Homeನ್ಯಾಯ ಪಥಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ - ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

ಕರ್ನಾಟಕದಲ್ಲಿ ಎಷ್ಟು ಜಿಲ್ಲೆಗಳು? ಜಿಲ್ಲೆ – ಪದಮೂಲ, ಇತಿಹಾಸ : ಡೇಟಾಖೋಲಿ ಬೈ ಡೇಟಾಮ್ಯಾಟಿಕ್ಸ್

- Advertisement -
- Advertisement -

ಇವತ್ತು ಕೆಲವು ವಿಷಯಗಳನ್ನು ಪಾಯಿಂಟ್ ಶೀರ್ ಕಲಿಯೋಣು.

ಒಂದನೇ ಪಾಯಿಂಟು- ಸಂಖ್ಯೆ
ಕರ್ನಾಟಕ ರಾಜ್ಯದೊಳಗ 30 ಜಿಲ್ಲೆ ಅವ. 32 ಅಲ್ಲ. 34 ನೂ ಅಲ್ಲ. ಕೆಲವರು 34 ಏನು 43 ಮಾಡಬೇಕು ಅಂತ ಹೊಂಟಾರ. ಅದು ಬೇರೆ ವಿಷಯ.

ಎರಡನೇ ಪಾಯಿಂಟು-ಜಿಲ್ಲೆಗಳ ಪಟ್ಟಿ
ಕರ್ನಾಟಕದ ಜಿಲ್ಲೆಗಳ ಹೆಸರು ಈ ರೀತಿ ಇವೆ – ಬಾಗಲಕೋಟಿ, ಬೆಳಗಾವಿ, ವಿಜಯಪುರ (ಬಿಜಾಪುರ), ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ(ಕಾರವಾರ), ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಶಿವಮೊಗ್ಗ, ತುಮಕೂರು, ಬಳ್ಳಾರಿ, ಬೀದರ್, ಕಲಬುರ್ಗಿ (ಗುಲಬರ್ಗಾ), ಕೊಪ್ಪಳ, ರಾಯಚೂರು, ಯಾದಗಿರಿ, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ (ಮಂಗಳೂರು), ಹಾಸನ, ಕೊಡಗು (ಕೂರ್ಗು, ಮಡಿಕೇರಿ, ಮರಕೇರಾ), ಮಂಡ್ಯ, ಮೈಸೂರು, ಉಡುಪಿ

ಮೂರನೇ ಪಾಯಿಂಟು – ಆ ಪದಾ ಈ ಪದಾ
‘ಜಿಲ್ಲೆ’ ಎನ್ನುವುದು ಕನ್ನಡ ಪದವಾಗಲು ಅದೇನು ಕಬ್ಬಿನ ಜಲ್ಲೆ ಅಲ್ಲ. ಅದು ಜಿಲಾಃ ಎನ್ನುವ ಪರ್ಶಿಯನ್ ಅಥವಾ ಪಾರ್ಸಿ ಪದದಿಂದ ಬಂದ ಶಬ್ದ.

ನಮಗೆ ಗೊತ್ತಿಲ್ಲದಂಗನ ನಮ್ಮ ಅರಮನೀ ಕಂಬದಾಗ ನರಸಿಂಹಸ್ವಾಮಿ ಹೆಂಗ ಅವತಾರ ಹೆಂಗ ಇರತಾನೋ, ಹಂಗ ನಮ್ಮ ಖನ್ನಡ ಬಾಸೆಯೊಳಗ ಅಸಂಖ್ಯ ಪರ್ಶಿಯನ್ ಅಥವಾ ಪಾರ್ಸಿ ಪದಾ ಅವ. ಹಂಗನ ಇದೂ ಒಂದು ಪಾರ್ಸಿ ಪದ. “ಗಂಡಸರ ಲುಂಗಿ, ಹೆಂಗಸರು ಲುಂಗಿ, ಲಂಗೋಟಿ ಇವು ಯಾವುವೂ ಕನ್ನಡದವಲ್ಲ. ಅವೆಲ್ಲವೂ ಪಾರ್ಸಿ ಅಂತ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳ್ಯಾರಲ್ಲ, ಅದು ಖರೇನ. ಕನ್ನಡದ ಕಸ್ತೂರಿ ತೇಯುವಾಗ ಕೊರಡಿಗೆ ಅಂಟಿಕೊಂಡ ಗಂಧದ ವಾಸನಿಯ ಹಂಗ ಅವು ನಮ್ಮ ಭಾಷಾ ಸೇರಿಕೊಂಡು ಅದರ ಘಮಲು ಹೆಚ್ಚು ಆಗೇದ.

ನಮ್ಮ ಕಲ್ಪನಾ ಇಲ್ಲದಂಗ ಅವು ನಮ್ಮ ಮ್ಯಾಲೆ ಪ್ರಭಾವ ಬೀರ್ಯಾವು. ಬ್ಯಾರೆ ಎಲ್ಲಾ ಹೋಗಲಿ ಬಿಡಲಿ. ನಮ್ಮ ಜೀವನಾಧಾರ ಆಗಿರೋ `ನೀರು’ ಸಹಿತ ಫಾರ್ಸಿ. ಹೋಗಲಿ ಬಿಡ್ರಿ, ಅವು ಯಾವಾವು ಶಬ್ದಾ ಅನ್ನುವುದನ್ನು ಇನ್ನೊಮ್ಮೆ ನೋಡೋಣ.

ನಾಲ್ಕನೆಯ ಪಾಯಿಂಟು – ಇತಿಹಾಸ
ಸಾವಿರಾರು ವರ್ಷಗಳಿಂದ ಗ್ರಾಮ ಪಂಚಾಯಿತಿಯೇ ಭಾರತದಲ್ಲಿ ಆಡಳಿತದ ಕೇಂದ್ರವಾಗಿತ್ತು. ಸರಿ ಸುಮಾರು ಒಂದು ಸಾವಿರ ವರ್ಷದ ಹಿಂದೆ ಘುರಿಡ್ ರಾಜ ಮನೆತನದವರು ಭಾರತದ ಆಡಳಿತ ವನ್ನು ಕೈಗೆ ತೆಗೆದುಕೊಂಡಾಗ ಪ್ರತಿ ಪ್ರದೇಶಕ್ಕೊಬ್ಬ ಸರದಾರನನ್ನು ನೇಮಿಸಿದರು. ಇವರಲ್ಲಿ ಒಬ್ಬನಾದ ಕುತುಬ್ದೀನ ಐಬಕ್‍ನ ಅಧಿಕಾರಿಗಳು ಕೈಕೊಂಡ ಆಡಳಿತ ಸುಧಾರಣೆ ಅಂಗವಾಗಿ ಹುಟ್ಟಿದ್ದವೇ ಜಿಲಾಃ ಗಳು. ಇವುಗಳನ್ನು ನಂತರ ದೆಹಲಿ ಸುಲ್ತಾನರು, ದಖನ್ನಿನ ಬಹಮನಿಗಳು, ಮುಘಲರು, ಹಾಗೂ ಹೈದರಾಬಾದು ನಿಜಾಮರು ಆಡಳಿತ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡರು. ಹೈದರಾಬಾದಿನಲ್ಲಿ, `ನಿಜಾಮರು ಜಿಲ್ಲಾಗಳಿಂದ ರಾಜಧಾನಿಯವರೆಗೆ ಕೇಳಬೇಕಾದ್ದು ಸಂಗೀತದ ದನಿಯೊಂದೇ, ಷಿಕಾಯತ್ (ದೂರು) ಇಲ್ಲಿಗೆ ಬರಬೇಕಿಲ್ಲ. ಅಲ್ಲಲ್ಲಿಯೇ ಪರಿಹರಿಸಿಕೊಳ್ಳಬಹುದು’ ಎಂದು ಹೇಳುತ್ತಿದ್ದರು ಎಂಬ ಮಾತಿದೆ.

ಬ್ರಿಟಿಷರ ಕಾಲದಲ್ಲಿ ಕಾರ್ಯಾಂಗ ಹಾಗೂ ನ್ಯಾಯಾಂಗದ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ನೇಮಿಸಲಾಯಿತು. ಅವರಿಗೆ ಹೆಚ್ಚಿನ ಅಧಿಕಾರಗಳನ್ನು ಕೊಟ್ಟದಕ್ಕನ, ದೂರದ ಒಂಬತ್ತು ಸಾವಿರ ಕಿಲೋಮೀಟರು ದೂರದ ಲಂಡನ್ನಿನಿಂದ ಅವರಿಗೆ ಅಧಿಕಾರ ಚಲಾಯಿಸಲಿಕ್ಕೆ ಸಾಧ್ಯ ಆತು. ಸಿಂಗಾಪುರದ ಗಡಿಯಿಂದ ಆಫ್ಘಾನಿಸ್ತಾನದವರೆಗೂ ಹಬ್ಬಿದ್ದ ಅಂದಿನ ಭಾರತವನ್ನು ಆಳಲಿಕ್ಕೆ ಕೇವಲ ಎರಡು ಸಾವಿರ ಬಿಳಿಯ ಅಧಿಕಾರಿಗಳು ಇದ್ದರು. (ಸೇನೆ ಹಾಗೂ ಐಸಿಎಸ್ ಆಡಳಿತ ಸೇವೆ ಸೇರಿ).

ಐದನೆಯ ಪಾಯಿಂಟು- ಜಿಲ್ಲೆಯಲ್ಲಿ ಏನುಂಟು, ಏನಿಲ್ಲ?
ಜಿಲ್ಲೆ ಎನ್ನುವುದು ಒಂದು ಪ್ರದೇಶದ ಆಡಳಿತಾತ್ಮಕ ಮುಖ್ಯ ಕಚೇರಿಗಳನ್ನು ಹೊಂದಿರೋ ಊರು. ಅದರಾಗ ನಮ್ಮ ತೆರಿಗೆ ಹಣದಿಂದ ಕಟ್ಟಿದ ಇಟ್ಟಂಗಿ – ಸಿಮಿಂಟ್ ಕಟ್ಟಡಗಳಲ್ಲಿ ಇರುವ ಕಲ್ಲಿನ ಹೃದಯದ ಅಧಿಕಾರಿಗಳು ಕೂತಿರತಾರ. ಇವರು ಜನರ ಕೆಲಸ ಮಾಡೋಕಿಂತ ಜಾಸ್ತಿ ಜನರ ಪ್ರತಿನಿಧಿಗಳು ಎಂದು ಹೇಳಿಕೊಳ್ಳುವ ಪುಢಾರಿಗಳ ಕೆಲಸಾ ಮಾಡೋದ ಜಾಸ್ತಿ.

ಇಂತಿಪ್ಪ ಪುಢಾರಿಗಳು ಜನಾಸಕ್ತಿಗಾಗಿ ಹೆಚ್ಚಿನ ಜಿಲ್ಲೆ ಮಾಡಬೇಕು, ನಾನು ಇರೋ ಊರೇ ಜಿಲ್ಲೆ ಮುಖ್ಯ ಸ್ಥಾನ ಆಗಬೇಕು. ನಮ್ಮ ಮನಿ ಹಿಂದನ, ನಮ್ ಭಾವಮೈದುನನೇ ಜಿಲ್ಲಾಧಿಕಾರಿ ಆಗಬೇಕು ಅಂತ ಹೇಳಲಿಕ್ಕೆ ಹತ್ಯಾರಲ್ಲ, ಏನದರ ಮರ್ಮ? ಇದರ ಉತ್ತರ ಈ ಖೋಲಿಯೊಳಗ ಸಿಗೋದಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...