Homeಅಂಕಣಗಳುರಾಷ್ಟ್ರ ಸಾಗಿದ ದೂರವೆಷ್ಟು?

ರಾಷ್ಟ್ರ ಸಾಗಿದ ದೂರವೆಷ್ಟು?

- Advertisement -
- Advertisement -

ಮಹಾತ್ಮಗಾಂಧಿಯವರ ನೇತೃತ್ವದಲ್ಲಿ ಭಾರತದ ಪ್ರಜೆಗಳು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ದೇಶ ಕೊನೆಗೂ ಸ್ವತಂತ್ರವಾಯಿತು. ನಮ್ಮದೇ ರಾಜ್ಯಾಂಗ ರಚನೆಯಾಯಿತು. ಭಾರತ ಒಂದು ರಿಪಬ್ಲಿಕ್ ಆಯಿತು, ಕೇಂದ್ರ ಸರ್ಕಾರದ ಉಸ್ತುವಾರಿಯಲ್ಲಿ ಎಲ್ಲ ರಾಜ್ಯಗಳು ಸ್ವತಂತ್ರವಾಗಿ ರಾಜ್ಯಾಂಗದ ಆಶಯಗಳಿಗನುಸಾರ ಕಾರ್ಯನಿರ್ವಹಿಸುತ್ತಾ ಅಧಿಕಾರ ಪಡೆದವು. ಸ್ವಾತಂತ್ರ್ಯ ಬಂದಾಗ ಭಾರತದ ಶೇ.20ರಷ್ಟು ಜನ ಮಾತ್ರ ಅಕ್ಷರಜ್ಞಾನ ಉಳ್ಳವರಾಗಿದ್ದರು. ಆದರೂ ಭಾರತದ 18 ವರ್ಷಕ್ಕೆ ಮೇಲ್ಪಟ್ಟ ಎಲ್ಲ ಪುರುಷರಿಗೂ ಸ್ತ್ರೀಯರಿಗೂ ಮತದಾನದ ಹಕ್ಕನ್ನು ಚಲಾಯಿಸಲು ಅವಕಾಶ ಕಲ್ಪಿಸಲಾಯಿತು. ಭಾರತದ ಈ ಮತದಾರರು ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವುದರಲ್ಲಿ ಯಶಸ್ವಿಯಾದರು. ಅಂದು ಭಾರತದ 10 ಜನರಲ್ಲಿ 8 ಜನ ಬಡತನದ ಸೀಮಾರೇಖೆಯ ತಳಗಿದ್ದರು.
ಈ 70 ವರ್ಷಗಳಲ್ಲಿ ಅನೇಕ ವಿಚಾರಗಳಲ್ಲಿ ಭಾರತ ಪ್ರಗತಿ ಹೊಂದಿದೆ. ಚಂದ್ರಮಂಡಲಕ್ಕೆ ಲಗ್ಗೆ ಹಾಕಿದ್ದೇವೆ. ಸೂರ್ಯನ ಹೊರವಲಯದವರೆಗೆ ಹೋಗಿ ಅಧ್ಯಯನ ನಡೆಸುವ ಸಾಹಸಕ್ಕೆ ಕೈಹಾಕಿದ್ದೇವೆ. ಇಂದಿಗೂ ಭಾರತದಲ್ಲಿ ಶೇ.18ರಷ್ಟು ಜನ ಬಡತನದ ಸೀಮಾರೇಖೆಯ ತಳಗೆ ವಾಸಿಸುತ್ತಿದ್ದಾರೆ. ಅಂದರೆ ಇವರಿಗೆ ಎರಡು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. 13 ಪಂಚವಾರ್ಷಿಕ ಯೋಜನೆಗಳು ಜಾರಿಗೊಂಡಂತಾದರೂ ಬಡವ ಮತ್ತಷ್ಟು ಬಡವನಾಗಿದ್ದಾನೆ. ಶೇ.10ರಷ್ಟು ಜನರಿಗೆ ಪಂಚವಾರ್ಷಿಕ ಯೋಜನೆಗಳ ಲಾಭ ಲಭ್ಯವಾಗಿದೆ. ಪ್ರಧಾನಿ ಜವಾಹರಲಾಲ್ ನೆಹರು ಅವರು 1964ರಲ್ಲಿ ಹೋಮಿಬಾಬಾ ಅವರ ಮುಂದಾಳತ್ವದಲ್ಲಿ ಭಾರತ ಸ್ಪರ್ಧಾತ್ಮಕವಾಗಿ ಅನುಕೂಲಗಳನ್ನು ಪಡೆಯಲು ಸಮಿತಿಯೊಂದನ್ನು ರಚಿಸಿದರು. ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್‍ಗಳನ್ನು ಅಭಿವೃದ್ಧಿಪಡಿಸಲು ಸಮಿತಿ ನಿರ್ಧರಿಸಿತು. ಆ ಮೂಲಕ ಭಾರತ ಆರ್ಥಿಕವಾಗಿ ಸದÀೃಢ ರಾಷ್ಟ್ರವಾಗುವ ಅವಕಾಶವಿದೆಯೆಂದು ಸಮಿತಿ ಅಭಿಪ್ರಾಯಪಟ್ಟಿತು. ಭಾರತ ಸಾಫ್ಟ್‍ವೇರ್ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳಲು ಸಾಧ್ಯವಾಯಿತು. ಸಾಫ್ಟ್‍ವೇರ್ ಉದ್ಯಮದಲ್ಲಿ ಭಾರತ ದಾಪುಗಾಲು ಹಾಕಿತು. ಲಕ್ಷಾಂತರ ಯುವಕ ಯುವತಿಯರಿಗೆ ಈ ಮೂಲಕ ಉದ್ಯೋಗಾವಕಾಶ ದೊರೆಯಿತು.
1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕಿತು. ಅದೇ ಕಾಲದಲ್ಲಿ ತುಳಿತಕ್ಕೆ ಒಳಗಾಗಿದ್ದ ಇಂಡೋನೇಷಿಯಾ, ಮೈನ್‍ಮಾರ್, ಶ್ರೀಲಂಕಾ, ದಕ್ಷಿಣ ಕೊರಿಯಾ, ಜೋರ್ಡಾನ್, ಇಸÉ್ರೀಲ್, ಚೈನಾ ಸ್ವಾತಂತ್ರ್ಯ ಪಡೆದವು. ಎರಡನೇ ಮಹಾಯುದ್ಧದಿಂದ ಜಪಾನ್ ಮತ್ತು ಜರ್ಮನಿ ಸಂಪೂರ್ಣ ನೆಲಕಚ್ಚಿದ್ದವು. ಮುಂದಿನ ದಶಕದಲ್ಲಿ ಸಿಂಗಪೂರ್ ಮತ್ತು ಮಲೇಷಿಯಾಗಳಲ್ಲಿ ಸ್ವತಂತ್ರ ದೇಶಗಳಾದವು.
ಭಾರತೀಯರ ಸರಾಸರಿ ಆಯಸ್ಸು ಈಗ 60 ವರ್ಷಗಳಾದರೆ ಇಂಡೋನೇಷಿಯಾದಲ್ಲಿ ಸರಾಸರಿ ಆಯಸ್ಸು ಈಗ 80ಕ್ಕೆ ಮೇಲ್ಪಟ್ಟು. ಮಾನವ ಸಂಪನ್ಮೂಲ ಅಭಿವೃದ್ಧಿಯ ವಿಚಾರದಲ್ಲಿ ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಮಲೇಷಿಯಾ ಮತ್ತು ಸಿಂಗಪುರ್‍ಗಳಿಗಿಂತ ಭಾರತ ಬಹಳ ಹಿಂದೆ ಬಿದ್ದಿದೆ. 168 ರಾಷ್ಟ್ರಗಳ ಪೈಕಿ ಭಾರತ 131ನೇ ಸ್ಥಾನದಲ್ಲಿದೆ. ಸಿಂಗಾಪುರದ ಸರಾಸರಿ ಆದಾಯ ಭಾರತದ 25 ಪಟ್ಟು. ಏಷ್ಯಾದಲ್ಲಿ ಅತಿಕಡಿಮೆ ಬಡತನವಿರುವ ರಾಷ್ಟ್ರ ಮಲೇಷಿಯಾ. 1990ರವರೆಗೆ ಇಂಡೋನೇಷಿಯಾ ಶಿಕ್ಷಣ ಮತ್ತು ಆರೋಗ್ಯ ಬಾಬಿನಲ್ಲಿ ತುಂಬ ಹಣ ವ್ಯಯಮಾಡಿತು. ಅದರ ಫಲವಾಗಿ ಈಗ ಬಡತನ ಶೇ.10ಕ್ಕೆ ಇಳಿದಿದೆ. 70ರ ದಶಕದಲ್ಲಿ ಭಾರತ ಮತ್ತು ಚೈನಾದ ಸರಾಸರಿ ಆದಾಯ ಒಂದೇ ಆಗಿತ್ತು. ಈಗ ಚೈನಾದ ಸರಾಸರಿ ಆದಾಯ ಆಗಿನ ಹೋಲಿಕೆಯಲ್ಲಿ ಹನ್ನೆರಡು ಪಟ್ಟು ಹೆಚ್ಚಿದೆ. ಬೆಟ್ಟದ ತುದಿ ಮುಟ್ಟಬೇಕೆಂಬ ಕನವರಿಕೆಯೇ ಬೇರೆ, ಬೆಟ್ಟದ ಶಿಖರ ಏರಿ ಅದರ ಸುಖ ಅನುಭವಿಸುವುದೇ ಬೇರೆ.
ಕಾನೂನಿಗೆ ವಿರುದ್ಧವಾಗಿ ಜಮೀನು ಕಬಳಿಸುವುದು, ಅಕ್ರಮದ ಡಿನೋಟಿಫಿಕೇಷನ್ ಹೊರಡಿಸುವುದು, ಸೈನ್ಯಕ್ಕೆ ಆಯುಧಗಳನ್ನು ಕೊಳ್ಳುವುದರಲ್ಲೂ ಲಂಚ ನುಂಗುವುದು, ತರಂಗಾಂತರಗಳನ್ನು ನೀತಿ ನಿಯಮವಿಲ್ಲದೆ ಮಾರಾಟ ಮಾಡುವುದು. ಆಟ, ಮನರಂಜನೆ, ಕ್ರೀಡೆಗಳ ಹೆಸರಿನಲ್ಲಿ ಸಾರ್ವಜನಿಕ ಹಣವನ್ನು ಸೂರೆಮಾಡುವುದು. ಅದಾನಿ, ಅಂಬಾನಿ ಮುಂತಾದ ಭ್ರಷ್ಟ ಉದ್ಯಮಿಗಳ ಸಾಲಮನ್ನಾ ಮಾಡುವುದು… ಇವು ಇಂದಿನ ಪ್ರಚಲಿತ ವಿದ್ಯಮಾನಗಳು. ಬಡತನ ನಿವಾರಣೆಯ ಯೋಜನೆಗಳ ಹೆಸರಿನಲ್ಲಿ ಲೂಟಿ ಅವ್ಯಾಹತವಾಗಿ ನಡೆಯುತ್ತಿದ್ದು, ಪ್ರತಿವರ್ಷ ಅಧಿಕಾರಿಗಳು ಸುಮಾರು 90000 ಕೋಟಿ ರೂ.ಗಳ ಲೂಟಿ ಮಾಡುತ್ತಾರೆ. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗಖಾತ್ರಿ ಹೆಸರಿನಲ್ಲಿ ಒಂದು ಸಾವಿರ ಕೋಟಿಗಿಂತ ಹೆಚ್ಚಿಗೆ ರಾಷ್ಟ್ರ ಖರ್ಚು ಮಾಡುತ್ತದೆ. ರಾಷ್ಟೀಯ ಆರೋಗ್ಯ ಯೋಜನೆ ನೆಪದಲ್ಲಿ 1000 ಕೋಟಿ ಖರ್ಚು ಬೀಳುತ್ತದೆ. ಬಂಡವಾಳ ಪರದೇಶಗಳಿಗೆ ಹಾರಿಹೋಗುವುದು 462 ಬಿಲಿಯನ್ ರೂಗಳು. ಭ್ರಷ್ಟ ಉನ್ನತಾಧಿಕಾರಿಗಳು ಕದಿಯುವುದು 92000 ಕೋಟಿ ರೂಗಳು. ಇವೆಲ್ಲ ಕಪ್ಪು ಹಣವಾಗಿ ಪರಿವರ್ತನೆಯಾಗುತ್ತದೆ. ಅಧಿಕಾರದ ದುರುಪಯೋಗದ ಕಾರಣದಿಂದ, ಮಂತ್ರಿಗಳು, ಅಧಿಕಾರಿಗಳು, ಶಾಸಕರುಗಳ ಲೂಟಿಯ ಕಾರಣದಿಂದ ದೇಶದ ಆರ್ಥಿಕ ಪ್ರಗತಿ ಹಿಮ್ಮೆಟ್ಟುತ್ತಿದೆ. ಇದು ವಾಸ್ತವ.
ಹಣಕಾಸಿನ ವಹಿವಾಟನ್ನು ನಮ್ಮ ಸರ್ಕಾರಗಳು ಸರಿಯಾಗಿ ನಿರ್ವಹಿಸುತ್ತಿಲ್ಲ. ರಾಷ್ಟ್ರದ ಆದಾಯದ 1/6ರಷ್ಟು ಹಣ ಭಾರತದ 2/3ರಷ್ಟು ಜನಸಂಖ್ಯೆಗೆ ಹಂಚಿಕೆಯಾಗುತ್ತಿದೆ. 5/6ರಷ್ಟು ಆದಾಯ 1/3 ರಷ್ಟು ಜನರ ಪಾಲಾಗುತ್ತದೆ. ಸರ್ಕಾರದ ಒಟ್ಟು ಆದಾಯಕ್ಕೂ ಮಾಡುವ ಖರ್ಚಿಗೂ ಮಧ್ಯೆ ದೊಡ್ಡ ಕಂದರ ನಿರ್ಮಾಣವಾಗಿದೆ. ಸರ್ಕಾರದ ಸಾಧನೆಗೂ ವ್ಯಕ್ತಿಗಳ ನಿರೀಕ್ಷೆಗಳಿಗೂ ಅಜಗಜಾಂತರ. ಆಹಾರಧಾನ್ಯಗಳ ಬೆಲೆ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ಸಾಮಾನ್ಯರ ಕಷ್ಟ ಅರ್ಥವಾಗುತ್ತಲೇ ಇಲ್ಲ. ಈಚೆಗೆ ಸರ್ಕಾರದ ಸಾಲದ ಪಟ್ಟಿ ಹೆಚ್ಚಿದೆ. ಬಡ್ಡಿ ಕಟ್ಟಲು ಬಜೆಟ್‍ನಲ್ಲಿ ಪ್ರತಿವರ್ಷ ಬಜೆಟ್‍ನ ಶೇ.23ರಷ್ಟು ಹಣವನ್ನು ತೆಗೆದಿಡುತ್ತದೆ. ಸರ್ಕಾರ ದಿನಕ್ಕೆ 1600 ಕೋಟಿ ಸಾಲ ಮಾಡುತ್ತದೆ. ಆಹಾರ ಪದಾರ್ಥಗಳ ಹಂಚಿಕೆಯಲ್ಲಿ ಮೋಸ, ಅಳತೆಯಲ್ಲಿ ಮೋಸ, ಆಹಾರಧಾನ್ಯಗಳ ಕಳ್ಳ ಸಾಗಾಣಿಕೆಯಿಂದ ಸರ್ಕಾರಕ್ಕೆ 40000 ಕೋಟಿ ರುಪಾಯಿಗಳ ನಷ್ಟವಾಗುತ್ತದೆ. ಕಳೆದ 10 ವರ್ಷಗಳಿಂದಲೂ ಪ್ರತಿ ವರ್ಷ ಇಷ್ಟೊಂದು ನಷ್ಟವುಂಟಾಗುತ್ತಿದೆ.
ಈ ಎಲ್ಲ ಅನಿಷ್ಟಗಳನ್ನು ನಿವಾರಣೆ ಮಾಡಿಕೊಳ್ಳಬೇಕಾದ ತುರ್ತು ನಮ್ಮ ಕಣ್ಣೆದುರಿಗಿರುವಾಗಲೇ, ಈಗ ಹಿಂದು ಸೇವಾಸಂಸ್ಥೆಯ ಹೆಸರಿನಲ್ಲಿ ಭಯೋತ್ಪಾದಕರನ್ನು ಬೆಳೆಸಲಾಗುತ್ತಿದೆ. ಅವರಿಗೆ ಧರ್ಮದ ಅಫೀಮು ತಿನ್ನಿಸಿ ಯುವಕರ ತಲೆಕೆಡಿಸಿ ಸಮಾಜದಲ್ಲಿ ದ್ವೇಷಭಾವನೆ ಬೆಳೆಸಲು ಅನೇಕ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ದೇಶದಾದ್ಯಂತ ಅಶಾಂತಿ, ಗೊಂದಲ, ಹಿಂಸೆ, ಭಯೋತ್ಪಾದನೆ ಹರಡಲು ಮತಾಂಧ ಸಂಸ್ಥೆಗಳು ಹಿಂದೂ ಹೆಸರಿನಲ್ಲಿ ರೂಪತಾಳಿರುವುದು ಒಂದು ಭಯಾನಕ ಬೆಳವಣಿಗೆ.
ಒಟ್ಟಿನಲ್ಲಿ ಸಮಾಜದಲ್ಲಿ ಒಂದು ಅಲ್ಲೋಲಕಲ್ಲೋಲ ಪರಿಸ್ಥಿತಿ ಉದ್ಭವವಾಗುತ್ತಿದೆ. ಸಮಾಜದ ಇತರ ಪಿಡುಗುಗಳ ವಿರುದ್ಧ ಹೋರಾಡುವುದರ ಜೊತೆಗೆ ಈ ದುಷ್ಟ ಭಯೋತ್ಪಾದನೆಯ ಪ್ರವೃತ್ತಿಯನ್ನು ತಡೆಗಟ್ಟುವುದು ಎಲ್ಲ ಭಾರತೀಯರ ಆದ್ಯ ಕರ್ತವ್ಯವಾಗಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಪೊಲೀಸರನ್ನು ನಿಯಂತ್ರಿಸದಿದ್ದರೆ ಜರ್ಮನಿಯ ನಾಜಿಗಳಂತೆ ಆಗಬಹುದು’: ದಲಿತ ವ್ಯಕ್ತಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಕಳವಳ

ದಲಿತ ವ್ಯಕ್ತಿಯೊಬ್ಬರ ಜಾತಿ ತಿಳಿದ ನಂತರ ಅವರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಪೊಲೀಸ್ ಅಧಿಕಾರಿಯ ವಿರುದ್ಧ ತಕ್ಷಣವೇ ಎಫ್‌ಐಆರ್ (FIR) ದಾಖಲಿಸುವಂತೆ ಪಾಟ್ನಾ ಹೈಕೋರ್ಟ್ ನಿರ್ದೇಶಿಸಿದೆ....

“ಎಷ್ಟೊಂದು ದುರಹಂಕಾರ!”: ಜೆ.ಪಿ.ನಡ್ಡಾ ಹೇಳಿಕೆಗೆ ಕಪಿಲ್ ಸಿಬಲ್ ತೀವ್ರ ಆಕ್ಷೇಪ; ಪ್ರತಿಭಟನಾನಿರತ ಸಿಜೆಪಿ ಬೆಂಬಲಿಸಿ ವೀಡಿಯೋ ಸಂದೇಶ

ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಕ್ರಾಂತಿಕಾರಿ ಜಿರಳೆ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ನಡುವೆ ಕೇಂದ್ರ ಸಚಿವ ಜೆ.ಪಿ....

ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ: ಮೋದಿ-ಅಮಿತ್ ಶಾ ರಾಜೀನಾಮೆಗೆ ರಾಹುಲ್ ಗಾಂಧಿ ಆಗ್ರಹ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ 'ಸಂಸತ್ ಚಲೋ' ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ದೌರ್ಜನ್ಯವನ್ನು ಕಾಂಗ್ರೆಸ್ ನಾಯಕ ರಾಹುಲ್...

ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಿಯೋಗ; ಮನವಿ ಪತ್ರ ಸಲ್ಲಿಕೆ

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ನವದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ ಇಂದು ಕೇಂದ್ರ ಸಚಿವ ಜೆಪಿ ನಡ್ಡಾ ಅವರನ್ನು ಸಿಜೆಪಿ ಸದಸ್ಯರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ...

‘ಸಂಸತ್ ಚಲೋ’: ‘ಸೋನಮ್ ವಾಂಗ್ಚುಕ್ ಪತ್ನಿ ಮೇಲೆ ದೆಹಲಿ ಪೊಲೀಸರಿಂದ ಹಲ್ಲೆ’: ವಿದ್ಯಾರ್ಥಿಗಳ ಮೇಲೂ ಲಾಠಿ ಚಾರ್ಜ್  

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ಸಂಸದ್ ಚಲೋ’ ಮೆರವಣಿಗೆಯ ವೇಳೆ ಶಿಕ್ಷಣ ತಜ್ಞ ಹಾಗೂ ಲಡಾಖ್ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಸೇರಿದಂತೆ ಹಲವಾರು ಪ್ರತಿಭಟನಾಕಾರರ ಮೇಲೆ...

ಕನಿಷ್ಠ 20 ಸಾವಿರ ‘ಕಾಕ್ರೋಚ್‌’ಗಳಿಂದ ಸಂಸತ್ತಿಗೆ ಮೆರವಣಿಗೆ; ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದ ಲಾಠಿಚಾರ್ಜ್ – ಅಶ್ರುವಾಯು

ಧರ್ಮೇಂದ್ರ ಪ್ರಧಾನ್ ರಾಜೀನಾಮಗೆ ಒತ್ತಾಯಿಸಿ ಮುಂಗಾರು ಅಧಿವೇಶನದ ಮೊದಲ ದಿನದಂದು ಸಂಸತ್ತಿಗೆ ಮೆರವಣಿಗೆ ನಡೆಸಲು ದೆಹಲಿಯಲ್ಲಿ ಜಮಾಯಿಸಿದ್ದ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಾವಿರಾರು ಬೆಂಬಲಿಗರನ್ನು ಚದುರಿಸಲು ದೆಹಲಿ ಪೊಳಿಸರು ಅಶ್ರುವಾಯು ಶೆಲ್‌ಗಳನ್ನು...

ಸಿಜೆಪಿ ಪ್ರತಿಭಟನೆಗೆ ನಡುಗಿದ ಕೇಂದ್ರ ಸರ್ಕಾರ; ತರಾತುರಿಯಲ್ಲಿ ಸಂಸತ್ತಿನ ಗೇಟ್ ಮುಚ್ಚಿದ ಭದ್ರತಾ ಸಿಬ್ಬಂದಿ

ನೀಟ್‌ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ವಿರೋಧಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಿ ಇಂದು ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಹಮ್ಮಿಕೊಂಡಿರುವ ಸಂಸತ್ ಮೆರವಣಿಗೆಗೆ ಕೇಂದ್ರ ಸರ್ಕಾರ...

ಹಕ್ಕುಗಳ ಕಾಯ್ದೆಗೆ 7 ವರ್ಷ: ಕಾಗದದಲ್ಲಷ್ಟೇ ಸಮಾನತೆ, ಉದ್ಯೋಗ ಸಿಗದೆ ಬೀದಿಗೆ ತಳ್ಳಲ್ಪಡುತ್ತಿರುವ ಟ್ರಾನ್ಸ್‌ಜೆಂಡರ್‌ ಸಮುದಾಯ

ಬೆಂಗಳೂರು: ರಾಷ್ಟ್ರೀಯ ಮಟ್ಟದಲ್ಲಿ ‘ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ (ಹಕ್ಕುಗಳ ರಕ್ಷಣೆ) ಕಾಯ್ದೆ-2019’ ಜಾರಿಗೆ ಬಂದು ಏಳು ವರ್ಷಗಳು ಕಳೆದಿದ್ದರೂ, ಸಮುದಾಯದ ಆರ್ಥಿಕ ಸಬಲೀಕರಣ ಇನ್ನೂ ಕನಸಾಗಿಯೇ ಉಳಿದಿದೆ. ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ...

ಸಂಸತ್‌ ಚಲೋ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಭಾರೀ ಬೆಂಬಲ

ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್‌ (NEET) ಪ್ರಶ್ನೆಪತ್ರಿಕೆ ಸೋರಿಕೆ, ಸಾಲು ಸಾಲು ವಿದ್ಯಾರ್ಥಿಗಳ ಆತ್ಮಹತ್ಯೆ ಹಾಗೂ ದೇಶದ ಪರೀಕ್ಷಾ ವ್ಯವಸ್ಥೆಯ ಸರಣಿ ವೈಫಲ್ಯಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಆಯೋಜಿಸಿರುವ...

ಡಿಜಿಟಲೀಕರಣಗೊಂಡ 2002ರ ಮತದಾರರ ಪಟ್ಟಿಯಿಂದ ಬೆಂಗಳೂರಿನ ಮತಗಟ್ಟೆಗಳೇ ಮಾಯ: ಮಾಹಿತಿ ಸಿಗದೆ ಆತಂಕದಲ್ಲಿ ನೂರಾರು ಮತದಾರರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಹಲವು ಭಾಗಗಳಲ್ಲಿ 2002ರ ಡಿಜಿಟಲೀಕರಣಗೊಂಡ ಮತದಾರರ ಪಟ್ಟಿಯಿಂದ ಇಡೀ ಮತಗಟ್ಟೆಗಳೇ ಕಾಣೆಯಾಗಿರುವ ಗಂಭೀರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದರಿಂದಾಗಿ ನೂರಾರು ಮತದಾರರು ಆತಂಕ ಮತ್ತು ಗೊಂದಲಕ್ಕೊಳಗಾಗಿದ್ದಾರೆ ಎಂದು...