Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಉರಿವ ಧರೆ ಮತ್ತು ಸುರಿವ ಮಳೆ

ಉರಿವ ಧರೆ ಮತ್ತು ಸುರಿವ ಮಳೆ

- Advertisement -
- Advertisement -

ಉರಿವ ಧರೆ ಮತ್ತು ಸುರಿವ ಮಳೆ
ಈ ಇಳೆ ಈ ಮಳೆ
ಮುಂದೊಂದು ಭರಣಿಗೆ ಉರಿವ ಈ ಧರೆಗೆ
ಭೋರ್ಗರೆದು ಮಳೆಯು ಸುರಿಯುವುದು
ಆ ನಾಳೆಯು ಬಂದೇ ಬರುವುದು
ಉರಿವ ಧರೆಯಲ್ಲಿ ಬದುಕಿರುವ ಎಲ್ಲರೂ ಮುಂದೊಂದು ಭರಣಿಯಲ್ಲಿ ಸುರಿವ ಮಳೆಯ ಮೇಲೆ ವಿಶ್ವಾಸವಿಟ್ಟು ಜೀವ ಹಿಡಿದಿಟ್ಟುಕೊಳ್ಳಿ ಎಂದು ಜನಾರ್ಧನ್ ಕೆಸರಗದ್ದೆ ಬರೆದಿದ್ದಾರೆ. ಉರಿವ ಧರೆಯು ಈ ಭೂಮಿ ಮಾತ್ರವಲ್ಲ; ಈ ಪದ್ಯದ ನಂತರದ ಸಾಲುಗಳೂ ಸಹಾ ನಿಸರ್ಗದ ಹಲವು ಪಕ್ಷಿ, ನದಿಗಳು, ಸೂರ್ಯ ಕಿರಣಗಳು, ಚಿಗುರಬೇಕಾದ ಬೀಜ ಮಾತ್ರವಲ್ಲದೇ ಕುರಿತೇ ಮಾತನಾಡುತ್ತವೆ. ಆದರೂ, ಕಡು ಕಷ್ಟಕಾಲದಲ್ಲಿ ಬದುಕುತ್ತಿರುವ ಎಲ್ಲರನ್ನೂ ಉದ್ದೇಶಿಸಿ ಕವಿ ಹಾಡುತ್ತಿದ್ದಾರೆಂದು, ಕಷ್ಟಕಾಲದಲ್ಲಿರುವ ಎಲ್ಲರಿಗೂ ಗೊತ್ತಾಗುತ್ತದೆ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಮಳೆಯೇ ರೂಪಕವಾಗುವುದು ಏಕೆ? ಉರಿ, ಸುಡು ಬಿಸಿಲು, ಧಗೆ ಇವನ್ನೇ ಸಂಕಷ್ಟಗಳಿಗೆ ರೂಪಕವಾಗಿ ಬಳಸುವುದರಿಂದ. ಹಾಗಾದರೆ ‘ತಣ್ಣನೆಯ ಕ್ರೌರ್ಯ’, ‘ಒಂದೇ ಸಾರಿಗೆ ನನ್ನಿಡೀ ದೇಹ ಮರಗಟ್ಟಿ ಹೋಯಿತು; ಮೈಯ್ಯೆಲ್ಲಾ ತಣ್ಣಗಾಗುತ್ತಿರುವುದರ ಅನುಭವವಾಯಿತು’ ಎಂದು ಹೇಳುವಾಗ ಕಾಣುವ ತಣ್ಣನೆಯ ಅಂಶ ಏನು? ಬಹುಶಃ ಇನ್ನೇನೂ ಮಾಡಲು ಸಾಧ್ಯವಾಗದೇ, ಕುಸಿದೇ ಹೋಗುವುದು ಅಥವಾ ಸಾವಿಗೆ ಹತ್ತಿರ ಹೋಗುವ ಸಂದರ್ಭವನ್ನು ವಿವರಿಸಲು ಮಾತ್ರ ಈ ತಣ್ಣನೆ ಪದ ಬಳಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೆಚ್ಚನೆಯ ಅಪ್ಪುಗೆ, ಹಿತವಾದ ಕಾವಿನ ಮೂಲಕ ಮೇಲೆತ್ತಬೇಕಾಗಬಹುದು.
ಆದರೆ ಬಿಸಿ ಹಾಗಲ್ಲ. ಅಲ್ಲಿ ಇನ್ನೂ ಜೀವ ಚೈತನ್ಯವಿದೆ. ಅದಕ್ಕೂ ಹೊರಗಿನ ತಂಪು ಬೇಕು. ಅದು ಸಿಗುತ್ತದೆಂಬ ಭರವಸೆಯೂ ಸಾಕು. ಅಂತಹ ಭರವಸೆಯನ್ನೇ ಜನಾರ್ಧನ್ ಹುಟ್ಟಿಸಲು ಯತ್ನಿಸಿದ್ದಾರೆ. ಕೆಲವು ಯುವಕ ಯುವತಿಯರು ಮೈದುಂಬಿ ಈ ಸಾಲುಗಳನ್ನು ಹಾಡಿದಾಗ ಕೇಳಲು ಚೆಂದ; ನಮ್ಮೊಳಗೂ ಭರವಸೆ ಹುಟ್ಟಿಯೇ ಹುಟ್ಟುತ್ತದೆ, ಚಣಕಾಲವಾದರೂ. ಲಗಾನ್ ಹಿಂದಿ ಸಿನೆಮಾದ ಮೊದ ಮೊದಲ ಭಾಗ ನೋಡಿದರೆ, ಕ್ಷೀಣ ಆಸೆಯೊಂದಿಗೆ ಕಾಯುವ ಬರಪೀಡಿತ ಜನರ ಚಿತ್ರಣ ನಮ್ಮ ಮನಮುಟ್ಟುತ್ತದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರವಿತ್ತು. ಕೇಂದ್ರ ಸರ್ಕಾರದ ತಂಡ ಭೇಟಿಗೆ ಬಂದಾಗ, ಕಳೆದ 16 ವರ್ಷಗಳಲ್ಲಿ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು 11 ವರ್ಷಗಳ ಕಾಲ ಬರ ಎದುರಿಸುತ್ತಿತ್ತು ಎಂದು ರಾಜ್ಯ ಸರ್ಕಾರವು ಹೇಳಿತ್ತು. ಇನ್ನುಳಿದ 5 ವರ್ಷಗಳ ಪೈಕಿ ಎರಡು ವರ್ಷ ಪ್ರವಾಹ ಬಂದಿತ್ತು. ಒಂದು ವರ್ಷವಂತೂ ಮನೆ ಮಾರು ಕೊಚ್ಚಿ ಹೋಗಿತ್ತು. ಕೇಂದ್ರ ತಂಡ ಬಂದ ವರ್ಷವೇ ಕರ್ನಾಟಕದಲ್ಲಿ ಬರ ಮತ್ತು ನೆರೆ ಎರಡೂ ಕಂಡಿದ್ದವು.
ಹಿಂದಿನ ವರ್ಷದ ಬರದ ಸಂದರ್ಭದಲ್ಲಿ ಮಲೆನಾಡಿನ ಜನ ಹೇಳಿದ್ದು ‘ಇಂತಹ ಬರ ಮಲೆನಾಡಿಗೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು, ಇನ್ನು ಕಷ್ಟವಿದೆ’. ನಂತರ ಹವಾಮಾನ ತಜ್ಞರ ಅಂಕಿ-ಅಂಶವೂ ಇದನ್ನು ಸಮರ್ಥಿಸಿತ್ತು. ಈ ವರ್ಷ ಇಬ್ಬರೂ ಹೇಳುತ್ತಿದ್ದಾರೆ ‘ಇಂತಹ ಮಳೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು’. ಹಾಗಾದರೆ ಕಳೆದ ವರ್ಷದ ಧಗೆ, ಉರಿ, ಬಾಯಾರಿಕೆಯನ್ನು ಈ ವರ್ಷದ ಮಳೆ ಸರಿದೂಗಿಸಿ ತಂಪು ಮಾಡುತ್ತದೆಯೇ?
ಅಣೆಕಟ್ಟುಗಳಿಂದ ಗೇಟುಗಳನ್ನು ತೆರೆದು ನೀರು ಧುಮ್ಮಿಕ್ಕುತ್ತಿರುವ ಫೋಟೋಗಳನ್ನು ಪತ್ರಿಕಾ ಛಾಯಾಗ್ರಾಹಕರು ವಿವಿಧ ಕೋನಗಳಲ್ಲಿ ತೆಗೆದು ಕಳಿಸುತ್ತಿದ್ದಾರೆ. ಜಲಪಾತಗಳೂ ರುದ್ರರಮಣೀಯವಾಗಿ ಕಾಣುತ್ತಿವೆ. ಎಷ್ಟೋ ಕಡೆ ಹುಡುಗ ಹುಡುಗಿಯರು ಈ ಮಳೆಯಲ್ಲಿ, ಜಲಪಾತದ ಧಾರೆಯಡಿಯಲ್ಲಿ ನೆನೆದು ಫೇಸ್‍ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಕೆಆರ್‍ಎಸ್ ಹಿಡಿದಿಟ್ಟುಕೊಳ್ಳಲಾಗದಷ್ಟು ನೀರು ಬಂದು, ಗೇಟು ತೆಗೆದಾಗ ಪಾಂಡವಪುರದ ಹತ್ತಿರ ಅಂತಹುದೇ ಒಂದು ಫೋಟೋ ತೆಗೆದ ಯುವಕನೊಬ್ಬ ತಮಾಷೆಯ ಅಡಿ ಬರಹ ಕೊಟ್ಟು ಎಲ್ಲೆಡೆ ಷೇರ್ ಮಾಡಿದ್ದ. ‘ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ಅಸಹಾಯಕರಾಗಿ ನೋಡುತ್ತಿರುವ ಎಣ್ಣೆಹೊಳೆ ಕೊಪ್ಪಲಿನ ರೈತಯುವಕರು’. ಇದರಲ್ಲಿ ಅರ್ಧ ನೀರು ಕಳೆದ ವರ್ಷ ಹರಿದಿದ್ದರೆ, ನಿಜಕ್ಕೂ ಮಂಡ್ಯದವರು ಅಸಹಾಯಕರಾಗಿಯೇ ನೋಡುತ್ತಿರುತ್ತಿದ್ದರು. ಆದರೆ, ಈ ಸಾರಿ ಇದು ತಮಾಷೆ.
ದೇವಸ್ಥಾನ, ಮಸೀದಿ ಮತ್ತು ಚರ್ಚು ಮೂರೂ ಮುಳುಗಿರುವ ಫೋಟೋಗಳನ್ನು ಒಟ್ಟಿಗೆ ಷೇರ್ ಮಾಡಿ, ‘ದೇವರೂ ಮುಳುಗಿದ’ ಎಂತಲೋ, ‘ನಿಸರ್ಗ ಸಮಾನತೆ ಕಾಪಾಡಿಕೊಂಡಿದೆ’ ಎಂತಲೋ ಹೇಳುವ ಫೋಟೋಗಳೂ ಕಂಡು ಬಂದವು. ಆದರೆ, ವಾಸ್ತವದಲ್ಲಿ ನಿಸರ್ಗದ ವೈಪರೀತ್ಯಗಳು ಹೆಚ್ಚಾಗಿ ಬಡವರನ್ನೇ ಕಾಡುತ್ತವೆ. ದಕ್ಷಿಣ ಭಾರತದ ಹೆಚ್ಚಿನ ಭಾಗ ಬ್ರಾಹ್ಮಣರ ಜಾಗೀರುಗಳಾಗಿದ್ದವು. ಬ್ರಾಹ್ಮಣರ ಜಮೀನುಗಳು ‘ಸೂಕ್ತವಾದ’ ಜಾಗದಲ್ಲೂ, ಉಳಿದವರ ಜಮೀನುಗಳು ‘ಐoತಿ ಟಥಿiಟಿg’ ಆಗಿಯೂ ಇರುತ್ತವೆ. ಹಾಗೆಯೇ ನಗರಗಳಲ್ಲೂ ಐoತಿ ಟಥಿiಟಿg ಆಗಿರುವ ಜಾಗಗಳಲ್ಲೇ ಸ್ಲಂಗಳು ಹೆಚ್ಚಿರುತ್ತವೆಂದು ಸ್ಲಂ ಕಾಯ್ದೆಯೂ ಸೂಚಿಸುತ್ತದೆ.
ನಗರಗಳು ನಿಜಕ್ಕೂ ಉರಿವ ಧರೆಗಳು. ಈ ವರ್ಷ ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯ ಅರ್ಧದಷ್ಟು ಯಾವುದೇ ಬಯಲುಸೀಮೆಯ ನಗರದ ಮೇಲೆ ಸುರಿದಿದ್ದರೂ, ನಗರಗಳು ಮುಳುಗಿಯೇ ಹೋಗಿರುತ್ತಿದ್ದವು. ಹಿಂದೊಮ್ಮೆ ಬಯಲುಸೀಮೆಯಲ್ಲಿ ಹಲವಾರು ದಿನಗಳ ಕಾಲ ಜಡಿಮಳೆ ಸುರಿದಾಗ ಕುಸಿದ ಮಣ್ಣಿನ ಮನೆಗಳಿಗೆ ಲೆಕ್ಕವಿಲ್ಲ. ಅದೃಷ್ಟವಶಾತ್ ಈಗ ಮಣ್ಣಿನ ಮನೆಗಳು ಕಡಿಮೆಯಾಗುತ್ತಿವೆ. ಆದರೆ, ಬೀದಿಗೆ ಬೀಳುತ್ತಿರುವ ಕಾಂಕ್ರೀಟ್ ಮಣ್ಣಿನೊಳಗೆ ನೀರಿಂಗದಂತೆ ಮಾಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಈ ನಗರಗಳೆಂಬ ಉರಿವ ಧರೆಯನ್ನು ಯಾವ ಬಗೆಯ ಭರಣಿ ಮಳೆ ಕಾಪಾಡಬಲ್ಲುದು ಎಂಬುದೇ ಪ್ರಶ್ನೆ.
ಮಳೆಯು ಲಕ್ಷಾಂತರ ಜನರ ಬದುಕನ್ನು ಹೈರಾಣಾಗಿಸಿರುವ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಇದೇ ವರ್ಷದಲ್ಲಿ ಕರ್ನಾಟಕದ ಸುಮಾರು ಮೂರನೇ ಒಂದು ಭಾಗವನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಗೆರೆ ಎಳೆದ ರೀತಿಯಲ್ಲಿ ಮಲೆನಾಡು ಮತ್ತು ಕರಾವಳಿಗಳಲ್ಲಿ ಸುರಿಯುತ್ತಿರುವ ಮಳೆಯು ನದಿಗಳು ಮೈ ತುಂಬಿ ಹರಿಯುವಂತೆ ಮಾಡಿದೆ, ಅಣೆಕಟ್ಟುಗಳನ್ನು ಭರ್ತಿ ಮಾಡಿದೆ. ಈ ರೀತಿ ಹೆಚ್ಚಾಗಿ ಮಳೆ ಬಂದಾಗ ಹಿಡಿದಿಟ್ಟುಕೊಳ್ಳಲು ದೊಡ್ಡ ಅಣೆಕಟ್ಟು ಕಟ್ಟುವುದು ಬಿಟ್ಟು ಬೇರೆ ಉಪಾಯಗಳನ್ನು ಹುಡುಕಲು ಸಾಧ್ಯವೇ? ಮಳೆ ಬಾರದಾಗಲೂ ತೇವ ಉಳಿಸಿಕೊಳ್ಳಲು ಸಾಧ್ಯವಿರುವ ನೈಸರ್ಗಿಕ ಕೃಷಿಯ ವಿಧಾನವನ್ನು ಎಲ್ಲೆಡೆ ವ್ಯಾಪಕಗೊಳಿಸಲು ಸಾಧ್ಯವೇ ಎಂಬ ಚಿಂತನೆ ನಡೆಸದಿದ್ದರೆ, ಅತಿವೃಷ್ಟಿ ಅನಾವೃಷ್ಟಿಯ ಸಂಕಟಗಳನ್ನು ಕಡಿಮೆ ಮಾಡಲಾಗದು.
ವಾತಾವರಣವನ್ನು ನಮ್ಮ ಕೈಯ್ಯಲ್ಲಿ ಸಾಧ್ಯವಿರುವಷ್ಟು ನಾರ್ಮಲೈಸ್ ಮಾಡುವುದಕ್ಕೆ ಈಗಲೂ ಕಾಲ ಮಿಂಚಿಲ್ಲ. ಲಾಭಕೋರತನ ಮತ್ತು ತನ್ನಿಷ್ಟ ಹಾಗೂ ಬಯಕೆಗಳೇ ಪ್ರಧಾನ ಎಂದು ಭಾವಿಸುವ ಮನುಷ್ಯರೇ ಇದಕ್ಕೆ ಅಡ್ಡಿಯಾಗಿದ್ದಾರೆ. ಒಂದು ಉದಾಹರಣೆ ಕೊಡಬಹುದಾದರೆ, ಅತ್ಯಂತ ಎತ್ತರದಲ್ಲಿ ಬೆಳೆಯುವ ಟೀ ಸೊಪ್ಪಿನಿಂದಲೇ ಅತ್ಯಂತ ಉತ್ಕøಷ್ಟವಾದ ಟೀ ಮಾಡಬಹುದು. ಆ ಎತ್ತರದಲ್ಲಿ ಟೀ ತೋಟಕ್ಕಿಂತ ಮುಂಚೆ ಏನಿತ್ತು ಎಂಬುದನ್ನು ನೋಡಿದರೆ, ನಿಸರ್ಗದ ಮೇಲೆ ನಾವು ನಡೆಸುತ್ತಿರುವ ದಾಳಿಯ ಅರಿವಾಗುತ್ತದೆ. ಇಂತಹ ದಾಳಿಯು ಮುಂದುವರೆದರೆ, ಈ ಉರಿವ ಧರೆಗೆ ಭರಣಿ ಮಳೆಯೂ ಶಾಪವಾಗಿಯೇ ಒದಗಿ ಬರುತ್ತದೆ.
ಇದಕ್ಕಾಗಿ ರಾಜಕೀಯ ಕಾರ್ಯಕರ್ತರು ಕಾರ್ಪೋರೇಟ್ ಅಭಿವೃದ್ಧಿಯ ಮಾದರಿಯನ್ನು ದೂರುತ್ತಾರೆ. ಮಾಕ್ರ್ಸಿಸ್ಟರು ಬಂಡವಾಳಶಾಹಿಯನ್ನು ದೂರುತ್ತಾರೆ. ತಪ್ಪೇನಿಲ್ಲ; ಸರಿಯೇ. ಜನಸಾಮಾನ್ಯರಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೂ, ಲಾಭಕೋರ ಆರ್ಥಿಕ ವ್ಯವಸ್ಥೆಯಿಂದ ಆಗುತ್ತಿರುವ ಹಾನಿಗೂ ಹೋಲಿಕೆಯೇ ಇಲ್ಲ. ಆದರೂ, ಇದು ಕೇವಲ ಪರಿಸರದ ಉಳಿವಿನ ವಿಚಾರ ಮಾತ್ರ ಅಲ್ಲ. ಇದು ಬದುಕಿನ ಮೌಲ್ಯದ ಪ್ರಶ್ನೆ ಸಹಾ ಆಗಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮೊಳಗೆ ನೋಡಿಕೊಳ್ಳಬೇಕಾದ ಸಮಸ್ಯೆ ಇದು. ಆ ರೀತಿ ಜನಸಾಮಾನ್ಯರಷ್ಟೇ ನೋಡಿಕೊಂಡರೂ ಸಾಕು; ಕೊಳ್ಳುಬÁಕ ಮನೋಭಾವವನ್ನು ತೊಡೆದು ಹಾಕಿ, ಪರಿಸರಕ್ಕೆ ಪೂರಕವಾಗಿ ಬದುಕುತ್ತೇನೆ ಎಂದು ಒಂದು ತಿಂಗಳು ಮನಸ್ಸು ಮಾಡಿದರೆ ಸಾಕು. ಅವರಿವರ ಜೇಬಿಗೆ ಮತ್ತು ಮಾಂಸದ ಕಸುವಿಗೆ ಕನ್ನ ಹಾಕಿ ಹೊಟ್ಟೆ ಹಿಗ್ಗಿಸಿಕೊಳ್ಳುವ ಬಂಡವಾಳದಾರರು ಥರಗುಟ್ಟಿ ಹೋಗುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

14 ವರ್ಷದೊಳಗಿನ ಮಕ್ಕಳ ಧಾರ್ಮಿಕ ಶಿಕ್ಷಣ ನಿಯಂತ್ರಣಕ್ಕೆ ಅರ್ಜಿ: ಕೇಂದ್ರ ಶಿಕ್ಷಣ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್ ನೋಟಿಸ್

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳ ನೋಂದಣಿ, ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ಪರಿಗಣಿಸುವಲ್ಲಿ ವಿಳಂಬವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಕಾರ್ಯದರ್ಶಿ...

ಸರ್ಕಾರದ 100 ದಿನ: ಪ್ರಚಾರದ ಸ್ವರೂಪವನ್ನೇ ಬದಲಿಸಿದ ಸರ್ಕಾರಿ ಜಾಹೀರಾತು

ಸಾಂಪ್ರದಾಯಿಕ ಪತ್ರಿಕಾ ಜಾಹೀರಾತುಗಳು, ಬ್ಯಾನರ್‌ಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳ ನಡುವೆ ಪ್ರಸಾರವಾಗುತ್ತಿದ್ದ ಜಾಹೀರಾತುಗಳ ಕಾಲವೀಗ ಬದಲಾಗಿದೆ. ಪ್ರಜೆಗಳ ಮನಸ್ಸನ್ನು ತಲುಪಲು ಅಧಿಕಾರದಲ್ಲಿರುವವರು ಆಯ್ದುಕೊಳ್ಳುವ ಮಾರ್ಗಗಳು ದಿನದಿಂದ ದಿನಕ್ಕೆ ರೂಪಾಂತರಗೊಳ್ಳುತ್ತಿವೆ. ಇದಕ್ಕೆ ಜ್ವಲಂತ ನಿದರ್ಶನ...

‘ಉಮರ್ ಖಾಲಿದ್ ಒಬ್ಬ ದೇಶಭಕ್ತ..’; ಸಾಕ್ಷ್ಯಚಿತ್ರ ಪ್ರದರ್ಶನ ವಿರೋಧಿಸಿದ ಎಬಿವಿಪಿ ವಿರುದ್ಧ ಹರಿಪ್ರಸಾದ್ ವಾಗ್ದಾಳಿ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು) ಹೋರಾಟಗಾರ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನವನ್ನು ವಿರೋಧಿಸಿದ್ದಕ್ಕಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಅವರು ಮಂಗಳವಾರ...

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...