Homeಅಂಕಣಗಳುಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್...

ಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್ ಮಾಡೆಲ್

- Advertisement -
- Advertisement -

2016ರ ನವೆಂಬರ್ 8ರಂದು ಪ್ರಧಾನಿ ಮೋದಿಯವರು ಏಕಾಏಕಿ 500 ರ ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು, ಡಿಸೆಂಬರ್ 30ರೊಳಗೆ ದೇಶದ ಪ್ರಜೆಗಳು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಹುಕುಂ ಹೊರಡಿಸಿದ್ದು ಈಗ ಹಳೆಯ ವಿಷಯ. ಈ ಕ್ರಮದಿಂದ ಕಪ್ಪುಹಣ ಮಾಯವಾಗುತ್ತದೆಂದೂ, ಭಯೋತ್ಪಾದನೆ ನಿಂತುಬಿಡುತ್ತದೆಂದೂ, ಭ್ರಷ್ಟಾಚಾರ ಕಡಿಮೆಯಾಗುವುದೆಂಬ ಪ್ರಚಾರವನ್ನು ನಂಬಿ, ನೋಟು ರದ್ದತಿಯಿಂದ ತಮಗಾದ ಎಲ್ಲ ತೊಂದರೆಗಳನ್ನು ಮರೆಯಲು ಪ್ರಯತ್ನಿಸಿದರು. ನೂರಕ್ಕಿಂತ ಹೆಚ್ಚು ಜನ ಬ್ಯಾಂಕಿನ ಎದುರುಗಡೆ ಕ್ಯೂನಲ್ಲಿ ನಿಂತಲ್ಲೇ ಪ್ರಾಣ ತೆತ್ತಾಗಲೂ ದೇಶದ ಜನ ಹೇಗೋ ಸಹಿಸಿಕೊಂಡರು. ಅದೊಂದು ಕೊಲ್ಯಾಟರಲ್ ಡ್ಯಾಮೇಜ್, ದೇಶಕ್ಕೆ ಇಷ್ಟು ತ್ಯಾಗ ಮಾಡಬೇಕು ಎಂಬ ವಾದಕ್ಕೆ ಬಹುತೇಕರು ತಲೆದೂಗಿದರು.
ದೇಶಕ್ಕಾಗಿ ಸಾಮಾನ್ಯ ಜನರೇ ಇಷ್ಟೆಲ್ಲಾ ಕಷ್ಟ ಪಡುತ್ತಿರುವಾಗ ಬ್ಯಾಂಕಿನ ಅಧಿಕಾರಿಗಳು ಇನ್ನೆಷ್ಟು ಕಷ್ಟ ಪಟ್ಟಿರಬಹುದು? ಬ್ಯಾಂಕ್ ಉದ್ಯೋಗಿಗಳು ಯಾವುದೇ ರಜೆ ಪಡೆಯದೇ ದಿನಕ್ಕೆ 12 ಗಂಟೆಗಳ ಕಾಲ ಎಡೆಬಿಡದೇ ದುಡಿದರು, ಒಬ್ಬ ನೌಕರನಂತೂ ಕೆಲಸದ ಒತ್ತಡದಲ್ಲೇ ಅಸುನೀಗಿದ. ಆದರೆ ಈ ನೋಟು ರದ್ದತಿಯ ಅವಧಿಯಲ್ಲಿ ಗುಜರಾತ್‍ನ ಬ್ಯಾಂಕುಗಳು ಸಲ್ಲಿಸಿದ ಸೇವೆ ಅಮೋಘ. ಅದರಲ್ಲೂ ಅಹ್ಮದಾಬಾದಿನಲ್ಲಿರುವ ಜಿಲ್ಲಾ ಸಹಕಾರೀ ಬ್ಯಾಂಕ್‍ನ ಆಡಳಿತ ವರ್ಗ ಮತ್ತು ಉದ್ಯೋಗಿಗಳಂತೂ ಆ ಮೊದಲ ಐದು ದಿನಗಳಲ್ಲಿ ಮಾಡಿದ ಸಾಧನೆ ಅತ್ಯದ್ಭುತ.
ಮಹಾರಾಷ್ಟ್ರದ ಮುಂಬಯಿಯಲ್ಲಿ ನೆಲೆಸಿರುವ ಮನೋರಂಜನ್ ಎಸ್ ರಾಯ್ ಎನ್ನುವ ಮಾಹಿತಿ ಹಕ್ಕು ಕಾರ್ಯಕರ್ತ ನೋಟು ರದ್ದತಿಯ ನಂತರದಲ್ಲಿ ಸಹಕಾರಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಹಿಂತಿರುಗಿ ಜಮೆಯಾದ ಹಳೆಯ ನೋಟುಗಳೆಷ್ಟು ಎಂದು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪ್ರóಶ್ನೆ ಕೇಳಿದ್ದರು. ಆ ಅಧಿಕೃತ ದಾಖಲೆಗಳ ಪ್ರಕಾರ ಜಿಲ್ಲಾ ಸಹಕಾರೀ ಬ್ಯಾಂಕುಗಳ ಪಟ್ಟಿಯಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಬ್ಯಾಂಕು ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್. ಕೇವಲ ಐದೇ ದಿನಗಳಲ್ಲಿ ಆ ಬ್ಯಾಂಕಿನಲ್ಲಿ ಜಮೆಯಾದ 500 ಮತ್ತು 1,000 ಮುಖಬೆಲೆಯ ಒಟ್ಟು ಮೊತ್ತ 745.59 ಕೋಟಿ! ಇಡೀ ದೇಶದ ಸಹಕಾರಿ ಬ್ಯಾಂಕುಗಳಲ್ಲೇ ಪ್ರಪ್ರಥಮ! ಅಂದಹಾಗೆ ಈ ಬ್ಯಾಂಕ್‍ನ ಡೈರೆಕ್ಟರ್ ಯಾರೂ ಅಂತ ತಿಳಿದಿದ್ದೀರಿ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸಾಕ್ಷಾತ್ ಅಮಿತ್ ಶಾ.
ಗುಜರಾತ್ ಮಾಡೆಲ್ ಎಂಬುದು ದೇಶಾದ್ಯಂತ ಫೇಮಸ್ ಆಗಿರೋ ಮಾತಲ್ಲವೆ? ಆದ್ದರಿಂದ ಎರಡನೇ ಸ್ಥಾನವನ್ನೂ ಅವರು ಯಾರಿಗೂ ಬಿಟ್ಟುಕೊಟ್ಟಿಲ್ಲ. ರಾಜಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಕಾರ್ಯಕ್ಷಮತೆಯಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ. ಆ ಐದು ದಿನಗಳಲ್ಲಿ ಅಲ್ಲಿ ಜಮೆ ಆದ ಮೊತ್ತ 693.19 ಕೋಟಿ ರೂಪಾಯಿಗಳು. ಅದರ ಹಾಲಿ ಛೇರ್‍ಮನ್ ಆಗಿರುವವರು ಜಯೇಶ್‍ಭಾಯಿ ವಿಟ್ಠಲ್‍ಭಾಯಿ ರಾದಾದಿಯಾ ಎನ್ನುವವರು. ಅವರು ಹಾಲಿ ಗುಜರಾತ್‍ನ ವಿಜಯ್ ರೂಪಾಣಿ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ. ಈ ರಾಜಕೋಟ್ ಬಿಜೆಪಿಯ ಭದ್ರಕೋಟೆ. ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ರಾಜಕೀಯ ಪ್ರವೇಶಿದ್ದು ಕೂಡ ಇದೇ ರಾಜಕೋಟ್‍ನಿಂದಲೇ. ಹೀಗಿರುವಾಗ ಗುಜರಾತಿನ ಇನ್ನಿತರ ಜಿಲ್ಲಾ ಸಹಕಾರೀ ಬ್ಯಾಂಕುಗಳೂ ಕೂಡ ಹಿಂದೆ ಬಿದ್ದಿಲ್ಲ. ಅಲ್ಲಿಯ ಹನ್ನೊಂದು ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಆ ಐದು ದಿನಗಳಲ್ಲಿ ಜಮಾ ಆದ ಒಟ್ಟು ಮೊತ್ತ 3,118 ಕೋಟಿಗಿಂತಲೂ ಹೆಚ್ಚು. ಈ 11 ಬ್ಯಾಂಕುಗಳ ನಾಯಕತ್ವದಲ್ಲಿ ಸ್ವತಃ ಬಿಜೆಪಿಯ ಮಂತ್ರಿಗಳು, ಸಂಸದರು ಹಾಗೂ ಶಾಸಕರೇ ಇದ್ದಾರೆ. ಆದರೆ ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಆಡಳಿತ ವರ್ಗ ಮತ್ತು ಉದ್ಯೋಗಿಗಳಿಗೆ ತಮ್ಮ ಕಾರ್ಯದಕ್ಷತೆಯನ್ನು ಮೆರೆಯಲು ಸಿಕ್ಕಿದ್ದು ಐದು ದಿನ ಮಾತ್ರ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿ ನವಂಬರ್ 14ರಂದು ರಿಜರ್ವ್ ಬ್ಯಾಂಕ್ ಆದೇಶ ಹೊರಡಿಸಿಬಿಟ್ಟಿತು. ರಿಜರ್ವ್ ಬ್ಯಾಂಕ್ ಕೊಟ್ಟ ಕಾರಣ ಸಹಕಾರಿ ಬ್ಯಾಂಕುಗಳ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬುದಾಗಿತ್ತು.
ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಐದು ದಿನಗಳ ಯಶೋಗಾಥೆಯನ್ನು ಸಹಿಸಲಾಗದ ಕೆಲವರು ಇಷ್ಟೊಂದು ಹಣ ಎಲ್ಲಿಂದ ಬಂತು? ಯಾರಿಗೆ ಸೇರಿದ್ದು ? ಎಂಬುದರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದರು. ಜಂಟಿ ಸದನ ಸಮಿತಿ ರಚನೆಯಾಗಲಿ ಎಂದು ಬೊಟ್ಟಿಟ್ಟರು. ಆದರೆ ರಿಜರ್ವ್ ಬ್ಯಾಂಕ್ ಆಗಲಿ, ಭ್ರಷ್ಟಾಚಾರದ ವಿರುದ್ಧ ವೀರಾವೇಶದಿಂದ ಹೋರಾಡುತ್ತಿದ್ದ ಪ್ರಧಾನಿಯವರಾಗಲಿ ಕ್ಯಾರೆ ಅನ್ನಲಿಲ್ಲ.
ಬದಲಿಗೆ, ಈ ಪ್ರಕರಣ ಬೆಳಕಿಗೆ ಬಂದ ಒಂದೇ ದಿನದಲ್ಲಿ ಮಿಂಚಿನ ವೇಗದಲ್ಲಿ ಬಂದ ಓಂಃಂಖಆ (ಓಚಿಣioಟಿಚಿಟ ಃಚಿಟಿಞ ಜಿoಡಿ ಂgಡಿiಛಿuಟಣuಡಿe ಚಿಟಿಜ ಖuಡಿಚಿಟ ಆeveಟoಠಿmeಟಿಣ) ಸದರಿ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡು ಬೆಂಬಲಕ್ಕೆ ಬಂದು ನಿಂತಿದೆ. ನಬಾರ್ಡ ಪ್ರಕಾರ ಇಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಅದರಲ್ಲೂ ಅಹ್ಮದಾಬಾದ್ ಬ್ಯಾಂಕಿನಲ್ಲಿ 100% ಶುದ್ಧವ್ಯವಹಾರ ನಡೆಸಲಾಗಿದೆಯಂತೆ. ಆದರೆ, ಸತ್ಯ ಏನೆಂದು ಎಲ್ಲರಿಗೂ ಗೊತ್ತು. ಹಾಗಾಗಿ ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ.

ಮಾದ್ಯಮಗಳ ಅಮಿತ್ ಶಾ ಪ್ರೇಮ !

ಆರ್.ಟಿ.ಐ. ಕಾರ್ಯಕರ್ತ ಮನೋರಂಜನ್ ರಾಯ್ ಈ ಸ್ಫೋಟಕ ಸುದ್ದಿ ಬಹಿರಂಗಪಡಿಸಿದ ನಂತರ ಅನೇಕ ಸುದ್ದಿ ಜಾಲತಾಣಗಳು, ಸುದ್ದಿವಾಹಿನಿಗಳು ಈ ಬಗ್ಗೆ ವರದಿ ಮಾಡಿದ್ದವು. ಸುದ್ದಿ ಪ್ರಕಟಿಸಿದವರಲ್ಲಿ ಫಸ್ರ್ಟಪೋಸ್ಟ್, ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್, ಟೈಮ್ಸ್ ನೌ, ನ್ಯೂಸ್18 ಮುಂತಾದ ಪ್ರಮುಖ ಸುದ್ದಿತಾಣಗಳೂ ಇದ್ದವು. ಆದರೆ ಈ ಸುದ್ದಿ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ಮೇಲೆ ಹೇಳಿದ ಸುದ್ದಿತಾಣಗಳು ಈ ವರದಿಯನ್ನು ತಮ್ಮ ಪೋರ್ಟಲ್‍ನಿಂದ ತೆಗೆದುಹಾಕಿಬಿಟ್ಟವು.
ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ತಪ್ಪುಗಳು ಆಗುವುದು ಸಹಜ, ಅದು ಸಂಪಾದಕರ ಗಮನಕ್ಕೆ ಬಂದಾಗ ತಿದ್ದುಪಡಿ ನೀಡುವುದು ಮತ್ತು ಕ್ಷಮಾಪಣೆ ಕೇಳುವುದು ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಈ ಜಾಲತಾಣಗಳು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸಂಬಂಧಿಸಿದ ಈ ಸುದ್ದಿಯನ್ನು ಯಾವುದೇ ಕಾರಣ ನೀಡದೇ ಏಕಾಏಕಿ ತೆಗೆದುಹಾಕಿವೆ. ಇವುಗಳಲ್ಲಿ ನ್ಯೂಸ್18.ಕಾಮ್ ಮತ್ತು ಫಸ್ರ್ಟಪೋಸ್ಟ್ ಜಾಲತಾಣಗಳು ಮುಕೇಶ್ ಅಂಬಾನಿಯ ರಿಲಾಯನ್ಸ್ ನೆಟ್‍ವರ್ಕ್ ಒಡೆತನದ ನೆಟ್‍ವರ್ಕ್18 ಕಂಪನಿಯ ಒಡೆತನದಲ್ಲಿವೆ. ಅಂಬಾನಿಗಳಿಗೂ ಪ್ರಧಾನಿ ಮೋದಿಯವರಿಗೂ ಖಾಸಾ ಖಾಸಾ ದೋಸ್ತಿ ಅಂತ ಬಲ್ಲವರ ಅಂಬೋಣ.
ಹೀಗೆ ಅಮಿತ್ ಶಾ ಮತ್ತು ಬಿಜೆಪಿಗೆ ಸಂಬಂಧಪಟ್ಟ ವಿಮರ್ಶಾತ್ಮಕವಾಗಿ ನೋಡುವ ಸುದ್ದಿಗಳನ್ನು ಈ ರೀತಿ ತೆಗೆದುಹಾಕುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2017 ಜುಲೈನಲ್ಲಿ ಅಮಿತ್ ಶಾ ಅವರ ಆಸ್ತಿಯಲ್ಲಿ 300% ಹೆಚ್ಚಳ ಎನ್ನುವ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ‘ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ’ ಯನ್ನು ಟೀಕಿಸುವ ಒಂದು ವರದಿಯನ್ನು ಅದೇ ಟೈಮಸ್ ಆಫ್ ಇಂಡಿಯ ಪತ್ರಿಕೆ 2017ರ ಸೆಪ್ಟೆಂಬರ್ 14ರಂದು ಪ್ರಕಟಿಸಿತ್ತು; ಮತ್ತೆ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿರುವ ವರದಿಯನ್ನು ಇದೇ ಮೇ ತಿಂಗಳಲ್ಲಿ ಟೈಮ್ಸ್ ಆಫ್ ಇಂಡಿಯ ಮತ್ತು ಎಕಾನಾಮಿಕ್ ಟೈಮ್ಸ್ ತೆಗೆದುಹಾಕಿದ್ದವು. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಸುಪುತ್ರ ಜಯ್ ಶಾ ಅವರ ಬಿಸಿನೆಸ್‍ನಲ್ಲಿ ಸಾವಿರಾರು ಪಟ್ಟು ಹೆಚ್ಚಳವಾದ ಸುದ್ದಿಯನ್ನು ತಡೆಗಟ್ಟಲು ಕೋರ್ಟಿನ ಮೊರೆ ಹೋಗಿದ್ದನ್ನು, ಆನಂತರ ಆ ಸುದ್ದಿ ಕಣ್ಮರೆಯಾಗಿದ್ದನ್ನೂ ಇಲ್ಲಿ ಸ್ಮರಿಸಬಹದು.
ಪ್ರಶ್ನೆ ಇಷ್ಟೆ. ಬಿಜೆಪಿ ಅಧ್ಯಕ್ಷ ಶ್ರೀ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದೆಂದೂ ಕೇಳರಿಯದ ರೀತಿಯಲ್ಲಿ ದೇಶವನ್ನು ಮುಂದೊಯ್ಯುವ ಘನಕಾರ್ಯ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದೇನೋ ಸರಿ, ಆದರೆ ಸತ್ಯ ಮುಂದಿಡುವ ಇಂಥಾ ವರದಿಗಳನ್ನು ತಡೆಹಿಡಿಯುವ, ತೆಗೆದುಹಾಕುವಂತಹ ಚಿಲ್ಲರೆ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ? ಏಕೆ ಮಾಡುತ್ತಿದ್ದಾರೆ?

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಾಜಾ| ಮನೆ ಅವಶೇಷದಲ್ಲಿ ತನ್ನ ಕುಟುಂಬದ ಸದಸ್ಯರ ಮೂಳೆ ಹುಡುಕಿದ ವ್ಯಕ್ತಿ

ಗಾಜಾ ನಗರದಲ್ಲಿದ್ದ ತನ್ನ ಮನೆಯ ಅವಶೇಷಗಳ ರಾಶಿಯ ನಡುವೆ ಕುಳಿತಿರುವ ಮಹಮೂದ್ ಹಮ್ಮದ್, ದೊಡ್ಡ ಜರಡಿಯಲ್ಲಿ ಮಣ್ಣನ್ನು ತೆಗೆದು ಅಲ್ಲಾಡಿಸಿ, ಅದನ್ನು ಹೊರಗೆ ಎಸೆಯುವ ಮೊದಲು ಎಚ್ಚರಿಕೆಯಿಂದ ನೋಡುವ ವಿಡಯೊ ನೋಡಿದವರ ಮನಕಲಕುತ್ತದೆ....

ವಿಪಕ್ಷಗಳಿಂದ ಅವಿಶ್ವಾಸ ನೋಟಿಸ್: ಕಲಾಪಕ್ಕೆ ಗೈರಾದ ಲೋಕಸಭೆ ಸ್ಪೀಕರ್ ಓಂ ಬಿರ್ಲಾ

'ಪಕ್ಷಪಾತ'ದ ಆರೋಪ ಹೊರಿಸಿ ವಿಪಕ್ಷಗಳು 'ಅವಿಶ್ವಾಸ ನೋಟಿಸ್' ನೀಡಿರುವ ಹಿನ್ನೆಲೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಲಾಪದಿಂದ ದೂರ ಉಳಿದಿದ್ದಾರೆ. ಬುಧವಾರ (ಫೆ.11) ಸ್ಪೀಕರ್ ಪೀಠದಲ್ಲಿ ಹಿರಿಯ ಬಿಜೆಪಿ ಸಂಸದರಾದ ಪಿ.ಸಿ ಮೋಹನ್...

ಕೆನಡಾ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಶಾಲೆಯಲ್ಲಿ ಗುಂಡಿನ ದಾಳಿ: ಬಂದೂಕುಧಾರಿ ಸೇರಿ ಕನಿಷ್ಠ 10 ಸಾವು, 27 ಮಂದಿಗೆ ಗಾಯ

ಬ್ರಿಟಿಷ್ ಕೊಲಂಬಿಯಾದ ಪೀಸ್ ಪ್ರದೇಶದಲ್ಲಿರುವ ಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನ ಗುಂಡಿನ ದಾಳಿ ನಡೆದಿದ್ದು, ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದು, 27 ಮಂದಿಗೆ ಗಂಭೀರ ಗಾಯಗಳಾಗಿರುವುದಾಗಿ ವರದಿಯಾಗಿದೆ. ಶಂಕಿತ ಎಂದು ನಂಬಲಾದವರ ಮನೆಯಲ್ಲಿ ಇನ್ನೂ...

ಉತ್ತರ ಪ್ರದೇಶ| ಭೂಮಿ ವಿವಾದದಲ್ಲಿ ದಲಿತ ಮಹಿಳೆಯರ ಮೇಲೆ ಹಲ್ಲೆ- ಜಾತಿ ನಿಂದನೆ

ಉತ್ತರ ಪ್ರದೇಶದ ಮಾಂಡಾ ಪೊಲೀಸ್ ಠಾಣೆ ವ್ಯಾಪ್ತಿಯ ಹಂಡಿಯಾ ಗ್ರಾಮದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಭೂ ವಿವಾದ ಭಾನುವಾರ ಹಿಂಸಾಚಾರಕ್ಕೆ ತಿರುಗಿದೆ. ಪ್ರಬಲ ಜಾತಿ ಜನರು ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಿದ್ದು, ಪೊಲೀಸರು...

ಒಡಿಶಾ| ಸಹಾಯಕಿಯಾಗಿ ದಲಿತ ಮಹಿಳೆ ನೇಮಕ; ಮೂರು ತಿಂಗಳ ಕಾಲ ಮುಚ್ಚಿದ ಅಂಗನವಾಡಿ

ಭಾರತೀಯ ಸಮಾಜದಲ್ಲಿ ಆಳವಾಗಿ ಈಗಲೂ ಬೇರೂರಿರುವ ಜಾತಿ ಪೂರ್ವಾಗ್ರಹದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಒಡಿಶಾ ರಾಜ್ಯದ ಕೇಂದ್ರಪಾರ ಜಿಲ್ಲೆಯ ರಾಜನಗರ ಬ್ಲಾಕ್‌ನ ಹಳ್ಳಿಯ ನಿವಾಸಿಗಳು ಸುಮಾರು ಮೂರು ತಿಂಗಳ ಹಿಂದೆ, ದಲಿತ...

ಆತ್ಮಕಥೆ ಜಟಾಪಟಿ: ನಕಲಿ ಪುಸ್ತಕ ಬಳಸಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ರಾಹುಲ್ ಕ್ಷಮೆಯಾಚಿಸಬೇಕು: ಬಿಜೆಪಿ ಒತ್ತಾಯ

ನವದೆಹಲಿ: ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ತಮ್ಮ ಆತ್ಮಚರಿತ್ರೆ "ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ" ಪ್ರಕಾಶಕರು ಬಿಡುಗಡೆ ಮಾಡಿದ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕೆ ರಾಹುಲ್ ಗಾಂಧಿ ಅವರ ಮುಖ...

ಆತ್ಮಕಥೆ ಜಟಾಪಟಿ : ಅಂದು ಪುಸ್ತಕ ಪ್ರಿ- ಆರ್ಡರ್ ಮಾಡಿ ಎಂದಿದ್ದ ನರವಾಣೆ, ಇಂದು ಪ್ರಕಟವೇ ಆಗಿಲ್ಲ ಎನ್ನುತ್ತಿದ್ದಾರೆ

ಕಳೆದ ಹತ್ತು ದಿನಗಳಿಂದ ದೇಶದಾದ್ಯಂತ ಚರ್ಚೆಯಲ್ಲಿರುವ ತನ್ನ 'ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ' ಆತ್ಮಕಥೆಯ ಕುರಿತು ಮಾಜಿ ಭೂ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ ಮೌನ ಮುರಿದಿದ್ದಾರೆ. "ಪುಸ್ತಕದ ಮುದ್ರಿತ ಅಥವಾ...

ಗೌರವ್ ಗೊಗೊಯ್ ಸಹಿತ ಮೂವರು ಕಾಂಗ್ರೆಸ್ ನಾಯಕರ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಸ್ಸಾಂ ಸಿಎಂ

ಕಾಂಗ್ರೆಸ್ ನಾಯಕರಾದ ಜಿತೇಂದ್ರ ಸಿಂಗ್, ಭೂಪೇಶ್ ಬಘೇಲ್ ಮತ್ತು ಗೌರವ್ ಗೊಗೊಯ್ ವಿರುದ್ದ 500 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ. "ಪತ್ರಿಕಾಗೋಷ್ಠಿಯ ಮೂಲಕ...

ಕೇರಳದಲ್ಲಿ ಸರ್ಕಾರ ಬದಲಾವಣೆಗೆ ಕವಿ ಸಚ್ಚಿದಾನಂದನ್ ಕರೆಗೆ ಎಡಪಕ್ಷಗಳ ತೀವ್ರ ವಿರೋಧ; ಇದು ಸಾರ್ವಜನಿಕ ಭಾವನೆ ಎಂದ ವಿಪಕ್ಷಗಳು

ಕೇರಳದಲ್ಲಿ ನಿರಂತರ ಆಡಳಿತ ಅಪೇಕ್ಷಣೀಯವಲ್ಲ ಮತ್ತು ಅಧಿಕಾರವು ರಾಜಕೀಯ ರಂಗಗಳ ನಡುವೆ ಪರ್ಯಾಯವಾಗಿರಬೇಕು ಎಂದು ಹಿರಿಯ ಕವಿ ಮತ್ತು ಕೇರಳ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೆ. ಸಚ್ಚಿದಾನಂದನ್ ಹೇಳಿದ್ದಾರೆ. ಈ ಹೇಳಿಕೆ ಆಡಳಿತಾರೂಢ...

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಣೆ; ದೀಪಕ್ ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿ ಬಂಧನ

ಹಿಂದುತ್ವ ಗುಂಪಿನಿಂದ ಮುಸ್ಲಿಂ ವ್ಯಕ್ತಿ ರಕ್ಷಿಸಿದ್ದ ಜಿಮ್ ಮಾಲೀಕ ದೀಪಕ್ ಕುಮಾರ್ (ಮೊಹಮ್ಮದ್ ದೀಪಕ್) ಅವರನ್ನು ಕೊಂದವರಿಗೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದ ವ್ಯಕ್ತಿಯನ್ನು ಉತ್ತರಾಖಂಡ ಪೊಲೀಸರು ಸೋಮವಾರ (ಫೆ.9) ಬಂಧಿಸಿದ್ದಾರೆ. ಬಿಹಾರದ...