Homeಮುಖಪುಟ'ಲವ್ ಜಿಹಾದ್, ಮೆಹಂದಿ ಜಿಹಾದ್' ಕಾರ್ಯಕ್ರಮಗಳ ಪ್ರಸಾರ : ಝೀ ನ್ಯೂಸ್, ಟೈಮ್ಸ್ ನೌ ನವಭಾರತ್‌ಗೆ...

‘ಲವ್ ಜಿಹಾದ್, ಮೆಹಂದಿ ಜಿಹಾದ್’ ಕಾರ್ಯಕ್ರಮಗಳ ಪ್ರಸಾರ : ಝೀ ನ್ಯೂಸ್, ಟೈಮ್ಸ್ ನೌ ನವಭಾರತ್‌ಗೆ ಎನ್‌ಬಿಡಿಎಸ್‌ಎ ತರಾಟೆ

ವಿಡಿಯೋ, ತಲೆಬರಹಗಳನ್ನು ತೆಗೆದುಹಾಕಲು ಸೂಚನೆ

- Advertisement -
- Advertisement -

ನಿವೃತ್ತ ನ್ಯಾಯಮೂರ್ತಿ ಎ.ಕೆ ಸಿಕ್ರಿ ನೇತೃತ್ವದ ಸುದ್ದಿ ಪ್ರಸಾರ ಮತ್ತು ಡಿಜಿಟಲ್ ಮಾನದಂಡಗಳ ಪ್ರಾಧಿಕಾರ (ಎನ್‌ಬಿಡಿಎಸ್‌ಎ) ‘ಮೆಹಂದಿ ಜಿಹಾದ್’ ಎಂಬ ಶೀರ್ಷಿಕೆಯಡಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ ಝೀ ನ್ಯೂಸ್‌ಗೆ ಎಚ್ಚರಿಕೆ ನೀಡಿದ್ದು, ನೀತಿ ಸಂಹಿತೆಯ ಉಲ್ಲಂಘನೆ ಹಿನ್ನೆಲೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಂದ ಅಂತಹ ಕಾರ್ಯಕ್ರಮಗಳ ವಿಡಿಯೋಗಳನ್ನು ತೆಗೆದುಹಾಕುವಂತೆ ನಿರ್ದೇಶಿಸಿದೆ ಎಂದು ಲೈವ್‌ ಲಾ ವರದಿ ಮಾಡಿದೆ.

ಪ್ರತ್ಯೇಕ ಆದೇಶದಲ್ಲಿ, ಕಾನೂನುಬಾಹಿರ ಮತಾಂತರ ಪ್ರಕರಣದಲ್ಲಿ ನ್ಯಾಯಾಲಯದ ತೀರ್ಪನ್ನು ವರದಿ ಮಾಡುವಾಗ ‘ಲವ್ ಜಿಹಾದ್’ ಕುರಿತು ಕೆಲವು ಪ್ರಚೋದನಕಾರಿ ತಲೆಬರಹಗಳನ್ನು ಬಳಸಿದ್ದಕ್ಕಾಗಿ ಎನ್‌ಬಿಡಿಎಸ್‌ಎ ‘ಟೈಮ್ಸ್ ನೌ ನವಭಾರತ್’ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದೆ. ವಾಹಿನಿಯು ತಲೆಬರಹಗಳಲ್ಲಿ ತೀರ್ಪಿನ ಭಾಗವಲ್ಲದ ಕೆಲವು ಅಂಶಗಳನ್ನು ಪರಿಚಯಿಸಿರುವ ಹಿನ್ನೆಲೆ ಅವುಗಳನ್ನು ತೆಗೆದುಹಾಕಲು ಆದೇಶಿಸಿದೆ ಎಂದು ವರದಿ ವಿವರಿಸಿದೆ.

ಚಾನೆಲ್‌ಗಳು ತಪ್ಪು ಮಾಹಿತಿಗಳನ್ನು ಹರಡುತ್ತಿವೆ ಮತ್ತು ಜನರನ್ನು ವಿಭಜಿಸುವ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ಹೋರಾಟಗಾರ ಇಂದ್ರಜೀತ್ ಘೋರ್ಪಡೆ ಅವರು ಅಕ್ಟೋಬರ್ 2024ರಲ್ಲಿ ಸಲ್ಲಿಸಿದ್ದ ದೂರುಗಳ ಮೇರೆಗೆ ಎನ್‌ಬಿಡಿಎಸ್‌ಎ ಆದೇಶ ನೀಡಿದೆ.

ಝೀ ನ್ಯೂಸ್ – ‘ಮೆಹಂದಿ ಜಿಹಾದ್’ ಕಾರ್ಯಕ್ರಮಗಳು

‘ಮೆಹಂದಿ ಜಿಹಾದ್’ ಎಂಬ ಕಾಲ್ಪನಿಕ ವಿಷಯದ ಅಡಿ, ಮುಸ್ಲಿಂ ಮೆಹಂದಿ ಕಲಾವಿದರು ಹಿಂದೂ ಮಹಿಳೆಯರಿಗೆ ಮೆಹಂದಿ ಹಚ್ಚುವ ಮುನ್ನ ಅದಕ್ಕೆ ಉಗುಳುತ್ತಾರೆ. ಮುಸ್ಲಿಂ ಪುರುಷರು ಮೆಹಂದಿ ಕಲಾವಿದರಾಗಿ ಕೆಲಸ ಮಾಡಿ, ಹಿಂದೂ ಮಹಿಳೆಯರ ಫೋನ್ ನಂಬರ್‌ಗಳನ್ನು ತೆಗೆದುಕೊಳ್ಳುತ್ತಾರೆ. ಅದರ ಮೂಲಕ ಅವರನ್ನು ಬಲೆಗೆ ಬೀಳಿಸಿ ಮದುವೆಯಾಗುತ್ತಾರೆ. ಬಳಿಕ ಅವರ ಧರ್ಮ ಬದಲಾಯಿಸುವ ಗುಪ್ತ ಯೋಜನೆ ಇದೆ ಎಂಬ ಕಪೋಲಕಲ್ಪಿತ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದ ಆರೋಪಗಳನ್ನು ಝೀ ನ್ಯೂಸ್ ವಿರುದ್ದ ಮಾಡಲಾಗಿತ್ತು.

ಅಲ್ಲದೆ, ಈ ಕಾರ್ಯಕ್ರಮಗಳ ಪ್ರಸಾರದ ಬಳಿಕ, ಕೆಲವು ಗುಂಪುಗಳು ಮುಸ್ಲಿಂ ಮೆಹಂದಿ ಕಲಾವಿದರ ವಿರುದ್ಧ ಹಿಂಸಾತ್ಮಕ ಮಾತುಗಳನ್ನು ಆಡಿತ್ತು, ಅವರನ್ನು ಬಹಿಷ್ಕರಿಸಬೇಕು ಎಂದು ಕರೆ ಕೊಟ್ಟಿತ್ತು. ಇವುಗಳನ್ನು ಝೀ ನ್ಯೂಸ್ ಹೆಚ್ಚು ಹೆಚ್ಚು ಪ್ರಸಾರ ಮಾಡಿದೆ ಎಂದು ದೂರಲಾಗಿತ್ತು. ಝೀ ನ್ಯೂಸ್ ಮಾಡಿದ ಆರೋಪಗಳು ಮತ್ತು ಪ್ರಸಾರ ಮಾಡಿದ ಕಾರ್ಯಕ್ರಮಗಳು ಸತ್ಯವನ್ನು ತಿರುಚುವಂತಿದ್ದವು. ಜನರಲ್ಲಿ ತಪ್ಪು ಭಾವನೆಗಳನ್ನು ಹುಟ್ಟಿಸುವಂತಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

“1. ಮೆಹೆಂದಿ ಜಿಹಾದ್ ಪರ್ ದೇ ದನಾ-ದನ್, 2. ಆವೇದನ್ ನಿವೇದನ್ ನಹಿ ಮಾನೆ ತೋ ದೇ ದನಾ-ದನ್, 3. ಮೆಹಂದಿ ಜಿಹಾದ್ ಕೆ ಖಿಲಾಫ್ ಲಾಟ್ ಮಾಡೆಲ್ ಲಾಂಚ್, 4. ಲಾಠಿ ಸೆ ಲೈಸ್ ರಹೇಂಗೆ ಜಿಹಾದಿಯೋಂಕೊ ರೊಕೇಂಗೆ, 5. ಪಕಡೆ ಜಾನೆ ಪರ್ ಸಬಕ್ ಸಿಕಾಯ ಜಾಯೆಗ” ಈ ರೀತಿಯ ತಲೆಬರಹಗಳನ್ನು ಝೀ ನ್ಯೂಸ್ ತನ್ನ ಕಾರ್ಯಕ್ರಮಗಳಿಗೆ ಕೊಟ್ಟಿತ್ತು ಎಂದು ದೂರಿನಲ್ಲಿ ವಿವರಿಸಲಾಗಿತ್ತು.

ಝೀ ನ್ಯೂಸ್ ಮುಸ್ಲಿಂ ಮೆಹಂದಿ ಕಲಾವಿದರರ ವಿರುದ್ದದ ಆರೋಪಗಳ ಸತ್ಯಾಸತ್ಯತೆ ಪರಿಶೀಲಿಸಿರಲಿಲ್ಲ. ಮುಸ್ಲಿಂ ಕಲಾವಿದರ ವಿರುದ್ಧದ ಬೆದರಿಕೆಗಳನ್ನು ಮತ್ತು ಅವಮಾನಗಳನ್ನು ಖಂಡಿಸಿರಲಿಲ್ಲ. ವಿರೋಧಿ ದೃಷ್ಟಿಕೋನಗಳನ್ನು ನಿರ್ಲಕ್ಷಿಸಿತ್ತು ಮತ್ತು ತನ್ನ ಥಂಬ್‌ನೇಲ್‌ಗಳು, ತಲೆ ಬರಹಗಳು ಮತ್ತು ಶೀರ್ಷಿಕೆಗಳ ಮೂಲಕ ಸಾಮುದಾಯಿಕ ಭಯ ಮತ್ತು ದ್ವೇಷವನ್ನು ಹರಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.

ಝೀ ನ್ಯೂಸ್ ಎನ್‌ಬಿಡಿಎಸ್‌ಎ ಮುಂದೆ ತಾವು ಕೇವಲ ಕೆಲವು ಸಂಘಟನೆಗಳ ಹೇಳಿಕೆಗಳನ್ನು ವರದಿ ಮಾಡಿದ್ದೇವೆ ಎಂದು ವಾದಿಸಿತ್ತು. ಆದರೆ, ಎನ್‌ಬಿಡಿಎಸ್‌ಎ ತಲೆ ಬರಹಗಳು ಮತ್ತು ಕಾರ್ಯಕ್ರಮದ ಪ್ರಸ್ತುತಿಯ ರೀತಿಯಿಂದ ಚಾನೆಲ್ ಸ್ವತಃ ಈ ಆರೋಪಗಳನ್ನು ಬೆಂಬಲಿಸುತ್ತಿರುವಂತೆ ಭಾಸವಾಗಿದೆ ಎಂದಿದೆ. ಆದ್ದರಿಂದ, ಝೀ ನ್ಯೂಸ್‌ಗೆ ಆ ಕಾರ್ಯಕ್ರಮಗಳನ್ನು ತೆಗೆದುಹಾಕಲು ಆದೇಶಿಸಿದೆ. ಭವಿಷ್ಯದಲ್ಲಿ ಎಚ್ಚರಿಕೆಯಿಂದ ವಿರೋಧಿ ದೃಷ್ಟಿಕೋನಗಳನ್ನು ಸೇರಿಸಿಕೊಂಡು ವರದಿ ಮಾಡುವಂತೆ ಎಚ್ಚರಿಕೆ ನೀಡಿದೆ ಎಂದು ಲೈವ್ ಲಾ ವರದಿ ಹೇಳಿದೆ.

“ತಲೆಬರಹಗಳನ್ನು ಕೊಡುವಾಗ ಪ್ರಸಾರಕರು ಇವು ಮೂರನೇ ವ್ಯಕ್ತಿಗಳು ನೀಡಿದ ಹೇಳಿಕೆಗಳು ಎಂದು ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ ಅಥವಾ ಈ ತಲೆಬರಹಗಳು ಪ್ರಸಾರಕರ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂಬುದಕ್ಕೆ ಯಾವುದೇ ಸ್ಪಷ್ಟನೆಯನ್ನೂ ನೀಡಿಲ್ಲ” ಎಂದು ಎನ್‌ಬಿಡಿಎಸ್‌ಎ ಹೇಳಿದೆ.

“ಸಂಪಾದಕೀಯ ವಿವೇಚನೆಯ ಭಾಗವಾಗಿರುವ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ರಕ್ಷಿಸಲ್ಪಟ್ಟಿರುವ ಪ್ರಸಾರದ ವಿಷಯದ ಬಗ್ಗೆ ತಾನು ಯಾವುದೇ ಹೇಳಿಕೆ ನೀಡಲು ಸಾಧ್ಯವಿಲ್ಲ ಎಂದು ಎನ್‌ಬಿಡಿಎಸ್‌ಎ ಸ್ಪಷ್ಟಪಡಿಸಿದೆ. ಆದರೆ, ಈ ಹಂತದಲ್ಲಿ ಸಾರ್ವಜನಿಕ ಸಂವಾದವನ್ನು ರೂಪಿಸುವಲ್ಲಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿ ಮಾಧ್ಯಮವು ವಹಿಸುವ ಪಾತ್ರವನ್ನು ನೆನಪಿಸುವುದು ಅಗತ್ಯವಾಗಿದೆ. ಸಂಭಾವ್ಯ ಸೂಕ್ಷ್ಮ ವಿಷಯಗಳೊಂದಿಗೆ ವ್ಯವಹರಿಸುವಾಗ, ಪ್ರಸಾರಕರು ತಾವು ಪ್ರಸಾರ ಮಾಡುವ ವಿಷಯವನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಬೇಕು. ಅದು ನೀತಿ ಸಂಹಿತೆಯಲ್ಲಿ ವಿವರಿಸಿರುವ ಪತ್ರಿಕೋದ್ಯಮ ಮಾನದಂಡಗಳಿಗೆ ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು” ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.

ಟೈಮ್ಸ್ ನೌ ನವಭಾರತ್: ‘ಲವ್ ಜಿಹಾದ್’ ವರದಿ

ಟೈಮ್ಸ್ ನೌ ನವಭಾರತ್ ಚಾನೆಲ್‌ ವಿರುದ್ಧದ ದೂರು, ಹಿಂದೂ ಮಹಿಳೆಯನ್ನು ಧಾರ್ಮಿಕ ಮತಾಂತರದ ನಂತರ ಮದುವೆಗೆ ಒತ್ತಾಯಿಸಿದ್ದಕ್ಕಾಗಿ ಮುಸ್ಲಿಂ ಪುರುಷನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಬರೇಲಿ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವರದಿಗೆ ಸಂಬಂಧಿಸಿದೆ.

ದೂರಿನ ಪ್ರಕಾರ, ಟೈಮ್ಸ್ ನೌ ನವಭಾರತ್ ಪತ್ರಿಕೋದ್ಯಮದ ಪರಿಶೀಲನೆಯಿಲ್ಲದೆ ನ್ಯಾಯಾಧೀಶರ ಮಾತುಗಳನ್ನು ಪ್ರಸಾರ ಮಾಡಿದೆ. ಮಹಿಳೆಯ ಸಾಕ್ಷ್ಯವನ್ನು ಬಿಟ್ಟುಬಿಟ್ಟಿದೆ ಮತ್ತು ‘ಲವ್ ಜಿಹಾದ್’ ನಿರೂಪಣೆಯನ್ನು ಬಲಪಡಿಸುವ ಬಿಜೆಪಿ ರಾಜಕಾರಣಿಗಳ ಹೇಳಿಕೆಗಳನ್ನು ಮತ್ತಷ್ಟು ಪ್ರಸಾರ ಮಾಡಿದೆ. “ಪ್ಯಾರ್ ಕೆ ಜಹಾಝ್ ಮೇ ಜಿಹಾದ್ ಕಾ ತೂಫಾನ್,” “ಲವ್ ಜಿಹಾದ್ ಪರ್ ಕೋರ್ಟ್ ಕಾ ಸಖ್ತ್ ಫೈಸ್ಲಾ,” “ಜಿಹಾದಿಯೋನ್ ಕಿ ಮೊಹಬ್ಬತ್ ಕಾ ಸಚ್,” ಮತ್ತು “ಜಿಹಾದಿಯೋಂ ಕೆ ಇರಾದಾನ್ ಪರ್ ಲಗೀ ಮೊಹರ್” ಮುಂತಾದ ತಲೆಬರಹಗಳನ್ನು ಪ್ರಸಾರ ಮಾಡಿದೆ.

ನ್ಯಾಯಾಲಯದ ತೀರ್ಪನ್ನು ವರದಿ ಮಾಡುವ ಮೊದಲು ಚಾನೆಲ್ ಸ್ವತಂತ್ರ ಸತ್ಯ ಪರಿಶೀಲನೆ ಮಾಡಬೇಕಿತ್ತು ಎಂಬ ದೂರುದಾರರ ವಾದದಿಂದ ಎನ್‌ಬಿಡಿಎಸ್‌ಎ ಪ್ರಭಾವಿತ ಆಗಿಲ್ಲ.

ನ್ಯಾಯಾಲಯದ ತೀರ್ಪಿನ ಕುರಿತು ಚಾನೆಲ್ ವರದಿ ಮಾಡಿದೆ ಅದು ಆಕ್ಷೇಪಾರ್ಹವಲ್ಲ ಎಂದು ಎನ್‌ಬಿಡಿಎಸ್‌ಎ ಹೇಳಿದೆ. ಆದರೆ, ಟೈಮ್ಸ್ ನೌ ನವಭಾರತ್ ತೀರ್ಪಿನ ನಿರೂಪಣೆಯನ್ನು ಮೀರಿ ಸಂವೇದನಾಶೀಲ ತಲೆಬರಹಗಳ ಮೂಲಕ ಹೆಚ್ಚುವರಿ ಅಂಶಗಳನ್ನು ಪರಿಚಯಿಸಿದೆ ಎಂದು ಅದು ಹೇಳಿದೆ. “ಯುಪಿ ಮೇ ಲವ್ ಜಿಹಾದ್… ಟೂಲ್‌ಕಿಟ್ ಪಾಕಿಸ್ತಾನಿ” ಮತ್ತು “ಝುತೇ ನಾಮ್ ಕಾ ಅಫ್ಸಾನಾ, ಮಕ್ಸದ್ ಮುಸಲ್ಮಾನ್ ಬನಾನ” ಮುಂತಾದ ಶೀರ್ಷಿಕೆಗಳ ಬಳಕೆಯನ್ನು ಎಮ್‌ಡಿಬಿಎಸ್‌ಎ ನಿರ್ದಿಷ್ಟವಾಗಿ ಸೂಚಿಸಿದೆ. ಇದು ವರದಿಯ ಉದ್ದೇಶಿತ ವಿಷಯಕ್ಕೆ ಹೊಂದಿಕೆಯಾಗುವುದಿಲ್ಲ ಎಂದು ಹೇಳಿದೆ.

ಕಾರ್ಯಕ್ರಮ ಪ್ರಸಾರ ಮಾಡುವಾಗ, ಪ್ರಸಾರಕರು ನ್ಯಾಯಾಲಯದ ತೀರ್ಪಿನ ನಿರೂಪಣೆಯನ್ನು ಮೀರಿ, ತೀರ್ಪಿನ ಭಾಗವಲ್ಲದ ಕೆಲವು ಅಂಶಗಳನ್ನು ಪರಿಚಯಿಸಿದ್ದಾರೆ. ಅವುಗಳಿಗೆ ವರದಿಯ ಉದ್ದೇಶಿತ ವಿಷಯಕ್ಕೆ ಹೊಂದಿಕೆಯಾಗದ ತಲೆಬರಹಗಳನ್ನು ಬಳಸಲಾಗಿದೆ. ಆದ್ದರಿಂದ ಆಕ್ಷೇಪಾರ್ಹ ತಲೆಬರಹಗಳನ್ನು ತೆಗೆದುಹಾಕುವಂತೆ ಎನ್‌ಡಿಬಿಎಸ್‌ಎ ಚಾನೆಲ್‌ಗೆ ನಿರ್ದೇಶಿಸಿದೆ. ಇದೇ ವೇಳೆ, ಈ ಶೀರ್ಷಿಕೆಗಳನ್ನು ಹೊರತುಪಡಿಸಿ, ತೀರ್ಪಿನ ನಿರೂಪಣೆಯು ನೀತಿಸಂಹಿತೆ ಮತ್ತು ಪ್ರಸಾರ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಎನ್‌ಡಿಬಿಎಸ್‌ಎ ತಿಳಿಸಿದೆ.

Courtesy : livelaw.in

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...