Homeಅಂಕಣಗಳುಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡೋ ಭಕುತರಿಗೆ ತಿಂಗಳಿಗೆ 25 ಸಾವಿರ ಭಕ್ಷೀಸು!

- Advertisement -
- Advertisement -

ಕೇಳುಗರಿಗೆಲ್ಲ ವೀರ ನಮಸ್ಕಾರಗಳು, ಇದೀಗ ನೀವು ಕೇಳುತ್ತಿದ್ದೀರಿ ಆಘಾತವಾಣಿ, ಓದುತ್ತಿರುವವರು ನಿಮ್ಮ ಪ್ರೀತಿಯ ಅಟ್ಯಾಕ್ ಹನ್ಮಂತು. ಬನ್ನಿ ಈ ವಾರದ ಸುದ್ದಿಗಳೇನೇನಿವೆ ಎಂದು ನೋಡೋಣ.
ಶಿವಮೊಗ್ಗದ ಹೊಸನಗರ ಕಡೆಯ ದನ ಕಾಯೋ ಅಂಕಲ್ ಕೌಬಾಯ್ ಸ್ವಾಮಿಯ ಬಗ್ಗೆ ಒಂದು ಆಘಾತಕಾರಿ ಸುದ್ದಿ ಬಂದಿದೆ. ಊರಲ್ಲಿ ಓಡಾಡೋ ಬೀಡಾಡಿ ದನಹಸುಗಳನ್ನು ಎಳೆದೊಯ್ದು ‘ಕೌ ಸ್ಕೂಲ್’ನೊಳಗೆ ಕೂಡಿ ಹಾಕಿ ದಂಧೆ ನಡೆಸುತ್ತಿದ್ದ ಈ ಕೌಬಾಯ್ ಸ್ವಾಮಿ ಮುಸುಡಿಗೆ ಹೈಕೋರ್ಟ್ ಬಕ್ ಬಕ್ ಎಂದು ಗುದ್ದಿದೆ. ಧಡಿಯೂರಪ್ಪನ ಕಾಲದಲ್ಲಿ ಗೋಕರ್ಣದ ದೇವಸ್ಥಾನವನ್ನು ತನ್ನ ಮಠದ ವಶಕ್ಕೆ ಪಡೆದಿದ್ದ ಕೌಬಾಯ್ ಕಳ್ಳನ ಕೋತಿಮುಷ್ಠಿಯಿಂದ ದೇವಸ್ಥಾನವನ್ನು ಕಿತ್ತು, ಸಾರ್ವಜನಿಕರ ಸಮಿತಿಯ ಮಂಡಳಿಗೆ ಒಪ್ಪಿಸಲಾಗಿದೆ. ಇಲ್ಲೀತನಕ ‘ಕೌ ಸ್ಕೂಲ್’ನ ಹಸುಗಳ ಹಾಲು-ಬೆಣ್ಣೆ ತುಪ್ಪ ಮಜ್ಜಿಗೆ-ಮೊಸರನ್ನು ಕನ್ಸೆಷನ್ ರೇಟಿಗೆ ಮಾರಿಕೊಂಡು, ಏಕಾಂತ ಸೇವೆಯಂಥ ‘ಅಡಲ್ಟ್ ಓನ್ಲಿ’ ಮಿಡ್ ನೈಟ್ ಚಟುವಟಿಕೆಗಳಲ್ಲಿ ಕಾಲೆತ್ತಿಕೊಂಡು ಆನಂದವಾಗಿದ್ದ ರಸಿಕರರಾಜ ಕೌಬಾಯ್ ಸ್ವಾಮಿಗೆ ಇದರಿಂದಾಗಿ ರಕ್ತವಾಂತಿಯಾದಷ್ಟು ನೋವುಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಗೋಕರ್ಣ ದೇವಳದಿಂದ ಬರುತ್ತಿದ್ದ ಲಕ್ಷ ಲಕ್ಷ ಆದಾಯಕ್ಕೆ ಹೈಕೋರ್ಟ್ ಆದೇಶವು ಮಣ್ಣು ಸುರಿದಿರುವುದರಿಂದ ಇನ್ನು ಮುಂದೆ ‘ಕೌಸ್ಕೂಲ್’ ಬ್ಯುಸಿನೆಸ್ಸಿನಲ್ಲಿ ಸಿಗುತ್ತಿದ್ದ ಪುಡಿಗಾಸೇ ಗಟ್ಟಿ ಎಂದು ಖಾತ್ರಿಯಾಗುತ್ತಿದ್ದಂತೆ ಕೌಬಾಯ್ ಮುಸುಡಿ ಕಿವುಚಿಕೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನಂತೆ. ಕೌಬಾಯ್ ಕಳ್ಳನ ಈ ಭೀಭತ್ಸ ಮುಖಾರವಿಂದವನ್ನು ನೋಡಿದ ಪೂಜೆಗೆಂದು ಬಂದ ಭಕ್ತರು, ಸ್ವಾಮಿಗೆ ಯಾವುದೋ ಆಫ್ರಿಕನ್ ದೆವ್ವ ಮೆಟ್ಟಿಕೊಂಡಿರಬೇಕೆಂದು ಭಯಗೊಂಡು ಕೇರಳ ಪಂಡಿತರನ್ನು ಕರೆತರಲು ದೌಡಾಯಿಸಿದ್ದಾರೆಂದು ನಂಬಲನರ್ಹ ಮೂಲಗಳು ತಿಳಿಸಿವೆ.

**********

ಕೇಂದ್ರ ಸರ್ಕಾರದ “ರನ್ನಿಂಗ್ ಇನ್ ದಿ ಫಾರಿನ್, ರನ್ ರನ್ ರನ್’ ಯೋಜನೆಯ ಲಾಭ ಪಡೆದ ಬ್ಯಾಂಕ್ ವಂಚಕರು ಸರ್ಕಾರಿ ಬ್ಯಾಂಕುಗಳಿಗೆ ಸಾವಿರಾರು ಕೋಟಿ ಉಂಡೆ ನಾಮ ತಿಕ್ಕಿ ಕಂಡ ಕಂಡ ದೇಶಗಳಿಗೆ ಓಡಿ ಹೋಗಿರುವುದು ಹಳೆಯ ವಿಷಯ. ಇಂಥಹ ವಂಚಕರನ್ನು, ಜಟಕಾಗಾಡಿ ಹತ್ತಿಕೊಂಡು ದೇಶದೇಶಗಳಿಗೆ ಪರ್ಯಟನೆ ಮಾಡಿ ಹಿಡಿದು ತರುತ್ತೇನೆಂದು ಬೊಗಳಿದ್ದ ಹಾಫ್‍ಮೆಂಟ್ಲು ಪಕೋಡೇಂದ್ರನು ಆನಂತರ ಮುಖ ಮತ್ತು ಇನ್ನೊಂದಕ್ಕೆ ಬ್ಯಾಂಡೇಜ್ ಹಾಕ್ಕೊಂಡು ಮಲಗಿರುವುದು ಸಹ ಹಳೇ ವಿಷಯ. ಹೊಸ ವಿಷಯ ಏನಪ್ಪ ಅಂತಂದ್ರೆ.. ಹೀಗೆ ಸರ್ಕಾರಿ ಬ್ಯಾಂಕುಗಳಿಗೆ ವಂಚಿಸಿ ಓಡಿಹೋದವರಲ್ಲಿ ಅಗ್ರಗಣ್ಯನಾದ ವಿಜಯ್ ಮಲ್ಯ, ತನ್ನ ಲಂಡನ್ ಮನೆಯಲ್ಲಿ ಕಕ್ಕ ಮಾಡಲು ಚಿನ್ನದ ಟಾಯ್ಲೆಟ್ ಕಮೋಡ್ ಕಟ್ಟಿಸಿಕೊಂಡಿರುವುದು ಬಯಲಾಗಿದೆ. ಒಬ್ಬರ ಹಿಂದೊಬ್ಬರು 28 ಮಂದಿ ಬ್ಯಾಂಕ್ ವಂಚಕರು ದೇಶ ಬಿಟ್ಟು ಓಡಿಹೋಗಿ ಹೀಗೆ ರಾಜಾಧಿರಾಜರಂತೆ ಎಂಜಾಯ್ ಮಾಡಿಕೊಂಡು ತಿರುಗುತ್ತಿದ್ದರೂ ಬ್ಲೂಜೆಪಿ ಪಕ್ಷದ ದ್ವೇಷಭಕ್ತ ಶಿಖಾಮಣಿಗಳು ಕಣ್ಣಿಗೆ ಲಕ್ವ ಹೊಡೆದವರಂತೆ ಸುಮ್ಮನಿರುವುದು ಆಶ್ಚರ್ಯವೇ ಸರಿ. ಪಕೋಡೇಂದ್ರನ ಫಾರಿನ್ ತೆವಲು ಹುಚ್ಚುಗೆದರಿ ದೇಶ ದೇಶ ಓತ್ಲಾ ಹೊಡೆಯುವಾಗ ಈ ವಂಚಕರಿರುವ ದೇಶಗಳಿಗೆಲ್ಲ ಹೋಗಿ ಬಂದರೂ ಇವರನ್ನು ಹಿಡಿದು ತರುವ ಬದಲು ತನ್ನ ‘ದೋಸ್ತಾನ ದೋಸ್ತ್’ಗಳಾದ ಅಂಬಾನಿ-ಆದಾನಿಗಳಿಗೆ ಆ ದೇಶಗಳಲ್ಲಿ ಬ್ಯುಸಿನೆಸ್ ಕಾಂಟ್ರಾಕ್ಟ್ ಕೊಡಿಸೋ ಅಡಿಕೆಮಂಡಿಯ ಕಮಿಷನ್ ಏಜೆಂಟ್ ದಲ್ಲಾಳಿಯಂತೆ ವರ್ತಿಸುತ್ತಿದ್ದಾನೆಂದು ಶ್ರಮಜೀವಿ ರೈತರು ಕ್ಯಾಕರಿಸಿ ಉಗಿಯುತ್ತಿದ್ದಾರೆಂದು ನಮ್ಮ ಬಾತ್ಮೀದಾರರು ವರದಿ ಮಾಡಿದ್ದಾರೆ.

**********

ಉತ್ತರಪ್ರದೇಶದ ಬೋಳುಮಂಡೆ ‘ಕುಂಗ್ ಫೂ ಮಾಂಕ್’ ಭೋಗಿ ಅನಿಷ್ಠನಾಥ್ ತನ್ನ ಆಡಳಿತಾವಧಿಯ ಅಭಿವೃದ್ಧಿ ಕೆಲಸಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುವವರಿಗೆ ತಿಂಗಳಿಗೆ 25 ಸಾವಿರ ರೂಪಾಯಿ ಸಂಬಳ ಕೊಡೋದಾಗಿ ಪ್ರಕಟಿಸಿದ್ದಾರೆ. ಇದೇ ಕೆಲಸಕ್ಕೆಂದು ರಾಜ್ಯ ಸರ್ಕಾರದಡಿಯಿರುವ ವಾರ್ತಾ ಮತ್ತು ಪ್ರಚಾರ ಇಲಾಖೆಯವರು ಮಾಡೋ ಕೆಲಸ ಬಿಟ್ಟು ಯಾವ ದೊಡ್ಡಮೋರಿಗೆ ಕೇಸರಿ ಪೇಂಟ್ ಹೊಡೆಯಲು ಹೋಗಿದ್ದಾರೆಂದು ಜನರು ಪ್ರಶ್ನಿಸುತ್ತಿದ್ದಾರೆ. ಇರಲಿ, ಈ ಬಗ್ಗೆ ಅನಿಷ್ಠನಾಥನ ಅಭಿವೃದ್ಧಿಗಳನ್ನು ಪಟ್ಟಿ ಮಾಡುವುದಾದರೆ ಅವು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಯಾರಿಗೂ ಹೊಳೆಯದ ತಲೆಕೆಟ್ಟ ಐಡಿಯಾಗಳೇ ಎಂಬುದು ಅರಿವಾಗುತ್ತದೆ. ಉತ್ತರಪ್ರದೇಶದ ರೋಡು, ಮೋರಿ, ಟಾಯ್ಲೆಟ್, ಸರ್ಕಾರಿ ಕಚೇರಿ, ಕಾರು ಬಸ್ಸು, ಸೈಕಲ್ ಆಟೋರಿಕ್ಷಾಗಳು… ಹೀಗೆ ಅನಿಷ್ಠನಾಥನ ಬುರುಡೆಯೊಂದನ್ನು ಬಿಟ್ಟು ಮಿಕ್ಕೆಲ್ಲದ್ದಕ್ಕೂ ಕೇಸರಿ ಪೇಂಟ್ ಹೊಡೆಯಲಾಗಿದೆ. ಸೆಗಣಿ ತಿಂದ್ರೆ ಗಂಡು ಮಗುವಾಗುತ್ತೆ, ಸೆಗಣಿ ಶಾಂಪೂನಲ್ಲಿ ತಲೆಸ್ನಾನ ಮಾಡಿದ್ರೆ ತಲೆಗೂದಲು ಸೊಂಪಾಗಿ ಬೆಳೆಯುತ್ತೆ, ದನದ ಉಚ್ಚೆ ಕುಡಿದರೆ ಸರ್ವರೋಗಗಳೂ ನಿವಾರಣೆಯಾಗುತ್ತೆ, ಸೆಗಣಿ ಸೋಪು, ಸೆಗಣಿ ಬಿಸ್ಕತ್ತು, ಸೆಗಣಿ ಸೊಳ್ಳೆಬತ್ತಿ, ಸೆಗಣಿ ನೆಲ ಕ್ಲೀನರ್.. ಇಂಥಹ ಲೂಸ್ ಸಂಶೋಧನೆ ನಡೆಸಿದ ಅಡ್ನಾಡಿ ಸನಾತನ ಪೀಡೆಗಳಿಗೆ ಪ್ರೋತ್ಸಾಹ ಕೊಡಲಾಗಿದೆ. ರಾಜ್ಯದಲ್ಲಿ ಯಾರು ಯಾರನ್ನು ಬೇಕಾದರೂ ಗುಂಪು ಕಟ್ಟಿಕೊಂಡು ಹೊಡೆದು ಕೊಲ್ಲಲು ಸರ್ಕಾರದಿಂದಲೇ ಅನಧಿಕೃತ ಅನುಮತಿ ನೀಡಲಾಗಿದೆ. ಸಾಯುತ್ತಿರೋ ಮನುಷ್ಯರಿಗೆ ಆಸ್ಪತ್ರೆ ಕಟ್ಟಿಸಲು, ಆಕ್ಸಿಜನ್ ಇಲ್ಲದೆ ಸತ್ತ ಸಾವಿರಾರು ಎಳೆಕಂದಮ್ಮಗಳಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲು ಯೋಗ್ಯತೆಯಿಲ್ಲದಿದ್ದರೂ ಬೀಡಾಡಿ ದನಗಳಿಗೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದಂತೆ ಉತ್ತರಪ್ರದೇಶದ ಗ್ರಾಮೀಣಭಾಗವನ್ನು ಕ್ರಿಸ್ತಪೂರ್ವದಲ್ಲೇ ಬಾಕಿ ಉಳಿಸಲಾಗಿದೆ.. ಹೀಗೆ ಹೇಳುತ್ತ ಹೋದರೆ ಪಕೋಡಪ್ಪನ ಸುಳ್ಳುಗಳಂತೆ ಬೆಳೆಯುತ್ತ ಹೋಗುವ ಈ ತರುಕಲಾಂಡಿ ಕೆಲಸಗಳೇ ಭೋಗಿ ಅನಿಷ್ಠನಾಥನ ಅಭಿವೃದ್ಧಿಗಳೆಂದು ಸರ್ಕಾರದ ವರದಿಗಳೇ ಹೇಳುತ್ತಿವೆ. ವಸ್ತುಸ್ಥಿತಿ ಹೀಗಿರುವಾಗ ತಿಂಗಳಿಗೆ 25 ಸಾವಿರ ಸಂಬಳ ಕೊಟ್ಟು ತನ್ನ ಪಕ್ಷದ ‘ಬೇ ರೋಜ್ಗಾರ್ ಅಬ್ಬೇಪಾರಿಗಳಿಗೆ’ ಪುಗ್ಸಟ್ಟೆ ಸಂಬಳದ ವ್ಯವಸ್ಥೆ ಮಾಡ್ತಿರೋ ಅನಿಷ್ಠನಾಥ.. ಅದಕ್ಕೆ ಬೇಕಾದ ದುಡ್ಡನ್ನು ಸರ್ಕಾರಿ ಬೊಕ್ಕಸದಿಂದ ಕೊಡುತ್ತಾನೋ ಅಥವ ಅವನಪ್ಪನ ಮನೆಯೊಳಗೆ ಪ್ರಿಂಟು ಮಾಡಿ ತಂದು ಹಂಚುತ್ತಾನಾ ಎಂಬ ಬಗ್ಗೆ ಜನರಲ್ಲಿ ತೀವ್ರ ಜಿಜ್ಞಾಸೆ ಹುಟ್ಟಿಕೊಂಡಿದೆ.
ಇಲ್ಲಿಗೆ ವಾರ್ತಾಪ್ರಸಾರ ಮುಕ್ತಾಯವಾಯಿತು. ಮತ್ತೊಂದಷ್ಟು ಆಘಾತಕಾರಿ ನ್ಯೂಸುಗಳ ಸಮೇತ ಮತ್ತೆ ಭೇಟಿಯಾಗೋಣ. ಅಲ್ಲೀತನಕ ನಮಗೂ ನಿಮಗೂ ಅಟ್ಟೆ ಮಟ್ಟೆ ಕೋಳಿ ಮಟ್ಟೆ ವಾರದ್ ತನಕ ಮಾತಾಡ್ಸಲ್ಲ ಠೂ ಬಳೆ. ಧನ್ಯವಾದಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...