Homeಚಳವಳಿಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಈ ಧರ್ಮದವರು ನಮಗೆ ಪಾಠ ಬೋಧಿಸುವುದು ಬೇಡ: ಬನಾರಸ್ ವಿ.ವಿ.ಯಲ್ಲಿ ABVPಯ ತಗಾದೆ

ಇನ್ನೂ ಪಾಠ ಆರಂಭಿಸದ ಮುಸ್ಲಿಂ ಸಂಸ್ಕೃತ ಪ್ರೊಫೆಸರ್ ವಿರುದ್ಧ ಬನಾರಸ್ ಹಿಂದೂ ವಿ.ವಿ.ಯಲ್ಲಿ ಪ್ರತಿಭಟನೆ!!!! ಇದು ಎಬಿವಿಪಿ-ಆರೆಸ್ಸೆಸ್‌ನ ಕೋಮುವಾದಿ ಪ್ರಹಸನ!

- Advertisement -
- Advertisement -

ಕೃಪೆ: ದಿ ಕ್ವಿಂಟ್‌

ಐಶ್ವರ್ಯ ಎಸ್. ಅಯ್ಯರ್

ಅನುವಾದ: ನಿಖಿಲ್ ಕೋಲ್ಪೆ

ಇದನ್ನು ಪಕ್ಕಾ ರಾಜಕೀಯ ಪ್ರೇರಿತ ಕೋಮುವಾದ ಎನ್ನದೇ ಬೇರೆ ದಾರಿಯೇ ಇಲ್ಲ. ಇನ್ನೂ ಪಾಠವನ್ನೇ ಮಾಡದ, ಪರಿಚಯವೇ ಆಗದ ಹೊಸ ಸಂಸ್ಕೃತ ಪ್ರಾಧ್ಯಾಪಕರೊಬ್ಬರ ವಿರುದ್ಧ ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾರಣ ಅವರು ಮುಸ್ಲಿಂ ಎಂಬುದು ಮಾತ್ರ!

“ನೀವು ನನಗೊಂದು ಅವಕಾಶ ಕೊಡಿ. ಆಗ ನಿಮ್ಮ ಪ್ರತಿಭಟನೆಗೆ ಅಗತ್ಯವೇ ಇಲ್ಲವೆಂದು ನಿಮಗೆ ತಿಳಿಯಲೂ ಬಹುದು” ಹೀಗೆಂದು ಉತ್ತರ ಪ್ರದೇಶದ ಬನಾರಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್‌ಯು)ದ ವಿದ್ಯಾರ್ಥಿಗಳಿಗೆ ಮನವಿ ಮಾಡಿದವರು ರಾಜಸ್ಥಾನದ ಜೈಪುರ ಜಿಲ್ಲೆಯವರಾದ 28ರ ಹರೆಯದ ಫಿರೋಜ್ ಖಾನ್.

ಅವರು ನವೆಂಬರ್ 7ರಂದು ಇಲ್ಲಿ ಬಂದಿಳಿದಿದ್ದರು. ಆದರೆ, ಹಿಂದಿನ ದಿನವೇ ಅವರ ಇಮೇಲ್ ಬಾಕ್ಸಿಗೆ ಅವರನ್ನು ಬಿಎಚ್‌ಯುವಿನ ಸಹಾಯಕ ಸಂಸ್ಕೃತ ಪ್ರಾಧ್ಯಾಪಕರಾಗಿ ನಿಯುಕ್ತಿಗೊಳಿಸಿದ ಪತ್ರ ತಲಪಿತ್ತು. ಆಗಲೇ ಬಿಜೆಪಿಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದರು. ಆದುದರಿಂದ, ದೇಶದ ಪ್ರತಿಷ್ಟಿತ ಮತ್ತು ಹಳೆಯ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡುವ ಅವರ ಕಾತರವು ತಕ್ಷಣವೇ ಆತಂಕವಾಗಿ ಬದಲಾಯಿತು.

ಈ ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣವೇನು ಗೊತ್ತೆ? “ಹಿಂದೂವೊಬ್ಬ ಹೇಗೆ ಮದರಸದಲ್ಲಿ ಪಾಠ ಮಾಡಲು ಸಾಧ್ಯವಿಲ್ಲವೋ, ಹಾಗೆಯೇ ಮುಸ್ಲಿಮನೊಬ್ಬ ‘ಗುರುಕುಲ’ದಲ್ಲಿ ಪಾಠಮಾಡಲು ಸಾಧ್ಯವಿಲ್ಲ ಎಂಬುದು!(ವಿಶ್ವವಿದ್ಯಾಲಯವೊಂದು ‘ಗುರುಕುಲ’ವಾದದ್ದು ಯಾವಾಗ ಎಂದು ಅವರೇ ಬಲ್ಲರು!). ಈಗ, ಸಂಸ್ಕೃತ ವಿಭಾಗಕ್ಕೇ ಬೀಗ ಜಡಿಯಲಾಗಿದ್ದು, ಖಾನ್ ಅವರು ಒಂದೇ ಒಂದು ಪಾಠವನ್ನೂ ಮಾಡಿಲ್ಲ. ಆದರೂ, ಅವರು ಪರಿಸ್ಥಿತಿ ಸುಧಾರಿಸಿ, ತಿಳಿಯಾಗುವ ಬಗ್ಗೆ ವಿಶ್ವಾಸ ಕಳೆದುಕೊಂಡಿಲ್ಲ.

ಅವರು ಬಹಿರಂಗಪಡಿಸಲು ಇಚ್ಚಿಸದ ಸ್ಥಳವೊಂದರಲ್ಲಿ ‘ದಿ ಕ್ವಿಂಟ್’ ಜೊತೆ ಮುಕ್ತವಾಗಿ ಮಾತನಾಡಿ, “ಬಹುಶಃ ನಾನು ಬಿಎಚ್‌ಯು ವಿದ್ಯಾರ್ಥಿಗಳ ಯೋಚನಾ ರೀತಿಯನ್ನು ಬದಲಿಸಲೂ ಸಾಧ್ಯವಾಗಬಹುದು. ಇದನ್ನು ಹೇಗೆ ಮಾಡುವುದು ಎಂದು ನನಗೆ ಗೊತ್ತಿಲ್ಲ. ಅವರು ನನ್ನನ್ನು ಸರಿಯಾಗಿ ತಿಳಿದುಕೊಂಡರೆ, ನನ್ನನ್ನು ಮೆಚ್ಚಿಕೊಳ್ಳಬಹುದು” ಎಂದರು.

ಫಿರೋಜ್ ಜೈಪುರ ಜಿಲ್ಲೆಯ ಬಗ್ರು ಎಂಬ ಪಟ್ಟಣದಲ್ಲಿ ಜನಿಸಿದವರು. ನಾಲ್ವರು ಗಂಡುಮಕ್ಕಳಲ್ಲಿ ಮೂರನೆಯವರು. ಅವರು ರಾಷ್ಟ್ರೀಯ ಸಂಸ್ಕೃತ ಸಂಸ್ಥಾನ್‌ನಿಂಧ ಸಂಸ್ಕೃತ ಸಾಹಿತ್ಯದಲ್ಲಿ ಬಿ.ಎಡ್. ಮತ್ತು ಸ್ನಾತಕೊತ್ತರ ಪದವಿ ಪಡೆದಿದ್ದಾರೆ. ಅಲ್ಲಿ ಅವರು ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ. ಬಾಲ್ಯದಲ್ಲಿಯೇ ಅವರನ್ನು ಸಂಸ್ಕೃತ ಶಾಲೆಗೆ ಸೇರಿಸಲಾಗಿತ್ತು.

ತನ್ನ ಅಜ್ಜ ಮತ್ತು ತಂದೆಯ ಬಗ್ಗೆ ಮಾತನಾಡುತ್ತಾ, ಪಿರೋಜ್ ಹೇಳುತ್ತಾರೆ: “ನನ್ನ ಅಜ್ಜ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಅವರೀಗ ಇಲ್ಲ. ಆದರೆ, ಸುತ್ತಮುತ್ತಲಿನ ಹಳ್ಳಿಗಳಲ್ಲಿ ಯಾವುದೇ ಕಾರ್ಯಕ್ರಮ ಇದ್ದರೂ, ಅಜ್ಜನನ್ನು ಹಾಡಲು ಕರೆಯುತ್ತಿದ್ದರು. ತಂದೆಯವರು ಅವರಿಂದ ಕಲಿತರು. ನಮ್ಮ ಮನೆಯಿಂದ 2-3 ಕಿ.ಮೀ. ದೂದದಲ್ಲಿ ಒಂದು ಹಸುಗಳ ಹಟ್ಟಿಯಿದೆ. ಅದನ್ನು ರಾಮದೇವ್ ಗೋಶಾಲೆ ಎಂದು ಕರೆಯುತ್ತಾರೆ. ನನ್ನ ತಂದೆಯವರು ಪ್ರತೀ ದಿನ ಅಲ್ಲಿಗೆ ಹೋಗಿ ಹಿಂದೂ ಭಕ್ತಿಗೀತೆಗಳನ್ನು ಹಾಡುತ್ತಾರೆ”.

ಫಿರೋಜ್ ಅವರ ತಂದೆ ಸಂಸ್ಕೃತದಲ್ಲಿ ಪರಿಣಿತರಾಗಿದ್ದು, ಶಾಲೆ ಕಲಿಯುವ ಸಮಯದಲ್ಲಿ ಮಗನಿಗೆ ನೆರವಾಗುತ್ತಿದ್ದರಃ. ಫಿರೋಜ್, ಸಂಸ್ಕೃತದಲ್ಲಿ ಪಂಡಿತನಾಗಬೇಕು ಎಂದು ಬಯಸಿದ್ದರು. ಆದರೆ ಈಗ, ತನ್ನ ಮಗ ಒಮ್ಮೆ ಮನೆಗೆ ಹಿಂತಿರುಗಿ ಬರಲಿ ಎಂದು ಕಾತರರಾಗಿದ್ದಾರೆ.

“ನಮ್ಮ ತಂದೆಗೆ ಚಿಂತೆಯಿಂದ ನಿದ್ದೆ ಬರುತ್ತಿಲ್ಲ. ನೀನು ಮರಳಿ ಬಾ. ನಮಗೆ ಇರುವ ಸ್ವಲ್ಪದರಲ್ಲೇ ಬದುಕಬಹುದು. ಮನೆಯಿಂದ ದೂರ ಇರುವ ಅಗತ್ಯ ಇಲ್ಲ ಎಂದು ಅಣ್ಣ ಪಾಪಾಸು ಕರೆಯುತ್ತಾರೆ. ನಾನು ಏನನ್ನೂ ಹೇಳುವುದಿಲ್ಲ. ಆದರೆ, ನಾನಿಲ್ಲಿ ಉಳಿಯಬೇಕೆಂದು ನನ್ನ ನಂಬಿಕೆ” ಎನ್ನುತ್ತಾರೆ ಫಿರೋಜ್.

ಅವರ ನೇಮಕಾತಿ ವಿರುದ್ದ ನೇರವಾಗಿ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಜೊತೆ ಮಾತುಕತೆ ನಡೆಸುವ ಉದ್ದೇಶ ಇದೆಯೇ ಎಂದು ಕೇಳಿದಾಗ, ತಾನು ಮಾತುಕತೆಗೆ ಮುಕ್ತವಾಗಿದ್ದು, ಆಡಳಿತವು ಬಯಸಿದರೆ ಮಾತುಕತೆಗೆ ಸಿದ್ಧ ಎನ್ನುತ್ತಾರೆ. ಸದ್ಯಕ್ಕೆ ತಾನು ಯಾವಾಗ ಪಾಠ ಮಾಡಲು ಆರಂಭಿಸಬಹುದು ಎಂಬ ಬಗ್ಗೆ ತನಗೇ ಗೊತ್ತಿಲ್ಲ ಎನ್ನುತ್ತಾರೆ.

ಬಿಎಚ್‌ಯುವಿನ ಅವಕಾಶವನ್ನು ಬಿಟ್ಟುಕೊಡಲು ಸಿದ್ಧವಿಲ್ಲದಿರುವುದಕ್ಕೆ ಇನ್ನೊಂದು ಕಾರಣವೂ ಇದೆ. ಅದೆಂದರೆ, ಬಿಎಚ್‌ಯುವಿಗೆ ಅವರು ನೀಡಿದ ಮೊದಲ ಭೇಟಿಯ ನೆನಪುಗಳು. ಹಿಂದಕ್ಕೆ ಹೋಗುತ್ತಾ ಅವರು ಹೇಳುತ್ತಾರೆ: “2017ರಲ್ಲಿ ಬಿಎಚ್‌ಯು ತನ್ನ ಸಂಸ್ಕೃತ ಉತ್ಸವಕ್ಕೆ ನನ್ನನ್ನು ಆಹ್ವಾನಿಸಿತ್ತು. ನಾನು ಓಂಕಾರನಾಥ ಠಾಕೂರ್ ಅಪೇಕ್ಷಾ ಸದನದಲ್ಲಿ ಹಾಡಿದ್ದೆ. ಪ್ರತಿಯೊಂದೂ ಸ್ಮರಣೀಯವಾಗಿತ್ತು. ಅವರು ನನ್ನನ್ನು ತಮ್ಮ ಅತಿಥಿಗೃಹದಲ್ಲಿ ಇರಿಸಿಕೊಂಡು ನನ್ನ ಬೇಕು ಬೇಡಗಳನ್ನೆಲ್ಲಾ ಪೂರೈಸಿ ಸತ್ಕರಿಸಿದ್ದರು. ನನಗೆ ಬಹಳ ಗೌರವ ಕೊಟ್ಟಿದ್ದರು.”

ತಾನು ಸಂಸ್ಕೃತ ಕಲಿಯುವುದಕ್ಕಾಗಿ ವಿನಿಯೋಗಿಸಿದ ಇಷ್ಟು ವರ್ಷಗಳನ್ನು ನೆನಪಿಸಿಕೊಂಡ ಅವರು, ಇವತ್ತಿನ ತನಕ ಯಾರೂ ಸಂಸ್ಕೃತ ತನ್ನ ಸ್ವಂತ ಭಾಷೆಯಲ್ಲ ಎಂಬ ಭಾವನೆ ಬರುವಂತೆ ಮಾಡಿರಲಿಲ್ಲ ಎನ್ನುತ್ತಾರೆ. “ನನಗೆ ಯಾವುದೇ ತೊಂದರೆ ಉಂಟಾದಾಗ ಹಿಂದೂಗಳಾಗಿದ್ದ ಗುರುಗಳ ಬಳಿಗೆ ಹೋಗುತ್ತಿದ್ದೆ. ಅವರು ನನಗೆ ತಮ್ಮ ಶಕ್ತಿ ಮೀರಿ ನೆರವಾಗುತ್ತಿದ್ದರು. ನಾನು ಬೇರೆಯವನು ಎಂಬ ಭಾವನೆ ಬರುವಂತೆ ನನ್ನ ಗುರುಗಳು, ನನ್ನ ಮಿತ್ರರು, ನನ್ನ ಶಿಷ್ಯರಾದಿಯಾಗಿ ಯಾರೂ, ಎಂದೂ ಮಾಡಲಿಲ್ಲ. ಆದರೆ, ಈಗೇಕೆ ಹಾಗಾಗುತ್ತಿದೆ?” ಎಂದು ಅವರು ಕೇಳುತ್ತಾರೆ.

ಅವರ ಸಂಸ್ಕೃತ ಎಷ್ಟು ನಿರರ್ಗಳವಾಗಿದೆ ಎಂದು ಕೇಳಿದಾಗ, ತಾನು ನಿಯಮಿತವಾಗಿ ದೂರದರ್ಶನದಲ್ಲಿ ಸುದ್ದಿ ಓದುತ್ತಿದ್ದೆ ಎನ್ನುತ್ತಾರವರು. “ದೂರದರ್ಶನಲ್ಲಿ ಸಂಸ್ಕೃತ ವಾರ್ತಾವಳಿ ಎಂಬ ಕಾರ್ಯಕ್ರಮವಿದೆ. ಅದರಲ್ಲಿ ಬಾಲಿವುಡ್ ಹಾಡುಗಳನ್ನು ಸಂಸ್ಕೃತಕ್ಕೆ ಅನುವಾದಿಸಬೇಕಾಗುತ್ತದೆ. ಅವರು ಹಾಡುಗಳನ್ನು ಅನುವಾದಕ್ಕಾಗಿ ನನಗೆ ಕಳುಹಿಸುತ್ತಿದ್ದರು. ನಾನು ಹಾಡಿದ ಹಾಡುಗಳನ್ನು ಅವರು ಪ್ರಸಾರ ಮಾಡುತ್ತಿದ್ದರು” ಎಂದು ಹೇಳುತ್ತಾರೆ. ಅದಲ್ಲದೇ, 2019ರ ಆಗಸ್ಟ್‌ನಲ್ಲಿ ಅವರು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಂದ ಸಂಸ್ಕೃತ ಯುವ ಪ್ರತಿಭಾ ಪುರಸ್ಕಾರ್ ಎಂಬ ಪ್ರಶಸ್ತಿಯನ್ನೂ ಸ್ವೀಕರಿಸಿದ್ದರು.

ಬಿಎಚ್‌ಯು ಆಡಳಿತವು ಮತ್ತೆ ಮತ್ತೆ ಸ್ಪಷ್ಟನೆ ನೀಡಿದ್ದು, ತಾನು ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದಿದೆಯಲ್ಲದೆ, ಈ ತನಕ ಫಿರೋಜ್ ಅವರ ಬೆಂಬಲಕ್ಕೆ ನಿಂತಿದೆ. ಅದಲ್ಲದೇ ಹಿಂದೂ, ಮುಸ್ಲಿಮರೆನ್ನದೇ ಬಹುತೇಕ ವಿದ್ಯಾರ್ಥಿಗಳೂ ಅವರ ಬೆಂಬಲಕ್ಕೆ ನಿಂತಿದ್ದಾರೆ. ಬೇರೆ ಧರ್ಮದವರಿಂದ ಪಾಠ ಕಲಿಯುವುದಿಲ್ಲ ಎಂಬ ಸಂಕುಚಿತ ನಿಲುವಿಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಅವರು, ಪ್ರತಿಭಟನೆ ನಡೆಸುತ್ತಿರುವವರು ಕೇವಲ ಎಬಿವಿಪಿ ಮತ್ತು ಆರೆಸ್ಸೆಸ್‌ಗೆ ಸೇರಿದವರು ಎನ್ನುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ SIR: 38 ಲಕ್ಷ ಮೇಲ್ಮನವಿಗಳಲ್ಲಿ ವಿಲೇವಾರಿಯಾಗಿದ್ದು ಕೇವಲ 1 ಲಕ್ಷ

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಬೃಹತ್ ಪ್ರಮಾಣದ ಮೇಲ್ಮನವಿಗಳ ಪೈಕಿ ವಿಲೇವಾರಿಯಾದ ಅರ್ಜಿಗಳ ಸಂಖ್ಯೆ ತೀರಾ ಕನಿಷ್ಠ ಮಟ್ಟದಲ್ಲಿದೆ ಎಂಬ ಆಘಾತಕಾರಿ ಮಾಹಿತಿ...

ಕರ್ನಾಟಕ ಎಸ್‌ಐಆರ್: ತಡವಾಗಿ ತಲುಪಿದ ನೋಟಿಸ್‌ಗಳಿಂದ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ; ಮತದಾರರಲ್ಲಿ ಗೊಂದಲ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೋಟಿಸ್‌ಗಳನ್ನು ಮತದಾರರಿಗೆ ತಲುಪಿಸುವಲ್ಲಿ ಉಂಟಾಗುತ್ತಿರುವ ವಿಳಂಬವು ಹಲವು ಕಡೆ ವಿಚಾರಣಾ ಕೇಂದ್ರಗಳಲ್ಲಿ ಜನದಟ್ಟಣೆ ಮತ್ತು ಗೊಂದಲಕ್ಕೆ ಕಾರಣವಾಗುತ್ತಿದೆ. ‘ನೋ-ಮ್ಯಾಪಿಂಗ್’...

ನಾಸಿಕ್‌| ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು ಬಿಟ್ಟ ಪ್ರತಿಭಟನಾಕಾರರು

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾದ್ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ಖಂಡಿಸಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದ ಪ್ರತಿಭಟನಾಕಾರರ ಗುಂಪೊಂದು ನಗರ ಪಂಚಾಯತ್ ಅಧಿಕಾರಿಯ ಮೇಜಿನ ಮೇಲೆ ಬೀದಿ ನಾಯಿಗಳನ್ನು...

ವಿವಾಹಿತೆ ಮೇಲೆ ಅತ್ಯಾಚಾರ ಆರೋಪ : ಬಿಜೆಪಿ ಮಾಜಿ ಶಾಸಕನ ವಿರುದ್ಧ ಎಫ್‌ಐಆರ್

ಗನ್‌ ಪಾಯಿಂಟ್‌ ಇಟ್ಟು ಬೆದರಿಸಿ 22 ವರ್ಷದ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಹಾರಾಷ್ಟ್ರದ ಬಿಜೆಪಿ ಮಾಜಿ ಶಾಸಕ ಮತ್ತು ವಜಾಗೊಂಡಿರುವ ಪೊಲೀಸ್ ಸಿಬ್ಬಂದಿಯೊಬ್ಬರ ವಿರುದ್ಧ ಗುರುವಾರ (ಸೆ.17)...

ಬ್ರಿಕ್ಸ್ ಶೃಂಗಸಭೆಯಲ್ಲಿ ಸಂಪೂರ್ಣ ಸಸ್ಯಹಾರಿ ಮೆನು; ಶಿವಸೇನೆ ತೀವ್ರ ವಾಗ್ದಾಳಿ

ದೆಹಲಿಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ವಿದೇಶಿ ಪ್ರತಿನಿಧಿಗಳಿಗೆ ಕೇವಲ ಸಸ್ಯಹಾರಿ ಆಹಾರವನ್ನು ಬಡಿಸಿರುವುದನ್ನು ಖಂಡಿಸಿರುವ ಶಿವಸೇನೆ (ಯುಬಿಟಿ) ಗುರುವಾರ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಇದು ಅಂತರರಾಷ್ಟ್ರೀಯ ಅತಿಥಿಗಳ ಮೇಲೆ...

ದೆಹಲಿ ಎಸ್‌ಐಆರ್: ಮತದಾರರ ಪಟ್ಟಿಯಿಂದ ಹೆಸರುಗಳ ಡಿಲೀಟ್ ಪ್ರಶ್ನಿಸಿ ಅರ್ಜಿ; ವಿಚಾರಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ

ದೆಹಲಿಯಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಅಭಿಯಾನದಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 21ರಂದು ನಡೆಸಲು ಸುಪ್ರೀಂ ಕೋರ್ಟ್ ಗುರುವಾರ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್...

ಕೇರಳ | ಮಿತಿಗಿಂತ ಹೆಚ್ಚು ಮದ್ಯ ಸಂಗ್ರಹ ಆರೋಪ : ರಿಪೋರ್ಟರ್ ಟಿವಿ ಎಂಡಿ ಆಂಟೋ ಆಗಸ್ಟಿನ್ ಬಂಧನ

ಕೇರಳ ಅಬಕಾರಿ ಇಲಾಖೆಯು ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಆಂಟೋ ಆಗಸ್ಟಿನ್ ಅವರನ್ನು ಗುರುವಾರ (ಸೆ.17) ಮುಂಜಾನೆ ಬಂಧಿಸಿದೆ. ಎರ್ನಾಕುಲಂನಲ್ಲಿರುವ ಸುದ್ದಿ ವಾಹಿನಿಯ ಕಚೇರಿಯಿಂದ ಮುಂಜಾನೆ ಸುಮಾರು...

ದೆಹಲಿ: ಜಾಮೀನು ಸಿಕ್ಕ ಬೆನ್ನಲ್ಲೇ ಸ್ವತಂತ್ರ ಭಾರದ್ವಾಜ್ ವಿಡಿಯೋ ವೈರಲ್; ಷರತ್ತು ಉಲ್ಲಂಘನೆ ಆರೋಪ!

ಜಂತರ್ ಮಂತರ್‌ನಲ್ಲಿ ದಲಿತ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಜಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತರಾಗಿದ್ದ ಹಿಂದುತ್ವ ಪ್ರಭಾವಿ ಸ್ವತಂತ್ರ ಭಾರದ್ವಾಜ್ ಅವರಿಗೆ ದೆಹಲಿ ನ್ಯಾಯಾಲಯ ಮೂರು ವಾರಗಳ ಮಧ್ಯಂತರ...

ಸರ್ಕಾರದ ಹಸ್ತಕ್ಷೇಪದಿಂದ ಕ್ಯಾಂಪಸ್ ನಿರ್ಬಂಧದವರೆಗೆ: ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯದ ಕುಸಿತ ಬಯಲಿಗೆಳೆದ ಜಾಗತಿಕ ವರದಿ 

ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯವು ತೀವ್ರವಾಗಿ ನಿರ್ಬಂಧಿತವಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರದ ಹೆಚ್ಚುತ್ತಿರುವ ಹಸ್ತಕ್ಷೇಪ, ಕ್ಯಾಂಪಸ್‌ಗಳಲ್ಲಿ ಶೈಕ್ಷಣಿಕ ಮತ್ತು ರಾಜಕೀಯ ಅಭಿವ್ಯಕ್ತಿಯ ಮೇಲಿನ ನಿರ್ಬಂಧಗಳು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಕ್ರಮಗಳು...

ಬಿಹಾರ| ದಲಿತ ಯುವಕನ ವಿವಾಹವಾದ ಯುವತಿ; ಮಗಳ ಸಾಂಕೇತಿಕ ಅಂತ್ಯಕ್ರಿಯೆ ನಡೆಸಿದ ಪೋಷಕರು

ತಮ್ಮ 18 ವರ್ಷದ ಮಗಳು ಅಂತರ್ಜಾತಿ ವಿವಾಹವಾಗಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪೋಷಕರು, ಆಕೆಗೆ ಸಾಂಕೇತಿಕವಾಗಿ ಅಂತ್ಯಕ್ರಿಯೆ ನಡೆಸಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಬೆಳಕಿಗೆ ಬಂದಿದೆ. ಯುವತಿಯ ಫೋಟೋವಿರುವ ಪ್ರತಿಕೃತಿಯನ್ನು ಸಿದ್ಧಪಡಿಸಿ ಊರಿನಲ್ಲಿ ಶವಯಾತ್ರೆ...