Homeಅಂಕಣಗಳುರಾಷ್ಟ್ರ ಸಾಗಿದ ದೂರವೆಷ್ಟು?

ರಾಷ್ಟ್ರ ಸಾಗಿದ ದೂರವೆಷ್ಟು?

- Advertisement -
- Advertisement -

ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಭಾರತದ ಪ್ರಜೆಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ದೇಶ ಕೊನೆಗೂ ಸ್ವತಂತ್ರವಾಯಿತು. ನಮ್ಮದೇ ರಾಜ್ಯಾಂಗ ರಚನೆಯಾಯಿತು. ಭಾರತ ಒಂದು ರಿಪಬ್ಲಿಕ್ ಆಯಿತು, ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ಎಲ್ಲ ರಾಜ್ಯಗಳು ಸ್ವತಂತ್ರವಾಗಿ ರಾಜ್ಯಾಂಗದ ಆಶಯಗಳಿಗನುಸಾರ ಕಾರ್ಯನಿರ್ವಹಿಸುತ್ತಾ ಅಧಿಕಾರ ಪಡೆದವು. ಸ್ವಾತಂತ್ರ್ಯ ಬಂದಾಗ ಭಾರತದ ಶೇ.20ರಷ್ಟು ಜನ ಮಾತ್ರ ಅಕ್ಷರಜ್ಞಾನ ಉಳ್ಳವರಾಗಿದ್ದರು. ಆದರೂ ಭಾರತದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪುರುಷರಿಗೂ ಸ್ತ್ರೀಯರಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಭಾರತದ ಈ ಮತದಾರರು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾದರು. ಅಂದು ಭಾರತದ 10 ಜನರಲ್ಲಿ 8 ಜನ ಬಡತನದ ಸೀಮಾರೇಖೆಯ ತಳಗಿದ್ದರು.
ಈ 70 ವರ್ಷಗಳಲ್ಲಿ ಅನೇಕ ವಿಚಾರಗಳಲ್ಲಿ ಭಾರತ ಪ್ರಗತಿ ಹೊಂದಿದೆ. ಚಂದ್ರಮಂಡಲಕ್ಕೆ ಲಗ್ಗೆ ಹಾಕಿದ್ದೇವೆ. ಸೂರ್ಯನ ಹೊರವಲಯದವರೆಗೆ ಹೋಗಿ ಅಧ್ಯಯನ ನಡೆಸುವ ಸಾಹಸಕ್ಕೆ ಕೈಹಾಕಿದ್ದೇವೆ. ಇಂದಿಗೂ ಭಾರತದಲ್ಲಿ ಶೇ.18ರಷ್ಟು ಜನ ಬಡತನದ ಸೀಮಾರೇಖೆಯ ತಳಗೆ ವಾಸಿಸುತ್ತಿದ್ದಾರೆ. ಅಂದರೆ ಇವರಿಗೆ ಎರಡು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. 13 ಪಂಚವಾರ್ಷಿಕ ಯೋಜನೆಗಳು ಜಾರಿಗೊಂಡಂತಾದರೂ ಬಡವ ಮತ್ತಷ್ಟು ಬಡವನಾಗಿದ್ದಾನೆ. ಶೇ.10ರಷ್ಟು ಜನರಿಗೆ ಪಂಚವಾರ್ಷಿಕ ಯೋಜನೆಗಳ ಲಾಭ ಲಭ್ಯವಾಗಿದೆ. ಪ್ರಧಾನಿ ಜವಾಹರಲಾಲ್ ನೆಹರು ಅವರು 1964ರಲ್ಲಿ ಹೋಮಿಬಾಬಾ ಅವರ ಮುಂದಾಳತ್ವದಲ್ಲಿ ಭಾರತ ಸ್ಪರ್ಧಾತ್ಮಕವಾಗಿ ಅನುಕೂಲಗಳನ್ನು ಪಡೆಯಲು ಸಮಿತಿಯೊಂದನ್ನು ರಚಿಸಿದರು. ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲು ಸಮಿತಿ ನಿರ್ಧರಿಸಿತು. ಆ ಮೂಲಕ ಭಾರತ ಆರ್ಥಿಕವಾಗಿ ಸದÀೃಢ ರಾಷ್ಟ್ರವಾಗುವ ಅವಕಾಶವಿದೆಯೆಂದು ಸಮಿತಿ ಅಭಿಪ್ರಾಯಪಟ್ಟಿತು. ಭಾರತ ಸಾಫ್ಟ್‍ವೇರ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು. ಸಾಫ್ಟ್‍ವೇರ್ ಉದ್ಯಮದಲ್ಲಿ ಭಾರತ ದಾಪುಗಾಲು ಹಾಕಿತು. ಲಕ್ಷಾಂತರ ಯುವಕ ಯುವತಿಯರಿಗೆ ಈ ಮೂಲಕ ಉದ್ಯೋಗಾವಕಾಶ ದೊರೆಯಿತು.
1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದೇ ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದ ಇಂಡೋನೇಷಿಯಾ, ಮೈನ್‍ಮಾರ್, ಶ್ರೀಲಂಕಾ, ದಕ್ಷಿಣ ಕೊರಿಯಾ, ಜೋರ್ಡಾನ್, ಇಸÉ್ರೀಲ್, ಚೈನಾ ಸ್ವಾತಂತ್ರ್ಯ ಪಡೆದವು. ಎರಡನೇ ಮಹಾಯುದ್ಧದಿಂದ ಜಪಾನ್ ಮತ್ತು ಜರ್ಮನಿ ಸಂಪೂರ್ಣ ನೆಲಕಚ್ಚಿದ್ದವು. ಮುಂದಿನ ದಶಕದಲ್ಲಿ ಸಿಂಗಪೂರ್ ಮತ್ತು ಮಲೇಷಿಯಾಗಳಲ್ಲಿ ಸ್ವತಂತ್ರ ದೇಶಗಳಾದವು.
ಭಾರತೀಯರ ಸರಾಸರಿ ಆಯಸ್ಸು ಈಗ 60 ವರ್ಷಗಳಾದರೆ ಇಂಡೋನೇಷಿಯಾದಲ್ಲಿ ಸರಾಸರಿ ಆಯಸ್ಸು ಈಗ 80ಕ್ಕೆ ಮೇಲ್ಪಟ್ಟು. ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಚಾರದಲ್ಲಿ ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಮಲೇಷಿಯಾ ಮತ್ತು ಸಿಂಗಪುರ್‍ಗಳಿಗಿಂತ ಭಾರತ ಬಹಳ ಹಿಂದೆ ಬಿದ್ದಿದೆ. 168 ರಾಷ್ಟ್ರಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ. ಸಿಂಗಾಪುರದ ಸರಾಸರಿ ಆದಾಯ ಭಾರತದ 25 ಪಟ್ಟು. ಏಷ್ಯಾದಲ್ಲಿ ಅತಿಕಡಿಮೆ ಬಡತನವಿರುವ ರಾಷ್ಟ್ರ ಮಲೇಷಿಯಾ. 1990ರವರೆಗೆ ಇಂಡೋನೇಷಿಯಾ ಶಿಕ್ಷಣ ಮತ್ತು ಆರೋಗ್ಯ ಬಾಬಿನಲ್ಲಿ ತುಂಬ ಹಣ ವ್ಯಯಮಾಡಿತು. ಅದರ ಫಲವಾಗಿ ಈಗ ಬಡತನ ಶೇ.10ಕ್ಕೆ ಇಳಿದಿದೆ. 70ರ ದಶಕದಲ್ಲಿ ಭಾರತ ಮತ್ತು ಚೈನಾದ ಸರಾಸರಿ ಆದಾಯ ಒಂದೇ ಆಗಿತ್ತು. ಈಗ ಚೈನಾದ ಸರಾಸರಿ ಆದಾಯ ಆಗಿನ ಹೋಲಿಕೆಯಲ್ಲಿ ಹನ್ನೆರಡು ಪಟ್ಟು ಹೆಚ್ಚಿದೆ. ಬೆಟ್ಟದ ತುದಿ ಮುಟ್ಟಬೇಕೆಂಬ ಕನವರಿಕೆಯೇ ಬೇರೆ, ಬೆಟ್ಟದ ಶಿಖರ ಏರಿ ಅದರ ಸುಖ ಅನುಭವಿಸುವುದೇ ಬೇರೆ.
ಕಾನೂನಿಗೆ ವಿರುದ್ಧವಾಗಿ ಜಮೀನು ಕಬಳಿಸುವುದು, ಅಕ್ರಮದ ಡಿನೋಟಿಫಿಕೇಷನ್ ಹೊರಡಿಸುವುದು, ಸೈನ್ಯಕ್ಕೆ ಆಯುಧಗಳನ್ನು ಕೊಳ್ಳುವುದರಲ್ಲೂ ಲಂಚ ನುಂಗುವುದು, ತರಂಗಾಂತರಗಳನ್ನು ನೀತಿ ನಿಯಮವಿಲ್ಲದೆ ಮಾರಾಟ ಮಾಡುವುದು. ಆಟ, ಮನರಂಜನೆ, ಕ್ರೀಡೆಗಳ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಸೂರೆಮಾಡುವುದು. ಅದಾನಿ, ಅಂಬಾನಿ ಮುಂತಾದ ಭ್ರಷ್ಟ ಉದ್ಯಮಿಗಳ ಸಾಲಮನ್ನಾ ಮಾಡುವುದು… ಇವು ಇಂದಿನ ಪ್ರಚಲಿತ ವಿದ್ಯಮಾನಗಳು. ಬಡತನ ನಿವಾರಣೆಯ ಯೋಜನೆಗಳ ಹೆಸರಿನಲ್ಲಿ ಲೂಟಿ ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರತಿವರ್ಷ ಅಧಿಕಾರಿಗಳು ಸುಮಾರು 90000 ಕೋಟಿ ರೂ.ಗಳ ಲೂಟಿ ಮಾಡುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಹೆಸರಿನಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚಿಗೆ ರಾಷ್ಟ್ರ ಖರ್ಚು ಮಾಡುತ್ತದೆ. ರಾಷ್ಟೀಯ ಆರೋಗ್ಯ ಯೋಜನೆ ನೆಪದಲ್ಲಿ 1000 ಕೋಟಿ ಖರ್ಚು ಬೀಳುತ್ತದೆ. ಬಂಡವಾಳ ಪರದೇಶಗಳಿಗೆ ಹಾರಿಹೋಗುವುದು 462 ಬಿಲಿಯನ್ ರೂಗಳು. ಭ್ರಷ್ಟ ಉನ್ನತಾಧಿಕಾರಿಗಳು ಕದಿಯುವುದು 92000 ಕೋಟಿ ರೂಗಳು. ಇವೆಲ್ಲ ಕಪ್ಪು ಹಣವಾಗಿ ಪರಿವರ್ತನೆಯಾಗುತ್ತದೆ. ಅಧಿಕಾರದ ದುರುಪಯೋಗದ ಕಾರಣದಿಂದ, ಮಂತ್ರಿಗಳು, ಅಧಿಕಾರಿಗಳು, ಶಾಸಕರುಗಳ ಲೂಟಿಯ ಕಾರಣದಿಂದ ದೇಶದ ಆರ್ಥಿಕ ಪ್ರಗತಿ ಹಿಮ್ಮೆಟ್ಟುತ್ತಿದೆ. ಇದು ವಾಸ್ತವ.
ಹಣಕಾಸಿನ ವಹಿವಾಟನ್ನು ನಮ್ಮ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ರಾಷ್ಟ್ರದ ಆದಾಯದ 1/6ರಷ್ಟು ಹಣ ಭಾರತದ 2/3ರಷ್ಟು ಜನಸಂಖ್ಯೆಗೆ ಹಂಚಿಕೆಯಾಗುತ್ತಿದೆ. 5/6ರಷ್ಟು ಆದಾಯ 1/3 ರಷ್ಟು ಜನರ ಪಾಲಾಗುತ್ತದೆ. ಸರ್ಕಾರದ ಒಟ್ಟು ಆದಾಯಕ್ಕೂ ಮಾಡುವ ಖರ್ಚಿಗೂ ಮಧ್ಯೆ ದೊಡ್ಡ ಕಂದರ ನಿರ್ಮಾಣವಾಗಿದೆ. ಸರ್ಕಾರದ ಸಾಧನೆಗೂ ವ್ಯಕ್ತಿಗಳ ನಿರೀಕ್ಷೆಗಳಿಗೂ ಅಜಗಜಾಂತರ. ಆಹಾರಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ಸಾಮಾನ್ಯರ ಕಷ್ಟ ಅರ್ಥವಾಗುತ್ತಲೇ ಇಲ್ಲ. ಈಚೆಗೆ ಸರ್ಕಾರದ ಸಾಲದ ಪಟ್ಟಿ ಹೆಚ್ಚಿದೆ. ಬಡ್ಡಿ ಕಟ್ಟಲು ಬಜೆಟ್‍ನಲ್ಲಿ ಪ್ರತಿವರ್ಷ ಬಜೆಟ್‍ನ ಶೇ.23ರಷ್ಟು ಹಣವನ್ನು ತೆಗೆದಿಡುತ್ತದೆ. ಸರ್ಕಾರ ದಿನಕ್ಕೆ 1600 ಕೋಟಿ ಸಾಲ ಮಾಡುತ್ತದೆ. ಆಹಾರ ಪದಾರ್ಥಗಳ ಹಂಚಿಕೆಯಲ್ಲಿ ಮೋಸ, ಅಳತೆಯಲ್ಲಿ ಮೋಸ, ಆಹಾರಧಾನ್ಯಗಳ ಕಳ್ಳ ಸಾಗಾಣಿಕೆಯಿಂದ ಸರ್ಕಾರಕ್ಕೆ 40000 ಕೋಟಿ ರುಪಾಯಿಗಳ ನಷ್ಟವಾಗುತ್ತದೆ. ಕಳೆದ 10 ವರ್ಷಗಳಿಂದಲೂ ಪ್ರತಿ ವರ್ಷ ಇಷ್ಟೊಂದು ನಷ್ಟವುಂಟಾಗುತ್ತಿದೆ.
ಈ ಎಲ್ಲ ಅನಿಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದ ತುರ್ತು ನಮ್ಮ ಕಣ್ಣೆದುರಿಗಿರುವಾಗಲೇ, ಈಗ ಹಿಂದು ಸೇವಾಸಂಸ್ಥೆಯ ಹೆಸರಿನಲ್ಲಿ ಭಯೋತ್ಪಾದಕರನ್ನು ಬೆಳೆಸಲಾಗುತ್ತಿದೆ. ಅವರಿಗೆ ಧರ್ಮದ ಅಫೀಮು ತಿನ್ನಿಸಿ ಯುವಕರ ತಲೆಕೆಡಿಸಿ ಸಮಾಜದಲ್ಲಿ ದ್ವೇಷಭಾವನೆ ಬೆಳೆಸಲು ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ದೇಶದಾದ್ಯಂತ ಅಶಾಂತಿ, ಗೊಂದಲ, ಹಿಂಸೆ, ಭಯೋತ್ಪಾದನೆ ಹರಡಲು ಮತಾಂಧ ಸಂಸ್ಥೆಗಳು ಹಿಂದೂ ಹೆಸರಿನಲ್ಲಿ ರೂಪತಾಳಿರುವುದು ಒಂದು ಭಯಾನಕ ಬೆಳವಣಿಗೆ.
ಒಟ್ಟಿನಲ್ಲಿ ಸಮಾಜದಲ್ಲಿ ಒಂದು ಅಲ್ಲೋಲಕಲ್ಲೋಲ ಪರಿಸ್ಥಿತಿ ಉದ್ಭವವಾಗುತ್ತಿದೆ. ಸಮಾಜದ ಇತರ ಪಿಡುಗುಗಳ ವಿರುದ್ಧ ಹೋರಾಡುವುದರ ಜೊತೆಗೆ ಈ ದುಷ್ಟ ಭಯೋತ್ಪಾದನೆಯ ಪ್ರವೃತ್ತಿಯನ್ನು ತಡೆಗಟ್ಟುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...