Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಉರಿವ ಧರೆ ಮತ್ತು ಸುರಿವ ಮಳೆ

ಉರಿವ ಧರೆ ಮತ್ತು ಸುರಿವ ಮಳೆ

- Advertisement -
- Advertisement -

ಉರಿವ ಧರೆ ಮತ್ತು ಸುರಿವ ಮಳೆ
ಈ ಇಳೆ ಈ ಮಳೆ
ಮುಂದೊಂದು ಭರಣಿಗೆ ಉರಿವ ಈ ಧರೆಗೆ
ಭೋರ್ಗರೆದು ಮಳೆಯು ಸುರಿಯುವುದು
ಆ ನಾಳೆಯು ಬಂದೇ ಬರುವುದು
ಉರಿವ ಧರೆಯಲ್ಲಿ ಬದುಕಿರುವ ಎಲ್ಲರೂ ಮುಂದೊಂದು ಭರಣಿಯಲ್ಲಿ ಸುರಿವ ಮಳೆಯ ಮೇಲೆ ವಿಶ್ವಾಸವಿಟ್ಟು ಜೀವ ಹಿಡಿದಿಟ್ಟುಕೊಳ್ಳಿ ಎಂದು ಜನಾರ್ಧನ್ ಕೆಸರಗದ್ದೆ ಬರೆದಿದ್ದಾರೆ. ಉರಿವ ಧರೆಯು ಈ ಭೂಮಿ ಮಾತ್ರವಲ್ಲ; ಈ ಪದ್ಯದ ನಂತರದ ಸಾಲುಗಳೂ ಸಹಾ ನಿಸರ್ಗದ ಹಲವು ಪಕ್ಷಿ, ನದಿಗಳು, ಸೂರ್ಯ ಕಿರಣಗಳು, ಚಿಗುರಬೇಕಾದ ಬೀಜ ಮಾತ್ರವಲ್ಲದೇ ಕುರಿತೇ ಮಾತನಾಡುತ್ತವೆ. ಆದರೂ, ಕಡು ಕಷ್ಟಕಾಲದಲ್ಲಿ ಬದುಕುತ್ತಿರುವ ಎಲ್ಲರನ್ನೂ ಉದ್ದೇಶಿಸಿ ಕವಿ ಹಾಡುತ್ತಿದ್ದಾರೆಂದು, ಕಷ್ಟಕಾಲದಲ್ಲಿರುವ ಎಲ್ಲರಿಗೂ ಗೊತ್ತಾಗುತ್ತದೆ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಮಳೆಯೇ ರೂಪಕವಾಗುವುದು ಏಕೆ? ಉರಿ, ಸುಡು ಬಿಸಿಲು, ಧಗೆ ಇವನ್ನೇ ಸಂಕಷ್ಟಗಳಿಗೆ ರೂಪಕವಾಗಿ ಬಳಸುವುದರಿಂದ. ಹಾಗಾದರೆ ‘ತಣ್ಣನೆಯ ಕ್ರೌರ್ಯ’, ‘ಒಂದೇ ಸಾರಿಗೆ ನನ್ನಿಡೀ ದೇಹ ಮರಗಟ್ಟಿ ಹೋಯಿತು; ಮೈಯ್ಯೆಲ್ಲಾ ತಣ್ಣಗಾಗುತ್ತಿರುವುದರ ಅನುಭವವಾಯಿತು’ ಎಂದು ಹೇಳುವಾಗ ಕಾಣುವ ತಣ್ಣನೆಯ ಅಂಶ ಏನು? ಬಹುಶಃ ಇನ್ನೇನೂ ಮಾಡಲು ಸಾಧ್ಯವಾಗದೇ, ಕುಸಿದೇ ಹೋಗುವುದು ಅಥವಾ ಸಾವಿಗೆ ಹತ್ತಿರ ಹೋಗುವ ಸಂದರ್ಭವನ್ನು ವಿವರಿಸಲು ಮಾತ್ರ ಈ ತಣ್ಣನೆ ಪದ ಬಳಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೆಚ್ಚನೆಯ ಅಪ್ಪುಗೆ, ಹಿತವಾದ ಕಾವಿನ ಮೂಲಕ ಮೇಲೆತ್ತಬೇಕಾಗಬಹುದು.
ಆದರೆ ಬಿಸಿ ಹಾಗಲ್ಲ. ಅಲ್ಲಿ ಇನ್ನೂ ಜೀವ ಚೈತನ್ಯವಿದೆ. ಅದಕ್ಕೂ ಹೊರಗಿನ ತಂಪು ಬೇಕು. ಅದು ಸಿಗುತ್ತದೆಂಬ ಭರವಸೆಯೂ ಸಾಕು. ಅಂತಹ ಭರವಸೆಯನ್ನೇ ಜನಾರ್ಧನ್ ಹುಟ್ಟಿಸಲು ಯತ್ನಿಸಿದ್ದಾರೆ. ಕೆಲವು ಯುವಕ ಯುವತಿಯರು ಮೈದುಂಬಿ ಈ ಸಾಲುಗಳನ್ನು ಹಾಡಿದಾಗ ಕೇಳಲು ಚೆಂದ; ನಮ್ಮೊಳಗೂ ಭರವಸೆ ಹುಟ್ಟಿಯೇ ಹುಟ್ಟುತ್ತದೆ, ಚಣಕಾಲವಾದರೂ. ಲಗಾನ್ ಹಿಂದಿ ಸಿನೆಮಾದ ಮೊದ ಮೊದಲ ಭಾಗ ನೋಡಿದರೆ, ಕ್ಷೀಣ ಆಸೆಯೊಂದಿಗೆ ಕಾಯುವ ಬರಪೀಡಿತ ಜನರ ಚಿತ್ರಣ ನಮ್ಮ ಮನಮುಟ್ಟುತ್ತದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರವಿತ್ತು. ಕೇಂದ್ರ ಸರ್ಕಾರದ ತಂಡ ಭೇಟಿಗೆ ಬಂದಾಗ, ಕಳೆದ 16 ವರ್ಷಗಳಲ್ಲಿ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು 11 ವರ್ಷಗಳ ಕಾಲ ಬರ ಎದುರಿಸುತ್ತಿತ್ತು ಎಂದು ರಾಜ್ಯ ಸರ್ಕಾರವು ಹೇಳಿತ್ತು. ಇನ್ನುಳಿದ 5 ವರ್ಷಗಳ ಪೈಕಿ ಎರಡು ವರ್ಷ ಪ್ರವಾಹ ಬಂದಿತ್ತು. ಒಂದು ವರ್ಷವಂತೂ ಮನೆ ಮಾರು ಕೊಚ್ಚಿ ಹೋಗಿತ್ತು. ಕೇಂದ್ರ ತಂಡ ಬಂದ ವರ್ಷವೇ ಕರ್ನಾಟಕದಲ್ಲಿ ಬರ ಮತ್ತು ನೆರೆ ಎರಡೂ ಕಂಡಿದ್ದವು.
ಹಿಂದಿನ ವರ್ಷದ ಬರದ ಸಂದರ್ಭದಲ್ಲಿ ಮಲೆನಾಡಿನ ಜನ ಹೇಳಿದ್ದು ‘ಇಂತಹ ಬರ ಮಲೆನಾಡಿಗೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು, ಇನ್ನು ಕಷ್ಟವಿದೆ’. ನಂತರ ಹವಾಮಾನ ತಜ್ಞರ ಅಂಕಿ-ಅಂಶವೂ ಇದನ್ನು ಸಮರ್ಥಿಸಿತ್ತು. ಈ ವರ್ಷ ಇಬ್ಬರೂ ಹೇಳುತ್ತಿದ್ದಾರೆ ‘ಇಂತಹ ಮಳೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು’. ಹಾಗಾದರೆ ಕಳೆದ ವರ್ಷದ ಧಗೆ, ಉರಿ, ಬಾಯಾರಿಕೆಯನ್ನು ಈ ವರ್ಷದ ಮಳೆ ಸರಿದೂಗಿಸಿ ತಂಪು ಮಾಡುತ್ತದೆಯೇ?
ಅಣೆಕಟ್ಟುಗಳಿಂದ ಗೇಟುಗಳನ್ನು ತೆರೆದು ನೀರು ಧುಮ್ಮಿಕ್ಕುತ್ತಿರುವ ಫೋಟೋಗಳನ್ನು ಪತ್ರಿಕಾ ಛಾಯಾಗ್ರಾಹಕರು ವಿವಿಧ ಕೋನಗಳಲ್ಲಿ ತೆಗೆದು ಕಳಿಸುತ್ತಿದ್ದಾರೆ. ಜಲಪಾತಗಳೂ ರುದ್ರರಮಣೀಯವಾಗಿ ಕಾಣುತ್ತಿವೆ. ಎಷ್ಟೋ ಕಡೆ ಹುಡುಗ ಹುಡುಗಿಯರು ಈ ಮಳೆಯಲ್ಲಿ, ಜಲಪಾತದ ಧಾರೆಯಡಿಯಲ್ಲಿ ನೆನೆದು ಫೇಸ್‍ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಕೆಆರ್‍ಎಸ್ ಹಿಡಿದಿಟ್ಟುಕೊಳ್ಳಲಾಗದಷ್ಟು ನೀರು ಬಂದು, ಗೇಟು ತೆಗೆದಾಗ ಪಾಂಡವಪುರದ ಹತ್ತಿರ ಅಂತಹುದೇ ಒಂದು ಫೋಟೋ ತೆಗೆದ ಯುವಕನೊಬ್ಬ ತಮಾಷೆಯ ಅಡಿ ಬರಹ ಕೊಟ್ಟು ಎಲ್ಲೆಡೆ ಷೇರ್ ಮಾಡಿದ್ದ. ‘ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ಅಸಹಾಯಕರಾಗಿ ನೋಡುತ್ತಿರುವ ಎಣ್ಣೆಹೊಳೆ ಕೊಪ್ಪಲಿನ ರೈತಯುವಕರು’. ಇದರಲ್ಲಿ ಅರ್ಧ ನೀರು ಕಳೆದ ವರ್ಷ ಹರಿದಿದ್ದರೆ, ನಿಜಕ್ಕೂ ಮಂಡ್ಯದವರು ಅಸಹಾಯಕರಾಗಿಯೇ ನೋಡುತ್ತಿರುತ್ತಿದ್ದರು. ಆದರೆ, ಈ ಸಾರಿ ಇದು ತಮಾಷೆ.
ದೇವಸ್ಥಾನ, ಮಸೀದಿ ಮತ್ತು ಚರ್ಚು ಮೂರೂ ಮುಳುಗಿರುವ ಫೋಟೋಗಳನ್ನು ಒಟ್ಟಿಗೆ ಷೇರ್ ಮಾಡಿ, ‘ದೇವರೂ ಮುಳುಗಿದ’ ಎಂತಲೋ, ‘ನಿಸರ್ಗ ಸಮಾನತೆ ಕಾಪಾಡಿಕೊಂಡಿದೆ’ ಎಂತಲೋ ಹೇಳುವ ಫೋಟೋಗಳೂ ಕಂಡು ಬಂದವು. ಆದರೆ, ವಾಸ್ತವದಲ್ಲಿ ನಿಸರ್ಗದ ವೈಪರೀತ್ಯಗಳು ಹೆಚ್ಚಾಗಿ ಬಡವರನ್ನೇ ಕಾಡುತ್ತವೆ. ದಕ್ಷಿಣ ಭಾರತದ ಹೆಚ್ಚಿನ ಭಾಗ ಬ್ರಾಹ್ಮಣರ ಜಾಗೀರುಗಳಾಗಿದ್ದವು. ಬ್ರಾಹ್ಮಣರ ಜಮೀನುಗಳು ‘ಸೂಕ್ತವಾದ’ ಜಾಗದಲ್ಲೂ, ಉಳಿದವರ ಜಮೀನುಗಳು ‘ಐoತಿ ಟಥಿiಟಿg’ ಆಗಿಯೂ ಇರುತ್ತವೆ. ಹಾಗೆಯೇ ನಗರಗಳಲ್ಲೂ ಐoತಿ ಟಥಿiಟಿg ಆಗಿರುವ ಜಾಗಗಳಲ್ಲೇ ಸ್ಲಂಗಳು ಹೆಚ್ಚಿರುತ್ತವೆಂದು ಸ್ಲಂ ಕಾಯ್ದೆಯೂ ಸೂಚಿಸುತ್ತದೆ.
ನಗರಗಳು ನಿಜಕ್ಕೂ ಉರಿವ ಧರೆಗಳು. ಈ ವರ್ಷ ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯ ಅರ್ಧದಷ್ಟು ಯಾವುದೇ ಬಯಲುಸೀಮೆಯ ನಗರದ ಮೇಲೆ ಸುರಿದಿದ್ದರೂ, ನಗರಗಳು ಮುಳುಗಿಯೇ ಹೋಗಿರುತ್ತಿದ್ದವು. ಹಿಂದೊಮ್ಮೆ ಬಯಲುಸೀಮೆಯಲ್ಲಿ ಹಲವಾರು ದಿನಗಳ ಕಾಲ ಜಡಿಮಳೆ ಸುರಿದಾಗ ಕುಸಿದ ಮಣ್ಣಿನ ಮನೆಗಳಿಗೆ ಲೆಕ್ಕವಿಲ್ಲ. ಅದೃಷ್ಟವಶಾತ್ ಈಗ ಮಣ್ಣಿನ ಮನೆಗಳು ಕಡಿಮೆಯಾಗುತ್ತಿವೆ. ಆದರೆ, ಬೀದಿಗೆ ಬೀಳುತ್ತಿರುವ ಕಾಂಕ್ರೀಟ್ ಮಣ್ಣಿನೊಳಗೆ ನೀರಿಂಗದಂತೆ ಮಾಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಈ ನಗರಗಳೆಂಬ ಉರಿವ ಧರೆಯನ್ನು ಯಾವ ಬಗೆಯ ಭರಣಿ ಮಳೆ ಕಾಪಾಡಬಲ್ಲುದು ಎಂಬುದೇ ಪ್ರಶ್ನೆ.
ಮಳೆಯು ಲಕ್ಷಾಂತರ ಜನರ ಬದುಕನ್ನು ಹೈರಾಣಾಗಿಸಿರುವ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಇದೇ ವರ್ಷದಲ್ಲಿ ಕರ್ನಾಟಕದ ಸುಮಾರು ಮೂರನೇ ಒಂದು ಭಾಗವನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಗೆರೆ ಎಳೆದ ರೀತಿಯಲ್ಲಿ ಮಲೆನಾಡು ಮತ್ತು ಕರಾವಳಿಗಳಲ್ಲಿ ಸುರಿಯುತ್ತಿರುವ ಮಳೆಯು ನದಿಗಳು ಮೈ ತುಂಬಿ ಹರಿಯುವಂತೆ ಮಾಡಿದೆ, ಅಣೆಕಟ್ಟುಗಳನ್ನು ಭರ್ತಿ ಮಾಡಿದೆ. ಈ ರೀತಿ ಹೆಚ್ಚಾಗಿ ಮಳೆ ಬಂದಾಗ ಹಿಡಿದಿಟ್ಟುಕೊಳ್ಳಲು ದೊಡ್ಡ ಅಣೆಕಟ್ಟು ಕಟ್ಟುವುದು ಬಿಟ್ಟು ಬೇರೆ ಉಪಾಯಗಳನ್ನು ಹುಡುಕಲು ಸಾಧ್ಯವೇ? ಮಳೆ ಬಾರದಾಗಲೂ ತೇವ ಉಳಿಸಿಕೊಳ್ಳಲು ಸಾಧ್ಯವಿರುವ ನೈಸರ್ಗಿಕ ಕೃಷಿಯ ವಿಧಾನವನ್ನು ಎಲ್ಲೆಡೆ ವ್ಯಾಪಕಗೊಳಿಸಲು ಸಾಧ್ಯವೇ ಎಂಬ ಚಿಂತನೆ ನಡೆಸದಿದ್ದರೆ, ಅತಿವೃಷ್ಟಿ ಅನಾವೃಷ್ಟಿಯ ಸಂಕಟಗಳನ್ನು ಕಡಿಮೆ ಮಾಡಲಾಗದು.
ವಾತಾವರಣವನ್ನು ನಮ್ಮ ಕೈಯ್ಯಲ್ಲಿ ಸಾಧ್ಯವಿರುವಷ್ಟು ನಾರ್ಮಲೈಸ್ ಮಾಡುವುದಕ್ಕೆ ಈಗಲೂ ಕಾಲ ಮಿಂಚಿಲ್ಲ. ಲಾಭಕೋರತನ ಮತ್ತು ತನ್ನಿಷ್ಟ ಹಾಗೂ ಬಯಕೆಗಳೇ ಪ್ರಧಾನ ಎಂದು ಭಾವಿಸುವ ಮನುಷ್ಯರೇ ಇದಕ್ಕೆ ಅಡ್ಡಿಯಾಗಿದ್ದಾರೆ. ಒಂದು ಉದಾಹರಣೆ ಕೊಡಬಹುದಾದರೆ, ಅತ್ಯಂತ ಎತ್ತರದಲ್ಲಿ ಬೆಳೆಯುವ ಟೀ ಸೊಪ್ಪಿನಿಂದಲೇ ಅತ್ಯಂತ ಉತ್ಕøಷ್ಟವಾದ ಟೀ ಮಾಡಬಹುದು. ಆ ಎತ್ತರದಲ್ಲಿ ಟೀ ತೋಟಕ್ಕಿಂತ ಮುಂಚೆ ಏನಿತ್ತು ಎಂಬುದನ್ನು ನೋಡಿದರೆ, ನಿಸರ್ಗದ ಮೇಲೆ ನಾವು ನಡೆಸುತ್ತಿರುವ ದಾಳಿಯ ಅರಿವಾಗುತ್ತದೆ. ಇಂತಹ ದಾಳಿಯು ಮುಂದುವರೆದರೆ, ಈ ಉರಿವ ಧರೆಗೆ ಭರಣಿ ಮಳೆಯೂ ಶಾಪವಾಗಿಯೇ ಒದಗಿ ಬರುತ್ತದೆ.
ಇದಕ್ಕಾಗಿ ರಾಜಕೀಯ ಕಾರ್ಯಕರ್ತರು ಕಾರ್ಪೋರೇಟ್ ಅಭಿವೃದ್ಧಿಯ ಮಾದರಿಯನ್ನು ದೂರುತ್ತಾರೆ. ಮಾಕ್ರ್ಸಿಸ್ಟರು ಬಂಡವಾಳಶಾಹಿಯನ್ನು ದೂರುತ್ತಾರೆ. ತಪ್ಪೇನಿಲ್ಲ; ಸರಿಯೇ. ಜನಸಾಮಾನ್ಯರಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೂ, ಲಾಭಕೋರ ಆರ್ಥಿಕ ವ್ಯವಸ್ಥೆಯಿಂದ ಆಗುತ್ತಿರುವ ಹಾನಿಗೂ ಹೋಲಿಕೆಯೇ ಇಲ್ಲ. ಆದರೂ, ಇದು ಕೇವಲ ಪರಿಸರದ ಉಳಿವಿನ ವಿಚಾರ ಮಾತ್ರ ಅಲ್ಲ. ಇದು ಬದುಕಿನ ಮೌಲ್ಯದ ಪ್ರಶ್ನೆ ಸಹಾ ಆಗಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮೊಳಗೆ ನೋಡಿಕೊಳ್ಳಬೇಕಾದ ಸಮಸ್ಯೆ ಇದು. ಆ ರೀತಿ ಜನಸಾಮಾನ್ಯರಷ್ಟೇ ನೋಡಿಕೊಂಡರೂ ಸಾಕು; ಕೊಳ್ಳುಬÁಕ ಮನೋಭಾವವನ್ನು ತೊಡೆದು ಹಾಕಿ, ಪರಿಸರಕ್ಕೆ ಪೂರಕವಾಗಿ ಬದುಕುತ್ತೇನೆ ಎಂದು ಒಂದು ತಿಂಗಳು ಮನಸ್ಸು ಮಾಡಿದರೆ ಸಾಕು. ಅವರಿವರ ಜೇಬಿಗೆ ಮತ್ತು ಮಾಂಸದ ಕಸುವಿಗೆ ಕನ್ನ ಹಾಕಿ ಹೊಟ್ಟೆ ಹಿಗ್ಗಿಸಿಕೊಳ್ಳುವ ಬಂಡವಾಳದಾರರು ಥರಗುಟ್ಟಿ ಹೋಗುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...