Homeರಾಜಕೀಯಸಿದ್ದುಗೆ ಅಮಿತ್ ಶಾ ಮಾಡಿದ ಆ ಫೋನ್ ಕಾಲ್

ಸಿದ್ದುಗೆ ಅಮಿತ್ ಶಾ ಮಾಡಿದ ಆ ಫೋನ್ ಕಾಲ್

- Advertisement -
- Advertisement -

ಇದು ಕರ್ನಾಟಕ ಪೊಲಿಟಿಕಾಯಣದ ಮೋಸ್ಟ್ ಶಾಕಿಂಗ್ ನ್ಯೂಸ್. ಮಾಜಿ ಸಿಎಂ ಸಿದ್ರಾಮಯ್ಯರಿಗೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ ಫೋನು ಮಾಡಿ ಮಾತಾಡಿದ್ದಾರಂತೆ!! `ಹಲೋ ಸಿದ್ರಾಮಯ್ಯಾಜಿ, ಸಿಎಂ ಆಗಿದ್ದೋರು ನೀವು. ನಿಮ್ಮಂತ ನಾಯಕರು ಖಾಲಿ ಕೂರಬಾರದು. ನೀವು ನಮ್ಮ ಪಕ್ಷಕ್ಕೆ ಬಂದುಬಿಡಿ. ನಿಮಗೆ ಯಾವ ಹುದ್ದೆ ಅನ್ನೋದನ್ನು ಆಮೇಲೆ ಮಾತಾಡೋಣ. ಹೇಗೂ ನಮಗೆ ಯಡ್ಯೂರಪ್ಪನವರನ್ನೇ ಸಿಎಂ ಮಾಡಬೇಕೆನ್ನುವ ಹಠವೇನೂ ಇಲ್ಲ. ಮುಂದಿನದನ್ನು ನೋಡೋಣ’ ಎಂಬರ್ಥದಲ್ಲಿ ಬಹಳ ಆತ್ಮೀಯವಾಗಿ ಅಮಿತ್ ಶಾ ಸಿದ್ದು ಜೊತೆ ಮಾತಾಡಿದ್ದಾರಂತೆ.ಆದರೆ ಸಿದ್ದು ಅಮಿತ್ ಶಾರ ಈ ಆಫರನ್ನು ಅಷ್ಟೇ ನಯವಾಗಿ ತಿರಸ್ಕರಿಸಿದ್ದಾರೆ ಅನ್ನೋದು ವರ್ತಮಾನ. ಸರ್ಕಾರ ರಚನೆಯ ಅಂಚಿಗೆ ಬಂದು ವಂಚಿತವಾಗಿರುವ ಬಿಜೆಪಿಗೆ ಅಧಿಕಾರದ ಹಪಾಹಪಿ ಎಷ್ಟಿದೆ ಅನ್ನೋದು ಇದರಿಂದ ಅರ್ಥವಾಗುತ್ತೆ.ಅಧಿಕಾರಕ್ಕಾಗಿ ಯಡ್ಯೂರಪ್ಪರನ್ನೂ ಬಲಿಪಶು ಮಾಡಲು ಬಿಜೆಪಿ ಸಜ್ಜಾಗಿದೆ ಅನ್ನೋದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಸ್ವತಃ ಸಿದ್ರಾಮಯ್ಯಗೆ ಆಪರೇಷನ್ ಮಾಡಲು ಮುಂದಾಗಿದ್ದಾರೆಂದರೆ ಉಳಿದ ಎಂಎಲ್‍ಎಗಳ ಕತೆ ಎಂತದ್ದಿರಬೇಡ. ಅಹಿಂದ ಪಾಲಿಸಿ ಮತ್ತು ಸೆಕ್ಯುಲರ್ ಐಡಿಯಾಲಜಿಗಳಿಗೆ ಅಂಟಿಕೊಂಡಿರುವ ಸಿದ್ದುಗೆ ಬಿಜೆಪಿಯ ಘಾತುಕ ಹಕೀಕತ್ತು ಎಂತದ್ದೆಂಬುದು ಚೆನ್ನಾಗಿ ಅರ್ಥವಾಗಿರೋದ್ರಿಂದಲೇ ಬೇರೆಯವರಂತೆ ಅಧಿಕಾರದ ಆಸೆಗೆ ಬಲಿಯಾಗದೆ ಒಂದು ಸಮತೂಕದ ನಿರ್ಧಾರ ಕೈಗೊಂಡಿದ್ದಾರೆ.ಬೇರೆಲ್ಲ ರಾಜಕಾರಣಿಗಳ ನಡುವೆ ಸಿದ್ದು ಇಷ್ಟವಾಗೋದು ಇದೇ ಕಾರಣಕ್ಕೆ. ಅಂದಹಾಗೆ, ಈ ಮಾತುಕತೆ ನಡೆದಿರೋದು ಜಸ್ಟ್ ಹದಿನೈದು ದಿನಗಳ ಹಿಂದಷ್ಟೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚಾಮರಾಜನಗರ: ರೈತ ಮುಖಂಡರ ಮೇಲೆ ಬಿಜೆಪಿಗರಿಂದ ಹಲ್ಲೆ

0
ರೈತ ಮುಖಂಡರ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಬಿಜೆಪಿ ಗುಂಡಾಗಳು ಅವಾಚ್ಯವಾಗಿ ನಿಂದಿಸಿ ತಳ್ಳಾಟ ನಡೆಸಿದ್ದಾರೆ, ರೈತರ ಸ್ವಾಭಿಮಾನವಾದ ಹಸಿರು ಟವಲನ್ನು ಕಿತ್ತು ಅವಮಾನಿಸಿದ್ದಾರೆ...