Homeಮುಖಪುಟಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ಮಹದಾಯಿಯ ವಿವಾದದ ಮಾಯೆ : ಕರ್ನಾಟಕದ ತಪ್ಪೇನು? ಗೋವಾದ ಕ್ಯಾತೆಯೇನು?

ʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ

- Advertisement -
- Advertisement -

ಅಪ್ರತಿಮ ನೀರಾವರಿ ತಜ್ಞ ಹಾಗೂ ಅತಿ ದೂರದೃಷ್ಟಿಯ ರಾಜಕಾರಣಿ ರಮೇಶ ಜಾರಕಿಹೊಳಿ ಅವರು ಮೊನ್ನೆ ಮಹದಾಯಿ ನದಿ ಹುಟ್ಟುವ ಕಣಕುಂಬಿ ಜಂಗಲ್ಲಿಗೆ ಹೋಗಿದ್ದರು. ಅಲ್ಲಿ ಹೋದಮ್ಯಾಲೆ ರೈತರು ಆಯೋಜಿಸಿದ ಸಭೆಗೆ ಹೋಗಲು ಒಲ್ಲೆ ಅಂದರು. ಸಭೆ ಕಟ್ಟಿ ಹತ್ತಿದವರು ಇಳದರು. ನಾನು ಬರಬಾರದಾಗಿತ್ತು. ಬಂದಿದ್ದು ತಪ್ಪು. ಈ ವಿವಾದ ಸುಪ್ರೀಂ ಕೋರ್ಟಿನ್ಯಾಗ ಅದ. ನಾನು ಇಲ್ಲಿ ಇವತ್ತು ಬಂದದ್ದು ಗೋವಾದವರಿಗೆ ಗೊತ್ತಾದರ ಅವರು ತಕರಾರು ಮಾಡತಾರ. ಆಗ ರಾಜ್ಯದ ಹಿತಾಸಕ್ತಿಗೆ ಕುಂದು ಆಗಬಹುದು. ಇದನ್ನ ಟೀವಿಯೊಳಗ ತೋರಿಸಬ್ಯಾಡ್ರಿ. ದಯವಿಟ್ಟು ತೋರಿಸಬ್ಯಾಡ್ರಿ, ಅಂತ ಅವಲತ್ತು ಕೊಂಡರು.

ಇಷ್ಟು ಶಾಣ್ಯಾ ಮನುಷ್ಯ ಅಷ್ಟು ದೊಡ್ಡ ತಪ್ಪು ಹೆಂಗ ಮಾಡಿದಾ? ಅಷ್ಟಾಗಿಯೂ ಆ ವಿವಾದ ಏನು?

ಭಾರತದೊಳಗ ಎರಡು ರೀತಿ ನದಿ ಅದಾವು. ಕೆಲವು ಬಲಗಡೆ ಹರಿದು ಬಂಗಾಳ ಕೊಲ್ಲಿಯೊಳಗ ಕೂಡತಾವು. ಇನ್ನು ಕೆಲವು ಎಡಗಡೆ ಹರಕೊಂಡು ಹೋಗಿ ಅರಬ್ಬೀ ಸಮುದ್ರದೊಳಗ ಸೇರತಾವು ಕರಾವಳಿ ಮಂದಿ ಅವಕ್ಕ ಪಶ್ಚಿಮವಾಹಿನಿ ಅಂತಾರ. ಮಜಾ ಅಂದರ ಆದರ ತಮ್ಮೂರಾಗ ಹರಿಯುವ ನದಿಗಳಿಗೆ ಅವರು ಪೂರ್ವವಾಹಿನಿ ಅನ್ನಂಗಿಲ್ಲ.

ಮಹದಾಯಿ ಅಥವಾ ಮ್ಹಾದೇಯಿ ಅಥವಾ ಮಾಂಡೋವಿ ಅನ್ನೋದು ಪಶ್ಚಿಮಘಟ್ಟದೊಳಗ ಹುಟ್ಟಿ ಎಡಗಡೆ ಹರದು ಮೀರಾಮಾರ ಅನ್ನೋ ಗೋವಾದ ಪ್ರದೇಶದಾಗ ಅರಬ್ಬೀ ಸಮುದ್ರಕ್ಕೆ ಸೇರೋ ಪಶ್ಚಿಮ ವಾಹಿನಿ. ಸುಮಾರು 90 ಕಿಲೋಮಿಟರ್ ಹರಿಯುವ ಇದು ದೇಶದ ಅತಿ ಸಣ್ಣ ನದಿಗಳಲ್ಲಿ ಒಂದು. ಅದರಾಗ ಹರಿಯೋ ನೀರಿನ ಪ್ರಮಾಣ ಸುಮಾರು 175 ಟಿಎಂಸಿ ಫೀಟು ನೀರು ಅಂದರ ಸುಮಾರು 4.81 ಲಕ್ಷ ಕೋಟಿ ಲೀಟರು ನೀರು ಇರಬಹುದು ಅಂತ ಕೇಂದ್ರ ನದಿ ನೀರು ಮಂಡಳಿ ಅಂದಾಜು. ಅದರಾಗ ಗೋವಾ 122 ಟಿಎಂಸಿ, ಕರ್ನಾಟಕ 34 ಹಾಗೂ ಮಹಾರಾಷ್ಟ್ರ 6.5 ಟಿಎಂಸಿ ನೀರು ಕೇಳಿದ್ದವು. ಮಹದಾಯಿ ಮಂಡಳಿ ಕರ್ನಾಟಕ 13, ಗೋವಾ 24 ಹಾಗೂ ಮಹಾರಾಷ್ಟ್ರ 1.3 ಟಿಎಂಸಿ ನೀರು ತೊಗೋಬಹುದು ಅಂತ ಹೇಳೇದ.

ಆದರ ಕರ್ನಾಟಕ ತಯಾರಿಸಿರುವ ಯೋಜನೆಗಳಿಂದ ಅರಣ್ಯ ಹಾಗೂ ಪರಿಸರ ನಾಶ ಆಗತದ, ವನ್ಯಜೀವಿಗಳಿಗೆ ನೀರು ಸಿಗೋದಿಲ್ಲ, ನದಿಪಾತ್ರದೊಳಗ ನೀರು ಕಮ್ಮಿ ಆಗತದ, ಗೋವಾದ ಜೀವ ದ್ರವ್ಯವಾದ ಮೀನುಗಾರಿಕೆ ಬಂದ್ ಆಗತದ ಅಂತೆಲ್ಲಾ ಹೇಳಿ ಗೋವಾದವರು ಸುಪ್ರೀಂಕೋರ್ಟಿಗೆ ಹೋಗ್ಯಾರ. ಅಲ್ಲಿನ ಪರಿಸರವಾದಿಗಳು, ಸಂಘಟನೆಗಳು ಸಹಿತ ಆಂದೋಲನ ನಡಿಸ್ಯಾವ.

ಕಾವೇರಿ, ಕೃಷ್ಣ ಹಾಗೂ ಗೋದಾವರಿಗೂ, ಮಹದಾಯಿಗೂ ಏನು ವ್ಯತ್ಯಾಸ ಅಂದರ ಮೊದಲಿನ ಮೂರರಾಗ ನದಿ ನೀರು ಹಂಚಿಕೆಯ ಪ್ರಮಾಣದ ಬಗ್ಗೆ ವಿವಾದ ಇದ್ದರ, ಮಹದಾಯಿಯೊಳಗ ಪರಿಸರ ಕಾಳಜಿಯಿಂದ ಈ ಯೋಜನೆ ಆಗಲೇಬಾರದು ಅನ್ನೋ ವಿವಾದ ಅದ.

ಗೋವಾದವರು ಮಾಡಿರುವ ಆರೋಪಗಳಲ್ಲಿ ಮುಖ್ಯವಾದವು ಇವು- ಮೊದಲನೇಯದು ಕಳಸಾ ಹಾಗೂ ಬಂಡೋರಿ ನಾಲಾಗಳು ಮಹದಾಯಿ ನದಿಗೆ ಸೇರೋಗಿಂತಾ ಮುಂಚೇನ ಅವುಗಳಿಂದ ನೀರನ್ನ ಹೀರಿಕೊಂಡು ನದಿಯನ್ನ ಬರಡಾಗಿಸಲಾಗತದ. ಇದು ಅವೈಜ್ಞಾನಿಕ. ಎರಡನೆಯದು ಈ ಯೋಜನೆಗಳಲ್ಲಿ ಭೂಮಿಯ ಒಳಗ ಸುರಂಗ ಕೊರದು ನೀರು ಹರಸತಾರ. ಇದರಿಂದ ಅರಣ್ಯ ನಾಶ ಆಗತದ. ಮೂರನೆಯದು ಮಹದಾಯಿ ಜಲವಿದ್ಯುತ್ ಯೋಜನೆಯೊಳಗ ಪಶ್ಚಿಮಘಟ್ಟದ ಗುಡ್ಡದ ನೆತ್ತಿಯ ಮ್ಯಾಲೆ ಅಣೆಕಟ್ಟು ಕಟ್ಟಿ ನೀರು ಸಂಗ್ರಹ ಮಾಡತಾರ. ಇದರಿಂದ ಅಣೆಕಟ್ಟಿಗೂ ಅಪಾಯ, ಸುತ್ತಲಿನ ಕಾಡು, ಜೀವಜಾಲ, ಪಕ್ಷಿಗಳಿಗೂ ಅಪಾಯ.

ಹೀಗೆಲ್ಲಾ ಮಾಡಿದರ ನದಿ ಕೆಲವು ವರ್ಷಗಳ ನಂತರ ಬತ್ತಿ ಹೋಗತಾವು. ನೀವು ಸಾವಿರಾರು ಕೋಟಿ ರೂಪಾಯಿ ಕೊಟ್ಟು ಕಟ್ಟಿದ ಅಣೆಕಟ್ಟುಗಳು ಇದರಿಂದ ಖಾಲಿ ಹೊಡೀತಾವು. ಹತ್ತು ಹನ್ನೆರಡು ವರ್ಷಗಳ ಬಳಿಕ ಜನ ನೀರು ಕೇಳಿದರ ಏನು ಹೇಳತೀರಿ ಅನ್ನೋ ಪ್ರಶ್ನೆಗೆ ಯಾರ ಹತ್ತರನೂ ಉತ್ತರ ಇಲ್ಲ.

ಇವು ಯಾವುಕ್ಕೂ ಕರ್ನಾಟಕ ಸರಕಾರ ಇಲ್ಲಿಯವರೆಗೂ ಸರಿಯಾದ ಉತ್ತರ ಕೊಟ್ಟಿಲ್ಲ. ಹಿಂದೆ ಈ ಇಲಾಖೆ ಹೊಂದಿದ ಸಚಿವರೂ ಹಾಗೂ ಈಗ ಇದನ್ನು ಜಿದ್ದಿನಿಂದ ಪಡೆದುಕೊಂಡ ರಮೇಶ ಸಾಹುಕಾರ ಅವರಾಗಲೀ ಯಾರೂ ಪರಿಸರವಾದಿಗಳ ಆತಂಕಗಳಿಗೆ ಪರಿಹಾರ ಕೊಟ್ಟಿಲ್ಲ. ಪರಿಸರವಾದಿಗಳನ್ನು ಪರಿಸರವ್ಯಾಧಿಗಳು ಅಂತ ಒಬ್ಬ ರಾಜಕೀಯ ಪಂಡಿತರು ಕರದಾರ. ಅವರಿಗೆ ನೆಲದ ಕೆಳಗ ಇರುವ ಜೀವ ಜಂತುಗಳು ಕಾಣತಾವೆ, ನೆಲದ ಮೇಲೆ ಇರೋ ಜನ ಕಾಣಂಗಿಲ್ಲ ಅಂತ ಹಿರಿಯ ರಾಜಕಾರಣಿಯೊಬ್ಬರು ಹೇಳ್ಯಾರ. ಒಟ್ಟಿನ್ಯಾಗ ಇಂತಹ ಮೌಲಿಕ ಪ್ರಶ್ನೆಗಳನ್ನ ಚಾಪೆ ಕೆಳಗ ತೂರಿಸಿ ನೆಲ ಸ್ವಚ್ಛ ಮಾಡುವ ಕೆಲಸ ನಡದದ.

ಇನ್ನು ಅಡವಿಯೊಳಗ ಮಾಡುವ ಯೋಜನೆಗಳಿಗೆ ಅವಶ್ಯಕವಾಗಿ ಬೇಕಾದ ಪರಿಸರ ಇಲಾಖೆ ಅನುಮತಿಯನ್ನು ಈ ಯೋಜನೆಗೆ ತೊಗೊಂಡಿಲ್ಲ. ಇದು ಕುಡಿಯುವ ನೀರು ಯೋಜನೆ. ಇದಕ್ಕ ಅದು ಬೇಕಾಗಿಲ್ಲ ಅಂತ ಕೇಳಿದವರ ಬಾಯಿ ಮುಚ್ಚಿಸೋ ಪ್ರಯತ್ನ ನಡದದ. ಇದು ಕುಡಿಯೋ ನೀರು ಯೋಜನೆ ಆಗಿದ್ದರ ಹುಬ್ಬಳ್ಳಿ- ಧಾರವಾಡ- ಗದಗ- ನರಗುಂದದ ಜನಾ ಹೋರಾಟ ಮಾಡಬೇಕಾಗಿತ್ತಲ್ಲಾ, ಆದರ ಯೋಜನೆ ಕನಾಲು ಹಾಸಿ ಹೋಗೋ ಜಮೀನಿನ ಪಕ್ಕದ ರೈತರು ಹೋರಾಟ ಮಾಡಲಿಕ್ಕೆ ಹತ್ಯಾರ. ಅದಕ್ಕೇನು ಮಾಡೋದು ಅಂತ ಕೇಳಿದರ ಅದಕ್ಕ ಉತ್ತರ ಇಲ್ಲ. ನೀರು ಕನಾಲಿನೊಳಗ ಹರದುಹೋಗೋವಾಗ ಅದನ್ನ ರೈತರು ಪಂಪು ಸೆಟ್ಟ ಹಚ್ಚಿ ಎಳಕೊಳ್ಳೋದು ಸಹಜ. ಅದನ್ನೇನೂ ಮಾಡಲಿಕ್ಕೆ ಆಗಂಗಿಲ್ಲ ಅನ್ನೋ ಅಸಹಾಯಕ ಪ್ರತಿಕ್ರಿಯೆ ಬರತದ.

ವಿವಾದ ಬಗೆಹರಿಸೋ ಜವಾಬುದಾರಿ ಇರೋ ಮಹದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಲ ಕರ್ನಾಟಕಕ್ಕ 13, ಗೋವಾಕ್ಕ 24 ಹಾಗೂ ಮಹಾರಾಷ್ಟ್ರಕ್ಕ 1.3 ಟಿಎಂಸಿ ನೀರು ಬಳಸಬಹುದು ಅಂತ ಹೇಳೇದ. ಹಂಗಂತ ಇದು ಯೋಜನೆಗಳಿಗೆ ಅನುಮತಿ ಕೊಟ್ಟಂಗಲ್ಲ. ಎಲ್ಲಾ ಅನುಮತಿ ಸಿಕ್ಕ ಮ್ಯಾಲೆ ನೀವು ಇದರಗಿಂತ ಹೆಚ್ಚು ನೀರು ಖರ್ಚು ಮಾಡಬಾರದು ಅಂತ ಹೇಳಿದಂಗ ಅಷ್ಟ. ಅಡವಿಯೊಳಗ ಯಾವುದೇ ಗೈರು- ಅರಣ್ಯ ಯೋಜನೆ ಮಾಡಿದರೂ ಸಹ ಅದಕ್ಕ ಮೂರು ಅನುಮತಿ ಬೇಕಾಗತಾವು- ಅರಣ್ಯ, ವನ್ಯಜೀವಿ ಹಾಗೂ ಪರಿಸರ. ಜಲ ವಿದ್ಯುತ್ ಯೋಜನೆ ಸಹಿತ ಈ ಮೂರು ಅನುಮತಿ ಇರಲಾರದೇ ಆರಂಭ ಮಾಡಲಿಕ್ಕೆ ಬರಂಗಿಲ್ಲ. ನಮ್ಮ ತಥಾಕಥಿತ ʻಕುಡಿಯುವ ನೀರಿನʼ ಯೋಜನೆಗೆ ಸಹಿತ ಅರಣ್ಯ ಹಾಗೂ ಪರಿಸರ ಅನುಮತಿ ಸಿಗಬೇಕು. ಮೊನ್ನೆಯಷ್ಟೇ ಕೇಂದ್ರ ವನ್ಯಜೀವಿ ಮಂಡಳಿ ಹುಬ್ಬಳ್ಳಿ- ಅಂಕೋಲಾ ಯೋಜನೆಗೆ ವನ್ಯಜೀವಿ ಅನುಮತಿ ನಿರಾಕರಿಸೇದ. ಇದು ನಮಗೆ ನೆನಪಿರಲಿ.

ಕೇಂದ್ರ ಸರಕಾರದ ಪ್ರಕಾರ ನಾಲ್ಕನೇ ದರ್ಜೆ ಅರಣ್ಯ ಹೊಂದಿರುವ ಭೂತರಾಮನಹಟ್ಟಿ ಪ್ರದೇಶದೊಳಗ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯ ಸ್ಥಾಪಿಸಬಾರದು ಅಂತ ಕೇಂದ್ರ ಅರಣ್ಯ ಇಲಾಖೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಟ್ಟದ. ಈಗ ಇರುವ ಕಚೇರಿಗಳನ್ನು ಧ್ವಂಸ ಮಾಡರಿ ಅಂತ ಡೆಡಲೈನು ಹಾಕೇದ. ಅಂಥಾದರಾಗ ಜಲವಿದ್ಯುತ್ ಯೋಜನೆ, ಅದರಿಂದ ಅರಣ್ಯ ಮುಳುಗಡೆ, ವನ್ಯಜೀವಿ ಹಾನಿ, ಪರಿಸರ ನಾಶ ಇವಕ್ಕೆಲ್ಲಾ ಕೇಂದ್ರ ಒಪ್ಪಬಹುದೇ? ಸಾಧ್ಯನ ಇಲ್ಲಾ ಅನ್ನೋರು ಕೆಲವರು. ಅನುಮತಿ ಯಾಕೋ ಅದರ ಹಂಗ್ಯಾಕೋ, ಮೋದಿ ಅವರಿದ್ದರೆ ಸಾಕುʼ ಅಂತ ಇನ್ನ ಕೆಲವರು. ಯಾವಾವ ನಾಯಕರಿಗೆ ದೇವರು ಏನೇನು ಬುದ್ಧಿ ಕೊಡತಾನೋ ಹೇಳಲಿಕ್ಕೆ ಬರಂಗಿಲ್ಲ.

ಇನ್ನು ಈ ಮೂರು ಯೋಜನೆಗಳನ್ನ ವಿರೋಧ ಮಾಡತಾ ಇರೋ ಗೋವಾ ಏನು ಭಾಳ ಸಾಚಾ ಅಂತ ತಿಳಕೋಬ್ಯಾಡ್ರಿ. ಅವರು ತಮಗ ಉಳಿಯೋ 70 ಕಿಲೋಮಿಟರ್ ನದಿ ಪಾತ್ರದಾಗ 53 ಯೋಜನೆಗಳನ್ನ ಮಾಡಲಿಕ್ಕೆ ತಯಾರಿ ನಡಸೇದ. ಅದರಾಗ ಎರಡು ಜಲವಿದ್ಯುತ್ ಯೋಜನೆಗಳು. ಅವು ಸಹ ಅರಣ್ಯ ಹಾಗೂ ಗುಡ್ಡಗಾಡು ಪ್ರದೇಶದೊಳಗ ಬರೋವಂಥಾವು. ಕರ್ನಾಟಕದವರು ಜಲವಿದ್ಯುತ್ ಯೋಜನೆ ಮಾಡಿದರ ತಪ್ಪು, ನಾವು ಮಾಡಿದರ ಸರಿ ಅನ್ನೋ ಮನೋಭಾವ ಅವರದು.

ಪರಿಸರ ಅನ್ನೋದು ಯಾವ ಜಿಲ್ಲೆ- ರಾಜ್ಯ- ದೇಶದ ಗಡಿಗೆ ಸೀಮಿತವಾದದ್ದಲ್ಲ. ಅದು ಇಡೀ ಭೂಮಂಡಲಕ್ಕ ಮತ್ತು ಇಡೀ ವಿಶ್ವದ ಜನ- ಪ್ರಾಣಿ- ಪಕ್ಷಿ- ಕೀಟ- ಗಿಡ- ಜಲ- ಇತರ ಕ್ರಿಮಿಗಳ ಸುರಕ್ಷೆಗೆ ಸಂಬಂಧಿಸಿದ್ದು. ಇದನ್ನು ಹಾಳು ಮಾಡಿದರೆ ಎಲ್ಲರ ಸರ್ವನಾಶ ಖಂಡಿತ.

ʻʻಜಗತ್ತಿನಲ್ಲಿ ಮಾನವರು ಇಲ್ಲವಾದರೆ ಭೂಮಿ ಹಾಳಾಗಲಾರದು. ಆದರೆ ಈ ವಿಶ್ವದಲ್ಲಿ ಜೇನುಹುಳುಗಳು ಇಲ್ಲವಾದರೆ ಮನುಷ್ಯರು ಒಂದು ದಶಕದಲ್ಲಿಯೇ ನಾಶವಾದಾರುʼʼ ಅಂತ ಜೇನುಹುಳು ಪ್ರೇಮಿ ನಟ ಮಾರ್ಗನ್ ಫ್ರೀಮನ್ ಹೇಳಿದ್ದು ಎಲ್ಲರಿಗೂ ನೆನಪರಲಿ. ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...