Homeಅಂಕಣಗಳುಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್...

ಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್ ಮಾಡೆಲ್

- Advertisement -
- Advertisement -

2016ರ ನವೆಂಬರ್ 8ರಂದು ಪ್ರಧಾನಿ ಮೋದಿಯವರು ಏಕಾಏಕಿ 500 ರ ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು, ಡಿಸೆಂಬರ್ 30ರೊಳಗೆ ದೇಶದ ಪ್ರಜೆಗಳು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಹುಕುಂ ಹೊರಡಿಸಿದ್ದು ಈಗ ಹಳೆಯ ವಿಷಯ. ಈ ಕ್ರಮದಿಂದ ಕಪ್ಪುಹಣ ಮಾಯವಾಗುತ್ತದೆಂದೂ, ಭಯೋತ್ಪಾದನೆ ನಿಂತುಬಿಡುತ್ತದೆಂದೂ, ಭ್ರಷ್ಟಾಚಾರ ಕಡಿಮೆಯಾಗುವುದೆಂಬ ಪ್ರಚಾರವನ್ನು ನಂಬಿ, ನೋಟು ರದ್ದತಿಯಿಂದ ತಮಗಾದ ಎಲ್ಲ ತೊಂದರೆಗಳನ್ನು ಮರೆಯಲು ಪ್ರಯತ್ನಿಸಿದರು. ನೂರಕ್ಕಿಂತ ಹೆಚ್ಚು ಜನ ಬ್ಯಾಂಕಿನ ಎದುರುಗಡೆ ಕ್ಯೂನಲ್ಲಿ ನಿಂತಲ್ಲೇ ಪ್ರಾಣ ತೆತ್ತಾಗಲೂ ದೇಶದ ಜನ ಹೇಗೋ ಸಹಿಸಿಕೊಂಡರು. ಅದೊಂದು ಕೊಲ್ಯಾಟರಲ್ ಡ್ಯಾಮೇಜ್, ದೇಶಕ್ಕೆ ಇಷ್ಟು ತ್ಯಾಗ ಮಾಡಬೇಕು ಎಂಬ ವಾದಕ್ಕೆ ಬಹುತೇಕರು ತಲೆದೂಗಿದರು.
ದೇಶಕ್ಕಾಗಿ ಸಾಮಾನ್ಯ ಜನರೇ ಇಷ್ಟೆಲ್ಲಾ ಕಷ್ಟ ಪಡುತ್ತಿರುವಾಗ ಬ್ಯಾಂಕಿನ ಅಧಿಕಾರಿಗಳು ಇನ್ನೆಷ್ಟು ಕಷ್ಟ ಪಟ್ಟಿರಬಹುದು? ಬ್ಯಾಂಕ್ ಉದ್ಯೋಗಿಗಳು ಯಾವುದೇ ರಜೆ ಪಡೆಯದೇ ದಿನಕ್ಕೆ 12 ಗಂಟೆಗಳ ಕಾಲ ಎಡೆಬಿಡದೇ ದುಡಿದರು, ಒಬ್ಬ ನೌಕರನಂತೂ ಕೆಲಸದ ಒತ್ತಡದಲ್ಲೇ ಅಸುನೀಗಿದ. ಆದರೆ ಈ ನೋಟು ರದ್ದತಿಯ ಅವಧಿಯಲ್ಲಿ ಗುಜರಾತ್‍ನ ಬ್ಯಾಂಕುಗಳು ಸಲ್ಲಿಸಿದ ಸೇವೆ ಅಮೋಘ. ಅದರಲ್ಲೂ ಅಹ್ಮದಾಬಾದಿನಲ್ಲಿರುವ ಜಿಲ್ಲಾ ಸಹಕಾರೀ ಬ್ಯಾಂಕ್‍ನ ಆಡಳಿತ ವರ್ಗ ಮತ್ತು ಉದ್ಯೋಗಿಗಳಂತೂ ಆ ಮೊದಲ ಐದು ದಿನಗಳಲ್ಲಿ ಮಾಡಿದ ಸಾಧನೆ ಅತ್ಯದ್ಭುತ.
ಮಹಾರಾಷ್ಟ್ರದ ಮುಂಬಯಿಯಲ್ಲಿ ನೆಲೆಸಿರುವ ಮನೋರಂಜನ್ ಎಸ್ ರಾಯ್ ಎನ್ನುವ ಮಾಹಿತಿ ಹಕ್ಕು ಕಾರ್ಯಕರ್ತ ನೋಟು ರದ್ದತಿಯ ನಂತರದಲ್ಲಿ ಸಹಕಾರಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಹಿಂತಿರುಗಿ ಜಮೆಯಾದ ಹಳೆಯ ನೋಟುಗಳೆಷ್ಟು ಎಂದು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪ್ರóಶ್ನೆ ಕೇಳಿದ್ದರು. ಆ ಅಧಿಕೃತ ದಾಖಲೆಗಳ ಪ್ರಕಾರ ಜಿಲ್ಲಾ ಸಹಕಾರೀ ಬ್ಯಾಂಕುಗಳ ಪಟ್ಟಿಯಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಬ್ಯಾಂಕು ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್. ಕೇವಲ ಐದೇ ದಿನಗಳಲ್ಲಿ ಆ ಬ್ಯಾಂಕಿನಲ್ಲಿ ಜಮೆಯಾದ 500 ಮತ್ತು 1,000 ಮುಖಬೆಲೆಯ ಒಟ್ಟು ಮೊತ್ತ 745.59 ಕೋಟಿ! ಇಡೀ ದೇಶದ ಸಹಕಾರಿ ಬ್ಯಾಂಕುಗಳಲ್ಲೇ ಪ್ರಪ್ರಥಮ! ಅಂದಹಾಗೆ ಈ ಬ್ಯಾಂಕ್‍ನ ಡೈರೆಕ್ಟರ್ ಯಾರೂ ಅಂತ ತಿಳಿದಿದ್ದೀರಿ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸಾಕ್ಷಾತ್ ಅಮಿತ್ ಶಾ.
ಗುಜರಾತ್ ಮಾಡೆಲ್ ಎಂಬುದು ದೇಶಾದ್ಯಂತ ಫೇಮಸ್ ಆಗಿರೋ ಮಾತಲ್ಲವೆ? ಆದ್ದರಿಂದ ಎರಡನೇ ಸ್ಥಾನವನ್ನೂ ಅವರು ಯಾರಿಗೂ ಬಿಟ್ಟುಕೊಟ್ಟಿಲ್ಲ. ರಾಜಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಕಾರ್ಯಕ್ಷಮತೆಯಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ. ಆ ಐದು ದಿನಗಳಲ್ಲಿ ಅಲ್ಲಿ ಜಮೆ ಆದ ಮೊತ್ತ 693.19 ಕೋಟಿ ರೂಪಾಯಿಗಳು. ಅದರ ಹಾಲಿ ಛೇರ್‍ಮನ್ ಆಗಿರುವವರು ಜಯೇಶ್‍ಭಾಯಿ ವಿಟ್ಠಲ್‍ಭಾಯಿ ರಾದಾದಿಯಾ ಎನ್ನುವವರು. ಅವರು ಹಾಲಿ ಗುಜರಾತ್‍ನ ವಿಜಯ್ ರೂಪಾಣಿ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ. ಈ ರಾಜಕೋಟ್ ಬಿಜೆಪಿಯ ಭದ್ರಕೋಟೆ. ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ರಾಜಕೀಯ ಪ್ರವೇಶಿದ್ದು ಕೂಡ ಇದೇ ರಾಜಕೋಟ್‍ನಿಂದಲೇ. ಹೀಗಿರುವಾಗ ಗುಜರಾತಿನ ಇನ್ನಿತರ ಜಿಲ್ಲಾ ಸಹಕಾರೀ ಬ್ಯಾಂಕುಗಳೂ ಕೂಡ ಹಿಂದೆ ಬಿದ್ದಿಲ್ಲ. ಅಲ್ಲಿಯ ಹನ್ನೊಂದು ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಆ ಐದು ದಿನಗಳಲ್ಲಿ ಜಮಾ ಆದ ಒಟ್ಟು ಮೊತ್ತ 3,118 ಕೋಟಿಗಿಂತಲೂ ಹೆಚ್ಚು. ಈ 11 ಬ್ಯಾಂಕುಗಳ ನಾಯಕತ್ವದಲ್ಲಿ ಸ್ವತಃ ಬಿಜೆಪಿಯ ಮಂತ್ರಿಗಳು, ಸಂಸದರು ಹಾಗೂ ಶಾಸಕರೇ ಇದ್ದಾರೆ. ಆದರೆ ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಆಡಳಿತ ವರ್ಗ ಮತ್ತು ಉದ್ಯೋಗಿಗಳಿಗೆ ತಮ್ಮ ಕಾರ್ಯದಕ್ಷತೆಯನ್ನು ಮೆರೆಯಲು ಸಿಕ್ಕಿದ್ದು ಐದು ದಿನ ಮಾತ್ರ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿ ನವಂಬರ್ 14ರಂದು ರಿಜರ್ವ್ ಬ್ಯಾಂಕ್ ಆದೇಶ ಹೊರಡಿಸಿಬಿಟ್ಟಿತು. ರಿಜರ್ವ್ ಬ್ಯಾಂಕ್ ಕೊಟ್ಟ ಕಾರಣ ಸಹಕಾರಿ ಬ್ಯಾಂಕುಗಳ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬುದಾಗಿತ್ತು.
ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಐದು ದಿನಗಳ ಯಶೋಗಾಥೆಯನ್ನು ಸಹಿಸಲಾಗದ ಕೆಲವರು ಇಷ್ಟೊಂದು ಹಣ ಎಲ್ಲಿಂದ ಬಂತು? ಯಾರಿಗೆ ಸೇರಿದ್ದು ? ಎಂಬುದರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದರು. ಜಂಟಿ ಸದನ ಸಮಿತಿ ರಚನೆಯಾಗಲಿ ಎಂದು ಬೊಟ್ಟಿಟ್ಟರು. ಆದರೆ ರಿಜರ್ವ್ ಬ್ಯಾಂಕ್ ಆಗಲಿ, ಭ್ರಷ್ಟಾಚಾರದ ವಿರುದ್ಧ ವೀರಾವೇಶದಿಂದ ಹೋರಾಡುತ್ತಿದ್ದ ಪ್ರಧಾನಿಯವರಾಗಲಿ ಕ್ಯಾರೆ ಅನ್ನಲಿಲ್ಲ.
ಬದಲಿಗೆ, ಈ ಪ್ರಕರಣ ಬೆಳಕಿಗೆ ಬಂದ ಒಂದೇ ದಿನದಲ್ಲಿ ಮಿಂಚಿನ ವೇಗದಲ್ಲಿ ಬಂದ ಓಂಃಂಖಆ (ಓಚಿಣioಟಿಚಿಟ ಃಚಿಟಿಞ ಜಿoಡಿ ಂgಡಿiಛಿuಟಣuಡಿe ಚಿಟಿಜ ಖuಡಿಚಿಟ ಆeveಟoಠಿmeಟಿಣ) ಸದರಿ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡು ಬೆಂಬಲಕ್ಕೆ ಬಂದು ನಿಂತಿದೆ. ನಬಾರ್ಡ ಪ್ರಕಾರ ಇಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಅದರಲ್ಲೂ ಅಹ್ಮದಾಬಾದ್ ಬ್ಯಾಂಕಿನಲ್ಲಿ 100% ಶುದ್ಧವ್ಯವಹಾರ ನಡೆಸಲಾಗಿದೆಯಂತೆ. ಆದರೆ, ಸತ್ಯ ಏನೆಂದು ಎಲ್ಲರಿಗೂ ಗೊತ್ತು. ಹಾಗಾಗಿ ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ.

ಮಾದ್ಯಮಗಳ ಅಮಿತ್ ಶಾ ಪ್ರೇಮ !

ಆರ್.ಟಿ.ಐ. ಕಾರ್ಯಕರ್ತ ಮನೋರಂಜನ್ ರಾಯ್ ಈ ಸ್ಫೋಟಕ ಸುದ್ದಿ ಬಹಿರಂಗಪಡಿಸಿದ ನಂತರ ಅನೇಕ ಸುದ್ದಿ ಜಾಲತಾಣಗಳು, ಸುದ್ದಿವಾಹಿನಿಗಳು ಈ ಬಗ್ಗೆ ವರದಿ ಮಾಡಿದ್ದವು. ಸುದ್ದಿ ಪ್ರಕಟಿಸಿದವರಲ್ಲಿ ಫಸ್ರ್ಟಪೋಸ್ಟ್, ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್, ಟೈಮ್ಸ್ ನೌ, ನ್ಯೂಸ್18 ಮುಂತಾದ ಪ್ರಮುಖ ಸುದ್ದಿತಾಣಗಳೂ ಇದ್ದವು. ಆದರೆ ಈ ಸುದ್ದಿ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ಮೇಲೆ ಹೇಳಿದ ಸುದ್ದಿತಾಣಗಳು ಈ ವರದಿಯನ್ನು ತಮ್ಮ ಪೋರ್ಟಲ್‍ನಿಂದ ತೆಗೆದುಹಾಕಿಬಿಟ್ಟವು.
ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ತಪ್ಪುಗಳು ಆಗುವುದು ಸಹಜ, ಅದು ಸಂಪಾದಕರ ಗಮನಕ್ಕೆ ಬಂದಾಗ ತಿದ್ದುಪಡಿ ನೀಡುವುದು ಮತ್ತು ಕ್ಷಮಾಪಣೆ ಕೇಳುವುದು ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಈ ಜಾಲತಾಣಗಳು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸಂಬಂಧಿಸಿದ ಈ ಸುದ್ದಿಯನ್ನು ಯಾವುದೇ ಕಾರಣ ನೀಡದೇ ಏಕಾಏಕಿ ತೆಗೆದುಹಾಕಿವೆ. ಇವುಗಳಲ್ಲಿ ನ್ಯೂಸ್18.ಕಾಮ್ ಮತ್ತು ಫಸ್ರ್ಟಪೋಸ್ಟ್ ಜಾಲತಾಣಗಳು ಮುಕೇಶ್ ಅಂಬಾನಿಯ ರಿಲಾಯನ್ಸ್ ನೆಟ್‍ವರ್ಕ್ ಒಡೆತನದ ನೆಟ್‍ವರ್ಕ್18 ಕಂಪನಿಯ ಒಡೆತನದಲ್ಲಿವೆ. ಅಂಬಾನಿಗಳಿಗೂ ಪ್ರಧಾನಿ ಮೋದಿಯವರಿಗೂ ಖಾಸಾ ಖಾಸಾ ದೋಸ್ತಿ ಅಂತ ಬಲ್ಲವರ ಅಂಬೋಣ.
ಹೀಗೆ ಅಮಿತ್ ಶಾ ಮತ್ತು ಬಿಜೆಪಿಗೆ ಸಂಬಂಧಪಟ್ಟ ವಿಮರ್ಶಾತ್ಮಕವಾಗಿ ನೋಡುವ ಸುದ್ದಿಗಳನ್ನು ಈ ರೀತಿ ತೆಗೆದುಹಾಕುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2017 ಜುಲೈನಲ್ಲಿ ಅಮಿತ್ ಶಾ ಅವರ ಆಸ್ತಿಯಲ್ಲಿ 300% ಹೆಚ್ಚಳ ಎನ್ನುವ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ‘ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ’ ಯನ್ನು ಟೀಕಿಸುವ ಒಂದು ವರದಿಯನ್ನು ಅದೇ ಟೈಮಸ್ ಆಫ್ ಇಂಡಿಯ ಪತ್ರಿಕೆ 2017ರ ಸೆಪ್ಟೆಂಬರ್ 14ರಂದು ಪ್ರಕಟಿಸಿತ್ತು; ಮತ್ತೆ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿರುವ ವರದಿಯನ್ನು ಇದೇ ಮೇ ತಿಂಗಳಲ್ಲಿ ಟೈಮ್ಸ್ ಆಫ್ ಇಂಡಿಯ ಮತ್ತು ಎಕಾನಾಮಿಕ್ ಟೈಮ್ಸ್ ತೆಗೆದುಹಾಕಿದ್ದವು. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಸುಪುತ್ರ ಜಯ್ ಶಾ ಅವರ ಬಿಸಿನೆಸ್‍ನಲ್ಲಿ ಸಾವಿರಾರು ಪಟ್ಟು ಹೆಚ್ಚಳವಾದ ಸುದ್ದಿಯನ್ನು ತಡೆಗಟ್ಟಲು ಕೋರ್ಟಿನ ಮೊರೆ ಹೋಗಿದ್ದನ್ನು, ಆನಂತರ ಆ ಸುದ್ದಿ ಕಣ್ಮರೆಯಾಗಿದ್ದನ್ನೂ ಇಲ್ಲಿ ಸ್ಮರಿಸಬಹದು.
ಪ್ರಶ್ನೆ ಇಷ್ಟೆ. ಬಿಜೆಪಿ ಅಧ್ಯಕ್ಷ ಶ್ರೀ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದೆಂದೂ ಕೇಳರಿಯದ ರೀತಿಯಲ್ಲಿ ದೇಶವನ್ನು ಮುಂದೊಯ್ಯುವ ಘನಕಾರ್ಯ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದೇನೋ ಸರಿ, ಆದರೆ ಸತ್ಯ ಮುಂದಿಡುವ ಇಂಥಾ ವರದಿಗಳನ್ನು ತಡೆಹಿಡಿಯುವ, ತೆಗೆದುಹಾಕುವಂತಹ ಚಿಲ್ಲರೆ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ? ಏಕೆ ಮಾಡುತ್ತಿದ್ದಾರೆ?

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...