Homeಮುಖಪುಟಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ

- Advertisement -
- Advertisement -

ಅಪ್ರತಿಮ ನೀರಾವರಿ ತಜ್ಞ ಹಾಗೂ ಅತಿ ದೂರದೃಷ್ಟಿಯ ರಾಜಕಾರಣಿ ರಮೇಶ ಜಾರಕಿಹೊಳಿ ಅವರು ಮೊನ್ನೆ ಮಹದಾಯಿ ನದಿ ಹುಟ್ಟುವ ಕಣಕುಂಬಿ ಜಂಗಲ್ಲಿಗೆ ಹೋಗಿದ್ದರು. ಅಲ್ಲಿ ಹೋದಮ್ಯಾಲೆ ರೈತರು ಆಯೋಜಿಸಿದ ಸಭೆಗೆ ಹೋಗಲು ಒಲ್ಲೆ ಅಂದರು. ಸಭೆ ಕಟ್ಟಿ ಹತ್ತಿದವರು ಇಳದರು. ನಾನು ಬರಬಾರದಾಗಿತ್ತು. ಬಂದಿದ್ದು ತಪ್ಪು. ಈ ವಿವಾದ ಸುಪ್ರೀಂ ಕೋರ್ಟಿನ್ಯಾಗ ಅದ. ನಾನು ಇಲ್ಲಿ ಇವತ್ತು ಬಂದದ್ದು ಗೋವಾದವರಿಗೆ ಗೊತ್ತಾದರ ಅವರು ತಕರಾರು ಮಾಡತಾರ. ಆಗ ರಾಜ್ಯದ ಹಿತಾಸಕ್ತಿಗೆ ಕುಂದು ಆಗಬಹುದು. ಇದನ್ನ ಟೀವಿಯೊಳಗ ತೋರಿಸಬ್ಯಾಡ್ರಿ. ದಯವಿಟ್ಟು ತೋರಿಸಬ್ಯಾಡ್ರಿ, ಅಂತ ಅವಲತ್ತು ಕೊಂಡರು.

ಇಷ್ಟು ಶಾಣ್ಯಾ ಮನುಷ್ಯ ಅಷ್ಟು ದೊಡ್ಡ ತಪ್ಪು ಹೆಂಗ ಮಾಡಿದಾ? ಅಷ್ಟಾಗಿಯೂ ಆ ವಿವಾದ ಏನು?

ಭಾರತದೊಳಗ ಎರಡು ರೀತಿ ನದಿ ಅದಾವು. ಕೆಲವು ಬಲಗಡೆ ಹರಿದು ಬಂಗಾಳ ಕೊಲ್ಲಿಯೊಳಗ ಕೂಡತಾವು. ಇನ್ನು ಕೆಲವು ಎಡಗಡೆ ಹರಕೊಂಡು ಹೋಗಿ ಅರಬ್ಬೀ ಸಮುದ್ರದೊಳಗ ಸೇರತಾವು ಕರಾವಳಿ ಮಂದಿ ಅವಕ್ಕ ಪಶ್ಚಿಮವಾಹಿನಿ ಅಂತಾರ. ಮಜಾ ಅಂದರ ಆದರ ತಮ್ಮೂರಾಗ ಹರಿಯುವ ನದಿಗಳಿಗೆ ಅವರು ಪೂರ್ವವಾಹಿನಿ ಅನ್ನಂಗಿಲ್ಲ.

ಮಹದಾಯಿ ಅಥವಾ ಮ್ಹಾದೇಯಿ ಅಥವಾ ಮಾಂಡೋವಿ ಅನ್ನೋದು ಪಶ್ಚಿಮಘಟ್ಟದೊಳಗ ಹುಟ್ಟಿ ಎಡಗಡೆ ಹರದು ಮೀರಾಮಾರ ಅನ್ನೋ ಗೋವಾದ ಪ್ರದೇಶದಾಗ ಅರಬ್ಬೀ ಸಮುದ್ರಕ್ಕೆ ಸೇರೋ ಪಶ್ಚಿಮ ವಾಹಿನಿ. ಸುಮಾರು 90 ಕಿಲೋಮಿಟರ್ ಹರಿಯುವ ಇದು ದೇಶದ ಅತಿ ಸಣ್ಣ ನದಿಗಳಲ್ಲಿ ಒಂದು. ಅದರಾಗ ಹರಿಯೋ ನೀರಿನ ಪ್ರಮಾಣ ಸುಮಾರು 175 ಟಿಎಂಸಿ ಫೀಟು ನೀರು ಅಂದರ ಸುಮಾರು 4.81 ಲಕ್ಷ ಕೋಟಿ ಲೀಟರು ನೀರು ಇರಬಹುದು ಅಂತ ಕೇಂದ್ರ ನದಿ ನೀರು ಮಂಡಳಿ ಅಂದಾಜು. ಅದರಾಗ ಗೋವಾ 122 ಟಿಎಂಸಿ, ಕರ್ನಾಟಕ 34 ಹಾಗೂ ಮಹಾರಾಷ್ಟ್ರ 6.5 ಟಿಎಂಸಿ ನೀರು ಕೇಳಿದ್ದವು. ಮಹದಾಯಿ ಮಂಡಳಿ ಕರ್ನಾಟಕ 13, ಗೋವಾ 24 ಹಾಗೂ ಮಹಾರಾಷ್ಟ್ರ 1.3 ಟಿಎಂಸಿ ನೀರು ತೊಗೋಬಹುದು ಅಂತ ಹೇಳೇದ.

ಆದರ ಕರ್ನಾಟಕ ತಯಾರಿಸಿರುವ ಯೋಜನೆಗಳಿಂದ ಅರಣ್ಯ ಹಾಗೂ ಪರಿಸರ ನಾಶ ಆಗತದ, ವನ್ಯಜೀವಿಗಳಿಗೆ ನೀರು ಸಿಗೋದಿಲ್ಲ, ನದಿಪಾತ್ರದೊಳಗ ನೀರು ಕಮ್ಮಿ ಆಗತದ, ಗೋವಾದ ಜೀವ ದ್ರವ್ಯವಾದ ಮೀನುಗಾರಿಕೆ ಬಂದ್ ಆಗತದ ಅಂತೆಲ್ಲಾ ಹೇಳಿ ಗೋವಾದವರು ಸುಪ್ರೀಂಕೋರ್ಟಿಗೆ ಹೋಗ್ಯಾರ. ಅಲ್ಲಿನ ಪರಿಸರವಾದಿಗಳು, ಸಂಘಟನೆಗಳು ಸಹಿತ ಆಂದೋಲನ ನಡಿಸ್ಯಾವ.

ಕಾವೇರಿ, ಕೃಷ್ಣ ಹಾಗೂ ಗೋದಾವರಿಗೂ, ಮಹದಾಯಿಗೂ ಏನು ವ್ಯತ್ಯಾಸ ಅಂದರ ಮೊದಲಿನ ಮೂರರಾಗ ನದಿ ನೀರು ಹಂಚಿಕೆಯ ಪ್ರಮಾಣದ ಬಗ್ಗೆ ವಿವಾದ ಇದ್ದರ, ಮಹದಾಯಿಯೊಳಗ ಪರಿಸರ ಕಾಳಜಿಯಿಂದ ಈ ಯೋಜನೆ ಆಗಲೇಬಾರದು ಅನ್ನೋ ವಿವಾದ ಅದ.

ಗೋವಾದವರು ಮಾಡಿರುವ ಆರೋಪಗಳಲ್ಲಿ ಮುಖ್ಯವಾದವು ಇವು- ಮೊದಲನೇಯದು ಕಳಸಾ ಹಾಗೂ ಬಂಡೋರಿ ನಾಲಾಗಳು ಮಹದಾಯಿ ನದಿಗೆ ಸೇರೋಗಿಂತಾ ಮುಂಚೇನ ಅವುಗಳಿಂದ ನೀರನ್ನ ಹೀರಿಕೊಂಡು ನದಿಯನ್ನ ಬರಡಾಗಿಸಲಾಗತದ. ಇದು ಅವೈಜ್ಞಾನಿಕ. ಎರಡನೆಯದು ಈ ಯೋಜನೆಗಳಲ್ಲಿ ಭೂಮಿಯ ಒಳಗ ಸುರಂಗ ಕೊರದು ನೀರು ಹರಸತಾರ. ಇದರಿಂದ ಅರಣ್ಯ ನಾಶ ಆಗತದ. ಮೂರನೆಯದು ಮಹದಾಯಿ ಜಲವಿದ್ಯುತ್ ಯೋಜನೆಯೊಳಗ ಪಶ್ಚಿಮಘಟ್ಟದ ಗುಡ್ಡದ ನೆತ್ತಿಯ ಮ್ಯಾಲೆ ಅಣೆಕಟ್ಟು ಕಟ್ಟಿ ನೀರು ಸಂಗ್ರಹ ಮಾಡತಾರ. ಇದರಿಂದ ಅಣೆಕಟ್ಟಿಗೂ ಅಪಾಯ, ಸುತ್ತಲಿನ ಕಾಡು, ಜೀವಜಾಲ, ಪಕ್ಷಿಗಳಿಗೂ ಅಪಾಯ.

ಹೀಗೆಲ್ಲಾ ಮಾಡಿದರ ನದಿ ಕೆಲವು ವರ್ಷಗಳ ನಂತರ ಬತ್ತಿ ಹೋಗತಾವು. ನೀವು ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕಟ್ಟಿದ ಅಣೆಕಟ್ಟುಗಳು ಇದರಿಂದ ಖಾಲಿ ಹೊಡೀತಾವು. ಹತ್ತು ಹನ್ನೆರಡು ವರ್ಷಗಳ ಬಳಿಕ ಜನ ನೀರು ಕೇಳಿದರ ಏನು ಹೇಳತೀರಿ ಅನ್ನೋ ಪ್ರಶ್ನೆಗೆ ಯಾರ ಹತ್ತರನೂ ಉತ್ತರ ಇಲ್ಲ.

ಇವು ಯಾವುಕ್ಕೂ ಕರ್ನಾಟಕ ಸರಕಾರ ಇಲ್ಲಿಯವರೆಗೂ ಸರಿಯಾದ ಉತ್ತರ ಕೊಟ್ಟಿಲ್ಲ. ಹಿಂದೆ ಈ ಇಲಾಖೆ ಹೊಂದಿದ ಸಚಿವರೂ ಹಾಗೂ ಈಗ ಇದನ್ನು ಜಿದ್ದಿನಿಂದ ಪಡೆದುಕೊಂಡ ರಮೇಶ ಸಾಹುಕಾರ ಅವರಾಗಲೀ ಯಾರೂ ಪರಿಸರವಾದಿಗಳ ಆತಂಕಗಳಿಗೆ ಪರಿಹಾರ ಕೊಟ್ಟಿಲ್ಲ. ಪರಿಸರವಾದಿಗಳನ್ನು ಪರಿಸರವ್ಯಾಧಿಗಳು ಅಂತ ಒಬ್ಬ ರಾಜಕೀಯ ಪಂಡಿತರು ಕರದಾರ. ಅವರಿಗೆ ನೆಲದ ಕೆಳಗ ಇರುವ ಜೀವ ಜಂತುಗಳು ಕಾಣತಾವೆ, ನೆಲದ ಮೇಲೆ ಇರೋ ಜನ ಕಾಣಂಗಿಲ್ಲ ಅಂತ ಹಿರಿಯ ರಾಜಕಾರಣಿಯೊಬ್ಬರು ಹೇಳ್ಯಾರ. ಒಟ್ಟಿನ್ಯಾಗ ಇಂತಹ ಮೌಲಿಕ ಪ್ರಶ್ನೆಗಳನ್ನ ಚಾಪೆ ಕೆಳಗ ತೂರಿಸಿ ನೆಲ ಸ್ವಚ್ಛ ಮಾಡುವ ಕೆಲಸ ನಡದದ.

ಇನ್ನು ಅಡವಿಯೊಳಗ ಮಾಡುವ ಯೋಜನೆಗಳಿಗೆ ಅವಶ್ಯಕವಾಗಿ ಬೇಕಾದ ಪರಿಸರ ಇಲಾಖೆ ಅನುಮತಿಯನ್ನು ಈ ಯೋಜನೆಗೆ ತೊಗೊಂಡಿಲ್ಲ. ಇದು ಕುಡಿಯುವ ನೀರು ಯೋಜನೆ. ಇದಕ್ಕ ಅದು ಬೇಕಾಗಿಲ್ಲ ಅಂತ ಕೇಳಿದವರ ಬಾಯಿ ಮುಚ್ಚಿಸೋ ಪ್ರಯತ್ನ ನಡದದ. ಇದು ಕುಡಿಯೋ ನೀರು ಯೋಜನೆ ಆಗಿದ್ದರ ಹುಬ್ಬಳ್ಳಿ- ಧಾರವಾಡ- ಗದಗ- ನರಗುಂದದ ಜನಾ ಹೋರಾಟ ಮಾಡಬೇಕಾಗಿತ್ತಲ್ಲಾ, ಆದರ ಯೋಜನೆ ಕನಾಲು ಹಾಸಿ ಹೋಗೋ ಜಮೀನಿನ ಪಕ್ಕದ ರೈತರು ಹೋರಾಟ ಮಾಡಲಿಕ್ಕೆ ಹತ್ಯಾರ. ಅದಕ್ಕೇನು ಮಾಡೋದು ಅಂತ ಕೇಳಿದರ ಅದಕ್ಕ ಉತ್ತರ ಇಲ್ಲ. ನೀರು ಕನಾಲಿನೊಳಗ ಹರದುಹೋಗೋವಾಗ ಅದನ್ನ ರೈತರು ಪಂಪು ಸೆಟ್ಟ ಹಚ್ಚಿ ಎಳಕೊಳ್ಳೋದು ಸಹಜ. ಅದನ್ನೇನೂ ಮಾಡಲಿಕ್ಕೆ ಆಗಂಗಿಲ್ಲ ಅನ್ನೋ ಅಸಹಾಯಕ ಪ್ರತಿಕ್ರಿಯೆ ಬರತದ.

ವಿವಾದ ಬಗೆಹರಿಸೋ ಜವಾಬುದಾರಿ ಇರೋ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಲ ಕರ್ನಾಟಕಕ್ಕ 13, ಗೋವಾಕ್ಕ 24 ಹಾಗೂ ಮಹಾರಾಷ್ಟ್ರಕ್ಕ 1.3 ಟಿಎಂಸಿ ನೀರು ಬಳಸಬಹುದು ಅಂತ ಹೇಳೇದ. ಹಂಗಂತ ಇದು ಯೋಜನೆಗಳಿಗೆ ಅನುಮತಿ ಕೊಟ್ಟಂಗಲ್ಲ. ಎಲ್ಲಾ ಅನುಮತಿ ಸಿಕ್ಕ ಮ್ಯಾಲೆ ನೀವು ಇದರಗಿಂತ ಹೆಚ್ಚು ನೀರು ಖರ್ಚು ಮಾಡಬಾರದು ಅಂತ ಹೇಳಿದಂಗ ಅಷ್ಟ. ಅಡವಿಯೊಳಗ ಯಾವುದೇ ಗೈರು- ಅರಣ್ಯ ಯೋಜನೆ ಮಾಡಿದರೂ ಸಹ ಅದಕ್ಕ ಮೂರು ಅನುಮತಿ ಬೇಕಾಗತಾವು- ಅರಣ್ಯ, ವನ್ಯಜೀವಿ ಹಾಗೂ ಪರಿಸರ. ಜಲ ವಿದ್ಯುತ್ ಯೋಜನೆ ಸಹಿತ ಈ ಮೂರು ಅನುಮತಿ ಇರಲಾರದೇ ಆರಂಭ ಮಾಡಲಿಕ್ಕೆ ಬರಂಗಿಲ್ಲ. ನಮ್ಮ ತಥಾಕಥಿತ ʻಕುಡಿಯುವ ನೀರಿನʼ ಯೋಜನೆಗೆ ಸಹಿತ ಅರಣ್ಯ ಹಾಗೂ ಪರಿಸರ ಅನುಮತಿ ಸಿಗಬೇಕು. ಮೊನ್ನೆಯಷ್ಟೇ ಕೇಂದ್ರ ವನ್ಯಜೀವಿ ಮಂಡಳಿ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವನ್ಯಜೀವಿ ಅನುಮತಿ ನಿರಾಕರಿಸೇದ. ಇದು ನಮಗೆ ನೆನಪಿರಲಿ.

ಕೇಂದ್ರ ಸರಕಾರದ ಪ್ರಕಾರ ನಾಲ್ಕನೇ ದರ್ಜೆ ಅರಣ್ಯ ಹೊಂದಿರುವ ಭೂತರಾಮನಹಟ್ಟಿ ಪ್ರದೇಶದೊಳಗ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಅಂತ ಕೇಂದ್ರ ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಟ್ಟದ. ಈಗ ಇರುವ ಕಚೇರಿಗಳನ್ನು ಧ್ವಂಸ ಮಾಡರಿ ಅಂತ ಡೆಡಲೈನು ಹಾಕೇದ. ಅಂಥಾದರಾಗ ಜಲವಿದ್ಯುತ್ ಯೋಜನೆ, ಅದರಿಂದ ಅರಣ್ಯ ಮುಳುಗಡೆ, ವನ್ಯಜೀವಿ ಹಾನಿ, ಪರಿಸರ ನಾಶ ಇವಕ್ಕೆಲ್ಲಾ ಕೇಂದ್ರ ಒಪ್ಪಬಹುದೇ? ಸಾಧ್ಯನ ಇಲ್ಲಾ ಅನ್ನೋರು ಕೆಲವರು. ಅನುಮತಿ ಯಾಕೋ ಅದರ ಹಂಗ್ಯಾಕೋ, ಮೋದಿ ಅವರಿದ್ದರೆ ಸಾಕುʼ ಅಂತ ಇನ್ನ ಕೆಲವರು. ಯಾವಾವ ನಾಯಕರಿಗೆ ದೇವರು ಏನೇನು ಬುದ್ಧಿ ಕೊಡತಾನೋ ಹೇಳಲಿಕ್ಕೆ ಬರಂಗಿಲ್ಲ.

ಇನ್ನು ಈ ಮೂರು ಯೋಜನೆಗಳನ್ನ ವಿರೋಧ ಮಾಡತಾ ಇರೋ ಗೋವಾ ಏನು ಭಾಳ ಸಾಚಾ ಅಂತ ತಿಳಕೋಬ್ಯಾಡ್ರಿ. ಅವರು ತಮಗ ಉಳಿಯೋ 70 ಕಿಲೋಮಿಟರ್ ನದಿ ಪಾತ್ರದಾಗ 53 ಯೋಜನೆಗಳನ್ನ ಮಾಡಲಿಕ್ಕೆ ತಯಾರಿ ನಡಸೇದ. ಅದರಾಗ ಎರಡು ಜಲವಿದ್ಯುತ್ ಯೋಜನೆಗಳು. ಅವು ಸಹ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದೊಳಗ ಬರೋವಂಥಾವು. ಕರ್ನಾಟಕದವರು ಜಲವಿದ್ಯುತ್ ಯೋಜನೆ ಮಾಡಿದರ ತಪ್ಪು, ನಾವು ಮಾಡಿದರ ಸರಿ ಅನ್ನೋ ಮನೋಭಾವ ಅವರದು.

ಪರಿಸರ ಅನ್ನೋದು ಯಾವ ಜಿಲ್ಲೆ- ರಾಜ್ಯ- ದೇಶದ ಗಡಿಗೆ ಸೀಮಿತವಾದದ್ದಲ್ಲ. ಅದು ಇಡೀ ಭೂಮಂಡಲಕ್ಕ ಮತ್ತು ಇಡೀ ವಿಶ್ವದ ಜನ- ಪ್ರಾಣಿ- ಪಕ್ಷಿ- ಕೀಟ- ಗಿಡ- ಜಲ- ಇತರ ಕ್ರಿಮಿಗಳ ಸುರಕ್ಷೆಗೆ ಸಂಬಂಧಿಸಿದ್ದು. ಇದನ್ನು ಹಾಳು ಮಾಡಿದರೆ ಎಲ್ಲರ ಸರ್ವನಾಶ ಖಂಡಿತ.

ʻʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ ಅಂತ ಜೇನುಹುಳು ಪ್ರೇಮಿ ನಟ ಮಾರ್ಗನ್ ಫ್ರೀಮನ್ ಹೇಳಿದ್ದು ಎಲ್ಲರಿಗೂ ನೆನಪರಲಿ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...