Homeಅಂತರಾಷ್ಟ್ರೀಯಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್'

ಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್’

- Advertisement -
- Advertisement -

ಆತನ ಹೆಸರು ಸಲ್ಮಾನ್ ಖಾನ್. ಇಲ್ಲ, ಈತ ಬಾಲಿವುಡ್ ನಟನಲ್ಲ. ಬದಲಾಗಿ ಖ್ಯಾತ ಉದ್ಯಮಿ ಬಿಲ್ ಗೇಟ್ಸ್‌ಗೆ ಮಾತ್ರವಲ್ಲದೆ ಆತನ ಮಕ್ಕಳಿಗೂ ತನ್ನ “ಶಾಲೆ”ಯಲ್ಲಿ ಪ್ರತಿನಿತ್ಯ ‘ಪಾಠ’ ಹೇಳಿಕೊಡುತ್ತಿರುವ ‘ಶಿಕ್ಷಕ’!

ಅದಕ್ಕಿಂತ ಮುಖ್ಯವಾಗಿ ಈ ಸಲ್ಮಾನ್ ಖಾನ್ ನಡೆಸುತ್ತಿರುವ ‘ಶಾಲೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆಲ್ಲ ಪ್ರತಿನಿತ್ಯ ನೂರಾರು ಪಾಠಗಳನ್ನು ಬೋಧಿಸಲಾಗುತ್ತಿದೆ. ಆದರೂ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ಅಧ್ಯಾಪಕನಿದ್ದಾನೆ. ಆತನೇ ಈ ಸಲ್ಮಾನ್ ಖಾನ್!

ಅಚ್ಚರಿ ಎನಿಸುತ್ತಿದೆಯೆ? ಬನ್ನಿ ಸಲ್ಮಾನ್ ಖಾನ್ ನಡೆಸುತ್ತಿರುವ ‘ವರ್‍ಚ್ಯು ಅಲ್’ ಶಾಲೆಗೆ. ಈ ಸಲ್ಮಾನ್ ಖಾನ್‍ನ ತಾಯಿ ಭಾರತದ ಕೊಲ್ಕತ್ತಾದವರು. ತಂದೆ ಬಾಂಗ್ಲಾದೇಶದವರು. ಅಮೆರಿಕದಲ್ಲಿ ಜನಿಸಿದ ಸಲ್ಮಾನ್ ಖಾನ್ ಅಲ್ಲೇ ವಿದ್ಯಾಭ್ಯಾಸ ಮಾಡಿ ದೊಡ್ಡ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದು ಅಂತಿಂತಹ ಕೆಲಸವಲ್ಲ. ಜನರ ಅತಿ ಆಸೆಯನ್ನೇ ಬಂಡವಾಳ ಮಾಡಿಕೊಂಡು ಅವರು ವಿವಿಧ ಕಂಪನಿಗಳ ಶೇರುಗಳಲ್ಲಿ ಹಣ ಹೂಡುವಂತೆ ಮಾಡುವ ಕೆಲಸ. ಅದಕ್ಕೆಂದು ಖಾನ್‍ಗೆ ಕೈತುಂಬ ಸಂಬಳ ಬರುತ್ತಿತ್ತು.

ಆರು ವರ್ಷಗಳ ಹಿಂದೆ ಒಮ್ಮೆ ಏನಾಯಿತೆಂದರೆ, ಖಾನ್‍ನ ಚಿಕ್ಕಮ್ಮನ ಮಗಳಾದ ನಾಡಿಯಾ ಶಾಲೆಯಲ್ಲಿ ಗಣಿತದಲ್ಲಿ ಬೇರೆ ವಿದ್ಯಾರ್ಥಿಗಳಿಗಿಂತ ಹಿಂದೆ ಬಿದ್ದಿದ್ದಾಳೆ ಎಂದು ಖಾನ್‍ಗೆ ಗೊತ್ತಾಯಿತು. ಆದರೆ ಆಗ ಖಾನ್ ಅಮೆರಿಕದ ಪೂರ್ವ ಕಡಲತೀರದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರೆ, ನಾಡಿಯಾ ಪಶ್ಚಿಮ ಕಡಲತೀರದಲ್ಲಿರುವ ಮತ್ತೊಂದು ನಗರದಲ್ಲಿ ವಾಸಿಸುತ್ತಿದ್ದಳು. ಆದರೂ ಆಕೆಗೆ ಪ್ರತಿದಿನ ಫೋನ್ ಮೂಲಕವೇ ಗಣಿತದಲ್ಲಿ ಪಾಠ ಹೇಳಿಕೊಡಲು ಖಾನ್ ಪ್ರಾರಂಭಿಸಿದ. ಆದರೆ ಸ್ವಲ್ಪ ದಿನಗಳಲ್ಲೇ ಇದು ಕಷ್ಟವಾಗಲಾರಂಭಿಸಿತು. ಎರಡೂ ನಗರಗಳ ನಡುವೆ ನಾಲ್ಕು ಗಂಟೆಗಳ ವ್ಯತ್ಯಾಸ ಇತ್ತಲ್ಲದೆ, ಈತನ ಕೆಲಸದ ಸಮಯ-ನಾಡಿಯಾಳ ಶಾಲೆಯ ಸಮಯ ಇತ್ಯಾದಿಗಳು ನಿತ್ಯದ ಪಾಠಕ್ಕೆ ಅಡ್ಡಬರಲಾರಂಭಿಸಿದವು.

ಆಗ ಖಾನ್‍ಗೆ ಹೊಳೆದದ್ದೇ ಈ ವೀಡಿಯೋ ಪಾಠಕ್ರಮ. ನಾಡಿಯಾ ಎದುರಿಸುತ್ತಿದ್ದ ಗಣಿತದ ಸಮಸ್ಯೆಗೆ ಹೇಗೆ ಉತ್ತರವನ್ನು ಕಂಡುಹಿಡಿಯಬೇಕೆಂಬುದನ್ನು ಕುರಿತು ಖಾನ್ ಪುಟ್ಟ ವೀಡಿಯೋಗಳನ್ನು ತಯಾರಿಸಿ ಅವುಗಳನ್ನು ‘ಯೂಟ್ಯೂಬ್’ ಎಂಬ ವೆಬ್‍ಸೈಟಿನಲ್ಲಿ ಹಾಕಲಾರಂಭಿಸಿದ. ಅದರಿಂದಾಗಿ ನಾಡಿಯಾ ಯಾವಾಗ ಬೇಕಾದರೂ ಅವುಗಳನ್ನು ನೋಡಬಹುದಿತ್ತು ಮತ್ತು ಅಗತ್ಯವಿದ್ದರೆ ಹಳೆ ಪಾಠಗಳಿಗೂ ಮತ್ತೆ ಭೇಟಿ ನೀಡಬಹುದಿತ್ತು. ಇದರಿಂದಾಗಿ ನಾಡಿಯಾಳಿಗೆ ಎಷ್ಟು ಉಪಯೋಗವಾಯಿತೆಂದರೆ ಆಕೆ ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆದಳು.

ಇದನ್ನೂ ಓದಿ: ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

ನಾಡಿಯಾಳ ನಂತರ ಆಕೆಯ ಸಹೋದರರಾದ ಆರ್ಮನ್ ಮತ್ತು ಆಲಿಗೂ ಖಾನ್ ಇದೇರೀತಿ ಪಾಠ ಮಾಡಲಾರಂಭಿಸಿದ. ಆದರೆ ಅಷ್ಟು ಹೊತ್ತಿಗೆ ಖಾನ್‍ನ ಇತರೆ ಸಂಬಂಧಿಕರ ಮಕ್ಕಳು ಮತ್ತು ಆ ಮಕ್ಕಳ ಸ್ನೇಹಿತರೂ ಈ ಪಾಠಗಳನ್ನು ನೋಡಿ ಕಲಿಯಲಾರಂಭಿಸಿದ್ದರು. ಇದಕ್ಕೆಲ್ಲ ಖಾನ್ ಬಳಸಿದ್ದು ತನ್ನ ಕಂಪ್ಯೂಟರ್ ಮತ್ತು ಅದಕ್ಕೆ ಅಳವಡಿಸಿದ್ದ 200 ಡಾಲರ್‌ಗಳ ಕ್ಯಾಮೆರಾ, 80 ಡಾಲರ್‌ಗಳ ಪ್ಯಾಡ್ ಮತ್ತು 20 ಡಾಲರ್‌ಗಳ ವೀಡಿಯೋ ರೆಕಾರ್ಡರ್ ಹಾಗೂ ಪುಕ್ಕಟೆ ಸಿಗುವ ಹಲವು ಸಾಫ್ಟ್‍ವೇರ್‌ಗಳನ್ನು.

ಇದು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ ಖಾನ್ ತನ್ನದೇ ಒಂದು ವೆಬ್‍ಸೈಟ್ ಶುರು ಮಾಡಿ ಅವುಗಳನ್ನೆಲ್ಲ ಅದರಲ್ಲಿ ಸೇರಿಸಲಾರಂಭಿಸಿದ. ಕಾಲಕ್ರಮೇಣ ಇದು ಎಷ್ಟು ದೊಡ್ಡದಾಯಿತು ಎಂದರೆ ಇದರಲ್ಲಿ ಪಾಠಗಳನ್ನು ಹೇಳಿಕೊಡುವುದಕ್ಕೆ ಆತನಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಾಲದಾಯಿತು. ಆಗ ಖಾನ್ ಯೋಚಿಸಿದ: “ನನಗೆ ಒಬ್ಬಳು ಸುಂದರ ಹೆಂಡತಿ ಇದ್ದಾಳೆ, ಇಬ್ಬರು ಮುದ್ದಿನ ಮಕ್ಕಳಿದ್ದಾರೆ, ವಾಸಿಸಲು ಒಂದು ಮನೆ ಇದೆ, ಎರಡು ಕಾರ್‌ಗಳಿವೆ, ಸಾಕಷ್ಟು ಉಳಿತಾಯವಿದೆ. ಇದಕ್ಕಿಂತ ಒಬ್ಬ ಮನುಷ್ಯನಿಗೆ ಜೀವನದಲ್ಲಿ ಇನ್ನೇನು ಬೇಕು? ನನಗೆ 80 ವರ್ಷ ವಯಸ್ಸಾದಾಗ ನನ್ನ ಹತ್ತಿರ ಎಷ್ಟು ದುಡ್ಡಿದೆ ಎಂಬುದಕ್ಕಿಂತ ನಾನು ಸಮಾಜಕ್ಕಾಗಿ ಏನನ್ನು ಮಾಡಿದೆ ಎಂಬುದು ಮುಖ್ಯವಾಗುತ್ತದೆ. ಈ ನನ್ನ ಪಾಠಗಳಿಂದ ಜನರಿಗೆ ಉಪಯೋಗವಾದರೆ ಅದಕ್ಕಿಂತ ಉತ್ತಮವಾದದ್ದೇನಿದೆ? ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷ ಎಲ್ಲದಕ್ಕಿಂತ ಮುಖ್ಯ” ಎಂದು ಖಾನ್ ನಿರ್ಧರಿಸಿದ.

ಆಗ ಖಾನ್ ವರ್ಷಕ್ಕೆ ಮಿಲಿಯನ್ ಡಾಲರ್ ಸಂಬಳ ನೀಡುತ್ತಿದ್ದ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ‘ಖಾನ್ ಅಕಾಡೆಮಿ’ಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ. ಈತ ತನ್ನ ಪಾಠಗಳಿಗೆ ಶುಲ್ಕವನ್ನು ವಿಧಿಸದೆ ಬಿಟ್ಟಿಯಾಗಿ ಹೇಳಿಕೊಡುತ್ತಿದ್ದರಿಂದ ನಿಧಾನವಾಗಿ ಆತನ ಉಳಿತಾಯದ ಹಣವೆಲ್ಲ ಕರಗಲಾರಂಭಿಸಿತು. ಆದರೂ ಈತನ ಅಕಾಡೆಮಿಯ ಜನಪ್ರಿಯತೆಯನ್ನು ಕಂಡು ಅದೆಷ್ಟೋ ಉದ್ಯಮಿಗಳು ಅದನ್ನು ಆತನಿಂದ ಖರೀದಿಸಲು ಮುಂದಾದರು. ಆದರೆ ಅದನ್ನು ಕೊಂಡವರು ತನ್ನಂತೆ ಪುಕ್ಕಟೆಯಾಗಿ ಪಾಠ ಹೇಳಿಕೊಡುವುದಿಲ್ಲ ಎಂದು ಗೊತ್ತಿದ್ದರಿಂದ ಖಾನ್ ಅದನ್ನು ಮಾರಲು ನಿರಾಕರಿಸಿದ್ದ.

ಅದೃಷ್ಟವಶಾತ್ ಅದೇಹೊತ್ತಿಗೆ ಈ ಖಾನ್ ಅಕಾಡೆಮಿ ಬಗ್ಗೆ ಬಿಲ್ ಗೇಟ್ಸ್‌ನ ಮಕ್ಕಳಿಗೂ ಗೊತ್ತಾಗಿ ಅವರೂ ಇಲ್ಲಿದ್ದ ಮಾಹಿತಿಯನ್ನು ಆಧರಿಸಿ ಕಲಿಯಲಾರಂಭಿಸಿದ್ದರು. ಒಮ್ಮೆ ಇದರ ಬಗ್ಗೆ ತಮ್ಮ ತಂದೆಗೂ ಹೇಳಿದರು. ಆತ ಕೂಡ ಇದನ್ನು ನೋಡಿ ಮೆಚ್ಚಿಕೊಂಡ. ಎಷ್ಟರಮಟ್ಟಿಗೆ ಅಂದರೆ ಖಾನ್ ಅಕಾಡೆಮಿಗೆ ಬಿಲ್ ಗೇಟ್ಸ್ ಫೌಂಡೇಷನ್‍ನಿಂದ ದೊಡ್ಡಮೊತ್ತದ ದೇಣಿಗೆಯನ್ನು ನೀಡಿದೆ. ಬಿಲ್ ಗೇಟ್ಸ್ ಅಲ್ಲದೆ ಗೂಗಲ್ ಸಂಸ್ಥೆಯವರೂ ಖಾನ್ ಅಕಾಡೆಮಿಯ ಸಾಧನೆಯನ್ನು ಮೆಚ್ಚಿ ಅದಕ್ಕೆ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನೀಡಿದರಲ್ಲದೆ ಅವರೂ ದೇಣಿಗೆಯನ್ನು ನೀಡಿದರು. ಇವತ್ತು ಅದಷ್ಟೋ ಅಭಿಮಾನಿಗಳು ತಮ್ಮ ಶಕ್ತಾನುಸಾರ ಖಾನ್‍ನ ಈ ವಿದ್ಯಾಸಂಸ್ಥೆಗೆ ಹಣ ಸಹಾಯವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಇಷ್ಟೆಲ್ಲ ಹೇಳಿದ್ದಕ್ಕೆ ಕಾರಣವಿದೆ. ನಮ್ಮ ಪತ್ರಿಕೆಯ ಓದುಗರಲ್ಲಿ ಬಹಳಷ್ಟು ಜನ ಶಾಲಾ ಅಧ್ಯಾಪಕರಿದ್ದಾರೆ. ಅವರೆಲ್ಲರೂ ಸಲ್ಮಾನ್ ಖಾನ್ ಅವರ khanacademy.org ಎಂಬ ವೆಬ್‍ಸೈಟಿಗೆ ಭೇಟಿ ನೀಡಿದರೆ ನಮ್ಮ ರಾಜ್ಯದ ಶಾಲಾಮಕ್ಕಳಿಗೆ ಇವತ್ತು ಕಷ್ಟದ ಸಬ್ಜೆಕ್ಟ್ ಆಗಿರುವ ಗಣಿತವನ್ನು ಇನ್ನೂ ಚೆನ್ನಾಗಿ ಹೇಳಿಕೊಟ್ಟು ಅವರೆಲ್ಲ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚು ಯಶಸ್ವಿಯಾಗುವಂತೆ ಮಾಡಬಹುದಾಗಿದೆ. ಓರ್ವ ಗುರುವಿನ ಕರ್ತವ್ಯ ಅದೇ ಅಲ್ಲವೇ?

 ಗೌರಿ ಲಂಕೇಶ್
13 ಜುಲೈ, 2011 (ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...