Homeಮುಖಪುಟಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ

- Advertisement -
- Advertisement -

ಅಪ್ರತಿಮ ನೀರಾವರಿ ತಜ್ಞ ಹಾಗೂ ಅತಿ ದೂರದೃಷ್ಟಿಯ ರಾಜಕಾರಣಿ ರಮೇಶ ಜಾರಕಿಹೊಳಿ ಅವರು ಮೊನ್ನೆ ಮಹದಾಯಿ ನದಿ ಹುಟ್ಟುವ ಕಣಕುಂಬಿ ಜಂಗಲ್ಲಿಗೆ ಹೋಗಿದ್ದರು. ಅಲ್ಲಿ ಹೋದಮ್ಯಾಲೆ ರೈತರು ಆಯೋಜಿಸಿದ ಸಭೆಗೆ ಹೋಗಲು ಒಲ್ಲೆ ಅಂದರು. ಸಭೆ ಕಟ್ಟಿ ಹತ್ತಿದವರು ಇಳದರು. ನಾನು ಬರಬಾರದಾಗಿತ್ತು. ಬಂದಿದ್ದು ತಪ್ಪು. ಈ ವಿವಾದ ಸುಪ್ರೀಂ ಕೋರ್ಟಿನ್ಯಾಗ ಅದ. ನಾನು ಇಲ್ಲಿ ಇವತ್ತು ಬಂದದ್ದು ಗೋವಾದವರಿಗೆ ಗೊತ್ತಾದರ ಅವರು ತಕರಾರು ಮಾಡತಾರ. ಆಗ ರಾಜ್ಯದ ಹಿತಾಸಕ್ತಿಗೆ ಕುಂದು ಆಗಬಹುದು. ಇದನ್ನ ಟೀವಿಯೊಳಗ ತೋರಿಸಬ್ಯಾಡ್ರಿ. ದಯವಿಟ್ಟು ತೋರಿಸಬ್ಯಾಡ್ರಿ, ಅಂತ ಅವಲತ್ತು ಕೊಂಡರು.

ಇಷ್ಟು ಶಾಣ್ಯಾ ಮನುಷ್ಯ ಅಷ್ಟು ದೊಡ್ಡ ತಪ್ಪು ಹೆಂಗ ಮಾಡಿದಾ? ಅಷ್ಟಾಗಿಯೂ ಆ ವಿವಾದ ಏನು?

ಭಾರತದೊಳಗ ಎರಡು ರೀತಿ ನದಿ ಅದಾವು. ಕೆಲವು ಬಲಗಡೆ ಹರಿದು ಬಂಗಾಳ ಕೊಲ್ಲಿಯೊಳಗ ಕೂಡತಾವು. ಇನ್ನು ಕೆಲವು ಎಡಗಡೆ ಹರಕೊಂಡು ಹೋಗಿ ಅರಬ್ಬೀ ಸಮುದ್ರದೊಳಗ ಸೇರತಾವು ಕರಾವಳಿ ಮಂದಿ ಅವಕ್ಕ ಪಶ್ಚಿಮವಾಹಿನಿ ಅಂತಾರ. ಮಜಾ ಅಂದರ ಆದರ ತಮ್ಮೂರಾಗ ಹರಿಯುವ ನದಿಗಳಿಗೆ ಅವರು ಪೂರ್ವವಾಹಿನಿ ಅನ್ನಂಗಿಲ್ಲ.

ಮಹದಾಯಿ ಅಥವಾ ಮ್ಹಾದೇಯಿ ಅಥವಾ ಮಾಂಡೋವಿ ಅನ್ನೋದು ಪಶ್ಚಿಮಘಟ್ಟದೊಳಗ ಹುಟ್ಟಿ ಎಡಗಡೆ ಹರದು ಮೀರಾಮಾರ ಅನ್ನೋ ಗೋವಾದ ಪ್ರದೇಶದಾಗ ಅರಬ್ಬೀ ಸಮುದ್ರಕ್ಕೆ ಸೇರೋ ಪಶ್ಚಿಮ ವಾಹಿನಿ. ಸುಮಾರು 90 ಕಿಲೋಮಿಟರ್ ಹರಿಯುವ ಇದು ದೇಶದ ಅತಿ ಸಣ್ಣ ನದಿಗಳಲ್ಲಿ ಒಂದು. ಅದರಾಗ ಹರಿಯೋ ನೀರಿನ ಪ್ರಮಾಣ ಸುಮಾರು 175 ಟಿಎಂಸಿ ಫೀಟು ನೀರು ಅಂದರ ಸುಮಾರು 4.81 ಲಕ್ಷ ಕೋಟಿ ಲೀಟರು ನೀರು ಇರಬಹುದು ಅಂತ ಕೇಂದ್ರ ನದಿ ನೀರು ಮಂಡಳಿ ಅಂದಾಜು. ಅದರಾಗ ಗೋವಾ 122 ಟಿಎಂಸಿ, ಕರ್ನಾಟಕ 34 ಹಾಗೂ ಮಹಾರಾಷ್ಟ್ರ 6.5 ಟಿಎಂಸಿ ನೀರು ಕೇಳಿದ್ದವು. ಮಹದಾಯಿ ಮಂಡಳಿ ಕರ್ನಾಟಕ 13, ಗೋವಾ 24 ಹಾಗೂ ಮಹಾರಾಷ್ಟ್ರ 1.3 ಟಿಎಂಸಿ ನೀರು ತೊಗೋಬಹುದು ಅಂತ ಹೇಳೇದ.

ಆದರ ಕರ್ನಾಟಕ ತಯಾರಿಸಿರುವ ಯೋಜನೆಗಳಿಂದ ಅರಣ್ಯ ಹಾಗೂ ಪರಿಸರ ನಾಶ ಆಗತದ, ವನ್ಯಜೀವಿಗಳಿಗೆ ನೀರು ಸಿಗೋದಿಲ್ಲ, ನದಿಪಾತ್ರದೊಳಗ ನೀರು ಕಮ್ಮಿ ಆಗತದ, ಗೋವಾದ ಜೀವ ದ್ರವ್ಯವಾದ ಮೀನುಗಾರಿಕೆ ಬಂದ್ ಆಗತದ ಅಂತೆಲ್ಲಾ ಹೇಳಿ ಗೋವಾದವರು ಸುಪ್ರೀಂಕೋರ್ಟಿಗೆ ಹೋಗ್ಯಾರ. ಅಲ್ಲಿನ ಪರಿಸರವಾದಿಗಳು, ಸಂಘಟನೆಗಳು ಸಹಿತ ಆಂದೋಲನ ನಡಿಸ್ಯಾವ.

ಕಾವೇರಿ, ಕೃಷ್ಣ ಹಾಗೂ ಗೋದಾವರಿಗೂ, ಮಹದಾಯಿಗೂ ಏನು ವ್ಯತ್ಯಾಸ ಅಂದರ ಮೊದಲಿನ ಮೂರರಾಗ ನದಿ ನೀರು ಹಂಚಿಕೆಯ ಪ್ರಮಾಣದ ಬಗ್ಗೆ ವಿವಾದ ಇದ್ದರ, ಮಹದಾಯಿಯೊಳಗ ಪರಿಸರ ಕಾಳಜಿಯಿಂದ ಈ ಯೋಜನೆ ಆಗಲೇಬಾರದು ಅನ್ನೋ ವಿವಾದ ಅದ.

ಗೋವಾದವರು ಮಾಡಿರುವ ಆರೋಪಗಳಲ್ಲಿ ಮುಖ್ಯವಾದವು ಇವು- ಮೊದಲನೇಯದು ಕಳಸಾ ಹಾಗೂ ಬಂಡೋರಿ ನಾಲಾಗಳು ಮಹದಾಯಿ ನದಿಗೆ ಸೇರೋಗಿಂತಾ ಮುಂಚೇನ ಅವುಗಳಿಂದ ನೀರನ್ನ ಹೀರಿಕೊಂಡು ನದಿಯನ್ನ ಬರಡಾಗಿಸಲಾಗತದ. ಇದು ಅವೈಜ್ಞಾನಿಕ. ಎರಡನೆಯದು ಈ ಯೋಜನೆಗಳಲ್ಲಿ ಭೂಮಿಯ ಒಳಗ ಸುರಂಗ ಕೊರದು ನೀರು ಹರಸತಾರ. ಇದರಿಂದ ಅರಣ್ಯ ನಾಶ ಆಗತದ. ಮೂರನೆಯದು ಮಹದಾಯಿ ಜಲವಿದ್ಯುತ್ ಯೋಜನೆಯೊಳಗ ಪಶ್ಚಿಮಘಟ್ಟದ ಗುಡ್ಡದ ನೆತ್ತಿಯ ಮ್ಯಾಲೆ ಅಣೆಕಟ್ಟು ಕಟ್ಟಿ ನೀರು ಸಂಗ್ರಹ ಮಾಡತಾರ. ಇದರಿಂದ ಅಣೆಕಟ್ಟಿಗೂ ಅಪಾಯ, ಸುತ್ತಲಿನ ಕಾಡು, ಜೀವಜಾಲ, ಪಕ್ಷಿಗಳಿಗೂ ಅಪಾಯ.

ಹೀಗೆಲ್ಲಾ ಮಾಡಿದರ ನದಿ ಕೆಲವು ವರ್ಷಗಳ ನಂತರ ಬತ್ತಿ ಹೋಗತಾವು. ನೀವು ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕಟ್ಟಿದ ಅಣೆಕಟ್ಟುಗಳು ಇದರಿಂದ ಖಾಲಿ ಹೊಡೀತಾವು. ಹತ್ತು ಹನ್ನೆರಡು ವರ್ಷಗಳ ಬಳಿಕ ಜನ ನೀರು ಕೇಳಿದರ ಏನು ಹೇಳತೀರಿ ಅನ್ನೋ ಪ್ರಶ್ನೆಗೆ ಯಾರ ಹತ್ತರನೂ ಉತ್ತರ ಇಲ್ಲ.

ಇವು ಯಾವುಕ್ಕೂ ಕರ್ನಾಟಕ ಸರಕಾರ ಇಲ್ಲಿಯವರೆಗೂ ಸರಿಯಾದ ಉತ್ತರ ಕೊಟ್ಟಿಲ್ಲ. ಹಿಂದೆ ಈ ಇಲಾಖೆ ಹೊಂದಿದ ಸಚಿವರೂ ಹಾಗೂ ಈಗ ಇದನ್ನು ಜಿದ್ದಿನಿಂದ ಪಡೆದುಕೊಂಡ ರಮೇಶ ಸಾಹುಕಾರ ಅವರಾಗಲೀ ಯಾರೂ ಪರಿಸರವಾದಿಗಳ ಆತಂಕಗಳಿಗೆ ಪರಿಹಾರ ಕೊಟ್ಟಿಲ್ಲ. ಪರಿಸರವಾದಿಗಳನ್ನು ಪರಿಸರವ್ಯಾಧಿಗಳು ಅಂತ ಒಬ್ಬ ರಾಜಕೀಯ ಪಂಡಿತರು ಕರದಾರ. ಅವರಿಗೆ ನೆಲದ ಕೆಳಗ ಇರುವ ಜೀವ ಜಂತುಗಳು ಕಾಣತಾವೆ, ನೆಲದ ಮೇಲೆ ಇರೋ ಜನ ಕಾಣಂಗಿಲ್ಲ ಅಂತ ಹಿರಿಯ ರಾಜಕಾರಣಿಯೊಬ್ಬರು ಹೇಳ್ಯಾರ. ಒಟ್ಟಿನ್ಯಾಗ ಇಂತಹ ಮೌಲಿಕ ಪ್ರಶ್ನೆಗಳನ್ನ ಚಾಪೆ ಕೆಳಗ ತೂರಿಸಿ ನೆಲ ಸ್ವಚ್ಛ ಮಾಡುವ ಕೆಲಸ ನಡದದ.

ಇನ್ನು ಅಡವಿಯೊಳಗ ಮಾಡುವ ಯೋಜನೆಗಳಿಗೆ ಅವಶ್ಯಕವಾಗಿ ಬೇಕಾದ ಪರಿಸರ ಇಲಾಖೆ ಅನುಮತಿಯನ್ನು ಈ ಯೋಜನೆಗೆ ತೊಗೊಂಡಿಲ್ಲ. ಇದು ಕುಡಿಯುವ ನೀರು ಯೋಜನೆ. ಇದಕ್ಕ ಅದು ಬೇಕಾಗಿಲ್ಲ ಅಂತ ಕೇಳಿದವರ ಬಾಯಿ ಮುಚ್ಚಿಸೋ ಪ್ರಯತ್ನ ನಡದದ. ಇದು ಕುಡಿಯೋ ನೀರು ಯೋಜನೆ ಆಗಿದ್ದರ ಹುಬ್ಬಳ್ಳಿ- ಧಾರವಾಡ- ಗದಗ- ನರಗುಂದದ ಜನಾ ಹೋರಾಟ ಮಾಡಬೇಕಾಗಿತ್ತಲ್ಲಾ, ಆದರ ಯೋಜನೆ ಕನಾಲು ಹಾಸಿ ಹೋಗೋ ಜಮೀನಿನ ಪಕ್ಕದ ರೈತರು ಹೋರಾಟ ಮಾಡಲಿಕ್ಕೆ ಹತ್ಯಾರ. ಅದಕ್ಕೇನು ಮಾಡೋದು ಅಂತ ಕೇಳಿದರ ಅದಕ್ಕ ಉತ್ತರ ಇಲ್ಲ. ನೀರು ಕನಾಲಿನೊಳಗ ಹರದುಹೋಗೋವಾಗ ಅದನ್ನ ರೈತರು ಪಂಪು ಸೆಟ್ಟ ಹಚ್ಚಿ ಎಳಕೊಳ್ಳೋದು ಸಹಜ. ಅದನ್ನೇನೂ ಮಾಡಲಿಕ್ಕೆ ಆಗಂಗಿಲ್ಲ ಅನ್ನೋ ಅಸಹಾಯಕ ಪ್ರತಿಕ್ರಿಯೆ ಬರತದ.

ವಿವಾದ ಬಗೆಹರಿಸೋ ಜವಾಬುದಾರಿ ಇರೋ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಲ ಕರ್ನಾಟಕಕ್ಕ 13, ಗೋವಾಕ್ಕ 24 ಹಾಗೂ ಮಹಾರಾಷ್ಟ್ರಕ್ಕ 1.3 ಟಿಎಂಸಿ ನೀರು ಬಳಸಬಹುದು ಅಂತ ಹೇಳೇದ. ಹಂಗಂತ ಇದು ಯೋಜನೆಗಳಿಗೆ ಅನುಮತಿ ಕೊಟ್ಟಂಗಲ್ಲ. ಎಲ್ಲಾ ಅನುಮತಿ ಸಿಕ್ಕ ಮ್ಯಾಲೆ ನೀವು ಇದರಗಿಂತ ಹೆಚ್ಚು ನೀರು ಖರ್ಚು ಮಾಡಬಾರದು ಅಂತ ಹೇಳಿದಂಗ ಅಷ್ಟ. ಅಡವಿಯೊಳಗ ಯಾವುದೇ ಗೈರು- ಅರಣ್ಯ ಯೋಜನೆ ಮಾಡಿದರೂ ಸಹ ಅದಕ್ಕ ಮೂರು ಅನುಮತಿ ಬೇಕಾಗತಾವು- ಅರಣ್ಯ, ವನ್ಯಜೀವಿ ಹಾಗೂ ಪರಿಸರ. ಜಲ ವಿದ್ಯುತ್ ಯೋಜನೆ ಸಹಿತ ಈ ಮೂರು ಅನುಮತಿ ಇರಲಾರದೇ ಆರಂಭ ಮಾಡಲಿಕ್ಕೆ ಬರಂಗಿಲ್ಲ. ನಮ್ಮ ತಥಾಕಥಿತ ʻಕುಡಿಯುವ ನೀರಿನʼ ಯೋಜನೆಗೆ ಸಹಿತ ಅರಣ್ಯ ಹಾಗೂ ಪರಿಸರ ಅನುಮತಿ ಸಿಗಬೇಕು. ಮೊನ್ನೆಯಷ್ಟೇ ಕೇಂದ್ರ ವನ್ಯಜೀವಿ ಮಂಡಳಿ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವನ್ಯಜೀವಿ ಅನುಮತಿ ನಿರಾಕರಿಸೇದ. ಇದು ನಮಗೆ ನೆನಪಿರಲಿ.

ಕೇಂದ್ರ ಸರಕಾರದ ಪ್ರಕಾರ ನಾಲ್ಕನೇ ದರ್ಜೆ ಅರಣ್ಯ ಹೊಂದಿರುವ ಭೂತರಾಮನಹಟ್ಟಿ ಪ್ರದೇಶದೊಳಗ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಅಂತ ಕೇಂದ್ರ ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಟ್ಟದ. ಈಗ ಇರುವ ಕಚೇರಿಗಳನ್ನು ಧ್ವಂಸ ಮಾಡರಿ ಅಂತ ಡೆಡಲೈನು ಹಾಕೇದ. ಅಂಥಾದರಾಗ ಜಲವಿದ್ಯುತ್ ಯೋಜನೆ, ಅದರಿಂದ ಅರಣ್ಯ ಮುಳುಗಡೆ, ವನ್ಯಜೀವಿ ಹಾನಿ, ಪರಿಸರ ನಾಶ ಇವಕ್ಕೆಲ್ಲಾ ಕೇಂದ್ರ ಒಪ್ಪಬಹುದೇ? ಸಾಧ್ಯನ ಇಲ್ಲಾ ಅನ್ನೋರು ಕೆಲವರು. ಅನುಮತಿ ಯಾಕೋ ಅದರ ಹಂಗ್ಯಾಕೋ, ಮೋದಿ ಅವರಿದ್ದರೆ ಸಾಕುʼ ಅಂತ ಇನ್ನ ಕೆಲವರು. ಯಾವಾವ ನಾಯಕರಿಗೆ ದೇವರು ಏನೇನು ಬುದ್ಧಿ ಕೊಡತಾನೋ ಹೇಳಲಿಕ್ಕೆ ಬರಂಗಿಲ್ಲ.

ಇನ್ನು ಈ ಮೂರು ಯೋಜನೆಗಳನ್ನ ವಿರೋಧ ಮಾಡತಾ ಇರೋ ಗೋವಾ ಏನು ಭಾಳ ಸಾಚಾ ಅಂತ ತಿಳಕೋಬ್ಯಾಡ್ರಿ. ಅವರು ತಮಗ ಉಳಿಯೋ 70 ಕಿಲೋಮಿಟರ್ ನದಿ ಪಾತ್ರದಾಗ 53 ಯೋಜನೆಗಳನ್ನ ಮಾಡಲಿಕ್ಕೆ ತಯಾರಿ ನಡಸೇದ. ಅದರಾಗ ಎರಡು ಜಲವಿದ್ಯುತ್ ಯೋಜನೆಗಳು. ಅವು ಸಹ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದೊಳಗ ಬರೋವಂಥಾವು. ಕರ್ನಾಟಕದವರು ಜಲವಿದ್ಯುತ್ ಯೋಜನೆ ಮಾಡಿದರ ತಪ್ಪು, ನಾವು ಮಾಡಿದರ ಸರಿ ಅನ್ನೋ ಮನೋಭಾವ ಅವರದು.

ಪರಿಸರ ಅನ್ನೋದು ಯಾವ ಜಿಲ್ಲೆ- ರಾಜ್ಯ- ದೇಶದ ಗಡಿಗೆ ಸೀಮಿತವಾದದ್ದಲ್ಲ. ಅದು ಇಡೀ ಭೂಮಂಡಲಕ್ಕ ಮತ್ತು ಇಡೀ ವಿಶ್ವದ ಜನ- ಪ್ರಾಣಿ- ಪಕ್ಷಿ- ಕೀಟ- ಗಿಡ- ಜಲ- ಇತರ ಕ್ರಿಮಿಗಳ ಸುರಕ್ಷೆಗೆ ಸಂಬಂಧಿಸಿದ್ದು. ಇದನ್ನು ಹಾಳು ಮಾಡಿದರೆ ಎಲ್ಲರ ಸರ್ವನಾಶ ಖಂಡಿತ.

ʻʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ ಅಂತ ಜೇನುಹುಳು ಪ್ರೇಮಿ ನಟ ಮಾರ್ಗನ್ ಫ್ರೀಮನ್ ಹೇಳಿದ್ದು ಎಲ್ಲರಿಗೂ ನೆನಪರಲಿ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...