Homeಅಂಕಣಗಳುಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

- Advertisement -
- Advertisement -

ಕೇಳುಗರಿಗೆಲ್ಲ ವೀರ ನಮಸ್ಕಾರಗಳು, ಇದೀಗ ನೀವು ಕೇಳುತ್ತಿದ್ದೀರಿ ಆಘಾತವಾಣಿ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಬನ್ನಿ ಈ ವಾರದ ಸುದ್ದಿಗಳೇನೇನಿವೆ ಎಂದು ನೋಡೋಣ.
ಶಿವಮೊಗ್ಗದ ಹೊಸನಗರ ಕಡೆಯ ದನ ಕಾಯೋ ಅಂಕಲ್ ಕೌಬಾಯ್ ಸ್ವಾಮಿಯ ಬಗ್ಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಊರಲ್ಲಿ ಓಡಾಡೋ ಬೀಡಾಡಿ ದನಹಸುಗಳನ್ನು ಎಳೆದೊಯ್ದು ‘ಕೌ ಸ್ಕೂಲ್’ನೊಳಗೆ ಕೂಡಿ ಹಾಕಿ ದಂಧೆ ನಡೆಸುತ್ತಿದ್ದ ಈ ಕೌಬಾಯ್ ಸ್ವಾಮಿ ಮುಸುಡಿಗೆ ಹೈಕೋರ್ಟ್ ಬಕ್ ಬಕ್ ಎಂದು ಗುದ್ದಿದೆ. ಧಡಿಯೂರಪ್ಪನ ಕಾಲದಲ್ಲಿ ಗೋಕರ್ಣದ ದೇವಸ್ಥಾನವನ್ನು ತನ್ನ ಮಠದ ವಶಕ್ಕೆ ಪಡೆದಿದ್ದ ಕೌಬಾಯ್ ಕಳ್ಳನ ಕೋತಿಮುಷ್ಠಿಯಿಂದ ದೇವಸ್ಥಾನವನ್ನು ಕಿತ್ತು, ಸಾರ್ವಜನಿಕರ ಸಮಿತಿಯ ಮಂಡಳಿಗೆ ಒಪ್ಪಿಸಲಾಗಿದೆ. ಇಲ್ಲೀತನಕ ‘ಕೌ ಸ್ಕೂಲ್’ನ ಹಸುಗಳ ಹಾಲು-ಬೆಣ್ಣೆ ತುಪ್ಪ ಮಜ್ಜಿಗೆ-ಮೊಸರನ್ನು ಕನ್ಸೆಷನ್ ರೇಟಿಗೆ ಮಾರಿಕೊಂಡು, ಏಕಾಂತ ಸೇವೆಯಂಥ ‘ಅಡಲ್ಟ್ ಓನ್ಲಿ’ ಮಿಡ್ ನೈಟ್ ಚಟುವಟಿಕೆಗಳಲ್ಲಿ ಕಾಲೆತ್ತಿಕೊಂಡು ಆನಂದವಾಗಿದ್ದ ರಸಿಕರರಾಜ ಕೌಬಾಯ್ ಸ್ವಾಮಿಗೆ ಇದರಿಂದಾಗಿ ರಕ್ತವಾಂತಿಯಾದಷ್ಟು ನೋವುಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಗೋಕರ್ಣ ದೇವಳದಿಂದ ಬರುತ್ತಿದ್ದ ಲಕ್ಷ ಲಕ್ಷ ಆದಾಯಕ್ಕೆ ಹೈಕೋರ್ಟ್ ಆದೇಶವು ಮಣ್ಣು ಸುರಿದಿರುವುದರಿಂದ ಇನ್ನು ಮುಂದೆ ‘ಕೌಸ್ಕೂಲ್’ ಬ್ಯುಸಿನೆಸ್ಸಿನಲ್ಲಿ ಸಿಗುತ್ತಿದ್ದ ಪುಡಿಗಾಸೇ ಗಟ್ಟಿ ಎಂದು ಖಾತ್ರಿಯಾಗುತ್ತಿದ್ದಂತೆ ಕೌಬಾಯ್ ಮುಸುಡಿ ಕಿವುಚಿಕೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನಂತೆ. ಕೌಬಾಯ್ ಕಳ್ಳನ ಈ ಭೀಭತ್ಸ ಮುಖಾರವಿಂದವನ್ನು ನೋಡಿದ ಪೂಜೆಗೆಂದು ಬಂದ ಭಕ್ತರು, ಸ್ವಾಮಿಗೆ ಯಾವುದೋ ಆಫ್ರಿಕನ್ ದೆವ್ವ ಮೆಟ್ಟಿಕೊಂಡಿರಬೇಕೆಂದು ಭಯಗೊಂಡು ಕೇರಳ ಪಂಡಿತರನ್ನು ಕರೆತರಲು ದೌಡಾಯಿಸಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

**********

ಕೇಂದ್ರ ಸರ್ಕಾರದ “ರನ್ನಿಂಗ್ ಇನ್ ದಿ ಫಾರಿನ್, ರನ್ ರನ್ ರನ್’ ಯೋಜನೆಯ ಲಾಭ ಪಡೆದ ಬ್ಯಾಂಕ್ ವಂಚಕರು ಸರ್ಕಾರಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಉಂಡೆ ನಾಮ ತಿಕ್ಕಿ ಕಂಡ ಕಂಡ ದೇಶಗಳಿಗೆ ಓಡಿ ಹೋಗಿರುವುದು ಹಳೆಯ ವಿಷಯ. ಇಂಥಹ ವಂಚಕರನ್ನು, ಜಟಕಾಗಾಡಿ ಹತ್ತಿಕೊಂಡು ದೇಶದೇಶಗಳಿಗೆ ಪರ್ಯಟನೆ ಮಾಡಿ ಹಿಡಿದು ತರುತ್ತೇನೆಂದು ಬೊಗಳಿದ್ದ ಹಾಫ್‍ಮೆಂಟ್ಲು ಪಕೋಡೇಂದ್ರನು ಆನಂತರ ಮುಖ ಮತ್ತು ಇನ್ನೊಂದಕ್ಕೆ ಬ್ಯಾಂಡೇಜ್ ಹಾಕ್ಕೊಂಡು ಮಲಗಿರುವುದು ಸಹ ಹಳೇ ವಿಷಯ. ಹೊಸ ವಿಷಯ ಏನಪ್ಪ ಅಂತಂದ್ರೆ.. ಹೀಗೆ ಸರ್ಕಾರಿ ಬ್ಯಾಂಕುಗಳಿಗೆ ವಂಚಿಸಿ ಓಡಿಹೋದವರಲ್ಲಿ ಅಗ್ರಗಣ್ಯನಾದ ವಿಜಯ್ ಮಲ್ಯ, ತನ್ನ ಲಂಡನ್ ಮನೆಯಲ್ಲಿ ಕಕ್ಕ ಮಾಡಲು ಚಿನ್ನದ ಟಾಯ್ಲೆಟ್ ಕಮೋಡ್ ಕಟ್ಟಿಸಿಕೊಂಡಿರುವುದು ಬಯಲಾಗಿದೆ. ಒಬ್ಬರ ಹಿಂದೊಬ್ಬರು 28 ಮಂದಿ ಬ್ಯಾಂಕ್ ವಂಚಕರು ದೇಶ ಬಿಟ್ಟು ಓಡಿಹೋಗಿ ಹೀಗೆ ರಾಜಾಧಿರಾಜರಂತೆ ಎಂಜಾಯ್ ಮಾಡಿಕೊಂಡು ತಿರುಗುತ್ತಿದ್ದರೂ ಬ್ಲೂಜೆಪಿ ಪಕ್ಷದ ದ್ವೇಷಭಕ್ತ ಶಿಖಾಮಣಿಗಳು ಕಣ್ಣಿಗೆ ಲಕ್ವ ಹೊಡೆದವರಂತೆ ಸುಮ್ಮನಿರುವುದು ಆಶ್ಚರ್ಯವೇ ಸರಿ. ಪಕೋಡೇಂದ್ರನ ಫಾರಿನ್ ತೆವಲು ಹುಚ್ಚುಗೆದರಿ ದೇಶ ದೇಶ ಓತ್ಲಾ ಹೊಡೆಯುವಾಗ ಈ ವಂಚಕರಿರುವ ದೇಶಗಳಿಗೆಲ್ಲ ಹೋಗಿ ಬಂದರೂ ಇವರನ್ನು ಹಿಡಿದು ತರುವ ಬದಲು ತನ್ನ ‘ದೋಸ್ತಾನ ದೋಸ್ತ್’ಗಳಾದ ಅಂಬಾನಿ-ಆದಾನಿಗಳಿಗೆ ಆ ದೇಶಗಳಲ್ಲಿ ಬ್ಯುಸಿನೆಸ್ ಕಾಂಟ್ರಾಕ್ಟ್ ಕೊಡಿಸೋ ಅಡಿಕೆಮಂಡಿಯ ಕಮಿಷನ್ ಏಜೆಂಟ್ ದಲ್ಲಾಳಿಯಂತೆ ವರ್ತಿಸುತ್ತಿದ್ದಾನೆಂದು ಶ್ರಮಜೀವಿ ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

**********

ಉತ್ತರಪ್ರದೇಶದ ಬೋಳುಮಂಡೆ ‘ಕುಂಗ್ ಫೂ ಮಾಂಕ್’ ಭೋಗಿ ಅನಿಷ್ಠನಾಥ್ ತನ್ನ ಆಡಳಿತಾವಧಿಯ ಅಭಿವೃದ್ಧಿ ಕೆಲಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಪ್ರಕಟಿಸಿದ್ದಾರೆ. ಇದೇ ಕೆಲಸಕ್ಕೆಂದು ರಾಜ್ಯ ಸರ್ಕಾರದಡಿಯಿರುವ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಮಾಡೋ ಕೆಲಸ ಬಿಟ್ಟು ಯಾವ ದೊಡ್ಡಮೋರಿಗೆ ಕೇಸರಿ ಪೇಂಟ್ ಹೊಡೆಯಲು ಹೋಗಿದ್ದಾರೆಂದು ಜನರು ಪ್ರಶ್ನಿಸುತ್ತಿದ್ದಾರೆ. ಇರಲಿ, ಈ ಬಗ್ಗೆ ಅನಿಷ್ಠನಾಥನ ಅಭಿವೃದ್ಧಿಗಳನ್ನು ಪಟ್ಟಿ ಮಾಡುವುದಾದರೆ ಅವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾರಿಗೂ ಹೊಳೆಯದ ತಲೆಕೆಟ್ಟ ಐಡಿಯಾಗಳೇ ಎಂಬುದು ಅರಿವಾಗುತ್ತದೆ. ಉತ್ತರಪ್ರದೇಶದ ರೋಡು, ಮೋರಿ, ಟಾಯ್ಲೆಟ್, ಸರ್ಕಾರಿ ಕಚೇರಿ, ಕಾರು ಬಸ್ಸು, ಸೈಕಲ್ ಆಟೋರಿಕ್ಷಾಗಳು… ಹೀಗೆ ಅನಿಷ್ಠನಾಥನ ಬುರುಡೆಯೊಂದನ್ನು ಬಿಟ್ಟು ಮಿಕ್ಕೆಲ್ಲದ್ದಕ್ಕೂ ಕೇಸರಿ ಪೇಂಟ್ ಹೊಡೆಯಲಾಗಿದೆ. ಸೆಗಣಿ ತಿಂದ್ರೆ ಗಂಡು ಮಗುವಾಗುತ್ತೆ, ಸೆಗಣಿ ಶಾಂಪೂನಲ್ಲಿ ತಲೆಸ್ನಾನ ಮಾಡಿದ್ರೆ ತಲೆಗೂದಲು ಸೊಂಪಾಗಿ ಬೆಳೆಯುತ್ತೆ, ದನದ ಉಚ್ಚೆ ಕುಡಿದರೆ ಸರ್ವರೋಗಗಳೂ ನಿವಾರಣೆಯಾಗುತ್ತೆ, ಸೆಗಣಿ ಸೋಪು, ಸೆಗಣಿ ಬಿಸ್ಕತ್ತು, ಸೆಗಣಿ ಸೊಳ್ಳೆಬತ್ತಿ, ಸೆಗಣಿ ನೆಲ ಕ್ಲೀನರ್.. ಇಂಥಹ ಲೂಸ್ ಸಂಶೋಧನೆ ನಡೆಸಿದ ಅಡ್ನಾಡಿ ಸನಾತನ ಪೀಡೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ರಾಜ್ಯದಲ್ಲಿ ಯಾರು ಯಾರನ್ನು ಬೇಕಾದರೂ ಗುಂಪು ಕಟ್ಟಿಕೊಂಡು ಹೊಡೆದು ಕೊಲ್ಲಲು ಸರ್ಕಾರದಿಂದಲೇ ಅನಧಿಕೃತ ಅನುಮತಿ ನೀಡಲಾಗಿದೆ. ಸಾಯುತ್ತಿರೋ ಮನುಷ್ಯರಿಗೆ ಆಸ್ಪತ್ರೆ ಕಟ್ಟಿಸಲು, ಆಕ್ಸಿಜನ್ ಇಲ್ಲದೆ ಸತ್ತ ಸಾವಿರಾರು ಎಳೆಕಂದಮ್ಮಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಯೋಗ್ಯತೆಯಿಲ್ಲದಿದ್ದರೂ ಬೀಡಾಡಿ ದನಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಉತ್ತರಪ್ರದೇಶದ ಗ್ರಾಮೀಣಭಾಗವನ್ನು ಕ್ರಿಸ್ತಪೂರ್ವದಲ್ಲೇ ಬಾಕಿ ಉಳಿಸಲಾಗಿದೆ.. ಹೀಗೆ ಹೇಳುತ್ತ ಹೋದರೆ ಪಕೋಡಪ್ಪನ ಸುಳ್ಳುಗಳಂತೆ ಬೆಳೆಯುತ್ತ ಹೋಗುವ ಈ ತರುಕಲಾಂಡಿ ಕೆಲಸಗಳೇ ಭೋಗಿ ಅನಿಷ್ಠನಾಥನ ಅಭಿವೃದ್ಧಿಗಳೆಂದು ಸರ್ಕಾರದ ವರದಿಗಳೇ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ತಿಂಗಳಿಗೆ 25 ಸಾವಿರ ಸಂಬಳ ಕೊಟ್ಟು ತನ್ನ ಪಕ್ಷದ ‘ಬೇ ರೋಜ್ಗಾರ್ ಅಬ್ಬೇಪಾರಿಗಳಿಗೆ’ ಪುಗ್ಸಟ್ಟೆ ಸಂಬಳದ ವ್ಯವಸ್ಥೆ ಮಾಡ್ತಿರೋ ಅನಿಷ್ಠನಾಥ.. ಅದಕ್ಕೆ ಬೇಕಾದ ದುಡ್ಡನ್ನು ಸರ್ಕಾರಿ ಬೊಕ್ಕಸದಿಂದ ಕೊಡುತ್ತಾನೋ ಅಥವ ಅವನಪ್ಪನ ಮನೆಯೊಳಗೆ ಪ್ರಿಂಟು ಮಾಡಿ ತಂದು ಹಂಚುತ್ತಾನಾ ಎಂಬ ಬಗ್ಗೆ ಜನರಲ್ಲಿ ತೀವ್ರ ಜಿಜ್ಞಾಸೆ ಹುಟ್ಟಿಕೊಂಡಿದೆ.
ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೊಂದಷ್ಟು ಆಘಾತಕಾರಿ ನ್ಯೂಸುಗಳ ಸಮೇತ ಮತ್ತೆ ಭೇಟಿಯಾಗೋಣ. ಅಲ್ಲೀತನಕ ನಮಗೂ ನಿಮಗೂ ಅಟ್ಟೆ ಮಟ್ಟೆ ಕೋಳಿ ಮಟ್ಟೆ ವಾರದ್ ತನಕ ಮಾತಾಡ್ಸಲ್ಲ ಠೂ ಬಳೆ. ಧನ್ಯವಾದಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜ್ಯಸಭಾ ಚುನಾವಣೆ: ಕರ್ನಾಟದಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ರಾಜ್ಯಕ್ಕೆ ಲಾಭವಾಗಿದೆಯೇ?

ರಾಜ್ಯಸಭೆಗೆ ಪ್ರತಿಬಾರಿ ಚುನಾವಣೆ ನಡೆಯುವಾಗಲೂ ಈ ಚರ್ಚೆಗಳು ಸಾಮಾನ್ಯ. ಕನ್ನಡೇತರರು ಇಲ್ಲಿಂದ ಆಯ್ಕೆಯಾಗಿ ಇಲ್ಲಿಯ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ ಎಂಬ ವಾಸ್ತವದ ಜೊತೆಜೊತೆಗೆ, ರಾಜ್ಯಸಭೆಗೆ ಆಯ್ಕೆಯಾಗುವ ಕನ್ನಡವರಾದರೂ ಮಾತನಾಡುತ್ತಾರಾ? ಎಂದರೆ ಅದಕ್ಕೂ ನಮ್ಮಲ್ಲಿ...

ಬಂಗಾಳದಲ್ಲಿ ಬಿಜೆಪಿ ಬೆಂಬಲಿಗರ ಕ್ರೌರ್ಯ: ಅಭಿಷೇಕ್ ಬಳಿಕ ಕಲ್ಯಾಣ್‌ ಬ್ಯಾನರ್ಜಿ ಮೇಲೆ ಮಾರಣಾಂತಿಕ ದಾಳಿ

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ಭಾನುವಾರ (ಮೇ 31), ಹೂಗ್ಲಿ ಜಿಲ್ಲೆಯಲ್ಲಿ ನಡೆದಿದ್ದ ಚುನಾವಣೋತ್ತರ ಹಿಂಸಾಚಾರದಲ್ಲಿ ಕಾರ್ಯಕರ್ತರ ಬಂಧನದ ವಿರುದ್ಧ ಮನವಿ ಪತ್ರ ಸಲ್ಲಿಸಲು ಭೇಟಿ...

ಬಸ್ತಾರ್‌: ಬುಡಕಟ್ಟು ಕ್ರಿಶ್ಚಿಯನ್ ಕುಟುಂಬಗಳಿಗೆ ಬೆದರಿಕೆ, ಥಳಿತ, ಹಿಂದೂ ಧರ್ಮ ಸ್ವೀಕರಿಸಲು ಬಲವಂತ: ಘನತೆಯ ಬದುಕಿಗಾಗಿ ಆದಿವಾಸಿಗಳ ಹೋರಾಟ

ಛತ್ತೀಸ್‌ಗಢದ ದಟ್ಟ ಅರಣ್ಯಗಳು ಮತ್ತು ಕಡಿದಾದ ಬೆಟ್ಟಗಳಿಂದ ಆವೃತವಾಗಿರುವ ಬಸ್ತಾರ್ ಕಣಿವೆಯು ತನ್ನ ವಿಶಿಷ್ಟ ಬುಡಕಟ್ಟು ಸಂಸ್ಕೃತಿ ಮತ್ತು ಪ್ರಾಕೃತಿಕ ಸಂಪತ್ತಿಗೆ ಹೆಸರುವಾಸಿ. ಆದರೆ ಇತ್ತೀಚಿನ ವರ್ಷಗಳಲ್ಲಿ, ಈ ಪ್ರಶಾಂತ ಭೂಭಾಗವು ತೀವ್ರಗಾಮಿ...

ಗಾಝಾದಲ್ಲಿ ರಕ್ತಸಿಕ್ತ ಈದ್: ಇಸ್ರೇಲ್ ಭೀಕರ ದಾಳಿಗೆ 26 ಪ್ಯಾಲೆಸ್ಟೀನಿಯನ್ನರು ಬಲಿ, ವಿಶ್ವಸಂಸ್ಥೆ ತೀವ್ರ ಆತಂಕ

ಗಾಝಾ: ಇಸ್ಲಾಂ ಧರ್ಮದ ಅತ್ಯಂತ ಪವಿತ್ರ ದಿನಗಳಲ್ಲಿ ಒಂದಾದ ‘ಈದ್ ಅಲ್-ಅಧಾ’ ಹಬ್ಬದ ಸಂದರ್ಭದಲ್ಲೂ ಗಾಝಾ ಪಟ್ಟಿಯಲ್ಲಿ ರಕ್ತಪಾತ ಮುಂದುವರಿದಿದ್ದು, ಹಬ್ಬದ ಮುನ್ನಾದಿನದಿಂದ ಆರಂಭಿಸಿ ಇಸ್ರೇಲ್ ಪಡೆಗಳು ನಡೆಸಿದ ಸರಣಿ ದಾಳಿಗಳಲ್ಲಿ ಕನಿಷ್ಠ...

ಜನರಿಗೆ ಇಂಧನ ಉಳಿಸುವ ಪಾಠ, ಪ್ರಧಾನಿಗೆ ರೋಡ್‌ಶೋಗಳ ಆಟ

ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು...

ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಸ್ಪರ್ಧಿಸಲು ವಿನೇಶ್ ಫೋಗಟ್‌ಗೆ ಅನುಮತಿಸಿದ ಭಾರತೀಯ ಕುಸ್ತಿ ಒಕ್ಕೂಟ

ಮಾಜಿ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತೆ ವಿನೇಶ್ ಫೋಗಟ್ ಅವರು (ಮೇ 30) ಏಷ್ಯನ್ ಗೇಮ್ಸ್ ಆಯ್ಕೆ ಟ್ರಯಲ್ಸ್‌ನಲ್ಲಿ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಭಾರತೀಯ ಕುಸ್ತಿ ಒಕ್ಕೂಟ...

Uttarakhand | ಬಜರಂಗದಳದ ಕಾರ್ಯಕರ್ತರು ಈಗ ದ್ವೇಷ ಬಿತ್ತುವ ವೃತ್ತಿಪರ ಇನ್‌ಫ್ಲ್ಯುಯೆನ್ಸರ್ಸ್!

ಈ ವರ್ಷದ ಆರಂಭದಲ್ಲಿ ಉತ್ತರಾಖಂಡದ ಕೋಟದ್ವಾರದಲ್ಲಿ ಹಿಂದುತ್ವ ಗುಂಪೊಂದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರ ಅಂಗಡಿಗೆ ನುಗ್ಗಿ, ಅಂಗಡಿಯ ಹೆಸರಾದ ‘ಬಾಬಾ’ ಎಂಬುವುದನ್ನು ಬದಲಾಯಿಸುವಂತೆ ಒತ್ತಾಯಿಸಿತ್ತು. ‘ಬಾಬಾ’ ಎಂಬುವುದು ‘ಹಿಂದೂ’ ಹೆಸರಾಗಿದೆ ಎಂದು ಆ...

​ನಿಗಿ ನಿಗಿ ಕೆಂಡದಂತಾಗಿರುವ ಬಿಡದಿ, ಡಿಕೆಶಿಗೆ ಬಿಸಿ ತುಪ್ಪದಂತಾದ ರೈತರು

​ಬದಲಾದ ರಾಜಕೀಯ ಸಂದರ್ಭದಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿರುವ ಡಿ.ಕೆ. ಶಿವಕುಮಾರ್ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಡದಿಯ ಟೌನ್‌ಶಿಪ್ ಯೋಜನೆಯ ವಿರುದ್ಧ ನಡೆಯುತ್ತಿರುವ ರೈತರ ಹೋರಾಟ ದಿನದಿಂದ ದಿನಕ್ಕೆ ಉಗ್ರ ರೂಪ ಪಡೆಯುತ್ತಿದೆ. ​ಭೂಸ್ವಾಧೀನದ...

ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ‘SIR’ ಅನ್ನೇ ಅಸ್ತ್ರವನ್ನಾಗಿಸಿಕೊಂಡ ನರೇಂದ್ರ ಮೋದಿ!

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ತಕ್ಷಣ (ಮೇ 4 ರಂದು), ಕಾಳೀಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅತ್ಯಂತ ಆಕ್ರೋಶದಿಂದ ಮಾತನಾಡಿದ್ದರು. ಅಷ್ಟೇ ಅಲ್ಲದೆ,...

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ಮೂರು ದಿನ ಮುಟ್ಟಿನ ರಜೆ, ಅಸಂಘಟಿತ ವಲಯದ ಮಹಿಳೆಯರಿಗೆ ಆರು ತಿಂಗಳ ಹೆರಿಗೆ ರಜೆ ಘೋಷಣೆ 

ತಿರುವನಂತಪುರಂ: ಕೇರಳದ ವಿ.ಡಿ. ಸತೀಶನ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಹಲವಾರು ಕಲ್ಯಾಣ ಕ್ರಮಗಳನ್ನು ಘೋಷಿಸಿದೆ, ಇದರಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಮೂರು ದಿನಗಳ ಮಾಸಿಕ ಮುಟ್ಟಿನ ರಜೆ, ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಸಮಾನ...