Homeಮುಖಪುಟಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! - ಬಿ.ಚಂದ್ರೇಗೌಡ

ಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! – ಬಿ.ಚಂದ್ರೇಗೌಡ

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಉತ್ತರಗಳು ಸಿಕ್ಕಿದವು.

- Advertisement -
- Advertisement -

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ, ಭಾಗವಹಿಸುತ್ತಿರುವ ಸಾಹಿತಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಘಟನೆ ಅವರ ಪ್ರಜ್ಞೆಯನ್ನು ಕೆಣಕಿದರೆ ಶುಭ ಸೂಚನೆ ಎಂದು ಭಾವಿಸಬಹುದು. ಇವತ್ತು ಶೃಂಗೇರಿ ಘಟನೆ ನಾಳೆ ಬೆಂಗಳೂರು ಸಾಹಿತ್ಯ ಪರಿಷತ್‌ಗೂ ಸಂಭವಿಸಬಹುದು. ಆಗ ಮನುಬಳಿಗಾರ್ ತರಹದವರು ಏನೂ ಮಾಡಲಾಗುವುದಿಲ್ಲ ಆದ್ದರಿಂದ, ಈ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿ ಉಳಿಯುವುದರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ.

ವಾಸ್ತವವಾಗಿ ಶೃಂಗೇರಿ ಘಟನೆ ನಮ್ಮ ಸಾಹಿತಿಗಳನ್ನು ಕೆರಳಿಸಿ ಪ್ರತಿಭಟನೆ ಇತ್ಯಾದಿ ಚಟುವಟಿಕೆ ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಅವರೆಲ್ಲಾ ಕಲ್ಬುರ್ಗಿಯ ವಸತಿ, ಪ್ರಯಾಣಭತ್ಯೆ, ಊಟದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿರಬಹುದು. ಕೆಲವೇ ಕೆಲವು ದಿಟ್ಟ ಸಾಹಿತಿಗಳು ಮಾತ್ರ ನಿಜವಾಗಿ ಪ್ರತಿಭಟನಾ ಹೇಳಿಕೆ ಕೊಟ್ಟರು.

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಕಾರಣಗಳು ಸಿಕ್ಕಿದವು. ಅವರು ವಾಸವಾಗಿರುವ ಪ್ರದೇಶದ ಮಠ ಸ್ವಜಾತಿಯ ಹಿತ ಕಾಪಾಡುವುದಕ್ಕೆ ಮೀಸಲಾದ ಮಠ. ಅಂದರೆ ಸ್ವಜಾತಿಯ ಸಾಮಾನ್ಯ ಮನೆಕಟ್ಟಿಕೊಳ್ಳುತ್ತಿದ್ದರೆ, ಇಟ್ಟಿಗೆ ಸಿಮೆಂಟು ಮರಮುಟ್ಟುಗಳನ್ನು ಪೂರೈಸಿ ಸ್ವಜಾತಿಬಂಧುವಿಗೆ ಸಹಾಯ ಮಾಡುವ ಮಠ. ಜೊತೆಗೆ ಅವರ ಮಕ್ಕಳಿಗೆ ಶಾಲಾಕಾಲೇಜಿಗೆ ಫೀಜು ಕಟ್ಟುತ್ತ ವಿದೇಶಿ ಓದಿಗೂ ಸಹಾಯ ಮಾಡುವ ಮಾತೃಸಂಸ್ಥೆ.

ಈ ರೂಪದಲ್ಲಿರುವ ಬ್ರಾಹ್ಮಣ ಮಠಗಳಲ್ಲಿ ಇದು ಮೊದಲನೆಯದು ಆದರೆ ಲಿಂಗಾಯತ ಮತ್ತಿತರ ಜಾತಿ ಮಠಗಳು ಎಲ್ಲಾ ಜನಾಂಗದ ಹಿತ ಕಾಯುತ್ತವೆ. ಉದಾಹರಣೆಗೆ ಸಿದ್ದಗಂಗೆ ಆವರಣದಲ್ಲಿ ಆಡುವ ಮಕ್ಕಳನ್ನು ವಿಚಾರಿಸಿದರೆ ಅವರೆಲ್ಲಾ ಕೆಳಜಾತಿ ಬಡವರ ಮಕ್ಕಳು, ಹಾಗೆಯೇ ಚುಂಚನಗಿರಿ ಮಠದಲ್ಲಿ ಓದುತ್ತಿರುವ ಮಕ್ಕಳನ್ನ ಕೇಳಿದರೆ ಅವರೂ ಕೂಡ ಒಂದೇ ಜಾತಿಗೆ ಸೀಮಿತವಾಗದ ಬಡವರ್ಗದ ಮಕ್ಕಳು. ಆದರೆ ಬ್ರಾಹ್ಮಣ ಮಠಗಳು ತಮ್ಮವರ ಹಿತಕಾಯುವ ಮಠ. ದುರಂತವೆಂದರೆ ದಡ್ಡ ಶೂದ್ರರ ಕಾಣಿಕೆ ಹೇರಳವಾಗಿ ಹರಿದುಬರುವುದು ಈ ಪುರೋಹಿತರ ಮಠಗಳಿಗೆ. ರಾಜಕಾರಣಿಗಳ ನಿಧಿ ಹರಿದು ಬರುವುದು ಇಲ್ಲಿಗೆ.

ಇಂತಹದನ್ನು ಗುರುತಿಸುತ್ತ ಮುಖ್ಯವಾಗಿ ಬ್ರಾಹ್ಮಣರೆಂದರೆ ಯಾರು, ಶೂದ್ರರ ಆಚರಣೆಗಳೇನು ಎಂದು ವಿಂಗಡಿಸಿ ತೋರುವ ವಿಠಲ ಹೆಗಡೆ ಮಠಗಳ ಪರಮವೈರಿ; ಜೊತೆಗೆ ಆರೆಸೆಸ್ ಭಜರಂಗಿ ವಿಶ್ವಹಿಂದೂಗಳ ಹಿಕಮತ್ತನ್ನು ವಿರೋಧಿಸುವ ಹೆಗಡೆಯನ್ನು ಗೌಡರ ಹುಡುಗನಾಗಿ ಪರಿಗಣಿಸದೆ, ನಕ್ಸಲ್ ಹಣೆಪಟ್ಟಿ ಕಟ್ಟಿ ಜನರ ವಿರುದ್ಧ ಎತ್ತಿ ಕಟ್ಟಲು ಪುರೋಹಿತರು ಕಂಡುಕೊಂಡ ಕುಯುಕ್ತಿಯಿದು. ಏಕೆಂದರೆ ಮಠದ ಮರ್ಯಾದೆಯನ್ನು ತನ್ನ ಮಂಗನಬೇಟೆಯಲ್ಲಿ ಹರಾಜು ಹಾಕಿರುವ ಈತ, ಎಂದೂ ಕ್ಷಮಿಸದ ಸಾಹಿತಿಯಾಗಿದ್ದಾನೆ. ಸಾಹಿತಿಯಾದವನು ಸತ್ಯ ಹೇಳಬೇಕು, ಅದನ್ನ ಹೇಳಿದ್ದಕ್ಕೆ ಸಮಯ ಕಾಯತ್ತಿದ್ದ ಬ್ರಾಹ್ಮಣರು, ಮತ್ತೊಬ್ಬ ಒಕ್ಕಲಿಗ ಸಿ.ಟಿ.ರವಿ ಎಂಬುವನ ಹೆಗಲ ಮೇಲೆ ಗನ್ನಿಡಿದು ಉಡಾಯಿಸಿವೆ. ಆದರೆ ಗನ್ನಿನಲ್ಲಿದ್ದದ್ದು ಗುಂಡಲ್ಲ ಬರಿ ಪುಡಿ ಅಷ್ಟೇ.

ಮಂಗನಬ್ಯಾಟಿಯಲ್ಲಿ ದಾಖಲಾಗಿರುವ ಪ್ರಕರಣ ಒಂದು ಹೀಗಿದೆ. ಮಠಕ್ಕೆ ಪ್ರವಾಸಿ ಹೆಂಗಸೊಬ್ಬಳು ಬಂದಿದ್ದಳು; ಅವಳು ಹೊಳೆಯಲ್ಲಿ ಸ್ನಾನ ಮಾಡುವುದು ಮಠದ ಉಗ್ರಾಣದ ಕಿಟಕಿಯಲ್ಲಿ ಕಾಣುತ್ತಿತ್ತು. ನೀರಲ್ಲಿ ಮುಳುಗಿದನಂತರ ಆಕೆಯ ತೆಳುವಾದ ಸೀರೆ ಮೈಗಂಟಿಕೊಂಡು, ಆಕೆಯ ದೇಹಾಕೃತಿಯನ್ನು ಉನ್ಮತ್ತಗೊಳಿಸಿದವು. ಮಠದ ಭಕ್ತಾದಿಗಳಿಗೆ ಸಾಕ್ಷಾತ್ ಶಾರದೆಯೇ ಬಂದು ಮೀಯುತ್ತಿರುವಂತೆ ಕಂಡರೆ, ಮಠದ ಕಾಮುಕರಿಗೆ ಅಂದರೆ ಮಠದ ಮುಖ್ಯಸ್ಥರಿಗೆ ಹಾಗೆ ಕಾಣಲಿಲ್ಲ. ಅವರು ಪುಣ್ಯಕ್ಷೇತ್ರದಲ್ಲಿದ್ದರೂ ನಿರ್ಭಯಾಳನ್ನು ಮುಗಿಸಿದ ಕಾಮುಕರಂತಾದರು, ಆಗ ಅವರು ಮಾಡಿದ ಉಪಾಯವೆಂದರೆ, ಸ್ನಾನ ಮುಗಿಸಿದ ಆ ಹೆಂಗಸು ಬಟ್ಟೆ ಬದಲಿಸಬೇಕಿತ್ತು. ಅದಕ್ಕೆ ಉಗ್ರಾಣದಲ್ಲಿಯೇ ಅವಕಾಶ ಮಾಡಿಕೊಟ್ಟರು ಪಾಪ ಆಕೆ ಪುಣ್ಯಕ್ಷೇತ್ರದಲ್ಲಿ ಕಾಮುಕರಿರುವುದಿಲ್ಲ ಎಂದು ಭಾವಿಸಿ ಒದ್ದೆ ಬಟ್ಟೆಯಲ್ಲೇ ಮುಗ್ಧವಾದಿ ಉಗ್ರಾಣ ಸೇರಿದಳು ಇದೀಗ ತಾನೆ ತನ್ನ ಕುಟುಂಬದಂತೆ ಕಂಡಿದ್ದ ದೈತ್ಯ ಜನಿವಾರಿಗಳು, ಹಠಾತ್ತನೆ ಅವಳ ಮೇಲೆರಗಿ ಬಾಯಿಗೆ ಬಟ್ಟೆ ತುರುಕಿ, ಆಕೆಯನ್ನ ಬಲಾತ್ಕಾರವಾಗಿ ಕೆಡಿಸಿ ಕೈಕಾಲು ಕಟ್ಟಿ ಉಗ್ರಾಣಕ್ಕೆ ಬೀಗ ಹಾಕಿ ಹೊರಟುಹೋದರು. ಆ ಮಠದ ಗುರುಗಳು ತಮ್ಮ ಸುತ್ತ ಏನು ನಡೆಯುತ್ತದೆ ಎಂಬುದನ್ನ ಅರಿಯದ ಮುಗ್ಧರು. ಕಾಮುಕರಿಗೆ ಇದೇ ವರದಾನವಾಯ್ತು.

ಇಡೀ ಮಠದ ಆಡಳಿತವನ್ನ ಕೈಗೆತ್ತಿಕೊಂಡು ಅದನ್ನ ಉನ್ನತ ಸ್ಥಿತಿಗೆ ತಂದಿದ್ದ ಘನಪಾಟಿ ಎಂಬಾತ, ತನ್ನ ಕೃತ್ಯದ ನಂತರ ಜನಿವಾರ ಬದಲಾಯಿಸಿ ಸ್ನಾನಮಾಡಿ ಕ್ರೌರ್ಯದ ನಂತರ ಮೂಡುವ ಸಂತೃಪ್ತತೆಯನ್ನು ಅನುಭವಿಸುತ್ತ, ತಾನು ಮಾಡಿದ ಸಾಹಸಕ್ಕೆ ಅಮಲ್ದಾರ ಶಂಕರಶಾಸ್ತ್ರಿಗಳನ್ನ ಕರೆಸಿಕೊಂಡು ವಿಷಯ ತಿಳಿಸಿದರು. ಹಸಿದ ದಾಸಾಚಾರಿಯಾಗಿದ್ದ ಶಂಕರಶಾಸ್ತ್ರಿ ಉಗ್ರಾಣಕ್ಕೆ ಗೂಳಿಯಂತೆ ನುಗ್ಗಿ, ಪ್ರಜ್ಞೆ ಕಳೆದುಕೊಂಡಿದ್ದ ಆ ಮಹಿಳೆಯನ್ನ ಮನಸೋಇಚ್ಛೆ ಭೊಗಿಸಿ ಬಂದನು, ಮಠದ ಗಣ್ಯಾತಿಗಣ್ಯರೇ ಮೀಸಲು ಉಂಡಮೇಲೆ ಇನ್ನುಳಿದ ನಗಣ್ಯರು ಸುಮ್ಮನಿದ್ದಾರೆಯೇ, ಅವರೂ ಮೃಗಗಳಾದರು. ಆಣತಿ ದೂರದಲ್ಲೇ ಸುಂದರವಾದ ಶಾರದಾದೇವಿಯ ಪೂಜಾಮೂರ್ತಿಯಿದ್ದು ಆಕೆಯ ಪ್ರತಿರೂಪದಂತಿದ್ದ ಆ ಮಹಿಳೆಗೆ ಆದ ಆಘಾತವೆಂದರೆ, ಆಕೆ ಯಾವಾಗ ಪ್ರಜ್ಞೆ ಕಳೆದುಕೊಂಡಳೊ ಏನೊ ಅದು ಅತ್ಯಾಚಾರಿಗಳಿಗೆ ವರದಾನವಾಯ್ತು.

ಉಗಾಣದ ಪಾಸಾಲೆಯನ್ನು ಕಾಯುತ್ತಿದ್ದ ಶೂದ್ರ ಭೈರ ಗಮನಿಸಿದಂತೆ, ಉಗ್ರಾಣದೊಳಕ್ಕೆ ಹೋಗುತ್ತಿದ್ದ ವಿಪ್ರೋತ್ತಮರು ಬರುವಾಗ ಕೆಲಸ ಮುಗಿಸಿದ ನಾಯಿಯಂತೆ ಓಡಿ ಬರುತ್ತಿದ್ದುದು ಕುತೂಹಲ ಮೂಡಿಸಿತು ಆದ್ದರಿಂದ ಅಲ್ಲಿ ಇಣುಕಿದವನಿಗೆ ಸತ್ಯ ಸಂಗತಿ ತಿಳಿಯಿತು. ಆದರೆ ಆಕೆ ಯಾರು ಎಂಬುದು ತಿಳಿಯಲಿಲ್ಲ. ಸಂಜೆಯಾಗುತ್ತಿದ್ದಂತೆ, ಹೊಳೆಗೆ ಸ್ನಾನಕ್ಕೆ ಬಂದಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತು. ಆಗ ಭೈರನಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅವರೇ ಎಂಬುದು ತಿಳಿಯಿತು. ಭೈರನಿಗೆ ಗೊತ್ತಾಯಿತು ಎಂದು ಘನಪಾಟಿಗಳಿಗೆ ಗೊತ್ತಾದ ಕೂಡಲೆ ಅವರು ಅವನನ್ನು ಕರೆಸಿಕೊಂಡು ಪ್ರೀತಿಯಿಂದ ಮಾತನಾಡಿಸಿದರು ಮತ್ತು ಒಳಕೋಣೆಗೆ ಕರೆದುಕೊಂಡು ಹೋದರು. ಭೈರನಿಗಿದು ಆಶ್ಚರ್ಯಕರ ಘಟನೆ ಕೂಡಲೇ ಘನಪಾಟಿ ತಗೊ ಭೈರಪ್ಪ ಎಂದು ಒಂದು ಪವನಿನ ಉಂಗುರ ಕೊಟ್ಟು, ಯಾರೋ ಗಂಡಬಿಟ್ಟ ಹೆಂಗಸು ಬಂದು ಹೊಳೆಯಲ್ಲಿ ಸ್ನಾನಮಾಡಿ ಕಾಣೆಯಾಗಿದ್ದಾಳೆ. ಆದರೆ ನಮ್ಮ ಉಗ್ರಾಣದಲ್ಲಿದ್ದಾಳಂತೆ ಕಿಲ್ಲೆದಾರ ನರಸಿಂಹ ಅವಧಾನಿ ನಿನ್ನ ಜೊತೆ ಇರ್ತಾರೆ ರಾತ್ರಿ ಹತ್ತು ಗಂಟೆಗೆ ನೀನು ಅವರೂ ಸೇರಿ ಮಠದ ಮರ್ಯಾದೆ ಉಳಿಸಬೇಕು ಎಂದು ಆಜ್ಞಾಪಿಸಿ ಭೈರನನ್ನು ಕಳಿಸಿಕೊಟ್ಟರು.

ಹತ್ತು ಗಂಟೆಗೆ ಸರಿಯಾಗಿ ಬಂದ ಕಿಲ್ಲೆದಾರ ನರಸಿಂಹ ಅವಧಾನಿ ಉಗ್ರಾಣದ ಬಾಗಿಲು ತೆಗೆದು ಅಲ್ಲಿ ಬಿದ್ದಿದ್ದ ಹೆಂಗಸನ್ನ ಎತ್ತಿಕೊಳ್ಳಲು ಭೈರನಿಗೆ ಹೇಳಿದ. ಭೈರ ಹಾಗೇ ಮಾಡಿದ ಅಲ್ಲಿಂದ ಅರ್ಚಕ ಕೃಷ್ಣಶರ್ಮರ ಬಾವಿ ಹತ್ತಿರ ತಂದು ಕಟ್ಟೆ ಮೇಲೆ ಕೂರಿಸಿ ಹಗ್ಗ ಬಿಗಿದು ಶವವನ್ನು ಬಾವಿಗೆ ಇಳೆಬಿಟ್ಟು ಆಕೆಯೇ ಆತ್ಮಹತ್ಯೆ ಮಾಡಿಕೊಂಡಂತೆ ಮಾಡಿದರು. ಆದರೆ ಭೈರನಿಗೆ ಆಕೆಯಲ್ಲಿನ್ನು ಜೀವವಿದ್ದ ಬಗ್ಗೆ ಅನುಮಾನ ಏಳೆಯಿತು! ಮರುದಿನ ಶವ ತೆಗೆದು ಪ್ರಕರಣವನ್ನ ಮುಚ್ಚಿಹಾಕಿದರು. ಏಕೆಂದರೆ ಇದು ಮಠದ ಮರ‍್ಯಾದೆ ಪ್ರಶ್ನೆಯಾಗಿತ್ತು. ಮುಂದೆ ಆಕೆಯ ಗಂಡನಿಗೆ ಮತಿಭ್ರಮಣೆಯಾಯ್ತು.

ಇದು ಕಲ್ಕುಳಿ ವಿಠ್ಠಲ ಹೆಗಡೆ ತಮ್ಮ ಮಂಗನ ಬ್ಯಾಟೆಯಲ್ಲಿ ದಾಖಲಿಸಿರುವ ಘಟನೆ. ಹಲವಾರು ಕಾರಣಗಳಿಗಾಗಿ ಮಂಗನಬ್ಯಾಟೆ ಮಲೆನಾಡನ್ನ ಕುರಿತು ಬರೆದ ಕುವೆಂಪು ತೇಜಸ್ವಿಯವರ ಕೃತಿಗಳ ನಂತರ ಮಹತ್ವ ಪಡೆದುಕೊಂಡಿದೆ. ಪ್ರಶಸ್ತಿಯನ್ನು ಪಡೆದಿದೆ. ಶೃಂಗೇರಿಯ ಊರ ಮಧ್ಯದಲ್ಲೇ ಇರುವ ವಿಠ್ಠಲಹೆಗಡೆಯನ್ನು ಏನೂ ಮಾಡಲಾಗದ ಪುರೋಹಿತಶಾಹಿಗಳು, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅವರಿಗೆ ಸಿಕ್ಕ ಅವಕಾಶವೆಂದರೆ ಆತ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದಂತೆ ತಡೆಯುವುದಾಗಿತ್ತು. ಆದರೆ ಸಮ್ಮೇಳನ ನಡೆದೇ ತೀರುತ್ತದೆಂದಾಗ, ಇಡೀ ಶೃಂಗೇರಿಯನ್ನ ಬಂದ್ ಮಾಡಿಸಿದವು. ಬಲವಂತವಾಗಿ ಅಂಗಡಿ ಮುಂಗಟ್ಟಿನ ಬಾಗಿಲು ಹಾಕಿಸಿದವು. ಆಟೊ ಓಡಾಡದಂತೆ ನೋಡಿಕೊಂಡವು. ಪೊಲೀಸರು ಸಾಹಿತಿಗಳು ಮತ್ತು ಪುಂಡರ ನಡುವೆ ನಿಂತು, ಒಂದು ದಿನ ಮಾತ್ರ ಸಮ್ಮೇಳನ ನಡೆಯುವಂತೆ ನೋಡಿಕೊಂಡರು. ಈಗ ಗುಲ್ಬರ್ಗದಲ್ಲಿ ಸಮ್ಮೇಳನ ನಡೆಯುತ್ತಿರುವುದರ ಅಧ್ಯಕ್ಷರು ತುಂಬಾ ಬೇಜವಾಬ್ದಾರಿಯಿಂದ ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾರೆ. ಮನುಬಳಿಗಾರ್ ಸರ್ಕಾರಿ ಗುಮಾಸ್ತನಂತೆ ವರ್ತಿಸುತ್ತಿದ್ದಾರೆ. ಆದರೆ ಸತ್ಯಸಂಗತಿ ದಾಖಲಿಸುವ ಸಾಹಿತಿಗಳ ಅಭಿವ್ಯಕ್ತಿಗೆ ಗಂಡಾಂತರ ಬಂದಿರುವುದು ಯಾರ ಅರಿವಿಗೂ ಬಂದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುತೇಕ ಕನ್ನಡ ಸಾಹಿತಿಗಳು ಸ್ವಾಭಿಮಾನವನ್ನು ಮರೆತು, ಮನುವಾದಿಗಳ ಬಾಲಬಡುಕರಾಗಿದ್ದಾರೆ.

  2. ಸಾಹಿತಿಗಳು ಸತ್ಯವನ್ನ ಮರೆಮಾಚಿ, ಮನುವಾದಿಗಳ ಹೊಲಸು ತಿನ್ನುತ್ತ ಸುಳ್ಳನ್ನು ಸಮಾಜಕ್ಕೆ ನಾಚಿಕೆಗೇಡಿಗಳಾಗಿ ಪರಿಚಯಿಸಲು ಹೋಗಬಾರದು. ಏಕೆಂದರೆ; ಸಾಹಿತಿ ಸಮಾಜದ ಕಣ್ಣು ಅನ್ನುತ್ತಾತೆ ಅದನ್ನುವುಳಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...