Homeನ್ಯಾಯ ಪಥ'ದೇಶವಿರೋಧಿ' ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

‘ದೇಶವಿರೋಧಿ’ ಪ್ರಕರಣ ಎಂಬ ನಾಚಿಕೆಗೇಡು! : ಡಿ.ಉಮಾಪತಿ

- Advertisement -
- Advertisement -

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು,
ಬದುಕು ಬೆಳಗುವ ದೀಪದಂತಿರಲಿ ಹೇ ದೇವದೇವ
ಕಳೆದು ಹೋಗಲಿ ಇಳೆಯ ಕತ್ತಲೆ,
ಹೊಳೆದು ಬೆಳಗಲಿ ಎಲ್ಲ ತಾವುಗಳು
ನನ್ನ ಕಾಂತಿಯಿಂದ.
ಸುಮಕುಸುಮಗಳು ಉದ್ಯಾನವ ಸಿಂಗರಿಸಿದಂತೆ
ಸೊಗಸಿಬಿಡಲೇ ನಾನೆನ್ನ ತಾಯ್ನೆಲವ ತಬ್ಬಿ ಹಬ್ಬಿ..
ಎನ್ನ ಜೀವದುಸಿರು ನೀನಾಗು ಎಲೆ ದೇವ,
ತಿಳಿವಿನ ದೀಪಕ್ಕೆಳೆಸುವ ಪತಂಗ ನಾನು
ಎನ್ನ ಇರವಿನ ಧ್ಯೇಯವಾಗಿಸು,
ವೃದ್ಧರು ದುಃಖಿತರು, ದೀನದರಿದ್ರರ ಸೇವೆಯನು.
ಹಿಡಿದೆತ್ತು ಅಂತರ್ಯಾಮಿಯೇ ನನ್ನನು ಜಗದ ಕೇಡಿನಿಂದ
ಉದ್ಧರಿಸು ಮುನ್ನಡೆಸು ಸಚ್ಚಾರಿತ್ರ್ಯದೆಡೆಗೆ

ಈ ಗೀತೆಯನ್ನು ಓದಿ, ಇದರ ಉರ್ದು ಮೂಲದ ಗಾಯನವನ್ನು ಆಲಿಸಿದ ನನಗೆ ಆಚಾರ್ಯ ಬಿ.ಎಂ.ಶ್ರೀ. ಅವರ ಇಂಗ್ಲಿಷ್ ಗೀತಗಳು ಸಂಗ್ರಹದ ಪ್ರಸಿದ್ಧ ಪದ್ಯ ‘ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು’ ನೆನಪಾಯಿತು. ಬಿ.ಎಂ.ಶ್ರೀ ಅವರ ಸೊಗಸಿನ ಅನುವಾದದ ಮಹಿಮೆ. ಮೂಲ ಕನ್ನಡದ್ದೇ ಎನ್ನುವಷ್ಟರಮಟ್ಟಿಗೆ ಈ ಗೀತೆ ಕನ್ನಡಿಗರಲ್ಲಿ ಜನಪ್ರಿಯ. ರತ್ನಮಾಲಾ ಪ್ರಕಾಶ್ ಅವರ ಸಿರಿಕಂಠದಲ್ಲಿ ಈ ಗೀತೆಯನ್ನು ಕೇಳಿ ಧ್ಯಾನಸ್ಥ ಸ್ಥಿತಿಗೆ ಜಾರದ ಮನಸುಗಳೇ ಇರಲಾರವು. ಇಂಗ್ಲೆಂಡಿನ ಕ್ರೈಸ್ತ ಸಂತ ಜಾನ್ ಹೆನ್ರಿ ನ್ಯೂಮನ್ 1833ರಲ್ಲಿ ರಚಿಸಿದ್ದ ಪ್ರಾರ್ಥನಾ ಗೀತೆಯಿದು ಎಂಬ ಸಂಗತಿ ಈಗಲೂ ಬಹಳಷ್ಟು ಜನಕ್ಕೆ ತಿಳಿದಿಲ್ಲ. ಭಾರತವೂ ಸೇರಿದಂತೆ ವಿಶ್ವದಾದ್ಯಂತ ಇಗರ್ಜಿಗಳಲ್ಲಿ ಇಂದಿಗೂ ಈ ಇಂಗ್ಲಿಷ್ ಗೀತೆಯನ್ನು ಹಾಡಲಾಗುತ್ತದೆ.

ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು… ಎಂಬ ಪದ್ಯದ ಉರ್ದು ಮೂಲ ಹೀಗಿದೆ-

‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ/ ಝಿಂದಗೀ ಶಂಮಾ ಕೀ ಸೂರತ್ ಹೋ ಖುದಾಯಾ ಮೇರೀ/ ದೂರ್ ದುನಿಯಾ ಕಾ ಮೇರೇ ದಮ್ ಸೇ ಅಂಧೇರಾ ಹೋ ಜಾಯೇ/ ಹರ್ ಜಗಾಹ ಮೇರೀ ಚಮಕನೇ ಸೇ ಉಜಾಲಾ ಹೋ ಜಾಯೇ/ ಹೋ ಮೇರೇ ದಮ್ ಸೇ ಯೂಂ ಹೀ ಮೇರೆ ವತನ್ ಕೀ ಝೀನತ್/ ಜಿಸ್ ತರಾಹ್ ಫೂಲ್ ಸೇ ಹೋತೀ ಹೈ ಚಮನ್ ಕೀ ಝೀನತ್/ ಝಿಂದಗೀ ಹೋ ಮೇರೀ ಪರವಾನೇ ಕೀ ಸೂರತ್ ಯಾರಬ್/ ಇಲ್ಮ್ ಕೀ ಶಂಮಾ ಸೇ ಹೋ ಮುಝಕೋ ಮೊಹೋಬ್ಬತ್ ಯಾರಬ್/ ಹೋ ಮೇರಾ ಕಾಮ್ ಗರೀಬೋಂ ಕೀ ಹಿಮಾಯತ್ ಕರನಾ/ ದರದಮಂದೋ ಸೇ ಝೀಂಫೋ ಸೇ ಮೊಹೊಬ್ಬತ್ ಕರನಾ/ ಮೇರೇ ಅಲ್ಲಾಹ ಬುರಾಯೀ ಸೇ ಬಚಾನಾ ಮುಝಕೋ/ ನೇಕ ಜೋ ರಾಹ ಉಸೀ ಪೆ ಚಲಾನಾ ಮುಝಕೋ/ ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’

ಈ ಉರ್ದು ಗೀತೆಯನ್ನು ನನ್ನ ತಿಳಿವಳಿಕೆಗೆ ನಿಲುಕಿದ ಕನ್ನಡಕ್ಕೆ ತರ್ಜುಮೆ ಮಾಡಿ ಇಲ್ಲಿ ಓದುಗರ ಮುಂದೆ ಇರಿಸಿದ್ದೇನೆ. ಹೆಚ್ಚು ಬಲ್ಲವರು ಇನ್ನಷ್ಟು ಸೊಗಸಾಗಿ ಅನುವಾದ ಮಾಡಿಕೊಳ್ಳಬಹುದು.

ಈಗಲೂ ದೇಶದ ಲಕ್ಷಾಂತರ ಶಾಲೆಗಳಲ್ಲಿ ದಿನನಿತ್ಯ ಮತ್ತು ಸ್ವಾತಂತ್ರ್ಯೋತ್ಸವ ದಿನ ಹಾಗೂ ಗಣರಾಜ್ಯೋತ್ಸವದಂದು ಮೊಳಗುವ ಇನ್ನೊಂದು ಸುಂದರ ದೇಶಭಕ್ತಿ ಗೀತೆಯಿದೆ. ಅದು ‘ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ ಹಮಾರಾ….’

ಈ ಗೀತೆಯ ಬರೆದ ಕವಿಯೇ ‘ಲಬ್ ಪೇ ಆತೀ ಹೈ ದುವಾ ಬನ್ ಕೇ ತಮನ್ನಾ ಮೇರೀ’ (ಹಂಬಲವೇ ಪ್ರಾರ್ಥನೆಯಾಗಿ ತುಟಿಗೆ ಬರುತಿಹುದು…’) ಎಂಬ ಗೀತೆಯನ್ನೂ ಬರೆದಿದ್ದಾನೆ.

ಆತನ ಹೆಸರು ಅಲ್ಲಾಮ ಇಕ್ಬಾಲ್. 1902ರಲ್ಲಿ ಈ ಗೀತೆಯನ್ನು ಆತ ಬರೆದಿದ್ದ. ಸಾರೇ ಜಹಾಂ ಸೇ ಅಚ್ಛಾ ಬರೆದದ್ದು ಎರಡು ವರ್ಷಗಳ ನಂತರ 1904ರಲ್ಲಿ. ಹಿಂದೂಸ್ತಾನಿ ಬಚ್ಚೋಂ ಕಾ ಖೋಮಿ ಗೀತ್ ನ್ನು ಬರೆದದ್ದು 1905ರಲ್ಲಿ. ಈ ಕಾಲಘಟ್ಟದಲ್ಲಿ ಆತ ಅಪ್ಪಟ ಭಾರತೀಯ ರಾಷ್ಟ್ರವಾದಿಯಾಗಿದ್ದ. ಆನಂತರ ಆತ ಪ್ರತ್ಯೇಕ ಪಾಕಿಸ್ತಾನ ಬೇಡಿಕೆಯ ಹೋರಾಟದ ಮುಂಚೂಣಿಯಲ್ಲಿದ್ದ ಮತ್ತು ಪಾಕಿಸ್ತಾನದ ರಾಷ್ಟ್ರಕವಿ ಎನಿಸಿಕೊಂಡದ್ದು ಹೌದು. ಆದರೆ ಲಬ್ ಪೇ ಆತೀ…ಗೀತೆಯಲ್ಲಿ ಬರುವ ‘ವತನ್’ (ಜನ್ಮಭೂಮಿ) ಪದವು ಭಾರತವನ್ನೇ ಉದ್ದೇಶಿಸಿದ್ದು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ನಾವು ಇಂದಿಗೂ ಮನದುಂಬಿ ಹಾಡುವ ಸಾರೇ ಜಹಾಂ ಸೇ ಅಚ್ಛಾ ಗೀತೆಯನ್ನು ಆತ ರಚಿಸಿದ್ದು ಲಬ್ ಪೇ ಆತೀ ಬರೆದ ಎರಡು ವರ್ಷಗಳ ನಂತರ ಎಂಬುದನ್ನು ಗಮನಿಸಬೇಕು.

ಯಾವ ಕೋನದಿಂದ ನೋಡಿದರೂ ಲಬ್ ಪೇ ಆತೀ ಹೈ ದುವಾ….ಧಾರ್ಮಿಕ ಗೀತೆ ಅಥವಾ ಮುಸ್ಲಿಂ ಪ್ರಾರ್ಥನೆ ಅಲ್ಲ. ಸಾರೇ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ…ಮುಸ್ಲಿಂ ಪ್ರಾರ್ಥನೆಯೆಂದು ಹೇಳುವುದು ಎಷ್ಟು ವಿಕೃತವೋ, ಲಬ್ ಪೇ ಆತೀ ಹೈ ದುವಾ…ಕ್ಕೆ ಮುಸ್ಲಿಂ ಪ್ರಾರ್ಥನೆಯ ಬಣ್ಣ ಹಚ್ಚುವುದೂ ಅಷ್ಟೇ ವಿಕೃತ ಆದೀತು.

ಇಷ್ಟೆಲ್ಲವನ್ನೂ ಇಲ್ಲಿ ಪ್ರಸ್ತಾಪಿಸಿದ ಹಿನ್ನೆಲೆ ಉತ್ತರಪ್ರದೇಶದ ಪೀಲೀಭೀತ್ ಜಿಲ್ಲೆಯ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಅಮಾನತು ಪ್ರಕರಣ. ಮುಖ್ಯೋಪಾಧ್ಯಾಯ ಫುರ್ಖಾನ್ ಅಲಿ ಅವರು ಶಾಲೆಯಲ್ಲಿ ಮದರಸಾದ ಪ್ರಾರ್ಥನೆಯನ್ನು ಮಕ್ಕಳಿಂದ ಹಾಡಿಸುತ್ತಿದ್ದಾರೆ ಎಂಬುದಾಗಿ ವಿಶ್ವಹಿಂದು ಪರಿಷತ್ ಆರೋಪ ಮಾಡಿತ್ತು. ಅಲಿ ಅವರಿಂದ ವಿವರಣೆಯನ್ನೂ ಪಡೆಯದೆ ಜಿಲ್ಲಾಡಳಿತ ಆತನನ್ನು ಅಕ್ಟೋಬರ್ 14ರಂದು ಅಮಾನತಿನಲ್ಲಿ ಇರಿಸಿತು. ಲಬ್ ಪೇ ಆತೀ ಹೈ ದುವಾ ಗೀತೆಯು ಮದರಸಾ ಪ್ರಾರ್ಥನೆ, ಅದನ್ನು ಹಾಡಿಸುವುದು ದೇಶವಿರೋಧದ ಕೃತ್ಯ ಎಂದು ವಿ.ಹಿಂ.ಪ. ದೂರು ನೀಡಿತ್ತು.

ಪೀಲೀಭೀತ್ ಜಿಲ್ಲೆಯ ಈ ಶಾಲೆಯ ಮಕ್ಕಳು ನಿತ್ಯವೂ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ ಮತ್ತು ಸರಸ್ವತಿ ವಂದನಾ ವನ್ನೂ ವಾಚಿಸುತ್ತಿದ್ದಾರೆ, ವೋ ಶಕ್ತಿ ಹಮೇಂ ದೋ ದಯಾನಿಧೀ ಗೀತೆಯನ್ನೂ ಹಾಡುತ್ತಿದ್ದಾರೆ.

ತಮ್ಮ ಮುಖ್ಯೋಪಾಧ್ಯಾಯರನ್ನು ಈ ಶಾಲೆಯ ಮಕ್ಕಳು ಬಹುವಾಗಿ ಪ್ರೀತಿಸುತ್ತಿದ್ದರು. ಯಾಕೆಂದರೆ ಆತನೂ ಮಕ್ಕಳನ್ನು ಅಕ್ಕರೆಯಿಂದ ಕಾಣುತ್ತಿದ್ದರು. ತಮ್ಮ ಸಂಬಳದ ಹಣ ಖರ್ಚು ಮಾಡಿ ಶಾಲೆಯ ಅಭಿವೃದ್ಧಿ ಮಾಡಿದ್ದರು. ಮಧ್ಯಾಹ್ನದ ಬಿಸಿಯೂಟದ ತರಕಾರಿಗೆ ತಾವೇ ಹಣ ನೀಡುತ್ತಿದ್ದರು. ಹೀಗಾಗಿ ತಮ್ಮ ಅಚ್ಚುಮೆಚ್ಚಿನ ಮೇಷ್ಟ್ರನ್ನು ಅಮಾನತಿನಲ್ಲಿ ಇರಿಸಿರುವ ಕ್ರಮವನ್ನು ಮಕ್ಕಳು ಪ್ರತಿಭಟಿಸಿದ್ದಾರೆ. ಕಳೆದ ಶುಕ್ರವಾರ ಶಾಲಾಮೈದಾನದಲ್ಲಿ ಸೇರಿದ್ದ ಮಕ್ಕಳು ಸಾಲುಗಳಲ್ಲಿ ನಿಂತು ಕೂಗಿದ ಘೋಷಣೆ- ದೇಶದ ರಕ್ಷಣೆ ಯಾರು ಮಾಡ್ತಾರೆ? ನಾವು ಮಾಡ್ತೇವೆ. ಹೇಗೆ ಮಾಡ್ತೇವೆ? ತನುವಿನಿಂದ ಮಾಡ್ತೇವೆ, ಮನಸಿನಿಂದ ಮಾಡ್ತೇವೆ, ಧನದಿಂದ ಮಾಡ್ತೇವೆ.

ಹತ್ತು ನಿಮಿಷ ಘೋಷಣೆ ಕೂಗಿ ಮನೆಯತ್ತ ಹೊರಟವು ಮಕ್ಕಳು. ತಮ್ಮ ಮೇಷ್ಟ್ರು ವಾಪಸು ಬರುವವರೆಗೆ ತಾವೂ ಶಾಲೆಗೆ ಬರುವುದಿಲ್ಲ ಎಂದವು. ಲಬ್ ಪೇ ಆತೀ ಹೈ ಗೀತೆಯನ್ನು ಹಾಡುವಂತೆ ಮತ್ತು ಹಾಡಿಸುವಂತೆ ನಾವೇ ಮೇಷ್ಟ್ರನ್ನ ಕೇಳಿಕೊಂಡೆವು. ದಿನ ಬಿಟ್ಟು ದಿನ ಹಾಡಲು ಅವರು ನಮಗೆ ಅನುಮತಿ ಕೊಟ್ಟರು ಎಂದು ಮಕ್ಕಳು ತಿಳಿಸಿವೆ. ಹಾಜರಾತಿ 150ರಿಂದ ಐದು ಹತ್ತಕ್ಕೆ ತಗ್ಗಿದೆ.

ತನ್ನ ತಪ್ಪಿನ ಅರಿವಾದಂತಿರುವ ಸರ್ಕಾರ ಬಿದ್ದರೂ ಮೀಸೆ ಮಣ್ಣಾಗದು ಎಂಬಂತೆ ಅಲಿಯ ಅಮಾನತನ್ನು ಮಾನವೀಯತೆಯ ಆಧಾರದ ಮೇಲೆ ರದ್ದು ಮಾಡಲಾಗಿದೆ ಎಂದಿದೆ. ಆದರೆ ಅವರನ್ನು ಬೇರೆ ಶಾಲೆಗೆ ವರ್ಗ ಮಾಡಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...