Homeಮುಖಪುಟಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! - ಬಿ.ಚಂದ್ರೇಗೌಡ

ಶೃಂಗೇರಿ ಮಠದಲ್ಲೊಂದು ಮುಚ್ಚಿಹೋದ ನಿರ್ಭಯ ಪ್ರಕರಣ! – ಬಿ.ಚಂದ್ರೇಗೌಡ

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಉತ್ತರಗಳು ಸಿಕ್ಕಿದವು.

- Advertisement -
- Advertisement -

ಕಲ್ಬುರ್ಗಿಯಲ್ಲಿ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ, ಭಾಗವಹಿಸುತ್ತಿರುವ ಸಾಹಿತಿಗಳಿಗೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ ನಡೆದ ಘಟನೆ ಅವರ ಪ್ರಜ್ಞೆಯನ್ನು ಕೆಣಕಿದರೆ ಶುಭ ಸೂಚನೆ ಎಂದು ಭಾವಿಸಬಹುದು. ಇವತ್ತು ಶೃಂಗೇರಿ ಘಟನೆ ನಾಳೆ ಬೆಂಗಳೂರು ಸಾಹಿತ್ಯ ಪರಿಷತ್‌ಗೂ ಸಂಭವಿಸಬಹುದು. ಆಗ ಮನುಬಳಿಗಾರ್ ತರಹದವರು ಏನೂ ಮಾಡಲಾಗುವುದಿಲ್ಲ ಆದ್ದರಿಂದ, ಈ ಸಾಹಿತ್ಯ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿ ಉಳಿಯುವುದರ ಬಗ್ಗೆ ಎಲ್ಲರೂ ಯೋಚಿಸಬೇಕಿದೆ.

ವಾಸ್ತವವಾಗಿ ಶೃಂಗೇರಿ ಘಟನೆ ನಮ್ಮ ಸಾಹಿತಿಗಳನ್ನು ಕೆರಳಿಸಿ ಪ್ರತಿಭಟನೆ ಇತ್ಯಾದಿ ಚಟುವಟಿಕೆ ನಿರೀಕ್ಷಿಸಿದ್ದವರಿಗೆ ನಿರಾಶೆಯಾಗಿದೆ. ಅವರೆಲ್ಲಾ ಕಲ್ಬುರ್ಗಿಯ ವಸತಿ, ಪ್ರಯಾಣಭತ್ಯೆ, ಊಟದ ಬಗ್ಗೆ ಮಾತ್ರ ತಲೆಕೆಡಿಸಿಕೊಂಡಿರಬಹುದು. ಕೆಲವೇ ಕೆಲವು ದಿಟ್ಟ ಸಾಹಿತಿಗಳು ಮಾತ್ರ ನಿಜವಾಗಿ ಪ್ರತಿಭಟನಾ ಹೇಳಿಕೆ ಕೊಟ್ಟರು.

ಕಲ್ಕುಳಿ ವಿಠ್ಠಲ ಹೆಗಡೆ ಅಧ್ಯಕ್ಷನಾಗಬಾರದೆಂದು ಈ ರೂಪದ ಪ್ರತಿಭಟನೆಗೆ ಕಾರಣವೇನೆಂದು ಪರಶೀಲಿಸಿದಾಗ, ಅವರ ಮಂಗನ ಬ್ಯಾಟೆ ಕೃತಿಯಲ್ಲಿ ಕಾರಣಗಳು ಸಿಕ್ಕಿದವು. ಅವರು ವಾಸವಾಗಿರುವ ಪ್ರದೇಶದ ಮಠ ಸ್ವಜಾತಿಯ ಹಿತ ಕಾಪಾಡುವುದಕ್ಕೆ ಮೀಸಲಾದ ಮಠ. ಅಂದರೆ ಸ್ವಜಾತಿಯ ಸಾಮಾನ್ಯ ಮನೆಕಟ್ಟಿಕೊಳ್ಳುತ್ತಿದ್ದರೆ, ಇಟ್ಟಿಗೆ ಸಿಮೆಂಟು ಮರಮುಟ್ಟುಗಳನ್ನು ಪೂರೈಸಿ ಸ್ವಜಾತಿಬಂಧುವಿಗೆ ಸಹಾಯ ಮಾಡುವ ಮಠ. ಜೊತೆಗೆ ಅವರ ಮಕ್ಕಳಿಗೆ ಶಾಲಾಕಾಲೇಜಿಗೆ ಫೀಜು ಕಟ್ಟುತ್ತ ವಿದೇಶಿ ಓದಿಗೂ ಸಹಾಯ ಮಾಡುವ ಮಾತೃಸಂಸ್ಥೆ.

ಈ ರೂಪದಲ್ಲಿರುವ ಬ್ರಾಹ್ಮಣ ಮಠಗಳಲ್ಲಿ ಇದು ಮೊದಲನೆಯದು ಆದರೆ ಲಿಂಗಾಯತ ಮತ್ತಿತರ ಜಾತಿ ಮಠಗಳು ಎಲ್ಲಾ ಜನಾಂಗದ ಹಿತ ಕಾಯುತ್ತವೆ. ಉದಾಹರಣೆಗೆ ಸಿದ್ದಗಂಗೆ ಆವರಣದಲ್ಲಿ ಆಡುವ ಮಕ್ಕಳನ್ನು ವಿಚಾರಿಸಿದರೆ ಅವರೆಲ್ಲಾ ಕೆಳಜಾತಿ ಬಡವರ ಮಕ್ಕಳು, ಹಾಗೆಯೇ ಚುಂಚನಗಿರಿ ಮಠದಲ್ಲಿ ಓದುತ್ತಿರುವ ಮಕ್ಕಳನ್ನ ಕೇಳಿದರೆ ಅವರೂ ಕೂಡ ಒಂದೇ ಜಾತಿಗೆ ಸೀಮಿತವಾಗದ ಬಡವರ್ಗದ ಮಕ್ಕಳು. ಆದರೆ ಬ್ರಾಹ್ಮಣ ಮಠಗಳು ತಮ್ಮವರ ಹಿತಕಾಯುವ ಮಠ. ದುರಂತವೆಂದರೆ ದಡ್ಡ ಶೂದ್ರರ ಕಾಣಿಕೆ ಹೇರಳವಾಗಿ ಹರಿದುಬರುವುದು ಈ ಪುರೋಹಿತರ ಮಠಗಳಿಗೆ. ರಾಜಕಾರಣಿಗಳ ನಿಧಿ ಹರಿದು ಬರುವುದು ಇಲ್ಲಿಗೆ.

ಇಂತಹದನ್ನು ಗುರುತಿಸುತ್ತ ಮುಖ್ಯವಾಗಿ ಬ್ರಾಹ್ಮಣರೆಂದರೆ ಯಾರು, ಶೂದ್ರರ ಆಚರಣೆಗಳೇನು ಎಂದು ವಿಂಗಡಿಸಿ ತೋರುವ ವಿಠಲ ಹೆಗಡೆ ಮಠಗಳ ಪರಮವೈರಿ; ಜೊತೆಗೆ ಆರೆಸೆಸ್ ಭಜರಂಗಿ ವಿಶ್ವಹಿಂದೂಗಳ ಹಿಕಮತ್ತನ್ನು ವಿರೋಧಿಸುವ ಹೆಗಡೆಯನ್ನು ಗೌಡರ ಹುಡುಗನಾಗಿ ಪರಿಗಣಿಸದೆ, ನಕ್ಸಲ್ ಹಣೆಪಟ್ಟಿ ಕಟ್ಟಿ ಜನರ ವಿರುದ್ಧ ಎತ್ತಿ ಕಟ್ಟಲು ಪುರೋಹಿತರು ಕಂಡುಕೊಂಡ ಕುಯುಕ್ತಿಯಿದು. ಏಕೆಂದರೆ ಮಠದ ಮರ್ಯಾದೆಯನ್ನು ತನ್ನ ಮಂಗನಬೇಟೆಯಲ್ಲಿ ಹರಾಜು ಹಾಕಿರುವ ಈತ, ಎಂದೂ ಕ್ಷಮಿಸದ ಸಾಹಿತಿಯಾಗಿದ್ದಾನೆ. ಸಾಹಿತಿಯಾದವನು ಸತ್ಯ ಹೇಳಬೇಕು, ಅದನ್ನ ಹೇಳಿದ್ದಕ್ಕೆ ಸಮಯ ಕಾಯತ್ತಿದ್ದ ಬ್ರಾಹ್ಮಣರು, ಮತ್ತೊಬ್ಬ ಒಕ್ಕಲಿಗ ಸಿ.ಟಿ.ರವಿ ಎಂಬುವನ ಹೆಗಲ ಮೇಲೆ ಗನ್ನಿಡಿದು ಉಡಾಯಿಸಿವೆ. ಆದರೆ ಗನ್ನಿನಲ್ಲಿದ್ದದ್ದು ಗುಂಡಲ್ಲ ಬರಿ ಪುಡಿ ಅಷ್ಟೇ.

ಮಂಗನಬ್ಯಾಟಿಯಲ್ಲಿ ದಾಖಲಾಗಿರುವ ಪ್ರಕರಣ ಒಂದು ಹೀಗಿದೆ. ಮಠಕ್ಕೆ ಪ್ರವಾಸಿ ಹೆಂಗಸೊಬ್ಬಳು ಬಂದಿದ್ದಳು; ಅವಳು ಹೊಳೆಯಲ್ಲಿ ಸ್ನಾನ ಮಾಡುವುದು ಮಠದ ಉಗ್ರಾಣದ ಕಿಟಕಿಯಲ್ಲಿ ಕಾಣುತ್ತಿತ್ತು. ನೀರಲ್ಲಿ ಮುಳುಗಿದನಂತರ ಆಕೆಯ ತೆಳುವಾದ ಸೀರೆ ಮೈಗಂಟಿಕೊಂಡು, ಆಕೆಯ ದೇಹಾಕೃತಿಯನ್ನು ಉನ್ಮತ್ತಗೊಳಿಸಿದವು. ಮಠದ ಭಕ್ತಾದಿಗಳಿಗೆ ಸಾಕ್ಷಾತ್ ಶಾರದೆಯೇ ಬಂದು ಮೀಯುತ್ತಿರುವಂತೆ ಕಂಡರೆ, ಮಠದ ಕಾಮುಕರಿಗೆ ಅಂದರೆ ಮಠದ ಮುಖ್ಯಸ್ಥರಿಗೆ ಹಾಗೆ ಕಾಣಲಿಲ್ಲ. ಅವರು ಪುಣ್ಯಕ್ಷೇತ್ರದಲ್ಲಿದ್ದರೂ ನಿರ್ಭಯಾಳನ್ನು ಮುಗಿಸಿದ ಕಾಮುಕರಂತಾದರು, ಆಗ ಅವರು ಮಾಡಿದ ಉಪಾಯವೆಂದರೆ, ಸ್ನಾನ ಮುಗಿಸಿದ ಆ ಹೆಂಗಸು ಬಟ್ಟೆ ಬದಲಿಸಬೇಕಿತ್ತು. ಅದಕ್ಕೆ ಉಗ್ರಾಣದಲ್ಲಿಯೇ ಅವಕಾಶ ಮಾಡಿಕೊಟ್ಟರು ಪಾಪ ಆಕೆ ಪುಣ್ಯಕ್ಷೇತ್ರದಲ್ಲಿ ಕಾಮುಕರಿರುವುದಿಲ್ಲ ಎಂದು ಭಾವಿಸಿ ಒದ್ದೆ ಬಟ್ಟೆಯಲ್ಲೇ ಮುಗ್ಧವಾದಿ ಉಗ್ರಾಣ ಸೇರಿದಳು ಇದೀಗ ತಾನೆ ತನ್ನ ಕುಟುಂಬದಂತೆ ಕಂಡಿದ್ದ ದೈತ್ಯ ಜನಿವಾರಿಗಳು, ಹಠಾತ್ತನೆ ಅವಳ ಮೇಲೆರಗಿ ಬಾಯಿಗೆ ಬಟ್ಟೆ ತುರುಕಿ, ಆಕೆಯನ್ನ ಬಲಾತ್ಕಾರವಾಗಿ ಕೆಡಿಸಿ ಕೈಕಾಲು ಕಟ್ಟಿ ಉಗ್ರಾಣಕ್ಕೆ ಬೀಗ ಹಾಕಿ ಹೊರಟುಹೋದರು. ಆ ಮಠದ ಗುರುಗಳು ತಮ್ಮ ಸುತ್ತ ಏನು ನಡೆಯುತ್ತದೆ ಎಂಬುದನ್ನ ಅರಿಯದ ಮುಗ್ಧರು. ಕಾಮುಕರಿಗೆ ಇದೇ ವರದಾನವಾಯ್ತು.

ಇಡೀ ಮಠದ ಆಡಳಿತವನ್ನ ಕೈಗೆತ್ತಿಕೊಂಡು ಅದನ್ನ ಉನ್ನತ ಸ್ಥಿತಿಗೆ ತಂದಿದ್ದ ಘನಪಾಟಿ ಎಂಬಾತ, ತನ್ನ ಕೃತ್ಯದ ನಂತರ ಜನಿವಾರ ಬದಲಾಯಿಸಿ ಸ್ನಾನಮಾಡಿ ಕ್ರೌರ್ಯದ ನಂತರ ಮೂಡುವ ಸಂತೃಪ್ತತೆಯನ್ನು ಅನುಭವಿಸುತ್ತ, ತಾನು ಮಾಡಿದ ಸಾಹಸಕ್ಕೆ ಅಮಲ್ದಾರ ಶಂಕರಶಾಸ್ತ್ರಿಗಳನ್ನ ಕರೆಸಿಕೊಂಡು ವಿಷಯ ತಿಳಿಸಿದರು. ಹಸಿದ ದಾಸಾಚಾರಿಯಾಗಿದ್ದ ಶಂಕರಶಾಸ್ತ್ರಿ ಉಗ್ರಾಣಕ್ಕೆ ಗೂಳಿಯಂತೆ ನುಗ್ಗಿ, ಪ್ರಜ್ಞೆ ಕಳೆದುಕೊಂಡಿದ್ದ ಆ ಮಹಿಳೆಯನ್ನ ಮನಸೋಇಚ್ಛೆ ಭೊಗಿಸಿ ಬಂದನು, ಮಠದ ಗಣ್ಯಾತಿಗಣ್ಯರೇ ಮೀಸಲು ಉಂಡಮೇಲೆ ಇನ್ನುಳಿದ ನಗಣ್ಯರು ಸುಮ್ಮನಿದ್ದಾರೆಯೇ, ಅವರೂ ಮೃಗಗಳಾದರು. ಆಣತಿ ದೂರದಲ್ಲೇ ಸುಂದರವಾದ ಶಾರದಾದೇವಿಯ ಪೂಜಾಮೂರ್ತಿಯಿದ್ದು ಆಕೆಯ ಪ್ರತಿರೂಪದಂತಿದ್ದ ಆ ಮಹಿಳೆಗೆ ಆದ ಆಘಾತವೆಂದರೆ, ಆಕೆ ಯಾವಾಗ ಪ್ರಜ್ಞೆ ಕಳೆದುಕೊಂಡಳೊ ಏನೊ ಅದು ಅತ್ಯಾಚಾರಿಗಳಿಗೆ ವರದಾನವಾಯ್ತು.

ಉಗಾಣದ ಪಾಸಾಲೆಯನ್ನು ಕಾಯುತ್ತಿದ್ದ ಶೂದ್ರ ಭೈರ ಗಮನಿಸಿದಂತೆ, ಉಗ್ರಾಣದೊಳಕ್ಕೆ ಹೋಗುತ್ತಿದ್ದ ವಿಪ್ರೋತ್ತಮರು ಬರುವಾಗ ಕೆಲಸ ಮುಗಿಸಿದ ನಾಯಿಯಂತೆ ಓಡಿ ಬರುತ್ತಿದ್ದುದು ಕುತೂಹಲ ಮೂಡಿಸಿತು ಆದ್ದರಿಂದ ಅಲ್ಲಿ ಇಣುಕಿದವನಿಗೆ ಸತ್ಯ ಸಂಗತಿ ತಿಳಿಯಿತು. ಆದರೆ ಆಕೆ ಯಾರು ಎಂಬುದು ತಿಳಿಯಲಿಲ್ಲ. ಸಂಜೆಯಾಗುತ್ತಿದ್ದಂತೆ, ಹೊಳೆಗೆ ಸ್ನಾನಕ್ಕೆ ಬಂದಿದ್ದ ಮಹಿಳೆಯೊಬ್ಬರು ಕಾಣೆಯಾಗಿದ್ದಾರೆ ಎಂಬ ಸುದ್ದಿ ಹಬ್ಬಿತು. ಆಗ ಭೈರನಿಗೆ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಅವರೇ ಎಂಬುದು ತಿಳಿಯಿತು. ಭೈರನಿಗೆ ಗೊತ್ತಾಯಿತು ಎಂದು ಘನಪಾಟಿಗಳಿಗೆ ಗೊತ್ತಾದ ಕೂಡಲೆ ಅವರು ಅವನನ್ನು ಕರೆಸಿಕೊಂಡು ಪ್ರೀತಿಯಿಂದ ಮಾತನಾಡಿಸಿದರು ಮತ್ತು ಒಳಕೋಣೆಗೆ ಕರೆದುಕೊಂಡು ಹೋದರು. ಭೈರನಿಗಿದು ಆಶ್ಚರ್ಯಕರ ಘಟನೆ ಕೂಡಲೇ ಘನಪಾಟಿ ತಗೊ ಭೈರಪ್ಪ ಎಂದು ಒಂದು ಪವನಿನ ಉಂಗುರ ಕೊಟ್ಟು, ಯಾರೋ ಗಂಡಬಿಟ್ಟ ಹೆಂಗಸು ಬಂದು ಹೊಳೆಯಲ್ಲಿ ಸ್ನಾನಮಾಡಿ ಕಾಣೆಯಾಗಿದ್ದಾಳೆ. ಆದರೆ ನಮ್ಮ ಉಗ್ರಾಣದಲ್ಲಿದ್ದಾಳಂತೆ ಕಿಲ್ಲೆದಾರ ನರಸಿಂಹ ಅವಧಾನಿ ನಿನ್ನ ಜೊತೆ ಇರ್ತಾರೆ ರಾತ್ರಿ ಹತ್ತು ಗಂಟೆಗೆ ನೀನು ಅವರೂ ಸೇರಿ ಮಠದ ಮರ್ಯಾದೆ ಉಳಿಸಬೇಕು ಎಂದು ಆಜ್ಞಾಪಿಸಿ ಭೈರನನ್ನು ಕಳಿಸಿಕೊಟ್ಟರು.

ಹತ್ತು ಗಂಟೆಗೆ ಸರಿಯಾಗಿ ಬಂದ ಕಿಲ್ಲೆದಾರ ನರಸಿಂಹ ಅವಧಾನಿ ಉಗ್ರಾಣದ ಬಾಗಿಲು ತೆಗೆದು ಅಲ್ಲಿ ಬಿದ್ದಿದ್ದ ಹೆಂಗಸನ್ನ ಎತ್ತಿಕೊಳ್ಳಲು ಭೈರನಿಗೆ ಹೇಳಿದ. ಭೈರ ಹಾಗೇ ಮಾಡಿದ ಅಲ್ಲಿಂದ ಅರ್ಚಕ ಕೃಷ್ಣಶರ್ಮರ ಬಾವಿ ಹತ್ತಿರ ತಂದು ಕಟ್ಟೆ ಮೇಲೆ ಕೂರಿಸಿ ಹಗ್ಗ ಬಿಗಿದು ಶವವನ್ನು ಬಾವಿಗೆ ಇಳೆಬಿಟ್ಟು ಆಕೆಯೇ ಆತ್ಮಹತ್ಯೆ ಮಾಡಿಕೊಂಡಂತೆ ಮಾಡಿದರು. ಆದರೆ ಭೈರನಿಗೆ ಆಕೆಯಲ್ಲಿನ್ನು ಜೀವವಿದ್ದ ಬಗ್ಗೆ ಅನುಮಾನ ಏಳೆಯಿತು! ಮರುದಿನ ಶವ ತೆಗೆದು ಪ್ರಕರಣವನ್ನ ಮುಚ್ಚಿಹಾಕಿದರು. ಏಕೆಂದರೆ ಇದು ಮಠದ ಮರ‍್ಯಾದೆ ಪ್ರಶ್ನೆಯಾಗಿತ್ತು. ಮುಂದೆ ಆಕೆಯ ಗಂಡನಿಗೆ ಮತಿಭ್ರಮಣೆಯಾಯ್ತು.

ಇದು ಕಲ್ಕುಳಿ ವಿಠ್ಠಲ ಹೆಗಡೆ ತಮ್ಮ ಮಂಗನ ಬ್ಯಾಟೆಯಲ್ಲಿ ದಾಖಲಿಸಿರುವ ಘಟನೆ. ಹಲವಾರು ಕಾರಣಗಳಿಗಾಗಿ ಮಂಗನಬ್ಯಾಟೆ ಮಲೆನಾಡನ್ನ ಕುರಿತು ಬರೆದ ಕುವೆಂಪು ತೇಜಸ್ವಿಯವರ ಕೃತಿಗಳ ನಂತರ ಮಹತ್ವ ಪಡೆದುಕೊಂಡಿದೆ. ಪ್ರಶಸ್ತಿಯನ್ನು ಪಡೆದಿದೆ. ಶೃಂಗೇರಿಯ ಊರ ಮಧ್ಯದಲ್ಲೇ ಇರುವ ವಿಠ್ಠಲಹೆಗಡೆಯನ್ನು ಏನೂ ಮಾಡಲಾಗದ ಪುರೋಹಿತಶಾಹಿಗಳು, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ಅವರಿಗೆ ಸಿಕ್ಕ ಅವಕಾಶವೆಂದರೆ ಆತ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದಂತೆ ತಡೆಯುವುದಾಗಿತ್ತು. ಆದರೆ ಸಮ್ಮೇಳನ ನಡೆದೇ ತೀರುತ್ತದೆಂದಾಗ, ಇಡೀ ಶೃಂಗೇರಿಯನ್ನ ಬಂದ್ ಮಾಡಿಸಿದವು. ಬಲವಂತವಾಗಿ ಅಂಗಡಿ ಮುಂಗಟ್ಟಿನ ಬಾಗಿಲು ಹಾಕಿಸಿದವು. ಆಟೊ ಓಡಾಡದಂತೆ ನೋಡಿಕೊಂಡವು. ಪೊಲೀಸರು ಸಾಹಿತಿಗಳು ಮತ್ತು ಪುಂಡರ ನಡುವೆ ನಿಂತು, ಒಂದು ದಿನ ಮಾತ್ರ ಸಮ್ಮೇಳನ ನಡೆಯುವಂತೆ ನೋಡಿಕೊಂಡರು. ಈಗ ಗುಲ್ಬರ್ಗದಲ್ಲಿ ಸಮ್ಮೇಳನ ನಡೆಯುತ್ತಿರುವುದರ ಅಧ್ಯಕ್ಷರು ತುಂಬಾ ಬೇಜವಾಬ್ದಾರಿಯಿಂದ ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದಾರೆ. ಮನುಬಳಿಗಾರ್ ಸರ್ಕಾರಿ ಗುಮಾಸ್ತನಂತೆ ವರ್ತಿಸುತ್ತಿದ್ದಾರೆ. ಆದರೆ ಸತ್ಯಸಂಗತಿ ದಾಖಲಿಸುವ ಸಾಹಿತಿಗಳ ಅಭಿವ್ಯಕ್ತಿಗೆ ಗಂಡಾಂತರ ಬಂದಿರುವುದು ಯಾರ ಅರಿವಿಗೂ ಬಂದಂತಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಬಹುತೇಕ ಕನ್ನಡ ಸಾಹಿತಿಗಳು ಸ್ವಾಭಿಮಾನವನ್ನು ಮರೆತು, ಮನುವಾದಿಗಳ ಬಾಲಬಡುಕರಾಗಿದ್ದಾರೆ.

  2. ಸಾಹಿತಿಗಳು ಸತ್ಯವನ್ನ ಮರೆಮಾಚಿ, ಮನುವಾದಿಗಳ ಹೊಲಸು ತಿನ್ನುತ್ತ ಸುಳ್ಳನ್ನು ಸಮಾಜಕ್ಕೆ ನಾಚಿಕೆಗೇಡಿಗಳಾಗಿ ಪರಿಚಯಿಸಲು ಹೋಗಬಾರದು. ಏಕೆಂದರೆ; ಸಾಹಿತಿ ಸಮಾಜದ ಕಣ್ಣು ಅನ್ನುತ್ತಾತೆ ಅದನ್ನುವುಳಿಸಿಕೊಳ್ಳಬೇಕು.

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...