Homeಪುಸ್ತಕ ವಿಮರ್ಶೆಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

ಗಾಂಧೀಜಿಗೆ ಪ್ರಭಾವ ಬೀರಿದ ಪುಸ್ತಕ ಜಾನ್ ರಸ್ಕಿನ್‌ರ ’ಅನ್‍ಟು ದಿಸ್ ಲಾಸ್ಟ್’ ಬಗ್ಗೆ

- Advertisement -
- Advertisement -

ಗಾಂಧೀಜಿಗೆ ಸರ್ವೋದಯವಾಗಿ ಕಂಡ ಜಾನ್ ರಸ್ಕಿನ್ ಅವರ ಅನ್ಟು ದಿಸ್ ಲಾಸ್ಟ್ ಶಿರೋಬರಹದ ಬೇರು ಬೈಬಲ್ಲಿನ ಒಬ್ಬ ಉದಾರ ಮನದ ಮಾಲಿಕನ ದೃಷ್ಟಾಂತದಲ್ಲಿದೆ. ಸ್ವರ್ಗ ಸಾಮ್ರಾಜ್ಯದ ರೂಪಕವನ್ನು ಅರ್ಥೈಸಲು ಯೇಸು ಹೇಳುವ ಕತೆ.

ದ್ರಾಕ್ಷಿತೋಟದ ಯಜಮಾನ ಕೂಲಿಯಾಳುಗಳಿಗೆ ದಿನಕ್ಕೆ ಒಂದು ಬೆಳ್ಳಿ ನಾಣ್ಯದಂತೆ ಗೊತ್ತು ಮಾಡಿ ಕೆಲಸಕ್ಕೆ ಕಳುಹಿಸುತ್ತಾನೆ. ತೋಟದೊಡೆಯ ಕೆಲಸವಿಲ್ಲದೇ ಇರುವ ಇತರರನ್ನೂ ಕಂಡು ತಡವಾಗಿದ್ದರೂ ಅವರನ್ನೂ ಕೂಲಿಗೆ ಕಳುಹಿಸುತ್ತಾನೆ. ಅದೇ ರೀತಿಯಲ್ಲಿ ಇನ್ನೂ ದಿನದ ಕೊನೆಯ ಭಾಗದಲ್ಲಿ ಬಂದು ಸೇರಿಕೊಂಡವರಿಗೆಲ್ಲಾ ಕೆಲಸಕ್ಕೆ ಸೇರಿಸಿಕೊಳ್ಳುತ್ತಾನೆ. ಸಂಜೆ ಎಲ್ಲರೂ ಹೊರಡುವಾಗ ಎಲ್ಲರಿಗೂ ಸಮನಾಗಿ ಒಂದು ಬೆಳ್ಳಿ ನಾಣ್ಯದ ಕೂಲಿಯೇ ಸಿಗುತ್ತದೆ. ಮೊದಲು ಕೆಲಸಕ್ಕೆ ಬಂದವರು ಮೊದಲು, ನಡುವೆ ಮತ್ತು ಕೊನೆಗೆ ಬಂದವರೆಲ್ಲರಿಗೂ ಒಂದೇ ಸರಿಸಮ ಕೂಲಿ ಎಂದು ಗೊಣಗಿದಾಗ ತೋಟದೊಡೆಯ ಹೇಳುತ್ತಾನೆ.

“ನಿನಗೆ ಅನ್ಯಾಯ ಮಾಡಲಿಲ್ಲ. ಒಪ್ಪಂದದ ಪ್ರಕಾರ ನಿನಗೆ ನಿನ್ನ ಬೆಳ್ಳಿನಾಣ್ಯ ಸಿಕ್ಕಿದೆ. ನಿನಗೆ ಕೊಟ್ಟಷ್ಟನ್ನು ಈ ಕಟ್ಟಕಡೆಯವನಿಗೂ ಕೊಡುವುದು ನನ್ನ ಇಷ್ಟ. ನನ್ನ ಔದಾರ್ಯ ಕಂಡು ನಿನಗೇಕೆ ಅಸೂಯೆ?”

ಈ ಕಟ್ಟ ಕಡೆಯವನಿಗೆ ಎನ್ನುವುದೇ “ಅನ್ ಟು ದಿಸ್ ಲಾಸ್ಟ್.”

ನ್ಯಾಯ ಮತ್ತು ಪ್ರಾಮಾಣಿಕತೆಗಳೆಂಬ ಮೌಲ್ಯಾಧಾರದಲ್ಲಿ ಸಂಪತ್ತನ್ನು ವ್ಯಾಖ್ಯಾನಿಸುವ ರಸ್ಕಿನ್ ಗಾಂಧಿ ಮತ್ತು ಟಾಲ್‌ ಸ್ಟಾಯ್‌ ಒಳಗೊಂಡಂತೆ ಅನೇಕಾನೇಕರನ್ನು ತಮ್ಮ ಬರಹದ ಮೂಲಕ ಪ್ರಭಾವಿಸಿದ್ದರು. ಹಾಗೆಯೇ ಅವರನ್ನು ಬಂಡವಾಳಶಾಹಿಯನ್ನು ಪ್ರತಿನಿಧಿಸುವವರು ವಿರೋಧಿಸುತ್ತಿದ್ದರು. ಸೃಷ್ಟಿಯ ಸಂರಚನೆಯಲ್ಲಿ ಕೈಗಾರಿಕೆಗಳ ಆಡಳಿತಯಂತ್ರಗಳು ಮತ್ತು ಬಂಡವಾಳಶಾಹಿಯು ಹೇಗೆ ಅಮಾನ್ಯವಾಗುತ್ತದೆ ಎಂಬ ಅರಿವನ್ನೂ ಈ ಕೃತಿಯಲ್ಲಿ ಉಸುರಿದ್ದರು.

ಎಲ್ಲಾ ಕೆಲಸಗಳನ್ನೂ ಗೌರವಿಸುತ್ತಾ ಕೊಟ್ಟೆಲ್ಲಾ ಕೆಲಸಗಳಿಗೆ ಸಮವಾಗಿ ಸಂದಾಯ ಮಾಡಬೇಕೆನ್ನುವ ರಸ್ಕಿನ್ ಪ್ರತಿಯೊಬ್ಬರನ್ನೂ ಕುಶಲಿಗಳನ್ನಾಗಿ, ವಿದ್ಯಾವಂತರನ್ನಾಗಿ ರೂಪಿಸುವುದು ಸರಕಾರದ ಕೆಲಸವೆನ್ನುತ್ತಾರೆ. ಅವರ ಆದರ್ಶವೆಂದರೆ; ಯಜಮಾನನು ತನ್ನ ಮಗನನ್ನು ವಿದ್ಯಾವಂತನನ್ನಾಗಿ, ಹಣವಂತನನ್ನಾಗಿ ಆಸ್ಥೆಯಿಂದ ರೂಪಿಸುವಂತೆ ತನ್ನ ಕೆಲಸಗಾರರನ್ನೂ ರೂಪಿಸಬೇಕು.

ಮತ್ತೊಬ್ಬರನ್ನು ಬಳಸಿಕೊಳ್ಳುತ್ತಾ ತಾನು ಸಿರಿವಂತನಾಗುವುದು ಪಾಪದ ಕೆಲಸ. ಅದು ಸರಕಾರದ ಆರ್ಥಿಕತೆಗೂ ಅನ್ಯಾಯ. ತನ್ನ ನೆರೆಯವನನ್ನು ಬಡತನಕ್ಕೆ ದೂಡುತ್ತಾ ತನ್ನನ್ನು ಶ್ರೀಮಂತಗೊಳಿಸಿಕೊಳ್ಳುವ ಯಾವುದೇ ವಿಧಾನ ಅನ್ಯಾಯ. ತಾನೊಬ್ಬ ಸಿರಿವಂತನಾಗಿ ಬಡ ಸಮಾಜದಲ್ಲಿರುವುದು ಮೌಲ್ಯಹೀನ. ಹಾಗಾಗಿ ಸಂಪತ್ತು ಎಂಬುದು ನ್ಯಾಯದ ಆಧಾರದಲ್ಲಿರಬೇಕು. ಇತರರ ದುಡಿಮೆಯಿಂದ ತಾನು ಶ್ರೀಮಂತನಾಗುವುದು ಶೀಲವಲ್ಲ.

ರಾಷ್ಟ್ರೀಯ ಸಂಪತ್ತೆನ್ನುವುದು ಕೆಲವು ಜನರ ಒಟ್ಟುಗೂಡಿಸಿದ ಸಂಪತ್ತಾಗಬಾರದು. ರಾಷ್ಟ್ರದ ಎಲ್ಲಾ ಜನರ ವಿದ್ಯಾರ್ಹತೆ, ಪ್ರತಿಭೆ, ದುಡಿಮೆಗಳಿಂದ ಕ್ರೋಢೀಕರಿಸಿರುವಂತಹ ಸಂಪತ್ತಾಗಬೇಕು. ವ್ಯಕ್ತಿಗತವಾಗಿ ಶ್ರೀಮಂತರಾಗಿರುವವರಿಂದ ಸಮಾಜಕ್ಕೆ ಎಂತಹ ಕೊಡುಗೆ ದೊರಕುತ್ತದೆ!

ವಾಣಿಜ್ಯ ವ್ಯವಹಾರವು ನ್ಯಾಯಸಮ್ಮತವಾಗಿಯೇ ನಡೆಯಬೇಕು. ಏಕೆಂದರೆ ಸೃಷ್ಟಿಯ ವ್ಯವಹಾರಗಳಲ್ಲಿ ತಾರತಮ್ಯವಿಲ್ಲ. ಅದೇರೀತಿ ನ್ಯಾಯದ ಪ್ರಜ್ಞೆಯಿಂದ ಆರ್ಥಿಕ ವ್ಯವಹಾರಗಳೂ ನಡೆಯಬೇಕು. ಆರ್ಥಿಕತೆಯೂ ಕೆಲವು ಜನರ ಕೈಯೊಡೆತನದಲ್ಲಿರದೇ ಸಹಜೀವಿಗಳೆಲ್ಲ ಸರಣಿಯಲ್ಲಿ ವ್ಯಾಪ್ತವಾಗಿ ಪ್ರಾಪ್ತಿಯಲ್ಲಿರಬೇಕು. ರಸ್ಕಿನ್ ಹೇಳುವಂತೆ ಯಾರುಯಾರನ್ನೂ ಕಡೆಯಾಗಿ ನೋಡಬಾರದು, ಯಾರು ಯಾರಿಗೂ ಗುಲಾಮರಾಗಿರಕೂಡದು. ಕೆಲವು ಜನರ ಕೈಯೊಡೆತನದಲ್ಲಿರುವ ಸಂಪತ್ತು ಹಲವು ಜನರನ್ನು ಬಡತನಕ್ಕೆ ದೂಡುತ್ತದೆ.

ರಸ್ಕಿನ್ ಧ್ವನಿಸುವುದಿಷ್ಟೇ, ಜೀವನಕ್ಕೆ ಆಧಾರವಾಗುವುದೋ ಅದೇ ಮೌಲ್ಯ. ಹಣ, ಬೆಲೆ, ಉತ್ಪಾದನೆ ಯಾವುದಾದರೂ ಜೀವಿಗಳ ಜೀವನಕ್ಕೆ ಆಧಾರವಾಗುವುದಾದರೆ ಮಾತ್ರವೇ ಅವು ಮೌಲ್ಯ. ಉಪಯೋಗಿಸದ ಸಂಪತ್ತನ್ನು ಶೇಖರಿಸಿಟ್ಟುಕೊಳ್ಳುವುದು ಸಿರಿವಂತಿಕೆಯ ರೋಗ. ಉತ್ಪಾದನೆಗಳು ಹಣವನ್ನು ಸೃಷ್ಟಿಸುವ ಆಧಾರದಲ್ಲಾಗದೇ ಬಳಕೆಯ ಆಧಾರದಲ್ಲಾದರೆ ಅದು ಉಪಯುಕ್ತ ಮತ್ತು ಮೌಲ್ಯಾಧಾರಿತವಾದ ಪ್ರಗತಿ.

ರಸ್ಕಿನ್‍ರವರ ಆರ್ಥಿಕ ತತ್ವ, ಜೀವನಕ್ಕೆ ಹೊರತಾದ ಸಂಪತ್ತಿಲ್ಲ. ಪ್ರೀತಿ, ಆನಂದ, ಅಭಿಮಾನ ಎಲ್ಲವನ್ನೂ ಒಳಗೊಳ್ಳುವ ಶಕ್ತಿಯೇ ಜೀವನವಾಗಿರುವಾಗ ದೇಶದ ಸರ್ಕಾರವೂ ಕೂಡಾ ಘನತೆಯ ಮತ್ತು ಸಂತೋಷದ ಮನುಷ್ಯರನ್ನು ತನ್ನ ನೆಲದಲ್ಲಿ ರೂಪಿಸಬೇಕು. ಇತರರ ಮರ್ಜಿಯಲ್ಲಿ ದೈನೇಸಿಯಿಂದ ಬದುಕುವಂತಹ ಪರಾವಲಂಬಿಗಳನ್ನಾಗಿ ಮಾಡುವುದಲ್ಲ.

ಇದೇ ರಸ್ಕಿನ್ನನ್ನಿಂದ ಗಾಂಧೀಜಿ ಗ್ರಹಿಸಿದ ಸರ್ವೋದಯ ತತ್ವ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 2ಲಕ್ಷ ಮತದಾರರಲ್ಲಿ ಬಸವನಗುಡಿಯಲ್ಲಿ ಉಳಿಯುವುದು 88 ಸಾವಿರ ಮಾತ್ರಾ?: SIR ಪರಿಷ್ಕರಣೆಯ ಆಘಾತಕಾರಿ ಲೆಕ್ಕಾಚಾರ

2023ರ ಚುನಾವಣೆಯಲ್ಲಿ ಬಸವನಗುಡಿಯಲ್ಲಿ 1.28 ಲಕ್ಷ ಮತಗಳು ಚಲಾಯಿಸಲ್ಪಟ್ಟಿದ್ದವು. ಆದರೆ ಪ್ರಸ್ತುತ SIR ಪ್ರಕ್ರಿಯೆಯಲ್ಲಿ 1.13 ಲಕ್ಷ ಜನರನ್ನು ಹೊರಗಿಟ್ಟು, ಕರಡು ಪಟ್ಟಿಯಲ್ಲಿ ಕೇವಲ 1.35 ಲಕ್ಷ ಮತದಾರರನ್ನು ಮಾತ್ರ ಉಳಿಸಿಕೊಳ್ಳಲಾಗಿದೆ. ಇದರ...

ಕರ್ನಾಟಕ ಎಸ್ಐಆರ್: 43.81 ಲಕ್ಷ ಜನರಿಗೆ SIR ನೋಟಿಸ್: ಗಣ್ಯರ ಹೆಸರು ಸರಿಪಡಿಸುವ ಚುನಾವಣಾ ಆಯೋಗಕ್ಕೆ ಜನ-ಸಾಮಾನ್ಯರ ನೋವು ಕಾಣುತ್ತಿಲ್ಲವೇ?

ಕರ್ನಾಟಕದಲ್ಲಿ SIR ವೇಳೆ 43.81 ಲಕ್ಷ ಮತದಾರರ ಪ್ರಕರಣಗಳಿಗೆ ನೋಟಿಸ್‌ಗಳನ್ನು ಸೃಷ್ಟಿಸಲಾಗಿದ್ದು, ಅವರ ದಾಖಲೆಗಳ ಪರಿಶೀಲನೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 23.45 ಲಕ್ಷ ಪ್ರಕರಣಗಳಲ್ಲಿ 2002ರ ಮತದಾರರ ಪಟ್ಟಿಯೊಂದಿಗೆ ಮ್ಯಾಪಿಂಗ್ ಆಗದಿರುವುದು...

ಪಿಣರಾಯಿ ವಿಜಯನ್ ವಿರುದ್ಧ ಎಫ್‌ಐಆರ್‌ಗೆ ಇಡಿ ಪತ್ರ: ಕಾನೂನು ಪರಿಶೀಲನೆ ನಡೆಸಲಾಗುವುದು ಎಂದ ಸಿಎಂ ವಿ.ಡಿ. ಸತೀಶನ್

ಆರೋಪಿತ ಸಿಎಂಆರ್‌ಎಲ್ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ಹಿರಿಯ ನಾಯಕ ಪಿಣರಾಯಿ ವಿಜಯನ್ ಮತ್ತು ಇತರರ ವಿರುದ್ಧ ಎಫ್‌ಐಆರ್ ದಾಖಲಿಸಲು ಜಾರಿ ನಿರ್ದೇಶನಾಲಯ (ಇಡಿ) ನೀಡಿರುವ ಪತ್ರವನ್ನು ಕಾನೂನುಬದ್ಧವಾಗಿ ಪರಿಶೀಲಿಸಲಾಗುವುದು, ಅದರ ನಂತರ...

‘ಸಿಇಸಿ ಜ್ಞಾನೇಶ್ ಕುಮಾರ್ ಮಗಳು’ : ನೋಯ್ಡಾ ಜಿಲ್ಲಾಧಿಕಾರಿಗೆ ಅಲಹಾಬಾದ್ ಹೈಕೋರ್ಟ್ ತಪರಾಕಿ ಬೆನ್ನಲ್ಲೇ ವಿಪಕ್ಷ ನಾಯಕರ ವಾಗ್ದಾಳಿ

ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (NSA) ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರನ್ನು ಮುನ್ನೆಚ್ಚರಿಕೆ ಕ್ರಮವಾಗಿ ವಶಕ್ಕೆ ಪಡೆದಿದ್ದಕ್ಕಾಗಿ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಮಗಳು ಹಾಗೂ ನೋಯ್ಡಾ ಜಿಲ್ಲಾಧಿಕಾರಿ ಮೇಧಾ ರೂಪಮ್ ಅವರನ್ನು...

ಮಲ್ಲಿಕಾರ್ಜುನ ಖರ್ಗೆ ಸಭೆಯ ನಂತರ ‘ಶುದ್ಧೀಕರಣ’ ವಿವಾದ: ಅಪರಿಚಿತರ ವಿರುದ್ಧ ಎಫ್‌ಐಆರ್, ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್!

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾರ್ವಜನಿಕ ಸಭೆ ನಡೆದ ನಂತರ, ಆ ಮೈದಾನವನ್ನು 'ಶುದ್ಧೀಕರಣ' (ಶುದ್ಧೀಕರಣ ಯಜ್ಞ) ಗೊಳಿಸಿದ ವಿವಾದಾತ್ಮಕ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ದ್ವಾನಿಯ ಕೊತ್ವಾಲಿ...

ದೆಹಲಿ ಮತದಾರರ ಪಟ್ಟಿಗೆ ರಾಘವ್ ಚಡ್ಡಾ ಹೆಸರು ಸೇರ್ಪಡೆ; ಸೂಕ್ತ ಪ್ರಕ್ರಿಯೆ ಅನುಸರಿಸಿಲ್ಲ ಎಂದು ಎಎಪಿ ಆರೋಪ

ರಾಷ್ಟ್ರ ರಾಜಧಾನಿಯ ಮತದಾರರ ಪಟ್ಟಿಯ ಪ್ರಸ್ತುತ ನಡೆಯುತ್ತಿರುವ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಅಡಿಯಲ್ಲಿ, ಪಂಜಾಬ್‌ನ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರ ಹೆಸರನ್ನು ದೆಹಲಿಯ ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಚುನಾವಣಾ...

ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡಿದ ವೇದಿಕೆ ‘ಶುದ್ಧೀಕರಣ’ : 29 ದಿನಗಳ ನಂತರ ಎಫ್‌ಐಆರ್ ದಾಖಲು

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಉತ್ತರಾಖಂಡದ ಹಲ್ದ್ವಾನಿಯ ವೇದಿಕೆಯೊಂದರಲ್ಲಿ 'ಶುದ್ಧೀಕರಣ' ನಡೆದ ಇಪ್ಪತ್ತೊಂಬತ್ತು ದಿನಗಳ ನಂತರ, ಪೊಲೀಸರು ಮಂಗಳವಾರ (ಸೆಪ್ಟೆಂಬರ್ 8) ಎಸ್‌ಸಿ/ಎಸ್‌ಟಿ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ...

‘ಪ್ರೊ. ಸಿಎನ್ಆರ್ ರಾವ್‌ ಅವರಿಗೆ ನೋಟಿಸ್ ಕೊಟ್ಟಿಲ್ಲ..’; ಚುನಾವಣಾ ಆಯೋಗದ ಸ್ಪಷ್ಟನೆ

ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್‌ಐಆರ್) ವೇಳೆ ಹೆಸರಿನ ಕಾಗುಣಿತದಲ್ಲಿನ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ, ದೇಶದ ಪ್ರಸಿದ್ಧ ವಿಜ್ಞಾನಿಗಳಲ್ಲಿ ಒಬ್ಬರಾದ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ತಮ್ಮ ಗುರುತನ್ನು ಸಾಬೀತುಪಡಿಸಲು...

‘ಬಂಗಾಳಿಗಳು ಮೀನು ಇಲ್ಲದೆ ಬದುಕಲು ಸಾಧ್ಯವಿಲ್ಲ’; ಆಹಾರ ಪದ್ಧತಿ ನಿರ್ಧಾರ ಬಿಜೆಪಿ ಕೆಲಸವಲ್ಲ: ಬಿಜೆಪಿ ಮುಖ್ಯಸ್ಥ ಸಮಿಕ್ ಭಟ್ಟಾಚಾರ್ಯ 

ಕೊಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ದುರ್ಗಾ ಪೂಜೆ ಮತ್ತು ನವರಾತ್ರಿ ಆಚರಣೆಗಳ ಸಂದರ್ಭದಲ್ಲಿ ಆಹಾರ ಪದ್ಧತಿಯ ಕುರಿತು ಕೆಲವು ಧಾರ್ಮಿಕ ನಾಯಕರು ಹಾಗೂ ವಿಶ್ವ ಹಿಂದೂ...

ಮತದಾರ ಇರುವುದು ವಿದೇಶದಲ್ಲಿ, ಆದರೆ ವಿಚಾರಣೆ ನಡೆಯುತ್ತಿರುವುದು ಇಲ್ಲಿ: ಕರ್ನಾಟಕ SIR ತಂದಿಟ್ಟ ಧರ್ಮಸಂಕಟ

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದ ಅನೇಕ ಅನಿವಾಸಿ ಕನ್ನಡಿಗರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೆಸರಿನಲ್ಲಿನ ವ್ಯತ್ಯಾಸ, ವಯಸ್ಸಿನ ವ್ಯತ್ಯಾಸ...