Homeಅಂಕಣಗಳುಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್...

ಐದೇ ದಿನದಲ್ಲಿ ಶಾ ಅಧಿಕಾರದ ಡಿಸಿಸಿ ಬ್ಯಾಂಕ್‍ಗಳಲ್ಲಿ 3118 ಕೋಟಿ ರೂ. ಜಮೆ ಇದು ಗುಜರಾತ್ ಮಾಡೆಲ್

- Advertisement -
- Advertisement -

2016ರ ನವೆಂಬರ್ 8ರಂದು ಪ್ರಧಾನಿ ಮೋದಿಯವರು ಏಕಾಏಕಿ 500 ರ ಮತ್ತು 1,000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು, ಡಿಸೆಂಬರ್ 30ರೊಳಗೆ ದೇಶದ ಪ್ರಜೆಗಳು ತಮ್ಮಲ್ಲಿದ್ದ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ಹುಕುಂ ಹೊರಡಿಸಿದ್ದು ಈಗ ಹಳೆಯ ವಿಷಯ. ಈ ಕ್ರಮದಿಂದ ಕಪ್ಪುಹಣ ಮಾಯವಾಗುತ್ತದೆಂದೂ, ಭಯೋತ್ಪಾದನೆ ನಿಂತುಬಿಡುತ್ತದೆಂದೂ, ಭ್ರಷ್ಟಾಚಾರ ಕಡಿಮೆಯಾಗುವುದೆಂಬ ಪ್ರಚಾರವನ್ನು ನಂಬಿ, ನೋಟು ರದ್ದತಿಯಿಂದ ತಮಗಾದ ಎಲ್ಲ ತೊಂದರೆಗಳನ್ನು ಮರೆಯಲು ಪ್ರಯತ್ನಿಸಿದರು. ನೂರಕ್ಕಿಂತ ಹೆಚ್ಚು ಜನ ಬ್ಯಾಂಕಿನ ಎದುರುಗಡೆ ಕ್ಯೂನಲ್ಲಿ ನಿಂತಲ್ಲೇ ಪ್ರಾಣ ತೆತ್ತಾಗಲೂ ದೇಶದ ಜನ ಹೇಗೋ ಸಹಿಸಿಕೊಂಡರು. ಅದೊಂದು ಕೊಲ್ಯಾಟರಲ್ ಡ್ಯಾಮೇಜ್, ದೇಶಕ್ಕೆ ಇಷ್ಟು ತ್ಯಾಗ ಮಾಡಬೇಕು ಎಂಬ ವಾದಕ್ಕೆ ಬಹುತೇಕರು ತಲೆದೂಗಿದರು.
ದೇಶಕ್ಕಾಗಿ ಸಾಮಾನ್ಯ ಜನರೇ ಇಷ್ಟೆಲ್ಲಾ ಕಷ್ಟ ಪಡುತ್ತಿರುವಾಗ ಬ್ಯಾಂಕಿನ ಅಧಿಕಾರಿಗಳು ಇನ್ನೆಷ್ಟು ಕಷ್ಟ ಪಟ್ಟಿರಬಹುದು? ಬ್ಯಾಂಕ್ ಉದ್ಯೋಗಿಗಳು ಯಾವುದೇ ರಜೆ ಪಡೆಯದೇ ದಿನಕ್ಕೆ 12 ಗಂಟೆಗಳ ಕಾಲ ಎಡೆಬಿಡದೇ ದುಡಿದರು, ಒಬ್ಬ ನೌಕರನಂತೂ ಕೆಲಸದ ಒತ್ತಡದಲ್ಲೇ ಅಸುನೀಗಿದ. ಆದರೆ ಈ ನೋಟು ರದ್ದತಿಯ ಅವಧಿಯಲ್ಲಿ ಗುಜರಾತ್‍ನ ಬ್ಯಾಂಕುಗಳು ಸಲ್ಲಿಸಿದ ಸೇವೆ ಅಮೋಘ. ಅದರಲ್ಲೂ ಅಹ್ಮದಾಬಾದಿನಲ್ಲಿರುವ ಜಿಲ್ಲಾ ಸಹಕಾರೀ ಬ್ಯಾಂಕ್‍ನ ಆಡಳಿತ ವರ್ಗ ಮತ್ತು ಉದ್ಯೋಗಿಗಳಂತೂ ಆ ಮೊದಲ ಐದು ದಿನಗಳಲ್ಲಿ ಮಾಡಿದ ಸಾಧನೆ ಅತ್ಯದ್ಭುತ.
ಮಹಾರಾಷ್ಟ್ರದ ಮುಂಬಯಿಯಲ್ಲಿ ನೆಲೆಸಿರುವ ಮನೋರಂಜನ್ ಎಸ್ ರಾಯ್ ಎನ್ನುವ ಮಾಹಿತಿ ಹಕ್ಕು ಕಾರ್ಯಕರ್ತ ನೋಟು ರದ್ದತಿಯ ನಂತರದಲ್ಲಿ ಸಹಕಾರಿ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳಿಗೆ ಹಿಂತಿರುಗಿ ಜಮೆಯಾದ ಹಳೆಯ ನೋಟುಗಳೆಷ್ಟು ಎಂದು ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಪ್ರóಶ್ನೆ ಕೇಳಿದ್ದರು. ಆ ಅಧಿಕೃತ ದಾಖಲೆಗಳ ಪ್ರಕಾರ ಜಿಲ್ಲಾ ಸಹಕಾರೀ ಬ್ಯಾಂಕುಗಳ ಪಟ್ಟಿಯಲ್ಲಿ ಎಲ್ಲಕ್ಕಿಂತ ಮುಂಚೂಣಿಯಲ್ಲಿದ್ದ ಬ್ಯಾಂಕು ಅಹ್ಮದಾಬಾದ್ ಜಿಲ್ಲಾ ಸಹಕಾರಿ ಬ್ಯಾಂಕ್. ಕೇವಲ ಐದೇ ದಿನಗಳಲ್ಲಿ ಆ ಬ್ಯಾಂಕಿನಲ್ಲಿ ಜಮೆಯಾದ 500 ಮತ್ತು 1,000 ಮುಖಬೆಲೆಯ ಒಟ್ಟು ಮೊತ್ತ 745.59 ಕೋಟಿ! ಇಡೀ ದೇಶದ ಸಹಕಾರಿ ಬ್ಯಾಂಕುಗಳಲ್ಲೇ ಪ್ರಪ್ರಥಮ! ಅಂದಹಾಗೆ ಈ ಬ್ಯಾಂಕ್‍ನ ಡೈರೆಕ್ಟರ್ ಯಾರೂ ಅಂತ ತಿಳಿದಿದ್ದೀರಿ. ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಸಾಕ್ಷಾತ್ ಅಮಿತ್ ಶಾ.
ಗುಜರಾತ್ ಮಾಡೆಲ್ ಎಂಬುದು ದೇಶಾದ್ಯಂತ ಫೇಮಸ್ ಆಗಿರೋ ಮಾತಲ್ಲವೆ? ಆದ್ದರಿಂದ ಎರಡನೇ ಸ್ಥಾನವನ್ನೂ ಅವರು ಯಾರಿಗೂ ಬಿಟ್ಟುಕೊಟ್ಟಿಲ್ಲ. ರಾಜಕೋಟ್ ಜಿಲ್ಲಾ ಸಹಕಾರಿ ಬ್ಯಾಂಕ್ ಕಾರ್ಯಕ್ಷಮತೆಯಲ್ಲಿ ಎರಡನೇ ಸ್ಥಾನದಲ್ಲಿ ನಿಂತಿದೆ. ಆ ಐದು ದಿನಗಳಲ್ಲಿ ಅಲ್ಲಿ ಜಮೆ ಆದ ಮೊತ್ತ 693.19 ಕೋಟಿ ರೂಪಾಯಿಗಳು. ಅದರ ಹಾಲಿ ಛೇರ್‍ಮನ್ ಆಗಿರುವವರು ಜಯೇಶ್‍ಭಾಯಿ ವಿಟ್ಠಲ್‍ಭಾಯಿ ರಾದಾದಿಯಾ ಎನ್ನುವವರು. ಅವರು ಹಾಲಿ ಗುಜರಾತ್‍ನ ವಿಜಯ್ ರೂಪಾಣಿ ಸರಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದಾರೆ. ಈ ರಾಜಕೋಟ್ ಬಿಜೆಪಿಯ ಭದ್ರಕೋಟೆ. ನರೇಂದ್ರ ಮೋದಿಯವರು ಪ್ರಥಮ ಬಾರಿಗೆ ರಾಜಕೀಯ ಪ್ರವೇಶಿದ್ದು ಕೂಡ ಇದೇ ರಾಜಕೋಟ್‍ನಿಂದಲೇ. ಹೀಗಿರುವಾಗ ಗುಜರಾತಿನ ಇನ್ನಿತರ ಜಿಲ್ಲಾ ಸಹಕಾರೀ ಬ್ಯಾಂಕುಗಳೂ ಕೂಡ ಹಿಂದೆ ಬಿದ್ದಿಲ್ಲ. ಅಲ್ಲಿಯ ಹನ್ನೊಂದು ಜಿಲ್ಲಾ ಸಹಕಾರಿ ಬ್ಯಾಂಕುಗಳಲ್ಲಿ ಆ ಐದು ದಿನಗಳಲ್ಲಿ ಜಮಾ ಆದ ಒಟ್ಟು ಮೊತ್ತ 3,118 ಕೋಟಿಗಿಂತಲೂ ಹೆಚ್ಚು. ಈ 11 ಬ್ಯಾಂಕುಗಳ ನಾಯಕತ್ವದಲ್ಲಿ ಸ್ವತಃ ಬಿಜೆಪಿಯ ಮಂತ್ರಿಗಳು, ಸಂಸದರು ಹಾಗೂ ಶಾಸಕರೇ ಇದ್ದಾರೆ. ಆದರೆ ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಆಡಳಿತ ವರ್ಗ ಮತ್ತು ಉದ್ಯೋಗಿಗಳಿಗೆ ತಮ್ಮ ಕಾರ್ಯದಕ್ಷತೆಯನ್ನು ಮೆರೆಯಲು ಸಿಕ್ಕಿದ್ದು ಐದು ದಿನ ಮಾತ್ರ. ಜಿಲ್ಲಾ ಸಹಕಾರಿ ಬ್ಯಾಂಕುಗಳು ಹಳೆಯ ನೋಟುಗಳನ್ನು ಸ್ವೀಕರಿಸುವುದನ್ನು ನಿರ್ಬಂಧಿಸಿ ನವಂಬರ್ 14ರಂದು ರಿಜರ್ವ್ ಬ್ಯಾಂಕ್ ಆದೇಶ ಹೊರಡಿಸಿಬಿಟ್ಟಿತು. ರಿಜರ್ವ್ ಬ್ಯಾಂಕ್ ಕೊಟ್ಟ ಕಾರಣ ಸಹಕಾರಿ ಬ್ಯಾಂಕುಗಳ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿ ಪರಿವರ್ತಿಸಲಾಗುತ್ತಿದೆ ಎಂಬುದಾಗಿತ್ತು.
ಗುಜರಾತ್‍ನ ಸಹಕಾರಿ ಬ್ಯಾಂಕುಗಳ ಐದು ದಿನಗಳ ಯಶೋಗಾಥೆಯನ್ನು ಸಹಿಸಲಾಗದ ಕೆಲವರು ಇಷ್ಟೊಂದು ಹಣ ಎಲ್ಲಿಂದ ಬಂತು? ಯಾರಿಗೆ ಸೇರಿದ್ದು ? ಎಂಬುದರ ಕುರಿತು ತನಿಖೆಯಾಗಬೇಕೆಂದು ಆಗ್ರಹಿಸಿದರು. ಜಂಟಿ ಸದನ ಸಮಿತಿ ರಚನೆಯಾಗಲಿ ಎಂದು ಬೊಟ್ಟಿಟ್ಟರು. ಆದರೆ ರಿಜರ್ವ್ ಬ್ಯಾಂಕ್ ಆಗಲಿ, ಭ್ರಷ್ಟಾಚಾರದ ವಿರುದ್ಧ ವೀರಾವೇಶದಿಂದ ಹೋರಾಡುತ್ತಿದ್ದ ಪ್ರಧಾನಿಯವರಾಗಲಿ ಕ್ಯಾರೆ ಅನ್ನಲಿಲ್ಲ.
ಬದಲಿಗೆ, ಈ ಪ್ರಕರಣ ಬೆಳಕಿಗೆ ಬಂದ ಒಂದೇ ದಿನದಲ್ಲಿ ಮಿಂಚಿನ ವೇಗದಲ್ಲಿ ಬಂದ ಓಂಃಂಖಆ (ಓಚಿಣioಟಿಚಿಟ ಃಚಿಟಿಞ ಜಿoಡಿ ಂgಡಿiಛಿuಟಣuಡಿe ಚಿಟಿಜ ಖuಡಿಚಿಟ ಆeveಟoಠಿmeಟಿಣ) ಸದರಿ ಬ್ಯಾಂಕುಗಳ ಕಾರ್ಯಕ್ಷಮತೆಯನ್ನು ಮೆಚ್ಚಿಕೊಂಡು ಬೆಂಬಲಕ್ಕೆ ಬಂದು ನಿಂತಿದೆ. ನಬಾರ್ಡ ಪ್ರಕಾರ ಇಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಅದರಲ್ಲೂ ಅಹ್ಮದಾಬಾದ್ ಬ್ಯಾಂಕಿನಲ್ಲಿ 100% ಶುದ್ಧವ್ಯವಹಾರ ನಡೆಸಲಾಗಿದೆಯಂತೆ. ಆದರೆ, ಸತ್ಯ ಏನೆಂದು ಎಲ್ಲರಿಗೂ ಗೊತ್ತು. ಹಾಗಾಗಿ ಹೆಚ್ಚು ಬರೆಯುವ ಅವಶ್ಯಕತೆಯಿಲ್ಲ.

ಮಾದ್ಯಮಗಳ ಅಮಿತ್ ಶಾ ಪ್ರೇಮ !

ಆರ್.ಟಿ.ಐ. ಕಾರ್ಯಕರ್ತ ಮನೋರಂಜನ್ ರಾಯ್ ಈ ಸ್ಫೋಟಕ ಸುದ್ದಿ ಬಹಿರಂಗಪಡಿಸಿದ ನಂತರ ಅನೇಕ ಸುದ್ದಿ ಜಾಲತಾಣಗಳು, ಸುದ್ದಿವಾಹಿನಿಗಳು ಈ ಬಗ್ಗೆ ವರದಿ ಮಾಡಿದ್ದವು. ಸುದ್ದಿ ಪ್ರಕಟಿಸಿದವರಲ್ಲಿ ಫಸ್ರ್ಟಪೋಸ್ಟ್, ನ್ಯೂ ಇಂಡಿಯನ್ ಎಕ್ಸ್‍ಪ್ರೆಸ್, ಟೈಮ್ಸ್ ನೌ, ನ್ಯೂಸ್18 ಮುಂತಾದ ಪ್ರಮುಖ ಸುದ್ದಿತಾಣಗಳೂ ಇದ್ದವು. ಆದರೆ ಈ ಸುದ್ದಿ ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ಮೇಲೆ ಹೇಳಿದ ಸುದ್ದಿತಾಣಗಳು ಈ ವರದಿಯನ್ನು ತಮ್ಮ ಪೋರ್ಟಲ್‍ನಿಂದ ತೆಗೆದುಹಾಕಿಬಿಟ್ಟವು.
ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ತಪ್ಪುಗಳು ಆಗುವುದು ಸಹಜ, ಅದು ಸಂಪಾದಕರ ಗಮನಕ್ಕೆ ಬಂದಾಗ ತಿದ್ದುಪಡಿ ನೀಡುವುದು ಮತ್ತು ಕ್ಷಮಾಪಣೆ ಕೇಳುವುದು ನಡೆದುಕೊಂಡು ಬಂದಿರುವ ವಾಡಿಕೆ. ಆದರೆ ಈ ಜಾಲತಾಣಗಳು ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಸಂಬಂಧಿಸಿದ ಈ ಸುದ್ದಿಯನ್ನು ಯಾವುದೇ ಕಾರಣ ನೀಡದೇ ಏಕಾಏಕಿ ತೆಗೆದುಹಾಕಿವೆ. ಇವುಗಳಲ್ಲಿ ನ್ಯೂಸ್18.ಕಾಮ್ ಮತ್ತು ಫಸ್ರ್ಟಪೋಸ್ಟ್ ಜಾಲತಾಣಗಳು ಮುಕೇಶ್ ಅಂಬಾನಿಯ ರಿಲಾಯನ್ಸ್ ನೆಟ್‍ವರ್ಕ್ ಒಡೆತನದ ನೆಟ್‍ವರ್ಕ್18 ಕಂಪನಿಯ ಒಡೆತನದಲ್ಲಿವೆ. ಅಂಬಾನಿಗಳಿಗೂ ಪ್ರಧಾನಿ ಮೋದಿಯವರಿಗೂ ಖಾಸಾ ಖಾಸಾ ದೋಸ್ತಿ ಅಂತ ಬಲ್ಲವರ ಅಂಬೋಣ.
ಹೀಗೆ ಅಮಿತ್ ಶಾ ಮತ್ತು ಬಿಜೆಪಿಗೆ ಸಂಬಂಧಪಟ್ಟ ವಿಮರ್ಶಾತ್ಮಕವಾಗಿ ನೋಡುವ ಸುದ್ದಿಗಳನ್ನು ಈ ರೀತಿ ತೆಗೆದುಹಾಕುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. 2017 ಜುಲೈನಲ್ಲಿ ಅಮಿತ್ ಶಾ ಅವರ ಆಸ್ತಿಯಲ್ಲಿ 300% ಹೆಚ್ಚಳ ಎನ್ನುವ ಸುದ್ದಿಯನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ‘ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ’ ಯನ್ನು ಟೀಕಿಸುವ ಒಂದು ವರದಿಯನ್ನು ಅದೇ ಟೈಮಸ್ ಆಫ್ ಇಂಡಿಯ ಪತ್ರಿಕೆ 2017ರ ಸೆಪ್ಟೆಂಬರ್ 14ರಂದು ಪ್ರಕಟಿಸಿತ್ತು; ಮತ್ತೆ ಕೆಲವೇ ಗಂಟೆಗಳಲ್ಲಿ ತೆಗೆದುಹಾಕಿತ್ತು. ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿರುವ ವರದಿಯನ್ನು ಇದೇ ಮೇ ತಿಂಗಳಲ್ಲಿ ಟೈಮ್ಸ್ ಆಫ್ ಇಂಡಿಯ ಮತ್ತು ಎಕಾನಾಮಿಕ್ ಟೈಮ್ಸ್ ತೆಗೆದುಹಾಕಿದ್ದವು. ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರ ಸುಪುತ್ರ ಜಯ್ ಶಾ ಅವರ ಬಿಸಿನೆಸ್‍ನಲ್ಲಿ ಸಾವಿರಾರು ಪಟ್ಟು ಹೆಚ್ಚಳವಾದ ಸುದ್ದಿಯನ್ನು ತಡೆಗಟ್ಟಲು ಕೋರ್ಟಿನ ಮೊರೆ ಹೋಗಿದ್ದನ್ನು, ಆನಂತರ ಆ ಸುದ್ದಿ ಕಣ್ಮರೆಯಾಗಿದ್ದನ್ನೂ ಇಲ್ಲಿ ಸ್ಮರಿಸಬಹದು.
ಪ್ರಶ್ನೆ ಇಷ್ಟೆ. ಬಿಜೆಪಿ ಅಧ್ಯಕ್ಷ ಶ್ರೀ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹಿಂದೆಂದೂ ಕೇಳರಿಯದ ರೀತಿಯಲ್ಲಿ ದೇಶವನ್ನು ಮುಂದೊಯ್ಯುವ ಘನಕಾರ್ಯ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬುದೇನೋ ಸರಿ, ಆದರೆ ಸತ್ಯ ಮುಂದಿಡುವ ಇಂಥಾ ವರದಿಗಳನ್ನು ತಡೆಹಿಡಿಯುವ, ತೆಗೆದುಹಾಕುವಂತಹ ಚಿಲ್ಲರೆ ಕೆಲಸಗಳನ್ನು ಯಾರು ಮಾಡುತ್ತಿದ್ದಾರೆ? ಏಕೆ ಮಾಡುತ್ತಿದ್ದಾರೆ?

– ರಾಜಶೇಖರ್ ಅಕ್ಕಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...