Homeಅಂತರಾಷ್ಟ್ರೀಯಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್'

ಶಿಕ್ಷಣ ಮಾರಾಟ ದಂಧೆಯ ನಡುವೆ ಒಬ್ಬ ನಿಸ್ವಾರ್ಥ `ಖಾನ್’

- Advertisement -
- Advertisement -

ಆತನ ಹೆಸರು ಸಲ್ಮಾನ್ ಖಾನ್. ಇಲ್ಲ, ಈತ ಬಾಲಿವುಡ್ ನಟನಲ್ಲ. ಬದಲಾಗಿ ಖ್ಯಾತ ಉದ್ಯಮಿ ಬಿಲ್ ಗೇಟ್ಸ್‌ಗೆ ಮಾತ್ರವಲ್ಲದೆ ಆತನ ಮಕ್ಕಳಿಗೂ ತನ್ನ “ಶಾಲೆ”ಯಲ್ಲಿ ಪ್ರತಿನಿತ್ಯ ‘ಪಾಠ’ ಹೇಳಿಕೊಡುತ್ತಿರುವ ‘ಶಿಕ್ಷಕ’!

ಅದಕ್ಕಿಂತ ಮುಖ್ಯವಾಗಿ ಈ ಸಲ್ಮಾನ್ ಖಾನ್ ನಡೆಸುತ್ತಿರುವ ‘ಶಾಲೆ’ಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಿಗೆಲ್ಲ ಪ್ರತಿನಿತ್ಯ ನೂರಾರು ಪಾಠಗಳನ್ನು ಬೋಧಿಸಲಾಗುತ್ತಿದೆ. ಆದರೂ ಈ ಶಾಲೆಯಲ್ಲಿ ಒಬ್ಬನೇ ಒಬ್ಬ ಅಧ್ಯಾಪಕನಿದ್ದಾನೆ. ಆತನೇ ಈ ಸಲ್ಮಾನ್ ಖಾನ್!

ಅಚ್ಚರಿ ಎನಿಸುತ್ತಿದೆಯೆ? ಬನ್ನಿ ಸಲ್ಮಾನ್ ಖಾನ್ ನಡೆಸುತ್ತಿರುವ ‘ವರ್‍ಚ್ಯು ಅಲ್’ ಶಾಲೆಗೆ. ಈ ಸಲ್ಮಾನ್ ಖಾನ್‍ನ ತಾಯಿ ಭಾರತದ ಕೊಲ್ಕತ್ತಾದವರು. ತಂದೆ ಬಾಂಗ್ಲಾದೇಶದವರು. ಅಮೆರಿಕದಲ್ಲಿ ಜನಿಸಿದ ಸಲ್ಮಾನ್ ಖಾನ್ ಅಲ್ಲೇ ವಿದ್ಯಾಭ್ಯಾಸ ಮಾಡಿ ದೊಡ್ಡ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅದು ಅಂತಿಂತಹ ಕೆಲಸವಲ್ಲ. ಜನರ ಅತಿ ಆಸೆಯನ್ನೇ ಬಂಡವಾಳ ಮಾಡಿಕೊಂಡು ಅವರು ವಿವಿಧ ಕಂಪನಿಗಳ ಶೇರುಗಳಲ್ಲಿ ಹಣ ಹೂಡುವಂತೆ ಮಾಡುವ ಕೆಲಸ. ಅದಕ್ಕೆಂದು ಖಾನ್‍ಗೆ ಕೈತುಂಬ ಸಂಬಳ ಬರುತ್ತಿತ್ತು.

ಆರು ವರ್ಷಗಳ ಹಿಂದೆ ಒಮ್ಮೆ ಏನಾಯಿತೆಂದರೆ, ಖಾನ್‍ನ ಚಿಕ್ಕಮ್ಮನ ಮಗಳಾದ ನಾಡಿಯಾ ಶಾಲೆಯಲ್ಲಿ ಗಣಿತದಲ್ಲಿ ಬೇರೆ ವಿದ್ಯಾರ್ಥಿಗಳಿಗಿಂತ ಹಿಂದೆ ಬಿದ್ದಿದ್ದಾಳೆ ಎಂದು ಖಾನ್‍ಗೆ ಗೊತ್ತಾಯಿತು. ಆದರೆ ಆಗ ಖಾನ್ ಅಮೆರಿಕದ ಪೂರ್ವ ಕಡಲತೀರದಲ್ಲಿರುವ ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದರೆ, ನಾಡಿಯಾ ಪಶ್ಚಿಮ ಕಡಲತೀರದಲ್ಲಿರುವ ಮತ್ತೊಂದು ನಗರದಲ್ಲಿ ವಾಸಿಸುತ್ತಿದ್ದಳು. ಆದರೂ ಆಕೆಗೆ ಪ್ರತಿದಿನ ಫೋನ್ ಮೂಲಕವೇ ಗಣಿತದಲ್ಲಿ ಪಾಠ ಹೇಳಿಕೊಡಲು ಖಾನ್ ಪ್ರಾರಂಭಿಸಿದ. ಆದರೆ ಸ್ವಲ್ಪ ದಿನಗಳಲ್ಲೇ ಇದು ಕಷ್ಟವಾಗಲಾರಂಭಿಸಿತು. ಎರಡೂ ನಗರಗಳ ನಡುವೆ ನಾಲ್ಕು ಗಂಟೆಗಳ ವ್ಯತ್ಯಾಸ ಇತ್ತಲ್ಲದೆ, ಈತನ ಕೆಲಸದ ಸಮಯ-ನಾಡಿಯಾಳ ಶಾಲೆಯ ಸಮಯ ಇತ್ಯಾದಿಗಳು ನಿತ್ಯದ ಪಾಠಕ್ಕೆ ಅಡ್ಡಬರಲಾರಂಭಿಸಿದವು.

ಆಗ ಖಾನ್‍ಗೆ ಹೊಳೆದದ್ದೇ ಈ ವೀಡಿಯೋ ಪಾಠಕ್ರಮ. ನಾಡಿಯಾ ಎದುರಿಸುತ್ತಿದ್ದ ಗಣಿತದ ಸಮಸ್ಯೆಗೆ ಹೇಗೆ ಉತ್ತರವನ್ನು ಕಂಡುಹಿಡಿಯಬೇಕೆಂಬುದನ್ನು ಕುರಿತು ಖಾನ್ ಪುಟ್ಟ ವೀಡಿಯೋಗಳನ್ನು ತಯಾರಿಸಿ ಅವುಗಳನ್ನು ‘ಯೂಟ್ಯೂಬ್’ ಎಂಬ ವೆಬ್‍ಸೈಟಿನಲ್ಲಿ ಹಾಕಲಾರಂಭಿಸಿದ. ಅದರಿಂದಾಗಿ ನಾಡಿಯಾ ಯಾವಾಗ ಬೇಕಾದರೂ ಅವುಗಳನ್ನು ನೋಡಬಹುದಿತ್ತು ಮತ್ತು ಅಗತ್ಯವಿದ್ದರೆ ಹಳೆ ಪಾಠಗಳಿಗೂ ಮತ್ತೆ ಭೇಟಿ ನೀಡಬಹುದಿತ್ತು. ಇದರಿಂದಾಗಿ ನಾಡಿಯಾಳಿಗೆ ಎಷ್ಟು ಉಪಯೋಗವಾಯಿತೆಂದರೆ ಆಕೆ ಗಣಿತದಲ್ಲಿ ಉತ್ತಮ ಅಂಕಗಳನ್ನು ಪಡೆದಳು.

ಇದನ್ನೂ ಓದಿ: ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದ ಕೋಟಿಗೊಬ್ಬ ಶಿಕ್ಷಕ ಅಣ್ಣಿಗೇರಿ ಮಾಸ್ತರರ ಸಾವು: ನಿವೃತ್ತರಾಗದೇ ಅಕ್ಷರ ಕಲಿಸಿದ ಗುರು!

ನಾಡಿಯಾಳ ನಂತರ ಆಕೆಯ ಸಹೋದರರಾದ ಆರ್ಮನ್ ಮತ್ತು ಆಲಿಗೂ ಖಾನ್ ಇದೇರೀತಿ ಪಾಠ ಮಾಡಲಾರಂಭಿಸಿದ. ಆದರೆ ಅಷ್ಟು ಹೊತ್ತಿಗೆ ಖಾನ್‍ನ ಇತರೆ ಸಂಬಂಧಿಕರ ಮಕ್ಕಳು ಮತ್ತು ಆ ಮಕ್ಕಳ ಸ್ನೇಹಿತರೂ ಈ ಪಾಠಗಳನ್ನು ನೋಡಿ ಕಲಿಯಲಾರಂಭಿಸಿದ್ದರು. ಇದಕ್ಕೆಲ್ಲ ಖಾನ್ ಬಳಸಿದ್ದು ತನ್ನ ಕಂಪ್ಯೂಟರ್ ಮತ್ತು ಅದಕ್ಕೆ ಅಳವಡಿಸಿದ್ದ 200 ಡಾಲರ್‌ಗಳ ಕ್ಯಾಮೆರಾ, 80 ಡಾಲರ್‌ಗಳ ಪ್ಯಾಡ್ ಮತ್ತು 20 ಡಾಲರ್‌ಗಳ ವೀಡಿಯೋ ರೆಕಾರ್ಡರ್ ಹಾಗೂ ಪುಕ್ಕಟೆ ಸಿಗುವ ಹಲವು ಸಾಫ್ಟ್‍ವೇರ್‌ಗಳನ್ನು.

ಇದು ಹೆಚ್ಚು ಜನಪ್ರಿಯತೆ ಪಡೆಯುತ್ತಿದ್ದಂತೆ ಖಾನ್ ತನ್ನದೇ ಒಂದು ವೆಬ್‍ಸೈಟ್ ಶುರು ಮಾಡಿ ಅವುಗಳನ್ನೆಲ್ಲ ಅದರಲ್ಲಿ ಸೇರಿಸಲಾರಂಭಿಸಿದ. ಕಾಲಕ್ರಮೇಣ ಇದು ಎಷ್ಟು ದೊಡ್ಡದಾಯಿತು ಎಂದರೆ ಇದರಲ್ಲಿ ಪಾಠಗಳನ್ನು ಹೇಳಿಕೊಡುವುದಕ್ಕೆ ಆತನಿಗೆ ದಿನದ ಇಪ್ಪತ್ತನಾಲ್ಕು ಗಂಟೆಗಳು ಸಾಲದಾಯಿತು. ಆಗ ಖಾನ್ ಯೋಚಿಸಿದ: “ನನಗೆ ಒಬ್ಬಳು ಸುಂದರ ಹೆಂಡತಿ ಇದ್ದಾಳೆ, ಇಬ್ಬರು ಮುದ್ದಿನ ಮಕ್ಕಳಿದ್ದಾರೆ, ವಾಸಿಸಲು ಒಂದು ಮನೆ ಇದೆ, ಎರಡು ಕಾರ್‌ಗಳಿವೆ, ಸಾಕಷ್ಟು ಉಳಿತಾಯವಿದೆ. ಇದಕ್ಕಿಂತ ಒಬ್ಬ ಮನುಷ್ಯನಿಗೆ ಜೀವನದಲ್ಲಿ ಇನ್ನೇನು ಬೇಕು? ನನಗೆ 80 ವರ್ಷ ವಯಸ್ಸಾದಾಗ ನನ್ನ ಹತ್ತಿರ ಎಷ್ಟು ದುಡ್ಡಿದೆ ಎಂಬುದಕ್ಕಿಂತ ನಾನು ಸಮಾಜಕ್ಕಾಗಿ ಏನನ್ನು ಮಾಡಿದೆ ಎಂಬುದು ಮುಖ್ಯವಾಗುತ್ತದೆ. ಈ ನನ್ನ ಪಾಠಗಳಿಂದ ಜನರಿಗೆ ಉಪಯೋಗವಾದರೆ ಅದಕ್ಕಿಂತ ಉತ್ತಮವಾದದ್ದೇನಿದೆ? ಬದುಕಿನಲ್ಲಿ ನೆಮ್ಮದಿ ಮತ್ತು ಸಂತೋಷ ಎಲ್ಲದಕ್ಕಿಂತ ಮುಖ್ಯ” ಎಂದು ಖಾನ್ ನಿರ್ಧರಿಸಿದ.

ಆಗ ಖಾನ್ ವರ್ಷಕ್ಕೆ ಮಿಲಿಯನ್ ಡಾಲರ್ ಸಂಬಳ ನೀಡುತ್ತಿದ್ದ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿ ‘ಖಾನ್ ಅಕಾಡೆಮಿ’ಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ. ಈತ ತನ್ನ ಪಾಠಗಳಿಗೆ ಶುಲ್ಕವನ್ನು ವಿಧಿಸದೆ ಬಿಟ್ಟಿಯಾಗಿ ಹೇಳಿಕೊಡುತ್ತಿದ್ದರಿಂದ ನಿಧಾನವಾಗಿ ಆತನ ಉಳಿತಾಯದ ಹಣವೆಲ್ಲ ಕರಗಲಾರಂಭಿಸಿತು. ಆದರೂ ಈತನ ಅಕಾಡೆಮಿಯ ಜನಪ್ರಿಯತೆಯನ್ನು ಕಂಡು ಅದೆಷ್ಟೋ ಉದ್ಯಮಿಗಳು ಅದನ್ನು ಆತನಿಂದ ಖರೀದಿಸಲು ಮುಂದಾದರು. ಆದರೆ ಅದನ್ನು ಕೊಂಡವರು ತನ್ನಂತೆ ಪುಕ್ಕಟೆಯಾಗಿ ಪಾಠ ಹೇಳಿಕೊಡುವುದಿಲ್ಲ ಎಂದು ಗೊತ್ತಿದ್ದರಿಂದ ಖಾನ್ ಅದನ್ನು ಮಾರಲು ನಿರಾಕರಿಸಿದ್ದ.

ಅದೃಷ್ಟವಶಾತ್ ಅದೇಹೊತ್ತಿಗೆ ಈ ಖಾನ್ ಅಕಾಡೆಮಿ ಬಗ್ಗೆ ಬಿಲ್ ಗೇಟ್ಸ್‌ನ ಮಕ್ಕಳಿಗೂ ಗೊತ್ತಾಗಿ ಅವರೂ ಇಲ್ಲಿದ್ದ ಮಾಹಿತಿಯನ್ನು ಆಧರಿಸಿ ಕಲಿಯಲಾರಂಭಿಸಿದ್ದರು. ಒಮ್ಮೆ ಇದರ ಬಗ್ಗೆ ತಮ್ಮ ತಂದೆಗೂ ಹೇಳಿದರು. ಆತ ಕೂಡ ಇದನ್ನು ನೋಡಿ ಮೆಚ್ಚಿಕೊಂಡ. ಎಷ್ಟರಮಟ್ಟಿಗೆ ಅಂದರೆ ಖಾನ್ ಅಕಾಡೆಮಿಗೆ ಬಿಲ್ ಗೇಟ್ಸ್ ಫೌಂಡೇಷನ್‍ನಿಂದ ದೊಡ್ಡಮೊತ್ತದ ದೇಣಿಗೆಯನ್ನು ನೀಡಿದೆ. ಬಿಲ್ ಗೇಟ್ಸ್ ಅಲ್ಲದೆ ಗೂಗಲ್ ಸಂಸ್ಥೆಯವರೂ ಖಾನ್ ಅಕಾಡೆಮಿಯ ಸಾಧನೆಯನ್ನು ಮೆಚ್ಚಿ ಅದಕ್ಕೆ ದೊಡ್ಡ ಮೊತ್ತದ ಪ್ರಶಸ್ತಿಯನ್ನು ನೀಡಿದರಲ್ಲದೆ ಅವರೂ ದೇಣಿಗೆಯನ್ನು ನೀಡಿದರು. ಇವತ್ತು ಅದಷ್ಟೋ ಅಭಿಮಾನಿಗಳು ತಮ್ಮ ಶಕ್ತಾನುಸಾರ ಖಾನ್‍ನ ಈ ವಿದ್ಯಾಸಂಸ್ಥೆಗೆ ಹಣ ಸಹಾಯವನ್ನು ಮಾಡುತ್ತಿದ್ದಾರೆ.

ಇದರ ಬಗ್ಗೆ ಇಷ್ಟೆಲ್ಲ ಹೇಳಿದ್ದಕ್ಕೆ ಕಾರಣವಿದೆ. ನಮ್ಮ ಪತ್ರಿಕೆಯ ಓದುಗರಲ್ಲಿ ಬಹಳಷ್ಟು ಜನ ಶಾಲಾ ಅಧ್ಯಾಪಕರಿದ್ದಾರೆ. ಅವರೆಲ್ಲರೂ ಸಲ್ಮಾನ್ ಖಾನ್ ಅವರ khanacademy.org ಎಂಬ ವೆಬ್‍ಸೈಟಿಗೆ ಭೇಟಿ ನೀಡಿದರೆ ನಮ್ಮ ರಾಜ್ಯದ ಶಾಲಾಮಕ್ಕಳಿಗೆ ಇವತ್ತು ಕಷ್ಟದ ಸಬ್ಜೆಕ್ಟ್ ಆಗಿರುವ ಗಣಿತವನ್ನು ಇನ್ನೂ ಚೆನ್ನಾಗಿ ಹೇಳಿಕೊಟ್ಟು ಅವರೆಲ್ಲ ಪರೀಕ್ಷೆಗಳಲ್ಲಿ ಇನ್ನೂ ಹೆಚ್ಚು ಯಶಸ್ವಿಯಾಗುವಂತೆ ಮಾಡಬಹುದಾಗಿದೆ. ಓರ್ವ ಗುರುವಿನ ಕರ್ತವ್ಯ ಅದೇ ಅಲ್ಲವೇ?

 ಗೌರಿ ಲಂಕೇಶ್
13 ಜುಲೈ, 2011 (ಸಂಪಾದಕೀಯದಿಂದ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಎನ್‌ಡಿಎ ಸೇರಿದರೆ ಪ್ರಧಾನಿ ಮೋದಿಯಿಂದ ಕೇರಳಕ್ಕೆ ದೊಡ್ಡ ಪ್ಯಾಕೇಜ್: ಪಿಣರಾಯಿ ವಿಜಯನ್‌ಗೆ ಆಫರ್ ಕೊಟ್ಟ ಅಠಾವಳೆ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಜೆಪಿ ನೇತೃತ್ವದ ಎನ್‌ಡಿಎ ಸೇರಬೇಕೆಂದು ಕೇಂದ್ರ ರಾಜ್ಯ ಸಚಿವ ರಾಮದಾಸ್ ಬಂಡು ಅಠಾವಳೆ ಬುಧವಾರ ಸಲಹೆ ನೀಡಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ...

ಸದನದಲ್ಲೇ ನೀಲಿ ಚಿತ್ರ ನೋಡಿ ರಾಜ್ಯದ ಮಾನ ಕಳೆದವರು ಯಾವ ಪಕ್ಷದವರು? ಬಿಜೆಪಿಗೆ ಹರಿಪ್ರಸಾದ್ ತಿರುಗೇಟು

ಸದನದ ಶಿಸ್ತು, ಘನತೆ, ಗೌರವದ ಬಗ್ಗೆ ಮಾತನಾಡಲು ಬಿಜೆಪಿಯವರಿಗೆ ಕಿಂಚಿತ್ತಾದರೂ ನೈತಿಕತೆ ಇದೆಯೇ? ಎಂದು ವಿಧಾನಪರಿಷತ್ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ. ಗುರುವಾರ (ಜ.22) ವಿಶೇಷ ಅಧಿವೇಶನದ ವೇಳೆ...

ಆಂಧ್ರದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮ ಬಳಕೆ ನಿಷೇಧ?

ಕಳೆದ ತಿಂಗಳು ಆಸ್ಟ್ರೇಲಿಯಾ ಜಾರಿಗೆ ತಂದಂತೆಯೇ, 16 ವರ್ಷದೊಳಗಿನ ಮಕ್ಕಳಿಗಾಗಿ ಸರ್ಕಾರವು ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಯೋಜಿಸುತ್ತಿದೆ ಎಂದು ಆಂಧ್ರಪ್ರದೇಶ ಸಚಿವ ನಾರಾ ಲೋಕೇಶ್ ಬಹಿರಂಗಪಡಿಸಿದ್ದಾರೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ...

ಜಾರ್ಖಂಡ್| ಚೈಬಾಸಾ ಎನ್‌ಕೌಂಟರ್‌; ಕುಖ್ಯಾತ ಮಾವೋವಾದಿ ನಾಯಕ ‘ಅನಲ್ ದಾ’ ಸೇರಿ 8 ನಕ್ಸಲರ ಹತ್ಯೆ

ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪ್ರಮುಖ ಯಶಸ್ಸನ್ನು ಸಾಧಿಸಿದೆ. ಚೈಬಾಸಾ ಜಿಲ್ಲೆಯಲ್ಲಿ ನಡೆದ ಭೀಕರ ಎನ್‌ಕೌಂಟರ್‌ನಲ್ಲಿ, ಭದ್ರತಾ ಪಡೆಗಳು 8 ನಕ್ಸಲರನ್ನು ಕೊಂದಿವೆ....

‘ಕರ್ನಾಟಕವನ್ನು ಎಲ್ಲಾ ರೀತಿಯಲ್ಲಿ ಕಡೆಗಣಿಸುತ್ತಿದ್ದ ಬಿಜೆಪಿ ಈಗ ರಾಜ್ಯಪಾಲರ ಮೂಲಕವೇ ಕನ್ನಡಿಗರನ್ನು ಅವಮಾನಿಸಿದೆ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿಜೆಪಿ ಕನ್ನಡಿಗರನ್ನು ಅವಮಾನಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.  2026 ಜನವರಿ 22ರ, ಗುರುವಾರ ಸದನದಲ್ಲಿ ನಡೆದ ಬೆಳವಣಿಗೆಗಳ ಕುರಿತು ತಮ್ಮ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಖರ್ಗೆ, ‘ಸರ್ಕಾರದ ಭಾಷಣವನ್ನು...

ಭೋಜಶಾಲಾ-ಕಮಾಲ್ ಮೌಲಾ ಮಸೀದಿ ವಿವಾದ : ವಸಂತ ಪಂಚಮಿ ಪೂಜೆ, ಜುಮಾ ನಮಾಜ್ ಶಾಂತಿಯುತವಾಗಿ ನಡೆಸಲು ಸುಪ್ರೀಂ ಆದೇಶ

ಮಧ್ಯಪ್ರದೇಶದ ಧಾರ್‌ನಲ್ಲಿರುವ ಭೋಜ ಶಾಲಾ-ಕಮಾಲ್ ಮೌಲಾ ಸಂಕೀರ್ಣದಲ್ಲಿ ವಸಂತ ಪಂಚಮಿ ಪೂಜೆ ಮತ್ತು ಶುಕ್ರವಾರದ ಜುಮಾ ನಮಾಝ್ ಎರಡನ್ನೂ ಶಾಂತಿಯುತವಾಗಿ ನಡೆಸುವಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಗುರುವಾರ (ಜ.22) ನಿರ್ದೇಶನಗಳನ್ನು ನೀಡಿದೆ. ಭೋಜ...

ಜಮ್ಮು-ಕಾಶ್ಮೀರ| 200 ಅಡಿ ಆಳದ ಕಂದಕಕ್ಕೆ ಉರುಳಿದ ವಾಹನ; 10 ಜನ ಸೇನಾ ಸಿಬ್ಬಂದಿ ಸಾವು

ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯ ಭದೇರ್ವಾ ಪ್ರದೇಶದಲ್ಲಿ 200 ಅಡಿ ಆಳದ ಕಂದಕಕ್ಕೆ ವಾಹನ ಉರುಳಿ 10 ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಒಟ್ಟು 17 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸೇನಾ...

ಉತ್ತರ ಪ್ರದೇಶ ಮರ್ಯಾದೆಗೇಡು ಹತ್ಯೆ; ಅಂತರ್ಧರ್ಮೀಯ ಜೋಡಿಯನ್ನು ಕೊಂದ ಯುವತಿ ಸಹೋದರರು

ಉತ್ತರ ಪ್ರದೇಶದ ಮೊರಾದಾಬಾದ್‌ನ ಕಾಡಿನಲ್ಲಿ ಅಂತರ್ಧರ್ಮೀಯ ಜೋಡಿಯ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ ಆಕೆಯ ಸಹೋದರರು ಮರ್ಯಾದೆಗೇಡು ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿಯನ್ನು 19 ವರ್ಷದ ಕಾಜಲ್ ಎಂದು ಗುರುತಿಸಲಾಗಿದ್ದು, ಮೃತ...

ತೀವ್ರ ವಿರೋಧದ ನಂತರ ಇಸ್ಲಾಮೋಫೋಬಿಕ್ ಹೇಳಿಕೆ ಹಿಂಪಡೆದು, ಕ್ಷಮೆಯಾಚಿಸಿದ ಕೇರಳದ ಸಿಪಿಐ(ಎಂ) ಸಚಿವ ಸಾಜಿ ಚೆರಿಯನ್

ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಮುಸ್ಲಿಂ ವಿಜೇತರ ಬಗ್ಗೆ ತಮ್ಮ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದ್ದ ಸಿಪಿಐ(ಎಂ) ಹಿರಿಯ ನಾಯಕ ಮತ್ತು ಕೇರಳ ಸಚಿವ ಸಾಜಿ ಚೆರಿಯನ್ ಬುಧವಾರ ತಮ್ಮ ಹೇಳಿಕೆಯನ್ನು  ಹಿಂತೆಗೆದುಕೊಂಡಿದ್ದಾರೆ. ಪಕ್ಷ,...

ರಾಜ್ಯಪಾಲರಿಂದ ಸಂವಿಧಾನದ ವಿಧಿಗಳ ಉಲ್ಲಂಘನೆ; ಜನಪ್ರತಿನಿಧಿಗಳ ಸಭೆಯನ್ನು ಅವಮಾನಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

"ವರ್ಷದ ಮೊದಲ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಓದದೇ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸಿದ್ದಾರೆ. ಅವರ ಈ ನಡೆ ಜನಪ್ರತಿನಿಧಿಗಳ ಸಭೆಗೆ ಮಾಡಿದ ಅವಮಾನ. ಇದನ್ನು ನಾವು ಖಂಡಿಸುತ್ತೇವೆ. ಈ...