Homeನ್ಯಾಯ ಪಥ'ದೇಶವಿರೋಧಿ' ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

‘ದೇಶವಿರೋಧಿ’ ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

- Advertisement -
- Advertisement -

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು,
ಬದುಕು ಬೆಳಗುವ ದೀಪದಂತಿರಲಿ ಹೇ ದೇವದೇವ
ಕಳೆದು ಹೋಗಲಿ ಇಳೆಯ ಕತ್ತಲೆ,
ಹೊಳೆದು ಬೆಳಗಲಿ ಎಲ್ಲ ತಾವುಗಳು
ನನ್ನ ಕಾಂತಿಯಿಂದ.
ಸುಮಕುಸುಮಗಳು ಉದ್ಯಾನವ ಸಿಂಗರಿಸಿದಂತೆ
ಸೊಗಸಿಬಿಡಲೇ ನಾನೆನ್ನ ತಾಯ್ನೆಲವ ತಬ್ಬಿ ಹಬ್ಬಿ..
ಎನ್ನ ಜೀವದುಸಿರು ನೀನಾಗು ಎಲೆ ದೇವ,
ತಿಳಿವಿನ ದೀಪಕ್ಕೆಳೆಸುವ ಪತಂಗ ನಾನು
ಎನ್ನ ಇರವಿನ ಧ್ಯೇಯವಾಗಿಸು,
ವೃದ್ಧರು ದುಃಖಿತರು, ದೀನದರಿದ್ರರ ಸೇವೆಯನು.
ಹಿಡಿದೆತ್ತು ಅಂತರ್ಯಾಮಿಯೇ ನನ್ನನು ಜಗದ ಕೇಡಿನಿಂದ
ಉದ್ಧರಿಸು ಮುನ್ನಡೆಸು ಸಚ್ಚಾರಿತ್ರ್ಯದೆಡೆಗೆ

ಈ ಗೀತೆಯನ್ನು ಓದಿ, ಇದರ ಉರ್ದು ಮೂಲದ ಗಾಯನವನ್ನು ಆಲಿಸಿದ ನನಗೆ ಆಚಾರ್ಯ ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತಗಳು ಸಂಗ್ರಹದ ಪ್ರಸಿದ್ಧ ಪದ್ಯ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ನೆನಪಾಯಿತು. ಬಿ.ಎಂ.ಶ್ರೀ ಅವರ ಸೊಗಸಿನ ಅನುವಾದದ ಮಹಿಮೆ. ಮೂಲ ಕನ್ನಡದ್ದೇ ಎನ್ನುವಷ್ಟರಮಟ್ಟಿಗೆ ಈ ಗೀತೆ ಕನ್ನಡಿಗರಲ್ಲಿ ಜನಪ್ರಿಯ. ರತ್ನಮಾಲಾ ಪ್ರಕಾಶ್ ಅವರ ಸಿರಿಕಂಠದಲ್ಲಿ ಈ ಗೀತೆಯನ್ನು ಕೇಳಿ ಧ್ಯಾನಸ್ಥ ಸ್ಥಿತಿಗೆ ಜಾರದ ಮನಸುಗಳೇ ಇರಲಾರವು. ಇಂಗ್ಲೆಂಡಿನ ಕ್ರೈಸ್ತ ಸಂತ ಜಾನ್ ಹೆನ್ರಿ ನ್ಯೂಮನ್ 1833ರಲ್ಲಿ ರಚಿಸಿದ್ದ ಪ್ರಾರ್ಥನಾ ಗೀತೆಯಿದು ಎಂಬ ಸಂಗತಿ ಈಗಲೂ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇಗರ್ಜಿಗಳಲ್ಲಿ ಇಂದಿಗೂ ಈ ಇಂಗ್ಲಿಷ್ ಗೀತೆಯನ್ನು ಹಾಡಲಾಗುತ್ತದೆ.

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು… ಎಂಬ ಪದ್ಯದ ಉರ್ದು ಮೂಲ ಹೀಗಿದೆ-

‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ/ ಝಿಂದಗೀ ಶಂಮಾ ಕೀ ಸೂರತ್ ಹೋ ಖುದಾಯಾ ಮೇರೀ/ ದೂರ್ ದುನಿಯಾ ಕಾ ಮೇರೇ ದಮ್ ಸೇ ಅಂಧೇರಾ ಹೋ ಜಾಯೇ/ ಹರ್ ಜಗಾಹ ಮೇರೀ ಚಮಕನೇ ಸೇ ಉಜಾಲಾ ಹೋ ಜಾಯೇ/ ಹೋ ಮೇರೇ ದಮ್ ಸೇ ಯೂಂ ಹೀ ಮೇರೆ ವತನ್ ಕೀ ಝೀನತ್/ ಜಿಸ್ ತರಾಹ್ ಫೂಲ್ ಸೇ ಹೋತೀ ಹೈ ಚಮನ್ ಕೀ ಝೀನತ್/ ಝಿಂದಗೀ ಹೋ ಮೇರೀ ಪರವಾನೇ ಕೀ ಸೂರತ್ ಯಾರಬ್/ ಇಲ್ಮ್ ಕೀ ಶಂಮಾ ಸೇ ಹೋ ಮುಝಕೋ ಮೊಹೋಬ್ಬತ್ ಯಾರಬ್/ ಹೋ ಮೇರಾ ಕಾಮ್ ಗರೀಬೋಂ ಕೀ ಹಿಮಾಯತ್ ಕರನಾ/ ದರದಮಂದೋ ಸೇ ಝೀಂಫೋ ಸೇ ಮೊಹೊಬ್ಬತ್ ಕರನಾ/ ಮೇರೇ ಅಲ್ಲಾಹ ಬುರಾಯೀ ಸೇ ಬಚಾನಾ ಮುಝಕೋ/ ನೇಕ ಜೋ ರಾಹ ಉಸೀ ಪೆ ಚಲಾನಾ ಮುಝಕೋ/ ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’

ಈ ಉರ್ದು ಗೀತೆಯನ್ನು ನನ್ನ ತಿಳಿವಳಿಕೆಗೆ ನಿಲುಕಿದ ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ಓದುಗರ ಮುಂದೆ ಇರಿಸಿದ್ದೇನೆ. ಹೆಚ್ಚು ಬಲ್ಲವರು ಇನ್ನಷ್ಟು ಸೊಗಸಾಗಿ ಅನುವಾದ ಮಾಡಿಕೊಳ್ಳಬಹುದು.

ಈಗಲೂ ದೇಶದ ಲಕ್ಷಾಂತರ ಶಾಲೆಗಳಲ್ಲಿ ದಿನನಿತ್ಯ ಮತ್ತು ಸ್ವಾತಂತ್ರ್ಯೋತ್ಸವ ದಿನ ಹಾಗೂ ಗಣರಾಜ್ಯೋತ್ಸವದಂದು ಮೊಳಗುವ ಇನ್ನೊಂದು ಸುಂದರ ದೇಶಭಕ್ತಿ ಗೀತೆಯಿದೆ. ಅದು ‘ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ ಹಮಾರಾ….’

ಈ ಗೀತೆಯ ಬರೆದ ಕವಿಯೇ ‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’ (ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು…’) ಎಂಬ ಗೀತೆಯನ್ನೂ ಬರೆದಿದ್ದಾನೆ.

ಆತನ ಹೆಸರು ಅಲ್ಲಾಮ ಇಕ್ಬಾಲ್. 1902ರಲ್ಲಿ ಈ ಗೀತೆಯನ್ನು ಆತ ಬರೆದಿದ್ದ. ಸಾರೇ ಜಹಾಂ ಸೇ ಅಚ್ಛಾ ಬರೆದದ್ದು ಎರಡು ವರ್ಷಗಳ ನಂತರ 1904ರಲ್ಲಿ. ಹಿಂದೂಸ್ತಾನಿ ಬಚ್ಚೋಂ ಕಾ ಖೋಮಿ ಗೀತ್ ನ್ನು ಬರೆದದ್ದು 1905ರಲ್ಲಿ. ಈ ಕಾಲಘಟ್ಟದಲ್ಲಿ ಆತ ಅಪ್ಪಟ ಭಾರತೀಯ ರಾಷ್ಟ್ರವಾದಿಯಾಗಿದ್ದ. ಆನಂತರ ಆತ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಪಾಕಿಸ್ತಾನದ ರಾಷ್ಟ್ರಕವಿ ಎನಿಸಿಕೊಂಡದ್ದು ಹೌದು. ಆದರೆ ಲಬ್ ಪೇ ಆತೀ…ಗೀತೆಯಲ್ಲಿ ಬರುವ ‘ವತನ್’ (ಜನ್ಮಭೂಮಿ) ಪದವು ಭಾರತವನ್ನೇ ಉದ್ದೇಶಿಸಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಇಂದಿಗೂ ಮನದುಂಬಿ ಹಾಡುವ ಸಾರೇ ಜಹಾಂ ಸೇ ಅಚ್ಛಾ ಗೀತೆಯನ್ನು ಆತ ರಚಿಸಿದ್ದು ಲಬ್ ಪೇ ಆತೀ ಬರೆದ ಎರಡು ವರ್ಷಗಳ ನಂತರ ಎಂಬುದನ್ನು ಗಮನಿಸಬೇಕು.

ಯಾವ ಕೋನದಿಂದ ನೋಡಿದರೂ ಲಬ್ ಪೇ ಆತೀ ಹೈ ದುವಾ….ಧಾರ್ಮಿಕ ಗೀತೆ ಅಥವಾ ಮುಸ್ಲಿಂ ಪ್ರಾರ್ಥನೆ ಅಲ್ಲ. ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ…ಮುಸ್ಲಿಂ ಪ್ರಾರ್ಥನೆಯೆಂದು ಹೇಳುವುದು ಎಷ್ಟು ವಿಕೃತವೋ, ಲಬ್ ಪೇ ಆತೀ ಹೈ ದುವಾ…ಕ್ಕೆ ಮುಸ್ಲಿಂ ಪ್ರಾರ್ಥನೆಯ ಬಣ್ಣ ಹಚ್ಚುವುದೂ ಅಷ್ಟೇ ವಿಕೃತ ಆದೀತು.

ಇಷ್ಟೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉತ್ತರಪ್ರದೇಶದ ಪೀಲೀಭೀತ್ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಅಮಾನತು ಪ್ರಕರಣ. ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ಅವರು ಶಾಲೆಯಲ್ಲಿ ಮದರಸಾದ ಪ್ರಾರ್ಥನೆಯನ್ನು ಮಕ್ಕಳಿಂದ ಹಾಡಿಸುತ್ತಿದ್ದಾರೆ ಎಂಬುದಾಗಿ ವಿಶ್ವಹಿಂದು ಪರಿಷತ್ ಆರೋಪ ಮಾಡಿತ್ತು. ಅಲಿ ಅವರಿಂದ ವಿವರಣೆಯನ್ನೂ ಪಡೆಯದೆ ಜಿಲ್ಲಾಡಳಿತ ಆತನನ್ನು ಅಕ್ಟೋಬರ್ 14ರಂದು ಅಮಾನತಿನಲ್ಲಿ ಇರಿಸಿತು. ಲಬ್ ಪೇ ಆತೀ ಹೈ ದುವಾ ಗೀತೆಯು ಮದರಸಾ ಪ್ರಾರ್ಥನೆ, ಅದನ್ನು ಹಾಡಿಸುವುದು ದೇಶವಿರೋಧದ ಕೃತ್ಯ ಎಂದು ವಿ.ಹಿಂ.ಪ. ದೂರು ನೀಡಿತ್ತು.

ಪೀಲೀಭೀತ್ ಜಿಲ್ಲೆಯ ಈ ಶಾಲೆಯ ಮಕ್ಕಳು ನಿತ್ಯವೂ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ ಮತ್ತು ಸರಸ್ವತಿ ವಂದನಾ ವನ್ನೂ ವಾಚಿಸುತ್ತಿದ್ದಾರೆ, ವೋ ಶಕ್ತಿ ಹಮೇಂ ದೋ ದಯಾನಿಧೀ ಗೀತೆಯನ್ನೂ ಹಾಡುತ್ತಿದ್ದಾರೆ.

ತಮ್ಮ ಮುಖ್ಯೋಪಾಧ್ಯಾಯರನ್ನು ಈ ಶಾಲೆಯ ಮಕ್ಕಳು ಬಹುವಾಗಿ ಪ್ರೀತಿಸುತ್ತಿದ್ದರು. ಯಾಕೆಂದರೆ ಆತನೂ ಮಕ್ಕಳನ್ನು ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಸಂಬಳದ ಹಣ ಖರ್ಚು ಮಾಡಿ ಶಾಲೆಯ ಅಭಿವೃದ್ಧಿ ಮಾಡಿದ್ದರು. ಮಧ್ಯಾಹ್ನದ ಬಿಸಿಯೂಟದ ತರಕಾರಿಗೆ ತಾವೇ ಹಣ ನೀಡುತ್ತಿದ್ದರು. ಹೀಗಾಗಿ ತಮ್ಮ ಅಚ್ಚುಮೆಚ್ಚಿನ ಮೇಷ್ಟ್ರನ್ನು ಅಮಾನತಿನಲ್ಲಿ ಇರಿಸಿರುವ ಕ್ರಮವನ್ನು ಮಕ್ಕಳು ಪ್ರತಿಭಟಿಸಿದ್ದಾರೆ. ಕಳೆದ ಶುಕ್ರವಾರ ಶಾಲಾಮೈದಾನದಲ್ಲಿ ಸೇರಿದ್ದ ಮಕ್ಕಳು ಸಾಲುಗಳಲ್ಲಿ ನಿಂತು ಕೂಗಿದ ಘೋಷಣೆ- ದೇಶದ ರಕ್ಷಣೆ ಯಾರು ಮಾಡ್ತಾರೆ? ನಾವು ಮಾಡ್ತೇವೆ. ಹೇಗೆ ಮಾಡ್ತೇವೆ? ತನುವಿನಿಂದ ಮಾಡ್ತೇವೆ, ಮನಸಿನಿಂದ ಮಾಡ್ತೇವೆ, ಧನದಿಂದ ಮಾಡ್ತೇವೆ.

ಹತ್ತು ನಿಮಿಷ ಘೋಷಣೆ ಕೂಗಿ ಮನೆಯತ್ತ ಹೊರಟವು ಮಕ್ಕಳು. ತಮ್ಮ ಮೇಷ್ಟ್ರು ವಾಪಸು ಬರುವವರೆಗೆ ತಾವೂ ಶಾಲೆಗೆ ಬರುವುದಿಲ್ಲ ಎಂದವು. ಲಬ್ ಪೇ ಆತೀ ಹೈ ಗೀತೆಯನ್ನು ಹಾಡುವಂತೆ ಮತ್ತು ಹಾಡಿಸುವಂತೆ ನಾವೇ ಮೇಷ್ಟ್ರನ್ನ ಕೇಳಿಕೊಂಡೆವು. ದಿನ ಬಿಟ್ಟು ದಿನ ಹಾಡಲು ಅವರು ನಮಗೆ ಅನುಮತಿ ಕೊಟ್ಟರು ಎಂದು ಮಕ್ಕಳು ತಿಳಿಸಿವೆ. ಹಾಜರಾತಿ 150ರಿಂದ ಐದು ಹತ್ತಕ್ಕೆ ತಗ್ಗಿದೆ.

ತನ್ನ ತಪ್ಪಿನ ಅರಿವಾದಂತಿರುವ ಸರ್ಕಾರ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಅಲಿಯ ಅಮಾನತನ್ನು ಮಾನವೀಯತೆಯ ಆಧಾರದ ಮೇಲೆ ರದ್ದು ಮಾಡಲಾಗಿದೆ ಎಂದಿದೆ. ಆದರೆ ಅವರನ್ನು ಬೇರೆ ಶಾಲೆಗೆ ವರ್ಗ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....