತ್ತೇವೆ. ನಮಸ್ಕಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...